ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರು |
ಸ್ತ್ರೀ ಸ್ವಗತ | ಶ್ರೀ ಕುಮಾರ ಶಂಕರನಾರಾಯಣ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಯಕ್ಷಗಾನ ಅಕಾಡೆಮಿ |
ಪುಟಗಳ ಸಂಖ್ಯೆ | 42 |
ಏನಿದು ವಿಚಿತ್ರ. ಅತ್ಯಂತ ಎತ್ತರವೂ ಸುಂದರವೂ ಆದ ಪ್ರದೇಶ. ಇದನ್ನೇ ಕೈಲಾಸ ಪರ್ವತವೆಂದು, ಬೆಳ್ಳಿಯ ಬೆಟ್ಟವೆಂದು, ರಜತ ಗಿರಿಯೆಂದೇ ಕರೆಯುತ್ತಿದ್ದಾರೆ. ಇಲ್ಲಿ ಸರ್ವಾತ್ಮಕನು, ಸರ್ವವ್ಯಾಪಕನು, ಸರ್ವೇಶ್ವರನೂ ಆದ ಭಗವಂತನು ಪ್ರಮಥಾದಿ ಗಣಗಳೊಂದಿಗೆ ನೆಲೆಸಿದ್ದಾನೆ. ಆದ್ದರಿಂದಲೇ ಈ ಕ್ಷೇತ್ರಕ್ಕೊಂದು ಪಾವಿತ್ರ್ಯ ಉಂಟಾಯಿತು. ದೂರದಿಂದಲೇ ಕಂಡರೂ ಕಂಡವರ ಪಾಪ ಪರಿಹಾರವಾಗುವುದೆನ್ನುವ ಪ್ರಬಲವಾದ ನಂಬುಗೆ ಭಕ್ತರ ಮನದಲ್ಲಿ.