ತನ್ನ ಸುತ್ತ ಇರುವ ಜನರು ದೈಹಿಕ, ಮಾನಸಿಕ, ಅಪಘಾತ ಮತ್ತು ನೈಸರ್ಗಿಕ ರೋಗಗಳಿಂದ ಬಳಲುತ್ತ, ಅವುಗಳಿಂದ ಚೇತರಿಸಿಕೊಳ್ಳಲಾಗದೆ ದುಃಖತಪ್ತರಾಗಿರುವುದನ್ನು ನೋಡಲಾಗದೆ ಅವರ ರೋಗಗಳನ್ನು ದೂರಮಾಡಿ, ಅವರಿಗೆ ಆರೋಗ್ಯವನ್ನು ಮರಳಿ ಕೊಡಿಸಲು ಆಯುರ್ವೇದವನ್ನು ಧನ್ವಿಂತರಿಯ ಶಿಷ್ಯನಾಗಿ ಕ್ರಿ.ಪೂ.ಆರನೇ ಶತಮಾನದಲ್ಲಿ ಅಭ್ಯಸಿಸಿ, ವೈದ್ಯ ಶಾಸ್ತ್ರದ ಉನ್ನತಿಗೆ ಕಾರಣನಾದ ಸುಶೃತನ ಕೊಡುಗೆ ಭಾರತೀಯ ವೈದ್ಯ ಪದ್ಧತಿಗೆ ಅಪಾರ.