Categories
Ebook Scanned Book ಅಕಾಡೆಮಿ ಪುಸ್ತಕಗಳು  ಇ-ಪಬ್ ಕರ್ನಾಟಕ ನಾಟಕ ಅಕಾಡೆಮಿ

ಡಾ. ಬಿ. ವಿ. ವೈಕುಂಠರಾಜು

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಡಾ. ಬಿ. ವಿ. ವೈಕುಂಠರಾಜು ಸತೀಶ್‌ ಶಿಲೆ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 82

Download  View

Ebook | EpubText

 ಅಲ್ಲಿ ಎಲ್ಲವೂ ಮೌನ. ಸುತ್ತ ನೆರೆದವರಿಗೆಲ್ಲ ‘ಮಾತೇ’ ಮರೆತುಹೋಗಿದೆಯೇನೋ ಎಂಬ ಭಾವ! ಹಾಸಿಗೆ ಮೇಲಿನ ಜೀವ ಅನಂತದೆಡೆಗೆ ದೃಷ್ಟಿ ಹಾಯಿಸಿ ಏನನ್ನೋ ತೀವ್ರ ಏಕಾಗ್ರತೆಯಿಂದ ವೀಕ್ಷಿಸುತ್ತಿರುವಂತೆ ತೋರುತ್ತಿತ್ತು. ಅವರದು ಒಂದರ್ಥದಲ್ಲಿ ಹೊಸ್ತಿಲ ಮೇಲಿನ ಬದುಕು. ಸಾವು – ಬದುಕುಗಳ ಮಧ್ಯ ಸ್ಥಿತಿ. ಎದುರಿಗಿರುವುದೆಲ್ಲಾ ಸ್ಪಷ್ಟವಾಗಿ ಕಾಣುತ್ತಿದ್ದರೂ ಅದಾವುದೂ ನೆನಪಿನ ಗಣಿಯಲ್ಲಿ ಶೇಖರಗೊಳ್ಳುತ್ತಿಲ್ಲ.