ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಮಂಗಳವೇಡೆ ಶ್ರೀನಿವಾಸರಾಯರು | ಶ್ರೀಮತಿ ಕವಿತಾ ಕುಲಕರ್ಣಿ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 50 |
‘ನಖಶಿಖಾಂತ ಕನ್ನಡಿಗ’ನೆಂದು ತಾವೇ ಹೇಳಿಕೊಂಡಿರುವ ಬಲು ಅಪರೂಪದ ಧೀಮಂತ ವ್ಯಕ್ತಿ ಮಂಗಳವೇಢೆ ಶ್ರೀನಿವಾಸರಾಯರು. ಇವರೇ ನಮ್ಮ ಒಲವಿನ ಅಜ್ಜ. ಅವರು ನಮ್ಮನ್ನಗಲಿದ್ದರೂ ಸಹ ನಮ್ಮ ನಡೆ-ನುಡಿಗಳಲ್ಲಿ ಹಾಸುಹೊಕ್ಕಾಗಿ ಆವರಿಸಿ ಇಂದಿಗೂ ಪ್ರತಿ ಹೆಜ್ಜೆ ಅವರೇ ಇಡಿಸುತ್ತಿದ್ದಾರೆಂಬುವಷ್ಟು ಪ್ರಭಾವ ಬೀರಿರುವುದು ಉತ್ಪ್ರೇಕ್ಷೆಯ ಮಾತಲ್ಲ! ಯಾವುದೇ ಕೆಲಸವನ್ನು ಮಾಡಿದಾಗಲೂ ‘ನಮಗೆ ಬಾಬಾ ಹೀಗೆ ಹೇಳಿಕೊಟ್ಟಿದ್ದರೆಂದು’ ಬಹಳ ಗೌರವದಿಂದ ಸ್ಮರಿಸುತ್ತೇವೆ. |