Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಮಂಡ್ಯ ಜಿಲ್ಲೆಯ ದೇವಾಲಯಗಳು ಒಂದು ಸಮೀಕ್ಷೆ

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಮಂಡ್ಯ ಜಿಲ್ಲೆಯ ದೇವಾಲಯಗಳು ಒಂದು ಸಮೀಕ್ಷೆ ತೈಲೂರು ವೆಂಕಟಕೃಷ್ಣ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 180

Download  View

 ‘ಸ್ವಸ್ಥ ದೇಹದಲ್ಲಿ ಸ್ವಸ್ಥ ಮನಸ್ಸು’ ಎಂಬ ಮಾತಿದೆ. ಅಂತೆಯೇ ‘ದೇಹೋ ದೇವಾಲಯಃ ಪ್ರೋಕ್ತಾಃ ಜೀವೋ ದೇವಸ್ಸನಾತನಃ’ ಎಂಬ ಈ ಉಕ್ತಿಯು ಮನುಷ್ಯನ ದೇಹದಲ್ಲಿ ನೆಲೆಸಿರುವ ಪರಮಾತ್ಮನ ಬಗ್ಗೆ ಹೇಳುತ್ತದೆ. ‘ಪರಮಾತ್ಮನಿರುವ ಲೋಕವನ್ನು ಸೂರ್ಯನಾಗಲೀ, ಚಂದ್ರನಾಗಲೀ, ಅಗ್ನಿಯಾಗಲೀ ಬೆಳಗುವುದಿಲ್ಲ. ಸ್ವಯಂ ಪ್ರಕಾಶವಿರುವ ಸೂರ್ಯಚಂದ್ರಾದಿಗಳಿಗೂ ದೂರವಿರುವ ಲೋಕವದು. ಅದುವೇ ದೇವರ ನಿವಾಸ ಸ್ಥಳ” ಎಂಬುದನ್ನು ಭಗವದ್ಗೀತೆಯಲ್ಲಿ ಹೇಳಲಾಗಿದೆ.