ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಡಯಾಬಿಟೀಸ್ ಜೊತೆಗೆ ಸಹಬಾಳ್ವೆ | ಡಾ. ಕೆ. ರಾಮಚಂದ್ರ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 121 |
ಇತ್ತೀಚಿನ ದಿನಗಳಲ್ಲಿ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಅಥವಾ ಡಯಾಬಿಟೀಸ್ ಎಂಬ ಪದ ಸಾಮಾನ್ಯ ವ್ಯಕ್ತಿಗೂ ಚಿರಪರಿಚಿತವಾಗಿದೆ. ದಿನೇ ದಿನೇ ಪ್ರಪಂಚದಲ್ಲಿ, ಭಾರತದಲ್ಲಿ ಹಾಗೂ ಕರ್ನಾಟಕದಲ್ಲಿ ಡಯಾಬಿಟೀಸ್ ಹೆಚ್ಚುತ್ತಿರುವುದು ಎಲ್ಲರೂ ಹಾಗೂ ವಿಶೇಷವಾಗಿ ವೈದ್ಯರುಗಳು ಆತಂಕ ಪಡುವ ವಿಷಯವಾಗಿದೆ. ಎಲ್ಲಾ ಕಾಯಿಲೆಗಳಿಗೆ ಗುಣಪಡಿಸುವಂತಹ ಔಷಧಿಗಳನ್ನು ಕಂಡುಹಿಡಿದು ಗುಣ ಮಾಡಲು ಸಾಧ್ಯವಾದರೆ ಈ ಕಾಯಿಲೆಯನ್ನು ಕೇವಲ ನಿಯಂತ್ರಣ ಮಾಡಬಹುದೇ ವಿನಃ ಸಂಪೂರ್ಣ ಗುಣ ಮಾಡಲು ಸಾಧ್ಯವಾಗದಿರುವುದು ವಿಪರ್ಯಾಸದ ಸಂಗತಿಯಾಗಿದೆ. |