ಮಹಾಮಹಿಮಾನನೇಮವ
ದೇವನಾಜ್ಞೆಈವಿದಿರುವದು |
ಸಾವಧಾನದಿಈವದು
ಭವಕೆಮೂಲನುದೇವನೊಬ್ಬನು
ಅವನಸ್ತುತಿಪ್ರಾರ್ಥಿಪುದು ||ಪಲ್ಲ||
ಸ್ವಾಯವನವನಾಮಧ್ಯಾನವ |
ನೇಮದಲಿಕಾಮಿಸುವದು
ಆಮಹಾಮಹಿಮನನೇಮವ
ಪ್ರೇಮದಾಚರಿಸುವದು ||1||
ತಂದೆತಾಯ್ಮನನೊಂದಿಸದೆಸದಾ |
ನಂದಸುಖದಿಂದಿರುವದುಮಂದಮತಿ
ಕೊಲೆಬಂಧನಾರಿಗು
ಎಂದಿಗೈವದಿರುವದು ||2||
ಮೋಹಕೆಮನಸಹಾಯಗೈಯದೆ |
ಇಹಪರದಿಸ್ಥಿರವಿರುವದು
ಸಹಿಸದೆಪರರೊಡವಿಕದಿಯದೆ
ಸಹಜನುಡಿನುಡಿಯಲಿರುವದು ||3||
ಸುಳ್ಳುಸಾಕ್ಷಿಗಳುಸುರದೆಸದಾ |
ಒಳ್ಳೆಯವನಾಗಿರುವದು
ಇಳೆಯೊಳಗೆಪರಸ್ತ್ರೀಯದ್ರವ್ಯದ
ಒಳಗಾಗದೆಬಾಳಿರುವದು ||4||
ಧರಿಯೊಳಗೆಯಾವನರನೆಯಾಗಲೀ |
ಪರಿಯೊಳಿರೆಮೋಕ್ಷಾಗ್ವದು
ಮೀರಿದಪದದಾರಿದೋರುವದು
ಕರಿಘೂಳೀಶನಕರುಣಿದು ||5||
ಶಿವದೇವದೇವ
ಶಿವದೇವದೇವಸುಕೃತಿಗೊರವ |
ತವಕರುಣನವರಸವೀವ ||ಪಲ್ಲ||
ಗಿರಿಜೆಯಜಾತರುಕರಿವದನಾದಿಸುರ |
ಹರಿಅಜಗರುಡಕಿನ್ನರರು
ಗೈವರುತವಸೇವಶಿವ ||1||
ಯೋಗಿಜನಾರ್ಚಿತ |
ಶ್ರೀಗೌರಿಯಾವೃತಸಾಗಿಸು
ಕೃತಿನಾನರಿಯೆವರಿಯೊಶಿವಶಿವ ||2||
ರುಗ್ವೇಜುಸಾಮಥರ್ವೇದಕ್ಕೆ |
ನಿಲಕದೀಕಥೆಯೇಕೋನಿಷ್ಠಗೀಸುಖ
ಕರವಸ್ಥಿರವಕಾವಶಿವ ||3||
ತ್ರಿಗುಣರಹಿತತ್ರಿಗಜವಿನುತ |
ತ್ರಿಕೂಟವಾಶಿತತ್ರಿಲೋಚನ
ವಾಚನಾಮಶಿವ ||4||
ಅಂತಕನಾಂತಕಶಾಂತಸುವಾಚಕ |
ಅಂತಃಕರುಣಕರಿಘೂಳೀಶ
ಪೋಷಭಾಷಶಿವ ||5||
ಶ್ರೀಗುರುವಿನಭಜಿಸೊ
ಶ್ರೀಗುರುವಿನಭಜಿಸೊಜಗತ್ಯಜಿಸೊ |
ಯೋಗಾಸನಸುಖವಾಗಿವಿರಾಜಿಸೊ ||ಪಲ್ಲ||
ಅನುದಿನದೊಳುತನುಮನಮಂದಿರದೊಳ್ |
ಘನತರಪರಬ್ರಹ್ಮಾಮೃತಸೇವಿಸೋ ||1||
ಭೂತಛೆತ್ತೀಸದಜಾತಕಪ್ರಕಟಿಸಿ |
ಜಾತಿಅಜಾತಿಸುಜಾತಿಅಜಮಜಿಸೊ ||2||
ಕರುಣರಸಾಲಮಾರಹರಶೀಲ |
ಶರಣಗಣಂಗಳಸಾರವಸೃಜಿಸೊ ||3||
ಗುರುಚರಧೀರಕರಿಘೂಳಿನಿರಾಕಾರ |
ಪರಮಪಾವನಚರಣಂಗಳಪೂಜಿಸೊ ||4||
ಶ್ರೀಮಹಾದೇವಗಾರತಿ
ಶ್ರೀ ಮಹಾದೇವಗಾರತಿ |
ಬೆಳಗಿರಿ ಮಂಗಲಂ ಜಯತು
ಕರ ತ್ರಿಶೂಲಧರನಿಗೆ ಕೊರಳಲ್ಲಿಸುರ
ಶಿರಹಾರಧರಗೆ ನರರ ಪರಿದುರಿತ ಹರಿತನಿಗೆ
ಹರಿಣ ಕರಧಾರ ಶಂಕರಗೆ ||ಪಲ್ಲ||
ವಿಧಿಸುರ ಬುಧಗಳಾರ್ಚಿತಗೆ |
ಆದಿ ಅನಾದಿ ಸದಮಲಗೆ
ನಾದ ನಿಧಿ ಬಿಂದು ಕಳೆವರೆಗೆ
ಸದಾ ಪರಬ್ರಹ್ಮ ಮೂರುತಿಗೆ ||1||
ಶಶಿಧರ ಶೇಷಭೂಷನಿಗೆ |
ಕೂಸಿನಗೊರಳಗಾಸಿಪಗೆ
ಪಶುಪತಿ ಶಿಷ್ಯ ಪೋಷಿಪಗೆ
ಈಶ ಕೈಲಾಸವಾಸನಿಗೆ ||2||
ಕಾಮನ ಹಮ್ಮನಳಿದವಗೆ |
ನಿರ್ಮಲ ಉಮಾರಮಣನಿಗೆ
ಪ್ರೇಮದಿರೊ ವಾಮಸ್ವಾಮಿಗೆ
ಜನ್ಮಜ ಕರ್ಮಪರಿಹಾರಗೆ ||3||
ತ್ರಿಕೂಟದಿ ತ್ರಿಪುರ ಸಂಹರಗೆ |
ತ್ರಿಜಗದಿ ತ್ರಿಗುಣವಂದಿತಗೆ
ತ್ರಿನದಿಯ ರಾಜೋಳಿಯ ವಾಸನಿಗೆ
ಶ್ರೀ ಕರಿಘೂಳೀಶ ಗುರುವರಗೆ ||4||
ಜೋ ಜೋ ಎನ್ನಿರಿ
ಜೋ ಜೋ ಎನ್ನಿರಿ ಶಿವತತಿಸುತಗೆ |
ಜೋ ಜೋ ಯನ್ನಿರಿ ಭವತತಿ ಹತಗೆ
ಜೋ ಜೋ ಯನ್ನಿರಿ ಜೋ ಘನ ಯತಿಗೆ
ಸದಾ ಜೋ ಯಂದು ಪಾಡಿರಿ
ಸದುಹೃದಯನಿಗೆ ಜೋ ಜೋ ||ಪಲ್ಲ||
ಕೈಲಾಸದೊಂದಿನ ಸಭೆಯು ನೆರೆದಿರಲು |
ಅಲ್ಲಿಗೆ ನಾರದ ಮುನಿಯು ತಾ ಬರಲು
ಕೇಳಿ ಲೋಕದವಾರ್ತಿ ಬಸವಗ್ಹೋಗೆನಲು
ಕೇಳಿ ಇಳೀಯೊಳಗಿಳಿದಾನು
ಬಾಲಲೀಲನಿಗೆ ಜೋ ಜೋ ||1||
ಸತ್ತಂಥ ಶಿಶುವಿಗೆ ಕಳೆಯನಿತ್ತವಗೆ |
ಮತ್ತು ಬರಡಾಕಳ ಪಾಲ್ಕರಸಿದವಗೆ
ಅರ್ತು ಸಂಗನ ಕೂಡಿ ಮಾತಾಡಿದವಗೆ
ಇತ್ತ ವಾರ್ತಿಯು ಹರಡೀತು
ಕಲ್ಯಾಣದೊಳಗೆ ಜೋ ಜೋ ||2||
ಕಲ್ಯಾಣದೊಳು ಪ್ರಧಾನಾದ ಬಲ್ಲಿದಗೆ |
ಎಲ್ಲ ಗಣಂಗಳ ಸೊಲ್ಲರಿದವಗೆ
ನಿಲ್ಲದೆ ಪವಾಡಗಳಲ್ಲಿ ಮಿಗೆ ಖುಲ್ಲರೆಲ್ಲ
ಮೆಲ್ಲನೆ ಪಾಡಿರಿ ಜೋಗುಳ ಜೋ ||3||
ಸಾಲೋಕ್ಯ ವಂಶದಿ ಶರಣಬಸವನು ಕಲಬುರ್ಗಿಯಲಿ |
ಮಹತ್ವ ತೋರಿ ನೆಲಸಿದನು
ಸಲಿಸಷ್ಟ ಭರಣ ದಾಸೋಹಂ ನಡೆಸಿದನು
ರಾಜಹಳ್ಳಿಯೊಳ್ಜನಿಸಿ ಕರಿಘೂಳಿಯೆನಿಸಿದನು ಜೋ ಜೋ ||4||
ಶರಣಬಸವ ಕರುಣಿಸೊ
ಶರಣಬಸವ ಕರುಣಿಸೊ ಶಿವ |
ಪರಮನೀಶವತಾರನೆ ಪರಿಪರಿಯಲಿ
ಚರಣ ಸ್ಮರಿಸುವೆ ಮರಿಯದಲಿ ಬೆರೆಧೀರನೆ ||ಪಲ್ಲ||
ಸಾಲೋಕ್ಯವರಕುಲವುದ್ಧಾರ |
ನೀಲ ಲೋಹಿತ ಬಾಲನೆ
ಕಾಲ ಕಾಲದಲ್ಲಿಯು ಸುಲೀಲೆಯೊಳಿರುವಾತನೆ ||1||
ಅಷ್ಟ ಮದಗಳ ಮೆಟ್ಟಿ ದಳಗಳ |
ಅಷ್ಟವರಣಾ ನಿಷ್ಠನೆ ಸೃಷ್ಟಿಯೊಳು
ಸುಧರ್ಮನಟ್ಟಿಸಿ ಇಷ್ಟ ವರ ಕೊಟ್ಟಾತನೆ ||2||
ಕಲಬುರ್ಗಿಯೊಳು ನೆಲಸಿ ಮಹಿಮೆಗಳ್ |
ನಿಲಸಿಯಿಳೆಯೋಳ್ಮೆರೆದವನೆ ನೆಲದಧಿಕ
ರಜತಾದ್ರಿಪುರ ಕರಿಘೂಳೀಶನೆ ಭಾಳಾಕ್ಷನೆ ||3||
ಆನಂದವಾಯಿತು ಇಂದು
ಆನಂದವಾಯಿತೆ ಇಂದಿನ ದಿನದಲಿ |
ದೀನದಯಾಳು ಗುರು ಮನಿಗೆ ಬಂದುದಕ್ಕೆ ||ಪಲ್ಲ||
ಬಹಳ ದಿನದಲಿಂದೆ ರಹ ನೋಡುತಲಿಯಿದ್ದೆ |
ಇಹಪರ ಹರಿಸಿದ ಮಹನೀಯ ಬಂದುದಕ್ಕೆ ||1||
ಮನು ಮುನಿ ಸುರಕೋಟಿ ಗಣಕೆಲ್ಲ ಘನವಾದ |
ಓಂ ನಮಃಶಿವ ಗುರು ಪ್ರಣಮನು ಬಂದುದಕ್ಕೆ ||2||
ಹುಣ್ಣಿವಿ ಚಂದ್ರನ ಕಣ್ಣಿಲಿ ಕಂಡೆನು |
ಚಿನುಮಯ ಕರಿಘೂಳೀಶ ತನ್ನಂತೆಗೈದುದಕ್ಕೆ ||3||
ಆರಿಗು ಸ್ಥಿರ ಸುಖವಿಲ್ಲ
ಇಲ್ಲ ಇಲ್ಲ ಇಲ್ಲ ಈ ಲೋಕದ |
ನರರಿಗೆ ಆರಿಗು ಸ್ಥಿರ ಸುಖವಿಲ್ಲ ||ಪಲ್ಲ||
ಹರಿಹರ ಅಜರಿಗೆ ಸ್ಥಿರ ಸುಖವಿಲ್ಲ |
ಧರಿಯೋಳ್ಜನ ಸ್ಥಿತಿಲಯವಾದಲ್ಲ
ಸೂರ್ಯ ಚಂದ್ರರಿಗೆ ಸ್ಥಿರಸುಖವಿಲ್ಲ
ಗ್ರಹಣವೆಂಬುವದು ವೈರಾದಲ್ಲ ಇಲ್ಲ ||1||
ಸುರಮುನಿಗಳಿಗೆ ಸ್ಥಿರ ಸುಖವಿಲ್ಲ |
ಅಸುರರವರಿಗೆ ಎದುರಾರಲ್ಲ
ಪರಿಪರಿ ವಿಧದಲಿ ಕಾಡುವರಲ್ಲ
ನರಕಕ ಗುರಿಯಾಗುವರಲ್ಲ ಇಲ್ಲ ||2||
ಜಪತಪಗೈಯಲು ಸ್ಥಿರ ಸುಖವಿಲ್ಲ |
ಉಪವಾಸಗೈಯಲು ತಾಪದೆಲ್ಲ
ವಿಪಿನದಿ ಫಲಹಾರ ಭೂಜಿಸಿದರಿಲ್ಲ
ಕೋಪ ದಮನ ಸಾಪಾಗುವತನಕ ಇಲ್ಲ ||3||
ಜಡೆಮುಡಿ ಬೆಳಸಿದರೇನು ಸುಖವಿಲ್ಲ |
ಜಡೆಮುಡಿಗಳು ಬೋಳಾದರು ಇಲ್ಲ
ಅಡವಿಯ ಗಡ್ಡೆ ಬೇರುಂಡರೆ ಇಲ್ಲ
ಮೃಢ ನುಡಿ ಅಡಿಗಡಿ ನುಡಿಯುವ ತನಕ ಇಲ್ಲ ||4||
ತಾನು ದೇವರು ಹೇಳಲು ಇಲ್ಲ |
ಮನುಜರು ಮನ್ನಣೆ ಮಾಡಲು ಇಲ್ಲ
ಬಿನಗು ಮಂತ್ರ ಯಂತ್ರಗಳಲ್ಲಿಲ್ಲ
ನಾನು ನೀನು ಒಂದಾಗುವತನಕ ಇಲ್ಲ ||5||
ಕಾವಿಯು ಕಪನಿ ಹಾಕಿದರಿಲ್ಲ |
ಮೈಯೆಲ್ಲ ರುದ್ರಾಕ್ಷಿ ಧರಿಸಲು ಇಲ್ಲ
ಕಾಯೆಲ್ಲ ವಿಭೂತಿ ಧರಿಸಿದರಿಲ್ಲ
ದೇಹದೊಳಾತ್ಮನ ಕೂಡುವತನಕ ಇಲ್ಲ ||6||
ಹೇಸಿ ಸಂಸಾರ ಈಸಲು ಇಲ್ಲ |
ದೇಶ ಕಾಶಿಗಳು ತಿರುಗಲು ಇಲ್ಲ
ವಾಸ ಗಿರಿಗಳಲ್ಲಿ ಗೈಯಲು ಇಲ್ಲ
ನಾಶಿಕದೀಶನ ಧ್ಯಾಸಿಸೊತನಕ ಇಲ್ಲ ||7||
ಮಾತಿಗೆ ಮಾತು ಕಲಿತರು ಇಲ್ಲ |
ಮಾತಾಡದೆ ಮೌನಿದ್ದರು ಇಲ್ಲ
ಜಾತಿ ಅಜಾತನಾದರು ಇಲ್ಲ
ಆತ್ಮಾನುಸಂಧಾನಗೈಯುವ ತನಕ ಇಲ್ಲ ||8||
ಚೌಸಷ್ಟಿ ವಿದ್ಯೆಗಳ್ಕಲಿತರು ಇಲ್ಲ |
ದ್ರವ್ಯ ಗಳಿಸಿ ಹೌದೆನಿಸಿದರಿಲ್ಲ
ಭಾವಿ ಗುಡಿ ಅನ್ನದಾನದಿ ಇಲ್ಲ
ಭಾವದಿ ಶಿವನು ಭಾವಿಸತನಕ ಇಲ್ಲ ||9||
ವೇದ ಓದಿ ಸಾಧಿಸಲು ಇಲ್ಲ |
ಆಧಾರ ಚಕ್ರಗಳರಿತರು ಇಲ್ಲ
ಓದು ಬರದೆ ಸಾಧುರಾದರೆ ಇಲ್ಲ
ಸಾಧು ಕರಿಘೂಳಿಪಾದ ನಂಬುವತನಕ ||10||
ಇದು ಎಂಥ ಸೋಜಿಗ
ಇದು ಎಂಥ ಸೋಜಿಗವೊ ಸದ್ಗುರು ದೇವ ||ಪಲ್ಲ||
ಇದು ಎಂಥ ಸೋಜಿಗವೊ |
ಸದಮಲಾನಂದನಿಗೆ ವಾದಿಸಿಯವ
ನಿಜ ಬೋಧಕರನಲ್ಲಂಬ ಇದು ||1||
ಸಾವಿರಕೊಬ್ಬ ಶರಣ |
ಭವದೊಳವತರಿಸಿರುವ ಭವಹರಣ
ಅವರ ಕಂಡು ಇವರೆಲ್ಲನು ಭವರೆಂದು
ಜವದೆಮನಾಲಯಕೆ ತಾವಾಗಿ ಸೇರುವ ಇದು ||2||
ಮಂತ್ರ ತಂತ್ರ ಕಲಕಂಡು ಭ್ರಾಂತಿಯಲಿಂದೆ |
ಮಹಾಂತರು ಇವರುಯೆಂದು
ಹಂತಿಲೋಗೆ ಅವರು ಬಂತು ಬ್ಯಾಟಿಯನೆಂದು
ಮಂತ್ರದಿಂದ ಮಂತ್ರಿಸಿ ಯಲ್ಲರಲ್ಲಿ ಅಂತಕನಲ್ಲಿಗೋಗ್ವರಿದು ||3||
ಕಲ್ಲು ಕಾಷ್ಠವಗ್ನಿ ಭೂ ಪೂಜಿಸಿ |
ಯಲ್ಲರಲ್ಲಿ ತಾವೆ ಬಲ್ಲಿದರೆನಿಸಿ
ಬಲ್ಲಿದರಲ್ಲೆಂದು ಹೇಳಲು ಕೇಳಾದೆ
ಖುಲ್ಲತನದಿ ಕಾಲನಲ್ಲಿ ನಿಲ್ಲುವರಯ್ಯೋ ಇದು ||4||
ಹರನಾಮ ಸ್ಮರಣೆಯಿಲ್ಲ |
ಇರುಳ್ಹಗಲ ಸಂಸಾರ ಶರಧಿಯೊಳ್ಹಾರಲ್ಲ
ಸ್ಮರಣೆ ಮಾತ್ರದಿ ಸರ್ವ ದುರಿತಗಳರಿತಿರಲು
ಕರುಘೂಳೀಶನ ಪಾದ ಮರಿದು ಮರುಳಾದರಿದು ಇದು ||5||
ಗುರು ಪರಬ್ರಹ್ಮ
ಗುರು ಪರಬ್ರಹ್ಮವೆಂದರಿದು |
ಮೂರೊಂದಾದ ಗುರು
ಸೇವೆಗೈಯುವ ನರನೆ ಉತ್ತಮನು ||ಪಲ್ಲ||
ಗುರುಮನೆ ಕ್ಷೇತ್ರದಿರುವ ಕಾಶಿಯಂತೆಂದೀ |
ಪರಿ ಕಾಯುತ್ತಿರುವನೆ ಸ್ಥಿರನೆನಿಸುವನು
ಮರಿಯದೆ ಗುರುಪೂಜೆ ಗುರುಭಕ್ತಿಗೈಯಲು
ಗುರುಧ್ಯಾನ ಗೈಯುವನಧಿಕನೆನಿಸುವನು ||1||
‘ಗುರು ತಾಯಿ ತಂದೆಯು ಗುರುವೆ ಸುಕುಲ ದೀಪ |
ಗುರುದೇವನೆಂಬುವನೆ ಗುರುಪುತ್ರನಹನು
ಗುರುವು ಕೋರಿದ ವಸ್ತುಗಳನೆಲ್ಲನಿರಿಸುತ
ಗುರುವಿಗಾರಾಧಿಸಲು ಗುರು ಆತ್ಮನವನು ||2||
ಗುರು ವಚನವೇ ವೇದ ಗುರು ವಚನವೇ ಮಂತ್ರ |
ಗುರುವಿನೀ ಪರಿ ನೆನಿದು ತಾನು ತನ್ನನು
ತಾನಾರೆಂದು ಗುರುವಿನ ಅರಿತಿರಲನುದಿನ
ಗುರು ಕರಿಘೂಳೀಶ ಗುರುವರನಹನು ||3||
ಜಪಿಸೋ ಪ್ರಣಮ ಮಂತ್ರ
ಜಪದೊಳು ತಪ ಮಾಡೊ ಶಾಂತ ಜೀವ |
ಜಪಿಸೋ ಪ್ರಣಮ ಮಂತ್ರ ಗುಪಿತದೇಕಾಂತ ||ಪಲ್ಲ||
ಆತ್ಮಜ್ಞಾನಕ ಬೇಕು ಶಾಂತ |
ಜೀವಾತ್ಮನಿಗೆ ಮುಕ್ತಿಯನರಿಸುವದಂತ
ರಾತ್ಮನಲ್ಲಿರಿಸೋದೆ ಶಾಂತ
ಪರಮಾತ್ಮನೋಳ್ಬೆರಿಸುವದೀ ಪರಮಹಾಂತ ||1||
ಅಸ್ಥಿರ ತ್ರಿತನುವೆಂದರಿದು ಮೂರವಸ್ಥೆಗೆ ಸಿಲುಕದೆ |
ಮಸ್ತಿಯ ಮರಿದು ಸುಸ್ತಿಗೈಯ್ಯದೆ
ಪರದಾರ್ಹಿಡಿದು ಗುರ್ತುದೋರುವ
ಗುರುಪಾದ ಕರುಣವ ಪಡಿದು ||2||
ವಿಧಿಯ ಜ್ಞಾನಕೆ ಬೇಕು ಶಾಂತ |
ಅದು ಸಾಧಿಸದಿರೆವೈದು ಶಾಮಲಿಕಾಂತ
ಬಾಧೆಯೊಳಿರಿಸುವನಂತ
ನಿಜಬೋಧ ಸಾಧನ ಹಾದಿ ಹಿಡಿಸೋದೆ ಶಾಂತ ||3||
ಸುರರಿಗಾಧಾರವಾದಶಾಂತ |
ಪರತರ ಪುರುಷೋತ್ತಮ
ನರಿಸುವದೆ ಶಾಂತ ಇಹಪರ ಸೌಖ್ಯವು ಶಾಂತ
ಪರಿಪೂರ್ಣ ಪರಬ್ರಹ್ಮನಲ್ಲಿರಿಸುವದು ಶಾಂತ ||4||
ಅಂತರಂಗದಿ ಯಿರೊಭ್ರಾಂತ |
ಮೋಹ ಸಂತತಿ ಶಾಂತದಿ ತರಿದು ನಿಶ್ಚಿಂತ
ಅಂತಕಾಂತಕನಾದ ಶಾಂತ
ನಿರಂತರ ಕರಿಘೂಳ್ಯಾಗಿರುಸುವದೆ ಶಾಂತ ||5||
ಓದುಗಲಿಸಬಾರದೆ ಸದ್ಗುರು
ಓದುಗಲಿಸಬಾರದೆ ಶ್ರೀ ಸದ್ಗುರು ||ಪಲ್ಲ||
ಪರದ್ಹಾದಿದೋರಿಸಬಾರದೆ |
ವೇದದ ಮೂಲವು ಸಾಧಿಸೆಂದು ನಿಜ ಬೋಧ
ಊದಲಿಬಾರದೆ ಸದ್ಗುರುರಾಯ ||1||
ತತ್ವಗೊತ್ತಿಸಬಾರದೆ ತತ್ವದೊಳು |
ಸತ್ಯ ಹತ್ತಿಸಬಾರದೆ ಸತ್ತುಚಿತ್ತಾನಂದ
ನಿತ್ಯ ಪಥ ಪರಮಾತ್ಮನರಿಸಬಾರದೆ ||2||
ಮಾತು ಮಾತಿಗೆ ಶಂಕರಾ |
ಸದ್ಗುರುವೆ ನಿನ್ನ ಜಾತನಲ್ಲವೆ ಕಿಂಕರಾ
ನಿತ್ಯನಿರಂಜನ ಅತ್ಯಧಿಕ ಘನ ಜ್ಯೋತಿ ಉದಿಸಬಾರದೆ ||3||
ನಾನಾರೆಂಬುವದರಿಯೆಸದ್ಗುರುರಾಯ |
ನಾನು ನಿನ್ನಗೆ ಸರಿಯೆ ಜ್ಞಾನ ಮೂರುತಿ ನಿನ್ನ
ಧ್ಯಾನದಿರಿಸಿ ನಿಧಾನದಿರಿಸಬಾರದೆ ||4||
ಧರಿಯೊಳರಸಪುರವಾ ಶ್ರೀಗುರುದೇವ |
ಕರಿಘೂಳಿ ಗುರುದೇವ ವರಕವಿ
ಶ್ರೀಗುರು ಮುರುಗೇಂದ್ರನೆ ಸುಖದರಿವು ಅರಿಸಬಾರದೆ ||5||
ಶಿವ ಶಿವನಂದರೆ ದೂರಿಲ್ಲ
ಶಿವ ಶಿವನೆಂದರ ದೂರಿಲ್ಲ |
ಶಿವ ನಿನ್ನೊಳಾನ ನೀ ನೋಡಿಲ್ಲ
ಭವಮಾಲೆಯ ನೀ ಗೆಲಿಲಿಲ್ಲ
ಶಿವನ ತೋರುವ ಗುರುವಿನ ಅರಿ ಮೊದ¯ ||ಪಲ್ಲ||
ಮೇ-ಮಹಲಿನೊಳಗಾತ ಹಾನಲ್ಲ |
ಆ ವiಹಲಿಗೆ ನವದ್ವಾರ ಬಾಗಿಲ
ಸಾಲ ಗಂಟಿ ಓಂಕಾರ ನಾದ ಸೊಲ್ಲ
ಅಲ್ಲಿ ಮನ ನಿಲ್ಲಿಸಲು ಕಾಣುವನಲ್ಲ ||1||
ಆರರಿ ಪೈರ ತಿರುಗುವರಲ್ಲ |
ಅವರ ಕೈಯಲಿ ಸಿಕ್ಕರೆ ನಿನ್ನ ಬಿಡೊದಿಲ್ಲ
ಘೋರ ಕಷ್ಟಕ ಗುರಿ ಮಾಡ್ವರಲ್ಲ
ಆರರಿಗಳರಿತರೆ ಪರಶಿವನಲ್ಲ | ||2||
ವಸುಧಿಯೊಳೋಂಕಾರ ಮಠದಲ್ಲಿ |
ಶಶಿಧರನು ವಾಸವಾಗಿರುವನಲ್ಲಿ
ಶೇಷಧರ ಕಾಣಿಪ ಕ್ಷಣದಲ್ಲಿ
ಈಶ ಕರಿಘೂಳಿ ತೋರಿಪನು ಇದರ ಕೀಲಿ ||3||
ಎಂಥಾತ ನೋಡು ಗುರುವು
ಎಂಥಾತ ನೋಡು ಈ ಗುರುವು ಎನ್ನಂತಿಲಿರುವೋ |
ಭ್ರಾಂತಿ ಬಿಡಿಸಿದನೆ ಮರವೂ
ಸಂತೋಷದಿಂದ ಹಂತಿಲಿ ಕರೆದು
ಅಂತರಂಗದ ಕೀಲನರುಹಿ
ಶಾಂತ ಸದ್ಗುರು ಬೋಧಿಸಿ ಯೆನ್ನ
ಚಿಂತೆ ಬಿಡಸಿ ತೋರಿದನರುಹು ||ಪಲ್ಲ||
ಬುಡನಡುವಾಗಿರುವದು ಗಿಡವು |
ಗಿಡದೆಲೆಯಲ್ಲಿ ಮಿಡಿಗಾಯಿ ಹಣ್ಣಿನೊಳು ರಸವು
ಅಡಿಗಳಿಲ್ಲದೆ ನಡೆದು ಪೋಗಿ
ಗಿಡದ ತುದಿಯಲಿ ದೃಢವನಿಲಿಸಿ
ಮೃಢನ ನುಡಿಗಳು ಬಿಡದೆ ನುಡಿಸುತ
ಮಿಡಿಹಣ್ಣು ಕುಡಿಸಿ ತೋರಿದ ಕುರುಹು ||1||
ಕೆರೆಯೊಂದು ಯೆನಗ ತೋರಿದನೆ |
ಆ ಕೆರೆಯ ಮಧ್ಯದಿ ನೀರೆ ನೀನೆಂದು ನಿಲಸಿದನೆ
ನೀರಿನೊಳಗೆ ನಾರಿಯರು ಮೂವರು
ಮೂರು ಲೋಕದಿ ಮೀರಿ ಮೆರೆವರು
ನಾರಿಯರ ಸೇರುವ ದಾರಿಯ ತೋರಿ
ಪಾರು ಮಾಡಿದ ಭವ ಸಾಗರವು ||2||
ಅಕಾರ ಉಕಾರ ತಿಳಿಸಿದ ನೇಮ |
ಮಕಾರದ ಮಾರ್ಗ ಸಾಕಾರದಿ ನೆಲಿಯಗೊಳಸಿದನೆ
ಓಂಕಾರ ನಾದವ ಹಿಡಿಸಿ
ಝೇಂಕಾರ ಪ್ರಣಮವು ಕೂಡಿಸಿ
ನಿರಾಕಾರನಾದ ಕರಿಘೂಳೀಶನು
ಸಾಕು ಮಾಡಿದ ನರ ಜನ್ಮವು ||3||
ಚಿತ್ರ ಎಂಥಾದು ಕಂಡೆ
ಚಿತ್ರ ಎಂಥಾದು ಕಂಡೆ ರಾತ್ರಿ ಮನಗಂಡೆ |
ಉತ್ರ ಬಾಗಿಲದಿ ಬಂದೆ ಚಿತ್ರವು ಯಂಥಾದು ಕಂಡೆ
ಧಾತ್ರಿಯಲ್ಲ ತುಂಬ್ಯಾದ ಕಂಡೆ ನೇತ್ರ ದ್ವಾರದಲ್ಲಿರುವ
ಸೂತ್ರಧಾರನ ಕೂಡ್ವದು ಕಂಡೆ ||ಪಲ್ಲ||
ಮೇಲುಮಾಲಿನವಳಗ ಬಾಲೆಯೊಬ್ಬಳು |
ನಲಿನಲಿದಾಡುವುದು ಕಂಡೆ
ಕಾಲನಿಲ್ಲದ ಹೆಳವನೊಬ್ಬ ಮೇಲು ಮಾಲಿನೊಳಗೆ
ಪೋಗಿ ಬಾಲೆಯೊಳು ಕೂಡಿ ಲೋಲದಿ
ಬಾಲನೊಬ್ಬನ ಪಡೆದದ್ದು ಕಂಡೆ ||1||
ಕಣ್ಣು ಕುರುಡಾದಾಗ ಕಂಡೆ |
ಆ ಕಣ್ಣಿನೊಳು ಎಣ್ಣಿಲ್ಲದೆ ಜ್ಯೋತುರಿವದು ಕಂಡೆ
ಸಣ್ಣ ದ್ವಾರವ ತೆರೆದು ನೋಡಲು ಬಣ್ಣವೈದು ಕಾಣ್ವದು ಕಂಡೆ
ಬಣ್ಣದೊಳಗಿರುವ ಕರಿಘೊಳೀಶಗೆ ತನುಮನಧನ ಕೊಟ್ಟು ಕೂಡಿ ಕೊಂಡೆ ||2||
ದುರ್ಗುಣಗಳ ನೀ ನಡಿಬ್ಯಾಡೋ
ದುರ್ಗುಣಗಳ ನೀ ನಡಿಬ್ಯಾಡೋ ಬ್ಯಾಡೊ ಬ್ಯಾಡೊ |
ಘೋರ ಸಂಸಾರ ಶರಧಿಯು ನೋಡೋ
ಪಾರು ಮಾಡುವ ಗುರುವಿನ ಕೂಡೋ
ಆರು ಅರಿಯದಂಥ ಪಾರಮಾರ್ಥದ
ಸಾರತತ್ವ ವಿಚಾರವ ಮಾಡೋ ||ಪಲ್ಲ||
ಶ್ರವಣ ಮನನ ನಿಧಿ ಧ್ಯಾಸವು ಮಾಡೋ |
ಭವದ ಬಾಧೆ ನೀಗುವದು ಪಾಡೋ
ಶಿವಯೋಗಾಸನ ಹಾಕಿ ನೀ ಬೇಡೋ
ಜೀವನು ಜಪಿಸುವ ಮಂತ್ರದಿ ಕೂಡೋ ||1||
ಚಕ್ಷುರಾಗ್ರದಲ್ಲಿ ಈಕ್ಷಿಸಿ ನೋಡೋ |
ಪಕ್ಷಿವಂದು ಹಾಡುವದು ಪಾಡೋ
ತಕ್ಷಕ ಭೂಷಣ ಸಾಕ್ಷಾತ ಸದ್ಗುರು
ದಕ್ಷಶಿಕ್ಷ ವಿರುಪಾಕ್ಷನ ಕೂಡೋ ||2||
ದಾನ ಧರ್ಮ ಪರವುಪಕಾರ ಮಾಡೋ |
ಹೀನ ಜನರ ಸಂಗವು ಬ್ಯಾಡೋ
ಜ್ಞಾನ ಮೂರುತಿ ಕರಿಘೂಳೀಶಗೆ
ತನುಮನಧನ ಕೊಟ್ಟು ಉನ್ಮನಿ ನೋಡೋ ||3||
ಭ್ರಮರಾಂಬೆಯೆ ಪೊರೆಯಮ್ಮ
ಶಾಂಭವಿ ಶಂಕರಿ ಬಿಂಬಾಧಾರಿ |
ಭ್ರಮರಾಂಬೆಯೆ ಪೊರೆಯಮ್ಮ
ಲಂಬೋಧರ ಪಿತನ ಸತಿಯಳಮ್ಮ
ಸಾಂಭನ ರಾಣಿ ಏನಮ್ಮ
ನಂಬಿಗಿಯಿಂದ ಹಂಬಲದಿ ಬಂದೆ
ಬೆಂಬಿಡದೆ ಸಲಹಮ್ಮ ||ಪಲ್ಲ||
ತ್ರಿಗುಣದಿಂದೆ ತ್ರಿಮೂರ್ತಿಗಳನು |
ವಧಿಸಿದೆ ನೀನಮ್ಮ
ತ್ರಿ ಅಕ್ಷರಕಧಿಕಾರಾದೆಮ್ಮ
ತ್ರಿ ಶಕ್ತಿಯರವುತ ನೀನಮ್ಮ
ತ್ರಿಪುರ ಸುಂದರಿ ತ್ರಿನಯನ ಧಾರಿ
ತ್ರಿಲೋಕ ನಿನ್ನೊಳಗಮ್ಮ ||1||
ದುಷ್ಟ ಮಧು ಕೈಟಭ |
ಮಹಿಷಾಸುರನ ಸೀಳಿದಿಯೆನ್ನಮ್ಮ
ಕೆಟ್ಟ ಶುಂಭ ನಿಶುಂಭರ ತರಿದೆಮ್ಮ
ಶ್ರೇಷ್ಠ ಶರಣರ ಸಲಹಿದೆಮ್ಮ
ಸೃಷ್ಟಿಯೊಳು ರಾಜೋಳಿಯಲಿ ನಿಂತು
ಘೂಳೀಶಗೊಲಿತೆಮ್ಮ ||2||
ಅಲ್ಲಿಪುರದಲ್ಲಿ ಕಾಲಹರಣ ಮಾಡುವಂತ
ಅಲ್ಲಿಪುರದಲ್ಲಿ ಕಾಲಹರಣ ಮಾಡುವಂತ |
ಶೀಲವಂತರು ಗೌಳಿಗೇರು ನಾವಮ್ಮಾ
ಕಾಲಕಾಲದಲ್ಲಿ ಹಾಲ ಮಾರುವಂತ
ಮೇಲಾದ ವ್ಯವಹಾರ ನಮ್ಮದು ಬಾಲಿ ಕೇಳಮ್ಮಾ ||ಪಲ್ಲ||
ಆರು ಛಾಯದಾಕಳದ್ಹಾಲ ಮೂರು ಸೇರು |
ಹಿಂಡಿ ನಾನು ಬೇರೆ ಸ್ವಾರ್ಯಾಗ ಕಾಸೀನಿ ನೋಡಮ್ಮಾ
ಸಾರ ಮಾಡಿ ಉಣವಂಥ ಧೀರ ಶರಣರಿಗೆಲ್ಲ
ಆರು ಲಕ್ಷಕ್ಕೆ ಸೇರು ಮಾರುವರಮ್ಮಾ ||1||
ಕಾಸಿದ ಹಾಲಿಗೆ ಶಶಿಧರನ್ಹೆಪ್ಪು ಕೊಟ್ಟೆ |
ಮೊಸರಾಯಿತು ಒಳ್ಳೆ ಅಸಲ ನೋಡಮ್ಮಾ
ಕಸರಿಲ್ಲದೆ ಮೊಸರ ಸೋಸಿ ಮಜ್ಜಿಗಿ ಮಾಡಿ
ಹಸನಾದ ಬೆಣ್ಣೆಯ ತೆಗೆದೆ ನೋಡಮ್ಮಾ ||2||
ನುಣ್ಣಾಗಿ ಬೆಣ್ಣೆ ತೊಳೆದು ಸಣ್ಣಾಗಿ ವುರಿಯನ್ಹಚ್ಚೋಣ |
ಬಣ್ಣ ಬದಲಾಯಿತದೇ ಕ್ಷಣದಲ್ಲೆಮ್ಮಾ
ಎಣ್ಣಿ ಹೋಳಿ ಗುಣವಂಥ ಶರಣಾರು
ಬಣ್ಣ ನೋಡಿ ಸುಣ್ಣದ ಬಣ್ಣಾಯಿತ್ತು ಬೆಣ್ಣಿ ಕಾಸಿದ ತುಪ್ಪಮ್ಮಾ ||3||
ಬೇಕಾದರೆ ಕೊಳ್ಳಿರಿ ಸಾಕಾದರೆ ಬಿಡಿರಿ |
ಏಕ ಲಕ್ಷಕ್ಕೆ ಸೇರು ಮಾರುವೇನಮ್ಮಾ
ಅಕಾರ ಉಕಾರ ಮಕಾರ ಸಕಾರ
ಓಂಕಾರ ನಿರಂಕಾರ ಲಿಂಗಜಂಗಮರಮ್ಮಾ ||4||
ಪಂಚತತ್ವ ಕಂಡು ವಂಚನಿಲ್ಲದೆ ಕೊಂಡು |
ಪಂಚ ಅಮೃತವುಂಡು ಸುಖವು ನೋಡಮ್ಮಾ
ಸಂಚಿತಾಗಮಕಿನ್ನು ಮಿಂಚೀದ ಕರಿಘೂಳೀಶನ
ಪಂಚಾಕ್ಷರಿ ಮಂತ್ರ ಪಡಿ ಹಂಚಿಕಿಯಿಂದಮ್ಮಾ ||5||
ದೇಶ ದೇಶವ ತಿರುಗಿ
ದೇಶ ದೇಶವ ತಿರುಗಿ ಬ್ಯಾಸತ್ತು ಬಂದರೆ |
ಈಶನ ದರುಶನವಾಗಲಿಲ್ಲಮ್ಮಾ
ಆಶಾಪುರವ ಬಿಟ್ಟು ಹಾಸನಪುರಕ್ಕೆ ಬಂದೆ
ಅಕ್ಕಾ ನಿಜಪುರದಲ್ಲಿ ಸಿಕ್ಕ ಶಿವನಮ್ಮಾ ||ಪಲ್ಲ||
ಅಂಗದ ಊರ ಬಿಟ್ಟೆ ಲಿಂಗದ ಊರುಗಟ್ಟೆ |
ಸಂಗಪುರದಲ್ಲಿ ಸ್ನಾನ ಮಾಡಿದೆನಮ್ಮಾ
ಕಂಗಳಪುರದಲ್ಲಿ ರಂಗುಮಾಲಿನೊಳಗಿರುವ
ಲಿಂಗ ಮಹಾಲಿಂಗನ ನೋಡಿದೆನಮ್ಮಾ ||1||
ಆಧಾರಪುರವ ನೋಡಿ ಸ್ವಾಧಿಷ್ಠಪುರಕ್ಕೆ ಬಂದೆ |
ಮುಂದೆ ಮಣಿಪುರದ ದಾಟಿ ರುದ್ರಪುರವಮ್ಮಾ
ವಿಶುದ್ಧಗ್ನಿ ಚಕ್ರದ ಮೇಲು ಬುದ್ಧಿಯಿಂದ ಯಿರುವಂಥ
ಸಿದ್ಧ ಕರಿಘೂಳಿಯ ಕಂಡು ಶುದ್ಧಾದೆನಮ್ಮಾ ||2||
ಗುರುವಿನ ಸ್ಮರಣೆ ಮರಿಬ್ಯಾಡ
ಗುರುವರ ಸ್ಮರಣೆ ಮರಿಬ್ಯಾಡ ತರುಳೆ |
ಕರುಣಾದಿ ಕಾಯ್ವನು ಧೀರನ್ಹಗಲಿರುಳೆ
ದಾರೇನಂದರೇನಾಗುವದು
ಮಾರಹರನ ಶಿವಶರಣರ ಸೇವೆಯೊಳೆ ||ಪಲ್ಲ||
ಸ್ಥಿರವಿಲ್ಲ ಕಾಯ |
ಅರುವಿನಲಿ ನಡೆಯಿರಿ
ನರಜನ್ಮ ದೊರೆಯದಯ್ಯ
ಮರಣಾಗದ ವರ ಪಡೆಯೋ ||1||
ಕೆಟ್ಟ ಭವ ಸಾಗರ |
ದಾಟುವದು ದುಸ್ತರ
ಧಿಟ್ಟ ಕರಿಘೂಳಿಚರಣವೇ ಜಹಜ
ಯೇರಿ ಪಾರಾಗು ಮಗಳೆ ||2||
ನಿನ್ನಂಥ ದೇವರೆಲ್ಲಿಲ್ಲಮ್ಮಾ
ಯಲ್ಲಮ್ಮ ಯಲ್ಲಮ್ಮ |
ನಿನ್ನಂಥ ದೇವರೆಲ್ಲಿಲ್ಲಮ್ಮಾ
ಬಲ್ಲಿದ ಶರಣಗೊಲಿತೆಮ್ಮಾ
ನೀ ಖುಲ್ಲರ ಹಲ್ಲು ಮುರಿದೆಮ್ಮಾ ||ಪಲ್ಲ||
ವಿಷ್ಣು ಅವತಾರವು ನೀನಮ್ಮಾ |
ದುಷ್ಟ ಮಧುಕೈಟಭ ಸಂಹಾರೆಮ್ಮಾ
ಕಟ್ಟಿಳಿ ಮೀರಿ ನಡೆದಂತವರಿಗೆ
ಕಟ್ಟು ಮಾಡಿ ಕಷ್ಟ ಕೊಟ್ಟೆಮ್ಮಾ ||1||
ಕಪಾಟ ಮುಚ್ಚಿಕೊಂಡು ಕುಳಿತೆಮ್ಮಾ |
ಭವದಾಟ ನಿನಗೆ ಸರಿ ಬಾರದಮ್ಮಾ
ಜೀವಾತ್ಮನೆ ನಿನ್ನ ಗುರುತಮ್ಮಾ
ಶಿವನಾಟದಲ್ಲಿರುವಗೆ ತೋರಿದೆಮ್ಮಾ ||2||
ಯಿಳಿಯೊಳು ಒಳ್ಳೆ ವೀಳ್ಯದೆಲಿಯಮ್ಮಾ |
ಹೊಳಿಯದಂಡಿಲಿ ರಾಜೊಳ್ಯಮ್ಮಾ
ಒಳ್ಳೆ ಕರಿಘೂಳೀಶಮ್ಮಾ
ಬಾಲರಿಗೆ ವಲಿತೆ ನೀನ್ಹಡದಮ್ಮಾ ||3||
ಹಾದಿಯ ನೋಡಿದೆ
ಹಾದಿಯ ನೋಡಿದೆ |
ಸದಾಶಿವನ್ಹಾದಿಯ
ಹಾದಿಯ ನೋಡಿದೆ ಭೇದವನಿಲ್ಲದೆ
ಸದಾ ಸದ್ಗುರು ನಿಜ ಬೋಧದಿಂದಲಿ ||ಪಲ್ಲ||
ಆರು ಚಕ್ರದ ಮೇಲೆ ಬೇರೊಂದು |
ಮೂರು ನದಿಯ ಮೇಲೆ
ಭಾರಿವುನ್ಮನಿಯಲ್ಲಿ ಸೇರಿಕೊಂಡಿರುವಂತ
ಪರಿಪೂರ್ಣನಾದಂತ ಪರಬ್ರಹ್ಮನಿರುವೋ ||1||
ವಿಂಶಪಂಚ ತತ್ವದ ಮೇಲೆ |
ಸಂಶಯವಿಲ್ಲ ಸಂತೋಷದಿ ನಾ
ಹಂಸದ ಸೋಹಂಯಂಬ ಹಂಸವನೇರಿಸದ
ಕಂಸಮರ್ಧನ ಸಖ ವಂಶವುದ್ಧಾರನಿರುವೋ ||2||
ಝೇಂಕಾರ ನಾದದಲ್ಲಿ |
ಓಂಕಾರ ಪ್ರಣಮ ರೂಪದಲ್ಲಿ
ಅಕಾರ ಉಕಾರ ಮಕಾರ ಸಕಾರಾಗಿ
ಯೇಕವಾದೊಸ್ತುವ ನಿರಾಕಾರನಿರುವೋ ||3||
ಕಾಲಕಾಲದಲ್ಲಿ ಸದಾಕಾಲ
ಬಾಲಲೀಲೆಯಲ್ಲಿ ಬೈಲಿನೊಳಗ
ಆಲಯಪುರದಿಯಿರೋ
ನಿರ್ಬೈಲನಾದ ಕರಿಘೂಳೀಶನಿರವೋ ||4||
ಮೃಢನಡಿ ಬಿಡದಿರು
ಮೃಢನಡಿ ದೃಢದೆಡೆ ಬಿಡದಿರು ಮಾನವ |
ಅಡಿಗಡಿಗಾನುಡಿ ಸಡಗರದನುವಾ
ಬಡಿವಾರದ ಬಿಡಿನುಡಿ ಬಿಡು ಅನುವಾ
ಜಡರೊಳು ಕೂಡದೆ ಕೂಡೊ ಗುರು ಘನವಾ ||ಪಲ್ಲ||
ಕಡಿಕೆಡ ಕಿಡಿಗುಣ ಬ್ಯಾಡಿದು ಗುಣವಾ |
ಅಡಿದಿಡಿದ್ಹೊಡಿಯುವ ನೋಡೋ ಯಮ ತನುವಾ
ಈಡೆಯಡನಾಡಿ ಬಲ ಬಿಡಿದಿಡಿವ ಪಿಂಗಳ
ನಡುನಾಡಿ ಸುಷುಮ್ನನಿಡಿದು ನೋಡು ಪತಿ ಕಾಣುವಾ ||1||
ಬುಡದಡಿ ಸಡಿಲಿಡಿ ಕುಡಿಪಡಿಪದವಾ |
ಕಡಿಮೇಡ ಬಿಡದೆ ನೋಡೋ ಹಿಡಿ ಘಡಿಪಥವಾ
ಪೊಡವಿಲಿ ಹಿಡಿ ಜಾಂಡಿ ಸಡಗರಾಜೊಳ್ಳಿ ಕಡಿ
ಬೆಡಗಿಲ್ಲದ ಕರಿಘೂಳಿಗೆ ಕೊಡೋ ತನುಮನಧನವಾ ||2||
ಕಂಡ ಅಂಡ ಮಂಡಲದೊಳು
ಕಂಡೆನಂಡ ಮಂಡಲದೊಳು |
ಪುಂಡ ಮಹಾರ್ತಂಡನಾ
ಅಂಡಪಿಂಡ ಬ್ರಹ್ಮಾಂಡದೊಳು
ಗಂಡುಗಲಿ ಅಖಂಡನಾ ||ಪಲ್ಲ||
ಖಂಡಿತದಿ ಬೆಳಕಿಂಡಿಲಿರುವೊ |
ರುಂಡಮಾಲ ವುದ್ಧಂಡನಾ
ಎಲ್ಲಿ ಎಲ್ಲಿ ತಿರುಗಿ ನೋಡಲು
ಅಲ್ಲಿ ಅಲ್ಲಮ ಸಂಗಮ ||1||
ಖುಲ್ಲಗುಣಳೆಲ್ಲ ನಿಲ್ಲಿಸಿ |
ಆಲೆ ನಿಲಿಸಿದ ಜಂಗಮ
ಮೆಲ್ಲಮೆಲ್ಲನೆ ಹುಲ್ಲೆಬಲ್ಲಿಸೆ
ಸುಲಲಿತದ ಘನಲಿಂಗಮಾ ||2||
ಭೀಮಶಾಮ ನೇಮದಿರುವಾ |
ಕಾಮಹರ ಮಹಾಮಹಿಮನಾ ವ್ಯೋಮಕೇಶ
ಸೋಮವಾಸ ಕಾಮಿತಜನ ಉಮೇಶನಾ
ನೇಮಹೋಮ ಮಾಧವ ಸ್ವಾಮಿ ಕರಿಘೂಳೀಶನಾ ||3||
ಈಶ ಧ್ಯಾಸ ಮರಿಬ್ಯಾಡ
ಈಶಧ್ಯಾಸ ಶಿಶುವೆ ಮರಿಬ್ಯಾಡ |
ಬ್ಯಾಸರಿಯಲಿ ಬ್ಯಾಡ ವಸುಧಿಯೊಳಗೆ ಪೋಷಿಸುವಪಾಡ
ಕಸಿಬಿಸಿ ಪುಸಿನುಡಿ ಹುಸಿ ಮನ ಮಾಡಿ
ಲೇಶದಿಂದ ಯೋಗಾಸನ ಕೂಡಿ
ನಾಸಿಕಾಗ್ರದಿ ಮನ ಸೂಸದೆ ನಿಲಿಸಲು
ದಶವಿಧ ಕ್ಷೇತ್ರವು ಧ್ಯಾಸಿಸು ಗಾಢ ||ಪಲ್ಲ||
ಆರರಿ ಮೂರು ಗುಣಗಳನು ಬ್ಯಾಡ |
ಮೂರಾರಲ್ಲಿ ಸೇರಿ ಸಾಧನವನು ಸರಸದಿ ಮಾಡೊ
ಕಾರಣಾ ಮಹಾಕಾರಣದಲ್ಲಿ
ಮಾರಹರನಿರೋ ಅರಮನಿ ನೋಡೊ
ಭಾರಿವುನ್ಮನಿಯಲ್ಲಿ ಸೇರಿರು ಪರತರ
ಪರಮ ಸುಖ ಪರಮಾತ್ಮನಗೂಡೊ ||1||
ಸಪ್ತ ವ್ಯಸನಗಳ್ಹಾಳು ನೀ ಮಾಡೊ |
ಆಪ್ತರನು ಕೂಡೊ
ಸಪ್ತನದಿಯಲಿ ಸ್ನಾನವನು ಮಾಡೊ
ಸಪ್ತವರ್ಣದಿಂದಲಿಯಿರುವ
ಸಪ್ತಲಿಂಗದ ಪೂಜೆಯಗೈವ
ಗುಪ್ತ ಕರಿಘೂಳಿ ಗುರುವಿನ ಮಂತ್ರವ
ಶಪ್ತದಿ ತಪ್ಪದೆ ನಿತ್ಯ ಜಪ ಮಾಡೊ ||2||
ಶ್ರೀಗುರು ಪೊರೆವಂತ ಧೀರ
ಶ್ರೀಗುರು ಕರಿಬಸವರ ಪೊರೆವಂತ ಧೀರ |
ಮರೆಯಲಾರೆನು ಮುಕ್ತಿ ಕೊಡುವದು ವರಾ
ಶರಧಿ ಸಂಸಾರ ಪಾರವಾರ
ಸೇರಿ ತಿರಗಿದೆ ಭುವನ ಸಾಸಿರ
ಪೂರ್ವಜನ್ಮದ ಗುರ್ತನರುಹಿ
ಪರಮ ಬೋಧವ ಬೋಧಿಸಿದ ವರ ||ಪಲ್ಲ||
ಆಟಪಾಟಗಳೆಲ್ಲ ಬಿಡಿಸಿದ ಸಟೆ ಮಾಡಿಸಿದ |
ಪಟುತರದ ಹಟಯೋಗ ಬಿಡಿಸಿದ
ದಿಟವಾದ ಪಂಚಾಕ್ಷರಿಯ ಮಂತ್ರವನ್ನು ಪಠಿಸಿದ
ಷಟ್ಚಕ್ರಗಳನು ಮುಟ್ಟಿ ಶಿವನ ಆಟ ತೋರಿಸಿದ
ನಾಟಕ್ಹಂಸನೊಳು ಸೇರಿಸಿ ತ್ರಿಕೂಟ ಸಂಗಮದಿ ನಿಲಸಿ
ಥೇಟ ಜ್ಞಾನ ಮಂಟಪದೊಳು ಕೋಟಿ ಸ್ಫಟಿಕ ಚಾಟಿ ಹಿಡಿಸಿದ ||1||
ಯೇಕ ದೋನಿ ತೀನಿಯೆಂಬುವದಾ ಯೇಕಾಗಿಯಿರುವದ |
ನಾಲ್ಕು ಆರು ಹತ್ತುಯೆರಡಾದ
ಬೇಕಾದವರಿಗೆ ಹದಿನಾರೆರಡು ದಳದ ಮೇಲದಾ
ಆಕಾಶದಲ್ಲಿ ಕೋಕಿಲೊಂದು ಕೇಕೇ ಹಾಕುವದಾ
ಆಕಾರ ಕಾಣಿಸುವದಾದ ಝೇಂಕಾರ ಓಂಕಾರನಾದ
ಯೇಕ ದೃಷ್ಟಿಲಿ ಆಲಿಸಿದರೆ ಸಾಕು ಬೇಕೆಂಬೋ ನಾದ ||2||
ಜಂಗಮ ರೂಪದಿಂದೆ ಜಗದೊಳಗೆ ಬಂದೆ |
ಸಂಗನಬಸವನ ಕಾಣದೆ ಕಂಗೆಟ್ಟು
ಧರೆಯಲಿ ಮಂಗಳೆಂದು ತಿರುಗಿ ಹುಡುಕಿದೆ
ಸಂಗನಬಸವನಿಗೆ ಭೀಮ ಮೇಲ್ಗಿರಿಯಲ್ಲಿ ಕೂಡಿದೆ
ಲಿಂಗಮುದ್ರಿಯಲ್ಲಿಯಿರಿಸಿ ಮಂಗಳ ವಾದ್ಯದಿ ಮೆರಸಿ
ಸಂಗಮನ ಸಂಗದಿ ಜಂಗಮನಯ್ಯ ಮಾಡಿದ ಕರಿಘೂಳೀಶ್ವರ ||3||
ಗುರು ಕರುಣದಿಂದೆ ಉಳದೆ
ಊರಿಗ್ಹೋಗಿ ಗುರು ಕರುಣದಿಂದೆ ಉಳದೆ ||ಪಲ್ಲ||
ಮರವರುವಿನೊಳಾದೆ ಘೋರ ದುರಿತಗಳು |
ದೂರಾದವೇಳಮದೆ ಪುರಹರ ದಯದಿಂದೆ ||1||
ಬಲ್ಲವರೆಂದು ಬಹಳ ಹರುಷದಿಂದೆ |
ರೇಲ್ವಾಡಿಗೆ ಇಳದೆ ಎಲ್ಲವರ ಕೂಡಿಕೊಂಡೆ ಬಳ್ಳಡಗಿಯಲಿಂದೆ
ಕಲ್ಲಿನ ಮೇಲಿರೊ ಕೊಲ್ಲೂರಿಗೆ ಹೋದೆ ಬಲಿಯೊಳಗ ಆದೆ ||2||
ಹತ್ತು ಎಂಟು ಮಂದಿ ಜತ್ತಿಲಿರುವುಹರು |
ಮಿಥ್ಯ ಉತ್ತಮರವರು ಸುತ್ತಲೆ ಮುತ್ತಿ ಕುತ್ತಿಗಿ ಕೊಯ್ವರು
ಸತ್ಯ ಶರಣರ ಪತ್ತನೆ ಕಳೆಯುವರು ಸತ್ಯ ನಾಶಾದವರು ||3||
ಆರು ಮೂರು ವಾರಿಗೂರೊಳು ಸೇರಿದರು |
ಜಾರ ಚೀರರವರು ಪೈರಕಾರನ ಕೈಯೋಳು ಸೇರಿದರು
ಮರಳಿ ಮರಳಿ ನರಕಕ್ಕೆ ಬರುವರವರು ಗುರು ದ್ರೋಹಿಗಳವರು ||4||
ಕಡಿ ಕಾಲಕ್ಕೆ ಗುರುದೇವ ತಾ ಬಂದ ಬಿಡಿಸಿದನು ಅಲ್ಲಿಂದೆ |
ಆಡುತ ಪಾಡುತ ನಾಲ್ವಾರಕ ಬಂದೆ ಗಡಿ ಬಳ್ಳಡಗಿ
ವಡೆಯ ಮೃಢತಂದೆ ಬಿಡದಿದ್ದ ಬೆನ್ನಿಂದೆ ||5||
ಪರಿ ಪರಿ ಬಂಧನ ದೂರಾಯ್ತೇಳಂದೆ |
ಶರಣೆನುತ ಬಂದೆ ಧರಣಿಯ ಜನರ ಸಂಗವ ಬೇಡಂದೆ
ಸ್ಥಿರ ಬೈಲಾದ ಕರಿಘೂಳೀಶ ದಯದಿಂದೆ ಧರಿಯೊಳು ಪಾರಾದೆ ||6||
ಸಾಕು ಸಾಕು ಈ ಜನ್ಮ
ಸಾಕು ಸಾಕು ಈ ಎನ್ನ ಜನ್ಮ |
ಬೇಕಾಗಿಲ್ಲಮ್ಮ ಓಯಮ್ಮ
ಕಾಕು ಜನರ ವಾಕ್ಯವು ಕೇಳಿ
ವಾಕರಿಸಿತು ಮನವು ಓ ದೇವ ||ಪಲ್ಲ||
ಹೊಟ್ಟಿಲಿ ಹುಟ್ಟಿದ ಶ್ರೇಷ್ಠ ಕುಮಾರಗೆ |
ಬಿಟ್ಟೆ ಹೊರಿಸುವರಯ್ಯೋ ಹೇ ದೇವ
ಶ್ರೇಷ್ಠರಿವರೆಂದು ಭೆಟ್ಟಿಗೆ ಹೋದರೆ
ಕುಟ್ಟಿಹಾಕುವರಯ್ಯೋ ಹೇ ದೇವ ||1||
ಶಂಭು ಈತನೆಂದು ನಂಬಿಗಿಯಿಂದಲಿ |
ಬೆಂಬಲಿಸಿದೆನಮ್ಮ ಓ ಯಮ್ಮ
ಬೆಂಬಿಡದಲೆ ನಿನಗಿಂಬುಯಿರುವೆವೆಂದು
ನಂಬಿಗೇಳಿದರಮ್ಮ ಓ ಯಮ್ಮ ||2||
ಸ್ಮರಣಿಯೊಳಿರುವ ತರುಳನ ಮರಿಯಾದಿ |
ಸೂರೆಮಾಡಿದರಮ್ಮ ಧೀರ ಕರಿಘೂಳಿ
ಕರುಣದಿಂದಲಿ ಪಾರಾದೆನಮ್ಮ ||3||
ಶ್ರೀಗುರುಲಿಂಗ ಜಂಗಮ
ಶ್ರೀಗುರುಲಿಂಗ ಜಂಗಮವ |
ಇಹಪರದಿ ಸ್ಥಿರದಿ ನಂಬಿರುವ
ಪರಿಪರಿಯಲ್ಲಿ ಪರಕಿಸುವ ಮಹಾದೇವ
ಶಿರ ಬಾಗೆ ವರ ನಿಜವರಿದ ಸಂಜೀವ ||ಪಲ್ಲ||
ಧರಿಯೊಳುಯಲ್ಲವು ತರವಾ |
ಗುರುತರಿತು ಮೊರೆಯ ಸೇರಿರುವ
ಹರಶರಣರ ಕರುಣದಿ ಪೊರೆಯುವ
ಮರೆಯದಿರನುದಿನ ಸುರಿ ಅಮೃತವ ||2||
ಕೋರಿದ ವರ ಕರುಣಿಸುವ |
ಕರ ಪಿಡಿದು ಮುಕ್ತಿಯನು ಕೊಡುವ
ಕರಿಘೂಳಿ ಗುರುವರ ದಯದಲಿ ಮೆರಿವಾ
ಸೇರಿ ಸುಖಿಸು ಸಂಗನಬಸವ ||3||
ಅನುದಿನದಲಿ ಘನ ಗುರುವಿನ ನೆನಿ
ಅನುದಿನದಲಿ ಘನ ಗುರುವಿನ ನೆನಿ |
ಅನುಮಾನವೇಕೊ ಸಾಕೊ ||
ಸನುಮತದಿಂದಲಿ ಮನದೊಳು ತಿಳಿಯೊ |
ಯೇನೇನು ಸುಖವಿಲ್ಲ ಜನ್ಮಕಾ
ತಣ್ಣಗೆನಿರಿಸುವ ಹುಣ್ಣಿವಿ ಚಂದ್ರನ ಕಣ್ಣಿನೊಳಗ
ತಾ ಕಾಣುವದಕೆ ಅನುಮಾನವ್ಯಾಕೊ ಸಾಕೊ ||1||
ಕಸಿಬಿಸಿ ಪುಸಿ ನುಡಿ ಮೋಸಗೊಳಿಸುವದು |
ಲೇಶವಿಲ್ಲ ತುಸು ಕಾಯಕ ಆಶೆ ಅಗಿದು
ಪದ್ಮಾಸನ ಬಿಗಿದು ಆಶೆರಹಿತ ಶಶಿಯೀಶನ
ಕಾಣೋದಕನುಮಾನವ್ಯಾಕೊ ಸಾಕೊ ||2||
ದುಷ್ಟ ಗುಣಗಳಿಂದ ಕೆಟ್ಟು ಹೋಗುವಿ |
ಕಟ್ಟಿ ಕಟ್ಟುವ ಯಮನಾಳುಗಳು ಶ್ರೇಷ್ಠ ಶರಣರ ಸೇವೆ
ನಿಷ್ಠಿಯಿಂದಲಿ ಮಾಡಿ ಇಷ್ಟವಾದವರ ಪಡಿವದಕೆ
ಅನುಮಾನವ್ಯಾಕೊ ಸಾಕೊ ||3||
ಹಮ್ಮಿನಿಂದ ಅಜಹರಿ ಹೇಮರು ಕೆಟ್ಟರೋ |
ಸುಮ್ಮನೆ ಕೂಡುವದ್ಯಾತಕೊ ಒಮ್ಮನದಿಂದ
ಓಂ ನಮಃ ಶಿವಾಯಗೂಡಿ ಸೋಹಂನಿಂದ
ಬ್ರಹ್ಮನ ಕಾಣೋದಕನುಮಾನವ್ಯಾಕೊ ಸಾಕೊ ||4||
ಆತ್ಮಶೋಧನವಿಲ್ಲದೆ ಭೇದವಾಚರಿಸುತ |
ಹಾದರಗೈಯ್ಯುವದ್ಯಾತಕೊ ಮೋದದಿಂದ
ಪರದ್ಹಾದಿ ತೋರಿಸುವ ಸಾಧು ಕರಿಘೂಳಿ
ಪಾದನಂಬುವದಕೆ ಅನುಮಾನವ್ಯಾಕೊ ಸಾಕೊ ||5||
ಗುರುವಿನ ಸ್ಮರಣೆಯಲ್ಲಿ ಇರು ಸದಾ
ಗುರುವಿನ ಸ್ಮರಣೆಯಲ್ಲಿಯಿರು ಸದಾ ನೇಮಾ |
ಆರು ಮೂರನು ಸೇರಿ ಪರದಲ್ಲಿರುಸು ಕಾಮಾ ||ಪಲ್ಲ||
ಗುರುವೆ ಬ್ರಹ್ಮಾಕರ |
ಗುರುವಿಷ್ಣು ಉಕಾರ
ಗುರುರುದ್ರ ಮಕಾರ
ಗುರು ಓಂಕಾರ ಪ್ರಣಮಾ ||1||
ತಪ್ಪದಲೆ ಇಪ್ಪತ್ತೊಂದು |
ಸಾವಿರದಾರುನೂರದ
ಜಪಿಸೋಹಂ ಸೇರಿಸದ
ಭಾಪುರೆ ಪರಮಾ ||2||
ಆರು ಚಕ್ರದ ನೆಲಿಯ |
ಅರಿತು ಸೇರುನ್ಮನಿ ನಿಲಯ
ಭೋರ್ಗರಿಪ ಭೇರಿ
ಆಲಯದಿರುವ ಸಾರ್ವಭೌಮಾ ||3||
ಬೈಲಿನಲ್ಲಾಡೊ ಸದಾ |
ಬೈಲಿಂದೆ ಪಡಿಯೊ ಪದ
ನಿರ್ಬೈಲ ಸುಳಿ ತಿಳಿ
ಘೂಳೀಶನ ಮಹಿಮಾ ||4||
ಆನಂದಮಯ ಸುಖ
ಆನಂದಮಯ ಸುಖ ಏನೆಂದ್ಹೇಳಲಿ |
ತಾನು ದಯವಾದಳು ಭಾನುವಾರದೊಳಗೆ ||ಪಲ್ಲ||
ಏನು ಅರಿಯದೆ ಧ್ಯಾನಗೈಯುತ |
ನೀನೆ ನೀನೆಂತೆಂಬೊ ಸಮಯದಿ
ಜ್ಞಾನ ಮೂರುತಿ ಚಿನುಮಯಳು
ತಾನುನುಮಾನಿಲ್ಲದೆ ಮೌನದೊಳಗೆ ||1||
ಅಂದ ಚಂದದ ಸಭಾ ಮಂದಿ ಸಂದಣಿಯಲ್ಲಿ |
ಸಂದೇಹವಿಲ್ಲದೆ ಮಹಾಧರೆಯೊಳಗೆ
ಮಂದಮಾರುತಳಾದ ಶ್ರೀದೇವಿ ಅಂದಳವ ತಾನೇರಿ ಭರದಿ
ಕಂದನೆಡೆಗೆ ಬಂದಳೋಡಿ ನಿಂದಳಿಂದು ವಾರದೊಳಗೆ ||2||
ಗಂಗೆಯಮುನೆ ಸರಸ್ವತಿ ಸಂಗಮದಲ್ಲಿ |
ಮಂಗಳಾಂಗಿಯು ಅಂಗಸಹಿತವಾಗಿ
ಜಂಗು ಝಾಗಟಿ ಹಿಂಗದಲೆ ಮೃದಂಗ ಶಂಖು ಸಮ್ಮೇಳದೊಳಗೆ
ಸಂಗಮಹಾಲಿಂಗ ಜಂಗಮನಾಂಗಿ ಮಂಗಳವಾರದೊಳಗೆ ||3||
ಕೆಂಪು ಕರಿದು ಬಿಳಿದ್ಹಳದಿ ನೀಲದೊಳಗೆ |
ಇಂಪು ಬಹು ಸೊಂಪಾದ ತಂಪಿನೊಳಗೆ
ಸಂಪನ್ನೆಯುತಾ ಸೌಮ್ಯವಾರದಿ ಪೊಂಪ ಕ್ಷೇತ್ರದಿ ಬಂದುಯಿಳಿಯಲು
ಕಂಪಿಸಿತು ದೆಶೆದೆಶೆಗೆ ಶಶಿಕಳೆ ಝಂಪಿಸಿತು ಗುರುವಾರದೊಳಗೆ ||4||
ಮಾರ್ಗ ಹಿಡಿದು ಬರುವಾಗ್ಯೆ ಭೋರ್ಗರದಿಂದ |
ಸ್ವರ್ಗಕಿಳಿದಳು ಭಾರ್ಘ ವಾರದೊಳಗೆ
ಅಘ್ರ್ಯಪಾದ್ಯ ಆಚಮಾನದಿ ಮಹಾರ್ಗಣಗಳ ಸೇವೆಗೊಳ್ಳುತ
ಹೆಗ್ಗ ಹೆಗ್ಗಳವಾದ ವರಗಳ ಕೊಡುತ ಮಂದವಾರದೊಳಗೆ ||5||
ಕೇಚರಿ ಭೂಚರಿ ಸಹಚರಿ ಷಣ್ಮುಖಿ |
ಶಾಂಭವಿಳಿದಳು ನಿಚ್ಚವಾರದೊಳಗೆ
ಸ್ವಚ್ಛದಿಂದಲಿ ಬಂದು ಮನಸಿನ ಇಚ್ಛೆ ಪೂರ್ತಿಸುವಂಥ ನಾಮವ
ಉಚ್ಛಾರಗೈಯ್ಯೆಂದು ನಿಶ್ಚಯವಾಗುಚ್ಚರಿಸಿದ ಕರಿಘೂಳಿಗೆ ||6||
ಸಾಧನದಿ ಈಶನಾದ
ನಾದದಿ ನಾದ ವಿನೋದ |
ಸದಾ ಸಾಧನದಿ ಈಶನಾದ
ಆದಿ ಅನಾದಿ ಮೊದಲ್ಹಾದಿದೋರಿಪ ನಾದ
ಅದೀದು ಚೌದಳ ದೇವದಯದಾದಿ ನಾದ ||ಪಲ್ಲ||
ಆತ ಈತನೆಂಬುವದ್ಯಾವದೊ |
ನಿತ್ಯ ತತ್ವದಿ ಹತ್ತದು ಶೋಭಾ
ಆತನಿಂದ ಈತನಾದ ಈತನಿಂದ ಆತನಾದ
ಆತಯೀತ ಈತ ಆತ ಪತೀತ ಏಕನಾದ ||1||
ಶ್ರವಣ ಮನನ ಧ್ಯಾನದಾದ |
ಪೂರ್ವ ಝಾವದಿ ನಿಜ ಗುಡಿಯುವದ
ಶಿವನಿಂದ ಜೀವನಾದ ಜೀವನಿಂದ ಭಾವನಾದ
ಜೀವ ಶಿವನೊಂದಾದರೆ ಭವಬಾಧೆ ಯಾವಲ್ಯಾದ ||2||
ತನ್ನ ತಾನೆ ತಿಳಿಯೋದಾದ ಇನ್ನು |
ನಾನು ನೀನೆಂಬುವದ್ಯಾವದೊ
ನಾನು ನಾನು ನಾಯೇನಾದ ನೀನು ನೀನು ನೀನೇನಾದ
ನಾನು ನೀನೊಂದಾದರೆ ಅನುಮಾನಿನ್ನೇನಾದ ||3||
ಅಕಾರದಿಂದ ಬ್ರಹ್ಮನಾದ ಸಾಕೊ |
ಉಕಾರದಿಂದ ವಿಷ್ಣುವಾದ ಮಕಾರ ರುದ್ರನಾದ
ಸಕಾರ ನಿರಾಕಾರನಾದ ಅಕಾರುಕಾರ ಮಕಾರ
ಝೇಂಕಾರೋಂಕಾರನಾದ ||4||
ಅದು ಅದು ಯೆಂಬುವದ್ಯಾವದೊ ಭೇದ |
ಇದುಯಿದುಯೆಂಬುದ್ಯಾವದೊ
ಅದೆಯಿದು ಇದೆ ಅದು ಇದೆ ಅದು ಅದೆಯಿದು
ಅದುಯಿದು ಒಂದಾದರೆ ಸಾಧು ಕರಿಘೂಳಿಯಾದ ||5||
ಸತ್ಯ ತತ್ವ ತಿಳಿದರೆ ಮಹಾತ್ಮ
ತತ್ವದಿ ತತ್ವದಿ ತತ್ವ |
ಸತ್ಯ ತತ್ವ ತಿಳಿದರೆ ಮಹಾತ್ಮ
ತತ್ವಾದಿ ತತ್ವ ತಾ ತತ್ವಾತ್ತು ಅರ್ಥ ತತ್ವ
ಪೃಥ್ವಿ ಆಪ ತೇಜ ವಾಯು ಆಕಾಶ ತತ್ವ ||ಪಲ್ಲ||
ಮುನ್ನ ಆಕಾಶದ ತತ್ವಯನ್ನಂತರಿಂದ್ರಿಯ |
ಮನತ್ಹಳದಿಚ್ಛಾಯ
ಉನ್ಮನಿ ಮನ ಬುದ್ಧಿ ಚಿತ್ತ ಅಹಂಕಾರ ತತ್ವ ||1||
ಕಾಣದು ಜಾಣವಾಯು ತತ್ವ |
ಕಾಣೋ ನಾರಾಯಣನಾಗಿ ಫಕ್ತ
ಪ್ರಾಣೇಂದ್ರಿಯ ಉಸಿರು ಬಣ್ಣ ಕಾಣೊ ಹಸಿರು
ಸಮಾನ ಉದಾನ ತಾ ಕಾಡುವದಕೆ ಪ್ರಾಣ ಅಪಾನ ತತ್ವ ||2||
ವನ್ಹಿ ಪಂಚಕವಾದ ತತ್ವ |
ನೀನು ಅನುವಿನಿಂದಲಿ ಗುಣಿಸುತ
ಜ್ಞಾನೇಂದ್ರಿಯಂಗಳು ಬಣ್ಣ ಹೊಂಬಣ್ಣದೊಳು
ಕಣ್ಣು ಕಿವಿ ಚರ್ಮ ಜಿಂಹ್ವಮಾಣದ ಘ್ರಾಣತತ್ವ ||3||
ಉದಕದಿಂದಾದಂತ ತತ್ವ |
ಭೇದ ಮೊದಲರಿದದು ಸಾಧಿಸುತ
ಯಿದೈದ್ವಿಷಯಗಳು ಅದು ಬಣ್ಣದಾ ಧವಳ
ಶಬ್ದ ಸ್ಪರ್ಶ ರೂಪ ರಸ ಗಂಧಾದ ತತ್ವ ||4||
ಧರ್ಮ ಧರಿಯದಾದ ತತ್ವ |
ಮರ್ಮ ಅರಿದು ಜನ್ಮ ಆಗೋ ಸಾರ್ಥ
ಕರ್ಮೇಂದ್ರಿಯ ಚಿತ್ರಬಣ್ಣದ ವಾಕ್ಪಾಣಿಪಾದ ಗುದ ಗುರುವು
ಕರಿಘೂಳಿ ಗುಂಹ್ಯಗುಪ್ತದಿರುವೋ ತತ್ವ ||5||
ಶ್ರೀ ಸದ್ಗುರುನಾಥ
ಶ್ರೀ ಸದ್ಗುರುನಾಥ ಕರುಣದಿ ನೀ ನಾಥ |
ವಿಷಯಗಳಿರುವವು ಬಾಳ ವಿಪರೀತ
ವಶವಲ್ಲವು ಮೋಸ ಮಾಡ್ವವು ತುರತ
ಕಸಿಬಿಸಿ ಹುಸಿನುಡಿ ದೃಢವಿಲ್ಲ ನಿರುತ
ಪಾಶ ಹರಿಸಿ ಪೋಷಿಸೆನ್ನಯ ದಾತ ||ಪಲ್ಲ||
ಈ ಸಂಸಾರದೊಳ್ಮುಳ ಮುಳಗಿಯೇಳುತ |
ಸಂಶಯ ನುಡಿಗಳ ಗಡಣ ಕೇಳುತ
ಹಿಂಸಿಸಿ ಪರರನ್ನು ದೋಷಕೊಳ್ಳುತ
ದೋಷ ಹರಿಸು ಬಸವೇಶಾ ಆಶಾ ರಹಿತ ಕರುಣದಿ ||1||
ಉತ್ತಮ ಜನ್ಮವಿದು ಆಗ್ವದು ವ್ಯರ್ಥ |
ಮತ್ತೆ ಬೋಧಿಸೊ ನೀ ಪರಮಾರ್ಥ
ಸತ್ಯವಾದ ಪದ ಹತ್ತಿಸೊ ತುರ್ತ
ಛೆತ್ತೀಸ ತತ್ವದೊಳಿರುವ ಸಮರ್ಥ ಕರುಣದಿ ||2||
ಆರು ಮೂರರೊಳಗಿರುವಂಥ ಅರ್ಥ |
ತೋರಿಸೊ ತಾರಕ ಬ್ರಹ್ಮನ ಗುರ್ತ
ಮೀರಿದವುನ್ಮನಿಗಾದಂಥ ಕರ್ತ
ತರುಳನ ಕರಪಿಡಿ ಇಲ್ಲ ನಿನ್ನ ಹೊರ್ತ ಕರಣದಿ ||3||
ಕಾಲನಿಲ್ಲದೆ ಮೇಲಕೇರಿಸುವಾತ |
ಬೈಲಿನೊಳಗ ಓಡ್ಯಾಡಿಸೆನ್ನಯ ಪಿತ
ಕಾಲ ಕಾಲ ನಿರ್ಬೈಲಲ್ಲಿ ಭರಿತ
ಘೂಳೀಶಯಿಳೆಯೊಳು ಮಾಡ್ಯಾನ ಮುಕ್ತ ||4||
ಕರುಣದಿಂದೆ ಕಾಯೊ ಎನ್ನ
ಶ್ರೀಗುರುವೇ ಕರುಣದಿಂದೆ ಕಾಯೋ ಯೆನ್ನನು |
ಮರಿಲಾರೆ ನಿಮ್ಮನು ಘೋರ ಸಂಶರಧಿಯೊಳು
ಮುಳುಗಿರುವೆನಾ ಕರ ಪಿಡಿದು ಪೊರೆಯೆನ್ನ
ಮೂರಾರೇಳೆಂಟ್ಹತ್ತು ಅರಹಾರಿ ಸಲಹೆನ್ನ
ಮಾರವೈರಿಯಿರುವಂಥ ದಾರಿ ತೋರಿಸೊ ಮುನ್ನ ||ಪಲ್ಲ||
ಮಾಯದಿಂದ ಜನಿಸಿ ಬೆಳೆದ ಕಾಯವಿದನು |
ಆಯಾಸದಿಂದೇನು ಮಾಯ ಮೋಹದ
ಬಲಿಗೆ ಶಿಲ್ಕಿ ಭಯದಿ ನೊಂದೆನು
ಬಾಯ್ಬಿಡುತ ಬೆಂದನು ಭಯ ಬಿಡಿಸಯ್ಯ
ಮಾಯ ದೂರ ದಾಟಿಸಯ್ಯ
ಕೈಯ ಹಿಡಿದ್ಹಡದಯ್ಯನಡಿಯ ಶೇರಿಸಯ್ಯ ||1||
ಕೆಂಪು ಕರಿದು ಬಿಳಿದಳಿ ದಾಸೋಹಂ ಎಂಬುದನು |
ಇಂಪದರ ತಿಳಿಸಿನ್ನು ತಂಪಿನೊಳು
ಹಂಪಿ ಕ್ಷೇತ್ರದಿರುವ ಲಿಂಗವನು
ಪೊಂಪಮ್ಮ ಪತಿಯನು ಸಂಪು ನಾದದಿ
ಮನ ಇಂಪುಗೊಳಿಸೊ ಎನ್ನ
ಸಂಪಾನ್ನಾದಂತ ಕರಿ ಘೂಳಿ ಪೋಷಿಸೆನ್ನ ||2||
ಮರಿಯಲಾರೆನು ಶ್ರೀಗುರುವೆ
ಮರಿಯಲಾರೆನು ಶ್ರೀಗುರುವೆ ನಿನ್ನ ತರುಳನೆಂದೆನು |
ಮರೆಯಲಾರೆ ನಿನ್ನ ಚರಣ
ಕರುಣದಿಂದೆ ನೋಡೊ ಶರಣ
ಪೊರೆ ಪರಿಪೂರ್ಣ ನಿನ್ನ ಮೊರೆಯ ಸೇರಿರುವೆ ಹರನೆ ಮರೆ ||ಪಲ್ಲ||
ಘೋರ ಸಂಸಾರ ಶರಧಿಯೊಳುರುಳಿ ನಾರಿಪುತ್ರರ |
ಸೇರಿರುವ ಭಾರಿ ಕಳವು ಹಾದರ ಇಲ್ಲಾದೆನದರ
ಮಾರಹರನೆ ಭರದಿ ಬಂದು ತರುಳನ ಕರಪಿಡಿಯೊ ಇಂದು
ಪಾರಮಾರ್ಥದ್ಹಾದಿದೋರಿ ತ್ವರದಿ ಪಾರು ಮಾಡೊ ಹರನೆ ||1||
ಕರ್ತಧರಗಿನ್ನು ನಿನ್ಹೊರ್ತ ಮತ್ರ್ಯದೊಳಗ ದಾರಿನ್ನು |
ಗುರ್ತರಿಯೆ ತೋರೊ ಸಾರ್ಥಕ್ಹಾದಿಯನು ವ್ಯರ್ಥಾಗುವೆನು
ಅರ್ಥಪ್ರಾಣ ಗುರ್ತುಗೈದು ತುರ್ತು ಬಂದು ವಲಿಯೋ ದೇವ
ಭರ್ತಿ ತೊಂಭತ್ತಾರು ತತ್ವ ಪೂರ್ತಿಗೊಳಿಸೋ ಮೃತ್ಯುಂಜಯನೆ ||2||
ಕಾಮ ದಹನನೆ ಪ್ರೇಮದಿ ಕಾಯೋ ಸೋಮಧರನೆ ಮಹಾಮಹಿಮನೆ |
ಉಮಾದೇವಿ ಪ್ರಿಯಕರನೆ ಕಾಮಿಸಿದೆ ನಾ ನೇಮವಳಿದು
ಸ್ಥೋಮ ನಿರ್ಗುಣಧಾಮ ನಿಮ್ಮ ಮೊರೆಯಪೊಕ್ಕೆ
ಹೇ ಮಹೇಶ ಕರಿಘೂಳೀಶ ಸ್ವಾಮಿ ನಿಮ್ಮ ಕಂದ ನಿನ್ನ ಮರೆ ||3||
ಸಾವಿಗೆ ಯಾತಕೆ ಅಂಜೋಣ
ಎಂದಾದರೊಂದಿನ ಸಾಯೋಣ |
ಸಾವಿಗೆ ಯಾತಕೆ ಅಂಜೋಣ
ಇಂದ್ರಜಾಲದಂತೆ ಈ ಸಂಸಾರ
ನೌರಂಧ್ರದೊಳಗ ನೋಡು ನಿನ್ನ ಜ್ಞಾನ ||ಪಲ್ಲ||
ನೀನಿರೋತನ ಬಂಧು ಬಳಗಣ್ಣ |
ಪ್ರಾಣ ಹಾರಿಹೋಗುವಾಗ್ಯಾರಿಲ್ಲಣ್ಣ
ನಿನ್ನ ಗುರುತು ನೀನರಿಯಣ್ಣ
ಮನದೊಳು ಸದಾ ಮಾಡು ಶಿವಧ್ಯಾನ ||1||
ಪ್ರಪಂಚ ಮಾಡು ಬಿಡಬೇಡಣ್ಣ |
ಪಾರಮಾರ್ಥ ದಾರಿ ಹಿಡಿಯಣ್ಣ
ದಾರಿದೋರುವ ಗುರುವಿನ ಸೇರಿ
ಪಾರಾಗಿ ಭವದೊಳಗಿರಣ್ಣ ||2||
ಚಿಂತಿ ಯಾತಕೆ ಮಾಡುವದಣ್ಣ |
ಎಂಥ ಉತ್ತಮ ಜನ್ಮಾದಣ್ಣ
ಕಂತುಹರನ ಪಾದಂತು ಭಜಿಸಿದರೆ
ಅಂತುಪಾರಿಲ್ಲದ ಮುಕ್ತ್ಯಣ್ಣ ||3||
ಕಂಡಕಂಡಲ್ಲಿ ಕೂಡಬೇಡಣ್ಣ |
ಹೆಂಡರ ಮಕ್ಕಳ ಜರಿಬೇಡಣ್ಣ
ಕಂಡು ಕಾಣಲ್ದಂಗ ಉಂಡುವುಣಲ್ದಂಗ
ಪಿಂಡ ಬ್ರಹ್ಮಾಂಡೊಳಿರಣ್ಣ ||4||
ಭಕ್ತಿಲಿ ನಡೆಯಲಿ ಬೇಕಣ್ಣ |
ವಿರಕ್ತಿಯ ಬಲಿಸಲು ಬೇಕಣ್ಣ
ಮುಕ್ತಿದಾಯಕ ಕರಿಘೂಳೀಶಗೆ
ತನುಮನಧನ ಕೊಟ್ಟು ಕೂಡಣ್ಣ ||5||
ನಿನ್ನ ನೀ ಕಾಣೋತನಕ ಇನ್ನೆಲ್ಲಿ ಮುಕ್ತಿ
ನಿನ್ನ ನೀ ಕಾಣೋತನಕ ಇನ್ನೆಲ್ಲಿಯಿಲ್ಲ ಮುಕ್ತಿ |
ಕಣ್ಣಿನೊಳಗ ಹುಣ್ಣಿವಿ ಚಂದ್ರನ ಕಾಣೋ ತನಕ ||ಪಲ್ಲ||
ಶ್ರವಣ ಮನನ ನಿಧಿ ಧ್ಯಾನಗೈಯುವ ತನಕ |
ಭವ ನೀಗಿಸುವ ಶಿವಯೋಗಿಯಾಗುವ ತನಕ ||1||
ಉಗ್ರದಿಂದಲ್ಲಿ ವ್ಯಘ್ರಾಸನ ಹಾಕೋ ತನಕ |
ಜಾಗ್ರ ಸ್ವಪ್ನ ಸುಷುಪ್ತಿಯಲಿ ಜಾಗ್ರಾಗೋ ತನಕ ||2||
ಸಂಸಾರರಿಯುವ ತನಕ ಸಂಶಯ ಮುರಿಯುವ ತನಕ |
ಹಂಸೋಹಂ ಸೇರಿ ಮಾಯೆ ಧ್ವಂಸಗೂಯು ತನಕ ||3||
ಉತ್ರಾದಿಗ್ಹೋಗಿ ಗೋತ್ರ ಸೂತ್ರೊಂದು ಆಗೋ ತನಕ |
ನೇತ್ರ ಮಧ್ಯದಿ ಶಿವಜಾತ್ರಿ ಕಾಣೋ ತನಕ ||4||
ಅರ್ಥಿಯಿಂದಲಿ ಗುರು ತೀರ್ಥಕೊಳ್ಳುವ ತನಕ |
ಶರ್ತಿನಿಂದಲಿ ಭಕ್ತಿ ಪ್ರಸಾದ ಪೂರ್ತಿಸೋತನಕ ||5||
ಕಾಲನಿಲ್ಲದೆ ಬೈಲಿನೊಳಗ ಓಡ್ಯಾಡೊ ತನಕ |
ನಿರ್ಬೈಲನಾದ ಕರಿಘೂಳೀಶಗೆ ಕೂಡೊ ತನಕ ||6||
ನೋಡೋ ನೋಡೋ ಕಡಿವಡಲೂರು
ನೋಡೋ ನೋಡೋ ಕಡಿವಡಲೂರು ನೋಡೋ |
ದಡ್ಡ ನಿನ್ನೊಳು ದೊಡ್ಡ ಮಹನೀಯನಿರುವನು
ದುಡ್ಡನಿಲ್ಲದೆ ನಿನ್ನ ಧಡ್ಡತನವ ಬಿಟ್ಟು ನೋಡೋ ||ಪಲ್ಲ||
ಆರುವಾರೋ ಪುರಕರಸರು |
ಮೂವರಾರೊ ಮೂರಾರು ಬಾಗಿಲೆರಡು ಕಿಡಕಿಗಳೂ
ಸೂರ್ಯಚಂದ್ರರೆಂಬ ಬೀದಿಗಳೆರಡು ನೋಡೋ ||1||
ಆದಿಲಿದ್ದ ಜ್ಯೋತಿಯ ಮಧ್ಯ ಓಂಕಾರಿದ್ದ |
ಅರ್ತಿನಿಂದಲಿ ಬುದ್ಧಿವಂತರೈವರಿದ್ದು
ಸಿದ್ಧರಾಗಿ ತಾವಿದ್ದಾರೊ ಜೋಡೋ ನೋಡೊ ||2||
ಮೇಲುಮಾಲೋ ಏಳೇಳು ಲೋಕ ತುಂಬ್ಯಾದೇಳೊ |
ಏಳೆಡೆ ಸರ್ಪನಲ್ಲಿ ತಲೆಯೊಳು ರತ್ನವುಂಟು
ಬೆಲೆಯನಿಲ್ಲದ ದೇವ ಬಲ್ಲೆಯಿರುವನು ನೋಡೊ ನೋಡೊ ||3||
ನೋಡಿ ಬೇಡೊ ನಡುನಾಡಿ ಕೂಡಿ ಜಾಡಿ ಹಿಡಿ |
ತಡಬ್ಯಾಡ ಮೃತಬಿಂದ ಕುಡಿ ಪಡಿ ಮುಕ್ತಿಪದ
ಮೃಢಕರಿಘೂಳಿಯ ಅಡಿಗಳಿಡಿದು ಸದಾ ನೋಡೊ ||4||
ಓಹೋ ಮಾಡಲಿನ್ನೇನ
ಆರುವೆಂಬರಿವೆ ಧರೆಯನು |
ಅರಿದಿತು ಓಹೋ ಮಾಡಲಿನ್ನೇನ
ಗರುಡಗೆ ಸರ್ಪಗೆ ಮೊದಲೆ ವೈರಿತ್ತ
ಎರಡಕ್ಕೆ ಯುದ್ಧವು ಭರ್ತಿ ನಡೆದತ್ತ
ಶತ್ರು ಹೋಗಿ ಮಿತ್ರರಾದರಂತೆ ಓಹೋ ||ಪಲ್ಲ||
ಮದ ಬಂದಾನೆಗೆ ದ್ವಾಮಿ ಒಂದು ನೋಡೀತ |
ಕ್ರೋಧವಿಲ್ಲದ ದ್ವಾಮಿ ಓಡೋಡಿ ಬಂತ
ನಾದಾದಿ ದ್ವಾಮಿ ಮದದಾನಿಯ ಜೈಸಿತ್ತು ಓಹೋ ||1||
ಕುರಿಮರಿಯೊಂದು ಹೊರಟಿತ್ತು ಹಾರ ಹುಡಕೂತ |
ಆರ್ಹುಲಿಗಳು ಅರಣ್ಯದಿ ಕುರಿಮರಿ ನೋಡೋತ
ಹಾರಿ ಆರ್ಹುಲಿಗಳೇರಿ ಮೆರೆದಿತ್ತು ಓಹೋ ||2||
ದೊಡ್ಡ ಗುಡ್ಡದೊಳು ಗವಿಯೊಂದಿತ್ತು |
ದೊಡ್ಡ ಕರಿಘೂಳಿ ಗವಿಯೊಳ್ತೋರಿದ ಹುತ್ತ
ಆ ಹುತ್ತು ಮುತ್ತುಗೊಂಡು ಮುಕ್ತನಾದ ಭಕ್ತ ಓಹೋ ||3||
ಸಾಕು ಈ ಬಡತನ ಸಂಸಾರ
ಸಾಕು ಸಾಕು ಈ ಬಡತನ ಸಂಸಾರ |
ಲೋಕದಿ ಸುಖವಿಲ್ಲವೋ
ಕೈಕಾಲಿಲ್ಲದ ಮೂಕಗ ಕೊಟ್ಟಿದೆ
ಸುಖವೇನು ಕಡಿಮಿಲ್ಲವೊ ||ಪಲ್ಲ||
ಕಳಗೇಡಿ ಗಂಡನ ಕಣ್ಣು ಹೋಗಲಿ |
ಸಣ್ಣಕ್ಕಿ ನಾ ನೀನೆವೊ
ವಾಲಿ ಕೀಲುಗಂಟಿ ಜಿಮ್ಕಿ ಬುಗಡಿ
ಕಿವಿಯೊಳಗಿಟ್ಟಾನವೊ ||1||
ಬಾಳಗೇಡಿಯಲ್ಲಿ ಮೂಲಾಗಿ ಕೂತಿತ್ತು |
ಬಾಯಾಗ ಮಣ್ಣೊಯಿಲೆವೊ
ಹೋಳಿಗಿ ತುಪ್ಪ ಉಳ್ಳಕ ನೀಡಿ
ಮ್ಯಾಲೆ ವೀಳ್ಯವ ಕೊಡತಾನವೊ ||2||
ಸತ್ಯವಿಲ್ಲದ ಗಂಡ ಸತ್ತು ಹೋದನಾ |
ಬತ್ತಲೆಯಾದೆನವೊ
ಮುತ್ತಿನ ಮೂಗುತಿ ಮೂಗಿನೊಳಗಿಟ್ಟುಗೊಂಡು
ಮುತ್ತೈದಾದೆನವೊ ||3||
ಎಲ್ಲಿ ನೋಡಲಲ್ಲಿ ಶಿವಮ್ಮನೆಂದು |
ಬಲ್ಲವರು ಬಗಿತಾರವೊ
ಅಲ್ಲಮ ಮಹಾಪ್ರಭು ಕರಿಘೂಳೀಶನ
ಬಲ್ಲಂಗೆ ಕೂಡಿದೆನವೊ ||4||
ಶ್ರೀಗುರುವಿನ ನೋಡೋ
ಶ್ರೀಗುರುವಿನ ನೋಡೋ ಮನವೆ ಪರಮ ಹರುಷದಿ |
ಇರುಳು ಹಗಲು ಗುರಿಯ ನೀಡೊ
ಅರುವಿನ ಆಲಯದಿ ||ಪಲ್ಲ||
ದುರ್ಗುಣದಿಂದ ಹರದೊರೆವದು ದುರ್ಲಭ |
ಸಾರವಿಲ್ಲದ ಸಂಸಾರದ ಶರಧಿ
ನಿರುತದಿ ಜೀವನು ಜಪಿಸುವ ಮಂತ್ರದಿ
ಮರೆಯದೆ ಪುರಹರ ಸ್ಮರಣೆಯ ಬಲದಿ ಶ್ರೀಗುರು ||1||
ಬಟ್ಟಿ ಗಂಟಿನೊಳು ರತ್ನವ ಕಟ್ಟಿದೆ |
ಗಂಟು ಬಿಟ್ಟು ರತ್ನಿಟ್ಟುಕೊಂಡ ತೆರ
ಶ್ರೇಷ್ಠ ದೇಹದಿ ದುಷ್ಟಗುಣಳಿದು
ನಿಷ್ಠಿಯಿಂದ ಸೃಷ್ಠಿಗೀಶನ ದಿಟದಿ ಶ್ರೀಗುರು ||2||
ಮುತ್ತು ಗೊಬ್ಬರದಿ ಮಬ್ಬಿಲಿ ಕಳಿಯಲು |
ವತ್ತಿ ಜಲ್ಲಿಸಿ ಮುತ್ತುಗೊತ್ತಿಲಿಟ್ಟ ತೆರ
ತತ್ವ ಕೂಡಿದ ಕಾಯದೊತ್ತಿ ಬೆಳಗುವ ಸತ್ಯ
ಪರಿಪೂರ್ಣನು ನಿತ್ಯದಿ ಚಿತ್ತದಿ ಶ್ರೀಗುರು ||3||
ಕನಕವನ್ಹಿಲಿ ಕಾಣದೆ ಅಡಗಿರೆ |
ಮೊನೆಗಾವಿಲಿ ಚಿನ್ನವನು ಹಿಡಿಯುವ ತೆರ
ತನುವಿಲಿ ಬುದ್ಧಿ ಜ್ಞಾನದಿ ಹೊಳೆಯುವ
ಚಿನುಮಯಾತ್ಮಕನ ಚಿದ್ವಿವೇಕದಿ ಶ್ರೀಗುರು ||4||
ತುಂಬಿ ತಂಬಿಗೆ ನೀರೊಳು ಮುಳುಗಿರೆ |
ಹಂಬಲದಿಂದ ನೀರ್ಮುಳಗಿ ಹಿಡಿದ ತೆರ
ನಂಬಿಗೆಯಿಂದಲಿ ಬಿಂಬದೊಳಗಿರುವ
ಶಂಭು ಕರಿಘೂಳಿಯ ಜಂಬು ದ್ವೀಪದಿ ಶ್ರೀಗುರು ||5||
ಯಾರು ಹಂಗರೇ ಅನರಿ
ಯಾರಂಗನರಿ ಯಾರಿಂಗನರಿ |
ನಿಮ್ಮ ಮನಸಿಗೆ ಬಂದಂತೆ ನುಡಿಯರಿ ||ಪಲ್ಲ||
ಪರಮ ಪಾವನನಾದ ಗುರು ದೊರೆತ ಎನಗೆ |
ಸ್ಥಿರವಾದ ಜ್ಯೋತಿಯನ್ನರಿತು ಬೆರಿತವನಿಗೆ ||1||
ಪಂಚ ತತ್ವಗಳೆಲ್ಲ ವಂಚನಿಲ್ಲದೆ ತಿಳಿದು |
ಸಂಚಿತಾಗಮಕಿನ್ನು ಸಾಕ್ಷಿಯಾದವನಿಗೆ ||2||
ಕಂಗಳ ಮಧ್ಯದಿ ರಂಗಮಂಟಪದಲ್ಲಿ |
ಸಂಗವಾಗಿಹ ನಿಜ ಲಿಂಗ ಗಂಗಾಧರಗೆ ||3||
ಅಂಗಲಿಂಗದ ಸಂಗ ಅನುಭಾವ ತಿಳಿದು |
ಲಿಂಗಪೂಜಿಸುವಂಥ ಜಂಗಮಯ್ಯನಿಗೆ ||4||
ಧರಿಯೊಳು ನರರಿಗೆ ಗುರುವಾಗಿ ಮೆರೆಯುವ |
ಕರಿದಾರೆ ಕರಿಘೂಳಿ ಕರೆದಿದ್ರೆ ಮುರಿಗಯ್ಯನಿಗ್ಯಾಂಗನರಿ ||5||
ಮತಿಗೆಟ್ಟ ಪರಿಯಾಯ್ತು
ಏನೋಗಿ ಏನಾಯಿತೊ |
ಜನಮನದೊಳು ಜ್ಞಾನ ಶೂನ್ಯವಾಯಿತೊ
ಹೀನ ವಿಷಯದೊಳು ಮುಳುಗುತ ತೇಲುತ
ಮೀನ ಗಾಳಕೆ ಬಿದ್ದು ಮತಿಗೆಟ್ಟ ಪರಿಯಾಯ್ತು ||ಪಲ್ಲ||
ಲಿಂಗವಂತರೆಲ್ಲರು |
ಅಂಗಕ ಮೆಚ್ಚಿ ಭಂಗಪಡುವದಾಯಿತು
ಮಂಗಳಾತ್ಮಕ ಭವಭಂಗ ಶಿವನ್ಹಿಂಗಿತು
ಮಂಗನಂದದಿ ಭವಿಸಂಗ ಮಾಡುವದಾಯ್ತೊ ||1||
ವೀರಶೈವರ ಗುರುತೊ |
ಆರಲಿಯಿಲ್ಲ ಮಾರಮರವಿನೊಳಾಯಿತು
ಪುರಹರ ಸ್ಮರಣೆಯ ಸೇರದೆ ಹೋಯಿತು
ಘೋರ ನರ ಜನುಮದಿ ಸಾರಿ ಬರುವದಾಯ್ತು ||2||
ದೇಸಾಯಿ ಧೊರಿಗಳಂತು |
ಆಶದಿ ಮೋಸೆಮಪಾಶ ಬೀಳುವದಾಯಿತೊ
ಪೋಷದಿ ದಶವಿಧ ಭಾಷೆಯಾಶಿಸದೆ
ಈಶ ಕರಿಘೂಳೀಶನ ಧ್ಯಾಸವು ಮರೆದಿತ್ತು ||3||
ಕಣ್ಣಿನೊಳು ಕೈಲಾಸ ನೋಡೊ
ಕಣ್ಣಿನೊಳು ಕೈಲಾಸ ನೋಡೊ |
ಜಾಣ ಸಾಧನೆ ಮಾಡೋ
ಗುಣಗಳ ಬೇಡನ್ನ ದಾನವು ಮಾಡೊ
ಸಣ್ಣ ದ್ವಾರದ್ಹುಣ್ಣಿವಿ ಚಂದ್ರನ ನೋಡೊ ಫಣಿಪತಿಯಗೂಡೋ ||ಪಲ್ಲ||
ಸಂಸಾರ ಮಾಡೊ ಸಂಶಯ ಬಿಡು ಬ್ಯಾಡೊ |
ಸೋಹಂ ಸೇರಿ ಮಾಯ ಧ್ವಂಸವ ಮಾಡೊ
ವಂಶ ಉದ್ಧಾರ ನೋಡೊ ||1||
ಕೆಂಪು ಕರಿದು ಬಿಳಿದ್ಹಳದಿ ನೀಲ ನೋಡಿ |
ತಂಪ್ಹಂಪಿ ಕ್ಷೇತ್ರದೊಳಾಡೊ
ಪೊಂಪಪತಿಯಗೂಡೊ ||2||
ಆಧಾರಿಡಿದು ಮಾಡೊ ಸ್ವಾಧಿಷ್ಟ ಸ್ವಾದ ನೋಡೊ |
ಆದಿ ನಾದದಿ ಮನಗೂಡೊ
ಸದಾ ಬ್ರಹ್ಮನೊಳಾಡೊ ||3||
ಕಾಳನಿಲ್ಲದೆ ಬೈಲಿನೊಳಗ ಓಡ್ಯಾಡೊ |
ನಿರ್ಬೈಲ ಕರಿಘೂಳಿಗೆ ಕೂಡೊ
ವೇಳೆ ಮುಂದಿಲ್ಲ ನೋಡೊ ||4||
ಗಿಡ ಎಂಥದು ನೋಡೊ
ಗಿಡ ಎಂಥದಾದ ಎಡ ಬಿಡದೆ ನೋಡೊ ಸದಾ |
ಗಿಡ ಮೊದಲೆ ಬುಡ ನಡುವಾಗ್ಯಾದ
ಬಿಡದೆಂಟು ಗೇಣು ಉದ್ದಾಗುತಾದ
ಎರಡಾರು ವರುಷಕ ಹುವ್ವಾಗುತಾದ
ಹೂವಿನೊಳಗೆ ಮಿಡಿಗಾಯಾಗುತಾದ
ಎಡಬಿಡದೆ ನೋಡೊ ಸದಾ ||ಪಲ್ಲ||
ಮೂರಾರು ತಿಂಗಳ ವಳಗಿರುತಾದ |
ಹೊರಗೆ ಬಂದು ಬೆಳೆದ್ಹಣ್ಣಾಗುತಾದ
ಮೂರು ರಂಧ್ರದಿ ರಸ ಸೋರ್ಹೋಗುತಾದ
ಯಾರಿಗಿ ಸಿಗದಾಂಗ ಹಾರೋಗುತಾದ ||1||
ಕಣ್ಣಿಲ್ಲದೆ ಗಿಡ ನೋಡುವದಾದ |
ಹುಣ್ಣಿವಿ ಚಂದ್ರನ ಬೆಳಗಿನೊಳಾದ
ಹಣ್ಣಿಗಾರು ಮಂದಿ ಕಾವಲಿಟ್ಟಾದ
ಹಣ್ಣು ಸೇವಿಸೆ ಜನನ ಮರಣ ದೂರಾದ ||2||
ಕಾಲಿಲ್ಲದೆ ಗಿಡನೇರುವದಾದ |
ಇಲ್ಲದ ಕೈಯಿಂದ ಕಡಿಯುವದಾದ
ಬಾಲ ಬಾಯಿಲ್ಲದೆ ತಿಂಬುವದಾದ
ಬಲ್ಲವರಿಗೆ ಭಲೆ ಬಲ್ಲೆ ರುಚಿಯಾದ ||3||
ಆದಿ ಅನಾದಿ ಮುದದಿಂದಲಿ ಆದ |
ಹಾದಿಯು ಬೈಲಿನೊಳಗಿಂದಾದ
ಭೇದವಿಲ್ಲದ ನಿರ್ಬೈಲೊಳಗಾದ
ಸಾಧು ಕರಿಘೂಳಿ ತೋರಿಸುವ ಭೇದ ಎಡಬಿಡದೆ ||4||
ಈಶಧ್ಯಾಸ ಧ್ಯಾಸಿಸೊ
ಈಶಧ್ಯಾಸ ಸೂಸಿಲಿ ಧ್ಯಾಸಿಸೊ |
ಬೇಸರಿಲ್ಲದೆ ಮನವೆ ಬೇಸರಿಲ್ಲದೆ || ||ಪಲ್ಲ||
ಏಸೇನು ಜನ್ಮದಲಿಂದೆ |
ಈಶನ ಕಾಣದೆ ಬಂದೆ
ಕೂಸನಾಗಿ ವಸುಧಿಯೊಳು ಧ್ಯಾಸಿಸೊ ಬೇಸರಿಲ್ಲದೆ ||1||
ಆಶೆಯನು ಬಿಡು ಬೇಡಂದೆ |
ನಿರಾಶದೊಳಿರುವದು ಛಂದೆ
ಆಶಾರಹಿತ ಶಶಿ ಈಶನ ಧ್ಯಾಸಿಸೊ ಬೇಸರಿಲ್ಲದೆ ||2||
ಗಂಗೆಯಮುನೆ ಸರಸ್ವತಿಲಿಂದೆ |
ಸಂಗಮದಿ ಸ್ನಾನಮಾಡಂದೆ
ಅಂಗದೊಳಗ ಮಹಾಲಿಂಗನ ಧ್ಯಾಸಿಸೊ ಬೇಸರಿಲ್ಲದೆ ||3||
ಕಂಗಳ್ತಿಂಗಳ ನೋಡಂದೆ |
ಮಂಗಳಾತ್ಮ ಪೂಜಿಸಂದೆ
ಜಂಗಮ ಕರಿಘೂಳಿಯ ಧ್ಯಾಸಿಸೊ ಬೇಸರಿಲ್ಲದೆ ||4||
ಚಿಂತಿಯ ಪರಿಹರಿಸೊ
ಚಿಂತಿಯ ಪರಿಹರಿಸೊ ಸಂತೋಷದಿರಿಸೊ |
ಶಾಂತಮನದಿ ಬೆರಿಸೊ ಎಂತು ಮಾಡಲಿ
ಭವಭವಾಂತರಂತುಗಳ ನಾನೆಂತು ತಾಳಲಿ
ಅಂತಃಕರುಣದಿ ಭ್ರಾಂತಿ ಬಿಡಿಸೊ
ಕಂತುಹರ ಏಕಾಂತದಿರಿಸೊ ||ಪಲ್ಲ||
ಮೂರಾರ್ವೈರಿಗಳರಿಸೋ ಮೂರಾರು ಸ್ಥಲದಿ |
ಮೀರಿದರುವನು ದೋರಿಸೊ
ಮೂರು ನಾಲ್ಕು ವ್ಯಸನಗಳ ತರಿಸೊ
ಮೂರು ಒಂದು ಕರುಣ ಹಿಡಿಸೊ
ಮೂರು ಮೂರೆರಡಾನೆ ಮುರಿಸೊ
ಮೂರು ಒಂದಾಗಿರಿಯನೇರಿಸೋ ||1||
ಕಾಣಬರುವದು ಮಾಣಿಸೊ ಈ ಕಣ್ಣಿನೊಳು |
ಬಣ್ಣೈದೆಣ್ಣಿನ ಕಾಣೀಸೊ
ಸಣ್ಣ ದ್ವಾರದಿ ಬಣ್ಣ ಧವಳ
ಹುಣ್ಣಿವಿ ಚಂದ್ರನ ಕಾಣಿಸೊ
ಮಣಿಯಲಾರದ್ಹಣ್ಣು ತಿನಸಿ ಮಾಣದೆನ ಪ್ರಾಣದಣಿಸೊ ||2||
ಕಂಗಳಂಗಳ ತಿಳಿಸೊ |
ತಿಂಗಳ ಬೆಳದಿಂಗಳೊಳ್ ಸ್ನಾನ ಗೊಳಿಸೊ
ಶೃಂಗ ರಂಗುಮಂಟಪದಿ
ಗುರುಲಿಂಗ ಜಂಗಮದಂಗದೊರಿಸೊ
ಮಂಗಳಾತ್ಮಕ ಕರುಘೂಳೀಶ ಹಿಂಗದಲೆ ಮುಕ್ತ್ಯಾಂಗಿನೊಲಿಸೊ ||3||
ಮರಿಬೇಡ ಸದಾ ಶಿವನಾಮಮರಿಬೇಡ ಸದಾಶಿವನಾಮ
ಘೋರ ದುರಿತ ದೂರಾಗುವದಮ್ಮಾ
ಅರುವಿನಿಂದಲಿ ಗುರುಚರಣ ಸ್ಮರಣೆ ನೇಮ
ಮರೆಯದಿರನುದಿನ ಪೊರೆವ ಶ್ರೀಸೋಮ ||ಪಲ್ಲ||
ಜ್ಯೋತಿಯುರುವದು ಉತ್ತಮ |
ನಿನ್ನ ಆತ್ಮದೊಳಗ ನೋಡೊ ಪರಮಾ
ನಿತ್ಯವಲ್ಲೀತನು ವ್ಯರ್ಥವಾಗೊದೊಂದಿನ
ಮೃತ್ಯುಗೆಲಿದು ಮನಗೊತ್ತುಲಿರು ಸುಮ್ಮ ||1||
ಹೆಬ್ಬುಲಿಗಳು ಆರಾವಮ್ಮಾ |
ನಿನ್ನ ಮಬ್ಬಿನೊಳುಬ್ಬಬೇಡಮ್ಮಾ
ಹೆಬ್ಬಳಿಗ್ಹೋದರೆ ಮೊಬ್ಬ ಬೆಳಕಾಗುವದು
ಹೆಬ್ಬುಲೆಬ್ಬರಿಸುವಾಗೊಬ್ಬರಿಲ್ಲಮ್ಮಾ ||2||
ಇರುವ ಗುರುಲಿಂಗ ಜಂಗಮ |
ಮೀರಿದುನ್ಮನಿ ತೋರುವನಮ್ಮಾ
ಮೂರು ಆರೆರಡಳಿದ ಧಿರ ಕರಿಘೂಳಿ ಭೇದ
ಅರಿತು ಮೂರಾರಲ್ಲಿ ಸೇರಿ ನಿರುತ ಸಾಧಿಸು ನಿತ್ಯ ಪ್ರಣಮ ||3||
ಲೋಕ ಏಕಾಗುವದು ನೋಡಣ್ಣ
ಲೋಕ ಏಕಾಗುವದು ನೋಡಣ್ಣ |
ಜ್ವಾಕಿಲಿರಣ್ಣ ಲೋಕ ಏಕಾಗುವದು ನೋಡೊ
ಕಾಕು ಜನರಿಗೆ ಬಂತು ಕೇಡೊ
ಲೋಕನಾಥನ ಪಾದ ಪಿಡಿದು ನೇಕಿಯಿಂದ ನಡಿಯರಣ್ಣ ||ಪಲ್ಲ||
ತಾಯಿ ಮಕ್ಕಳಿಗೊಬ್ಬ ಪುರುಷಣ್ಣ |
ಆಯಾಸವಿಲ್ಲದೆ ಮಾಯ ಮದುವೆಯ ಮಟ್ಟುತಾದಣ್ಣ
ಆಯಿ ಮುತ್ಯೆನ ಬಿಟ್ಟು ಬಿಡುವಳು
ತಾಯಿ ಮಕ್ಕಳೂ ನ್ಯಾಯದೊಳು
ಮಾಯಿ ಬಂದು ಛಾಯ ನುಂಗಿ ಬಿಡುವಳಣ್ಣ ||1||
ಊಚ ನೀಚೊಂದಾಗುವದಣ್ಣ |
ಬಚ್ಚಲ ಕುಣಿಯೊಳು ಉಚ್ಚಿಬಿಳ್ವಾಗ ಎಚ್ಚರಿರಲಣ್ಣ
ಲಕ್ಷ್ಮೀಪುತ್ರರೆಲ್ಲರವರು ನಿಶ್ಚಯದಿ ದಾರಿದ್ರರಾಗ್ವರು
ಮೆಚ್ಚಿ ಬಂದ ಸ್ತ್ರೀಯು ಪುರುಷಗೆ ನಿಚ್ಚ ಸಂಸರ ಮಾಡ್ವಳಣ್ಣ ||2||
ಗಂಡ ಹೆಂಡರ ಕೂನವಿಲ್ಲಣ್ಣ |
ಭಂಡಾಟ ಕೇಳರಿ ಮಂಡಲಕ್ಕೆ ಬಲಿಯ ಬಂತಣ್ಣ
ಭಂಡ ವೀರಶೈವರೀಗೆ ಗಂಡಮಾರ್ತಂಡ ಬರುವಾಗ
ಬಂಡುಗೆಟ್ಟು ಸಾಧುರೆಲ್ಲ ಕಂಡಕಡಿಗೋಡೋಗ್ವರಣ್ಣ ||3||
ಬೀಡಿಗೆ ಬೆಂಕ್ಹೆತ್ತುತಾದಣ್ಣ |
ಹತ್ತಿದ ಮೇಲೆ ಕಡ್ಡಿ ಸುಟ್ಟು ಕರಿಯ ಬಿತ್ತಣ್ಣ
ನಾಡಿಯಲ್ಲಲಿ ನುಡಿಯ ತುಂಬಿ ನಡಿವವೆಚ್ಚರವಿಲ್ಲದಲೆ
ಆಡಿದಂತೆ ನಡಿಯವಲ್ಲದೆ ಖೋಡಿ ನರ್ಕಕ್ಕಿಳಿವರಣ್ಣ ||3||
ಆಚಾರ ವಿಚಾರವಿಲ್ಲಣ್ಣ |
ಮನದೊಳು ಶಿವನ ಗೋಚರವು ಮೊದಲಿಗಿಲ್ಲಣ್ಣ
ವಾತಗುಣಗಳು ವಾಚಿಸದೆ ಮರೆಮಾಚವಿಲ್ಲದೆ ಕರಿಘೂಳೀಶನ
ಪಶ್ಚನೀಲ ಜ್ಯೋತಿಯೊಳು ನಿಶ್ಚಲಾತ್ಮನ ಕೂಡಿ ಸಂಧಾನ ||4||
ಪುರಹರ ಸ್ಮರಣೆಯ ಮರೆಯದಿರು
ಪುರಹರ ಸ್ಮರಣೆಯ ಮರೆಯದಿರನುದಿನ |
ಕರುಣದಿ ಪೊರೆಯುವನೆಲೆ ಮನುಜಾ
ಘೋರ ಸಂಸಾರಪಾರ ವಾರಿಧಿಯೊಳು
ಮುರಿದು ಮುಳುಗಬೇಡ ಇರು ಸಹಜ ||ಪಲ್ಲ||
ಮೂರಾರು ಅರಿಗಳು ಕ್ರೂರವಾಗಿರುತಿಹರು |
ಅರಿತು ಅವರನು ದೂರನಾಗಿರೊ ನೀ ನಿಜ
ಮೂರೆರಡಾರೊಂದು ಬೇರೆ ಭಾವಿಸು ಇಂದು
ಮೂರು ಮೂರೆರಡಾರ ಮದ ಮರ್ಧಿಸು ರೋಜಾ ||1||
ಮೂರಾರು ಹಿಡುಕೊಂಡು ಮೂರಾರು ಪಡಕೊಂಡು |
ಮೂರಾರು ದ್ವಾರಗಳ್ ಬಂಧಿಸಿರೊ ಸದೋಜಾ
ಮೂರಲ್ಲೊಂದನೆ ಹರಿದು ಎರಡು ಒಂದಾಗಿರಿಸಿದು
ತಾರನರಸನೋರ್ವ ಪರಿಪೂರ್ಣತೇಜ ||2||
ಮೂರಾರು ಮೇಲಾದ ಸೇರಿರು ನೀ ಸದಾ |
ಭೇರಿವುನ್ಮನಿಯೊಳಾದ ಮೋಹಜಾ
ಮೂರಾರು ಬೇರೊಂದು ಭೇರಿ ಮೃದಂಗದ
ಸ್ವರನರಿ ಅಲ್ಲಿರುವನು ಪರತರಜಾ ||3||
ಮೂರು ಮೂರು ಮೂರು ಮೇರೊಂದಾದ ತೀರ್ಥ |
ಮೂರು ಮೂರು ಮೂರೆರಡು ಪ್ರಸಾದಜ
ಮೂರಾರು ಸ್ಥಲ ಮೀರಿ ಹಾರಿಹೋಗುವದಕ್ಕೆ
ಧೀರ ಶ್ರೀ ಕರಿಘೂಳಿ ಚರಣವೆ ಜಹಜ ||4||
ಆಹಾ ಹೇ ಮನಸೇ
ಆಹಾ ಹೇ ಮನಸೇ ನೀ |
ಅಹಂಕಾರದಾಗುವಿ ಯಮಕಿಂಕರ ಮೋಸೆ ||ಪಲ್ಲ||
ಸಾಂಖ್ಯ ತಾರಕ ಅಮನಸ್ಕವ ಸಾಧಿಸಿ |
ಕಿಂಕರನಾಗಿ ಮಾಡು ಶಂಕರಧ್ಯಾಸೆ ||1||
ಆಶದಿ ಮೋಸ ಮೋಸೆಮಪಾಶ |
ಆಶೆದೊಳೀಸಿ ನಾಶಾವಾಗುವಿ ಮನಸೆ ||2||
ಆಶಿಸು ವಿನಯದಿ ಘೋಷವನಾಲಿಸಿ |
ಕೂಸನಾಗಿ ಜಗದೀಶನ ಭಜಿಸೇ ||3||
ಆಚಾರಡಿದು ಶಿವ ಗೋಚರಗೈಯುತೆ |
ಖೇಚರಿ ಶಾಂಭವಿ ಆಚಿಗೆ ನಿಲ್ಲಿಸೆ ||4||
ಯಲ್ಲರೊಳಗೆ ನೀ ಬಲ್ಲಿದನೆನದಿರು |
ವಲ್ಲಭ ಶ್ರೀ ಕರಿಘೂಳೀಯನೊಲಿಸೆ ||5||
ಶಿವನಿರುವ ಸ್ಥಲವ ನೋಡೋ
ಶಿವನಿರುವ ಸ್ಥಲವ ನೋಡೋ |
ಆವಾವಗ ಭಯ ಬೇಡೋ
ದಿವನಂದದಿ ಮರಿಯಬ್ಯಾಡೊ
ಭವ ಗೆಲಿವುಪಾಯ ಮಾಡೊ ||ಪಲ್ಲ||
ಆಕಾಶ ಭೂಮಿಯೆರಡೊ |
ಆ ಕನಕಗಿರಿಯವ ನೋಡೋ
ಪಾಕಾಗಿ ಯಿರುವ ಪಾಡೊ
ನೇಕಿಲೇಕ ಲಕ್ಷ ಮಾಡೊ ||1||
ಯರಡೊಂದು ಮೂರು ನುಡಿಯೊ |
ಮೂರಾರು ಯರಡು ತಡಿಯೊ
ಆರೊಂದು ಮೂರು ನಡಿಯೊ
ಹರನಿರುವ ಅರಮನ್ಹಿಡಿಯೊ ||2||
ವಿಂಶೊಂದು ಸಾವಿರಾರ್ನುಡಿಯೊ |
ಹಂಸೇರಿ ವೇಗ ನೀ ನಡಿಯೊ
ನೌಂಶಾರು ತಿಳಿದುವುಳಿಯೊ
ಧ್ವಂಸ ಮಾಯಮಯನೋಳ್ಸುಳಿಯೊ ||3||
ಮಾನಪಮಾನೊಂದೆ ತಿಳಿಯೊ |
ಮೌನೊಂದೆ ಮನದಿವಳಿಯೊ
ಹಣಿಗಣ್ಣಿನೊಳಗ ಸುಳಿಯೊ
ಫಣಿಪತಿಯ ನೀಲ ನಡುವೊ ||4||
ಸಪ್ತ ಪಾತಾಳದೊಳು ನೀ ಯಿಳಿಯೊ |
ಸಪ್ತಸಾಗರ ಬೇರೆ ಮೂರ್ಹೊಳಿಯೊ
ಸಪ್ತಯಲಿ ತೋಟ ರತ್ನ ರಾಜೋಳಿಯೊ
ಗುಪ್ತ ಗುಹದಿರುವನು ಹಿಡಿ ಕರಿಘೂಳಿಯೊ ||5||
ಹರಹರಹರ ಪರಮೇಶ್ವರನ ನೆನಿ
ಹರಹರಹರ ಪರಮೇಶ್ವರನ ನೆನಿ ಮರೆಯದಿರು ಮರವಿನೊಳಗ |
ಕ್ರೂರಾರು ಸೇರಿ ನೀ ಮಾರವೈರಿಯ ಸೇರಿ ದಾರಿ ತ್ವರಿದು
ಶರದುರುಳುವಿಯ ಮೂರಾರು ಪದಾರಿದೋರಿಸುವರನರಿ
ಸ್ಮರಿನರಿ ಪುರಹರ ಗೌರಿವರನನು ಮರೆಯದಿರು ಮರವಿನೊಳಗ ||ಪಲ್ಲ||
ಖುಲ್ಲ ಗುಣಗಳಿಂದ ತಲ್ಲಣಗೊಳ್ಳುವಿ |
ನಿಲ್ಲದೊಯ್ಯುವ ಜವನಾಳುಗಳು
ಮೆಲ್ಲನೆ ಬಲ್ಲಿದವರಲ್ಲಿ ಮನ ನಿಲ್ಲಿಸೊ
ಅಲ್ಲಮಲ್ಲ ಯಲ್ಲರಲ್ಲಿರುವನು ಮರೆಯದಿರು ಮರವಿನೊಳಗ ||1||
ಆವಾಗಲು ಭವ ಭವದೊಳು ತಿರುಗಿ |
ಜೀವ ಶಿವನೆಂಬೊ ಭಾವದಿ ಮರಗಿ
ಭವಧವ ಶಿವಸೇವನೆಯ ಜವಗೈಯ್ಯುತ
ಪವನರಿ ಪಾವಕ ಭೂಷಣನನು ಮರೆಯದಿರು ||2||
ನಾಶಿಕ ತುದಿಯಲಿ ಧ್ಯಾಸವನಾಸಿಸೊ |
ಘೋಷದಿ ದಶವಿಧ ಭಾಷೆಯನು
ಸೂಸುವ ಮನ ಶಶಿವಾಸನೊಳು ನಿಲ್ಲಿಸು
ಕ್ಲೇಶನಾಶ ಶಶಿವಾಸನನು ಮರೆಯದಿರು ಮರವಿನೊಳಗ ||3||
ಪಕ್ಷಿವಾಹನ ಪ್ರಿಯ ತಕ್ಷಕ ಭರಣ |
ದಕ್ಷಶಿಕ್ಷಪಿತನೀಕ್ಷಿಸೊ ಮೋಕ್ಷದಾಯಕ
ವಿರುಪಾಕ್ಷ ಶ್ರೀ ಕರಿಘೂಳಿ ಪೇಕ್ಷಿಸಿದವರಿಗೆ
ಮೋಕ್ಷ ಕೊಡುವನು ಮರೆಯದಿರು ಮರವಿನೊಳಗ ||4||
ಪರಮ ಪರತರ ದೊರೆವನು ನಿನಗೆ
ಶ್ರೀಗುರು ವರಪುತ್ರ ಚೈತ್ರ ವೈಶಾಖಿಡಿ |
ಪರಮ ಪರತರ ದೊರೆವನು ನಿನಗೆ ||ಪಲ್ಲ||
ಶ್ರೇಷ್ಠವಾದ ಜೇಷ್ಠದಲ್ಲಿ |
ಮುಟ್ಟಿ ಮನವನು ಗಟ್ಟಿ ನಿಲ್ಲಿಸಿ
ಇಷ್ಟವಾದಾಷಾಢದಟ್ಟಿಸಿ
ಮೆಟ್ಟು ಮೊದಲಷ್ಟ ದಳಗಳಿಗೆ ||1||
ಶ್ರಾವಣದಿ ಮನನ ನಿಧಿ ಧ್ಯಾಸವು ಗೈಯುತ |
ಮೌನ ಮುದ್ರದಿ ರುದ್ರಭಾದ್ರಿಪದಗೆ ಲೇಶದಿಂ ಸದಾಶ್ವಿಜಯದಿ
ಮೋಸ ಹೋಗದೆ ಘೋಷನಾಸಿಸು ಧ್ಯಾಸ ಮರೆಯದೆ
ಕಾರ್ತಿಕ ಪರಿಪೂರ್ತಿಯಾಗಲು ಮೃತ್ಯಂಜಯಗೆ ||2||
ಮಾರ್ಗಶಿರ ಮಾಸದಿ ದೀರ್ಘಮ ಪೌಷಿಪ |
ಸ್ವರ್ಗದಿ ಮಾರ್ಗಣ ವರ್ಗದೊಳಗೆ
ಭಾಗ್ಯದಿಂದಲಿ ಮಾಘ ಫಾಲ್ಗುಣಾದೀಗೆ ಅಗಲದೆ
ಬೆಳಗಿನೊಳಗೆ ಸಾಗಿಸಾಗಲು ನಿಗಮ
ಕರಿಘೂಳಿ ನಗುಪಡುವನಿನ್ನೊಂದು ಘಳಿಗೆ ||3||
ಎಲ್ಲಿ ನೋಡಲು ಅಲ್ಲಿ ನಾನೆ
ಎಲ್ಲಿ ನೋಡಲು ಅಲ್ಲಿ ನಾನೆ |
ನಾನಿಲ್ಲ ನೀನೆ ನಾನೆಲ್ಲಿಲ್ಲ ನೀನೆ ||ಪಲ್ಲ||
ಭೂಮಿ ಆಕಾಶದಲ್ಲಿ ನಾನೆ ನೀನೆ |
ಕಾಮ ಕ್ರೋಧಗಳಲ್ಲಿ ನಾನೆ ನೀನೆ
ಹೇಮ ನೇಮ ನಿತ್ಯಗಳಲ್ಲಿ ನಾನೆ ನಾನಿಲ್ಲ ನೀನೆ ||1||
ಕೊಡುವ ಕೊಂಬಾಗಲು ನಾನೆ ನೀನೆ |
ಬಿಡ ದೃಢ ಹಿಡಿವಡೆ ನಾನೆ ನೀನೆ
ಮೃಢನುಡಿ ನುಡಿವಡೆ ನಾನೆ ನಾನೆಲ್ಲಿಲ್ಲ ನೀನೆ ||2||
ನೋಡಿ ಮಾಡ್ಯಾಡುವ ನಾನೆ ನೀನೆ |
ಕೂಡ್ಯಾಡದವ ನಾನೆ ನೀನೆ
ಘಡಿ ರೂಢಿಗೊಡಿಯನು ನಾನೆ ನಾನೆಲ್ಲಿಲ್ಲ ನೀನೆ ||3||
ಹೇಳಿ ತಿಳಿಲಾರದವ ನಾನೆ ನೀನೆ |
ಹೇಳಾದೆ ತಿಳಿದವ ನಾನೆ ನೀನೆ
ಅಳಿದುಳಿ ಸುಳಿವಂಥ ಕಾಳ ನಾನೆ ನಾನಿಲ್ಲ ನೀನೆ ||4||
ಅಂಡಪಿಂಡ ಬ್ರಹ್ಮಾಂಡನು ನೀನೆ |
ಮಂಡಲದೊಳು ನೌಖಾಂಡನು ನೀನೆ
ಖಂಡಿತಾ ಖಂಡಿತ ನಾನೆ ನಾನಿಲ್ಲ ನೀನೆ ||5||
ನರಹರಿ ಪುರಹರ ನಾನೆ ನೀನೆ |
ಕರುಣದಿ ಪೊರೆದವ ನಾನೆ ನೀನೆ
ಕರಿಘೂಳಿ ಕಂದ ಮುರುಗೀಂದ್ರ ನಾನೆ ನಾನೆಲ್ಲಿಲ್ಲ ನೀನೆ ||6||
ನೋಡಬಾರದೆ ಮೃಢನ
ನೋಡಬಾರದೆ ಮೃಢನ ನೋಡ || ||ಪಲ್ಲ||
ನೋಡಬಾರದೆ ರೂಢಿಗೀಶನ |
ಈಡಪಿಂಗಳ ನಾಡಿ ನಡುವೆ
ಕೂಡಿ ಸುಷುಮ್ನೊಡದು ಪ್ರಣಮಾ
ಆಡುವ ನುಡಿಗಢಣದೊಳಗೆ ನೋಡ ||1||
ಮೇಲುಮಾಲಿನ ಕೀಲಿಯ ತೆರೆದು |
ನೀಲದುಪ್ಪರಿಗೇರಿ ನಿಂದು
ಬಾಲಚಂದ್ರ ಧರನ ಕಳೆಯೊಳ್
ಥಳಥಳ ಹೊಳಿಯೊ ಬೆಳಗಿಲಿ ನಿಂದು ನೋಡ ||2||
ಗಂಗೆ ಯಮುನೆ ಕೂಡಿದಂಥ |
ಸಂಗಮ ಸರಸ್ವತಿಯಾದಂಥ
ರಂಗುಮಾಲಿನೊಳಗೆ ಕೋಟಿ
ತಿಂಗಳ ಪ್ರಭೆ ಮಂಗಳನೆಂದು ||3||
ಆರು ಅಂತರ ಅರಮಂದಿರದಿ |
ಆರು ಅರುಯದಂತೆಯಿರುವ
ಭೇರಿ ಝಾಂಗುಟಿ ಓಂಕಾರ ಘಂಟಿ
ಸಾರ ಸಂಗ್ರಹ ನಾದನಿಂದು ||4||
ಅರ್ತಿಯಿಂ ಗುರುಮೂರ್ತವಗೊಳಿಸಿ |
ತೀರ್ಥ ಪ್ರಸಾದವನ್ನು ಪೂರ್ತಿಸಿ
ಶರ್ತಿನಿಂದಲಿ ವ್ಯರ್ಥಾಗದೆ
ಮತ್ರ್ಯದಿ ಕರಿಘೂಳಿ ಕರುಣವ ಪಡೆದು ನೋಡ ||5||
ಮರೆಯದಿರನುದಿನ ಸ್ಮರಣೆಯ
ಮರೆಯದಿರನುದಿನ ಸ್ಮರಣೆಯ |
ಅರಿ ಪರತರ ಹರಿಣಾಂಕಧರನಾ
ಚರಣ ಸ್ಮರಣೆಯ ||ಪಲ್ಲ||
ವೇದ ಸಾಧಿಸಿದವನುದರಜ ಜನಪುರ |
ಚಂದವಳಿದ ತಂದೆಸಖನಣೆಗಣ್ಣಿನ ಸ್ಮರಣೆಯ ||1||
ಆಗಮಗಳಿಗೆ ಗೋಚರವಾಗದವನ |
ನಿಗಮಾತೀತ ಜಗದೀಶನಾಗೀಶ ಸ್ಮರಣೆಯ ||2||
ತಕ್ಷಕಧಿಕಾರಣ ದಕ್ಷಶಿಕ್ಷಪಿತನ |
ತಕ್ಷಕ ಅರಿಸಖ ಚಕ್ಷು ವಿರುಪಾಕ್ಷನ ಸ್ಮರಣೆಯ ||3||
ಚಂದ್ರಮೌಳಿಧರ ಇಂದ್ರಪೂಜಿತಸುರ |
ರಂಧ್ರದೊಳಿರೊ ವೃಷಭೇಂದ್ರ ನಾಗೇಂದ್ರನ ಸ್ಮರಣೆಯ ||4||
ಆರು ಸ್ಥಲದ ಮೇಲಿರುವೊ ರಜತಾಚಲ |
ಧೀರ ಶ್ರೀ ಕರುಘೂಳೀಶ ಗುರುವರನ ಸ್ಮರಣೆಯ ||5||
ಶ್ರೀಗುರು ನಿಮ್ಮ ದರುಶನ
ಶ್ರೀಗುರು ನಿಮ್ಮ ದರುಶನದಿ |
ಪಾರಾದೆನು ಘೋರ ಸಂಸಾರ ಶರಧಿ
ಮರೆಸಿದಿ ಮರವೆಂಬುದು ಭರದಿ
ಕುರುದೋರಿದಿ ಅರುವಿನಾಲಯದಿ ||ಪಲ್ಲ||
ಮೂರಾರುಯೆರಡು ಯೇಳೋಡಿಸಿದಿ |
ಯರಡೊಂದು ಮೂರು ದ್ವಾರ್ಹಿಡಸಿದಿ
ಆರಕ್ಷರ ಮಂತ್ರ ನುಡಿಸೀದಿ
ತಾರವರನ ಸ್ವರೂಪವ ತೋರಿಸಿದಿ ||1||
ಆರ್ಗಿರಿಗಳ ಮೇಲೇರಿಸಿದಿ |
ಭೇರಿ ಮೃದಂಗ ಪ್ರಣವಾದ್ಯ ಬಾರಿಸಿದಿ
ಸುರರಮೃತ ಕರದ್ವರಿಸೀದಿ
ಪುರಹರಿಹರ ಪರಮನ ತೋರಿಸಿದಿ ||2||
ಏರಬಾರದ ಮರನೇರಿಸಿದಿ |
ಆರರಿಯದವಂದ್ಹಣ್ಣು ತಿನ್ನಿಸಿದಿ
ಜರೆಮರಣಿಲ್ಲದೆ ಕರುಣಿಸಿದಿ
ಪರದಾರಿದೋರಿ ಕರಿಘೂಳೆನ್ನಿಸಿದಿ ||3||
ಏನು ಕಾಣಲವೊ
ಏನು ಕಾಣಲವೊ |
ಮನಸಿನ ಗುಣವು ಮಾಣದವೊ
ಕೂನವಿಲ್ಲದೆ ಶ್ವಾನನ ಪರಿ
ಮನಿಮನಿ ತಿರುಗೋದವೊ ||ಪಲ್ಲ||
ಇಂದ್ರ ಪೂರ್ವಕೋಗೋದವೊ |
ಸುರರಾಜಿಂದ್ರನಾಗದವೊ
ಇಂದ್ರಜಾಲ ಗೆದ್ದು ನೌರಂದ್ರದಿ ರವಿ
ಚಂದ್ರನ ನೋಡೋದವು ||1||
ಮುದ್ರಿಯ ನೋಡೋದವೊ |
ನಿದ್ರಿಗೈವದಿದ ಜ್ಞಾನವೊ
ತದ್ರೂಪ್ಯ ಮನೋಳ್ಸೇರಿ
ಛಿದ್ರಗುಣಳಿದು ರುದ್ರನ ನೋಡೋದವೊ ||2||
ನೈರುತ್ಯಕೋಗೋದವೊ |
ಘೋರ ದುರಿತ ಚರಿಸುವದವೊ
ವರುಣಾದಿ ನಾರಿ ಸಂಗಬೇಡಿ ಮಾರುತ ಬುದ್ಧಿ
ಸುರಿತಾನಂದ ಸೌಖ್ಯವೊ ||3||
ಈಶನ ಧ್ಯಾಸದೊಳವೊ |
ಸೋಸಿ ಆಶೆಗೈಯುವದವೊ
ಘೋಷದ ಮಧ್ಯದಲ್ಲಿ ವಾಸ ವಾಸಿಸಿದ
ಕರಿಘೂಳಿ ತಾನಾಗ್ಯಾದವೊ ||4||
ಮರಿಲಾರೆ ಗುರುವೇ
ಮರಿಯಾಲಾರೆ ಗುರುವೇ ನೀ ಮರುಳ ಮಾಡಿದಿ ಮನ |
ಪರಿಪರಿ ದುರಿತ ಪರಿಹರಿಸಿ ಧರೆಯೊಳಗೆ
ಕ್ರೂರಾರ ಸೇರಿ ನಾ ಶರಧಿಯೊಳುರುಳಿದ್ದೆ
ಪಾರಮಾರ್ಥದಿ ಕರ ಪಿಡಿದು ಕರೆದೆನಗೆ ||ಪಲ್ಲ||
ತಂದೆ ತಾಯಿಗಳೆನಗೆ ಕುಂದಿದ್ದ ಗಂಡಗೆ |
ಮಂದಮತಿಯಲಿಂದೆ ಧಾರೆರೆದರಾಗೇ
ಸಂದೇಹವಿಲ್ಲದೆ ಇಂದು ಗಂಡನ ಹೊಂದಿ
ಬಂಧುಬಳಗ ದಂದುಗ ದೂರಾಯಿತೆನಗೆ ||1||
ಅಣ್ಣ ತಮ್ಮರು ಮಣ್ಣುಪಾಲು ಮಾಡುವೆವೆಂದು |
ಬಣ್ಣಿಸಿಯನ್ನನ್ನು ಕರೆದೊಯಿದರಾಗೆ
ಅಣ್ಣ ತಮ್ಮರ ಕಣ್ಣು ಕಾಣದೆ ನಾದ್ಹಿಡಿದು
ಹುಣ್ಣಿವಿ ಚಂದ್ರನ ತೋರಿದಿ ಎನಗೆ ||2||
ಹೇಸಿ ಸಂಸಾರವಿದು ಘಾಸಿ ಮಾಡುತಲಿತ್ತು |
ಮೋಸದಿ ಯಮಪಾಶ ಸುತ್ತಿ ಕೊರಳಿಗೆ
ನಾಶಿಕಾಗ್ರದಿ ವಾಸಾ ದಾಸೋಹಂ ಸೇರಿಸಿ
ಪಾಶರಿದೋರಿಸಿದಿ ಶಶಿವಾಸನ ಬೆಳಗೆ ||3||
ಶರ್ತಿನಿಂದಲಿ ಮತ್ರ್ಯದೊಳ್ವೆರ್ಥಾಗುತಲಿರ್ದೆ |
ಗುರ್ತ ಅರಿಯದೆ ನಿನ್ನ ಮರ್ತಿದ್ದೆನಗೆ
ಭರ್ತಿಪ್ರಸಾದ ಪೂರ್ತಿಸಿದ ಶ್ರೀ ಕರಿಘೂಳಿ
ಗುರ್ತರ್ಥ ತೋರಿದಿ ಕರ್ತನೆನ್ನಗೆ ||4||
ಸಂಶಯ ಧ್ವಂಸ ಮಾಡುವಂಥ ಹಂಸೆ
ಹಂಸೇ ಪರಮಹಂಸೆ |
ವಿಂಶತಿ ಸಂಶಯ ಧ್ವಂಸ ಮಾಡುವಂಥ ಹಂಸೆ ||ಪಲ್ಲ||
ಗಂಗಯಮುನ ಸರಸ್ವತಿಯ ಸಂಗಮದಲ್ಲಿ |
ಮಂಗಳಾತ್ಮಕ ಪರಬ್ರಹ್ಮನ ತೋರಿಸುವಂಥ ಹಂಸೆ ||1||
ಎಂಟು ಮಂಟಪದೊಳು ಘಂಟೆಯ ನುಡಿಸುತ |
ಭಂಟನ ಕಂಟಲಾಗೊಯಿಕುಂಠ ತೋರಿಸುವಂಥ ಹಂಸೆ ||2||
ಶಂಖನಿಲ್ಲದ ಅಕಳಂಕ ಮೂರ್ತಿಯಾದ |
ಓಂಕಾರ ಪ್ರಣಮ ಶಂಕರನ ತೋರಿಸುವಂಥ ಹಂಸೆ ||3||
ಆದಿನಾದದಲ್ಲಿ ಭೇದವಿಲ್ಲದಿರುವದು |
ಸದಾ ನಾದದಿ ಸದಾಶಿವನ ತೋರಿಸುವಂಥ ಹಂಸೆ ||4||
ಪಂಚ ಬಣ್ಣದ ಹಂಸ ಮಿಂಚು ಗುಡುಗಿನ ವಂಶ |
ಪಂಚಾಕ್ಷರಕೆ ಮಿಂಚಿದ ಕರುಘೂಳಿ ತೋರಿಸುವಂಥ ಹಂಸೆ ||5||
ಓಂ ನಮಃ ಶಿವಾಯ ಎನು ಮನವಾ
ಓಂ ನಮಃ ಶಿವಾಯ ಎನು ಮನವಾ |
ಕಾಮನೇಮ ಹೋಮಮಾಡರಿದನುವಾ
ಓಂಲಿಂದೆ ಅ ಉ ಮ ಜನುಮವಾ
ಬ್ರಹ್ಮಾಂಡ ಪಿಂಡಾಂಡೊಂದೆ ಸಮಾನವಾ ||ಪಲ್ಲ||
ಓಂಕಾರ ಪ್ರಣಮದ ಸ್ವರ ಘನವಾ |
ಶಂಕರನಿರುವದು ತೋರಿಪದು ಸ್ಥಾನವಾ
ಕಿಂಕರನಾಗಿ ಮಾಡು ಗುರು ಧ್ಯಾನವಾ
ಸಾಂಖ್ಯ ತಾರಕಾಂಕಿತದಿ ಹರನಿರುವಾ ||1||
ಜಂಗಮನೊಲಿಸೊ ಕೊಟ್ಟು ಧನವಾ |
ಸಂಗಮದಿ ಲಿಂಗಕಿಡು ನಿನ್ನ ಮನವಾ
ಮಂಗಳಾಂಗ ಗುರುವಿಗೆ ತನುವಾ
ಅಂಗಲಿಂಗ ಸಂಗದಿ ಕರಿಘೂಳಿರುವಾ ||2||
ಎನಿತ್ಹೇಳಲಿ ಶಿವಸುಖ
ಓಂ ನಮಃ ಶಿವಾಯೆಂಬೊ ಮಂತ್ರೆನ್ನ ಜಿಂಹ್ವಕೆ |
ಘನ ನೂತನ ರುಚಿ ದೊರಿಯಿತಮ್ಮೊ
ಅನುದಿನ ಗುರುಧ್ಯಾನ ಮನದೊಳು ಮಾಡಲು
ಎನಿತ್ಹೇಳಲಿ ಶಿವಸುಖವಮ್ಮೊ ||ಪಲ್ಲ||
ಕೊಂಬೆಯಲ್ಲಿರೊ ಮಿಡಿಮಾವಿನ ಫಲ ರಸ |
ಪಂಚಧಾರಕದು ಮಿಂಚಾದಮ್ಮೊ
ವಂಚನಿಲ್ಲದೆ ನೋಡು ಶಿವನಾಮಾಮೃತಮಿದು
ಪಂಚಾಕ್ಷರದಿ ಮಧು ಮಿಂಚ್ಯಾದಮ್ಮೊ ||1||
ಅಂಡಪಿಂಡ ಬ್ರಹ್ಮಾಂಡದೊಳು |
ಅಖಂಡದಿ ತುಂಬಿದಖಂಡನಮ್ಮೊ
ತಂಡತಾಂಡಲೆದಾಖಂಡನ ಭಜಿಸಲು
ತಾಂಡವಾಡುವ ರುಂಡಮಾಲನವೊ ||2||
ತುಂಬಿದ ಕೆರೆಯಂತಿರುವ ಕರ್ಮವು |
ಅಂಬರ ನೀರಾಗ್ಹರಿವುದವೊ
ಶಂಭು ಪಾದಾಂಬುಜ ನಂಬಿದವರಿಗೆ
ತುಂಬಿದ ಪಾಪ್ಹರಿದೋಗ್ವದಮ್ಮೊ ||3||
ದೇವರದಾಶ್ಯವು ದೊರೆವದವೊ |
ಈ ಜೀವವು ದೇವರ ಸೇವೆಗವೊ
ಭುವಿಯೊಳರಸಪುರ ಕರಿಘೂಳಿ ಗುರುಸೇವ
ನಿರುತದಿಗೈವದು ಮರಿಯೆನವೊ ||4||
ಬೇಗನ್ಹೋಗನು ಬಾರಮ್ಮಾ
ಬೇಗನ್ಹೋಗನು ಬಾರಮ್ಮಾ |
ಶ್ರೀಗುರುವಿನ ಪೂಜೆಗೋಗನು ಬಾರಮ್ಮಾ ||ಪಲ್ಲ||
ಬೇಗನೋಗನು ಬಾರೆ |
ನೀಗಿ ಭೋಗಾದ ವಿಷಯ
ಮೋಘನಾದ್ಹರಿ ಶಿವ
ಯೋಗ ಮಂದಿರಕೀಗ ||1||
ಶೃಂಗಾಟ ಸಂಗಮದಿ ಸ್ನಾನವಗೈದು |
ಭಂಗಾರ ಮಡಿ ಹೊದಿದು
ಅಂಗದೊಳ್ಗಂಧ ಕಸ್ತೂರಿ ತಿಲಕ್ಹಣಿ ಮ್ಯಾಲ
ಅಂಗಜಮದ ಭಂಗಗೈದ ಮಹಾದೇವನಲ್ಲಿಗೆ ||2||
ತುಂಬಿದ ತಂಬಿಗಿಡಿಯೆ ಸಾಂಬನ ಪೂಜೆಗೆ |
ನಂಬಿಗಿಯಿಂದ ನಡಿಯೆ
ಅಂಬುಜಾಕ್ಷಿಯೆ ಕೇಳೆ ಸಂಭ್ರಮದಿಂದಲಿ
ಜಂಬುದ್ವೀಪದೊಳಿರೊ ಶಂಭುಮಹಾಲಿಂಗನಲ್ಲಿಗೆ ||3||
ಮೂರೊಂದರುವಾತ್ತಾರದ ಸರಸಿಜಗಳ್ತರಿದು |
ಎರಡೊಂದೆ ಸಾಸಿರದಳದ
ನಿರುತ ಜೀವ ಜಪಿಸುವ ಮಂತ್ರ ನೀರೆರದು ಭಸಿತ
ಧರಿಸಿ ಕಮಲೇರಿಸೊನ್ಹಿ ಲೋಭಾನ ಸುಡುವದಕ್ಕೆ ||4||
ಅಂಗಡಿಗೋಗಬೇಕಮ್ಮಾ |
ಟೆಂಗಿನಕಾಯಿ ಮುಂದೆ ತಂದಿಡಬೇಕಮ್ಮಾ
ಟೆಂಗಿನಕಾಯಿ ವಡಿದೆಡಿಯ ಸಮರ್ಪಿಸಿ
ಮಂಗಳಾತ್ಮಗೆ ಜಯಮಂಗಳ ಹಾಡೊದಕ್ಕೆ ||5||
ಕರ್ಪುರವನು ಮುಟ್ಟಿಸಿ |
ದರ್ಪಣದೊಳು ಮುಪ್ಪುರಹರನ ದಿಟ್ಟಿಸಿ
ತಪ್ಪದೆ ಪ್ರಣಮ ಘಂಟೆಯಿಪ್ಪ ಸ್ವರ ಕೇಳುತ
ಅಪ್ಪ ಶ್ರೀಕರಿಘೂಳಿ ಪಾದಗಳಪ್ಪಿ ವಂದಾಗುವದಕ್ಕೆ ||6||
ಗುರುತು ಅರಿತು ಇರಬಾರದೆ
ಗುರುತರಿತಿರುಬಾರದೆ ಹೇ ಮನಸೆ ||ಪಲ್ಲ||
ಗುರುತಿನೊಳು ಗುರುತಿಟ್ಟು ನಿರುತದಿ ನೋಡಲು |
ಪರಶಿವ ನಿನ್ನೊಳಗೆ ||1||
ಗುರುವೆಂಬ ಎರಡಕ್ಷರ ಪರಿಪಾಠವ |
ಸೇರಿ ಸೋಹಂ ಸ್ಮರಿಸೊ ಹೇಮನಸೆ ||2||
ಆದಿಯನಾದವಿದು ಭೇದಿಲ್ಲದಿರುವದು |
ಮುದದಲ್ಲಿ ಮನ ನಿಲ್ಲಿಸೊ ಹೇ ಮನಸೆ ||3||
ಮುಕುರದ ಮುಖದೊಳು ಅಕ್ಕರದಿಂದು ಮಧ್ಯ |
ನಿರಾಕಾರದಾನೆ ಲೋಕೇಶಾ ಹೇ ಮನಸೆ ||4||
ಆಧಾರ ಮೊದಲಲ್ಲಿ ಸಾಧಿಸು ವಿಧಿಯನಲ್ಲಿ |
ಸಾಧು ಕರಿಘೂಳಿಯನೊಲಿಸೊ ಹೇ ಮನಸೆ ||5||
ಈಶ್ವರ ವಿಶ್ವಾದ ಆದೀಶ್ವರ
ಈಶ್ವರ ವಿಶ್ವಾದೀಶ್ವರ |
ಶಿಶುಭಾಷನಾಸಿಸು ||ಪಲ್ಲ||
ಈಶ್ವರ ಜಗದೀಶ ಜವನ |
ಪಾಶ ಘಾಸಿಸು ಶೇಷ ಭರಣ
ಮೋಸ ಮಾಡಲಿಬೇಡ
ನಿನ ಪಾದಾಶಿಸಿರುವೆನು ಪೋಸಿಸೆನ್ನನು ಈಶ್ವರ ||1||
ಕೋಪವೇ ನಾ ಮೊದಲು ಮಾಡಿದ ಪಾಪವೆ |
ಕೋಪವೇನಾ ಮೊದಲು ಮಾಡಿದ ಪಾಪ ಬಿಡಿಸುವ
ಭೋ ಪ್ರಭೊ ನಿನ್ನ ಕ್ಯಾಪಿಕ್ಯಾಪಿಗೆ ಬೇಡುವೆ
ನಿಜ ರೂಪ ತೋರಿಸೊ ಆಪದ್ಬಾಂಧವ ಈಶ್ವರ ||2||
ಸೂಕ್ಷ್ಮನೆ ಹದಿನಾಲ್ಕು ಲೋಕ ಸಂರಕ್ಷನೆ |
ರಕ್ಷನೆ ಎನ ಮೇಲೆಯಿಂಥ ಪಕ್ಷಪಾತದೀಕ್ಷಿಸಲುಬಹುದೆ
ಲಕ್ಷ್ಮಿಪತಿ ಪ್ರಿಯ ದಕ್ಷಶಿಕ್ಷನೆ
ಕಕ್ಷಬೇಡಿನ್ನ ಬಿಕ್ಷುಕನಕರಿ ಈಶ್ವರ ||3||
ಶಾಂತನೆ ಶಾಂತದಿ ನೋಡು ಗುಣವಂತನೆ |
ಶಾಂತನೆ ಶಾಂತಾದಿ ನೋಡು ಗುಣವಂತ ಪಂಥಯಾತಕೆನ್ನೊಳು
ಚಿಂತಿಸುವೆನು ಕಂತುಹರ ಭವ
ಭ್ರಾಂತಿ ಬಿಡಿಸೊ ಮಾಂತು ಶಿರಧರ ಈಶ್ವರ ||4||
ವಾಸನೆ ಅರಸ್ಯೋಗಪುರ ನಿವಾಸನೆ |
ವಾಸನೆ ಅರಸ್ಯೋಗಪುರ ನಿವಾಸ
ಶೇಷಭೂಷ ಶಶಿಧರ ಆಶಿಸಿದ ನಿನ
ಕೂಸಿನ ಕರ ಸೂಸಿಲ್ಹಿಡಿ ಶ್ರೀಕರಿಘೂಳೀಶ್ವರ ||5||
ಪುರಹರ ಸುರ ಪೋಷಣ
ಪುರಹರ ಸುರ ಪೋಷಣ |
ಉರಗಾಭರಣ ಶಿರದಿಂದು ಗಂಗಾಧಾರಣ
ಮಾರವೈರಿಯೆ ನಿನ್ನ ಸೇರಿ ಸ್ಮರಿಸುವರ
ಮರೆಯದೆ ಪೊರೆದೆಯ ಕರುಣಾಳು ರಾಜಗುಣ ||ಪಲ್ಲ||
ತರುಳ ಪ್ರಹಲ್ಲಾದ್ಹರಿಯ ಸ್ಮರಣೆಯೊಳಿರೆ |
ಮೊರಿ ಕೇಳಿ ಸ್ತಂಭದಿಳಿಯೆ
ಧಿರ ಹಿರಣ್ಯನುದರ್ಹರಿದ ನಾರಸಿಂಹರ
ಸಿರಹಾರ ವೀರಲಿಂಗೊದ್ಭವತಾರ ತಾಮಸ ಗುಣ ||1||
ಬಾಲ ಮಾರ್ಕಂಡೇಯ ಶಿವಾಲಯದಿರೆ |
ಕಾಲಪಾ ಶೆಳೆಯುತಿರೆ
ಭೊಳಶಂಕರ ನಿನ್ನ ಕಾಲು ಬಿದ್ದೇನೆನೆ
ಕಾಲ ಪಾಶರಿದ ಸುಶೀಲ ಸುಸತ್ವ ಗುಣ ||1||
ಶ್ರೇಷ್ಠ ಅಷ್ಟಮದವಳಿಸೊ ಸೃಷ್ಟೀಶ |
ಅಷ್ಟದಳ ಮಧ್ಯ ನಿಷ್ಠಿ ನಿಲ್ಲಿಸೊ
ಎಷ್ಟ ಬೇಡಲು ನೀ ಸಿಟ್ಟಿಲಿರುವದು ಶ್ರೇಷ್ಠವೇನು
ದಿಟ್ಟಿಸಿ ನೋಡು ಪರಮೇಷ್ಟಿ ಪಾಲಿಸು ಸಗುಣ ||2||
ದುರ್ಗುಣ ವಂದಿತನೆ |
ಭಾರ್ಗಾಸಿನಾಥ ಮಾರ್ಗಣ ಶೇವಿತನೆ
ಸ್ವರ್ಗಾಧಿಪತಿ ಕರಿಘೂಳಿ ವರಗಳನೀಡೊ
ಭೋರ್ಗರಿಪ ನಾದದಿ ಪ್ರಣಮ ನಿರ್ಗುಣ ||3||
ಶ್ರೀ ಗುರುವರ ತವ ಚರಣ
ಶ್ರೀಗುರುವರ ತವ ಚರಣವ ಸ್ಮರಿಸುವ |
ಧೀರಮನವು ಸ್ಥಿರ ಮಾಡುವದು
ಪೂರ್ವಪುಣ್ಯದಿ ನರ ಜನ್ಮದಿ ಬಂದು
ಮರವಿನೊಳಾದರುವದೋರಿಸುವದು ||ಪಲ್ಲ||
ಘೋರ ಸಂಸಾರದ ಪಾರುವಾರಿಧಿ |
ಯೊಳುರುಳಿರುವೆನು ಕರ ಪಿಡಿಯುವದು
ಮಾರಹರನೆ ಸುರತರುಳನೆಂದು ಭವ
ದುರಿತಗಳನು ದೂರ ಹರಿಸುವದು ||1||
ಆರಿಸು ಆಶಸಿರ ಘೋಷದೊಳಿರೊ |
ಪರಮೇಶ ಕರುಣಿ ಸಾಂಖ್ಯರಿಸುವದು
ತಾರವರನೆದರ ಆರರಿಗಳನ್ಹರಿ
ಪಾರಮಾರ್ಥ ದಾರಿ ಹಿಡಿಸುವದು ||2||
ಆರೊಂದ್ವೆಸನಗಳರಿದಾರು ನೆಲಿ ಮ್ಯಾಲಿರೊ |
ಆರೊಂದಕ್ಷರ ಬರೆಸುವದು
ಭಾರಿವುನ್ಮನಿಯೊಳಿರುವಂಥ ಪರಮನೆ
ಪರಸ್ಥಿರ ಭಕ್ತಿಯನಿರಿಸುವದು ||3||
ದುರ್ಗುಣ ವಂದಿತ ಮಾರ್ಗಣ ಸೇವಿತ |
ನಿರ್ಗುಣ ಸುಮಾರ್ಗಿಡಿಸುವದು
ಸ್ವರ್ಗಾಧಿಪ ಕರಿಘೂಳಿ ಪ್ರಸಾದದಿ
ಶೀಘ್ರದಿ ನೀನವರ್ಗಿಡಿಸುವದು ||4||
ಸದ್ಗುರು ನಿಜಬೋಧವ ಬೋಧಿಸೊ
ವೇದವನೋದಿಸೊ |
ಸದ್ಗುರು ನಿಜ ಬೋಧವ ಬೋಧಿಸೊ
ಆದಿನಾದದಿ ಮುದದುದಸಿದ ವಿದ್ಯೆಗಳ
ಹಾದಿದೋರಿ ಭೇದಷ್ಟಮದ ಮಥಿಸೊ ||ಪಲ್ಲ||
ಪೂರ್ವ ಪುಣ್ಯದ ಸುಕೃತ ವರ ದಯದಿ |
ನರ ಜನ್ಮದಿ ನಾ ಬಂದೆನು
ನಾರಿಪುತ್ರರೆನ್ನವರೆಂದಿಂದುಧರ
ಮರೆದು ನಿನ್ನ ನಾ ನೊಂದೆನು
ಪರನಾರಿಯರ ವಾರಿನೋಟಕ ಮರುಳಾಗಿ
ಸ್ಮರಶರಕರಿತದಿ ಬೆಂದೆನು
ಮೂರಾರೇಳೆಂಟ್ಹತ್ತರಿ ಹದಿನಾರು
ಆರೆರಡೊಂದಾದ ನಾದ ಪ್ರಣಮದಿವುದಿಸೊ ||1||
ಆಟ ಬಿಡಿಸಿ ಭವದಾಟ ಕೆಡಿಸಿ |
ಶಿವನಾಟಕ್ಹಂಸನೇರೊ ನೆಲೆದಿಳಿಸೊ
ಕುಟಿಲ ಕಪಟ ಹಟ ಸಟಿಯನು ಮಾಡು ದಿಟ
ಪಟುತರ ಯೋಗದಿ ಮನ ಘಟಿಸೊ
ಬೂಟಾಟಕ ಕಡಿ ಥೇಟ ಬಾಟ ಹಿಡಿ ಸೂಟಿಲಿ
ಶಶಿಧರ ಮಠ ದಿಟ್ಟಿಸೊ ಅಷ್ಟದಳದಿಗಟ್ಟಿ ಸೃಷ್ಟಿನೀಲ ಮುಟ್ಟಿ
ಸ್ಫಟಿಕ ಪೀಠದಿ ಸೋಮ ಕೋಟಿ ಪ್ರಕಟಿಸೊ ||2||
ಆಧಾರ ಸಾಧನದಿರಿಸಿ ಸ್ವಾಧಿಷ್ಟದಿ |
ಸದಮಣಿಪೂರದಿ ಹದಗೊಳಿಸೊ
ಶೋಧನದಿಂದನಾಹತವ ಶೋಧಿಸಿ
ಶುದ್ಧವಾದ ವಿಶುದ್ಧದಿರಿಸೊ
ಸಿದ್ಧಪ್ರಸಿದ್ಧಗ್ನಿ ಬೌದ್ಧನೆ ಬುದ್ಧಿಯಯಿ ದ್ವಯವುದಿಸೆನ್ನುದ್ಧರಿಸೊ
ಸದ್ಯ ಸಾಸಿರದಳ ಚರಣ ಕಮಲಕ್ಕೆ ನಾ
ಬಿದ್ದು ಬೇಡುವೆ ಕರಿಘೂಳಿ ಭಕ್ತಿ ಹುದುಗಿಸೊ ||3||
ಸಲಹು ಸದಾ ಭಕ್ತರ
ಸಲಹು ಸದಾ ನೀ ಭಕ್ತಪಾಲಯ |
ಬಾಲಿಂದುಧರಾಯ ಸಲಹು ಸದಾ ನಿನ್ನ ಭಕ್ತರ
ದುರ್ಜಾಲ ಗುಣಗಳನೆಣಿಸದೆ ಭವದಿ
ಕಾಲಪಾಶವ ಹರಿ ಸುಶೀಲ ತ್ರಿಶೂಲಕರಧರ ಪಾಲಿಸುರಾಯ ||ಪಲ್ಲ||
ಹಿಂದೆ ನಾನಾ ಜನ್ಮಗಳು ತಿರುಗಿ ನಾ |
ಬಂದೆನು ಮರಗಿ ಇಂದುಧರ ನಿನ್ನ ನೆನವು ಮರಿಯಾಗಿ
ಬಂಧುರ ಮಾರನು ಬಂಧನದೊಳಗ
ಬಂಧಿಸುವನು ಬಂದು ಬಿಡಿಸೋಹಂ
ಕಂದುಗೊರಳ ನಿನ್ನ ಕಂದ ದಯಾಳನೆ
ಇಂದು ಕೈ ಬಿಡದಿರು ಕಂದರ್ಪಹರಾಯ ||1||
ಪರ ಧನವ ಪರ ನಾರಿಯರ ವರಸಿ |
ಗುರುಹಿರಿಯರ ಪರಕಿಸಿ
ಪರರಗೀಪರಿ ಶರೆಯೊಳುರುಳಿಸಿ
ಉರಿವ ಕರ್ಮೇಂದ್ರಿಯಗಳ
ಆಶಿಸಿ ಸೊರಗಿ ಕೊರಗಿರುವೆನು ಘಾಸಿ
ಘೋರದುರಿತ ದೂರ್ಮಾಡೊ ಪರಮಹರ
ಕರಿ ಚರ್ಮಾಂಬರ ತಾರವರಧರಾಯ ||2||
ಸತ್ಯ ವಚನಗಳಾಡದಿರುತಿರುತ |
ಅಸತ್ಯದ ತನುವ ನಿತ್ತವೆಂದು ಮತ್ತೆ ನಂಬುತ
ಸತ್ತು ಚಿತ್ತಾನಂದ ನಿನ್ನ
ಗೊತ್ತನರಿಯದೆ ವ್ಯರ್ಥ ಕೆಡುವೆ
ನನ್ಹೆತ್ತಪಿತ ಮೋಕ್ಷಿತ್ತು ರಕ್ಷಿಸು
ಕರ್ತು ಶ್ರೀಗುರು ಕರಿಘೂಳೀರಾಯ ||3||
ಸಾಂಬಶಿವನೆನು
ಸಾಂಬಶಿವನೆನು ಮಾನವಾ |
ನಂಬಿಗೆಯಲಿ ಸದಾ ಸಾಂಬ
ಕುಂಭಿನಿ ಹೆಮ್ಮೆಯ ಹಂಬಲ ಬಿಡು ನೀ ಅನುದಿನವಾ ||ಪಲ್ಲ||
ನರ ಮಾಂಸಸ್ಥಿಯ ಶ್ವೇತ ಸೇರಿ ಶೋಣಿತಪಿತ್ಥ |
ಸ್ಥಿರವಿಲ್ಲೀತನುಜಾತ ಮರಣಾಗದ ವರ ಕೊಡುವಾ ||1||
ಧನ ವನಿತೆಯ ಸೂನುರನು ಘನವೆನದಿರು ನೀನು |
ಅನುದಿನ ಮನದೊಳು ಚಿನುಮಯನ ನೆನೆದನುವಾ ||2||
ಹಿಂದಿನ ಪುಣ್ಯದಿ ಬಂದು ನರ ಜನ್ಮದಿ |
ಯಿಂದುಧರ ಕರಿಘೂಳಿದಂದುಗ ಕಳಿಯುವಾ ||3||
ನೋಡಬಾರದೆ ನೀ
ನೋಡಬಾರದೆ ನೀ ದಯ ಮಾಡಬಾರದೆ |
ಬೇಡಿಕೊಂಬೆ ನಿನ್ನಡಿಗಳಿಡಿದು ಸದಾ ||ಪಲ್ಲ||
ಮೂಢರು ಬಿಡದನುದಿನದಿ ಕಾಡ್ವರು |
ಕೋಡಿಹ ಗುಣ ಕಿಡಿಗಣ್ಣಿಂದಲಿಡಿ
ಬಿಡದೆ ಬಿಡಿಸು ಕಡಿಸೊಡರು ಯಡರು ಜಾಡಿ
ಬೇಡುವೆ ಮೃಢ ಧೃಢಹಿಡಿದು ಸಡಗರದಿ ||1||
ವಸುಧಿಯ ಕಸಿಬಿಸಿ ಮುಸುಗಾಸಿರುವದು |
ಮಾಸಿಸು ಶಶಿಧರ ಬಿಸಜಾಕ್ಷಿಂದಲಿ
ಆಶೆ ಹರಿಸು ಪರಮೇಶ ಗಿರೀಶನೆ
ಸೂಸುವ ನಾಶಿಕವಾಸ ನೀನಲ್ಲವೆ ||2||
ಧರಿಹಿರಿಯನೆ ಖರೆ ಕಿರಿದಾಗಿರುವದು |
ಮಾರನಂತರಿ ಉರಿನೇತ್ರದಿಂದಲಿ
ಘೋರದುರಿತ ದೂರ್ಮಾಡೊ ಪರಮ ಹರ
ದಾರಿದೋರೊ ತಾರವರಧರನಲ್ಲವೆ ||3||
ಇಂದುಧರನೆ ಭವಬಂಧನ ನಂದಿಸೊ |
ಕಂದುಗೊರಳ ಸಣ್ಣ ಕಂದ ದಯಾಳನೆ
ಮಂದಮಾರುತ ಮಹೇಂದ್ರ ಜಾಲ್ಹರಿ ರವಿ
ಚಂದ್ರ ಕೋಟಿ ಪ್ರಭೇಂದ್ರನಲ್ಲವೆ ||4||
ಇಳಿಯ ಕಾಳ ಸುತ್ತುಳಿಯದು ತನು ಘನ |
ಬೋಳ ಶಂಕರ ಭಾಳಾಕ್ಷ ಕಾಪಾಡೊ
ತಾಳ ಝಾಂಗುಟಿ ಸಮ್ಯಾಳ
ರಾಜ್ಹಳ್ಳಿಲಿರೊ ಬಾಲನ ಸಲಹು ಕರಿಘೂಳಿ ನೀನಲ್ಲವೆ ||5||
ಶ್ರೀ ಗಣನಾಯಕನೆ ಶರಣು
ಶ್ರೀ ಗಣನಾಯಕನೆ ಶರಣು ಶರಣು |
ಶರಣು ಪಾಹಿಮಾಂ ಗಿರಿಜಾತೆ ನಂದನ ||ಪಲ್ಲ||
ಮೂಷಕ ವಾಹನನೆ |
ಸುರಪೋಷಕ ನಿನ್ನಾಶಿಸಿರುವೆ
ಪೋಷಿಸೆನ್ನ ಕ್ಲೇಶರಹಿತ
ಈಶಗೂಸೆ ಪಾಹಿಮಾಂ ಗಿರಿಜಾತೆ ನಂದನ ||1||
ಲಂಬೋದರ ನಿನ್ನ ದಿವ್ಯಪಾ |
ದಾಂಬುಜಗಳ ನಂಬಿರುವೆ
ಸಂಭ್ರಮಾಂಬ ಹಿಂಬಾಲಿಸು
ಶಂಬಾಂಬುಜ ಪಾಹಿಮಾಂ ಗಿರಿ ||2||
ವಿದ್ಯೆಕಧಿಕಾರನೆ ಸದಸು |
ಬುದ್ಧಿಯ ನಿರ್ಧರಿಸೊ
ಸದ್ಯ ನಿಮ್ಮ ಪಾದಕೆ ನಾ
ಬಿದ್ದು ಬೇಡುವೆ ಪಾಹಿಮಾಂ ಗಿರಿ ||3||
ಕರಿಶಿರ ಕರಿವದಸುರ |
ವರಪೊರಿ ಕರಿವೀರನನುಜ
ನಿರುತ ಚರಣ ಸ್ಮರಣಿಗೈವೆ
ಮರೆಯದಿರೆನ್ನ ಪಾಹಿಮಾಂ ಗಿರಿ ||4||
ಓಂಕಾರ ಅಂಕಿತ ಶಿವ |
ಶಂಕರ ಹರ ಕಿಂಕರ ನಿನ್ನ
ಶಂಕರಿಸು ಪಂಕಜಜಾಕ್ಷಿ
ಕರಿಘೂಳೀಶ ಪಾಹಿಮಾಂ ಗಿರಿ ||5||
ಘನಪದವಿ ನಿಜವಾ
ಓಂ ನಮಃ ಶಿವಾಯನುವಾ |
ಹೇ ಮನವಾ ಮನದನುದೀ ನುಡಿಸೆ
ಘನ ಪದವಿ ನಿಜವಾ ||ಪಲ್ಲ||
ಜಪತಪ ಹೋಮ ನೇಮ ಉಪವಾಸ ವ್ರತವ್ಯಾಕೊ |
ಆಪಾನವಿಡಿದಾ ಜೀವ ಗುಪಿತದಿ ಜಪಿಸುವಾ ||1||
ಕುಟಿಲ ಕಪಟ ಹಟ ಸಟಿಯನು ಮಾಡೊ ದಿಟ |
ನಿಟಿಲ ದೃಷ್ಟಿಯ ನೀಡೊ ಸೃಷ್ಟೀಶ ಕಾಣುವಾ ||2||
ನಾರಿ ಪುತ್ರ ಬಾಂಧವ ಸ್ಥಿರವಿಲ್ಲ ನೋಡೊ ಜವ |
ಶರೆ ಪರಿಹರಿಸುವ ಸ್ಮರವೈರಿ ಕಾಯುವಾ ||3||
ಕಂದಮೂಲ ಸೇವಿಸಿ ಕಂದರ ವಾಶಿಸಿ |
ಇಂದೂರು ಬಿಡಲ್ಯಾಕೊ ಚಂದ್ರಧರ ಕಾಯುವಾ ||4||
ಸುರಮುನಿ ಹರಿಹರಾಜ ಸ್ಮರಿಸಿದರಿದರನ್ನೆ |
ಕರಿಘೂಳಿ ಚರಣ ಸೇವೆ ಮರೆಯದಿರುಸುರುವಾ ||5||
ಬಸವ ಜಗದೀಶ
ಬಸವ ಜಗದೀಶ ಪೋಷಿಸೊ |
ಶಿಶುವಿನಾ ಕಾಲಪಾಶರಿಸೊ ||ಪಲ್ಲ||
ಆವಾಗಲು ಸ್ಮರಿಸುವೆ ನಾನು |
ದೇವಾಧೀದೇವ ನಿಮ್ಮ ನಾಮ
ಕಾವುದೈ ಕಂದನ ನಿಮ್ಮ
ತವಿಸು ಭಯ ಜವದಿ ಮಹಾಮಹಿಮಾ ||1||
ಮೂರು ಲೋಕಕ್ಕೆ ನೀ ಕರ್ತ |
ಕಾರಣ ಸ್ಮರಿಸುವೆನು ಚರಣ
ಕರುಣದಿ ನೋಡೋ ಶಿವಶರಣ
ತರುಳನ ಶರೆಯ ಹರಿಸಿನ್ನು ||2||
ಬಸವ ನಿನ್ನಾಮ ಉಚ್ಚಾರಗೈಯಲು |
ದೋಷ ಪರಿಹಾರ ಈ ಸಮಯದಿ
ಬಾರೊ ಬಾ ಧೀರ ವಿಷಮ
ಪುಸಿ ತ್ಯಜಿಸೊ ಶಿವಶರಣ ||3||
ಬಾ ಗುರುಬ್ರಹ್ಮ ರೂಪನೆ |
ಸಾಗುರು ಸಾಂಬ ರೂಪನೆ
ವರ ಗುರುವಿಷ್ಣು ರೂಪನೆ
ಭಕ್ತರ ಸಲಹು ಸದಾಶಿವನೆ ||4||
ಆಶೆ ಮಾಡಿರುವೆ ನಿನ್ನ ಪಾದ |
ನಿನ್ನ ಕೂಸಿನೆಮಬಾಧೆ
ಘಾಸಿಸು ಕರಿಘೂಳೀಶ ಭೇದ
ನಿರುತುಪದೇಶೀಸೊ ನಿಜ ಬೋಧ ||5||
ಶ್ರೀಗುರು ಜಯತು
ಶ್ರೀಗುರು ಜಯತುಮಾಂಗ |
ಬೇಗನೆ ಬೀರಿ ಕೃಪಾಂಗ ಅಂಗಜ ಮದಹರ
ಗಂಗಾಧರ ಸಂಗನ ಶರಣರ ಸುಭಾಂಗ
ಮಂಗಳಾತ್ಮ ನಿಸ್ಸಂಗ ನಿರುಪಕೋಟಿ
ತಿಂಗಳ ಪ್ರಭೆ ಧವಳಾಂಗ ||ಪಲ್ಲ||
ಶೇಷಭೂಷ ಶಶಿವಾಸ |
ಸೂಸುವ ನಾಶಿಕವಾಸ್ಕಳಿ ದೋಷ
ಇಸಮಯದಿ ನಿನ್ನ
ಧ್ಯಾಸದೊಳಿರಿಸಿ ಪೋಷಣ ಮಾಡು ಸರ್ವೇಶ ||1||
ಆವಾಗಲು ಶಿವ ಸೇವೆಯಲಿರಿಸು |
ಭಾವಭರಿತನೀಯೀವ
ಕಾವದು ಭಕ್ತರ ಜೀವೋದ್ಧಾರನೆ
ಭವ ಭಯ ಕಳಿ ಮಹದೇವ ||2||
ಭೋಗಭಾಗ್ಯ ಸುಖವಾಗಿ ಇರಿಸು |
ಶಿವಯೋಗದೊಳಗೆ ಮನವಾಗ
ನಾಗಭೂಷಣ ಶಿರಬಾಗಿ ಬೇಡುವೆನು
ಶೀಘ್ರದಿ ಕಾಯೊ ಬಾಲರಿಗೆ ||3||
ಪಕ್ಷಿವಾಹನ ಪ್ರಿಯ ತಕ್ಷಕ ಭರಣ |
ದಕ್ಷ ಶಿಕ್ಷ ಫಾಲಾಕ್ಷ
ಮೋಕ್ಷದಾಯಕ ವಿರುಪಾಕ್ಷ
ಶ್ರೀ ಕರಿಘೂಳೆಪೇಕ್ಷಿಸಿರುವೆ ಕೊಡು ಮೋಕ್ಷ ||4||
ಪಾಲಯಮಾಂ ಶ್ರೀಗುರುವೆ
ಪಾಲಯಮಾಂ ಶ್ರೀಗುರುವೆ |
ನಿನ್ನ ಬಾಲಕರನು ಎಡೆಬಿಡದಲಿ ಕರುಣದಿ
ಕಾಲಕಂಧರ ಕಾಲಸಂಹರ
ಕಾಲಕಾಲನೀನಿರುಳ್ಹಗಲಾ ಪಾಲ ||ಪಲ್ಲ||
ಶ್ರವಣ ಮನನ ನಿಧಿ ಧ್ಯಾಸದೊಳಗೆ |
ಭಾವ ಆವಾಗಲು ತವಿಯದೆ
ಸ್ಥಿತವಾಗಿರಿಸು ಶಿವಯೋಗದೊಳಗೆ ಮನವ
ದೇವ ಭಕ್ತರು ಸಲಹುವ
ಜೀವದುದ್ಭಾವಗಳೆಣಿಸದೆ ಕಾವದು ದೇವ
ಝಾವಝಾವ ನಿನ್ನ ಸೇವೆಯೊಳಿರಿಸೊ
ದೇವ ಭವ ಭಯಕಳಿ ಮಹದೇವ ಪಾಲ ||1||
ಅಂಡಪಿಂಡ ಬ್ರಹ್ಮಾಂಡದಿ ನೌಖಂಡದಿ |
ಮಂಡಿತನಾಗಿ ತುಂಡತಂಡ ಮಾರ್ತಂಡನೆ ಅಖಂಡ
ಮಂಡೆ ಬಾಗಿಸಿ ಗಜ ಹಿಂಡುಗಳನು
ಕೋದಂಡದಿ ದಂಡಿಸು ಗಂಡರ ಗಂಡ
ಖಂಡದಿರುವೊ ಬ್ರಹ್ಮಾಂಡವ ಖಂಡಿಸು
ದಂಡನಾಯಕ ವೈರಿಕರ ಹಿಡಕೊಂಡು ಪಾಲ ||2||
ತುಂಟರೆಂಟು ಮಂದಿರುವರು ಮಹಾಭಂಟ |
ನಿನ್ನಂಟಿ ತಿರುಗುವರಂಟಿ ಪೊರೆಯೊ ನಿಜಕುಂಠ ನೀಲಕಂಠ
ಎಂಟು ಮಂಟಪದಿ ಘಂಟೆಯ ನುಡಿಸುತ
ವಂಟಿಯಾಗಿರುವನೀ ಭಂಟರ ಭಂಟ
ಜಂಟೆ ಸ್ವರಗಳೊಳಂಟಿಯಿರುವ ವೈಕುಂಠಪತಿಯೇ
ಪತಿ ಬಿಡು ಭವಗಂಟ ಪಾಲ ||3||
ಮೊಟ್ಟ ಮೊದಲು ನಾ ನಿನಗೆ ವಚನ ಕೊಟ್ಟ |
ನಾ ಬಿಟ್ಟರೆ ಬಿಟ್ಟ ಸೃಷ್ಟಿಗೀಶ ಬೆನ್ನಟ್ಟಿ ಸುಮತಿ ಕೊಟ್ಟ
ಕಟ್ಟಕಡಿಗೆ ನಿನ್ನ ದಿಟ್ಟಪಾದದಿ ಮನ ಘಟ್ಟಿಯಾಗಿ
ಎನ್ನ ನಿಲ್ಲಿಸು ಶ್ರೇಷ್ಠ ಇಷ್ಟ ಪ್ರಾಣ ಭಾವ
ದೃಷ್ಟಿಯನಿಟ್ಟ ನಿಷ್ಠಿವಂತನೆ ನೀ ಕರುಣಿಟ್ಟ ||4||
ದಕ್ಷ ಶಿಕ್ಷಪಿತ ಪಾಲಾಕ್ಷಿರುಪಾಕ್ಷ |
ಅಧೋಕ್ಷಜ ಚಕ್ಷವಪೇಕ್ಷಿಸಿ ಪುಷ್ಪವಗೈಸಿದಿ ನೀರಕ್ಷ
ಪಕ್ಷಿವಾಹನ ಸತಿ ಲಕ್ಷ್ಮಿಪ್ರಿಯ ಪತಿ
ಕಕ್ಷಬೇಡ ನಿನ್ನ ಭಿಕ್ಷುಕನಕರಿ ಮೋಕ್ಷದಾಯಕ
ವಿರುಪಾಕ್ಷ ಶ್ರೀಕರಿಘೂಳಿ ಪೇಕ್ಷಿಸಿರುವೆ ಕೊಡು ಮೋಕ್ಷ ||5||
ಎಂಥ ಒಳ್ಳೆ ಪ್ರಿಯೆ
ಎಂಥ ಒಳ್ಳೆ ಪ್ರಿಯೆ ದೊರೆತಾನೆ |
ಎನ್ನಂತರಂಗದ ಅಂತು
ತಿಳುಹಿದ ಅಂತಕಾಂತಕನೆ ||ಪಲ್ಲ||
ಎಂಥ ವಳ್ಳೆವ ಪ್ರಿಯ ದೊರೆತ ಕಾಂತೆ |
ಕೇಳೆ ಮೂರು ಜಗದಿ ಭ್ರಾಂತಿ
ಹಿಡಿಸುವ ಅಣ್ಣ ತಮ್ಮರ ಭ್ರಾಂತಿ
ಬಿಡಿಸಿದ ಶಾಂತ ತಾನೆ ||1||
ಬಿಟ್ಟು ಎನ್ನರಘಳಿಗಿಯಿರಲಾರ |
ಎನ್ಮುಟ್ಟಿ ಮುಟ್ಟದೆ ಬಟ್ಟ ಬಯಲಲಿ
ಮಲಗುವನು ಧೀರ ಹೊಟ್ಟಿಲಿ ಹುಟ್ಟಿದ ಕೆಟ್ಟ ಶಿಶುಗಳ
ಕಷ್ಟವಿಲ್ಲದೆ ನಷ್ಟಗೊಳಿಸಿ ಕಟ್ಟ ಕಡಿಗೆಟ್ಟ
ಮಕ್ಕಳೆಂದರೆ ಹುಟ್ಟಿ ಹುಟ್ಟಿಲ್ದಂತೆ ಮಾಡಿದ ||2||
ಆರಿಗಾದರು ನೋಡಗೊಡಲಾರ |
ಆರಮನಿಯ ಬಾಗಿಲ ಹೊರಗಿನರಮನಿಗ್ಹೋಗಗೊಡಲಾರ
ಬಾರಿ ಬಾರಿಗು ತನ್ನ ನಾಮಸ್ಮರಣೆ ಚರಣಾ ಸೇವೆಗೈಸಿ
ಊರ ಸಂಗತಿ ಮರೆದು ನೆರೆಮನೆ ತಿರುಗದೆಯಿರು ಅಂತಾನಮ್ಮಾ ||3||
ಒಡವಿ ವಸ್ತ ಶಿಸ್ತಿಲಿಟ್ಟಾನೆ |
ಉಡುಲಾಕ ಯಾರ್ಯಾರ್ಹೆಸರುಯಿಡದ ಮಡಿಯ ಕೊಟ್ಟಾನೆ
ಮಡಿಯು ಪಂಚಭೂತದೆಳೆಗಳು ಬಿಡದೆ
ಎಂಭತ್ತುನಾಲ್ಕಲಕ್ಷವು ದೃಢದಿ ಅಳತೆಯ ಮಾಡೆನಂದರೆ
ಮೃಢನಿಗರಿಯದೆ ಪೊಡವಿಗಲ್ಲವು ||4||
ಈ ಸುಮಯದೆನ್ನದರಿಗಿರುಹುವನೆ |
ಭವದೋಷ ದೂಷಿಸಿ ಈಶ ತಾ
ಸಂತೋಷಗೊಳಿಸುವನೆ ಏಸು ಜನ್ಮದಿ ಜನಿಸಿ
ಎನ್ನನು ಕೂಸಿನಂತೆ ಪಾಡಿ ಕರಿಘೂಳೀಶ ಗುರುವು
ಪೋಷಿಸುವನು ಖಾಸಜನಕನಾದಿ ಪ್ರೀಯನು ||5||
ಕಾಣಲಿಲ್ಲ ಗುರುವಿನ
ಕಾಣಲಿಲ್ಲ ಕಾಣಲಿಲ್ಲವೊ |
ಅಣುರೇಣು ಗುರುವಿನ
ಕಾಣಲಿಲ್ಲ ಕಾಣಲಿಲ್ಲ ಗುರುವಿನ ನರರು
ಮಾಣಲಿಲ್ಲ ಮಾಯ ಭ್ರಮಿಗಳೂ
ನಾನಾ ಜನ್ಮವ ತಿರುಗಿ ತಿರುಗಿ
ಮಾನವ ಜನ್ಮದಲಿ ಮೋಕ್ಷವು ಕಾಣ ||ಪಲ್ಲ||
ಜ್ಞಾನ ಭಕ್ತಿ ತಿಳಿದು ನಿತ್ಯ |
ದಾನ ಧರ್ಮವಗೈದು ಪರಶಿವ
ಧ್ಯಾನದಲ್ಲಿ ತನುವು ಮರಿದಾನಂದ
ಸೌಖ್ಯ ಹೊಂದಿದ ನರರು ||1||
ಯೋನಿಯೊಳಗೆ ಜನಿಸಿ ಮೂತ್ರ |
ಯೋನಿಗೆ ಮೋಹಿಸಿ ಹೊಲಸು
ಯೋನಿ ಮರ್ಮವು ತಿಳಿಯದಲೆ
ಮತಿಹೀನರಾಗ್ಹೋಗುವ ನರರು ||2||
ಜಾರ ಚೋರ ಕೃತಕವಾಚರಿಸಿ
ಭಾರಿ ದ್ರವ್ಯ ಹೂಳಲು ಘಳಿಸಿ
ಸಾರಿಯಮನರಿಯಳದೊಯ್ವಾಗ
ಭೂರಿ ದ್ರವ್ಯವು ಆರಿಗಹುದೊ ||3||
ಆಸೆಯೆ ಬಹು ಮೋಸವೆನಿಪುದು |
ಮೋಸವೇ ಯಮ ಪಾಶವೆನಿಪುದು
ಪಾಶದೊಳಗೆ ಈಸಿ
ಹೊರಳಿ ನಾಶವಾಗ್ಹೋಗುವ ನರರು ||4||
ಹಿತದಿ ಸತಿಸುತರೆನ್ನವರೆಂದು |
ಸತತ ನುತಿಸಿ ಎತಿಸುತಿಹರು
ಪತಿಯ ಜವ ನಿನ್ನತಿ ವ್ಯಥೆ ಮತಿಸುವಾಗ
ಹಿತ ಸತಿಸುತ ಗತಿ ಜತಿಯಾರಿಲ್ಲವೊ ||5||
ಭೂತ ಪಂಚಕ ದೇಹವಿದು |
ಸುಜಾತ ಶ್ರೀಗುರು ಕರಿಘೂಳೀಶಗೆ
ನೀತಿಯಿಂದಲಿ ಅರ್ಪಿಸಿ ನಿಜ ಅವ
ಧೂತ ಜಾತವು ಮಥಿಸರವರು ||6||
ಸಾಧು ಶಿವಯೋಗಿ ಬಂದ
ಸಾಧು ಶಿವಯೋಗಿ ಬಂದ ನೋಡಮ್ಮಾ |
ಸಾತ್ವೀಕದವನ ಪಾದಪೂಜೆಯ ಮಾಡಬೇಕಮ್ಮಾ
ಸಾಧು ಶಿವಯೋಗಿ ಬಂದು ಭಕ್ತರ
ಬಾಧೆಗಳನು ತ್ಯಜಿಸಿ ನಿಜ ಪ್ರಸಾದವಿತ್ತು ಬ್ರಹ್ಮಾಜ್ಞಾನ
ಬೋಧೆಗೈದು ಸಲಹುವದಕೆ ||ಪಲ್ಲ||
ಆದಿ ಅಂತ್ಯವಿಲ್ಲದವನಮ್ಮಾ |
ಅನಾದಿ ವಸ್ತು ಶೋಧ ಮಾಡಿದ ಸುಂದರಾನಮ್ಮಾ
ವಾದಭೇದ ಮರೆದು ತನ್ನೊಳು
ನಾದಬಿಂದು ಕಳೆಯ ತಿಳಿದು
ಮೋದದಿಂದ ಮೋಕ್ಷ ಸತಿಯ
ವಿನೋದಗೂಡಿದ ಜ್ಞಾನಪುರುಷನು ||1||
ಯೋಗನಿದ್ರೆಯ ತಿಳಿಸುವಾನಮ್ಮಾ |
ಬೇಗನೆ ನಿನ್ನಯ ರಾಗದ್ವೇಷ ನಿಲಿಸಿ ನೋಡಮ್ಮಾ
ಯೋಗ ಭೋಗಗಳರಿವನರುಹಿಸಿ
ರೋಗ ಆಗಳೆಲ್ಲ ತಗಿಸಿ
ಭೋಗ ವಿಷಯಗಳೆಲ್ಲ ನೀಗಿಸಿ
ಸಾಗಿ ಪೋಗುವ ಮಾರ್ಗದೋರುವ ||2||
ಎಷ್ಟು ಮಾಡಿದರಿಷ್ಟೆ ಸುಖವಮ್ಮಾ |
ಏನಿಲ್ಲಯಿದರೊಳು
ನಷ್ಟ ಸಂಸಾರಕಿಷ್ಟು ಭ್ರಮಿಯಮ್ಮಾ
ಎಷ್ಟೊ ಕಷ್ಟದಿಂದಲರ್ಥವು
ನಿಷ್ಠಿಯಿಂದಲಿ ತಾ ಸಂಪಾದಿಸಿ
ಅಷ್ಟರೊಳು ತಾ ಹೋಗೊ ವ್ಯಾಳ್ಯಾ ಹುಗಿ
ದಿಟ್ಟ ದ್ರವವು ಆರಿಗಹುದೊ ||3||
ಕೇಳಿದಾಗಲೆ ಒಳ್ಳೆದೆಂಬುವರೊ |
ಕಲಿಮಾಯ ಕತ್ತಲಿ ಕವಿದು
ಮನೆಯೋಳ್ಮರಿದು ಮಲಗುವರು
ವ್ಯಾಳ್ಯ ವಾಳ್ಯದಿ ಯಾವ ವ್ಯಾಳ್ಯವೂ
ಹೇಳದೆ ತಾ ಹೋಗೊಕಾಲದಿ
ಗೋಳಿಡುತ ಅಮ್ಮಪ್ಪನೆಂದರೆ
ಕಾಲಮೃತ್ಯವು ಗೆಲಿಸುವ ಶಿವ ||4||
ಭೂತ ಪಂಚಕ ತೋಟ ನೀಟಮ್ಮಾ |
ಈ ತೋಟದೊಳಗಿರೊ
ಮರ್ಕಟೊಂದನು ಕಟ್ಟಬೇಕಮ್ಮಾ
ನೀತಿಗಳು ತಾವ್ಹೇಳೊ ವಚನವು
ನೀತಿಯಿಂದಲಿ ನಡಿಯದೆ ಯಮ
ದೂತರ ಕರ ಸಿಲ್ಕಿ ನರಕ
ಯಾತನೆಗೆ ಹೇತುವಾಗಿಯಿರಸಿದ ||5||
ತಿಳಿದು ತಿಳಿಯರು ಮರುಳು ಜನರಮ್ಮಾ |
ಇನ್ನೇನು ಮಾಡಲಿ ತಿಳಿದು ತಿಳಿದರೆ
ಸತ್ಯ ಶರಣಮ್ಮಾ ತಿಳಿದ ಶ್ರೀಗುರು ಕರಿಘೂಳೀಶನ
ತಿಳಿದು ಚರಣ ಸೇವೆ ಮರೆಯದೆ
ತಿಳಿದು ಅಳಿದು ಉಳಿದು ಹೊಳೆಯಲು
ಬೆಳಗಿನೊಳು ನಿರ್ಬೈಲನಾದ ||6||
ಗುರುರಾಯನ್ಹೊರತು ಆರು ದೈವವು
ಆರದೈವವು ಆರಿಗೇನು ಗುರುತು |
ಗುರುರಾಯನ್ಹೊರತು ಆರು ದೈವವು
ಆರಿಗೇನು ಗುರುತಾರು ಪೇಳಲು ಆರು ಸಾಧ್ಯವು
ಆರುಮೂರನು ಅರಿತು
ಮಹಾ ಮೇರು ಶಿಖರದಿರುವನ್ಹೊರತು ||ಪಲ್ಲ||
ತರುಳ ಮಾರ್ಕಂಡೇಯಗೊರವಿತ್ತು |
ಹದಿನಾರು ವರುಷ ಸಮರಣ ಜನನ ಬ್ರಹ್ಮ ಬರಯಿತ್ತು
ಶ್ರೀಗುರು ನಾರದರ ಬೋಧವ
ಅರುವಿನಲಿ ತಾನರಿತು ಭೇದವ
ಮಾರಸಂಹರನೊರವ
ಪಡಿದಾಪಾರ ಮಹಿಮಾನಾದ ತುರುತೊ ||1||
ಸತ್ಯ ಹರಿಶ್ಚಂದ್ರಾನು ತಾನರಿತು |
ಸತ್ಯವು ಬಿಡದಾ ಸತ್ಯ ನುಡಿಗಳು ನುಡಿಯಲಿಲ್ಲಿನಿತು
ಸತ್ಯ ನುಡಿದದರಿಂದ ಸತಿಸುತ
ಮಿಥ್ಯರಾಗಿ ಮತ್ರ್ಯದೊಳಗೆ
ಸತ್ತ ಪ್ರೇತಗಳಿಡುವ ಪೃಥ್ವಿಯ
ಸತ್ಯದಿ ಕಾಯುವದಾಯ್ತು ||2||
ಧರಿಯೊಳಿರೊ ಕರಿಪುರವರ ಧಾತು |
ಧೊರಿ ಧರ್ಮರಾಜನು ಮರಿಯದಲೆ
ಧರ್ಮದಲಿ ನಡಿದಾಯ್ತು
ಕುರುಪಾಂಡವರು ಆಡಿ ಲೆತ್ತ
ಸರ್ವರಾಜ್ಯವು ಸೋಲದಾಯ್ತು
ಎರಡಾರೊರುಷಾರಣ್ಯದಿರುತ
ತಿರಿದು ಮನಿಮನಿ ತಿರುಗೊದಾಯ್ತು ||3||
ನಾನಾ ಜನುಮ ಜನಿಸಿ ಬರೋದಾಯ್ತು |
ಇನ್ನೇನು ಹೇಳಲಿ ಮಾನವ ಜನ್ಮದಲಿ
ಗುರು ದೊರೆತು ಜ್ಞಾನಭಕ್ತಿ ತಿಳಿಸಿ
ನಿತ್ಯಧ್ಯಾನದೊಳು ನೀಧಾನವಿಡಸಿದ
ಜ್ಞಾನಮೂರುತಿ ಕರಿಘೂಳೀಶನ
ಧ್ಯಾನದೊಳು ಸುಜ್ಞಾನವಾಯ್ತು ||4||
ಓ ದೇವ ನಿನ್ನ ಪಾದ ದರುಶನದಿ
ಓ ದೇವ ನಿನ್ನ ಪಾದ ದರುಶನದಿ |
ನಾ ಧನ್ಯನಾದೆನೊ ||ಪಲ್ಲ||
ಕಾಮಕ್ರೋಧ ಹೋಮ ನೇಮ ಪಾಮರ್ಹರಸಿದಿ |
ತಾಮಸಾಂಕುರವ ತರಿದು ಪ್ರೇಮದೋರಿದಿ
ಕಾಮೇಶ ಉಮೇಶ ಭೀಮೇಶ
ಕಾಮ ಸಂಹರನೆ ನಿನ್ನ ನೇಮವಿಡಿಸಿದಿ
ವಾಮ ಭಾಗದಿರವೊ ಸೋಮಧರನ ತೋರಿದಿ ||1||
ಅಂಗನಿಯರ ಹಂಬಲವನು ಭಂಗಗೊಳಿಸಿದಿ |
ಸೂಕ್ಷ್ಮಾಂಗದಿರುವೊ ಅಂಗನೀಯ ಭಂಗಗೊಳಿಸಿದಿ
ಶಿವಭಂಗ ಭವ ಭಂಗ ನಿಜಲಿಂಗ
ಶೃಂಗಾರದ ರಂಗುಮಂಟಪದಿ ನಿಲಿಸಿದಿ
ಕಂಗಳೂರಿನಲ್ಲಿ ಮಂಗಳಾತ್ಮನ ತೋರಿದಿ ||2||
ಕಂಡ ನೋಟಗಳನು ಬಿಡಿಸಖಂಡದೋರಿದಿ |
ಮಾರ್ತಂಡ ತೇಜ ಕುಂಡಲಿಯ
ಅಂಡನರುಹಿದಿ ಅಂಡಾಂಡ ಪಿಂಡಾಂಡ
ಬ್ರಹ್ಮಾಂಡ ಮಂಡಲೀಶ ಪುಂಡ ಕರಿಘೂಳೀಶ ಅರಿಸಿದಿ
ಕಂಡೆನಂಡ ಪಿಂಡದೊಳ್ ಬ್ರಹ್ಮಾಂಡವಿರಿಸಿದಿ ||3||
ಒಮ್ಮೆ ಓಂ ನಮಃಶಿವಾ ಎನಲು
ಓಂ ನಮಃ ಶಿವಾಯನುವಾ ಹೇ ಮನವಾ |
ಓಂ ನಮಃ ಶಿವಾಯೆಂದು ಒಮ್ಮೆ ನೀನೆನಿಯಲು
ಉನ್ನತ ಪದವೀವ ಹೇ ಮನವಾ ||ಪಲ್ಲ||
ಆರ್ಗುಣ ಅರಿದು ಮೂರ್ಗುಣ ಬಿರಿದು |
ಆರಕ್ಷರದಿಯಿರುವಾ ಹೇ ಮನವಾ ||1||
ಆರು ಚಕ್ರದ ಮ್ಯಾಲ ಬ್ಯಾರೊಂದು ಮನಿನಡು |
ಸೂರ್ಯಪ್ರಕಾಶನ್ಹೊಳೀವಾ ||2||
ಸಂಸಾರದೊಳಿರೊ ಸಂಶಯವೆಲ್ಲವು |
ಧ್ವಂಸ ಮಾಡಿತಲಿರುವಾ ||3||
ಗಂಗೆ ಯಮುನೆ ಮಧ್ಯ ಸಂಗಮದೊಳಗಿದ್ದ |
ಮಂಗಳಾತ್ಮಕ ನುಡಿವಾ ||4||
ಅಕಾರ ಉಕಾರ ಮಕಾರ ಸಕಾರದ |
ಝೇಕಾರೋಂಕಾರ ನಾದವಾ ||5||
ಅಕ್ಷರತ್ರ ಯನಾದ ಅಕ್ಷರರ್ಥವುನಾದ ಅಕ್ಷಾರಶೂನ್ಯ ಶಿವಾ |
ಮೀರಿದುನ್ಮನಿಯೊಳು ಸೇರಿರು ನೀ ಸದಾ ಧೀರ ಕರಿಘೂಳಿವುಸುರುವಾ ||6||
ಶ್ರೀಗುರುವಿನ ನೋಡೊ
ಶ್ರೀಗುರುವಿನ ನೀ ನೋಡೊ ಮನವೇ |
ಶ್ರೀಗುರುವಿನ ನೋಡೊ ||ಪಲ್ಲ||
ಭೋಗ ಭಾಗ್ಯ ಸ್ಥಿರವಾಗಿಯಿರಿಸು ಶಿವ |
ಯೋಗದೊಳಗೆ ಮನವಾಗು ಮನವೆ
ಶ್ರೀ ತತ್ವ ತತ್ವ ವಿಚಾರಿಸು ಸತ್ಯ
ತತ್ವದೊಳಗೆಯಿರುವಾ ಹತ್ತಾರು ಕಳೆಗಳೊತ್ತಿ
ನಿನ್ನ ಮನ ಚಿತ್ತದೊಳಗೆ ಬೆರಿವಾ
ಹತ್ತು ನಾದದ ಧ್ವನಿ ಮೊತ್ತ ಕೇಳುತಲಿರು
ಸತ್ತು ಚಿತ್ತಾನಂದ ಕಾಣುವ ಮನವೆ ಶ್ರೀ ||1||
ಶ್ರವಣ ಮನನ ನಿಧಿ ಧ್ಯಾಸದೊಳಿರಲು |
ಝಾವ ಝಾವಕ್ಕೆ ಬರುವಾ
ಆವಾಗಲು ಗುರುಸೇವೆಯೊಳಿರು ಶಿವ
ನಾವಾಗಲು ಬರುವ
ಕಾಯುವ ಭಕ್ತರ ಜೀವೋದ್ಧಾರನು
ಜೀವ ಶಿವ ಏಕೋಭಾವದಿ ಮನವೆ ಶ್ರೀ ||2||
ಸಪ್ತ ಸಮುದ್ರದ ಮಧ್ಯದಿ ತಾನು |
ಗುಪ್ತನಾಗಿರುವ ಹತ್ತೆಂಟು ಸಪ್ತ ಚೌಕಿಯ
ಪೈರ ಸುತ್ತಲೆಯಿಟ್ಟಿರುವಾ
ಹತ್ತೆಂಟು ಜವಾನರ ವತ್ತಿ ಪ್ರಭೆಯೊಳೆತ್ತಿ
ಮುತ್ತಿನೊಳಗ ಥಳಥಳ ಹೊಳಿತಿರುವಾ ಶ್ರೀ ||3||
ಗಂಗೆ ಯಮನೆ ಸರಸ್ವತಿಯ ಸಂಗಮದಿ |
ಸಂಗಮೇಶನಿರುವಾ
ಕಂಗಳ ಮಧ್ಯದಿ ರಂಗುಮಂದಿರದಿ
ಮಂಗಲಾತ್ಮನಿರುವಾ
ಮಂಗನಂದದಿ ಭವಭಂಗ ಬಡುವದ್ಯಾಕೊ
ಅಂಗಜಮದಹರ ಅಂತರಂಗದಿಯಿರುವಾ ಶ್ರೀ ||4||
ಈಡಪಿಂಗಳ ನಡುನಾಡಿ ಸುಷುಮ್ನದಿ |
ರೂಢಿಗೀಶನು ಮೆರೆವಾ
ಎಡೆಬಿಡದಲೆ ಸಡಗರದಿ ನಡಿಸೊ ಸೋಹಂ
ಮೃಢನೆಡೆ ಬಿಡದಿರುವಾ
ಬಡಿವಾರವ ಬಿಡು ದೃಢದಡಿಗಳನಿಡಿ
ಬೇಡು ಬೇಡು ಪದವ ಕೊಡುವನು ಮನವೆ ಶ್ರೀ ||5||
ತಾಳ ತಂಬೂರಿ ಸಮಾಳ |
ಸಮ್ಯಾಳದಿ ಲೋಲನಾಗಿರುವಾ
ವ್ಯಾಳ್ಯ ವ್ಯಾಳ್ಯಕೆ ಬಿಡದಲೆ ನುಡಿಯಲು
ಭಾಳಾಕ್ಷನಿರುವಾ
ಮೆಲ್ಲಮೆಲ್ಲನೆ ಮನ ಅಲ್ಲೆ ನಿಲ್ಲಿಸಲಾಗ
ಅಲ್ಲಮಹಾಪ್ರಭುಯೆಲ್ಲರಲ್ಲಿ ಮನವೆ ಶ್ರೀ ||6||
ಮೂರಾರೆರಡ್ಹತ್ತನ್ನೆರಡ್ಹದಿನಾರು |
ಎರಡೊಂದೆ ಮನದಲ್ಲಿ
ಪರಿಪರಿಯಲಿ ಪರಿಪೂರ್ಣ ಜ್ಯೋತಿಯದು
ಸಾವಿರ ದಳದಲ್ಲಿ ಕರಿಘೂಳೀಶನ ನಿಜ
ನಿರ್ಗುಣ ಪಥದಲ್ಲಿ ಸರ್ವಾಕಾರ
ನೋಂಕಾರನು ಮನವೆ ಶ್ರೀ ||7||
ಅಂಡನಾದವ ತಾನೆ
ಶ್ರೀಗುರುವಿನ ಮಹಿಮಾ ಗೋಚರಿ ಗೋಚರವೊ |
ಅಂಡನಾದವ ತಾನೆ ಪಿಂಡನಾದವ ತಾನೆ
ಅಂಡಪಿಂಡದ ನಡು ಬ್ರಹ್ಮಾಂಡಾದವ ತಾನೆ
ಖಂಡಿತಾಖಂಡ ತಾನೆ ಶ್ರೀ ||ಪಲ್ಲ||
ಅಕಾರಾದವ ತಾನೆ ಉಕಾರದವ ತಾನೆ |
ಮಕಾರದವ ತಾನೆ ಸಕಾರಾದವ ತಾನೆ
ಝೇಂಕಾರರೋಂಕಾರ ತಾನೆ ಶ್ರೀ ||1||
ಬ್ರಹ್ಮನಾದವ ತಾನೆ ಬ್ರಹ್ಮ ವಿಷ್ಣುವು ತಾನೆ |
ಬ್ರಹ್ಮರಿರುದ್ರ ತಾನೆ ಬ್ರಹ್ಮಸದಾಶಿವ ತಾನೆ
ಬ್ರಹ್ಮಪರಬ್ರಹ್ಮ ತಾನೆ ಶ್ರೀ ||2||
ವಿಘ್ನಾದವ ತಾನೆ ನಿರ್ವಿಘ್ಮನಾದವ ತಾನೆ |
ಪ್ರಜ್ಞಾನಾದವ ತಾನೆ ಸುಜ್ಞಾನಾದವ ತಾನೆ
ಮಗ್ನ ಸರ್ವಜ್ಞನಾದವ ತಾನೆ ಶ್ರೀ ||3||
ಗುರುವಾದವ ತಾನೆ ಗುರುವಿಗೆ ಶಿಷ್ಯನು ತಾನೆ |
ಗುರುವಿನ ಗುರುವು ತಾನೆ ಗುರು ಪರಮಗುರುವು ತಾನೆ
ಗುರುವು ಕರುಘೂಳಿ ತಾನೆ ಶ್ರೀ ||4||
ಉಪದೇಶವ್ಯಾತಕೆ
ದೇಶವ್ಯಾತಕೆ ಗುರುವುಪದೇಶವ್ಯಾತಕೆ |
ಆಶೆ ತಪಿಸಿ ಶಿವನಾಸಿಸದವನಿಗೆ ||ಪಲ್ಲ||
ಗುರುಹಿರಿಯರ ಕಂಡು ಚರಣಕೆ ಎರಗದೆ |
ಗುರುವಿಗೆ ತಿರುಮಂತ್ರೇಳುತ
ಬರೆ ಆರು ಶಾಸ್ತ್ರಗಳು ಕೇಳುತ ತಾ
ಸರ್ವರೊಳಗೆ ಹಿರಿಯನಾಗುತ
ಪರನಾರಿಯರವಾರಿ ನೋಟಕ ಮರುಳಾಗಿ
ಪರಿಭವ ಶರಧಿಯೊಳುರುಳುವ ಮರುಳಗೆ ||1||
ವಸುಧಿಯ ಕಸಿಬಿಸಿ ವಿಷಯದಿ ಮುಳಗುತ |
ಪುಸಿನುಡಿಗಳ ಸದನಾಡುತ
ವಿಶ್ವಾಸಘಾತಕರೊಳು ಕೂಡುತ
ಹೊಸ ವಶಿಕರ ವಶವನು ಮಾಡುತ
ಸೂಸುವ ನಾಶಿಕ ಶ್ವಾಸದಿ ಈಶನ
ಧ್ಯಾಸವು ನಡಿಸದೆ ಘಾಸಿಯಾದವನಿಗೆ ||2||
ತತ್ವ ತತ್ವಾದಿ ಸತ್ಯ ತತ್ವವ ಶೋಧಿಸಿ |
ಭಕ್ತಿ ಜ್ಞಾನ ವಶ ಮಾಡದೆ
ಹತ್ತೆಂಟು ಮದಗಳನು ದೂಡದೆ
ಸಪ್ತೇಳು ವ್ಯಸನ ಹಾಳು ಮಾಡದೆ
ತತ್ತರವಿಲ್ಲದುತ್ತರ ದ್ವಾರದಿ ಮನ
ಚಿತ್ತವು ನಿಲಿಸದ ಸತ್ಯ ಮನುಜನಿಗೆ ||3||
ಬಡಿವಾರದಿ ಬಿರುನುಡಿಗಡನಾಡುತ |
ಬಿಡದಲೆ ಜಡರೊಳು ಕೂಡುತ
ಮೃಢನಡಿಯ ಸೇವಕರಿಗೆ ಕಾಡುತ
ಸಡಗರದಿ ಕೈಹೊಡಿದ್ಹಾಸ್ಯ ಮಾಡುತ
ತಡಿದೀಡಪಿಂಗಳ ನಡುನಾಡಿ ಸುಪುಮ್ನದಿ
ರೂಢಿಗೀಶನ ಕೂಡದ ಮೂಢಗೆ ||4||
ಆದಿವೇದದ ಬೋಧ ಕೇಳದನುದಿನ |
ನಿಧಾನದಿ ಸಾಧನ ಮಾಡದೆ
ನಾದಬಿಂದು ಕಳೆಯೊಳಗೆ ಕೂಡದೆ
ವಾದಭೇದ ಕಡಿಗೆ ನಿಲುಕಾಡದೆ
ಮೋದದಿಂದ ಪರದ್ಹಾದಿದೋರಿಸುವ
ಸಾಧು ಕರಿಘೂಳಿ ಪಾದ ನಂಬದ ಅಧಮಗೆ ||5||
ಗುರುವಿನ ಸೇವೆ ಮಾಡೊ
ಗುರುವರನ ಸೇವೆ ಮಾಡೊ |
ನರಮನುಜ ಮರಿಯಬ್ಯಾಡೊ ಓಂ ಗುರು ||ಪಲ್ಲ||
ಪೂರ್ವದ ಪುಣ್ಯದಿಂದೆ |
ಅರಿವಿನ ಜನುಮದಿಂದೆ
ಧರಿಯೊಳಗೆ ಜನಿಸಿ ಬಂದೆ
ಹರಯೆನು ಸದಾ ಹರುಷದಿಂದೆ ಓಂ ||1||
ತಾಯ್ತಂದಿ ರಕ್ತಶ್ವೇತ |
ಮಾಯದಿಂದ ಶರೀರವಾಯ್ತು
ಕಾಯ ಸ್ಥಿರವಲ್ಲ ಜಾತ
ಆಯಾಸವಿಲ್ಲ ತ್ವರಿತ ಓಂ ||2||
ವಾದ ಭೇದ ಕಡಿಗೆ ಮಾಡೊ |
ಅದೆ ನಿನಗೆ ಮುಂದೆ ಕೇಡೊ
ಸಾಧು ಸೇವೆ ಮಾಡಿ ಬೇಡೊ
ನಿಜಬೋಧ ಶ್ರವಣ ಮಾಡೊ ಓಂ ||3||
ದಾನ ಧರ್ಮ ನಿಧಾನ ಮಾಡೊ |
ಜ್ಞಾನ ಭಕ್ತಿ ಮನ ನೀಡೊ
ಹೀನಜನರ ಸಂಗ ಬ್ಯಾಡೊ
ಮನದಲ್ಲಿ ಮನೆಯ ಮಾಡೊ ಓಂ ||4||
ವೈರಾಗ್ಯ ದಾರಿ ನೋಡೊ |
ಮೀರೀದ ಪದವಿ ಬೇಡೊ
ಕರುಘೂಳಿ ಪಾದದೊಳಾಡೊ
ನಿರುತದಿ ಮೋಕ್ಷ ನೋಡೊ ಓಂ ||5||
ಕಾಯರಹಿತ ನಿರ್ಮಾಯ
ಕಾಯರಹಿತ ನಿರ್ಮಾಯ ಪರಿಭವ |
ಭಯ ದೂರನಾಗುವದ್ಯಾಂಗಮ್ಮಾ
ಆಯಸಿಲ್ಲದ ಜೀವ ಜಪಿಸುವ ಮಂತ್ರದಿ
ನ್ಯಾಯದಿ ಕೂಡಲು ಹೀಂಗಮ್ಮಾ ||ಪಲ್ಲ||
ಅಷ್ಟಮದೇಳ್ವೆಸನ ನಷ್ಟಗೈದು |
ಶ್ರೇಷ್ಠ ಸೃಷ್ಟಿ ಕಷ್ಟ ಕಳಿವದ್ಯಾಂಗಮ್ಮಾ
ನಿಷ್ಠಿಯಿಂದ ಪವನ ದೃಷ್ಟಿಯನಟ್ಟಿರಲು
ಸೃಷ್ಟೀಶನ ಭೆಟ್ಟಿ ಹೀಂಗಮ್ಮಾ ||1||
ಮೂರಾರು ಅರಿಯದ ಆರು ವರ್ಗಂಗಳ |
ಮೀರಿಹೋಗುವ ದಾರಿ ಹ್ಯಾಂಗಮ್ಮಾ
ಮೂರಾರು ಮೇಲಿರೊ ಅರಮನೆ ಸೇರಲು
ಪುರಹರನರಿವದು ಹೀಂಗಮ್ಮಾ ||2||
ತಾನು ತನ್ನನು ತಿಳಿದು ತಾ ಬ್ರಹ್ಮನಾಗದೆ |
ನಾನೆಂಬೊದಳಿಯುವದ್ಯಾಂಗಮ್ಮಾ
ಮಾಣದೆ ಧ್ವನಿ ಸಣ್ಣ ಕಣ್ಣಾಲೆ ನಿಲ್ಲಿಸಲು
ತಾನೆ ತಾನಾಗುವದ್ಹೀಂಗಮ್ಮಾ ||3||
]ಇಂದ್ರಜಾಲ ದಶಯಿಂದ್ರಿಯಗಳು |
ನೌರಂಧ್ರ ಬಂಧಿಸುವದ್ಯಾಂಗಮ್ಮಾ
ಇಂದ್ರ ದಿಕ್ಕಿನ ರವಿಚಂದ್ರದಿ ಸೇರಲು
ರಾಜಯೋಗೀಂದ್ರನಾಗುವದ್ಹೀಂಗಮ್ಮಾ ||4||
ವಾದ ಭೇದಗಾದ ಮೋದ ನಿಲ್ಲಿಸಿ |
ಪರದ್ಹಾದಿಗ್ಹೋಗುವ ಹಾದಿ ಹ್ಯಾಂಗಮ್ಮಾ
ಆದಿನಾದ ಪ್ರಣಮ ಸಾಧನೆಗೈಯಲು
ಸದ್ಗುರುವಿನ ಕೂಡುವದ್ಹೀಂಗಮ್ಮಾ ||5||
ಅಂತರಂಗರಿಯದ ಪಂಥ ಬಿಡಿಸಿ |
ಸದಾ ಶಾಂತನಾಗುವ ಬಗಿ ಹ್ಯಾಂಗಮ್ಮಾ
ಅಂತಃಕರುಣ ಸುರುಗುರು ಕರಿಘೂಳಿಯ
ಹಂತಿಲಿ ಸೇರಲು ಶಾಂತಮ್ಮಾ ||6||
ನಿಜ ಗುರುವು ದೊರೆತ ಮೇಲೆ
ನರಜನ್ಮದೊಳು ನಿಜ ಗುರುವು ದೊರೆತ ಮೇಲೆ |
ಪರಿಭವ ಶರಧಿಯೊಳುರುಳುವರೇನೊ
ಪೂರ್ವ ಸುಕೃತದಿಂದ ಸಿರಿ ಬರಲದು ಉಣದೆ
ತಿರುತಿರುಗಿ ಮನೆಮನೆ ತಿರಿದುಂಬುವರೇನೊ ||ಪಲ್ಲ||
ಗುರುವುದೋರಿದ ಮೋಕ್ಷದೆರಡಕ್ಷರಿರಲಿಕ್ಕೆ |
ಬರಿದೆ ಆರು ಶಾಸ್ತ್ರ ತೋರುವರೇನೊ
ಮೂರಾರು ಸ್ಥಲ ಮೀರಿದರ ಮನೆ ಸೇರಿರಲು
ಮೂರಾರು ಪುರಾಣಕ್ಕಾರೈಸುವರೇನೊ ||1||
ಚಿತ್ತ ಚಿನ್ಮಯನ ಬೆನ್ನತ್ತಿ ಹತ್ತಲು ಮನ |
ಮತ್ತೆ ಅತ್ತಲು ಇತ್ತ ಚಿತ್ತಾಗ್ವರೇನೊ
ಹತ್ತು ನಾದದ ಮೊತ್ತ ಸತ್ಯ ಕೇಳುತಯಿರಲು
ಸತ್ತು ಹುಟ್ಟುತೆ ಸಾವು ಎತ್ತಣದಿನ್ನು ||2||
ಸೂಸೊ ನಾಶಿಕ ಶ್ವಾಸದೀಶ ವಾಸಾಗಿರಲು |
ದೇಶ ಕಾಸಿಗಾಸಿ ಘಾಸ್ಯಾಗ್ವರೇನೊ
ಹಸನಾದ ಗುರು ಉಪದೇಶಿಸಿದ ಮೇಲೆ
ವಿಷಯ ಬಯಸಿ ಈಸಿ ಮೋಸಾಗ್ವರೇನೊ ||3||
ಚಕ್ಷು ರೂಪದೊಳಗಿರೊ ನಿಕ್ಷೇಪೇಕ್ಷಿಸುತಿರಲು |
ಪಕ್ಷಿವಾಹನಪ್ರಿಯನೀಕ್ಷಿಸುವರೇನೊ
ಮೋಕ್ಷದಾಯಕ ಕರಿಘೂಳಿ ಸಾಕ್ಷಾತಿರಲು
ಮೋಕ್ಷಪೇಕ್ಷದಿ ಭೀಕ್ಷ ಬೇಡುವರೇನೊ ||4||
ಬಿಡು ಚಿಂತೆ ಮನುಜಾ
ಬಿಡು ಚಿಂತೆ ಯಾಕೆ ಮನುಜಾ |
ಜಗದೊಡೆಯನಿರುವ ಸಹಜ ಓಂ ||ಪಲ್ಲ||
ಯಿಂದೆಮಗೆ ಸಹಾಯರಿಲ್ಲ |
ಯೆಂದೆನುತ ಬಳಲೊದಲ್ಲ
ಚಂದಾದಿ ಪೋಷಿಸಬಲ್ಲ
ಇಂದುಧರನು ಮರೆಯೋಣಿಲ್ಲ ಓಂ ||1||
ನಾರಿಸುತರು ಗತಿಯಿಲ್ಲೆಂದು |
ವರಲುವದು ಏನು ಛಂದೊ
ಮಾರಹರನೆ ಭಕ್ತ ಬಂಧು
ಪುರಹರನ ಸ್ಮರಿಸೊ ನಿಂದು ಓಂ ||2||
ಅಡವಿಗಿಡ ಪ್ರಾಣಿಗಳಿಗೆಲ್ಲ |
ಬಿಡದುಣಿಸಿ ತಣಿಪನಲ್ಲ
ಸುಡುಸೂಡೊ ನಿನ್ನ ಸೊಲ್ಲ
ಮೃಡಕರಿಘೂಳಿಯಿರುವನಲ್ಲ ||3||
ಘನಪದ ಕೈವಲ್ಯವೊ
ಓಂ ನಮಃ ಶಿವಾಯಯೆಂದು ಒಮ್ಮೆ ನೀ ನೆನೆಯಲು |
ಆ ಮಹ ಘನಪದ ಕೈವಲ್ಯವೊ
ಹಮ್ಮಿನಿಂದ ಪರ ಬ್ರಹ್ಮದೊರಿವನಲ್ಲ
ಸುಮ್ಮನ ಕೂಡುವದಿದು ಥರವೊ ||ಪಲ್ಲ||
ಹಿಂದಕ್ಕೆ ವಿಂಧ್ಯಾದ್ರಿ ಮಂದಮತಿವ್ಯಾಧನು |
ಬಂದ ಮೃಂಗಗಳೆಲ್ಲ ವಧಿಸುತಲು
ಬಂದ ಶಿವರಾತ್ರಿದಿನ ಶಿವನೆಂದು ನೆನೆಯಲು
ಅಂದು ಶಿವಧೂತರವನ ಕೊಂಡೊಯುತಲಿ ||1||
ಶ್ವೇತನೆಂಬುವ ಪ್ರಖ್ಯಾತಿ ಭೂಪತಿ ನಿತ್ಯ |
ಭೀತಿಯಿಲ್ಲದೆ ಜಾತಕಮಲಗಳ
ಆತುರದಲ್ಲಿ ಶಿವನಿಗರ್ಪಿತ ಎನಲಾಗ
ಶ್ವೇತಾನ ಶಿವದೂತ ಕಾದರೇಳೊ ||2||
ತರುಳ ಮಾರ್ಕಂಡೇಯಗೊರುಷ |
ಹದಿನಾರಿರಲು ದುರಿಳೆ ಯಮಪಾಶಾಕೆ ಎಳೆಯುತಿರೆ
ಹರಗುರು ಭವಹರ ಗುರುವೆಂದ ತರುಳಗೆ
ಪರಮ ಪದವಿ ಕೈಸೇರಿತಲಿ ||3||
ಸತಿಸುತರೀಭವ ನಿತ್ಯವೇನು ನಿನಗೆ |
ಎತ್ತಣ ಭಯಪುರ ಹರನಿರಲು |
ಪೃಥ್ವಿಯೊಳತ್ಯಧಿಕ ಸತ್ಯ ಶ್ರೀ ಕರಿಘೂಳಿ
ಗೊತ್ತಿಸಿರುವ ಗುಪ್ತ ಪಥದಲ್ಲಿ ||4||
ತೀರ್ಥಯಾತ್ರೆಗೈವದೇತಕೊ
ತೀರ್ಥಯಾತ್ರೆಗೈವದೇತಕೊ |
ಗುರು ಗುರ್ತಿನೊಳಗಿರಬೇಕೊ ಓಂ ||ಪಲ್ಲ||
ಪರಸತಿಯ ಧನ ಅಪಹರಿಸಿ |
ಪರನಿಂದೆಗಳನು ಬೆಳಸಿ
ಪರರೊಳಗೆ ಶ್ರೇಷ್ಠನೆನಿಸಿ
ಪರಿಭವದ ಸುಖವ ಬಯಸಿ ಓಂ ||1||
ಅಕಾರ ಉಕಾರ ಮಕಾರದಿಂದೆ |
ಓಂಕಾರನಾದ ಬಿಂದೆ
ಅಕಚಟತಪಯಸಂದೆ
ಸಕಾರ ಕಳೆದಿನಿಂದೆ ಓಂ ||2||
ಹಟಕುಟಿಲ ಕಪಟದಿಂದೆ |
ಸಟೆ ನಟಿಸಿ ದಿಟಯಿದಂದೆ
ಪಟುಭಟದಿ ನಟಿಸೆನಂದೆ
ದಿಟ ಸಟಿಯು ಸ್ಪಟಿಕ ಮುಂದೆ ಓಂ ||3||
ಮೂರಾರು ಏಳೆಂಟ್ಹತ್ತರಿದು |
ಮೂರಾರು ಚಕ್ರ ಮರೆದು
ತಾರವರನ ಬೆಳಗಿಲುಳಿದು
ಸ್ಥಿರ ಪರಮನೊಳಗ ಬೆರೆದು ಓಂ ||4||
ಈಡಪಿಂಗಳದಾದಿ ತಡೆದು |
ನಡುನಾಡಿ ನೋಡಿ ಹಿಡಿದು
ಬಿಡದೆ ನುಡಿ ಪ್ರಣಮ ಜಡಿದು
ಮೃಢ ಘೂಳಿ ಪಾದ ಪಿಡಿದು ಓಂ ||5||
ಹಿಂದಿನ ಶರಣರ ನಿಂದಿಸಿದ
ಹಿಂದಿನ ಶರಣರ ನಿಂದಿಸಿದ |
ಮಂದಮತಿಗ್ಯಾವ ಬಂಧನ ಹೇಳಯ್ಯ
ಎಂದಿಗು ಅಂದದ ದಂದುಗದೊಳು
ಮಹಾಂಧ ಹಂದ್ಯಾಗುವ ಕೇಳಯ್ಯ ||ಪಲ್ಲ||
ಪತಿವ್ರತೆಯರ ವ್ರತ ಗತಿಗೆಡಿಸಿದ |
ಘನ ಘಾತಕಗ್ಯಾತರ ಶಿಕ್ಷೆ ಹೇಳಯ್ಯ
ಗತಿಯಿಲ್ಲದ ಮತಿಹಿತ ಹೀನನಾಗುತ
ಕೋತಿ ಜಾತ್ಯಾಗುವ ಕೇಳಯ್ಯ || ||1||
ಕೂಡಿದ ಸತಿಪತಿ ಬಿಡಿಸಿದ ಮೂಢಗೆ |
ರೂಢಿಯೋಳ್ಯಾಜಾಡಿ ಹೇಳಯ್ಯ
ಕಾಡಡವಿಲಿ ದೊಡ್ಡ ಬಡಗಿಡನಾಗುತೆ
ಜಡ ಕಾಲಕಳಿಯುವ ಕೇಳಯ್ಯ || ||2||
ಭವಭವದೊಳು ಹುಟ್ಟಿ ಶಿವ ನೆನಿಯದ |
ಮಾನವಗ್ಯಾವ ಭವಣಿಯು ಹೇಳಯ್ಯ
ಭವದೊಳು ರವಿಚಂದ್ರರಿರುವ
ತನಕಲು ರವರವ ನರಕವು ಕೇಳಯ್ಯ || ||3||
ಅರುವಿನ ನರಜನ್ಮ ಜನಿಸಿ ಶ್ರೀಗುರು ಚರಣ |
ಮರೆದರ್ಯಾದಾರಿ ಕರಿಘೂಳಯ್ಯ
ಪರಮಪಾವನ ಪರಬ್ರಹ್ಮನೋಳ್ಸೇರಿರು
ಮುರುಗೀಂದ್ರ ದಾರ್ಯವರಿಗಿಲ್ಲಯ್ಯ || ||4||
ಯಾತಕ್ಕೆ ಚಿಂತಿಯ ಮಾಡುವೆ
ಯಾತಕ್ಕೆ ಚಿಂತಿಯ ಮಾಡುವೆ ಎಲೆ ಮೂಢ |
ಪತಿತ ಪಾವನ ಗುರುಪಾದ್ಹಿತದಿ ಕೊಂಡಾಡೊ
ಸತಿಸುತರ್ಹಿತಕ್ಕಾಗಿ ವೃಥ ವ್ಯಥೆ ಬಿಡುಬ್ಯಾಡೊ
ಹಿತವಾದ ಪಥ ಸತತ ಶಾಂತನೊಡಗೂಡೊ ||ಪಲ್ಲ||
ಸಣ್ಣದು ದೊಡ್ಡದೆಂದೆಣಿಸಿ ದಣಿಯಲಿಬ್ಯಾಡ |
ಸಣ್ಣನಾದ ಬಿಂದು ಕಳೆಯೊಳಗಾಡೊ
ಸಣ್ಣ ಕುಂಬಾರನ ಗಡಿಗಿ ಶಬ್ದಕ್ಕೆ
ಮುಕ್ಕಣ್ಣ ಕುಣಿದ ಕಣ್ಣಾರೆ ನೀ ನೋಡೊ ||1||
ಸಡಗರ ಸಂಪತ್ತು ದೃಢವೆಂದಡರಲಿ ಬೇಡ |
ಝೆಡೊದ್ಹಿಡಿದೆ ಯಮದೂತರ್ಹೊಡಿವಾಗಿಲ್ಜೋಡೊ
ತಡಿದೀಡಪಿಂಗಳ್ನಡುನಾಡಿ ಸುಷುಮ್ನದಿ
ರೂಢಿಗೀಶನ ಕೂಡ್ಯಾಡಿ ನೀ ನೋಡೊ | ||2||
ಮೂರಾರೇಳೆಂಟ್ಹತ್ತರಿದಾರಿ ಸೇರಲು |
ಮಾರಾರಿ ಕರಪಿಡಿವ ಪರಿಹಾಸ್ಯ ಬೇಡೊ
ಪರಮ ಪರತರ ಪೂರ್ಣ ನರಮನಿ ಸೇರಲು
ತಾರಕ ಬ್ರಹ್ಮನ ನಿನ್ನೊಳೊಡಗೂಡೊ ||3||
ಚಕ್ಷುಪದೊಳಗಿರೊ ನೀಕ್ಷೇಪೇಕ್ಷಿಸಲಾಗ |
ಪಕ್ಷಿವಾಹನ ಸಖನಾಕ್ಷದಿ ಮೂಡೊ
ಮೋಕ್ಷ ಗುರುವು ಸಾಕ್ಷಾತ ಕರಿಘೂಳಿರಲು
ಮೋಕ್ಷಪೇಕ್ಷದಿಂದೆ ಯೀಕ್ಷಿಸುವರೇನೊ ||4||
ಎಂಥ ಸೋಜಿಗವಾಯಿತು
ಎಂಥ ಸೋಜಿಗವಾಯಿತೇಳಮ್ಮಾ |
ಯಿಂದರಂತರಂಗದ ಅಂತು ತಿಳಿದರೆ ಶಾಂತ ತಾನಮ್ಮಾ
ಪಂಥವಿಲ್ಲದೆ ನರಸಂತಿಗೆ ಬಂದು
ಮನ ಭ್ರಾಂತಿ ಕಳಿದರಿದರಂತು ತಿಳಿಯುವದು
ಅಂತುಯಿಂತು ಎಂತಾದಯೆನುವದೇಕಾಂತದಿ
ನೋಡು ನಿನ್ನಂತಿಲದಮ್ಮಾ ||ಪಲ್ಲ||
ಕೋಣಗಳೆಂಟು ನೊಣವಂದು ಕಾಣಿಸಿತೋ |
ಆ ನೊಣವು ಕಂಡು ಕೆಣಕಿ ರಣದೊಳ್ಹಗರಣಾಗಿತ್ತೊ
ಆ ನೊಣವು ತನ್ನ ಗೆಣಿಯ ಗೌಳಿಯಗ್ಹೇಳಿ ಕರೆತಂತೊ
ಸಣ್ಣದಾದ ನೊಣ ಒಂದು ಬಾಣದಲಿ ಕೋಣಗಳನು
ನಿತ್ರಾಣ ಮಾಡಿಗಿಣಿ ಬಾಣದ ಕಳೆಯೋಳ್ಪ್ರಾಣ ಬಿಟ್ಟವು
ಪ್ರವೀಣನಾದ ನೊಣ ಈ ಹರಣ ಗೆದ್ದಿತೊ ||1||
ಇಲಿಯು ಒಂದು ಮಾರ್ಜಾಲವನೇರಿತ್ತೊ |
ಆ ಇಲಿಯ ಕಂಡು ಹುಲಿಗಳೇಳರ ಬಲವನಡದಿತ್ತೊ
ಆ ಇಲಿಯು ತನ್ನ ಗೆಳೆಯ ಸ್ವಾನುಭಾವಗೆ ಕರತಂತೊ
ಬಾಲ ಕುರಿಗಳ ನೋಡಿ ಹುಲಿಗಳ ಕಾಲು ಕೈಗಳು
ಮೊದಲಿಗ್ಹೋದವು ಏಳಲಾರದಾತುರ ಮರಿ
ಬೇಗ ಬಂದಿಲಿ ಹುಲಿಗಳ ನೋಡದಾನಂದವಾಯಿತು ||2||
ಎಂಟುಮಂಟಪ ನಡುಗಂಟಿಯ ನುಡಿತಿತ್ತೊ |
ಆ ಗಂಟಿಯ ನಾದ ಮನ ಅಂಟದ ನೆಲೆ
ಮೂಲೋಕುಂಟು ಮಾಡಿತ್ತೋ ಟೆಂಟಿಣಿಸಿ
ಜಂಟಿ ಸ್ವರಗಳಂಟಿ ಮೂಲೋಕುಂಟು ಮಾಡಿತ್ತೋ
ಕುಂಟ ಕಿವಿಲ್ಲದಲುಂಟು ಕೇಳಿ ವೈಕುಂಠಕ್ಹೋಗಿ
ಭವ ಕಂಟದಾಟಿದನು ಭಂಟನಾದ ಕರಿಘೂಳಿ
ನಾಂಟಿಸಿದನುಂಟು ಮಾಡಲು ತನ್ನಂಟಿರುತಿತ್ತು ||3||
ಎಲ್ಲಿ ನೋಡಿದರಲ್ಲಿ ಅಲ್ಲಮ
ಎಲ್ಲಿ ನೋಡಿದರಲ್ಲಿ ಅಲ್ಲಮನಿರುತಿರೆ |
ಇಲ್ಲಲ್ಲಂಬುವರಿವರ್ಯಾರೊ
ಕಲ್ಲಿನಂತ ಮನ ಬೆಲ್ಲ ಮಾಡಿ
ಶಿವ ನಿನ್ನಲ್ಲಿ ತೋರುವರಿವರ್ಯಾರೊ ||ಪಲ್ಲ||
ವಿಷಯಾಶಿಸಿ ಘಾಶಾಗದು |
ಕಂಡುಪದೇಶಿಸಿ ಬಿಡಸಿದವರ್ಯಾರೊ
ಸೂಸುವ ನಾಶಿಕ ಶ್ವಾಸದಿ
ಈಶನ ಧ್ಯಾಸವ ನಡಿಸುವರಿವರ್ಯಾರೊ ||1||
ಗಂಗೆ ಯಮುನೆ ಸರಸ್ವತಿಯ ಸಂಗ |
ಮಹಾಲಿಂಗ ಸ್ನಾನಗೈಯುವರ್ಯಾರೊ
ಅಂಗಮರಸಿ ನಿಜ ಕಂಗೊಳೊಳಗೆ
ಶಿವಲಿಂಗ ಪೂಜೆಗೈಸುವರ್ಯಾರೊ ||2||
ಅಷ್ಟಮದೇಳ್ವೆಸನ ನಷ್ಟ ಮಾಡಿ |
ಸೃಷ್ಠಿ ಶ್ರೇಷ್ಠ ಕಷ್ಟ ಬಿಡಿಸುವರ್ಯಾರೊ
ಅಷ್ಟದಳದಿ ನಿಜಗೊಷ್ಠಿಯ ಕೇಳಿ ಸದಾ
ಸೃಷ್ಟಿಗೀಶನ ತೋರುವರ್ಯಾರೊ ||3||
ಅರ್ತಿಯಿಂದ ಗುರುಪಾದವನರ್ಚಿಸಿ |
ತೀರ್ಥಪ್ರಸಾದ ಪೂರ್ತಿಪರ್ಯಾರೊ
ಮತ್ರ್ಯದಿ ರಾಜಪುರ ಕರಿಘೂಳಿ ಕರುಣವ
ಅರ್ತು ಧ್ಯಾನಿಸುವರಿವರ್ಯಾರೊ ||4||
ಕರ ತಾರೆ ಕಾಮಿನಿ
ಕರ ತಾರೆ ಕಾಮಿನಿ ಕಮಲನಾಭನ ಪ್ರಿಯನ |
ಮರೆದಿರಲಾರೆನು ತೋರೆ ಸುಮನಾ
ಪರಿಪರಿಯಲಿ ಸ್ಮರಶರ ಬಾಧೆಗೊಳಗಾದೆ
ವಾರಿಗವರಿಗೆನ್ನ ದೂರು ಮಾಡದೆ ಸದಾ ||ಪಲ್ಲ||
ಆರಾರಿಲ್ಲದು ಕಂಡು ಆರಮನಿಯೊಳು ಬಂದು |
ವಾರಿಗಣ್ಣಿಲಿಯೆನ್ನ ಶಿರಿ ನೋಡಿದ
ಬಾರೆನ್ನುತಲಿ ತನ್ನ ಕರದಿಂದ ಕರ ಪಿಡಿದ
ಪರಪರಿಯಲಿ ನಿಜ ಬೋಧರುಹಿ ಮರುಳು ಮಾಡಿದ
ಅರಿಯದವಳು ನಾನು ಕರೆದೊಯ್ದ ಮಾಲಿನೊಳಗ
ಗುರು ಕುಚಕುಗುರೊತ್ತಿ ಪರವಶ ಮಾಡಿದವನ ||1||
ಮೆಚ್ಚಿ ಎನ್ನಯ ರೂಪಯಚ್ಚರಗೊಳಿಸಿದ |
ಹುಚ್ಚನಾದೆನು ಅವನ ಆ ನಿಚ್ಚ ನುಡಿಗೆ
ನಿಶ್ಚಯ ಬಿಡದೆ ಕಣ್ಮುಚ್ಚಿ ನೋಡಂದನೆ
ಗಚ್ಚುಟ್ಟ ಸೀರಿ ಗಂಟುಚ್ಚಿ ಸಡಲಿಸಿದನೆ
ಹಚ್ಚಿಯೆದಿಗೆದಿ ಗಲ್ಲಕಚ್ಚಿ ಅಚ್ಚರಿಗೊಳಿಸಿ
ಎಚ್ಚರತಪ್ಪಿ ಶಿವನೆಂಬ್ಹುಚ್ಚು ಹಿಡಿಸಿದವನ ||2||
ಕೆಂಡನಂದದಿ ಗಂಡ ಭಾವಮೈದುನರವರು |
ತಂಡತಂಡದಿ ಷಂಡನಾಗ್ಹೋದರೆ
ಪಂಡಿತ ಮಾವತ್ತೆ ಮುಂಡೆ ಬೋಳಿಸಿಕೊಂಡರೆ
ಅಖಂಡ ಪುರುಷನ ಕಂಡು ಬೇಗನೆ ಕರ ತಾರೆ
ಕೊಂಡೊಯ್ದೆನ್ನ ಮಹಾರ್ತಂಡ ಮಂಡಲ
ಶಶಿಮಂಡಲದಿ ನಿಜ ಸೌಖ್ಯದೋರಿದ ಘೂಳೀಶನಾ ||3||
ಬಾರೊ ಮುರಹರಿಪ್ರಿಯ
ಬಾರೊ ಮುರಹರಿಪ್ರಿಯ ದೂರಲಿರಿಸುವರೇನು |
ಸ್ಮರಶರ ಹರಿಸಿ ಪರಸುರತದೋರೊ
ನೀನಿರದರಘಳಿಗಿರುಲಾರರ ಮನೆಯೊಳು
ಸುರನಾರಿ ಮೊರಿಕೇಳಿ ಕರುಣದಿಂದರ ಮನೆಗೆ ||ಪಲ್ಲ||
ವಾರಿಗಿಯವರೆನ್ನ ಪರಿಹಾಸ್ಯಗೈವರೊ |
ಮೋರ್ಯಾಂಗ ತೋರಲೀಧರೆಯೊಳಿರಲಿ
ಮಾರಮಣಯೆನ್ನ ಮಾರಮಾರನೆ ಬಾರಿಲ್ಲಿ
ಬೆರಿದೆನ್ನ ಬೆದರದಿರೆಂದು ಕರ ಶಿರದಲ್ಲಿ
ಪರಮ ಪರತರನೊಳು ಸೇರಿ ಸುಖಿಸುವೆನೆಂದು
ದೂರದಿರುವಳೆನ್ನಗಾರು ಮಾಡದೆ ಸದಾ ||1||
ಚಿತ್ತದೊಲ್ಲಭ ನೀನು ಇತ್ತಿರದೆ ಅತ್ತಲಿರೆ |
ಹೊತ್ತ್ಯಾಂಗಗಳಿಯಲಿ ಕತ್ತಲೊಳಗೆ
ಮತ್ತೆನ್ನ ಮನದ ಗೊತ್ತು ಬಿತ್ತರಿಸಲಾಗೆ
ಕತ್ತಲ ಹರಿಸಿ ಸೌಖ್ಯದೋರಲಿ ದಾರಿಗೆ
ಮತ್ತು ನೀನಿಲ್ಲದ ಜಾಣಿ ವ್ಯರ್ಥ ಪೃಥ್ವಿಯವಳಗ
ಸಾರ್ಥಕ ಮಾಡು ಜನ್ಮ ಸತ್ತು ಚಿತ್ತಾನಂದ ||2||
ಅಂದ ಚಂದಗಳೆನಗೊಂದು ಬೇಕಾಗಿಲ್ಲ |
ತಂದೆ ತಾಯಿಯು ಬಂಧು ಬಳಗವಿಲ್ಲ
ಬಂಧುರದ ಭಾವ ಮೈದುನರೆಂದಿಗಿಲ್ಲ
ಎನ್ಮಂದಿ ಮಕ್ಕಳು ಮೊದಲೆನಗೆಂದಿಗಿಲ್ಲ
ಹಿಂದೆ ಮುಂದಿಲ್ಲ ಗೋವಿಂದ ನೀನಲ್ಲದೆ
ಅಂದಿಂದೆನ್ನದೆ ಬಾ ಬ್ರಹ್ಮಾನಂದನಂದಾನೆ ||3||
ಎಣ್ಣಿಹೋಳಿಗೆ ಮಾಡಿ ಸಣ್ಣ ಶಾವಿಗಿ ಬಾನ |
ಚಿನ್ನದ ತಳಿಗಿಯಲೆಡಿ ಮಾಡಿದೆ
ಉನ್ನತ ಬೆಣ್ಣಿ ಕಾಸಿದ ತುಪ್ಪ ನೀಡಿದೆ
ಹುಣ್ಣಿವಿಚಂದ್ರ ಬರುತಾನಂತ್ಹಾದಿ ನೋಡಿದೆ
ಬಣ್ಣಗಾರನೆ ನಿನ್ನಧವಳ ಬಣ್ಣೇನು ವರ್ಣಿಸಲಿ
ಕಣ್ಣು ತೆರೆದು ನೋಡಿ ಸಣ್ಣವಳ ಮನೆಗೆ ||4||
ನಿಲಗನ್ನಡಿ ಮೇಲ್ಮಹಲಿನೊಳು ಮಂಚವನ್ಹಾಕಿ
ಮಲ್ಲೀಗಿ ಕಮಲಾಸನ್ಹಾಕಿದ್ದೇನೆ
ಬೆಳಗೂವ ನೀಲ ಜ್ಯೋತೆರಡು ಉಳಸಿದ್ದೆನು
ಸುಳಿಗಾಳಿ ಬರುವೊ ಕಿಡಿಕಿಗಳಿರಿಸಿದ್ದೆನು
ವ್ಯಾಳ್ಯ ವ್ಯಾಳ್ಯದಿ ನಿನ್ನ ಕಳೆಯು ಕಾಣೀಸೊ
ಕರಿಘೂಳೀಶ ಬಾಲಿಯಳೀಗೊಲಿಯೊ ಮರಣ ವಿದೂರ ||5||
ಸುಮ್ಮನಾಗುವದೇನು ನಿಜ ಮುಕ್ತಿ
ಸುಮ್ಮನಾಗುವದೇನು ನಿಜಮುಕ್ತಿ |
ಸುಜ್ಞಾನ ಸುಭಕ್ತಿ || ||ಪಲ್ಲ||
ಹಮ್ಮಿನ ನುಡಿಗಳು ಒಮ್ಮೆ ನೀ ನುಡಿಯದೆ |
ಒಮ್ಮೆ ಓಂ ನಮಃ ಶಿವಾಯ ಎನದೆ
ಸೋಹಂ ಸೋಹಂಯೆಂದು ಮಂತ್ರ ಯೋಗದಲಿ
ಬ್ರಹ್ಮನಾಗಿ ಪರಬ್ರಹ್ಮನೋಳ್ಸೇರದೆ ||1||
ದಿಟವು ಸಂಸಾರೆಂಬ ಹಟ ಬಿಡಸಿ |
ಕಟಿಕಟೆಯನು ತಟಿಸಿ ದಿಟದಿ ಪಟುತರ ನಿಟಿಲ
ಕಟಿತಟಿಸಿ ಕುಟಿಲ ಕಪಟ ಹಟ ಬುಕುಟಿಯ ಮಾಡದೆ
ತುಟಿ ಮಿಸುಕದೆ ನಿಟಿಲಾಕ್ಷನ ಪಠಿಸದೆ
ನಿಟಿಲ ವಾಯ್ಹಟಯೋಗ್ಹಟವನುಗೈಯದೆ
ನಿಟಿಲದೊಳಗೆ ನಿಟಿಲಾಕ್ಷನ ಮುಟ್ಟಿಸದೆ ||2||
ಮೂರಾರರಿ ಶಿರತರಿಯದಲೆ ಮರಿದು |
ಮೂರಾರು ಸ್ಥಲದೊಳಗಿರುವ ಅರಮನೆ
ಅರಸನೋಳ್ಬೆರೆದು ಪರಮನಾದಬಿಂದು ಕಳೆ
ಪರಪರಮನೊಳು ಪರಿಪೂರ್ಣನಾಗಿರದೆ
ಪರಮ ಪರತರ ಕರಿಘೂಳೀಶನ
ಕರುಣ ಮರೆದ ನರ ಮರುಳನಿಗೆ ||3||
ಧರೆಯೊಳು ಸ್ಥಿರವೇನು ಈ ಕಾಯ
ಧರೆಯೊಳು ಸ್ಥಿರವೇನೀ ಕಾಯ |
ಅರಘಳಿಗೆಯಲಾಗೋದನ್ಯಾಯ
ಧರೆಯೊಳು ಸ್ಥಿರವೆ ನೀರಗುರುಳಿಯಿದು
ಮರುಳಿ ಕನಸಿಲಿ ಶಿರಿ ಕಂಡ ಪರಿಯೊ ||ಪಲ್ಲ||
ಆಗಯೀಗ ಯಾವಾಗೇನೊ |
ನಿನಗೋಗದು ತಿಳಿಯದಿಲ್ಲಿನ್ನು
ಯಾವಾಗದರೇನ್ಹೋಗದು ತಪ್ಪದು
ಬೇಗದಿಂದೆ ಶಿವಯೋಗಿಯಾಗು ||1||
ಅಳಿದು ಬಿಡೊ ದುರ್ಗುಣವ |
ಸದಾ ಕೇಳು ನಾದ ಕೊನಿ ಘನವ
ಮೇಲು ಸದ್ಗುರುವಿನ ಕೀಲು ತಿಳಿಯದಲೆ
ಕಾಲವು ಸುಮ್ಮನೆ ಕಳೆಯುವದೇನೊ ||2||
ಶಾಂತ ಮನವು ಸ್ಥಿರಗೊಳಿಸಿ |
ವೇದಾಂತ ವಿಚಾರವ ನಡಿಸಿ
ಅಂತರಂಗದಿರೊ ಅಂತರಾತ್ಮನ
ಪಾದಂತು ಭಜಿಸೊ ನಿರಂತರದಿರುವಾ ||3||
ಸುಖ ದುಃಖೆಂಬಿವು ಎರಡು |
ಯಾವ ಕಾಲದಿ ಇರುವವು ಜೋಡೊ
ಸುಖದುಃಖಯರಡು ಸ್ಥಿರವಿಲ್ಲ ನೋಡೊ
ಶ್ರೀ ಕರಿಘೂಳಿಯ ಪಾದದೊಳಾಡೊ ||4||
ತನ್ನ ರೂಪವು ಕಾಣಲುಬಹುದೆ
ಜ್ಞಾನಿ ಜೋಡಿಲಿ ಮಿಥ್ಯ ಜ್ಞಾನಿಯಿರಲು ತನ್ನ |
ಹೀನಗುಣ್ಹಳಿದು ಪ್ರಜ್ಞನಾಗಬಹುದೆ
ಕನ್ನಡಿಯದು ಕಣ್ಣು ಕಾಣದವನಲ್ಲಿರಲು
ತನ್ನ ರೂಪವು ಕಾಣಲುಬಹುದೆ ||ಪಲ್ಲ||
ಕಮಲ ಸುವಾಸನಕೆ ಭ್ರಮರ ದೂರದಿ ಬಂದು |
ಕಮಲ ಸಾರವು ಹೀರಿ ವಿಮಲವಾದಂತೆ
ಕಮಲ ಬುಡದಡಿ ಮಹಾ ಮಂಡೂಕ ಸೇರಿರಲು
ಕಮಲ ಸಾರವನುಳಿದ್ಹೊಲಸು ಜಲವ ಸೇವಿಪದೊ ||1||
ಹಾಲಿನೊಳಮೃತವಡಗಿರುವ ಹಾಲನು |
ಬಾಲ ತುರುಕರು ತಾನೊಲಿದು ಸೇವಿಪದೊ
ಹಾಲು ದ್ವಾರದಿ ಮೊಲಿಯ ಮೇಲಿರುವ ಉಣ್ಣಿಯು
ಹಾಲನುಳಿದು ಶೋಣಿತವನುಣ್ಣುತಿಹುದು ||2||
ಕಾಗಿಕೋಗಿಲೆ ಒಂದೆ ಜಾಗದುದಸಿ ಬೆಳಿಯೆ |
ಕೋಗಿಲ್ವನಾಂತರದಿ ಫಲ ಹಾರಿಸುವದು
ಕೋಗಿಲ ಭುಜಿಸುವ ಸುಫಲ ಕಾಗೆ ಅರಿಯುವದೆ
ರೋಗಿ ಭೋಗಿ ಶಿವಯೋಗಿಯನಹುದೆ| ||3||
ಜ್ಞಾನಿ ಅಜ್ಞಾನಿಯು ಖೂನನರಿತು ಜಾಣ |
ಜ್ಞಾನಿ ಸ್ವಾನುಭಾವದನುವಾಗಿರುವದೊ
ಜ್ಞಾನ ಮೂರುತಿ ಕರಿಘೂಳಿಯ ಕರುಣದಿ
ಜ್ಞಾನ ಸುಜ್ಞಾನ ಸರ್ವಜ್ಞ ತಾನಹುದೊ ||4||
ಬ್ರಹ್ಮವು ನೀನೆಲೊ
ಬ್ರಹ್ಮವು ನೀನೆಲೊ ಸದಾ |
ಪರಬ್ರಹ್ಮವು ನೀನೆಲೊ ||ಪಲ್ಲ||
ಬ್ರಹ್ಮ ನೀನೆಲೊ ಹಮ್ಮೊಮ್ಮಿಗೆ ನೆನಿಯದೆ |
ಸೋಹಂ ಸೋಹಮ್ಮೆಂದು ಸುಮಾನವಿರಲು ||1||
ಆರು ನಾನೆಂದು ವಿಚಾರಿಸಿ ತೋರುವದರಿದು |
ಗುರುವರ ಬರಿದು ಸಾರುವ ಶೃತಿ
ಸುರಪರಮ ಗುರುವಿನೋಳ್ಬೆರೆದು
ಅರುವನು ಅರಿದು ನಾರಿಸುತರು ಸಂಸಾರ
ಸಾರವಿದು ಬರಿದು ಆರಿಲ್ಲಿರೊದು
ಆರುಸ್ಥಲದಿ ಆರೊರ್ಗಗಳರಿದು
ಆರಕ್ಷರವ ನುಡಿದರಮನೆ ಸೇರಲು ಬ್ರಹ್ಮ ||1||
ಆಸನದೊಳು ಕಮಲಾಸನೇಕಾಂತದಿ ಹಾಸಿ |
ಮನ ಸ್ಥಿರಗೊಳಿಸಿ ಸೂಸುವ ನಾಶಿಕ
ಶ್ವಾಸದಿ ಈಶನ ನೆಲಿಸಿ ನಲಿದಾಲೆ ನಿಲಿಸಿ
ಈಶನ ಥಳಥಳ ಬೆಳಗಿಲಿ ಶಶಿಗಾಸಿ ಆಶಿಸುವಾಸಿ
ಹೇಸಿ ಕಾಯಕೆಮಪಾಶ ಪುಸಿಯು ಸಣ್ಣ
ಕೂಸನಾಗಿ ಜಗದೀಶನ ಭಜಿಸಲು ||2||
ಪಕ್ಷವಾಹನ ಪ್ರಿಯ ತಕ್ಷಣ ಭರಣನ ಧ್ಯಾಸೆ
ನುಡಿಸುಪದೇಶ ದಕ್ಷ ಶಿಕ್ಷಪಿತನಾಕ್ಷಣದಿಳಿವನು ಸರಸೆ
ಮರಗಳನಿರಿಸೆ ಚಕ್ಷೂಪದೊಳಗಿರೊ
ನಿಕ್ಷೇಪೇಕ್ಷಿಸಲು ಸೊಗಸೆ ಈ ಕ್ಷಣದೊಲಿಸೊ
ಕಕ್ಷಪೇಕ್ಷದಿ ಮೋಕ್ಷ ಬಿಕ್ಷೆ ಬೇಡುವರೇನೊ
ಸಾಕ್ಷ ಶ್ರೀ ಕರಿಘೂಳೀಗೀಕ್ಷಿಸಲು ||3||
ಕಾಸಿಗ ಹೋಗೋದ್ಯಾಕೊ
ಕಾಸಿಗ್ಹೋಗ್ವದ್ಯಾಕೊ |
ತೀರ್ಥ ತಂದು ಬ್ಯಾಸರಾಗ್ವದ್ಯಾಕೊ
ಸೋಸಿ ನೋಡಿ ಭವದಾಸೆ ತ್ಯಜಿಸಲು
ಕಾಶಿತೀರ್ಥ ತನ್ನ ಕಣ್ಣೊಳಗಿರುವದು ||ಪಲ್ಲ||
ಅಂಗದೊಳಗ ಹರಿವ |
ನದಿಗಳ ಸಂಗಮ ಸನಿಯಿರುವ
ಗಂಗೆ ಯಮುನೆಗಳು ತುಂಬಿ ಬರುವ ನಡು
ರಂಗುಮಂದಿರದಿ ಮಹಾಲಿಂಗನೆಯಿರಲು ||1||
ಭಾವದೊಳಗಯಿರುವ ಶಿವನ |
ಜೀವ ತಿಳಿಯದಿನ್ನು
ಜೀವಗುಣಗಳ ಭಾವ ಕಳೆದು ಮಹಾ
ದೇವ ಬ್ರಹ್ಮ ಪರಬ್ರಹ್ಮನೆಯಿರಲು ||2||
ನಾಶಿಕ ಶ್ವಾಸದಲ್ಲಿ ಕಾಶಿ ನಿವಾಸ |
ವಾಸಿಸಿರಲು ಹೇಸಿ ಪುಸಿಯು
ಯಮಪಾಶ ಫಾಸಿಪದೆಂದು
ಕಾಶಿಗ್ಹೋಗ್ವಿರಿ ನಿಮ್ಮಲ್ವಾಸವಾಗಿರಲು ||3||
ಬಂಡೆಲಿಂಗಜಾತ ಶಂಕರಗಂಡ |
ವೀರಧಾತ ಪಂಡಿತ ಗುರು
ಮಾರ್ತಂಡ ಕರಿಘೂಳೀಶ
ಖಂಡಿತರಾಮುರಗೀಂದ್ರನೆ ಇರಲು ||4||
ಕಾಮ ಮರಿವದೊಂದು ನೇಮ
ಕಾಮ ಮರಿವದೊಂದು ನೇಮಿರುವದು |
ಶ್ರೀರಾಮ ರಾಮ ರಾಮೆನು ಮನವೆ
ಪ್ರೇಮದಿ ಸದ್ಗುರು ನೇಮಿಸಿದಾಶಿವ
ನಾಮ ನೇಮದಿರು ಎಲೆ ಮನವೆ ||ಪಲ್ಲ||
ಭವಭವದೊಳಗ್ಹುಟ್ಟಿ ನಾನಾವನೆಂಬುವನು |
ಭಾವವು ತಿಳಿಯದಲಿದು ಘನವೆ
ದೇವದೇವ ಮಹಾದೇವ ನಿರಂಜನ
ನಾವಾಗಲಿರುವನು ತನುವಿಲವೆ ||1||
ಧನಧ್ಯಾನ ಗೃಹ ಬೇಡುವದ್ಯಾತಕೆ |
ಘನವೇ ನಿನಗೆ ಬಿಡು ಛೀ ಮನವೆ
ತನ್ನೊಳಿರಾ ತನ್ಮ ಧ್ಯಾನವೇ ತನಗೆ
ಘನ ಧನಗಂಟಿದ ಯಲೆ ಮನವೆ ||2||
ಹೊನ್ನು ಹೆಣ್ಣು ಮಣ್ಣು ಬಣ್ಣವ ಕಾಣ್ವದು |
ಮಣ್ಣೊಳು ಕೂಡುವದಿದು ಮನವೆ
ಹುಣ್ಣಿವಿ ಚಂದ್ರನ ತಣ್ಣನ ಬೆಳಕಿಲಿ
ಕಣ್ಣು ತೆರೆದು ನೋಡೆಲೆ ಮನವೆ ||3||
ಕುಟಿಲ ಕಪಟ ಹಟ ಸಟಿಯನು ಮಾಡು ದಿಟ |
ಸ್ವಟಿಕತೇಜ ನೋಡಲೆ ಮನವೆ
ಘಟಿತದಿ ಶ್ರೀ ಕರಿಘೂಳೀಯ ಚರಣ ಕರುಣವ
ಸಟಿಯಲ್ಲ ಧಿಟ ಧಿಟ ಹಿಡಿ ಮನವೆ ||4||
ಗುರುವು ಬರುತಾನೆ
ಗುರುವು ಬರುತಾನೆ ಶ್ರೀ ಸುರುಗುರುವು ಬರುತಾನೆ |
ಗುರು ತರುತಾನೆ ಸುರಲೋಕದಮೃತವ ಸರ್ವಭಕ್ತರಿಗಿತ್ತು
ಪರಿಪಾಲಿಸುವದಕ್ಕೆ ಇಳಿಯೊಳಗಿರೊ ಕಷ್ಟ
ಕಳೆಯುವ ಕಾಲಕಾಲ ಶ್ರೇಷ್ಠ
ಬೆಳೆಯುವ ಮಾಯಿ ಮಕ್ಕಳ ಜಗಳರಿಸುವ
ಮೂಲೋಕದೊಳಗಾದಿ ಮೂಲವಾದ ||ಪಲ್ಲ||
ಸುಳ್ಳೆ ಸುಳ್ಳೆನ ಬೇಡಿರಾತನ |
ತಾಳಿ ಕಳಿಯೊಳಗಾಡಿ
ಅಲ್ಲಮಹಾಪ್ರಭುಯಲ್ಲರ ಕಾಣುತ
ಖುಲ್ಲ ಜನರ ಸೊಲ್ಹಲ್ಲು ಮುರಿವ ಶ್ರೀ ||1||
ಶರಣರ ನಿಂದಿಸುವ ಮರುಳರ |
ಶರೆಹರಿ ಸುರವರನು
ಪರಿಪರಿಯಲಿ ಪರತತ್ವವ ಬೋಧಿಸಿ
ಪರತರ ಬ್ರಹ್ಮನೊಳ್ಸೇರಿ ಸುಖಿಸೊ ಶ್ರೀ ||2||
ಈ ಜಗದೊಳು ಮೆರೆವ |
ರಾಜೋಳಿಯಲಿ ರಾಜಯೋಗದಿರುವ
ರಾಜರಾಜ ಮಹಾರಾಜ ಶ್ರೀ ಕರಿಘೂಳಿ
ತೇಜ ಪ್ರಜ್ವಲಿಪ ಮೂಜಗದೋದ್ಧಾರ ಶ್ರೀ ||3||
ಶ್ರೀನಿವಾಸನ ಧ್ಯಾನ ಮನ್ನಿಸು
ಶ್ರೀನಿವಾಸನ ಧ್ಯಾನವನ್ನು ಮನ್ನಿಸುವಂತ |
ಮಾನವನಾವನ ಎನಗ್ಹೇಳಮ್ಮಾ
ಸ್ವಾನುಭಾವದಿ ಸದ್ಗುರು ಸೇವೆಗೈಯುವ
ಪುಣ್ಯದಿಂದಧಿಕಿಲ್ಲ ಕೇಳಮ್ಮಾ ||ಪಲ್ಲ||
ಗುರುತನರಿತು ಗುರುಚರಣ ಸೇವಿಸಿ ಪರ |
ದಾರಿಗ್ಹೋಗುವ ದಾರಿ ಹ್ಯಾಂಗಮ್ಮಾ
ಸಾರಿ ಸಾರಿ ಘೋರ ನರನಾಗವತರಿಸದೆ
ಧೀರನಾಗಿರೊ ಮಹಾನೀಯಮ್ಮಾ ||1||
ಮಹನೀಯರೆಂಬುವ ಮತವೇನು ತಿಳಿಯದು |
ಮಾನುನಿ ಯೆನಗೆ ಹೇಳಮ್ಮಾ
ಇಹದಿ ಮಾನಭಿಮಾನದಿಹ ಶಿವ ಧ್ಯಾನದಿ
ತನು ಮರಿದರು ಘನ ಮೌನಮ್ಮಾ ||2||
ಗುಣಿಸಬಾರದ ದುರ್ಗುಣ ವಿಷಯಗಣ |
ನಿರ್ಗುಣನಾಗುವದ್ಯಾಂಗಮ್ಮಾ
ಕಾಣುತಾದಿ ಸ್ವರ ಸುರಗುರು ಕರುಣವ
ಕಾಣಲಾಕ್ಷಣ ಮರಣಿಲ್ಲಮ್ಮಾ ||3||
ದೇವಾದಿ ದೇವನುಭವದೊಳಗಾಗುವ |
ಸ್ಥಳದೊಳಗಿರುವನು ಹೇಳಮ್ಮಾ
ಯಾವ್ಯಾಳ್ಯದಿ ನಿಜ ಭಾವದಿರಲು ದೇವ
ಕೇವಲ ನಿನ್ನೊಳಗಾನಮ್ಮಾ ||4||
ಎನ್ನೊಳು ಚಿನ್ಮಯನು ಮನಿ ಮಾಡಿಯಿರುವಂಥ |
ಉನ್ನತಸ್ಥಲವ್ಯಾವದು ಹೇಳಮ್ಮಾ
ಕಣ್ಣಿನ ಕೊನೆಯಲ್ಲಿ ಕನಕ ಪರ್ವತದಲ್ಲಿ
ಚಿನ್ಮಯ ನರಮನಿ ಕಾಣಮ್ಮಾ ||5||
ಭದ್ರಾದ ಷಣ್ಮುದ್ರಿ ಶಶಿಭಾನುದೊಳಗಿದ್ದ |
ಸಿದ್ಧ ಸುದ್ದಿ ಎನಗ್ಹೇಳಮ್ಮಾ
ಕ್ಷುದ್ರ ಗುಣಗಳೆಲ್ಲ ಛಿದ್ರಿಸಿ ಶಿವಯೋಗ
ನಿದ್ರಿಯೊಳಗೆ ರುದ್ರನಾದಮ್ಮಾ ||6||
ಮೂರಾರು ಅರಿದಿಟ್ಟು |
ಮಾರಾರಿ ಪುರಸೇರಿ ಶರೀರಾವು ಮರಿದಿರುವದ್ಯಾಂಗಮ್ಮಾ
ದಾರಿದೋರುವ ಹಂಸನ ಸೇರಿರಲಾಕ್ಷಣ
ಪರಿಪೂರ್ಣ ಪರಬ್ರಹ್ಮ ಸೇರಮ್ಮಾ ||7||
ಧಾತ್ರಿ ಭ್ರೂಮಧ್ಯದಿ ನೇತ್ರ ಜಾತ್ರಿಯೊಳು |
ಕ್ಷೇತ್ರಕಧಿಕದಾತರ್ಯಾರಮ್ಮಾ
ಜಾತ್ರಿಮೂರ್ತಿ ಪರಂಜ್ಯೋತಿ ನಿರೂಪನವ
ಧೂತಕರಿಘೂಳಿ ಪಥ ಹಿಂಗಮ್ಮಾ ||8||
ಭಾವದಿ ಶಿವನೆಂದವ
ಭಾವದಿ ಶಿವನೆಂದವ |
ಅವನಿಗಾಗ್ವದು ನಿಜಾನಂದವ
ನಿಜ ಭಾವದಿ ||ಪಲ್ಲ||
ದೇಹದ ಭಯವು ಮಾಯವಾಗುವ ದೃಶ್ಯ |
ಮಾಯ ಭಯಗೊಳಗಾಗದೆ
ಕಾಯರಹಿತ ನಿರ್ಮಾಯನ
ಹೇಯ ಮಾಯ ಮರಣ ವಿದೂರನಾ ನಿಜ ||1||
ಮನದ ಮೈಲಿಗಿ ಕಳೆದು ಸುಮನಗೈದು |
ಕಾಣದಿರು ಅಭಿಮಾನವ
ಸ್ವಾನುಭಾವದಿ ಗುರುವರ ಸೇರಲು
ಘನಚಿನುಮಯ ತಾನೆ ತಾನೆ ತಾ ನಿಜ ||2||
ಪಿತಮಾತೆ ಸತಿಸುತ ಗತಿಗ್ಹಿತರಿವರೆಂದಿ |
ಗತಿಸೊ ಪಥದಿ ಹಿತರ್ಯಾರಿಲ್ಲವೊ
ದೂತ ಬಿಡದಿರವ ಧೂತನಾಗಿ
ಪ್ರಖ್ಯಾತ ಪತಿತ ಪರಮಾತ್ಮನಾ ನಿಜ ||3||
ಹೇಮ ಭೂಮಿಯ ಕಾಮನೇಮದೊಳಿರೆ |
ನಿನ್ನಯ ಕಂಡು ಪ್ರೇಮ ಕಾಮಿಪನೆ
ನಾಮಸ್ಮರಣಿಯ ನೇಮದೊಳುರು
ಕಾಮಹರ ವಾಮದೇವನ ನಿಜ ||4||
ಇಂದು ಈ ಧರಿಯೊಳು |
ಎಂದಿಗೂ ನಂದದ ಬಂಧನದೊಳು ಬಂಧನಾಗದೆ
ಇಂದುಧರನ ಕರಿಘೂಳಿಯ ಸೇರಲು
ನಂದಾನಂದ ಪರಮಾನಂದವಾ ನಿಜ ||5||
ಏನಿದ್ದರೇನು ತನಗಿಲ್ಲದಾ ವಸ್ತು
ಏನಿದ್ದರೇನು ತನಗಿಲ್ಲದಾ ವಸ್ತು |
ಸನಿಯಿದ್ದರೇನು ಏನಿದ್ದರೇನು
ಸುಜ್ಞಾನವಂದಿಲ್ಲದಿರೆ ಮನಿಯೊಳಗ್ಹಾವಿರಲು
ಮನಗಾಲು ಭಯವೊ ||ಪಲ್ಲ||
ಸತಿಯಿದ್ದರೇನು ಪತಿಗ್ಹಿತವಿರದ ಸತಿ |
ಸತಿಯಿದ್ದರೇನಂತಿ ಅತಿ ಮಂದತಿಯಂತೆ
ಪತಿ ಯಮದೂತ ರತಿ ಕಷ್ಟ
ಮಥಿಸುವರಂತೆ ಗಂಡಿದ್ದರೇನು ||1||
ಹೆಂಡತಿಗಿಲ್ಲದ ಗಂಡಿದ್ದರೇನು |
ಗಂಡಿದ್ದರೇನಂತೆ
ಗಂಡು ಕ್ಯಾದಿಗೆಲಿಯಂತೆ
ಪಂಡೀತಗೀಸಂತೆ ಖಂಡಿತಗಿಲ್ಲಂತೆ ||2||
ಧನವಿದ್ದರೇನು ನಿಧಾನವು ಮಾಡಿದ ಧನ |
ಧನವಿದ್ದರೇನಂತಿ ಹೀನ ಮನುಜನಂತೆ
ಕಣ್ಣುಮುಚ್ಚಲು ಪಾಪ ಪುಣ್ಯಗಳಿಲ್ಲಂತೆ ||3||
ಸುತನಿದ್ದರೇನು ಪಿತ ಮಾತೆಗಿರದ ಸುತ |
ಸುತನಿದ್ದರೇನಂತೆ ಗತಿಗಾಣದವನಂತೆ
ಪತಿತ ಪಾವನ ಕರಿಘೂಳಿಗ್ಹಿತವಿಲ್ಲದಾ ವಸ್ತು
ಏನಿದ್ದರೇನು ||4||
ಏನು ಬೇಡಲಿ ಚಿನುಮಯ
ಏನು ಬೇಡಲಿ ಚಿನುಮಯ |
ಶಿವ ನಿನ್ನೇನು ಬೇಡಲಿ ||ಪಲ್ಲ||
ಏನು ಬೇಡಲಿ ಘನವಾದ ವಸ್ತುಗಳಿಲ್ಲ |
ಅನ್ನವಿಲ್ಲದೆ ಮನಿಮನಿ ತಿರಿದುಣ್ಣುವನಿಗೆ ||1||
ಕರುಣವಿನಿತಿಲ್ಲ ನಿಷ್ಕರುಣಿಯು ಮೊದಲೆ ನೀನಲ್ಲ |
ಕರಿತುರಗರಥಗಳು ಅರಿಯಲೇನೇನಿಲ್ಲ
ಊರ ಹೊರಗೆ ರುದ್ರಭೂಮಿಯೊಳಿರುವಗೆ ||2||
ನಿನ್ನ ನಾಮವನು ಸನ್ಮಾನದಿಂದೆ ನೆನಿಯುವರನ್ನು |
ಇನ್ನು ಭಕ್ತರಿಗೆಲ್ಲ ಯೇನು ಬೇಡಿದ ಸೊಲ್ಲ
ಅನುಮಾನಿಲ್ಲದೆ ಕೊಟ್ಟು ನೆನವು ಮೌನಾದವಗೆ ||3||
ವ್ಯಥೆಯಿಲ್ಲದವನು ಸತಿಸುತರೆಂಬ |
ಮತಿಯವರಿದವನು ಸತಿಸುತ ಧನ ಭೂಮಿ
ಅತಿ ಹರುಷದಿನಿತ್ತು ಪತಿತ ಪಾವನ ಪರಮಾತ್ಮ ನಾ ನಿನಗಿನ್ನು ||4||
ಕಾಣುವದೆಲ್ಲ ನಿನ್ನಯ ಲೀಲೆಯೇನು ಸ್ಥಿರವಿಲ್ಲ
ಜ್ಞಾನ ಮೂರುತಿ ಕರಿಘೂಳೀಶ ಕರಪಿಡಿದು
ಎನ್ನೊಳು ನೀನಾಗಿ ನಾನು ನಿನ್ನೊಳಗಾಗಿನ್ನೇನು ||5||
ಬಿಡು ಮಾಯದ ಭ್ರಾಂತಿ
ಮಾಡಬ್ಯಾಡಲೊ ಖಾಲಿ ಚಿಂತಿ |
ಬಿಡು ಮಾಯದ ಭ್ರಾಂತಿ
ಜಡ ದೃಶ್ಯ ಶರೀರವು ದೃಢವೆಂದು ತಿಳಿತಿ
ಜಡಿದು ಯಮ ಹೊಡೆಯುವ ಮನ ಮಾಡೊ ಶಾಂತಿ ||ಪಲ್ಲ||
ಮೂರು ದಿನದ ಬಾಜಾರ ನಾರಿ ಸುತರು ಸಂಸಾರ |
ಬರಿದು ಬರೊದು ಯಾರಿಗ್ಯಾರ
ಇರೊತನ ಸರ್ವರುಯಿಲ್ಲೊ ಯಾರ್ಯಾರ
ಸ್ಥಿರವಾದ ಪದವಿಯ ಮಾಡೊ ವಿಚಾರ ||1||
ಧನ ಹೇಮ ಭೂಮೆನ್ನದೆನುತಿ |
ಹೀನಗುಣಗಳು ಕಲಿತಿ
ಗಾಣದೆತ್ತಿನ ರೀತಿ ದುಡಿತಿ
ಮೀನ ಗಾಣಕೆ ಬಿದ್ದ ಪರಿಯ ನೀಯಾಗುತಿ
ಚಿನುಮಯನ ಧ್ಯಾನವು ದಿನದಿನ ಮರೆತಿ ||2||
ಡಂಭಾಚಾರದಿ ಫಲವಿಲ್ಲ |
ಶಂಭು ತಿಳಿಯುವನೆಲ್ಲ
ನಂಬಿದವರಿಗೆ ಹಿಂಬಾನಲ್ಲ
ಕುಂಬಿನಿಯೊಳ್ನರನಾಗಿ
ಜನಿಸಿದ ಮೇಲ ಸಾಂಬನ ಸಾಮ್ರಾಜ್ಯ ಸಂಭ್ರಮ ಶೀಲ ||3||
ಸಂಸಾರ ಸುಖವಿರಲೆನುತಿ |
ಸಂಶಯ ಗುಣ ಕಲಿತಿ
ಪುಸಿ ನುಡಿಗಳ ಸದಾ ಆಡುತಿ
ಹಂಸ ಪರಮ ಮಂತ್ರ ಹಂಸದ ರೀತಿ
ಸಂಶಯ ಬಿಡು ಕರುಘೂಳೀಶಾಗಿರುತಿ ||4||
ಹರ ಹರ ಹರ ಶಂಭೊ
ಹರ ಹರ ಹರ ಶಂಭೊ |
ಸದಾಶಿವ ಗೌರಿಶಂಕರ ಭೋ ಹರ ||ಪಲ್ಲ||
ರಾಘವನು ತಪದ ರಾಜೀವ ವದನ |
ಭವರೋಗ ವೈದ್ಯ ಶಂಭೋ
ಆಗಮವಂದಿತ ಅಮರಾರ್ಚಿತಸುರ
ಭೋಗಿಭೂಷಣ ಶಂಭೋ ||1||
ಪಂಚವದನ ವಿರುಪಾಕ್ಷವರದ |
ದ್ವಿಪಂಚ ಹಸ್ತ ಶಂಭೋ
ವಂಚಕ ದಕ್ಷಾದ್ವರ ವಿಧ್ವಂಸಕ
ಪಂಚ ಶರಾಂತಕ ಭೋ ||2||
ಈ ಸಮಯದಿಯೆಮ್ಮ ಸೂಸಿಲಿ |
ಕಾಯ್ವದೊ ವಾಸುಕಿಧರ ಶಂಭೋ
ವಾಸಭಾಷನಪುರದೊಳ್ಮೆರೆಯುವ
ಈಶ ಕರಿಘೂಳೀಶ ಶಂಭೋ ||3||
ಕರುಣದಿ ಕಾಯೊ
ಶ್ರೀ ಗಿರಿಜಾವದನೆ ಮಾಂ |
ಕರುಣದಿ ಕಾಯೊ ||ಪಲ್ಲ||
ಯೋಗಿ ಜನರ ಹೃದಯವಾಸ ನಾಗಭೂಷನೆ |
ನಿಗಮಾಗಮಗೋಚರ ಭವ
ರೋಗ ವೈದ್ಯನೆ ||1||
ಜ್ಞಾನ ಧ್ಯಾನ ಮಾನಪಾನ |
ಮೌನದಿರಿಸೈ ಹೀನಗುಣಗಳೇನಿಲ್ಲದಲೆ
ನಿಜ ವುದ್ಧರಿಸೈ ||2||
ಕ್ಲೇಶನಾಶ ಸತ್ಯ ಸತಸಂತೋಷದಿರಿಸೈ |
ಆಶರಹಿತ ಕರಿಘೂಳೀಶ ಕಾಶಿವಾಸಸೈ ||3||
ಜಗದೀಶ ನಿಗಮ ಮಹೇಶ
ಜಗದೀಶ ನಿಗಮ ಮಹೇಶ |
ಶ್ರೀಗುರು ಕ್ಷೇಶನಾಶನೆ ||ಪಲ್ಲ||
ಕರುಣಾ ನಾಗಭರಣಾ |
ಚಂದ್ರಧರಣಾ ನಯನ ಕಿರಣಾ
ಶರಣಾ ಜನರಾ ಪೊರೆಯೊ ಧೀರ
ಗಿರಿವರ ಧೀರ ಜಗದೀಶ ||1||
ಸ್ಮರಶರ ವೈರಿಯೆ ಪುರ ತ್ರಿ ಸಂಹರನೆ |
ಕರಿಕಂಠಸುರ ಭೋಜನೆ
ಗಜಮುಖ ಸುಜನ ಪೂಜಿತ
ಅಜ ಹರಿಹರ ತ್ರೈಜಗಭರಿತ
ನಿಜಸಾಜಸ ಗುಣವ ಬೋಧಿಸೊ
ನಿರ್ವಿಕಾರ ಸರ್ವ ಲೋಕೋದ್ಧಾರ ||2||
ಸೋಮ ಭಕುತರ ಜನ ಪ್ರೇಮ |
ಅಗಣಿತನಾಮ ವಿಶ್ವಾಭಿರಾಮ
ನಿರಾಮಯ ನೀಡೊ ದಯಾ
ಕರಿಘೂಳಿ ಗುರುರಾಯಧೀಶ ||3||
ಶಿವನೆ ಬಸವ
ಬಸವ ಶಿವನು ಶಿವನೆ ಬಸವ |
ಬಸವ ಶಿವನೆಂಬ
ವಿಷಯ ಒಂದಲ್ಲೇನೊ ||ಪಲ್ಲ||
ವಶವಿಲ್ಲ ದಶೇಂದ್ರಿಯಗಳೊಶಗೈಸಿ
ಕೈಲಾಸ ವಾಸನ
ಧ್ಯಾಸದೊಳಿರುವನೊ ||1||
ಸಂಶಯವಿಲ್ಲದ ಸಂಸಾರ ಮಾಡಿ ಸದಾ
ಹಂಸೋಹಂಸೇರಿ ಮಾಯಾ
ಧ್ವಂಸಗೈಯುವನೋ ||2||
ಆರು ಚಕ್ರದ ನೆಲಿಯ ಅರಿತು ಸೇರುನ್ಮನಿ ನಿಲಯ
ಭೋರೆಂಬೊ ನಾದ ಬಿಂದು ಕಳೆಯೊಳಗಿರುವನೊ || ||3||
ಭಕ್ತಿಗೆ ಜ್ಞಾನ ಪರಮುಕ್ತಿ ವೈರಾಗ್ಯದಿ |
ಶಕ್ತನಾಗಿ ಶಿವಭಕ್ತಿಯಲ್ಲಿರುವನೋ
ಆರು ಅಕ್ಷರದರ್ಥ ಎರಡೊಂದರಲಿ ಗುರ್ತ|
ತೋರುವ ಕರಿಘೂಳಿ ಕರುಣಪಡಿದವನೊ ||4||
ಭಯ ಹಾರಿ ಸುರಗುರುದೇವ
ಭಯ ಹಾರಿ ಸುರಗುರುದೇವ |
ಬಾಯ ಬಿಡುವೆ ನಾನಭವಾ
ಮಾಯದಿಂ ಜನಿಸಿದ ಈ ಕಾಯಪುರವಾ
ಮಾಯ ಪಂಚಭೂತ ಸಮುದಾಯಸರುವಾ ||ಪಲ್ಲ||
ನೋಡಲಾರೆನು ವಿಶ್ವರೂಪ |
ವಿಶ್ವ ಮಾಡಿಸು ಲೋಪ ಬಿಡದೆ ತೋರಿಸು ನಿಜರೂಪ
ಒಡೆಯನೆ ನೌಖಂಡ ರಾಜರ ಭೂಪ
ಅಡಿಗೆರಗುವೆ ದೃಢದ್ಹಿಡಿಸು ಪ್ರತಾಪ ||1||
ಸಂಸಾರ ಶರಧಿ ಅಪಾರ |
ಪಾರು ಮಾಡಿಸೊ ತ್ವರಾ
ತ್ರಿಂಶಾರು ತತ್ವಕಧಿಕಾರ
ಸಂಶಯ ಸಂತತಿ ಅಗಲಿ ಪಾರ
ಹಂಸೋಹಂಸನೇರಿಸು ನಿರ್ಧಾರ ||2||
ಎಲ್ಲಿ ನೋಡಲು ನೀನೆ ಭರಿತ |
ಸಲ್ಲೀಲೆಯೊಳಿರುತ ಮೂಲೋಕಕಾಧಾರ ಕರ್ತ
ಎಲ್ಲ ಕಾಲದಿಯನ್ನ ಹೃದಯದೊಳಿರುತ
ಯಲ್ಲಮಹಾಪ್ರಭು ಕರಿಘೂಳಿ ಗುರುನಾಥ ||3||
ಆರತಿ ಬೆಳಗಿರಿ
ಆರತಿ ಬೆಳಗಿರಿ ನಾರಿಯರೆಲ್ಲರು |
ಶೌರಿ ಸುಂದರ ಸುಕುಮಾರ ಜನಕಗೆ ||ಪಲ್ಲ||
ಗೋಪಿಯರೆಲ್ಲರು ಆಪತ್ತಿನೊಳಗಿರೆ |
ಕಾಪಾಡಿದ ಶ್ರೀ ಗೋಪಾಲನಿಗೆ ||1||
ಸಂಶಯದಿರುವ ಕಂಸನ ಮದವ |
ಧ್ವಂಸವಗೈಯ್ದ ವಂಶವುದ್ಧಾರಗೆ ||2||
ಮುರಾಸುರ ಮಾರಗೆ ಮುರಲಿಯಧರಗೆ |
ಕರುಣದಿ ಕಾಯ್ದ ಶ್ರೀ ಕರಿಘೂಳಿ ಗುರುವಿಗೆ ||3||
ಸಂತಿಗೆ ಬಂದು
ಸಂತಿಗೆ ಬಂದು ಚಿಂತಿಯ ನೀಗಿ |
ಯೇಕಾಂತದೊಳಗ ನಾನಿದ್ದೇನವೊ
ಭ್ರಾಂತಿಯನಳೀದು ಅಂತರಂಗದಿ
ಗೌರೀಕಾಂತನ ಕಾಣುತಲಿದ್ದೇನವೊ ||ಪಲ್ಲ||
ಶಂಭೊ ಸಾಧುರ ಸಂಗದಿ ಬೋಧವ ತಿಳಿದು |
ಸಾಧನ ಒಂದು ಮಾಡಿದ್ದೇನವೊ
ಆಧಾರದಿ ಚೌದಳದಲ್ಲಿ ಇರುವೊ
ಗಣಪತಿ ಪೂಜೆ ಮಾಡಿದ್ದೇನವೊ ||1||
ಸ್ವಾದ ತಿಳಿದು ಸ್ವಾದಿಷ್ಟ ಚಕ್ರದಿ |
ಆರು ದಳಗಳು ಅರಿತೇನವೊ
ಭೇದವಿಲ್ಲದೆ ಬ್ರಹ್ಮನ ಸಾಧಿಸಿ
ಸಾಧುರೊಳಗ ಕೂಡಿದ್ದೇನವೊ ||2||
ಜಾಣತನದಲಿಂದ ಮಣಿಪೂರಕ ಪೋಗಿ |
ದಶದಳ ಕಣ್ಣೀಲಿ ಕಂಡೇನವೊ
ಮಾಣದೆ ವಿಷ್ಣುವಿನನ್ನು ಪೂಜಿಸಿ
ನಾರಾಯಣನೊಳಗಿದ್ದೇನವೊ ||3||
ರೌದ್ರದಿಂದ ಅನಾಹಾತಕ್ಕೆ ಹೋಗಿ |
ಬಾರಾ ದಗಳಗಳು ಕಂಡೆನವೊ
ಭದ್ರದಿಂದ ರುದ್ರನ ಪೂಜಿಸಿ
ಮುದ್ರಿಯೊಳಗ ನಿದ್ರಾಯಿತವೊ ||4||
ಶುದ್ಧವಾದ ವಿಶುದ್ಧಿ ಚಕ್ರದೊಳು |
ಹದಿನಾರು ದಳಗಳಿದ್ದವವೊ
ಬುದ್ಧಿಯಿಂದ ಸದಾ ಶಿವನ ಪೂಜಿಸಿ
ಸದಾನಂದೊಳಗಿದ್ದೇನವೊ ||5||
ಅಗ್ನಿಚಕ್ರದಲ್ಲಿ ಮಗ್ನನಾಗದೆ |
ದ್ವಿದಳ ಕಣ್ಣಿಲಿ ಕಂಡೇನವೊ
ಅಗ್ನಿ ನಯನ ಪರಮಾತ್ಮನ ಜ್ಞಾನದಿ
ಮಗ್ನನಾಗಿ ಅರಿತಿದ್ದೇನವೊ ||6||
ಮರಿಯದೆ ಅನುದಿನ ಪುರಹರ ಧ್ಯಾನವ |
ಸರ್ವ ಕಾಲದಲಿ ನಡಿವದವೊ
ಮೀರಿದ ಸಹಸ್ರ ದಳದಲ್ಲಿರುವ
ಕರಿಘೂಳೀಶನ ಕಂಡೇನವೊ ||7||
ಕಾಪಾಡು ಸುಶೀಲ
ಪಾಪಲೋಕ ವಿಠಲ ಗೋಪಾಲ |
ನೀ ಪಾರಮಹಿಮಾ ವ್ಯಾಪಕ ನಾಮ
ಆಪದ ದೂರ ಶ್ರೀಪತಿಲೋಲ
ಕಾಪಾಡು ಸುಶೀಲ ||ಪಲ್ಲ||
ಶೇಷಶಯನ ದೋಷವಿಹರಣ |
ಆಶ ದೂರಣ ಶಿಶುಗಳ ಪೋಷಣ
ಕೇಶವ ಪಶುಪಾಲ ಗೋಪಾಲ ||1||
ಮೂಜಗದಿರುವ ರಾಜ್ವಳಿಪುರವ |
ಕರಿಘೂಳಿ ಗುರುವ
ಕರುಣದಿ ಕಾಯ್ವ
ಸಾಜದಿ ಪರಿಪಾಲ ಗೋಪಾಲ ||2||
ಯೋಗಿಗಳೆ ಶಿರ ಬಾಗಿ ನಮಿಸುವೆ
ಯೋಗಿಗಳೆ ಶಿರ ಬಾಗಿ ನಮಿಸುವೆ |
ಸಾಗಿ ಬರುವದಿಲ್ಲಿಗೆ ಬೇಗದಿ
ನಿಮಗೀಗ ಮಣಿಯುವೆ
ಸಾಗಿಸುವೆ ನಿಮ್ಮಡಿಗೆ ||ಪಲ್ಲ||
ಚಂದ್ರಧರ ಉರಗೇಂದ್ರ ಸಾಂದ್ರ |
ಇಂದ್ರಸಖ ಮಹೇಂದ್ರನೆ
ಸುಂದರ ಗಣವೃಂದ ವಂದಿತ
ಬಂಧುರ ನೌರಂದ್ರನೆ ||1||
ನಿಮ್ಮ ದರುಶನದಿಂದೆಯನ್ಮನ |
ಉನ್ಮಯದಿ ಶಾಂತಾಯಿತೊ
ಸ್ಥೋಮ ನಿರ್ಗುಣ ಧಾಮ ನಿಮ್ಮ
ಪ್ರೇಮ ದಯವು ನಮಗೆ | ||2||
ರಾಜಕಧಿಕ ರಾಜಪುರಕ |
ರಾಜ ಕರಿಘೂಳೀಶನೆ
ಕುಜನ ದೂರ ಸುಜನೋದ್ಧಾರ
ಪೂಜಿಸುವೆ ಚರಣಂಗಳಿಗೆ ||3||
ಸದಾ ಕಾಯೊ ಪಂಢರಪುರ ವಾಸಿ
ಸದಾ ಕಾಯೊ ಪಂಢರಪುರ ವಾಸಿ |
ಮುದದಿಂದ ನಮಿಪೆ ವಿಠಲೇಶ ||ಪಲ್ಲ||
ತಿಳಿಯದು ನಿನ್ನಯ ಲೀಲೆಯು ಸದಯ |
ವ್ಯಾಳ್ಯಗೈಯದೆ ಬಾಲ ಪೋಷ ||1||
ಪರಿಕಿಸಲೆನ್ನೆಯ ಈ ರೀತಿಗೈದಿಯಾ |
ಅರಿಯದವನ ಮರಿಯದಿ ಕಾಯೊ ಈಶ ||2||
ಮಾನಪಮಾನವು ನಿನ್ನದೆ ದೇವ |
ಕನಿಕರದಲಿ ಪಾಲಿಶೀಶ ||3||
ಮೂರು ಲೋಕ ನಿಮ್ಮದು ಸಾರ್ವದು ನಿಮ್ಮ ಬಿರುದು |
ಕರುಣದಿ ಕಾಯೊ ಪರಮೇಶ ||4||
ಮೂಜಗದಿ ಮೆರಿವ ರಾಜೋಳಿಲಿರುವ |
ರಾಜಮಹಾರಾಜ ಕರಿಘೂಳೀಶ ||5||
ನಿನ್ನ ಚರಣ ನಂಬಿರುವೆ
ನಾರಾಯಣ ನಿನ್ನ ಚರಣ ನಂಬಿರುವೆ |
ಕರುಣದಿ ಪಿಡಿ ನಿನ್ನ ತರುಳನ ಕರವಾ ||ಪಲ್ಲ||
ಭವತಾರಣ ಪಾರಾಗುವದ್ಯಾಂಗ |
ಶಿವ ನಿಮ್ಮ ಸ್ಮರಣೆಯೆ ಹಡಗವು ಎಮಗ ||1||
ನಾರಿ ಕುವರ ಬಾಂಧವರು ಅಸ್ಥಿರ |
ಕರಿವರದ ಪೊರಿ ಪರಿಪರಿ ಕರೆಯುವೆ ||2||
ನಂಬಿದ ಭಕುತರ ಸಂಭ್ರಮದಿರಿಸುವ |
ಸಾಂಬನೆ ಸಖ ನೀ ಬೆಂಬಲವಾಗಿರು ||3||
ಬೇಡಿದ ವರ ದಯಮಾಡಿಸು ರಾಯ |
ರೂಢಿಯೊಳಗೆ ಬಿಡದ್ಹಿಡಿವೆ ನಿನ್ನಡಿಗಳ ||4||
ಧರೆಯೊಳು ಮರೆಯುವ ಅರಸನಾಪುರವ |
ಕರಿಘೂಳೀಶ ಗುರುವ ತ್ವರ ಕೊಡಿಸು ವರವ ||5||
ಓಂ ಗುರು ಪರಮೇಶ
ಓಂ ಗುರು ಪರತರ ಪರಮೇಶ |
ಕರುಣದಿ ಶರಣರ ಪೋಷ ||ಪಲ್ಲ||
ಸುರಮುನಿ ಪೂಜಿತ ಹರಿಹರ ಸೇವಿತ |
ದುರಿತದೂರಕರ್ತ ದಾತ
ದುರಿತದೂರಕರ್ತ ಪರಿಪರಿಯಲಿ ನಿಮ್ಮ
ಚರಣ ಸ್ಮರಿಸುವೆನು
ತರುಳರ ಪೊರೆ ಜಗದೀಶ ಓಂ ||1||
ಆದಿ ಅಂತ್ಯ ನಿಶ್ಚಿಂತಾನಂದನೆ |
ವೇದವಾದ ಸದನ ಸುವದನ
ವೇದವಾದ ಸದನ
ನೀ ದಯಗೈದೆಮ್ಮ ನಾದರಿಸುವದು
ಸದಾ ಸುಗುಣ ಹೃದಯ ನಿವಾಸ ಓಂ ||2||
ಅರಸ ಪುರೀಶ ಕರಿಘೂಳೀಶ |
ವರಕವಿ ಗುರು ಮುರುಗೀಶ ಮಹೇಶ
ವರಕವಿ ಗುರು ಮುರುಗೀಶ
ಪರವುಪಗಾರ ಜಗದೋದ್ಧಾರ
ಕರುಣಿಸು ನಡೆಸು ಸುಭಾಷ ಓಂ ||3||
ಭಕ್ತರ ಪ್ರೇಮದಿ ಕಾಯ್ವ
ಪ್ರೇಮಿಯ ಭಕ್ತರ ಪ್ರೇಮದಿ ಕಾಯ್ವ |
ಕಾಮಿತ ಫಲಮೀವ ಚತುರಾ
ಶ್ರಮಿಗಳ ಗತಿಗಳ ತಿಳಿದು ಚತುರ
ಚತುರ ಯೋಗದೊಳುಳಿದು
ಚಾತುರ ಶಿವಪಾದಾತುರನಾದರೆ
ಚತುರದ ಫಲವೀವ ಕಾವ ಕಾಮಿತ ಫಲವೀವ ||ಪಲ್ಲ||
ಆರು ಚಕ್ರಗಳ ಸಾರವನರಿದು |
ಆರು ಗುಣಗಳಳಿದುಳಿದು
ಆರಕ್ಷರಗಳನರುತವನರಿದರೆ
ಮಾರಹರನ ಸೇವ ಕಾವ ||1||
ಪ್ರಾಣಯೋಗನುದಿನ ಸಾಧಿಸೆ |
ಮಿನುಗುವ ತ್ರಿಕೂಟ ಶಿಖರದೊಳೈಸೆ
ಪಾನಗೈಯಲು ಸುಧಾ ಧಾರಾಮೃತವನು
ಘನದ ಸುಖವೀವ ಕಾವ ||2||
ಮೂಲ ಬ್ರಹ್ಮಾನಂದದೊಳು ಲೋಲಾಡುತೆ |
ಶೀಲ ನಿರೀಕ್ಷಿಸು ಪ್ರಾಣಿಗ್ರಹಣಕೆ
ಕಾಲಕಾಲಗೆ ಸರ್ವ ಕರ್ಮ ಸಮರ್ಪಿಸು
ಶೀಲ ಕರಿಘೂಳಿಸೇವ ಕಾವ ಕಾಮಿತ ಫಲವೀವ ||3||
ಕನಿಕರದಿಂದಲ್ಲಿ ನಿನ್ನ ತನಯನ ಮನ್ನಿಸು
ಮುನಿವರ ಕರುಣಾಕರ |
ಕನಿಕರದಿಂದಲ್ಲಿ ನಿನ್ನ ತನಯನ ಮನ್ನಿಸು ನೀ ||ಪಲ್ಲ||
ನಿತ್ಯ ಅತಿಥಿಗಳ ಪಥವನು ನುತಿಸುವೆ |
ಸತ್ಯದ ಪಥವರಿಸೊ ಅತಿಥಿಯೆ
ಸತ್ಯದೆ ಪಥವರಿಸೊ ಭಕ್ತಿಯ ಸ್ಥಿತಿಗೆ ಜೀಯ
ಮುಕ್ತಿಗೆ ಸದಯಾಕರ್ತನೇ ಮಮಹೃದಯ ||1||
ಎನ್ನಾಶ್ರಮಕೆ ಬಿನ್ನೈಸಿದುದಕೆ |
ಮನಾನಂದವಿದಕೆ ಹೇ ಮುನಿಯೆ
ಮಹಾನಿಂದವಿದಕೆ ದೀನರ ಪಾಲಿಸು ಸದಾ
ಬಿನ್ನವಗೈಯುವೆ ಪಾಲಿಸು ಮುನಿವರ ||2||
ದೇಶಕಧಿಕ ಭಾಷನಪುರಕ |
ಈಶಘೂಳೀಶನಧಿಕ ಮಹೇಶ
ಶಿಶುಗಳುಲ್ಹಾಸದಿ ಕಾಯೊ
ಧ್ಯಾಸದೊಳಿರುವೆನು ಪೋಷ ದಂಪತಿಗಳನು ||3||
ಗುರುವಿನ ಉಪದೇಶವನು ಅರಿಯಿರಿ
ಗುರುವಿನುಪದೇಶವನು ಅರಿರಣ್ಣ |
ಧರೆ ಸರ್ವಜನ ಗುರುವಿನುಪದೇಶವನರಿರಣ್ಣ
ಆರುಮೂರು ಅರಿಯಬೇಕು
ಪಾರಮಾರ್ಥದೊಳಿರಲಿಬೇಕು
ದಾರಿಹಿಡಿದು ನಡೆಯಬೇಕಣ್ಣ ನಾವೆಲ್ಲರಣ್ಣ ||ಪಲ್ಲ||
ಅವನಿಯೊಳಗೆ ಜನಿಸಿದಾರಣ್ಣ |
ಅವರು ಮೂವರಣ್ಣ
ಬ್ರಹ್ಮವಿಷ್ಣು ರುದ್ರ ಸ್ವರೂಪಣ್ಣ
ರಾಜತಾಮಸ ಸತ್ಯ ತತ್ವದ ರಹಸ್ಯವನ್ನು
ತಿಳಿಸುತಿಹರು ಗುಪ್ತದೊಳಗ
ಹಿಡಿಯಬೇಕಣ್ಣ ನಾವಾಪ್ತರಣ್ಣ ||1||
ಕಲಿಯುವಳಗ ಸಣ್ಣ ಹಳ್ಳೆಣ್ಣ ಯಲಿ ರಾಜೋಳೆಣ್ಣ |
ಗುರುವು ಮುರುಗೇಂದ್ರೇಳಿದ ವಚನ
ಬೇಕಾದವರು ಕೊಳ್ಳಿರಣ್ಣ
ಸಾಕಾದವರು ಬಿಡರೆಣ್ಣ
ಅಕಾರುಕಾರ ಮಕಾರಿಡಿರೆಣ್ಣ
ಓಂಕಾರ ಪ್ರಣಮ ||2||
ಪರಮ ಪರಮೇಶಾ
ಪರಮ ಪರಮೇಶಾ |
ತರುಳರ ಪೋಷ ||ಪಲ್ಲ||
ಇಂದು ದಂದುಗದಲ್ಲಿ |
ಬಂದೇನೇತಕ್ಕೆ ದೇವಾ
ನಂದವಿಲ್ಲದ ರೋಷ
ತರುಳಾರ ಪೋಷ ||1||
ಸುಜ್ಞಾನವಿಲ್ಲದ ಅಜ್ಞಾನ |
ರಾಜ್ಯದಿ ಮಗ್ನನಾದೆ
ಈಶ ತರುಳರ ಪೋಷ ||2||
ಸಿಕ್ಕಿದೆ ಲೋಕದಿ |
ಹೊಕ್ಕಿದೆ ದುರಿತದಿ
ದಕ್ಕಿಸಿದೆ ಕರಿಘೂಳೀಶ
ತರುಳಪೋಷ ||3||
ಚರಣಕ್ಕೆ ಎರಗುವೆ
ಗುರುವರ ಸುರಪ್ರೇಮ ಸುಧಾಮ |
ಚರಣಕ್ಕೆ ಯೆರಗುವೆ ಶರಣ ನಾಮಧಾಮ ||ಪಲ್ಲ||
ಚಂದಿರ ತೇಜನೆ ಇಂದಿನ ಪೂಜ್ಯನೆ |
ಸುಂದರ ಪಾದಂಗಳಿಗೊಪ್ಪಿಸುವ ನಾ
ಇಂದು ಮದಾಂಧರ ಅಂಧಕಾರ ತರಿ
ಸಿಂಧುದಯಾ ಬ್ರಹ್ಮಾನಂದನಂದನೆ ಧಾಮ ||1||
ಶುದ್ಧವಿಗಾನನೆ ವಿದ್ಯೆ ಪ್ರವೀಣನೆ |
ಸಿದ್ಧನೆ ಪರದಯಾಬ್ಧಿ ವಿಶುದ್ಧನೆ
ಲುಬ್ಧಕರನುಭವಾಬ್ಧಿಯೊಳದ್ದುವೆ
ಪ್ರಸಿದ್ಧ ಸುಸಾಧ್ಯನೆ ಉದ್ಧರಿಸೆಮ್ಮ ಧಾಮ ||2||
ಪರಮ ವಿಲಾಸನೆ ತರುಣಿ ವಿಕಾಸನೆ |
ವರ ನೀಲಕಂಠನ ಶರಣರ ಪೋಷನೆ
ಕರುಣಾಕಾರ ವರಕವಿಗಾರ
ಕರಿಘೂಳೀಶ್ವರ ಜಗದೋದ್ಧಾರ ಧಾಮ ||3||
ಭವಭಯಗಳನು ನಿವಾರಿಸು
ಶ್ರೀಗುರುದೇವ ಜೈ ಶ್ರೀದೇವ ಬಾ |
ಈ ಭವಭಯಗಳನು ನಿವಾರಿಸು ಈಕ್ಷಣ
ಜವದಿ ಕಾಯಲು ಬಾ ದೇವ ಜವದಿ ಕಾಯಲು ಬಾ ||ಪಲ್ಲ||
ಅನುದಿನದಲಿ ನಿನ್ನ ಧ್ಯಾನವನೀವ |
ಯೀ ನಿನ್ನ ತನಯನ ಮನ್ನಿಸು ಅರುವ
ಜನನಿ ಜನಕ ಜೀವ ದೇವ ||1||
ಏನು ಬೇಡಲಿ ನಿನ್ನ ಧ್ಯಾನವೆ ಸಾಕು |
ಉನ್ನತವಾದಂಥ ಘನ ಪದವೆದಕೊ
ಘನ ಜ್ಞಾನವನೀವ ದೇವ ||2||
ಗಂಗೆ ಯಮುನೆ ಮಧ್ಯ ಸಂಗವಾಗಿರುವ |
ಸಂಗಮೇಶನೆ ಕಂಗಳದಿರುವ
ಮಂಗಳಾತ್ಮ ಸರುಪಾ ದೇವ ||3||
ತತ್ವ ತಿಳಿಸಿ ಸತ್ಯ ಪಥಗತಿಯರಿಸೊ |
ಪತಿತ ಪಾವನ ನಿನ್ನ ಮತಿಹಿತದಿರಿಸೊ
ಸತತ ಸತ್ಯದಿಯಿರುವ ದೇವ ||4||
ಧರಿಯಲಿ ನೌರಸಪುರದಲಿ ವಾಸ |
ವರಕವಿ ಶ್ರೀಗುರು ಕರಿಘೂಳೀಶ
ಗುರು ಮುರುಗೇಂದ್ರ ಶಿವ ದೇವ ||5||
ಅನುದಿನದಿ ಮನದೊಳು
ಅನುದಿನದಿ ಮನದೊಳೋನ್ನಮಶಿವ |
ಎನುತಲಿರು ಮನ ಪ್ರಣಮಂತ್ರವಿದು ಘನ ||ಪಲ್ಲ||
ತನುಮನಧನ ಗುರುವಿಗಿತ್ತು ಜ್ಞಾನಿಯಾಗಣ್ಣ |
ಘನಪದವಿ ನಿನಗಣ್ಣ ||1||
ಆದಿ ಆಧಾರ ಮೂಲ ಭೇದ |
ಬೋಧನರಿಯಣ್ಣ ಸ್ವಾದಿಷ್ಟ ಬ್ರಹ್ಮನ ||2||
ತಾರಕದನುಪೂರಕದೊಳು |
ಸಾರ ಸುರಿಯಣ್ಣ ಪರಿಪೂರ್ಣ ಪರಮನ ||3||
ಆಶಪಾಶ ಹೇಸಿ ವಿಷಯ |
ಘಾಸಿಪುಸಿಯಣ್ಣ ಶಶಿವಾಸ ನೀನಣ್ಣ ||4||
ಜಪತಪ ವ್ರತವ್ಯಾತಕೆ ನಿನ್ನತ್ತಿರಾನಣ್ಣ |
ಕರಿಘೂಳಿ ಗುರುವಣ್ಣ ||5||
ಶಿವಜ್ಞಾನ ಧ್ಯಾನವದಿಲ್ಲದೆ ಜ್ಞಾನವೆಲ್ಲಿಹದೊ
ಶಿವಜ್ಞಾನ ಧ್ಯಾನವದಿಲ್ಲದೆ ಜ್ಞಾನವೆಲ್ಲಿಹದೊ |
ಮನು ಮುನಿಗಳಿಗಾದರು
ಮಾನ್ಯರಿಗಾದರಭಿಮಾನ್ಯರಿಗಾದರು ||ಪಲ್ಲ||
ಮನ್ನಿಸುತನುದಿನ ಚಿನುಮಯ ಧ್ಯಾನವು |
ಮನದೊಳು ಮೌನವಂದಿಲ್ಲದಿರೆ
ಘನ ವೇದ ಸಾರವು ಮನವಗೈಯದೆ
ಘನಪದ ಹೊಂದಬಹುದೆ ||1||
ಜಪತಪ ವ್ರತಗಳು ಉಪವಾಸ ವ್ಯರ್ಥಂಗಳು |
ಪಾಪಕೂಪವ ಕಾಪಾಡ್ಬಹುದೆ ಸರ್ವ
ವ್ಯಾಪನಾದಂಥ ಪರಮಾ ಗೋಚರನು
ಭೂಪತಿಗಳಿಗಾದರು ||2||
ಅಂಡಪಿಂಡ ಬ್ರಹ್ಮಾಂಡಗಳಲ್ಲಿಯು |
ತಾಂಡವಾಡುವ ಮಾರ್ತಂಡನು
ಭಾಂಡ ನೇತ್ರಾಂಡದಿರೊ ಆ ರುಂಡಮಾಲ
ಕಾಣ ಕಂಡ ಪಂಡಿತರಿಗಾದರು ||3||
ಆಶನ ವಿಷಯಕ್ಕಾಗಿ ವೇಷಭೂಷಿತರಾಗಿ |
ಕಾಸಿಸುವದು ಮೋಸಹುದೊ
ನಾಶಿಕ ಶ್ವಾಸೀಶ ಧ್ಯಾಸವದಿಲ್ಲದೆ
ವಿಶ್ವನು ವಶವಹುದೆ ||4||
ಉದರಾಧಾರದಿ ಕವಿ ವಿದ್ಯೆ ಸಾಧಿಸಲದು |
ನದಿಯಂತಾಗಾಧಾಬಾಧಹುದೊ
ಸಾಧು ಸತ್ಪುರಷರ ಬೋಧ ಸಾಧಿಸದಿರೆ
ಸದಾ ಬ್ರಹ್ಮಾನಂದವಹುದೊ ||5||
ಧರೆಯೊಳಗರಸಪುರದಲಿ ವಾಸ |
ಪಾರಮಹಿ ಶ್ರೀ ಕರಿಘೂಳೀಶ
ಪರಮಪಾವನ ಮುರುಗೇಂದ್ರನ
ಸಾರಾಮೃತವು ಸೇರುವದೆ ಆರಿಗಾದರು ||6||
ಗುರುರಾಯರು ಬರುತಾರೇನೆ
ಗುರುರಾಯರು ಬರುತಾರೇನೆ |
ಭರರರ ಮೋಟಾರದಾಗ
ಕರುಣದಿಂದ ಕರ ಪಿಡಿಯಲು ಶ್ರೀಗುರು ||ಪಲ್ಲ||
ಬಡ ಧೃಢಭಕ್ತರ ನೋಡಿ |
ಸಡಗರದಲ್ಲಿ ಕೂಡಾಡಿ
ಬೇಡಿದ ವರ ದಯ ಮಾಡುವ ಶ್ರೀಗುರು | ||1||
ಬಲ್ಲವರಿಗೆ ಬಲು ಪ್ರೇಮ |
ನಿಲ್ಲದೆ ಸಲಹುವ ನೇಮ
ಎಲ್ಲಿ ನೋಡಲಲ್ಲಿರುವನು ಶ್ರೀಗುರು ||2||
ಆದಿಯಲಿದ್ದಂತಾ ವೇದವ |
ಬೋಧಿಸುವಾತ
ಆದಿ ಅನಾದಿಗಳ್ತಿಳಿಸುವ ಶ್ರೀಗುರು ||3||
ಬಲ್ಲವರಾತನ ಕೂಡಿ |
ಎಲ್ಲ ಸುಖದಿ ಲೋಲಾಡಿ
ಎಲ್ಲಕಾಲ ಸುಶೀಲದ ಶ್ರೀಗುರು ||4||
ಬಳಿಯುವನೆ ಭವರೋಗ |
ಇಳಿದಾನೆ ಕಲಿಯಾಗ
ಇಳೆ ನರಜನ್ಮವು ತಾಳಿದ ಶ್ರೀಗುರು ||5||
ಭಕ್ತಿಗೆ ವಲಿಯುವ ತಾನು |
ಮಿಥ್ಯದಿಂದ ಫಲವೇನು
ಭಕ್ತಿಜ್ಞಾನ ವೈರಾಗ್ಯದ ಶ್ರೀಗುರು ||6||
ಧರಿಯೊಳು ಲಿಂಗದ್ಹಳ್ಳಿ |
ವರಕವಿ ಗುರು ಮುರುಗೀಶ
ಚರಣದೊಳಗೆ ಮಾಣಿಕ್ಯದ ಶ್ರೀಗುರು ||7||
ಶ್ರೀಗುರು ಉಪದೇಶದಿ
ಶ್ರೀಗುರು ಉಪದೇಶದಿ |
ಭಯವಾದೋ ಅಭಯಾದೋ ಭಯವಾದೋ
ಘೋರ ಸಂಸಾರಿಗೆ ಬಹು ದೂರಾದೊ
ಪಾರಮಾರ್ಥ ಶರೀರದೊಳಾದೊ
ಅರಿತು ನೋಡುವರ ಕರದೊಳಾದೊ
ಮೂರ್ಖ ಮನುಜರಿಗೆ
ದೊರಿಯದೋ ದೊರಿಯದೋ ದೊರಿಯದೋ ||ಪಲ್ಲ||
ಆರು ಬೆಟ್ಟದ ಆಚಿಲಿ ಆದೊ |
ಮೂರು ಕೊಳ್ಳದ ಮಲಕಿನೊಳಾದೊ
ಏರಿ ನೋಡಿದರೆ ಸಣ್ಣ ದ್ವಾರಾದೊ
ಸಾರಿ ಹೋದವರಿಗದು
ದೊರಿಯದೋ ದೊರಿಯದೋ ದೊರಿಯದೋ ||1||
ಏಳುಸುತ್ತಿನ ಕೋಟೆಯೊಳಾದೊ |
ಏಳು ನದಿಯ ಸಂಗಮದೊಳಾದೊ
ಏಳು ಜ್ಯೋತಿಯ ಬೆಳಕಿನೊಳಾದೊ
ತಾಳ ಮರ್ದಲಿ ನಾದದೊಳಾದೊ
ಭಯವಾದೊ ಅಭಯಾದೊ ||2||
ದ್ವಾರ ಒಂಭತ್ತು ಬಾಗಿಲೊಳಾದೊ |
ಎರಡು ಸ್ಥಂಭದ ಗುಡಿಯೊಳಾದೊ
ಸುರಿವ ಅಮೃತದ ಧಾರೆಯೊಳಾದೊ
ಕರಿಘೂಳೀಶನ ಉನ್ಮನಿಯೊಳಾದೊ
ಭಯವಾದೋ ಅಭಯಾದೋ ||3||
ನಳಿನಸುತೆ ಇಳೆಯೊಳಗ ಉದಸಿಹಳೊ
ನಳಿನಸುತೆ ಇಳೆಯೊಳಗ ಉದಸಿಹಳೊ |
ಕಳೆದುಳಿದು ನಯನದಿ
ಸುಳುವ ದಳಗಳನಟ್ಟಿ ತಿರುಗುವಳೋ
ನಳಿನ ದಳಗಳು ಹೊಳೆದು ಥಳಥಳ ಕಾಳೀ ತ್ರಿಗುಣದಿ
ಇಳಿದಳಾ ಕ್ಷಣ ಯೋಗ ದಾರಿಲಿ
ನಳಿನ ಕರ್ನಿಕಿಯು ನಡು ನಾಡದಿ ||ಪಲ್ಲ||
ಆರು ವರ್ಣದ ದಾರ ಸೀರಿಯನು |
ಆರಾರ್ಧ ಚಕ್ರವ ಸೇರಿ ನಿರ್ವಯಲಾಗಿ
ತಾರಿಹನು ಅರವಿಯು ಕುಂಡಲಿಯು ಶಂಕರಿ
ತೋರುತಿರ್ದಳಾಗ ತ್ರಿಕೋಣಿ
ಕಾರಣಾತನು ಹಿಡಿದು ತೋರ್ವಳು
ವೀರಗದ್ದಿಗೆ ರಂಗು ನಿಲಯದಿ ||1||
ಜ್ಞಾನ ವಿದ್ಯೆಯು ಚಿತ್ತ ಅಹಂಕರದಿ |
ವಿನಯದಲಿ ಹೃದಯದಿ
ತನುವು ಧನವು ಇತ್ತು ಕಿಂಕರದಿ
ನೆನವಿನೋಳ್ ನೆನವಡಗಿ ಚಿದ್ಘನ
ದನುವರಿತು ವಸವೆನಿಸಿ
ಯವ್ವನ ಕೊನೆಯೊಳಗಿರುವ ಜೀವನ
ಕನಕ ಸಿಂಹವನೇರಿ ಜನನಿ| ||2||
ಧರೆಯೊಳು ಗುರು ರಜತಚಲದಲ್ಲಿ |
ಕರವೆತ್ತಿ ಕರೆಯಲು
ತ್ವರವಗೈದೆ ಸರಸ ದೂಡುತಲಿ
ಕರುಣದ ದೃಷ್ಟಿಯು ತೆರೆದು ನೋಡಲು
ಶರಣು ಎನ್ನುತೆ ಶರಗು ಹಿಡಿದನು
ಕರುಣಹಂಸ ವರವ ನೀಡುತ
ನಿರುತ ಕರಿಘೂಳೀಶಗೊಲಿತಳೊ ||3||
ಪರಮಾತ್ಮ ಹಾನ ಈ ಘಟದೊಳಗ
ಪರಮಾತ್ಮ ಹಾನ ಈ ಘಟದೊಳಗ |
ಪರಮಾತ್ಮ ಆನ ಪರಿಕ್ಷಿಸಿ ನೋಡೋ
ತನು ಮಠದೊಳಗ ಪರಮಾತ್ಮ ಆನ ||ಪಲ್ಲ||
ಪೃಥ್ವಿ ಪ್ರಕಾಶ ವಾಯು ಆಕಾಶ |
ತತ್ವ ನಕಾಶ ಗುಪ್ತ ಮಹೇಶ
ಚಿತ್ತಮನ ಕೂಡಿಸೋ ನೋಡದೊಳಗ
ಪರಮಾತ್ಮ ಹಾನ ||1||
ಅಂಗ ಪ್ರತಂಗ ಲಿಂಗ ಸೂಸಂಗ |
ಅಂಗಜನಾಭಂಗ ತುಂಗ ಶಂಭುಲಿಂಗ
ಅಂಗಲಿಂಗ ಶಿವಲಿಂಗ ಪೀಠದೊಳಗ
ಪರಮಾತ್ಮ ಆನ ||2||
ಇಂದ್ರಿಯ ಪಂಚಕ ನೀ ಮದ್ರಿಸೋ ವಂಚಕ |
ಬಂಧುರ ರೇಚಕ ಕುಂಭಕ ಆಚಕ
ಇಂದು ರವಿಕೋಟಿ ಪ್ರಕಾಶದೊಳಗ
ಪರಮಾತ್ಮ ಆನ ||3||
ವಾಸನ ತ್ರಯದೊಳು ಪಾಶಾಣ ತ್ರಯದೊಳು |
ದೋಷಣ ತ್ರಯದೊಳು ಈಷಣ ತ್ರಯದೊಳು
ಕಾಶೀ ಉಪದೇಶದರ್ಭಟದೊಳಗ
ಪರಮಾತ್ಮ ಆನ ||4||
ಸಯ್ಯದ ಮೊಹಮ್ಮದ ಐನೂರೇ ಹೈಮದ |
ತೈಯ್ಯಬ ಕಲ್ಮದ ವೈಲವಪೇಳಿದ
ಅಯ್ಯ ಕರಿಘೂಳಿ ಲಲಾಟದೊಳಗ
ಪರಮಾತ್ಮ ಆನ ||5||
ಹರನ ಭಜಿಸಲಿಲ್ಲ ಮನಸೇ
ಹರನ ಭಜಿಸಲಿಲ್ಲ ಮನಸೇ |
ಮನಸೇ ಮನದೊಳಗ ಇರುವನು ಈಶ
ಆರು ಚಕ್ರದ ಮೇಲೆ ಸೊಗಸೆ
ಹರಿ ದೇವತೆಗಳಿಗೆ ಸರಸೆ
ಸೇವ ಮಾಡುತಲಿರು ನೀ ಅರಸೆ
ನಿನಗೇನು ಕಡಿಮೆ ಬಿಡು ಆಸೆ
ಸಾಮಿಪ್ಯ ಪದವಿ ಕೈಲಾಸೆ ಹರ ||ಪಲ್ಲ||
ಬ್ಯಾಡೋ ಬ್ಯಾಡೋ ಬ್ಯಾಡೋ |
ಅವಗುಣಗಳು ನೀ ನಡಿಬ್ಯಾಡೋ
ಗುರುಹಿರಿಯರ ವಾಕ್ಯ ಸಿದ್ಧಿ ಮಾಡೊ
ದುರ್ಮಾರ್ಗ ಸಂಗವು ಬ್ಯಾಡೋ
ಯಮ ಶಿಕ್ಷಿಸುವನು ನೀ ನೋಡೋ ಹರ ||1||
ಆರೋ ಆರೋ ಆರೋ |
ಕಾಮಕ್ರೋಧಗಳಿರುವವು ಆರೋ
ಆರಿಗಿ ಕಾಣವಲ್ಲಾರೊ
ದುರ್ಬುದ್ಧಿಗಿ ಮನಗೊಡುವಾರೋ
ಗುರು ಪುತ್ರರಾದಂಥವರೊ
ಶಾಂತಿ ಖಡ್ಗದಿ ಸಂಹರಿಸುವರೋ ಹರ ||2||
ಆಹೋ ಆಹೋ ಆಹೋ |
ಮಲಮೂತ್ರದಿಂದ ದೇಹವೊ
ನರ ಎಲವು ಚರ್ಮ ಮಾಂಸವೊ
ತುಂಬಿರುವಂಥ ಈ ಘಟವೋ
ಜೀವಿರುವತನಕ ಕ್ಷೇಮವೋ
ಕವಡಿಗೆ ಬಾಳದಿಲ್ಲವೊ ಹರ ||3||
ಅಣ್ಣ ಅಣ್ಣ ಅಣ್ಣ |
ನಿನಗಿಂತ ಹೆಚ್ಚಿಗಿಲ್ಲಣ್ಣ
ಪರಮಾತ್ಮ ನೀನೆ ಕಾಣಣ್ಣ
ಪರಸ್ತ್ರೀಯ ಭ್ರಮಿಸಬ್ಯಾಡಣ್ಣ
ನರ್ಕಿರುವದು ದೂರ್ಮಾಡಣ್ಣ
ನಾನೆಂಬ ಗುಣ ಅಳಿಯಣ್ಣ
ನಾರಾಯಣನಾಗಿ ಇರಣ್ಣ ಹರ ||4||
ಆನೋ ಆನೋ ಆನೋ |
ಎಲಿರಾಜಳ್ಳಿಯಲ್ಲಿ ಇರುವನೋ
ಕಣ್ಣಿನೊಳು ಕಣ್ಣಗಂಡವನೊ
ಸದ್ಗುರುವು ಕರಿಘೂಳೀಶಾನೊ ಹರ ||5||
ಶಿವನ ಭಜಿಸಲಿಲ್ಲ
ಶಿವನ ಭಜಿಸಲಿಲ್ಲ ಜೀವ ಜೀವ |
ಶಿವನ ಸೇವೆಗಯ್ಯಲನುಭಾವ
ಸಾವಧಾನದಿ ತಿಳಿವದು ನಿಜವ
ಭವ ನೆವಗಳು ಜವ ಕಳೆಯುವ
ಆವಾವಗ ಸ್ಥಿರ ಸುಖವೀವ
ಕೈವಲ್ಯ ಕೈ ಸೇರುವ ಶಿವನ ||ಪಲ್ಲ||
ತಡಿಯೋ ಕೆಡಗುಣಗಳು ಬಾರದೆ ತಡಿಯೋ |
ಈಡಪಿಂಗಳ ನಾಡಿಲಿ ನಡಿಯೋ
ನಡುವಿರುವದು ಸುಷುಮ್ನನಾಡಿಯೋ
ಅಡಿಗಡಿಗೆ ಮೃಡನ ನುಡಿ ನುಡಿಯೋ
ಜಡದೇಹ ಬಿಡಿಸಿ ಪಾದ ಪಡಿಯೋ ಶಿವ ||1||
ನೋಡೋ ಬಿಡದನುದಿನ ಸಾಧನ ಮಾಡೋ |
ಎಡ ನೇತ್ರದ ದೃಷ್ಟಿಯ ನೀಡೋ
ಓಡಾಡುವ ಮನ ಸ್ಥಿರ ಮಾಡೋ
ಮೃಡತಾರಕ ರೂಪದಿಗೂಡೋ
ಸಡಗರದಲಿ ಸದಾ ಲೋಲಾಡೋ ಶಿವನ ||2||
ನಾದಾ ಆದಿಯಲಿ ಆಲಿಸು ನಾದ |
ಸದಾ ಸಾಧಿಸು ದಶವಿಧ ನಾದ
ಇದು ಮನವನು ನಿಲಿಸುವದಾದ
ಸದಾಶಿವನ ಪಾದದಲ್ಯಾದ
ಅದರಲ್ಲಿ ಆದ ನಿಜಬೋಧ ಶಿವನ ||3||
ತಿಳಿಯೋ ಥಳ ಥಳಿಸುವ ಬೆಳಗಿಲಿ ಸುಳಿಯೋ |
ಬಿಳಿದ್ಹಳದಿ ನೀಲದೋಳ್ಹೊಳಿಯೋ
ಏಳು ಹೊಳಿ ಸುಳಿ ಮೇಲೇರಿ ಹೊಳಿಯೋ
ಇಳೆಯೊಳು ಅಳಿಯದಂತುಳಿಯೋ ಶಿವನ ||4||
ಸಾಕೋ ಕಾಕುಗುಣಗಳು ಕಡಿಯಲಿ ನೂಕೋ |
ಈ ಲೋಕದ ಜೀವನ ಸಾಕೋ
ಅಕಳಂಕ ಕರಿಘೂಳಿ ಇದಕೋ
ಸಹಕಾರದಿ ವಶಮಾಡಿಕೊ ಶಿವನ ||5||
ಕಾಣೈ ತಾರಕ ಬ್ರಹ್ಮವ
ಕಾಣೈ ತಾರಕ ಬ್ರಹ್ಮವ ನಿನ್ನಾಂತ್ರದೊಳು |
ಕಾಣೈ ತಾರಕ ಬ್ರಹ್ಮವ
ಕಾಣೈ ತಾರಕ ತೇಜ ಮಾಣೈ
ದುರ್ವೆಸನ ನಿಜ ಕ್ಷೋಣಿಪತಿಯು
ಕುಂಭಕೋಣಿ ಸಂಭ್ರಮವ ಕಾಣೈ ||ಪಲ್ಲ||
ಗದ್ದಿಗಿ ಹಾಕಿ ಕಣ್ಣು ಮಧ್ಯ ಪೀಠಾಗ್ರದಲ್ಲಿ |
ಸದ್ದುಯಿಲ್ಲದೆ ಮನ ಮುದ್ರೆಯ ನೇಮವ ಕಾಣೈ ||1||
ಎಡರು ಮೂರು ಐದು ಹತ್ತು ಆರು ನಾಲ್ಕು ಅಷ್ಟ ಅಪ್ತ |
ಅರವತ್ತರಲಿ ಪತ್ತ ಸಾರುವದು ಗ್ರಾಮವಾ ಕಾಣೈ ||2||
ಸರ್ವಾಂಗ ಲಿಂಗವಾಗಿ ಸರ್ವೆಲ್ಲ ಅಂಗವಾಗಿ |
ಸರ್ವೇಶ ಕರಿಘೂಳಿ ಸರ್ವ ಜಂಗಮವ ||3||
ಗಂಗಾಧರನ ನೋಡೆ
ಮಂಗಳಾಂಗಿ ವರ ಗಂಗಾಧರನ ಲಿಂಗನ ನೋಡೆ |
ಅಂಗವೆಂಬೋ ಆಲಯದಿ ನಿಸ್ಸಂಗನಾಗಿ
ಕೋಟಿ ತಿಂಗಳನಂತೆ ಪಾಡೆ ಮಂಗಳಾಂಗಿ ||ಪಲ್ಲ||
ರೂಪುನಾಮಗಳೇನೇನಿಲ್ಲ ವ್ಯಾಪಿಸಿಹನು ಜಗವೆಲ್ಲ |
ನಿರೂಪಿಯಾಗಿ ಆ ಪರಬ್ರಹ್ಮನು ಸೂಪಿನೊಳಗ ಕಾಣುವಲ್ಲ
ವಿಪರೀತ ವಿಧದಿ ನೋಡಲಿಕ್ಕೇನಳುವಿಲ್ಲ ಗುಪಿತದೀ ಗುರಿಯಿಟ್ಟು
ಜ್ಞಾಪಕದೊಳಿರುಬೇಕು ಆ ಪರಂಜ್ಯೋತಿಯ ಮೇಲೆ ಮಂಗಳಾಂಗಿ ||1||
ಜಪತಪ ನೇಮಗಳು ಜಪಿಸಿದರೇನು ಫಲವಿಲ್ಲ |
ಕೋಪತಾಪ ಅಳಿದು ಮನ ಸಾಪ ತಿಳಿದು
ಇನಸಾಪ ಮಾಡೋ ಜ್ಞಾನದ ಕೀಲ ಈ ಪುಸ್ತಕ
ಪಾಠ ಶಾಸ್ತ್ರ ಪುರಾಣವು ಸುಳ್ಳೊ ಅದು ಸುಳ್ಳೊ
ವಿಪಿತದಿ ಕುಳಿತು ಜಪಮಾಲೆ ಎಣಿಸುವದು ಮಳ್ಳೊ ಅದು ಮಳ್ಳೊ
ಈ ಪ್ರಪಂಚ ನಡಿನುಡಿ ಟಪ್ಪಾಖಾನಿಯಂತೆ ಪಳ್ಳೊ ಅದು ಪಳ್ಳೊ
ಉಪದೇಶ ಪಡೆದು ಗುರುಪಾದ ಪಿಡಿದು ನೀ ನೋಡೆ
ಅಂಗವೆಂಬೊ ಆಲಯದಿ ನಿಸ್ಸಂಗನಾಗಿ
ಕೋಟಿ ತಿಂಗಳನಂತೆ ಪಾಡೆ ಮಂಗಳಾಂಗಿ ||2||
ಆಶ ಪಾಶ ಕ್ಷೇಶ ತಾಮಸದಿ ಬಸಿಯದಿರು ಇಂದ್ರಿ |
ವ್ಯಸನೇಳುವತ್ತಿ ಚಲಿಶಾಡದಂತೆ ಉಲ್ಲಾಸದಿ ಬಿಗಿ ನವರಂಧ್ರ
ಹಸುವಾಗಿ ಕೊಸರಿ ಬುಸುಗರಿದು ಬರುವ ನಾಗೇಂದ್ರ
ವಿಷ ಕಾರುವ ಸಮಯದಿ ಧ್ಯಾಸವು ಸೋಸದೆ
ಹುಸೇರಿನಾಗೊ ದೇವಿಂದ್ರ ನಾಸಾಧನಾದರೆ ನರ್ಕಕ ನೀ ನಡಿಯಂದ
ನಡಿಯಂದ ನೀ ಸಾಧನಾದರೆ ನಿಜ ಸಮಾಧಿ ಪಡಿಯಿಂದ
ಪಡಿಯಂದ ಈ ಹೇಸಿಕೆ ಸಂಸಾರ ಭೋಗ ತ್ಯಾಗ ಮಾಡೆಂದ
ಮಾಡೆಂದ ಹಸುಗೂಸಿನಂತೆ ಸದ್ಗುರುವಿನ ವಶ ನೀ ಮಾಡೇ
ಅಂಗವೆಂಬೋ ಆಲಯದಿ ನಿಸ್ಸಂಗನಾಗಿ
ಕೋಟಿ ತಿಂಗಳಿನಂತೆ ಪಾಡೆ ಮಂಗಳಾಂಗಿ ||3||
ಭವಗೇಡಿಯಾಗಿ ಆ ಗೌರಿಧವನರಿಯದ ತಿರಗಿದ ಹಿಂದೆ |
ಜೀವನೋಪಯಕಾಗಿ ಯಾವಾಗಲು ದುಡಿದು ದುಡಿದು ಬಹಳ ಬೆಂದೆ
ಸಾವಿರಕೋಟಿ ಜನ್ಮದ ಸುಕೃತ ಫಲದಿಂದ
ಶಿವನಾಮ ಬಿಂದು ಭವದೊಳಗ ಬಂದು
ಅವತರಿಸಿ ಹರನು ನರನೆಂದೆ ಆವಾಗ
ತೋರಿಸಿದ ಸಾಂಖ್ಯ ತಾರಕದ ಯೋಗ
ರಾಜಯೋಗ ರವಿಕೋಟಿ ಸೂರ್ಯನ ಪರಮ ಪ್ರಕಾಶದ ಬೆಳಗ
ಜ್ಯೋತಿ ಬೆಳಗ ವಿವೇಕದಿ ಉನ್ಮನಿಯಲ್ಲಿ
ಮರೆತು ಬಂಧುಬಳಗ ಬಂಧುಬಳಗ
ವಿಧವಿಧದಿ ಯವ್ವನದ ಕರಿಘೂಳೀಶನ ನೋಡೆ ಅಂಗವೆಂಬೋ
ಆಲಯದಿ ನಿಸ್ಸಂಗನಾಗಿ ಕೋಟಿ ತಿಂಗಳ ಪಾಡೆ ಮಂಗಳಾಂಗಿ ||4||
ಅರುವಿನ ಅರುವನು ನರರೇನು ಬಲ್ಲಾರು
ಅರುವಿನ ಅರುವನು ನರರೇನು ಬಲ್ಲಾರು ಮರೆಯಾಗಿರುವನು |
ಪರಬ್ರಹ್ಮ ಗುರು ಕರುಣ ಪಡೆದು ಗುರುಗೂಡಿದವರಿಗೆ
ಸ್ಥಿರವಾಗಿರುವದು ಪರಬ್ರಹ್ಮ ||ಪಲ್ಲ||
ಕರಗದೆ ಮರಗದೆ ಹರಿಯದೆ ಮುರಿಯದೆ |
ತ್ವರಿಯದೆ ಇರುವದು ಪರಬ್ರಹ್ಮ
ನರ ಪಶು ಮೃಗ ಕ್ರಿಮಿ ಜಲಚರ
ಸರ್ವರೋಳ್ನಿರತಾಗಿರುವನು ಪರಬ್ರಹ್ಮ ||1||
ಆಧಾರ ಆದಿಯಾಗಿ ಶೋಧನಗೈಯುತ |
ನಾದನಂದವು ಪರಬ್ರಹ್ಮ
ಆದಿ ದೇವತೆಗಳ ಭೇದನವಾದರೆ
ಮೋದದೊಳಿರುವನು ಪರಬ್ರಹ್ಮ ||2||
ಎರಡೆರಡಾಗಿ ಎರಡು ಹನ್ನೆರಡರೊಳು ಪರಬ್ರಹ್ಮ |
ಎರಡ್ಹತ್ತು ಸಾವೀರ ಎರಡಷ್ಟಮಿಯೊಳು
ಎರಡರವತ್ತುರೊಳು ಪರಬ್ರಹ್ಮ ||3||
ಧರಿಗಿರಿ ಗುಂಹ್ಯಾರ ತಿರುಗಿದರಿಲ್ಲವು |
ತಾರಕದಿರುವನು ಪರಬ್ರಹ್ಮ
ಕರಿಘೂಳೀಶರ ಚರಣ ಸರೋಜದೊಳು
ಪರಿಪೂರ್ಣ ಇರುವದು ಪರಬ್ರಹ್ಮ ||4||
ದೊರಕದು ಮನಸೆ
ದೊರಕದು ಮನಸೆ ತರಕವುಗೈದರೆ |
ಪರಮ ಗೌಪ್ಯ ಮಹಾ ಮಂತ್ರವೆಲೋ ||ಪಲ್ಲ||
ಶರಣಾಗತರಿಗೆ ಸ್ಥಿರ ವೈರಾಗ್ಯವು |
ವೀರಶೈವರ ಸ್ವಾಧೀನವೆಲೋ
ಗುರು ಹಿರಿಯರಿಗೆ ಸ್ವಾಧೀನವೆಲೋ
ಇದು ದೊರೆ ಅರಸರಿಗೆ ಅಸಾಧ್ಯವೆಲೋ
ಅರಿಯದೆಲೋ ಅದು ಮರಿಯದೆಲೋ
ಅದು ಮರಗದು ಕರಗದು ಸೊರಗದೆಲೋ ||1||
ಅರವು ಮರವು ಎರಿಡಿಲ್ಲವೆಲೋ |
ಮರವುಗರವು ಕುಲವಿಲ್ಲವೆಲೋ
ಸುರಿಸುವದು ಸಾರೂಪ್ಯವೆಲೋ ಇದು
ಕ್ಷೀರಾಮೃತ ಸವಿ ಸಾರವೆಲೋ ||2||
ಕಾರಣಕರ್ತರು ಇಲ್ಲವೆಲೋ |
ಮಹಾಕಾರಣ ತಾನಾಗಿರುವದೆಲೋ
ಪೂರ್ಣ ಬ್ರಹ್ಮ ಕರಿಘೂಳಿಯಲೋ
ಧ್ಯಾನ ಮೌನದಿ ಧಾರಣಗೈಯುವದೆಲೋ ||3||
ಯಾಕೆ ಸಂಸಾರವ ಬಿಡಬೇಕೊ
ಯಾಕೆ ಸಂಸಾರವ ಬಿಡಬೇಕೊ |
ವೇಷ ಹಾಕಿ ಸನ್ಯಾಸಿಯಾಗುವದ್ಯಾಕೊ
ಅಕಾರ ಉಕಾರ ಮಕಾರ ಸಾಕಾರ
ಓಂಕಾರ ಪ್ರಣಮ ಝೇಂಕಾರವು ತಿಳಿದರೆ ||ಪಲ್ಲ||
ಗುರುವಿನ ಮರ್ಮವು ಗುರುತು ಅರಿತವನಾಗಿ |
ಗುರು ಎರಡಕ್ಷರ ಗುರಿ ಕಲಿತವನಾಗಿ
ಗುರುವರ ಸೇವೆಗೆ ಗುಲಾಮನಾಗಿ
ಗುರುವೇ ಹರನೆಂದು ಗುಟ್ಟು ತಿಳಿದರೆ ||1||
ಮದ ಮತ್ಸರಂಗಳು ಮುರಿದವನಾಗಿ |
ಮತ ಭೇದಂಗಳು ಮರೆತವನಾಗಿ
ಮಂತ್ರ ವಿದ್ಯೆಗೆ ಮರಗದವನಾಗಿ
ಮಾಯಾದ ಸೃಷ್ಟಿಯ ಮೂಲವು ತಿಳಿದಾರೆ ||2||
ರಾಗದ್ವೇಷವು ನಿರಂಜನನಾಗಿ |
ರಾಜಯೋಗದೊಳು ರಂಜಿಪನಾಗಿ
ರವಿ ಶಶಿ ರಚನೆ ನಿರಾಜಿಪನಾಗಿ
ರಾಮ ತಾರಕಬ್ರಹ್ಮರಮ್ಯದಿ ತಿಳಿದರೆ ||3||
ಹಂಸೋಹಂಗಳ ಹಸಿಯು ತಾನಾಗಿ |
ಹಂಸ ವಾಹನರೂಢನಾಗಿ ತಾ
ಹರಿಹರ ಬ್ರಹ್ಮರ ಹಾದಿಯ ತಿಳಿದರೆ
ತಾರಕ ಬ್ರಹ್ಮನ ಜ್ಞಾನವು ತಿಳಿದರೆ ||4||
ಉರಗ ಶಿರೋಮಣಿ ಗುರುತರನಾಗಿ |
ಉರಿವ ಉನ್ಮನಿಗುಪಾಸಿಕನಾಗಿ
ಪೂರ್ವ ಪಶ್ಚಿಮಕ್ಕೆ ಸೇರಿದವನಾಗಿ
ವರ ಕರಿಘೂಳಿಯ ಪರಿಪೂರ್ಣವು ತಿಳಿದರೆ ||5||
ಕನಸು ಕಂಡೆ ಕೇಳೆ
ಕನಸು ಕಂಡೆ ಕೇಳೆ ಕಾಮಿನಿಯೇ |
ತನು ಮಂದಿರದೊಳಗೆ ಕನಸು ಕಂಡು
ಕನಸು ಕಂಡೆನಮ್ಮ ಅದರ ದಿನಸು ನಾನೇನ್ಹೇಳಲಿ ನಿನಗೆ
ಕನಸು ಮನಸು ದಿನಸಿನೊಳಗೆ
ಮನಸುಗೊಟ್ಟನು ಮನುಜನಾಥನು ||ಪಲ್ಲ||
ಇರುಳು ಹಗಲು ಎಂಬೋದರಿಯಾನೆ |
ಓರ್ವಳೆ ನಿದ್ರಿಯೊಳಿರಲು ಬಂದು ಹರಳು ಒಗಿದಾನೆ
ಮರುಳನಾಗಿ ನಾನದರ ಮೇಲೆ
ಮರವನೇರಿ ನೋಡುತ ಪೋದೆ
ಮರವ ಮುರಿದು ಧರಣಿಗೆ ಬಿದ್ದಿತು
ಸುರಪರನ ಕಂಡು ಮನ ಹರುಷಳಾದೇನೆ ||1||
ಐದು ಕಾಲಿನ ಮಂಚ ಹಾಕಿದೆನೆ |
ಮೇಲುಪ್ಪರಿಗೆಯಲ್ಲಿ ಸಾಲು ಸಾಲಿಗೆ ಜ್ಯೋತಿ ಹಚ್ಚಿದೆನೆ
ಬಾಲೆ ಬಹುಪರಿನಿದ್ರಿಯೊಳಿರಲು
ಮೇಲಕ್ಹಾರಿತು ಮಂಚವು ಸಹಿತಲಿ
ಆಲಿ ತೆರೆದು ನೋಡೆನೆಂದರೆ
ನೀಲವರ್ಣದ ಬಲಿಯ ಹಾಕಿದನೆ ||2||
ಸ್ವಪ್ನದೊಳಗೆ ಜಾಗ್ರ ಕಂಡೆನೆ |
ಮನ ಜ್ಞಾಪ್ತಿಯಲಿಂದೆ ಜಾಗ್ರದಿ ಸುಷುಪ್ತಿಯೋಳ್ಸೇರಿದೆನೆ
ಆಪ್ತಹಿತರು ಬಾಜಾಬ್ತಯಲ್ಹಾರ್ವರು
ಹಪ್ತಗಿರಿ ಕೊಡೆ ಹಿಡಿದರೆನಗೆ
ಗುಪ್ತದಿ ಜಾಂಗುಡಿ ತಾಳ ನಾದ ಮನ
ದೀಪ್ತಿಲಿ ಕೇಳುತ ಜಾಗ್ರದೊಳಾದೆನೆ ||3||
ಮೂರಾವಸ್ಥೆ ಏಕ ಕಾಲದಲಿ |
ಬ್ಯಾರೆ ಬ್ಯಾರೆ ಗುಣಿಸಿ ಸಾರಿಸಾರಿಗೆ ಹಂಚಿ ಹಾಕುತಲಿ
ಪಾರುವಾರಿಧಿ ಪಾರುಗಾಣಿಸೊ
ಪಾರಮಹಿಮ ಕರಿಘೂಳೇಶ್ವರ
ಧೀರ ನಾಗೆಂದಮೃತಪ್ಯಾಲಿ ಕುಡಿಸಿ
ಕೊರಳಿಗೆ ಹಾಕಿ ಪೋದಾನೆ ||4||
ಗುರುತು ಹಿಡಿಯಿರಿ
ಗುರುಲಿಂಗ ಜಂಗಮರು ನಾವು |
ಗುರುತು ಹಿಡಿಯಿರಿ ನೀವು
ಅರವಿನರುವನು ಗುರುತು ಪೇಳುವೆವು ||ಪಲ್ಲ||
ಗುರುವು ಲಿಂಗ ಜಂಗಮರು |
ಹರನರನ ಅವತಾರದಲಿ ಮತ್ರ್ಯದಿ
ಕುರುಹು ತೋರಲಿ ಭರದಿ ಬಂದೆವು
ಹಿರಿಕಿರಿಯರೆನ್ನದಲೆವರಿವೆವು ||1||
ಮೂರು ಮೂರ್ತಿಯ ಮೂಲಿ ತೋರಿಪೆವು |
ಮೂರು ತೆರದಲಿರ್ಪೆವು
ಮೂರು ಸ್ಥಲ ದೇಹದಲಿ ಸಾರಿಪೆವು
ಮೂರು ಕರಣವು ಮೂರು ವರಣವವು
ಮೂರು ಸ್ಥರಣವು ಮೂರು ಭರಣವು
ಮೂರು ಶರಣವು ಮೂರು ಮರಣಗಳರಪುತಿರ್ಪೆವು ||2||
ನಾಲ್ಕು ಸಾಧನಗೈದ ಸಂಪನ್ನ ಸಿಲ್ಕಾದೆ ಅನುದಿನ |
ಪಾಲ್ಕಿಯೋಳ್ಮೆರೆಯುವನು ಭೂಪ ತಾನ
ನಾಲ್ಕು ಭೋಗವು ನಾಲ್ಕು ಭಾಗ್ಯವು
ನಾಲ್ಕು ಯೋಗವು ನಾಲ್ಕು ತ್ಯಾಗವು
ನಾಲ್ಕು ಹಾದಿಯು ನಾಲ್ಕು ಬೀದಿಯು
ನಾಲ್ಕು ವೇದಗಳೊಪ್ಪಿಸುತಿರ್ಪೆವು ||3||
ಪಂಚಭೂತಗಳಂಶ ತಿಳಿಸುವೆವು |
ಪಂಚಾಂಗ ಪೇಳೆವು ಪಂಚವಿಂಶತಿ
ತತ್ವವ ಹೊಳಿಸುವೆವು ಪಂಚಕ್ಲೇಶವು
ಪಂಚಕೋಶವು ಪಂಚಶವು ಪಂಚಪಾಶವು
ಪಂಚಪ್ರಾಣವು ಪಂಚ ಪ್ರಣಮವು
ಪಂಚಬಾಣವು ಪೇಳುತಿರ್ಪೆವು ||4||
ಆರುಸ್ಥಲದಳ ಚಕ್ರವಧಿಪತಿಗಳ್ ಆರಾರು |
ಮೂವತ್ತಾರು ಅಂಗಗಳಾರು ದೇವತೆಗಳ್
ಆರು ಗಂಗೆಗಳಾರು ಲಿಂಗಗಳಾರು
ಸಂಗಗಳಾರುರಗಂಗಳ್ ಆರು ಯುಕ್ತಿಯ
ಆರು ಶಕ್ತಿಯು ಆರು ಭಕ್ತಿಗಳರವುತಿರ್ಪೆವು ||5||
ಏಳು ಋಷಿ ವ್ಯಸನೇಳು ಸಾಗರವು |
ಏಳೇಳು ಮನ ತಳವಳು ಪದ ಲೋಕೇಳುವಳ್
ಸ್ವರವು ಏಳು ವಾರಗಳೇಳು ತಾರಗಳೇಳು
ದ್ವಾರಗಳೇಳು ಪುರಗಳ್ ಏಳು ನೆಲೆ
ಕಲಿ ಏಳು ತಲಿಬಲಿ
ಏಳು ಫಲಗಿರಿ ಹೇಳುತಿರ್ಪೆವು ||6||
ಅಷ್ಟಸಿರಿ ಸಿದ್ಧಿಯಾ ಅಷ್ಟ ಮದ
ತನುಕೂಟ ನಟ್ಟಿಪೆವು |
ಅಷ್ಟವದಾನವು ಅಷ್ಟ ವಿಧಾನವು
ಅಷ್ಟ ಸತಿ ಸುತರ್ಹಿತರು ವಾರ್ದನ
ಅಷ್ಟ ತಿಥಿ ಅಷ್ಟ ಮತಿ ಗುರು
ಅಷ್ಟ ವಸು ಪಶು ಪ್ರಕಟಿಸುತಿರ್ಪೆವು | ||7||
ನವ ದರವಾಜ ತಲಪ ತೆರಿದಿಸುವೆವೊ |
ನೌಮಿರುಳು ಶ್ರೀ ರತನ್ ನೌ
ನೌಮೂರ್ತಿ ನಿಧಿ ಗ್ರಹ ಧ್ಯಾನ್ಯ ರಸ ಭೂ
ನೌಪ್ರಣಮ ದ್ವಯವು ಸಕೀಲಾ
ನೌಸತ್ಯ ಗುಣ ಶರಣಾರ್ಪಿತಾರ್ಪೆವೊ ||8||
ಹತ್ತು ಇಂದ್ರಿಗಳದರ ಸ್ಥಾಪನವೊ ಹತ್ತತ್ತು ವಿಷಯವೊ |
ಹತ್ಹೆಸರು ನರಶಿರ ಗಂಧಲೇಪನವೊ
ಹತ್ತು ನಾಡಿಗಳ್ಹತ್ತು ಘಾಳಿಗಳ್ಹತ್ತು
ನಾದಗಳ್ಹತ್ತು ಕಳೆಗಳ್ಹತ್ತು
ರಥ ಅಂಗ ಹತ್ತು ಸಾತ್ವಿಕ ಹತ್ತು
ಶತದಳಗೊತ್ತು ತೋರ್ಪೆವೊ || ||9||
ಒಂದೆ ಹನ್ನೊಂದಾಗಿ ಹೊಂದೆಪೆವೊ |
ಹನ್ನೊಂದರೊಳು ಮತ್ತೊಂದು ಗುಣಿಸಿನ್ನೊಂದು
ಪರಸವಿ ಉಣಿಸುತಿರ್ಪೆವೊ ||10||
ದ್ವಾದಶ್ಯಾತ್ಯಾತ್ಮ ಬೋಧಿಪೆವೊ |
ದ್ವಾದಶಿಯ ತಿಥಿಗಳ ಜ್ಯೋತಿ ಉತ್ತಮನೆ
ದ್ವಾದಶಿ ವ್ರತವು ಜಪವು
ತ್ರಯೋದಶಿ ಗಣಾಧೀಶ ದೇವರು
ಚತುರ್ದಶ ಮನು ಭುವನ ತಿಥಿಗಳ
ಪಂಚದಶ ತನು ಪೌರ್ಣಮಮವಾಸಿ
ಘೋಢಷುಪಚಾರ ಕಳೆಯಾ ಹೊಳೆಪೆವೊ ||11||
ನಮ್ಮ ನಿಮ್ಮಗೆ ಸಾಕ್ಷಿ ವಮ್ಮನವೊ |
ನಿಮ್ಮೊಳಗೆ ನಿಮ್ಮ ಬ್ರಹ್ಮ ಕಾಣ್ವದಕ್ಯಾಕೆ ಇಮ್ಮನವೊ
ಬ್ರಹ್ಮಜ್ಞಾನಕೆ ತನುಮನವು ಧನ
ಸುಮ್ಮನರ್ಪಿಸಿ ಪಡಿರಿ ತ್ರಿವಿಧವು
ಬ್ರಹ್ಮದುನ್ಮನಿಯ ಕರಿಘೂಳಿಯ ಪರ
ಬ್ರಹ್ಮ ಬಿಂದಿನೋಳೈಕ್ಯ ತೋರ್ಪೆವೊ ||12||
ಬಂದಾ ನವಾಜ ಖಾಜಾ
ಚಂದ್ರಾರ್ಕ ಕೋಟಿ ತೇಜಾ |
ಬಂದಾ ನವಾಜ ಖಾಜಾ
ಮಂದರಾ ಪುಷ್ಪಪೂಜಾ
ರಾಜಾಧಿರಾಜ ಖಾಜಾ ||ಪಲ್ಲ||
ಆಧಾರ ಲಿಂಗಾಚಾರ |
ಸ್ವಾದಿಷ್ಟದೋಳ್ವಿಚಾರ
ನಾದೋಂಕಾರಮುಚ್ಚಾರ
ವೇದಗೊಚಾರ ಖಾಜಾ ||1||
ಮಹಿ ಜೈಸಿದೈ ಖೇಚಾರ |
ಇಹಪರಕೆ ನಿಜ ಭೂಚಾರ
ಸಹದೇವನ ಸಾಚಾರ
ಸೋಹಂ ಉಚ್ಚಾರ ಖಾಜಾ ||2||
ತನುಗುಣದ ಗ್ರಹಚಾರ |
ಮನ ಬೆಳಿಕಿಯು ವ್ಯಭಿಚಾರ
ಘನಶಾಂತಿ ಚರಾದ್ವಿಚಾರ
ಜನಮೋಪಚಾರ ಖಾಜಾ ||3||
ತಿರುತಿರುಗಿ ಬರುವ ಗಾಚಾರ |
ಪರಿಹರಿಸೋ ನಾ ಲಾಚಾರ
ಪರಿಚಾರಕರ ತಾಚಾರ
ವೀರಶೈವಚಾರ ಖಾಜಾ ||4||
ಪರಬ್ರಹ್ಮಗೊಳಿಸು ವಿಚಾರ |
ನಿರಬೈಲಿನ ಸಮಾಚಾರ
ಕರಿಘೂಳಿಯ ಗುಣಾಚಾರ
ಗುರುಹಾರ ಚಾರ ಖಾಜಾ ||5||
ಕಣ್ಣಿನೊಳಿ ಇರುತಿಹನೊ
ಕಣ್ಣಿನೊಳಿರುತಿಹನೊ ಕಾರಣ ದೇವ |
ತನ್ನಂತೆ ಕಾಂಬುವನೊ ಕಣ್ಣಿನೊಳಗಣ
ಕಣ್ಣ ತೆರೆದು ಕಾರಣಾತ್ಮಕನನ್ನು
ಸಣ್ಣ ದ್ವಾರದೊಳಾಡಿ ಬ್ರಹ್ಮನು ||ಪಲ್ಲ||
ಇನ್ನು ತಿರುಗಿ ನೋಡಲು |
ನೋಡಲು ಗುರು ಗೌಪ್ಯದಿಂದಿರುವನೆಲೊ
ಇನ್ನು ಕುಮದಾಗ್ನಿ ಬೀದಿಯೊಳು
ತಾನೆ ತನ್ನನು ಹಾದಿ ಹಿಡಿಸಿ
ಪೌರ್ಣಿಮಿ ಅಮವಾಸ್ಯಮಧ್ಯದಿ
ಅನಘ ಅನುಪಮ ಆನಂದೀಶನು ||1||
ಆಧಾರ ಹಾದಿಯಲೋ ದಳ ಕಮಲ ಸ್ಥಲವೊ
ಶೋಧಿಸಿ ಸಾಧಿಸೆಲೊ
ಭೇದಿಸಿ ತ್ರಿಕೂಟದೊಳನುಮೋದಿಸಿ
ಜ್ಯೋತಿಯನ್ನು ಮುಡಿಸಿ
ನಾದದಶಗಳ ಕೇಳಿ ತಾಳುತ
ಆದಿ ಮೂಲಮಂತ್ರ ಒಡಿಯನು ||2||
ಗಂಗೆ ಯಮುನೆ ದಾಟಿಲೊ |
ಸರಸ್ವತಿಯ ಮುಟ್ಟಿ ಶೃಂಗಾಟಕ ಮೀಟೆಲೊ
ರಂಗು ಪಂಚಬಣ್ಣ ತಾರದಿ
ಮಂಗಳಹ ಮಲ್ಲಿಗೆಯ ಮಳೆ ಹನಿ
ಲಿಂಗಮಜ್ಜನಗೈವ ಕರಿಘೂಳಿ
ಜಂಗಮಾರ್ಯ ಸಂಗಮೇಶನು ||3||
ಅಂಬಾ ನೀ ದಯಪಾಲಿಸೆ
ಅಂಬಾ ನೀ ದಯಪಾಲಿಸೆ |
ಶಾಂಭವಿದೇವಿ ಸಾಂಬನೊಳಗೆ ಕಲಿಸೆ
ಅಂಬಾಪಾಲಿಸೆ ದಯ ನಂಬಿದ ಭಕುತರಿಗೆ
ಅಂಬರಾಗ್ರದಿ ಪ್ರೀತಿ ಬಿಂಬಾಧಾರ ತೋರಿ ||ಪಲ್ಲ||
ಒಂದೊಂದು ಸ್ಥಲ ಭೇದಿಸಿ |
ಒಂದರೊಳೊಂಭತ್ತು ವಿಧ ಭೇದಿಸಿ
ಒಂದೆ ಒಂದೆರಡಾಗಿ ಒಂದೆ ಮೂರನುವಾಗಿ
ಒಂದು ನಾಲ್ಕೈದಾರು ಏಳು ಎಂಟನು ತೋರಿ ||1||
ನೋಟ ನೋಟದಿ ಕೂಡಿಸೆ |
ತ್ರಿಕೂಟದಿ ಆಟವಾಟವನಾಡಿಸೆ
ಕೋಟಿ ಸೂರ್ಯನ ಪ್ರಕಾಶ ತಟದೊಳು
ನಾಟ್ಯವಾಡುತ ಶುಭ ಪಾಠ ಪಾಡುತ ಗೌರಿ ||2||
ಈಡಪಿಂಗಳ ಜೋಡಿಸಿ ನಡುನಾಡಿಯ
ಗುಡಿಯೊಳು ಮನಗೂಡಿಸಿ
ನೋಡೈ ನಿನ್ನಯ ರೂಪ
ಮಾಡೈ ಸೋಹಂ ಜಪ
ಬೇಡೈ ನಿಜವರವ
ಮೃಡಾನಿ ಸಮರಸವ ತೋರಿ ||3||
ಗಂಗೆ ಯಮುನೆ ಸರಸೆ |
ತುಂಗಭದ್ರ ಸಂಗಮದೋಳ್ಮಲರಿಸೆ
ಕಂಗಳ ಕಮಲದಿ ರಂಗುಮಂಟಪದೊಳು
ಮಂಗಳಾಂಗ ಕರಿಘೂಳಿ ಲಿಂಗನ ತೋರಿ ||4||
ಸಾಕು ಮಾಡೊ ಜನ್ಮ
ಸಾಕು ಮಾಡೊ ಜನ್ಮ ಸಾಕು ಮಾಡೊ |
ಸಾಕುಮಾಡೊ ಜನ್ಮ ಮುನ್ನ
ಬೇಕು ಪಾದಮೃತವನು ||ಪಲ್ಲ||
ನೂರು ವರುಷ ಬಾಳಿ ತನ್ನ |
ಸೇರಿ ನಲಿವ ರಾಶಿ ಇಹನು
ನೀರು ಗುರುಳಿಯಂತೆ ನಿಮಿಷದಿ
ತೋರಿ ಅಡಗುವ ತನುವನಿದನು ||1||
ಅಂಗನೆಯರ ಹಂಬಲದಿಂದೆ |
ಭೃಂಗನಾಗಿ ಕೀಟಕದಂತೆ
ಮಂಗಳಾಂಗಿಯ ಮೋಹದಿ ಸಿಲ್ಕಿ
ಭಂಗಪಡುವ ಅಂಗವಿದನು ||2||
ಅಲ್ಲಿ ಇಲ್ಲಿ ಎಂದು |
ತಿರುಗಿ ಬಲ್ಲೆ ಬಲ್ಲೇನೋ
ನಾನೆಂದು ಮರಗಿ ಕ್ಷುಲ್ಲ ಗುಣದಲಿ
ಚರಿ ಮಾಡುವ ಬೆಲ್ಲದಂಥ ಕಾಯವಿದನು ||3||
ಪರಮ ಪರತರ ಪರಶಿವ ನೀನೆ |
ನಿರಘ ನಿರುಪಮ ನಿಷ್ಕಳಂಕ
ಮರವು ಅರಿಸಿ ಅರವುತೋರೊ
ಹರನೆ ಶ್ರೀಗುರು ಕರಿಘೂಳೇಶ ||4||
ಕೂಡಬಾರದೆ ಸುಮ್ಮನೆ
ಕೂಡಬಾರದೆ ಸುಮ್ಮನೆ ಕೂಡಬಾರದೆ |
ಕೂಡಬಾರದೆ ನಾಡಿನೊಳು
ರೂಢಿಗೀಶನ ಕೃಪೆಯ ಪಡೆದು
ಮಾಡುವವರ ನೋಡಿ ನೀನು
ನೋಡಿ ನೋಡಲದಂಗೆ ಸುಮ್ಮನೆ ||ಪಲ್ಲ||
ಅಲ್ಲದದನು ಅಹುದು ಮಾಡಿ |
ಇಲ್ಲದುದನು ಹುಸಿಯ ಮಾಡಿ
ಎಲ್ಲರೊಳಗೆ ಬಲ್ಲಿದನೆನಿಸಿದ
ಅಲ್ಲಮಹಾಪ್ರಭು ತಾನೆಂದು ||1||
ಎಷ್ಟು ಹೇಳಲು ಕೇಳದ್ಹೋದಿ |
ಭ್ರಷ್ಟ ಸಂಗವ ಹಿಡಿದು ಕೆಟ್ಟಿ
ಸೃಷ್ಟಿಗೊಡೆಯ ಕರಿಘೂಳೀಶನ
ಘಟ್ಟಿಯಾಗಿ ಪಾದ ಪಿಡಿದು ||2||
ಮಹಾ ಸತ್ಯವಾನ
ನೂರೇನ ಬಿರುಸು ಅಲ್ಲಾ |
ಭಗವಾನಪಾರ ಮಹಿಮೆಯ ಶೀಲಾ
ಮಹಾ ಸತ್ಯವಾನ ||ಪಲ್ಲ||
ಶೂನ್ಯದ ಆಚೀಲಿ ಶೂನ್ಯದಿಚೀಲಿ |
ಹನ್ನೊಂದು ರುಚಿಯಲ್ಲಿ ಶಿವ ಮಾನ್ಯವಾನಾ ||1||
ಏಳು ಅಂಡಾಂಡಕ್ಕೆ ಏಳು ಪಿಂಡಾಂಡಕ್ಕೆ |
ಏಳು ಬ್ರಹ್ಮಾಂಡಕ್ಕೆ ಅಖಂಡವಾನ ||2||
ನಿಮ್ಮ ಪುಣ್ಯದ ಕಿರ್ತಿ ಇನ್ನೇನು ಹೇಳಲಿ ವಾರ್ತಿ |
ಧನ್ಯ ಸರ್ವೇಶಮೂರ್ತಿ ಸಂಪನ್ನವಾನ ||3||
ಎರಗುವೆ ಶರಣರಿಗೆ ಸ್ಮರಿಸುವೆ ಮನದೊಳಗೆ |
ಕರಿಘೂಳಿ ಧ್ಯಾನದೊಳಗೆ ಮಾಡೊ ಧ್ಯಾನ ||4||
ಸಾರಾಮೃತ ಸವಿ ಜ್ಞಾನ
ವೀರಶೈವನಾಗೊ ಮನವೆ |
ಪಾರವಾರುಧಿ ನೀಗೊ
ಭಾರಿ ಲಿಂಗವನು ಧರಿಸಿರು ಪರತರ
ಸಾರಾಮೃತ ಸವಿ ಜ್ಞಾನ ವೈರಾಗ್ಯದಿ ||ಪಲ್ಲ||
ಮಾಸಪಕ್ಷ ತಿಳೀಯೊ |
ಧನದ ಆಸೆಗಳನು ಕಳಿಯೊ
ವಿಶ್ವ ಸ್ವರೂಪ ಮಹೇಶ ಜಂಗಮನೊಳು
ಲೇಸ ಭಕ್ತಿಯಿಂದ ದಾಸನೀನಾಗೊ ||1||
ಹರಕೆ ನೇಮ ಮಾಡಿ ಒಂದಿನ |
ನರಕಕ್ಕೆ ಹೋಗುವಿ ಖೋಡಿ
ಪರಮ ಪುರುಷನೊಳು ಪರಿಪೂರ್ಣದಿ ಮನ
ಬೆರೆದು ಅರಿದು ವರ ಪ್ರಸಾದ ಕರಕೊಂಡು ||2||
ಮೂರು ದಾರವ ಕಡಿದು ಮನವೆ |
ಆಧಾರವ ಪಿಡಿದು ಮಾಧವಗ ನೋಡಿ
ಶಿವದಾರದಲ್ಲಿ ಕೂಡಿ
ಭೂಧಾರಧರನೆನ್ನ ಉದ್ಧಾರ ಮಾಡೆಂದು ||3||
ಒಂದರಿಂದನೇಕ ಮನವೆ |
ಒಂದಗಣಿತ ಲೆಕ್ಕ
ಚಂದಾಗಿ ಇನ್ನೂರದ್ಹದಿನಾರು ಸಾವಿರ
ಒಂದರೊಳಡಗಿಸಿ ಮುಂದೆ ಶೂನ್ಯ ನೋಡಿ ||4||
ಪಂಚಸೂತಕ ಕಳೆದು ಪ್ರಪಂಚ |
ಪಂಚಗುಣನಳಿದು ಮಿಂಚಿನಂತೊಳಿಯುವ
ಕರುಘೂಳೀಶನ ಪಂಚಾಮೃತ ಪ್ಯಾಲಿ
ಮುಂಚೆ ಕುಡಿದು ನೀ ವೀರಶೈವನಾಗೊ ||5||
ಧ್ಯಾನ ಮಾಡು ಮನವೆ
ಧ್ಯಾನ ಮಾಡು ಮನವೆ ಗುರುವಿನ |
ಧ್ಯಾನ ಮಾಡು ಮನವೆ
ಧ್ಯಾನ ಮಾಡು ನೀ ಹೀನ ಗುಣವ ಬಿಟ್ಟು
ಮಾನಸದೊಳು ಪ್ರಜ್ಞಾನಂ ಬ್ರಹ್ಮೆನ್ನುತ್ತ ||ಪಲ್ಲ||
ಉತ್ತಮ ಕೋಶ ಬೆಳೆದು ವಳಗಿನ |
ಮುತ್ತಿನ ನೆಲೆ ತಿಳಿದು ಹತ್ತು ಇಂದ್ರಿಯ
ಅಷ್ಟ ಮದಗಜಗಳ ಸುಟ್ಟು
ತತ್ವಮಸಿಯ ಸತ್ಯ ಸುಗುಣ ಬ್ರಹ್ಮೆನ್ನುತ ||1||
ಕಾಮ ಕ್ರೋಧ ಅಳಿದು |
ಸುಳಿಯುವ ಕಾಮನೋಟ ಕಳಿದು
ನಾಮರೂಪು ಜಗನೇಮ ಮಿಥ್ಯವೆಂದು
ಪ್ರೇಮದಿ ಅಯಂ ಬ್ರಹ್ಮವು ಎನ್ನುತೆ ||2||
ಹಮ್ಮು ಬಿಮ್ಮು ಹರಿದು |
ಲಿಂಗದ ಸಾರವ ಸುರಿಸುರಿದು
ಬ್ರಹ್ಮಜ್ಞಾನಿ ಕರಿಘೂಳಿ ಬೈಲಿನೊಳ
ಗಮ್ಮನೆ ಅಹಂ ಬ್ರಹ್ಮವು ಎನ್ನುತ ||3||
ಏನು ಹೇಳಲಯ್ಯೋ
ಏನು ಹೇಳಲಯ್ಯೋ ಬ್ರಹ್ಮ ಜ್ಞಾನಿಗಳಿಗೆ ಇದರ ಮಹಿಮ |
ನಾನು ನೀನು ಎಂಬ ಭೇದಭಾವ
ತಾನೆ ತೋರುವದು ಓಂ ಸುಜ್ಞಾನಿಗಳಿರಾ
ಮಾನವ ಜನ್ಮದೊಳಗೆ ಬಂದು ಕೂನ ತಿಳಿಬೇಕೊ ||ಪಲ್ಲ||
ಏಳು ಕಿಟಕಿ ಬಂಗ್ಲಾದಿ ರತಿ ಕೇಳಿ ಸಂಗ್ರಹವಾಗುವದು
ಇಳೆಯ ಆಸೆ ತ್ಯಜಿಸಿದ ಅಂಗನೆ ಇರುವವಳು
ಓಂ ಸುಜ್ಞಾನಿಗಳಿರಾ ಕಾಲು ಮೂರುಳ್ಳ
ಮಂಚದ ಮೇಲೆ ಕರೆಯುತಿರ್ಪಳೊ ||1||
ಭಾನು ಶಶಿಯ ತೇಜ ಇರುವದು |
ಹಾನಿ ಇಲ್ಲದ ಕನ್ಯೆ ಒಂದು
ಜ್ಞಾನಿ ಬದಿಯಲ್ಲಿ ತಾನೆ ಬಂದು ಮಲಗುತಿರುವಳು
ಓಂ ಸುಜ್ಞಾನಿಯಗಳಿರಾ ಕನ್ಯೆ ಸ್ನೇಹವು
ಆನಂದವಾಗಿ ಕಾಣುತಿರುವದು ||2||
ಕಣ್ಣು ಇಲ್ಲದೆ ನೋಡುವದು |
ಕಾಮ ಇಲ್ಲದೆ ಕಲಿಯುವದು
ಕರ್ಣವಿಲ್ಲದೆ ಎಲ್ಲ ಮಾತು ಕೇಳುತಿರುವದು
ಓಂ ಸುಜ್ಞಾನಿಗಳಿರಾ ಕನ್ಯೆ
ನಿಜ ಪುರುಷರಿಗೆ ಮೋಹಿಸುವದು ||3||
ಬಿಂದು ಎಂಬ ಹಾಸಿಗಿ ಹಾಕಿ |
ನಾದವೆಂಬ ತಲೆದಿಂಡುನಿಕ್ಕಿ
ಸಂದು ಇಲ್ಲದೆ ಕಳೆಯೆಂಬ ದುಶ್ಯಾಲ ಹೊದಿಸಿರುವದು
ಓಂ ಸುಜ್ಞಾನಿಗಳಿರಾ ಅಂದವನು ಬಂದು
ಮೋಕ್ಷ ನಿರ್ಗುಣರಿಗೆ ||4||
ಹನ್ನೆರಡು ವರುಷದ ಕನ್ಯೆಯ ಕೂಡಿ |
ಬಣ್ಣ ಬಿಳಿದು ಸಿರಿಯ ವಗೆದು
ಪುಣ್ಯ ಪಾಪದ ಮಹಿಮೆ ಅರಿತೇನು
ಓಂ ಸುಜ್ಞಾನಿಗಳಿರಾ ಅಣ್ಣ ಕರಿಘೂಳಿ
ತಾನೆ ಹೇಳಿದ ಬೈಲಿನೊಳಗೆ ||5||
ಪೋರಬಟ್ಟೆತನ ಬಿಟ್ಟುಬಿಡು
ಕೆಟ್ಟು ಹೋಗುತಿದ್ದಿ ಹುಚ್ಚುಮುಂಡೆ ಗಂಡ |
ಪೋರಬಟ್ಟೆತನ ಬಿಟ್ಟುಬಿಡು ತಾಯಿಗಂಡ ||ಪಲ್ಲ||
ಕೆಟ್ಟುಹೋಗತಿದ್ದಿ ನೀನು ದುಷ್ಟರ ಸಂಗದಿ |
ಸುಟ್ಟು ಹೋಗುವಿ ಪಂಚ ಇಂದ್ರಿಯ ವಿಷಯದೊಳು ||1||
ಆಶಿಸಿ ಮಾಂಸಕ್ಕೆ ಮೋಸದಿಂದ ಮೀನ ಪಾಶ |
ಗಾಣವ ನುಂಗಿ ನಾಶ ಹೊಂದಿದಂತೆ ||2||
ವಿಮಲ ಸುಗಂಧಕ್ಕೆ ಭ್ರಮರವು ತಾವರೆ |
ಕಮಲದೊಳಗೆ ಸಿಲ್ಕಿ ಶ್ರಮವಾಗಿ ಹೋದಂತೆ ||3||
ನಾಗಸ್ವರವು ಕೇಳಿ ನಾಗೇಂದ್ರ ಹರುಷ ತಾಳೀ |
ವೇಗದಿ ಗಾರುಡಿ ಕೈಯೊಳು ಸಿಕ್ಕಂತೆ ||4||
ಉರಿವ ಜ್ಯೋತಿಯ ಕಂಡು ಹಾರಿ ಪತಂಗದ್ಹುಳು |
ಬೋರಿಯ ಹಣ್ಣೆಂದು ಪ್ರಾಣ ಕಳಕೊಂಡಂತೆ ||5||
ಇಷ್ಟೆಲ್ಲ ಹೇಳಿದ ಶ್ರೇಷ್ಠ ಕರಿಘೂಳಿಯ ಪಾದ |
ನಿಷ್ಠಿಯಿಂದಲಿ ನಂಬು ಅಷ್ಟದಿಕ್ಕು ಬಂದು ಮಾಡಿ ||6||
ಬಾಯಿಲಿಂದ ನುಡಿವರು ಬ್ರಹ್ಮಜ್ಞಾನ
ಬಾಯಿಲಿಂದ ನುಡಿವರು ಬ್ರಹ್ಮಜ್ಞಾನ |
ಅವರು ಕೈಲಿಂದ ಮಾಡುವರು ಗುಡಮತನಾ
ದೇಹದಿಂದ ನಡಿವರು ಕಮ್ಮತಾನ
ಇವರು ಸಾಯತಾನ ಕಾಣುದಿಲ್ಲ ಆತ್ಮನ ಕೂನಾ ||ಪಲ್ಲ||
ಸಾಧು ಸಂತರೊಳು ಕೂಡಿ ಮಾಡುವರು ಭಜನಾ |
ಕಾನೂನು ಓದಿ ಓದಿ ಮಾಡುತಾರ ಯೋಜನಾ
ತಮ್ಮ ಮನಕ್ಕೆ ಅಂತಾರ ತಾವೆ ಸಜ್ಜನ
ಇಂಥ ಚುಮ್ಮಮುಂಡೆ ಗಂಡರಿಗೆ ಇರುವದೆ ಬ್ರಹ್ಮನ ಕೂನ ||1||
ವಿಚಾರದಿಂದ ನ್ಯಾಯವನ್ನು ಹೇಳುವರಣ್ಣ |
ಮನಿ ಖರ್ಚಿಗಾಗಿ ಸುಳ್ಳು ಸಾಕ್ಷಿ ನುಡಿಯೋಣಾ
ಬಿಚ್ಚಿ ಬಿಚ್ಚಿ ಮಂದಿಗಿ ಪುಸ್ತಕ ತೋರಿಸೋಣ
ಇಂಥ ಹುಚ್ಚುನಾಯಿಗೆ ಏನು ಗೊತ್ತು ನಿಶ್ಚಲ ಜ್ಞಾನ ||2||
ಕಚ್ಚೆ ಪಂಚಿ ಹಾಕಿ ಧೋತರ ಉಡೋಣ |
ಅವರು ಮುಚ್ಚಿ ಮ್ಯಾಲೆ ನಿಲಿಗಿಗಳು ಬಿಡೋಣ
ಅಚ್ಚವುಚ್ಚ ಮಾತುಗಳು ಕಲಿಯೋಣ
ಹೀಂಗೆ ಉಚ್ಚಿ ಕುಣಿಗೆ ಆಸಿಬಿದ್ದು ಆಗುವರು ಮಣ್ಣಾ ||3||
ಸಾವಿರ ಕೊಟ್ಟರೆ ಇಂಥವರ ಸಂಗವನಾ |
ಅನುಭಾವದ ಮಾತುಗಳನು ತಿಳಿಸಬಾರದಿನ್ನಾ
ಕಿವಿಲಿ ಕೇಳೀ ಕೋವಿದರು ಆಗ್ಯಾರೂ ಇನ್ನಾ
ದೇವ ಕರಿಘೂಳಿ ಪಾದಕ್ಕೆ ಇವರು ದೂರವಣ್ಣಾ ||4||
ಶ್ರೀ ಗುರುವರ ಪರತರ
ಶ್ರೀ ಗುರುವರ ಪರತರ ಶಂಕರ ಓಂ ಸೋಂ ಸಾರದ ಫಲವೊ |
ಆಧಾರದೊಳು ತನು ಭೇದಿಸು ಮನವು
ಸ್ವಾದಾದಿ ರುಚಿಯೊಳು ನಾದದ ಜ್ಞಾನವೊ
ಸ್ವಾದಿಷ್ಟದಲಿ ಬಾಗಿ ಆನನ ಓಂ ಸೋಂ ಸಾರದ ಫಲವೊ ||ಪಲ್ಲ||
ಜಾಣತನದಿ ಮಣಿಪುರದಾಲಯವೊ |
ಕೇಣಯಿಲ್ಲದೆ ಮಣಿ ಮುತ್ತಿನ ಮಾಲವೊ
ಶೋಣಿತ ಅದ್ವೈತದ ನೀಳ ಓಂ ಸೋಂ ಸಾರದ ಫಲವೊ ||1||
ಮಾಣಿ ತಾನಾಗಿ ನೋಡೊ ಅನಾಹುತವೊ |
ಸ್ವಾನುಭಾವ ಶಿವಜ್ಞಾನದ ಪಥವೊ
ಶೂನ್ಯ ನಿಶೂನ್ಯದ ಮೌನವೃತ ಓಂ ಸೋಂ ಸಾರದ ಫಲವೊ ||2||
ಶುದ್ಧ ವಿಶುದ್ಧಿಯ ಬೌದ್ಧ ಅವತಾರವೊ |
ವಿದ್ಯ ಅವಿದ್ಯ ಸಾಧ್ಯ ಶಬ್ದಾಕಾರವೊ
ಶುದ್ಧ ಪ್ರಸಿದ್ಧ ಪ್ರಸಾದ ಉದ್ಧಾರ ಸೋಂ ಸಾರದ ಫಲವೊ ||3||
ಅಕಚಟತಪಯಶ ಕರ್ಕಟ ವಿಷವೊ |
ವಿಕಟದಿ ಮನಮುನಿ ಆರ್ಕಟವಾಸವೊ
ಶಕಟದಿ ಕುಕ್ಕುಟ ಆಸನದಿಟ್ಟ ಓಂ ಸೋಂ ಸಾರದ ಫಲವೊ ||4||
ಆರು ಸ್ಥಲವು ಮೀರಿ ಭಾರಿವುನ್ಮನಿಯೋ |
ಸಾರಾಮೃತ ಸವಿಸಾರದ ಘನವೊ
ವೀರಾಸನ ಕರಿಘೂಳೀಶ ಸ್ಥಾನವೊ ಓಂ ಸೋಂ ಸಾರದ ಫಲವೊ ||5||
ಶ್ರೀ ಸದಾಶಿವ
ಶ್ರೀ ಸದಾಶಿವ ಪಾದ ಧ್ಯಾಸದಿ ಪಿಡಿಯೊ |
ಸೂಸುವ ಶ್ವಾಸದಭ್ಯಾಸದಿ ತಡಿಯೊ ||ಪಲ್ಲ||
ಆಸನಬೆಸಿ ಸುವಿಲಾಸವ ತೊಡಿಯೊ |
ಈಶನ ಸಖ ಸೂಷುಮ್ನ ನಾಶಿಕ ಕುಡಿಯೊ ||1||
ದೋಷಣ ಪೋಷಣ ಸವನಿಸಿ ನಡಿಯೊ |
ವಾಸನ ಶಾಸನ ಕ್ಲೇಶವ ಕಡಿಯೊ
ಮಾಸದಿ ಬಸಿವ ಸುರಸ ಆಶಿಸಿ ಕುಡಿಯೋ ||2||
ಹೇಸಿಕಿ ಲಾಸಿಕೆ ಬೇಸಿಕೆ ಎಡಿಯೊ |
ಆಸಿಕ ವಾಸಿಕ ಕಿಸುಕುಳ ಪುಡಿಯೊ
ಮೋಸಕರಾಸಿಕ ಮಸಣಿಸಿ ಜಡಿಯೊ ||3||
ಆಶಿಸು ವಿಶ್ವಾಸ ಹಸನಾಗಿ ಪಡಿಯೊ |
ಕಸಿಬಿಸಿ ಹುಸಿಬಾಸಿ ಕಾಸಿಲಿ ಹೊಡಿಯೊ
ಹೇಸುವ ಕಾಸುವ ವಶಮಾನಸದಿ ಹಿಡಿಯೊ ||4||
ವಸುಧಿಯೊಳೆಸೆವ ಶ್ರೀಭಾಷನ ಗಡಿಯೊ |
ಭಾಶುಪದೇಶ ಪಾಲಿಸುವ ನುಡಿಯೊ
ಬೇಸರಿಸದೆ ಸ್ಮರಿಸು ಕರಿಘೂಳಿ ಅಡಿಯೊ ||5||
ಭಜಿಸುವೆ ನಿಜಪದ
ಭಜಿಸುವೆ ನಿಜಪದ ಅಜಕುಟ ರೂಪನೆ |
ಸುಜನ ಮನೋಂಬುಜ ತೇಜ ಪರಿತಾಪನೆ
ಭೂ ಜಗಭೂಷಣ ಮೂಜಗದುದ್ಧಾರನೆ
ಸುರಜಿಸು ನಿಶಿತ ಶಶಿ ತೇಜದೊಳಪನೆ ||ಪಲ್ಲ||
ಪ್ರಜ್ವಲಿಸುವ ತವ ವಜ್ರ ಸ್ತಂಭಿತನೆ |
ನಿರ್ಜರ ಪೂಜ್ಯನೆ ದುರ್ಜವಗೋಪನೆ
ದುರ್ಜನ ಸಮೂಹದ ಗರ್ಜಿಸಿದಾತನೆ
ತರ್ಜಿನಿ ಭರ್ಜಿಸಮಾಜಿಲೋಪನೆ ||1||
ಕಂಜನಾಭನ ಕುರಂಜನ ಶಾಪನೆ |
ಕಂಜದಳಾಕ್ಷನಿರಂಜ ಕೇಳಿಪನೆ
ಕುಂಜರ ಉಡಿಗಿ ಕೆಂಜಡಿಯ ರೂಢನೆ
ನಂಜು ಭುಜಿಸಿ ಪರಂಜ್ಯೋತಿ ಭೂಪನೆ ||2||
ಅಂಜನ ತಾರನೆ ಗಾಂಜಿವಿಹಾರನೆ |
ಮಂಜನಕಳೆ ಸುರ ರಂಜನ ಕೂಪನೆ
ಅಂಜಿಸಿದರೆ ನಾನಂಜ ಬಲ್ಲನೆ
ಮಂಜುಳ ಕರಿಘೂಳಿ ಮಂಜನ ಲೋಪನೆ ||3||
ಸಂಶಯ ಸುಮ್ಮನ್ಯಾತಕೆ
ಹೇ ಸಂಶಯ ಸುಮ್ಮನ್ಯಾತಕೆ ಭವ |
ನೇಮದೊಳಿರುವಿ ಶಿವ
ನಾಮದಿ ನಿಜ ಸುಖವೊ ||ಪಲ್ಲ||
ಕಾಮದಂಡಾಂಡವಾಯ್ತು |
ಕಾಮ ಪಿಂಡಾಂಡವಾಯ್ತು
ಕಾಮ ಬ್ರಹ್ಮಾಂಡವಾಯ್ತು
ಕಾಮ ಖಂಡಿತವಾಯ್ತು
ಖಂಡದಿ ಮಂಡಲದೊಳಾನಾಥ
ಕಂಡುಕೊಳ್ಳೊ ನೀಡಿ ಮನವಾ
ಖಂಡನ ನಿಜ ಸುಖವೊ ||1||
ಕಾಮ್ಯದಿ ಬ್ರಹ್ಮನಾದ |
ಕಾಮ್ಯದಿ ವಿಷ್ಣುವಾದ
ಕಾಮ್ಯದಿ ರುದ್ರಪೂರ್ಣ
ಕಾಮ್ಯದಿ ನೀನಾದಿ
ನಿಃಕಾಮ್ಯದಿ ಉನ್ಮನಿವಾಸನು
ಚಿನುಮಯನಿರೊ ಹೃದಯ
ಕಮಲದಮಲ ಸುಖವೊ ||2||
ನಿನ್ನ ಬಿಟ್ಟು ಒಂದು ಇಲ್ಲ |
ನಿನ್ನಿಂದೊಂದು ಬರುವದಿಲ್ಲ
ನಿನ್ನ ನೀ ತಿಳಿದ ಮೇಲೆ
ಯಾನಾದ ಯೇನಿಲ್ಲ
ನೀನಾಗುವ ಕೂನವ
Wಳಿಸುವ ಶ್ರೀಕರಿಘೂಳೀಶ
ಚರಣನುದಿನ ದಿನ ಸ್ಥಿರ ಸುಖವೊ ||3||
ರಮ್ಮೀಸಿ ಎನ್ನ ಕರೆದಾ
ಮರುಳು ಮಾಡಿದ ಮನಸಿಗೆ ಗುರುರಾಯ |
ರಮ್ಮೀಸಿ ಎನ್ನ ಕರೆದಾ ರಂಭೇಯ ನೀನಾಗೆಂದ
ಹಂಬಲ ಬಿಡು ಎಂದ ನಂಬಿರು ಯನ್ನಗೆಂದ
ಶಂಭೊ ಪೀತಾಂಬರುಡಸಿದ ಅಘಹರಾಯ ||ಪಲ್ಲ||
ಬಿಡಿಸಿದನು ಭೂತವೆಲ್ಲ |
ಹಿಡಿಸಿದನು ಜ್ಞಾನಕೀಲ
ಕೆಡಿಸಿದನು ಮಾಯಜಾಲ
ಕುಡಿಸಿದನಮೃತ ಪ್ಯಾಲ
ಬಿಡದೆ ನುಡಿಯಂದ ಮೃಢ ನುಡಿಯನ್ನ ವಡೆಯ ||1||
ಮುಚ್ಚಿದೆ ಮರವಿನೊಳಗ |
ಎಚ್ಚರವಾಯಿತಾಗ ಪಚ್ಚ ಕರ್ಪುರ ಜ್ಯೋತಿಯವಳಗ
ಸ್ವಚ್ಛ ತೋರಿದನೆನಗ ಹುಚ್ಚನಾದೇನು
ನಿಚ್ಚ ಶಿವನ ಧ್ಯಾನದೊಳಗ ||2||
ಮುಂಡಿಗಿ ಮಾತು
ಮುಂಡಿಗಿ ಮಾತು ಹೇಳದು ಕೇಳಿದೆನೊ |
ಈ ಮಂಡಲದೊಳಗೆ
ಖಂಡಿತ ವಾಕ್ಯ ಕಂಡು ಬಂದೆನೊ
ಅಂಡಪಿಂಡ ಬ್ರಹ್ಮಾಂಡ ವಿಭಾಗಿಸಿ
ತುಂಡು ಖಂಡನೆಯು ಕಡೆಯಲ್ಲಿಗಿರಿಸಿ
ಷಂಡಪೋಗಿ ಪ್ರಚಂಡನ ಸೋಲಿಸಿ
ಝಂಡೆ ನಡೆಸಿ ನವಖಂಡ ವ ಮೆರಿದನು ||ಪಲ್ಲ||
ನಿಗಮ ವೋದುವ ಸುಗುಣಿ ಹೆಣ್ಣಂತೆ
ಬಣ್ಣಿಲ್ಲದ ಸೀರಿ ಬಿಗಿದು ಹುಟ್ಟಳ ತಲಿಗೆ ಗುಣವಂತೆ
ಮಗ್ಗಿಯ ಕುಬಸ ಮೈಗೆ ತೊಟ್ಟಳ ಕೈಗಳಿಲ್ಲಂತೆ
ಆಕಿಯ ನಾಮ ಸುಗುಡಿ ಸುಂದರಿ ಸೂಳಿ ಗರ್ತಿಯಂತೆ
ಮೂಗಿಲ್ಲದೆ ಮೂಗತಿಯಿಟ್ಟು ವೊಗತನಿಲ್ಲದ ಮುಂಡನ ಕೂಡಿ
ಸಾಗಿ ಪೋಗುವಾಗ ಮೂಗ ಮುರಿಯುತ
ಕೂಗಿ ಹೇಳಿದಳು ಜಗವಿಲ್ಲದೂರಾಗ ||1||
ಕೋತಿ ಒಂದು ಹೋತಿನ ಹಿಡತಂತೊ |
ಮುತ್ತಿನ ಲಗಾಮ ಹೋತಿನ
ಬಾಯಿಗೆ ಕೋತಿಯು ಹಾಕಿತ್ತೊ
ಆ ಹೋತಿನ ಮ್ಯಾಲ ಸ್ವಸ್ಥವಾಗಿ ಎತ್ತು ಕೂತಿತ್ತು
ಆ ಎತ್ತಿನ ತೊತ್ತು ಹೋತಿ ಕಾಟ ಮುಂದೆ ನಡದಿತ್ತೊ
ಬಾತು ಕೋಳಿ ಈ ಮಾತು ಕೇಳಿ ಜತಿಯ ಮಾಡಿತ್ತೊ
ಹತ್ತು ಸೊಳ್ಳಿ ಆತುರದಿ ಅತಿ ಕೋಪದಿ
ಎತ್ತಿಗೆ ಮುತ್ತಿಗ್ಹಾಕಿದ್ದವೊ ಪೃಥ್ವಿ ಕೆಳ ||2||
ಕಪ್ಪಿ ಸರ್ಪಗೆ ಕದನ ನಡದಿತ್ತೊ |
ಬಹಳ ಕೋಪದಿಂದ ಸರ್ಪನು
ಹಿಡಿದು ಕಪ್ಪಿ ನುಂಗತ್ತಿತ್ತೊ
ಆಪೇಕ್ಷದಿಂದ ತಾಪ ತಾಳಿ ಗರುಡ ಬಂದಿತ್ತೊ
ಸರ್ಪನು ಬಿಡಿಸಿ ಕಪ್ಪಿಯ ಸಂಗಡ ನ್ಯಾಯ ಮಾಡಿತ್ತೊ
ವಿಪರೀತವು ಕೇಳಿ ಕುಪಿತದಿ ಮಿಂಚಿ
ಪಾಪ ಪುಣ್ಯ ಇನ್ಸಾಪವು ಸೂಚಿಸಿ
ಕಪ್ಪೆಯ ಕಾರವಾಯಿ ಪೈಸಲ ಹೊಡದಿತ್ತೊ
ಲೋಪ ನಿರ್ಲೆಪ ನಿಶ್ಯೂನ್ಯ ಕಚೇರಿಯೆನ್ನಿ ||3||
ತುರ್ಕುರ ಪೋರಿಯ ತೂತ ಹರದಿತ್ತೊ |
ಹಾರರ ಪೋರಿ ಹರ್ಕ ತೂತಿಗೆ ಹರ್ಕಿಯ ಬೇಡಿತ್ತೊ
ಅಯನೋರ ಲಿಂಗಿ ಶಿರವ ಬಾಗಿ ಕರವ ಮುಗದಿತ್ತೊ
ಜಾರಣಿಯ ಗಂಗಿ ವೀರ ಸಂಗನಬಸವನ ಕೇಳಿತ್ತೊ
ಆ ವೀರನು ತಾನು ನೀರಿನ ಔಷಧ ಹಾಕಿದನೊ ನಿಂತೊ
ಮಾರಮಾರನಿಗಳವಲ್ಲವು ನೀರಿನ ಸವಿರುಚಿ ಸಾರದ ಮಹಿಮ
ಭೇರಿ ದುಂದುಭಿ ಕಿನ್ನುರಿ ನಾದಕೆ
ಪೋರಿ ಮುದುರಿತ್ತೊ ನಿರ್ಗುಣ ಹಾದಿಲಿ ||4||
ಅಂಗಲಿಂಗಕ್ಕೆ ಕೂನ ತಪ್ಪಿತ್ತೊ |
ಮೃದಂಗ ಶಬ್ದಕ್ಕೆ ಲಿಂಗ ಹೋಗಿ ಜಂಗಮನಳಕಿತ್ತೊ
ಅಂಗನಿಯರೆಲ್ಲ ಲಿಂಗ ಕಾಣದೆ ಭಂಗ ಕೆಟ್ಟಿತ್ತೊ
ಬಂಗಾಲಿ ವಿದ್ಯೆದಿ ಭಂಗಗೆಟ್ಟು ಮಂಗನಾಗಿತ್ತೊ
ನಂಗಾರತಿಯೊಳು ಲಿಂಗವು ನುಂಗಿಸಿ
ಹಿಂಗಿಸಿ ಭವ ಪಿಂಗಿಸಿ ಭಂಗಿ ಮುಖ ಕರಿಘೂಳಿ
ರಾಮಲಿಂಗ ಸಿತಾಂಗ ವಿಹಂಗ ಬೈಲಿನೊಳು ||5||
ಏನು ಮಾಡಿದರು ಏನೂ ಇಲ್ಲ
ಏನು ಮಾಡಿದರು ಏನೂ ಇಲ್ಲ |
ನಿನ್ನ ಮನದವಗುಣ ಒಂದು ಮಾಡಿಲ್ಲಾ
ಕಾಶಿ ತೀರ್ಥ ತಂದೆನಂದಿ
ರಾಮೇಶ್ವರದೊಳು ಸ್ನಾನಮಾಡಿ ನೀ ಬಂದಿ
ದೇಶ ದೇಶ ತಿರಿಗಿ ನೀ ನೊಂದಿ
ಧ್ಯಾಸವಿಲ್ಲದೆ ಸನ್ಯಾಸಿ ವೇಷದೊಳೊಂದಿ ||ಪಲ್ಲ||
ಸತಿಸುತರನು ತ್ಯಾಗ ಮಾಡಿ ಮುಂದ |
ಗತಿಗೆ ಹೊಂದುವೆನೆಂದು ಕೀರ್ತಿಕೊಂಡಾಡಿ
ಹಿತದಿಂದೆ ಯತಿಯರೊಳು ಕೂಡಿ
ಚಿತ್ತಮತಿಗೆಟ್ಟು ಹೋಗತಿರಿ ಯಮಪುರಕಡಿ ||1||
ಜಂಭತನವ ನಿನಗ್ಯಾಕೊ ಹಾಳ |
ಹಂಬಲ ಬಿಡು ಶಾಸ್ತ್ರ ಹೇಳದು ಸಾಕೊ
ತುಂಬಿದ ದುರ್ಗುಣ ನೂಕೊ
ನೀಲಂಬ ಮಾಣಿಕ್ಯ ಮುತ್ತು ತಿಳಿದರೆ ಸಾಕೊ ||2||
ಎರಡು ಜ್ಯೋತಿ ಒಂದಾಗಿ |
ಗುರಿ ನಿರುತಾಗಿ ತಪ್ಪದೆ ಅರವಿನೊಳಾಗಿ
ಭೇರಿ ಕಿನ್ನುರಿ ತಾಳ ಸಾಗಿ ಶ್ರೀ
ಕರಿಘೂಳೀ ಪಾದಕೆ ಶಿರಸಾವು ಬಾಗಿ ||3||
ಜಂಗಮ ಜ್ಯೋತಿ
ಜಂಗಮ ಜಂಗಮ ಜ್ಯೋತಿ ಜಯಮಂಗಳಾರ್ತಿ |
ರಂಗು ಮಂಟಪದೊಳು ಲಿಂಗ ಪೂಜೆ ಮಾಡುವಾಗ
ಜಂಗಮಯ್ಯ ಜಾರಿ ಬಿದ್ದ ಲಂಗೋಟಯ್ಯ ಹಾರಿ ಬಿದ್ದ ||ಪಲ್ಲ||
ತುಂಗಭದ್ರ ಕ್ಷೇತ್ರ ಅಂಗಕ್ಕೆ ಪವಿತ್ರ |
ಗಂಗೆಯ ದಡದ ಮೇಲ ತೆಂಗಿನ ವನಾಂತರದೊಳು
ಕಂಗಳಯ್ಯಾ ನಾಟಚಪ್ಪರ ಪಲ್ಲಂಗ ಮಂಚದ ಅತ್ತರ ||1||
ಚಾಂಗುಣಿಯ ಭಕ್ತಿ ಭಂಗಿ ಮುಖರಯುಕ್ತಿ ಹಾಂಗೆ ಹಿಂಗೆ ಮಾಡಿ ಮುಕ್ತಿ |
ಅಂಗನಿಯ ಕೂಡಿ ಎಂದು ನಂಗಾನು ಶಿರಕೆ
ಗುಂಗಾ ಏರಿ ಮಂಗನಂತೆ ಆಯಿತು ವಿರಕ್ತಿ || ||2||
ಜಂಗಿನ ನುಡಿ ಕೇಳಿ ಜಾಂಗುಟಿ ಸಪ್ಪಳ ಹೇಳಿ |
ಅಂಗದೊಳು ಕುಣಿಯುತ್ತ ಮೃದಂಗ ತಾಳ ಬಡಿಯುತ
ಟಂಗಾ ಟಂಗಾ ಹಾರಿ ಪಾದ ಉಂಗುಷ್ಠ ಮೊಂಡಾಯಿತೊ ||3||
ಹಿಂಗಿಣಿಲಾಗ ಸ್ವತಂತ್ರ ಮುಂಗಾಣಿ ಲಾಗ ಹೊಡಿ ಅಂತ್ರ |
ಶೃಂಗಾರವಾದ ಮಂದಿರದಲ್ಲಿ ಬಂಗಾರವಾದ ಹಂದರದೊಳು
ಸಂಗಮ ಕರಿಘೂಳಿರಾಮಲಿಂಗ ಇಬ್ಬರು ಕೂಡಿದರತಿ ||4||
ಒಗಟ ಹೇಳತಿನಿ
ಒಗಟ ಹೇಳತಿನಿ ನಾಲ್ಕು ಒಗಟ ಹೇಳತಿನಿ |
ಪುಗುಟಿ ಮಾತಲ್ಲಿದು ಅಗಟವಲ್ಲ
ಗುರುಸಾರ ಸಗಟ ಜಾಡಿಸುವ ||ಪಲ್ಲ||
ಕಿಂಕರನಾಗ್ಯಾದೊ ಭಕ್ತರಿಗೆ ಶಂಕರನಾಗ್ಯಾದೊ |
ಅಂಕಡೊಂಕದ ಕಾಯಿ ಶಂಖುಬಾಳಿಯ ಕಾಯಿ
ಡೊಂಕ ಮ್ಯಾಲ ಕುಂತುಕೊಂಡು ಬಿಂಕದ
ಬುರುಗ ತೆಗೆಯುತಾದ ||1||
ಅಡ್ಡಗೋಡೆಯ ಮ್ಯಾಲ ಬುಡ್ಡ ಬಸವ ದಡ್ಡಾಗಿ ಮಲಗ್ಯಾನಲ್ಲಾ |
ದಡ್ಡ ಹೋಗಿ ಶಾಣೆನಾದ ದೊಡ್ಡ ಮನುಷ್ಯ ಹೆಡ್ಡನಾದ
ಅಡ್ಡದಿಡ್ಡಿ ಬಾಗಿಲ ನಡುವ ಗುಡ್ಡ ಕುಣದಾಡುತಾದ ||2||
ಜಾಲಗಾರ ಹೆಣ್ಣ ಜೋಲಿ ಬಿದ್ದ ಮೊಲಿಯ ಕೈಯಲ್ಲಿ ಹುಣ್ಣ |
ನೀಲಿಬಣ್ಣ ಸೀರಿ ಉಟ್ಟು ಹೊಲಿಗೆ ಏರಿಯಿಂದ ಮೊಳವನಾಕಿ
ಹಲ್ಲು ಕಿಸ್ತು ನಾಲಿಗಿ ತೆರೆದು ಜೋಲಿ ಜೋಲಿ ಹೋಗತಾದ ||3||
ನಮ್ಮಕಿ ಸೋಮವ್ವ ಒಪ್ಪತಿಗೆ ವಮ್ಮನ ನೇಮವ್ವ |
ಗಮ್ಮತ ಮಾತುಗಳು ಆಡೋಣಿಲ್ಲಾ
ಸುಮ್ಮನೆಂದಿಗಿ ಇರೋಣಿಲ್ಲಾ ಕಾಮನ ಮಗನ
ಪ್ರೇಮದಿಂದ ಭೂಮಿಗೆ ಬಾರದಂಗಾದಳಲ್ಲಾ ||4||
ಕೋತಿಮಗ ಹನುಮಂತ ಲಂಕವ ಸುಟ್ಟ |
ನೀತಿಯಲಿಂದ ಗುಣವಂತ ಮಾತಿನೊಳಗ ಮಾತು
ನೀರಾ ಜ್ಯೋತಿಯೊಳಗೆ ಜಾತ ಮುತ್ತು ಯಾತರೊಳಗ
ಏನುಯಿಲ್ಲ ತೂತಿನೊಳಗೆ ಕರಿಘೂಳಿಲ್ಲ ||5||
ಬ್ರಹ್ಮನ ಹಿಡದೇನೊ
ಬ್ರಹ್ಮನ ಹೊಡದೆನೊ |
ಗುರುತನಿಟ್ಟು ಬ್ರಹ್ಮನ ಹಿಡದೇನೊ
ಹಮ್ಮಿಲಿ ಹಿಮ್ಮಡಿ ದ್ವಾರಕ್ಕೆ ವೊತ್ತಿ
ಜಮ್ಮಿಸಿ ವಾಮಪಾದ ಬ್ರಹ್ಮನಿಗೊತ್ತಿ ||ಪಲ್ಲ||
ಏಳು ಕೋಟಿಗಳ ತಲವನೆ ಹಚ್ಚಿ |
ಏಳು ಕಿಡಿಕಿ ಕವಾಟವ ಮುಚ್ಚಿ
ಏಳು ನೆಲಿಗಳನ್ನು ಏಳಿಸಿ ಬಿಡಿಸಿ
ಏಳು ವಾರದೊಳು ಸೋಹಂ ವಾರದೊಳು ||1||
ಎಂಟು ಗೇಣಿನ ಟುಬಾಕಿ ಪಿಡಿದು |
ಅಂಟಿಸಿ ಮೂರು ಗುಂಡನು ಹಿಡಿದು
ಭಂಟ ಸುಜ್ಞಾನ ಗಜವನು ಜಡಿದು
ಹಣಿ ಗಂಟಾಕಿ ಕಣ್ಣುಬ್ಬಿಗಂಟಿಸಿ ಗುರಿಯೊಳು ||2||
ಊರೊಳಗಿನ ತಳವಾರನ ಸವನಿಸಿ |
ಪಾರೆ ತಿರುಗು ವಾಲೆಕಾರನ ಮಲಗಿಸಿ
ಉರಿವ ಜಾವಿಗೆಯ ಬೆರಳಿಗೆ ಹೊತ್ತಿಸಿ
ಸರರ ಸರಕ ಮೂಗಿನ ಮನಿಯೊಳು ||3||
ಬೆಂಕಿ ಹತ್ತಿ ಬತ್ತಿ ಸುಡುತಲ್ಲಿ ಬರಲಾಗ |
ಟಂಕವಿಲ್ಲದೆ ನಿರಾತಂಕ ಕಿಂಕರನಾಗಿ
ಕಿಂಕಿಣಿ ಕಿಣಿಕಿಣಿ ಕಿಡಿಯನ್ನು ಹಾರಲು
ಜಿಂಕೆಗಳಾರನು ಶಂಕಿಸಿ ಹೊಡೆದೆನು ||4||
ಗಬರಾಸಿದೈದ್ಹುಲಿ ಶಬ್ದವು ಮಾಡದೆ |
ನಿಬ್ಬೆರಗಿಲಿ ಹತ್ತು ಶಾರ್ದೂಲಾ ಮಡಿದವು
ಗರ್ಭ ಪತನವಾಗಿ ಹೋಯಿತು ಹೆಬ್ಬುಲಿ
ಸಬ್ಬನೆ ಮಲಗಿತು ಗುಬ್ಬಿ ಗೂಡಿನೊಳು ||5||
ವಕ್ಷಸ್ಥಳದ ಮುಂದ ಕುಕ್ಷೆಯ ಬಿಗಿದು |
ಅಕ್ಷೆಯ ಕಡಲ ಮುದ್ದಿನೊಳ ಜಿಗಿದು
ಮೋಕ್ಷ ಕೊಡುವ ಅಪರೋಕ್ಷ ಕರಿಘೂಳಿ
ನಾಮಾಕ್ಷರ ಧ್ಯಾನಿಸಿ ಈಕ್ಷಿಪ ಬೈಲಿನೊಳು ||6||
ಶಿವ ಶಿವ ಎನು ಮನವ
ಶಿವ ಶಿವಯೆನು ಮನವ ಮಹ ಘನವ |
ಭವಮಾಲಿಯ ಜವಕಳಿವ ಬಂಧನವ | ||ಪಲ್ಲ||
ಕರ್ಮೇಂದ್ರಿಯಂಗಳ ಮರ್ಮದಿ ಅತಿಗಳಿ |
ಧರ್ಮದ ಮರ್ಮ ತಿಳಿ ದುರ್ಮತಿ ತನುವ ||1||
ಮಾಣಿಯ ಬಂಧಿಸಿ ವಾಣಿಯ ಸಂಧಿಸಿ |
ಪಾಣಿಯ ನೊಂದಿಸಿ ಗುಣಿಸು ಅಪಾನವಾ ||2||
ತತ್ವದೊಳಗೆ ಮಹಗೋಪ್ಯ ತತ್ವದೊಳಿಹ ಸತ್ಯ |
ನಿರ್ಗುಣ ಸೋಹಂ ಅಮೃತ ಪಾನವ ||3||
ಆರಾರೊಳಿರುವ ಹಾರಿಸು ಸಾರವ |
ಬಾರಿಸು ಸುಸ್ವರವ ಭೇರಿ ಝಂಜನವಾ ||4||
ಕಲುಷ ವಿರಹಿತ ಮಲತ್ರಿ ಸಂಹರಿತ |
ಛಲದಿ ಘೂಳೇಶಗೆ ಸಲಿಸೊ ನೀ ಧನವಾ ||5||
ಸತ್ಯದಿ ತೋರುವ ಬ್ರಹ್ಮ
ಮಿಥ್ಯವು ನಕಾರಾ ಆಕಾರಾ |
ಸತ್ಯದಿ ತೋರುವ ಬ್ರಹ್ಮ ವಿಕಾರಾ ||ಪಲ್ಲ||
ವನಿತೆ ಧನ ಸುತ ಜನಿತ ಘನವೃತ |
ವನು ನಡಿಸಲು ಮನಸಿಜನ ಮಕಾರಾ ||1||
ಮನದಿ ಮಾಡಿದ ಭ್ರಮೆಯನು ತೊರಿಯಲು |
ಮನ ಜನಿತನಿಗಳವೆ ಉನ್ಮನಿ ಶಿಕಾರಾ ||2||
ಕಾಮ ಕ್ರೋಧಾದಿಯ ಪ್ರೇಮದೊಳ್ ಹೃದಯ |
ನೇಮವ ಗೈಯುವದು ಭೂಮಿ ವಕಾರಾ ||3||
ಹೇಮ ಸೀಮೆ ಮುದ್ಧಾರ ಮನೆಯೊಳ |
ಭ್ರಮಿಸುವ ತಮಗುಣ ಯಮನ ಯಕಾರ ||4||
ಪರಧನ ಪರಸ್ತ್ರೀಯನು ವಶ ಕರಿಸದೆ |
ಕರಿಘೂಳಿಗೆ ಕೇಳು ಆರೇಳೋಂಕಾರ ||5||
ಓಂಕಾರಶ್ರಮ
ಶಂಕರ ಕರ ಶಂಖಾ ತ್ರಿಣಾಂಕ |
ಓಂಕಾರಾಶ್ರಮ ಮೃದು ಪರಿಯಂಕಾ ||ಪಲ್ಲ||
ಪಂಕಜ ಭವ ಮುಖ ಕಿಂಕರ ಪಾಳಕ |
ಸಂಕಟ ಹರ ಚಂದ್ರಾಂಕಿತ ಮಸ್ತಕ ||1||
ಸುರಮುನಿ ಪೋಷಕ ದುರಿತ ವಿನಾಶಕ |
ಮುರಹರಪ್ರಿಯ ಸಖ ಸ್ಮರಶರ ಭೂಷಕ ||2||
ಭವ ಪರಿಹಾರಕ ಕವಿ ಜನ ರಕ್ಷಕ |
ಶಿವ ಕರಿಘೂಳಿ ಸುಖ ಸವಿ ಸಾರಾಮೃತ ಪಾಕ ||3||
ನಮಃ ಶಿವಾಯ ಎನು ಮನ
ನಮಃ ಶಿವಾಯ ಎನು ಮನ |
ಓಂ ಸೋಹಂ ನಮಃ ಶಿವಾಯ
ಓಂ ಶಿವ ಶಿವ ಶಂಕರ ಶಿವಶಂಕರ ಹರ ||ಪಲ್ಲ||
ಶಿವಶಿವ ಹರಹರ ಪಾರ್ವತಿ ಪತಿ ಹರ |
ಶಿವ ಮಹಾದೇವ ಭಾವ ಸಂಜೀವ
ಭುವನೇಶ್ವರ ಗಿರಿಧರನಿಗೆ ನಮಿಸಿ ಓಂ ನಮಃ ||1||
ಶಿವ ಧ್ಯಾನದಿ ಶಿವ ರೂಪವ ನೋಡುತ್ತ |
ಶಿವಯೋಗವ ನೀ ಸದಾವ ಮಾಡುತ್ತ
ದಿವ ರಾತ್ರಿಯೊಳು ಭವಗುಣ ಕೆಳಸದೆ
ಜೀವನು ಜಪಿಸುವ ಹಂಸವ ಭಾವಿಸಿ ಓಂ ||2||
ಮಿಥ್ಯ ಆಕಾರ ವ್ಯರ್ಥ ಸಂಸಾರ |
ಸತ್ಯವು ತೋರುವ ಎಲ್ಲ ವಿಕಾರ
ಸತ್ಯ ಸದ್ಗುರು ಭೃತ್ಯನಾಗಿರುತಿರು
ಉತ್ತಮ ಮುಕ್ತಿಗೆ ಚಿತ್ತವತ್ತಿಸಿ ಓಂ ನಮಃ ||3||
ಅನುದಿನ ಶಂಕರ ಪ್ರಣಮ ಪಂಚಾಕ್ಷರ |
ವನು ಮನ ಗುಣಿಸುತಲಿ ಅನುಮನ
ಸನುಮನ ದಿನಮನ ಇನಿತು
ಘನ ಗುರುವಿನ ಚರಣವ ಸೇವಿಸು ಓಂ ||4||
ಆಸನ ಬಿಗಿದು ವಿಲಾಸದಿ ನಿನ್ನೊಳು |
ನಾಸಿಕ ತುದಿಗೂಡುತಲಿ ಘೋಷವ
ಕೇಳುತ ಈಶನ ಕಾಣುತ
ಧ್ಯಾನಿಸು ಉಶ್ವಾಸ ಬಲಿಸಿ ಓಂ ನಮಃ ||5||
ಪರತರ ಪರಮ ನಿರಘ ನಿರುಪಮ |
ನಿರಾಮಯ ನಿರ್ಬೈಲಿನಲಿ ಮಾರಹರ
ಪುರಹರ ಸುರಚಿರ ಶ್ರೀಧರ ಗುರುವರ |
ಕರಿಘೂಳೀಶನ ಸೇವಿಸಿ ಓಂ ನಮಃ ಶಿವಾಯ ||6||
ಹರ ಹರ ಹರ ಶಂಭೋ
ಹರ ಹರ ಹರ ಶಂಭೋ ಸದಾಶಿವ ಗೌರಿ ಶಂಕರಭೋ |
ರಾಘವನು ತಪದ ರಾಜೀವದನ ಭವರೋಗ ವೈದ್ಯ ಶಂಭೋ ||ಪಲ್ಲ||
ಆಗಮ ವಂದಿತ ಅಮರಾರ್ಚಿತಸುರ |
ಭೋಗಿ ಭೂಷಣ ಶಂಭೊ ||1||
ಪಂಚವದನ ವಿರುಪಾಕ್ಷವರದ ದ್ವಿಪಂಚಹಸ್ತ ಶಂಭೋ |
ವಂಚಕ ದಕ್ಷಾದ್ವರ ವಿಧ್ವಂಸಕ ಪಂಚ ಶರಾಂತಕಭೋ ||2||
ಪಂಕಜಾಕ್ಷ ಶಶಿ ಪಾವಕಾಕ್ಷ ಅಕಲಂಕ ಚರಿತ ಶಂಭೋ |
ಕಿಂಕರ ಮಹಮುದ್ರಾಜಿಪಾ ಶಕ ಅಭಯಂಕರ ಶಂಕರಭೋ ||3||
ಭೋಳಶಂಕರ ಸಮ್ಯಾಳದಿ ಸುಖ ಕರಧೂಳಾಂಕಿತ ಶಂಭೋ |
ಭಾಳಾಕ್ಷನ ಪ್ರಿಯ ಗೆಳೆಯನೆ ಕರಿಘೂಳೀಶ್ವರ ಶಂಭೊ ||4||
ಶಿವ ಭಜನ ಪರಾತ್ಪರ
ಬಸವ ಪ್ರಮಥ ಶಿವಶರಣರ ಭಾವವು |
ರುಚಿಕರ ಸಾರ ಶಿವ ಭಜನ ಪರಾತ್ಪರ ||ಪಲ್ಲ||
ವೇದ ಪುರಾಣ ಬಾದರಾಮಾಯಣ |
ಮಾಧವ ವಂದಿತ ವಿಧುಕಿಲ ಕಿರಣಯಾಲ ಮಾಲ ||1||
ಕಾಲಕಾಲ ಲೋಲ ಶೀಲ ಭಕ್ತವತ್ಸಲ ದೀನ |
ದಯಾಳು ಈ ಬಾಲಕರನು ಪಾಲಿಸು ದೇವ ||2||
ಅಖಿಲ ಬ್ರಹ್ಮಾಂಡ ದಿನಕರ ಕೋಟಿ ಸುಖಕರ |
ಶಂಕರ ಕರುಣಾ ಭರಣ ಮಾಧವ ದೇವ ದೇವ ||3||
ಭಾವ ಭಾವ ಶಿವಜೀವ ಪಾವನ ಚರಿತ |
ಭಾವನ ಭರಿತ ಸೇವಿಪ ಭಕ್ತ ದಯಾಕರ ದೇವ ||4||
ನುತಿಪರ ಮನ ಯಥೇಷ್ಟ ಪ್ರದಾತ |
ಸ್ತುತಿಪ ಶಾಂತಿ ಶಿವಭಕ್ತರ ಪ್ರೀತ ||5||
ಭಕ್ತಿಮೂಲ ಯುಕ್ತಿ ಶೀಲ ಶಕ್ತಿ ಲೋಲ |
ಮುಕ್ತಿ ಮಾಲ ಮಂಗಲದಾಯಕ ಮುನಿಜನ
ಪಾಲಕ ಜಂಗಮ ಕರಿಘೂಳಿ ದೇವರ ದೇವ ||6||
ಬ್ರಹ್ಮನ ಐಶ್ವರ್ಯ ನೋಡದಕ
ಹಾಂಗ್ಯಾಕ ಹೀಂಗ ಬರ್ರಿ ನೆಟ್ಟಕ |
ಸಂಗಮ ಮೇಲಿನ ಬಾಟಕ
ತ್ರಿಕೂಟಕ ಮಲದ ಘಾಟಕ
ಬ್ರಹ್ಮನ ಐಶ್ವರ್ಯ ನೋಡದಕ
ಉತ್ತರ ಕಿಡಿಕಿ ಕೋಲ್ಯಾಕ ||ಪಲ್ಲ||
ಒಂದು ಒಂದು ಪೈರಿಯ |
ಮುಂದಕ ಚಂದನ ಚೌಕಿ ಆಚಕ
ಗುಡ್ಡದ ನಡುವಿನ ಗುಮ್ಮಟಕ
ಮಹಲಿಂಗ ಸ್ವಾಮಿಯ ಮಠಕ ||1||
ನಿಧಾನ ಮಾಡಬೇಕು ನಿಜಕ |
ಸಾಧನ ಮಾಡಬೇಕು ನಾಜೂಕ
ಶೋಧನ ಮಾಡಬೇಕು ಸುಮ್ಮಕ
ಓಂ ನಮಃಶಿವಾಯ ಪ್ರಣಮಕ ||2||
ಜಪ್ಪಿಸಿ ಹೋಗಬೇಕು ವಳಿಯಾಕ |
ತಪ್ಪಿ ಬಿದ್ದರೆ ಆಗುತ್ತಿ ತೆಳಿಯಾಕ
ಏರಿಸಿ ನೋಡರಿ ತಾರಕ
ಚಿತ್ತ ಚಿನ್ಮಯ ಬೆಳಕ ||3||
ಮೀರಿದ ಮಾರ್ಗವು ಮುಂದಕ |
ಕತ್ತಲ ಕಾಲ ಕಳಿಲಾಕ
ಚೌಕಾಸಿ ಬರುತಾವ ತಾರಕ
ಪಶ್ಚಿಮ ದಿಕ್ಕಿಗೆ ನೋಡದಕ ||4||
ಅರಸ ಯೋಗದೊಳು ನೇಮಕ |
ಕರಿಘೂಳೀಶನ ಸೇವಕ
ಕರೆದರೆ ಬರುವನು ಭಾವಕ
ಸುಲಭದಿ ಕೊಡುವನು ಬ್ರಹ್ಮಸುಖ ||5||
ಆರತಿ ಎತ್ತಿರೆ
ಆರತಿ ಎತ್ತಿರೆ ಮಾರಮರ್ಧನಿಗೆ |
ಗೌರಿವರಗೆ ಶಿರ ಗಂಗಾಧರನಿಗೆ ||ಪಲ್ಲ||
ಕರಿ ಚರ್ಮಾಂಬರ ಉರಗಾಭರಣ |
ಕರಿಗೊರಳಲಿ ಶಿರಹಾರ
ಪರಮ ಪರತರಿಗೆ ||1||
ಶಕ್ತಿಯಲ್ಲಿರುವಗೆ ಭಕ್ತರಿಗೊಲಿದವಗೆ |
ಭಕ್ತಿ ಜ್ಞಾನದಿ ಮುಕ್ತಿ
ಶಕ್ತಿ ತ್ರಯನಿಗೆ ||2||
ಅರಸಪುರೀಶ ಕರಿಘೂಳೀಶ |
ವರಕವಿ ಶ್ರೀಗುರು ಮುರುಗೇಂದ್ರನಿಗೆ ||3||
ಶ್ರೀಗುರುವಿನ ಪಾದ ಭಜಿಸಿ
ಶ್ರೀಗುರುವಿನ ಪಾದ ಯುಗಳ ಭಜಿಸಿ |
ಅಗಣಿತಾನಂದದೊಳು ಕೂಡಾನವೋ
ಭೋಗ ಭಾಗ್ಯಗಳು ತ್ಯಾಗ ಮಾಡಿ
ವೈರಾಗ್ಯದಿ ಯೋಗವ ಮಾಡಾನವೋ ||ಪಲ್ಲ||
ಗುರು ಎಂಬ ಎರಡಕ್ಷರ ಮೊದಲಿಗೆ |
ಅರಿಯದೆ ಪರಿಭವ ತಿರಿಗಿದೆನವೋ
ಅರಿವು ಇರಿಸದೆ ಮರವಿನೊಳಾದೆ
ಪರಿಪರಿ ಸುಖ ದುಃಖದೊಳಿನೆವೊ ||1||
ಓದಿ ಶಾಸ್ತ್ರ ಪುರಾಣ ಮೀಮಾಂಸ |
ಹಾದಿ ತಿಳಿಯದೆ ಬಿದ್ದೇನವೊ
ವಾದದಿ ಭೇದದಿ ಶೋಧನಗೈದು
ಯಮ ಬಾಧೆಯ ಬಡುತಾಲಿದ್ದೆನವೊ ||2||
ವಿನಯದಿ ಸುನಯದಿ ಮಾನಿನಿಯರ ನುಡಿ |
ಸ್ವಾನನ ಪರಿ ತಿರಿಗ್ಯಾಡೆನವೊ
ಅನುಭವ ಸಾದ್ರುಶ ಮನನವು ಇಲ್ಲದೆ
ಕಾನನದೊಳು ಮುಖ ಬಾಡ್ಯಾದವೊ ||3||
ಅಂಡಪಿಂಡ ಬ್ರಹ್ಮಾಂಡವೆಂದರೆ |
ಖಂಡಿತ ಸಟಿ ಎಂದಾಡ್ಯಾನವೊ
ಖಂಡ ಸೇವಿಪ ಮದ ಭಂಡರ ಸಂಗದಿ
ಬಂಡಾಟವ ನಾ ನಾಡೆನವೊ ||4||
ಮೂಲಮಂತ್ರದಿ ಕೀಲನು ಸುಲಭದಿ |
ಆಲಯದೊಳು ನಿಜ ಕಂಡೇನವೊ
ಬಾಲಲೀಲೆಯಲಿ ತಾ ಹಾಲು ಕಲಿಸಿ
ಮುಕ್ತಿ ಬಾಲಿಯ ಮೊಲಿ ಹಾಲುಂಡೇನವೊ ||5||
ಅಂಗಲಿಂಗ ಸಮರಂಗ ಭಾವದಿ |
ಕಂಗಳ ಮಧ್ಯದಿ ತೋರ್ಯನವೊ
ಮಂಗಳ ಮೂರುತಿ ಕರಿಘೂಳೇಶನ
ಅಂಗುಷ್ಟ ನಂಬಿ ಪಾರಾದೆನವೊ| ||6||
ಹುಸೇನ ಸಾಹೇಬರ ಸೋಬತಿ ಮಾಡಿ
ಹುಸೇನ ಸಾಹೇಬರ ಸೋಬತಿ ಮಾಡಿ |
ಹಸನಾಗಿ ನಾ ಬಂದಿದ್ದೆನು
ಆಶಾನಳಿದು ಉಪವಾಸದಿ ಪೀರಗೆ
ಲೇಸದಿ ವಶಮಾಡಿಕೊಂಡಿದ್ದೆನು ||ಪಲ್ಲ||
ಪಂಚ ಕ್ಲೇಶಗಳು ಪಂಚಕೋಶ |
ಏಳಿಂಚಿನ ಬುನಾದಿ ಹಾಕಿದ್ದೆನು
ಪಂಚಭೂತವೆಂಬ ಕಲ್ಲನೆವಡ್ಡಿ
ಪಂಚವೀಸ ತತ್ವ ಕಂಬನಡಿಸಿದ್ದೆನು
ಚಂಚಲಮಂಚಲ ಹೊದಿಕಿಯ ಮಾಡಿ
ಹಂಚಿಕಿ ಮಸೂದಿ ಕಟ್ಟಿದ್ದೆನು ||1||
ತನು ಎಂಬ ಮಸೂದಿ ಬೊಳಿಸಿ |
ಮನವು ಎಂಬ ಪಂಜಾ ಕೂಡಿಸಿ
ಅನುಮಾನ ಎಂಬ ಮುಲ್ಲನ ಮಾಡಿ
ದಿನಮಾನೆಂಬ ಧೂಪಾರ್ತಿ ಜೋಡಿ
ನಾನೆಂಬ ಅಗ್ನಿಯೊಳು ಜ್ಞಾನ ಊದನ್ನೆ ಹಾಕಿ
ನೀನೇ ನೀನೆ ಎಂದು ಧೀನ ಹೊಡಿದೆನು ||2||
ಬುದ್ಧಿ ಸಗುಣವೆಂಬ ಅಲಾಯಿ ಮಾಡಿ |
ಕುದ್ದಲ ಗುಣವೆಂಬ ಕಟಿಗಿ ಹಾಕಿ
ಸಿದ್ಧ ನಡಾವಳಿ ಎಣ್ಣಿಯ ಹಾಕಿ
ಶಬ್ದಸೂತಕ ಗುಂಪುಗೂಡಿಸಿ
ಸಿದ್ಧಾಸನ ಚಿತ್ತ ವುರಿಯನು ಹಚ್ಚಿ
ಇದ್ದು ಇಲ್ಲದಂತೆ ಭವಸೈ ಆಡಿದೆನು ||3||
ಈಷಣ ತ್ರಿದೂಷಣ ತ್ರಿವಾಸ |
ನತ್ರಿಯ ಕುಡಿಸಿ ಲಾಡಿ ಹಾಕಿದೆನು
ಆಶಪಾಶ ತಾಮಸ ಬೇಸರಕಿ
ಹೇಸಿಕಿ ಕುರಿಯ ತಂದಿದ್ದೆನು
ನಿರಾಶ ನಿರ್ಗುಣ ಚೂರಿ ಹಾಕಿ
ಲೇಸದಿ ಕಂದುರಿ ಮಾಡಿದೆನು ||4||
ಕಾರ ಹುಣ್ಣಿವಿಯಾದ ಆರನೆ ದಿನಕ್ಕೆ |
ಪೀರನ ಸವಾರಿ ಮಾಡಿದೆನು
ತಾರಮಂಡಲ ಪರಿಪರಿಹುವ್ವಾ
ಬಾಣ ಹಾರಿ ಹಾರಿ ಮೇಲಕೆ ನೋಡಿದೆನು
ಭೇರಿ ದುಂದುಭಿ ನಗಾರಿ ನೌಬತ
ಬಾರಿಸುತ ಮೆರವಣಿಗೆ ನಡಿಸಿದೆನು ||5||
ಅದರ ಹಿಡಿದು ಶರಬತ ತುಂಬಿ |
ಮೋದದಿಂದ ಫಾತೆ ಕೊಡಿಸಿದೆನು
ಸಾಧುಸತ್ಪುರುಷರಿಗೆ ಹೇಳುತ ಕೇಳುತ
ಬೀದಿವಳಗೆ ಬಂದು ನಿಂತಿದ್ದೆನು
ಬೋಧ ಕೊಟ್ಟ ಶ್ರೀಕರಿಘೂಳೇಶನ
ಪಾದ ಪಿಡಿದು ನಾ ಫಕೀರನಾದೆನು ||6||
ಗುರುರಾಜ ಸುರಭೋಜ್ಯ
ಗುರುರಾಜ ಸುರಭೋಜ್ಯ ನೀ ಸಹಜ |
ಪರಮ ದಯಾಕರನೆ ನಿಗಮಾಗಮಗಳಿಗೆ ನೀ ವೇದ್ಯ ||ಪಲ್ಲ||
ಅಗಣಿತಾ ಸುಗುಣ ಮಹಿಮಾ ಸಾಧ್ಯಾ |
ಜಗದೀಶ ಅಘನಾಶ ನೀ ಮಹೇಶ
ಪರಮ ದಯಾಕರನೆ ||1||
ಮಂದಾರಗಿರಿ ವೇದ್ಯ |
ಸುಂದಾರ ಮಂದಿರದಲ್ಲಿ ಚೋದ್ಯ
ಚಂದಿರವಾಸ ಕಂಧರ ವಿಷ ನಂದೀಶ ಪರಮ ||2||
ಮೂಲಮಂತ್ರ ಆದ್ಯ ಭಕ್ತಿ ಜ್ಞಾನ ವೈರಾಗ್ಯ ಮಧ್ಯ |
ಶ್ರೀಶೈಲೇಶ ಭೂಕೈಲಾಸನೇ ವಿಲಾಸ ಪರಮ
ಆಧಾರದಲ್ಲಿ ಆದ್ಯ ಭೇದಿಸಿ ಸ್ವಾದಿಷ್ಟ ಮಧ್ಯ
ನಿಧಿ ಧ್ಯಾಸವಿಧು ಪ್ರಕಾಶ ನೀ ಬೋಧ್ಯ ||3||
ಮಂಡಲತ್ರಯ ವಿದ್ಯ |
ಡಿಂಡಿಮಡೌಡಿ ಡಂಡಣವಾದ್ಯ
ಮಂಡಲೇಶ ಬ್ರಹ್ಮಾಂಡ ಪೋಷಾ ಅಖಂಡೇಶ ||4||
ಭಾರ್ಗವ ಅಘ್ರ್ಯಪಾದ್ಯಾಮೃತ |
ವರ್ಗಳನೈವೇದ್ಯ ಸ್ವರ್ಗ ಸುರೇಶ
ನಿರ್ಗುಣೇಶನೆ ಕರಿಘೂಳೇಶ ಪರಮ ದಯಾಕರ ||5||
ಬ್ರಹ್ಮ ವಿದ್ಯೆ ಕಲಿ ಜಾಣ
ಬ್ರಹ್ಮ ವಿದ್ಯೆ ಹಿಂಗ ಕಲಿ ಜಾಣ |
ಸುಮ್ಮನೇಕೆ ಆಗುವಿ ಹೈರಾಣ ಕೋಣ ||ಪಲ್ಲ||
ಆಧಾರ ಮೊದಲನೆ ಚಕ್ರ |
ಆಧಾರ ಗುದಸ್ಥಾನ ಅದರ ಮಂದಿರ
ಕಾಂಚನ ವರಣದಾಕಾರ
ಪದ್ಮವು ನಾಲ್ಕು ದಳ ಪೂರಾ
ವಶಷಸ ಅಕ್ಷರ ಆದಿ ಗಣಪತಿ
ಆದಿದೇವರ ಜಪ ಮಾಡಬೇಕು
ಆರುನೂರ ಓಂ ಎಂಬೊ ಬೀಜ ಅಕ್ಷರ
ಆಚಾರ ಲಿಂಗ ಸುವಿಚಾರ
ನಾಶಿಕದ್ವಾರಕ ಎದರಾ
ಪೃಥ್ವಿಯ ತತ್ವ ಭರಪೂರ
ದೀಡತಾಸಿನೊಳು ಗುಣಾಕಾರ ||1||
ಸ್ವಾದಿಷ್ಟ ಎರಡನೆಯ ಚಕ್ರ |
ಸ್ವಾದಿಷ್ಟ ಗುಹ್ಯ ಸ್ಥಾನದಲಿ ಪ್ರಥಿಷ್ಟ
ಆರು ದಳಗಳು ಇರುವವು ಸ್ಪಷ್ಟ
ಬಭಮಯರಲವ ಷಷ್ಟ ಕೆಂಪು
ವರ್ಣವಳಿವದು ಕಾಷ್ಟ
ಜಲತತ್ವ ಸೇರಿಹುದು ನಿಷ್ಟ
ಅಧಿಪತಿ ಬ್ರಹ್ಮದೇವ ಶ್ರೇಷ್ಠ
ಗುರುಲಿಂಗ ನಿವಾಸ ಪೀಠ
ನಾನೆಂಬ ಬೀಜಕ್ಷರ ಮಾಟ
ಆರು ಸಾವಿರ ಜಪ ಉತ್ಕೃಷ್ಟ
ಜೀವಕ್ಕೆ ಕಾರಣ ವೋಷ್ಠ
ಹದಿನಾರು ಘಳಿಗಿ ತಕೋಷ್ಟ ಪೂರಾ ||2||
ಮುಂದಾದ ಮಣಿಪುರಕ ನಾಭಿಯ ಸ್ಥಾನ |
ಇರಲಿಕ್ಕ ದಶದಳ ಪದ್ಮ ಆದರೀಕ
ಡಢಣತಥದಧನಪಫ ಅಕ್ಷರ ಸಾಕ
ಪೀತ ವರ್ಣದ ಬೆಳಕ ಅಗ್ನಿಯ ತತ್ವ ನೋಡದಕ
ಅಧಿಪತಿ ವಿಷ್ಣು ತಾನಧಿಕ
ಕಾರಣವು ಕೇಳು ನಯನಕ
ಶಿವಲಿಂಗದೇವರ ಜಳಕ
ಮಾ ಎಂಬ ಬೀಜವು ಬೇಕ
ಆರು ಸಾವಿರ ಜಪಮಣಿ ಸಾಕ
ಹದಿನಾರುವರಿ ಯಾಳ್ಯಕ ||3||
ಅನಾಹುತಾ ನಾಲ್ಕನೆ ಚಕ್ರ |
ಅನಹಾತ ಎದಿ ಹೃದಯ ಸ್ಥಾನಕ್ಕೆ ನಿರುತ
ಹನ್ನೆರಡು ಎಸಳಿನ್ಹುವ್ವಾಯಿತ
ಕಖಗಘಙಚಛ ಮತ್ತ ಜಝಞಟಠ
ಮುಗದಿತ್ತು ಬಾರಕ್ಷರ ಕಮಲ
ಸುನಾಥ ಸುಣ್ಣದ ಬಣ್ಣ ಬಿಳಿ ಶ್ವೇತ
ತತ್ವವು ಅದಕ್ಕೆ ಮಾರುತ
ರುದ್ರನು ಅಧಿಪತಿ ಕರ್ತ ತ್ವಕ್ಕಿಗೆ
ಕಾರಣಭೂತ ಜಂಗಮ ಲಿಂಗ ಪೂಜೀತ
ಶ್ರೀ ಎಂಬ ಬೀಜ ನುಡಿಯುತ್ತ
ಆರು ಸಾವಿರ ಜಪ ಮಾಡುತ್ತ
ಕರ ಮುಗಿದು ಆರುತಾಸೊತ್ತ ||4||
ಶುದ್ಧಿ ಅನಹಾತ ಮ್ಯಾಲ ವಿಶುದ್ಧಿ |
ಸ್ಥಾನವು ಕಂಠವು ಬುದ್ಧಿ
ಹದಿನಾರು ಪುರಾಣದ ಗದ್ದಿ
ಅಆಇಈಉಊಋ ಶುದ್ಧಿ
ಅಲ್ಲಿ ಎಐಒಔಅಂಅಃ ದಿ ಹದಿನಾರು
ಅಕ್ಷರ ಬೋಧಿ ನೀಲವರ್ಣ
ಬಣ್ಣದ ಮುದ್ದಿ ಆಕಾಶ
ತತ್ವದ ಗಾದಿ ಜೀವೇಶ ವಾ ಎಂಬ
ಬೀಜವನು ಓದಿ ಒಂದು ಸಾವಿರ
ಆಪದ ಶಿದ್ಧಿ ವಂದೊಂದು ಅರ್ಥದೊಳ ಸೇರಿ ||5||
ಅಗ್ನಿಕಂಗಳ ನಡುವೆ ಅಗ್ನಿ |
ಭೂಮಧ್ಯ ಸ್ಥಾನದ ಸೌಗ್ನಿ
ದಳ ಜೋಡಿಲಾವಪ್ರಾಜ್ಞ
ಹಂ ಕ್ಷಂ ಅಕ್ಷರ ಮೂಲಗ್ನಿ
ಮಾಣಿಕ್ಯ ವರ್ಣ ಚಂ ಕಾಗ್ನಿ
ಅಂತಃಕರುಣ ತತ್ವ ವಿಮಲಾಗ್ನಿ
ಆದಿದೇವತ ಶಿವ ಸರ್ವಾಜ್ಞೆ
ಜ್ಞಾತ್ರಕ್ಕೆ ಕಾರಣ ನಿರ್ವಿಘ್ನ
ಮಹಲಿಂಗ ಸ್ವಾಮಿ ಮಹದಾಗ್ನಿ
ಯ ಎಂಬೀಜಾಕ್ಷರ ಪ್ರತಿಜ್ಞ
ಒಂದು ಸಾವಿರ ಜಪ ವಡಬಾಗ್ನಿ
ಮುಕ್ಕಾಲು ಮಾಡು ಕಾಲಾಗ್ನಿ ||6||
ವೀರಾಮ್ಯಾಲೀನ ಚಕ್ರ |
ಸಾವೀರ ಬ್ರಹ್ಮ ರಂಧ್ರಸ್ಥಾನ
ವಿಸ್ತಾರ ಸಾವೀರ ಕಿರಣದಳ ಭಾರ
ಓಂ ಎಂಬೊ ಒಂದೇ ಅಕ್ಷಾರ
ಕೋಟಿ ಸೂರ್ಯ ಕಾಂತಿ ಭರಪೂರ
ಮನ ಬುದ್ಧಿ ತತ್ವದ ಸಾರ
ಆತ್ಮಕ್ಕೆ ಕಾರಣಕಾರ
ಗುರುಮೂರ್ತಿ ಅದಕ್ಕೆ ಅಧಿಕಾರ
ನಿಷ್ಕಳಲಿಂಗ ದೇವರಲ್ಲಿ ಜಪಮಾಡೊ ಸಾವಿರ
ಓಂ ಸೋಹಂ ಅಮೃತಾಧಾರ
ಎರಡರ್ಧಾಕಾರ ವಿಹಾರ ||7||
ಅಲ್ಲಿ ಶಿಖಾಚಕ್ರ ಸುಳಿಯಲ್ಲಿ |
ತ್ರಿಕೋಣಿ ಉನ್ಮನಿಯಲ್ಲಿ
ತ್ರಿದಳ ತ್ರಿವೇಣಿ ಮಾಲಿ
ಆ ಉ ಮ ಅಕ್ಷರ ಮೂಲಿ
ಝಗಝಗ ಹೊಳಿವ ಜಾಗಲ್ಲಿ
ಪ್ರಾಣಲಿಂಗ ವಾಸ ಅದರಲ್ಲಿ
ಮೂರುಲಕ್ಷ ಎಣಿಸೊ ಜಪಮಾಲಿ
ನಾದ ಬಿಂದು ಕಳೆಯ ಸೂಸುತ್ತಲಿ
ಸದಾವಕಾಲದಿ ಲಾಲಿ ||8||
ಹಿಂದೆ ಮೇಲಗಿರಿ ಶಿಖರದ ಹಿಂದೆ |
ಪಶ್ಚಿಮ ಚಕ್ರ ಅದು ಚಂದೆ
ದಳ ಪದ್ಮ ಏನುಯಿಲ್ಲಂದೆ
ನಿರಂಜನಲಿಂಗ ವಂದೆ
ನಿಶ್ಯೂನ್ಯ ನಿರೂಪಮ ಬಿಂದೆ
ನವರಂಗದಿಂಗ ವಿಸ್ರಂದೆ
ಒಂದಕ್ಕೆ ಒಂದು ಇಲ್ಲಂದೆ
ಇಷ್ಟ ಪ್ರಾಣ ಭಾವ ಇಲ್ಲ ಮುಂದೆ
ಇಷ್ಟೆಲ್ಲ ತಿಳಿಯೊ ಗುರುವಿಂದೆ ||9||
ಬೈಲು ನವಚಕ್ರದ ಆಚಕ |
ಬೈಲಿಬೈಲಾಚಿಗೆ ಆದ ನಿರ್ಬೈಲು
ಬೆನ್ನಿನ ಮ್ಯಾಲ ಆದ ವೈಲು
ಪರಬ್ರಹ್ಮನಿರುವ ಸಕೀಲು
ಗುರುಪಾದಕ್ಕೆ ನೀ ಮನ ಸೋಲು
ಪರಿಭಾವ ಹರುಹರಿಪ ಜಾಲು
ಕರಿಘೂಳಿ ತೋರಿಸಿದ ಕೀಲು
ರಾಮಲಿಂಗ ಎಂಬುವ ಮೋಕ್ಷದಾ
ಸೋಹಂ ಶಾಂತಿಯ ಸಾಲು ||10||
ಅನುಭಾವಿಗಳ ಸಂಗ ಬೇಕ
ಜೀವ ಶಿವಯೋಗದಿ ಶಿವ ಧ್ಯಾನವ ಮಾಡದಕ |
ಅನುಭಾವಿಗಳ ಸಂಗ ಬೇಕ
ಕೇವಲ ಪ್ರವಿಮಲ ಭಾವ ಭಕುತಿಯಲಿ
ಸಾವಧಾನದಿ ಗುರು ಸೇವದೊಳು ಇರಬೇಕ ||ಪಲ್ಲ||
ಮುಂದಕ ಒಂದೊಂದು ಹೆಜ್ಜಿ ಮುಂದಕ |
ಚಂದನ ಚೌಕಿ ಹಿಂದಕ ಬಿಂದು ಮಂದಿರ ಸಂದುಕ
ಸಂದಿನೊಳಿರುವ ಕಂದಕ ಕಂದಕದೊಳಿರುವ ಗಂಧಕ
ಗಂಧ ಧರಿಸೊ ನಿರ್ಬಂಧಕ ಮಂದಿ ಸಂದಣಿಯ ಚಂದಕ
ಹೊಂದಿದೆ ನಿಂದೆವಂದನಿಗೆ ಕುಂದದೆ ನೊಂದದೆ ||1||
ನೀಜಕ ನಿಧಾನ ಮಾಡೊ ನೀಜಕ ಸಾಧನ ಮಾಡೊ |
ನಾಜುಕ ಶೋಧನ ಮಾಡೊ ಜ್ಞಾನ ತೇಜಕ ಸ್ವಾಧೀನ ಮಾಡೊ
ಮನಪೂಜಕ ಭೇದನಹರ ಸಮಾಜಿಕ ಬೋಧನದೊಳಿರು ಸೂಜಿಕ ||2||
ಗಾದಿ ವಿದ್ಯೆವನು ಓದುತ ಸರ್ವದಿ |
ವಾದಿಸಿದರೆ ಯಮಬಾಧೆ ವದಗುವದು
ಕ್ರೋಧವ ಕಳಿ ಮದವಳಿ ಏಕಾಂತದಿ | ||3||
ನಾಟಕ ತುಂಗಭದ್ರೆಯ ಘಾಟಕ |
ಲಿಂಗಮುದ್ರಿ ತ್ರಿಕೂಟಕ ಕಂಗಳ ನಡು ಗುಮಟಕ
ಸಂಗಮ ಕ್ಷೇತ್ರ ನಿಟಕ ಜಂಗಮನ ಲಲಾಟಕ
ಮಹಾಲಿಂಗ ಸ್ವಾಮಿ ಮಠಕ ರಂಗಮಂಟಪ ಶೃಂಗಾಟಕ ||4||
ಹಾಂಗೆ ಕೇಳೊ ಮೃದಂಗ ಜಾಂಗುಟಿ |
ದಿಂಗು ಹಿಡಿಸಿ ಭವ ಭಂಗ ಕೆಡಿಸುವ
ಮಂಗಲಾಂಗ ಕರಿಘೂಳಿ ಉಂಗುಷ್ಟದ ಧೂಳಿ
ರಾಮಲಿಂಗ ತಾಳಿ ಬೈಲಿನೊಳು ಬೆಳೆದ ||5||
ಗುರು ತಂದೆ ವಿರತಿಯನು
ಕರುಣೀಸೊ ಪರಿತಾಪವ ಮಾಣಿಸೊ
ನಿರುತದಿ ಪರತತ್ವ ಶ್ರವಣಿಸೊ ||ಪಲ್ಲ||
ಸುರಿತ ಸುಖವ ಸುರಿಸುರಿ |
ಸುರಿದೇನದರ ಸಾರವರಿಯದೆ
ಮರವಿಲಿ ಮರತೆ ಘೋರ ತರದ ಸಂಸಾರದ
ಶರಧಿಯೊಳುರುಳುತಿರುವೆ ಹರ ಪಾರುಗಾಣಿಸೊ ||1||
ತ್ವರಿತದಿ ನರನವತಾರ ದಣಿಸೋ |
ಅಮೃತಾವನುಣಿಸೋ ಕರತಲದಿ ಚರಲಿಂಗ ಕಾಣಿಸೋ
ಭರಿತಾನಂದ ಸಾವಿರ ತಾರಕ ರವಿ
ಗುರುತ ತೋರಿಸಿ ಅರವಿನೊಳಿರಿಸೋ
ಶರತ್ತ ಹರಿಸಿ ಗಣಪೂರಿತ ಕರಿಸಿ
ಜ್ಞಾನ ಆರತಿವಿರಿಸಿ ಹಾರ ಕೊರಳಿಗೆ ಪೋಣಿಸೊ ||2||
ಸ್ಮರತಾಮಸ ನಾರಿ ಮೋಹ ಮಾಣಿಸೋ |
ಪೋರತನ ಮಸಣಿಸೊ ತಾರತಮ್ಯ
ದುರಿತಗುಣ ಕ್ಷೀಣಿಸೋ ವುರತರದ
ಭೇರಿ ಕಿನ್ನುರಿ ನಾದ ಇರುತಿರುತ
ಸುಸ್ವರ ದಾರಿಯೊಳಗೆ ನಿನ್ನ ಹೊರತು
ಇನ್ನಾರು ಘನಚರಿತ ಸಾರುತ ತುರ್ತದಿ ಕುಣಿಸೊ ||3||
ದೊರಿತನದ ವರ ಯೋಗ ಬ್ರಹ್ಮುಣಿಸೊ |
ಕಿರಿ ತರುಳನೆಂದೆಣಿಸೊ ಸುರತರು
ನೀನೆಂದು ಬಂದೆನೊ ಪ್ರಮಾಣಿಸೊ ಸ್ಥಿರ
ತನುವಿನಲ್ಲಿ ಶಿರ ತಗ್ಗಿಪೆ ಕಾಲ ಮೊರೆ ತಪಿಸುವ್ಯಾಲ್ಯ
ಮೀರುತದೆ ಮಂದಮಾರುತ ಮಕರಂದ ಬೀರುತ
ಅರವಿಂದ ತೋರುತ ಕರಿಘೂಳಿ ಪ್ರೀತಿ ಕರುಣಿಸೊ ||5||
ತಾರೆ ತಂಬಿಗಿ
ಬಾರವ್ವ ನೆಂಬೆವ್ವ ತಾರವ್ವ ನೀರ ತುಂಬಿ ತಾರೆ ತಂಬಿಗಿ |
ವಾರಿಗಿ ನಾರೇರು ಹೊರಕಡಿ ಹೋಗತಾರ ತಾರೆ ತಂಬಿಗಿ ||ಪಲ್ಲ||
ಕಂಚಗಾರ ಮಾಡಿದ ಪಂಚ ಬಣ್ಣದೊಂದು ತಾರೆ ತಂಬಿಗಿ |
ಸಂಚಗಾರಕೆ ಮೂರು ಕುಂಚಿಗಿ ಕೊಟ್ಟೀನಿ ||1||
ಕಂಚಿನ ತಂಬಿಗಿ ಪಂಚೇರಿಂದಾದವ್ವ ತಾರೆ ತಂಬಿಗಿ |
ಮುಂಚೆ ನೀ ತಾರವ್ವ ಕಂಚೇರು ಕರಿತಾರ ||2||
ಜತಿ ಗೆಳತಿಯರೆಲ್ಲ ಮಾತಾಡುತ್ಹೊಂಟಾರ ತಾರೆ ತಂಬಿಗಿ |
ನೀತಿವಂತಿ ತಾಸು ಹೊತ್ತು ಏರುತ ಬಂತು ತಾರೆ ತಂಬಿಗಿ ||3||
ವೈಮಾಲಿ ಮಾತಲ್ಲ ಬೈಲಿಗಿ ಹೋಗುವೆ ತಾರೆ ತಂಬಿಗಿ |
ಬೈಲಿನೊಳಗೆ ನಿರ್ಬೈಲೊಳು ಯಾರಿಲ್ಲ ತಾರೆ ತಂಬಿಗಿ ||4||
ಕೈಲಿಂದ ಬಾಯಿ ಬಂದ ನಯನ ಮುಂದಾದವ್ವ ತಾರೆ ತಂಬಿಗಿ |
ಜನ್ಮ ಮೈಲಿಗಿ ತೊಳೆದು ಸೈಯೆನಿಸಿಕೊಂಬುವೆ ತಾರೆ ತಂಬಿಗಿ ||5||
ರಾಮಲಿಂಗ ಅವಧೂತಸ್ವಾಮಿ ಹೆಣ್ಣಾದ ಕೇಳೆ ತಾರೆ ತಂಬಿಗಿ |
ನೇಮರಹಿತ ನಿರ್ಮಾಯನ ಪೂಜಕ್ಕೆ ತಾರೆ ತಂಬಿಗಿ ||6||
ತಂಬಿಗಿ ಇದ್ದರೆ ನಂಬಿಗಿ ಇದ್ದಂತೆ ತಾರೆ ತಂಬಿಗಿ |
ಶಂಭೋಕರಿಘೂಳಿ ಪಾದಾಂಬುಜ ಹಂಬಲಿಸಿ ತಾರೆ ತಂಬಿಗಿ ||7||
ಕವಿ ಎಂಬುವ ನಾಮ ಇನ್ಯಾಕ
ಎನಗೆ ಕವಿ ಎಂಬುವ ನಾಮ ಇನ್ಯಾಕ |
ಜನ ಕರಿವದು ಸಾಕ
ತನುಗೊನಿ ಗುಣದಲ್ಲಿ ಮರುಳಾದೆ ಮನಕ
ವನಿತೆಯ ಸ್ತನಕ
ಅನುದಿನದೊಳು ಘನ ಗುರುವಿನ
ಧ್ಯಾನವು ನೆನಿಯುತೆ ಮನದೊಳಿರುತಿರಲೊಂದಿನ
ಮಾನಿನಿಯಳಿಗಾಗಿ ಮನುಮಥ ವಶನಾಗಿ
ಅನುಮಾನಿಸದೆ ಮನ ಮೋಹಿಸಿದ ಬಳಿಕ ||ಪಲ್ಲ||
ಕೋಮಲೆಯರ ಕಮಲದ ವಾರಿ ನೋಟಕ ಭ್ರಮಿಸಿದೆನು ಘಟಕ |
ಪ್ರೇಮದಲ್ಲಿ ಕರಸಿದನೊ ಕಾಮರತಿಕೂಟಕ
ಸುಮನಸದಲ್ಲಿ ಅಮನಸ್ಕ ಯೋಗ
ತತ್ವಮಸಿ ಪ್ರಣಮ ನೇಮದಲ್ಲಿ ಇರುತಿರಿ
ವಮ್ಮನ ಅತಿ ಗಳಿಸಿಮ್ಮನ ಬಿಡಿಸಿ
ಸುಮಶರಘ ಮನುಪ ಕ್ರಮಿಸಿದ ಬಳಿಕ ||1||
ಅಂಗದೊಳು ಮಹಲಿಂಗನ ಬೆಳಕ ಸಂಗಮದಲ್ಲಿ ಝಳಕ |
ಕಂಗಳ ನಡುರಂಗದೊಳ ಜುಳಕ ಮಂಗಳಾಂಗಿಯ ಥಳಕ
ಜಂಗಮ ರೂಪ ರಾಮಲಿಂಗ ಅವಧೂತ ಮುಕ್ತಿ
ಅಂಗನಿ ಚುಂಬನಿ ಲಿಂಗನ ಸೇವಿಸಿ
ಹಂಗುದೊರೆದು ಅಭಯಂಗಳ ಅರಿದು
ಶುಭ ಮಂಗಳ ಮುರಿದು ಹಿಂಗ ತಿರಗಿದ ಬಳಿಕ ||2||
ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಸಕಲಕ್ಕೆ ಗುಣದಾಯಕ |
ಗೋಕುಲಕ್ಕೆ ಕರ್ತ ಸಹಾಯಕ ಶ್ರೀಕೃಷ್ಣನು ಮಾಯಕ
ಗೋಕುಲದೊಳು ಸೋಳ ಸಾಸಿರ
ನಾರೆರ ಮನ ವ್ಯಾಕುಲ ಹರಸಿದ ಏಕಾಂತವನು
ಭಕ್ತಿಗಿಡಿಸಿ ಜ್ಞಾನಶಕ್ತಿಯ ಕುಡಿಸಿ ಮನ ಉಕ್ತಿಯ ನಡಿಸಿ
ಶ್ರೀ ಕರಿಘೂಳಿಯಾದ ಬಳಿಕ ||3||
ಅಂಗನ ತಾಪ ಹ್ಯಾಂಗೆ ತಾಳಲೆಮ್ಮ
ಹ್ಯಾಂಗೆ ಮಾಡಲೆಮ್ಮ ಅಂಗನ ತಾಪ ಹ್ಯಾಂಗೆ ತಾಳಲೆಮ್ಮ |
ಹ್ಯಾಂಗ ಮಾಡಲೆಮ್ಮ ತಂಗಿ ರಂಗಮಂಟಪದೊಳಗೆ ಮೊನ್ನೆ
ಮಂಗಳವಾರ ದಿನ ಬಂದು ಗುಂಗ ಹಿಡಿಸಿ ಪೋದನಮ್ಮ
ಮಂಗಳಾಂಗಿ ಕರೆದು ತಾರಮ್ಮ ರಾಮಲಿಂಗಮ್ಮ ||ಪಲ್ಲ||
ಭಾನುವಾರ ರಾತ್ರಿ ನಾನ್ಹೋಗಿದ್ದೆ ಕಾನಾಗಡ್ಡಿ ಜಾತ್ರಿ |
ಯನ್ನ ಮುಂದ ಬಂದು ನಿಂತಾ ನಿಜನೇತ್ರಿ
ಇನ್ನೇನು ಹೇಳಲಿ ಅತನಂದ ಗಾತ್ರಿ
ತನ್ನ ಮನಸಿಗೆ ಮಾಡಿಕೊಂಡೆ ಖಾತ್ರಿ
ಸೊನ್ನಿಯಾ ಮಾಡಿ ತೋರಿಸಿದ ಪಾತ್ರಿ ಮುಗಸಿದೆ ಯಾತ್ರಿ
ಕಣ್ಣು ಸೊನ್ನಿಯ ಖೂನ ಹಿಡಿದು ಚನ್ನಿಂಗ ಬಂದು ಯನ್ನ ಕರಿದ
ತಣ್ಣಗಾಯಿತು ತನುವು ಅದರ ಉನ್ನತದ ಆನಂದವಾಯಿತು
ಮನಿಗೆ ಬಾರಂತ ಹೇಳಿದನಮ್ಮ ಕೂನಿಲ್ಲವಮ್ಮ ||1||
ಒಬ್ಬರಿಲ್ಲದು ನೋಡಿ ದೀಪಾವಳಿ ಹಬ್ಬದ ದಿವಸ ಬಂದ ಓಡಿ |
ಹುಬ್ಬಳ್ಳಿ ಸೀರಿ ಉಡಸಿದ ನಿಲಿಗಿ ಮಾಡಿ
ನಿಬ್ಬೆರಗಾದೆ ನಲ್ಲಾ ಮಾಡದು ನೋಡಿ
ಇಬ್ಬರು ನಡದೆವು ಮೇಲು ಮಂದಿರ ಕಡಿ
ಒಬ್ಬರಿಗೊಬ್ಬರು ನಿಲವುಗನ್ನಡಿ ನೋಡಿ ಗಲಬಲಮಾಡಿ
ಉಬ್ಬಿ ಉಬ್ಬಿ ಕುತ್ತಿಗೆ ತಬ್ಬಿಕೊಂಡೆ ತೆಕ್ಕೆಯೊಳಗೆ
ಮಬ್ಬು ಹರಸಿದ ಕಾಮ ಭರದಿ ಗುಬ್ಬಿಯಂತೆ ಮುಟ್ಟಿ ಮುದುರಿದ
ಎದಿ ಭುಗಿಲು ಬಿಡವಲ್ಲ ದೇಳಮ್ಮ ನೀ ಕೇಳಮ್ಮ ||2||
ಮೋಹಿನಿ ರತಿಕೇಳಿ ಸಡಗರದಿಂದ ಕಟ್ಟಿಕೊಂಡೆ ತಾಳಿ |
ತಾ ತೊಡಿಸಿದ ವಂಕಿ ಬಿಂದುಲಿ ಕಾಲಕಡಗ ಪಿಲ್ಲೆಹಾಕಿಕೊಂಡೆರುಳಿ
ಉಡಕಿಯ ಗಂಡ ಪುಂಡ ಕರಿಘೂಳಿ
ನಡೆನುಡಿ ಕೊರಳೀಗೆ ಹಾಕಿ ದೇಕಾವಳಿ
ಆತನ ಅಡಿಗೆ ಜನ್ಮ ನಿವಾಳಿ ಫಲವೇನು
ಬಾಳಿ ಪೊಡವಿಯೊಳಗಿರು ಬಾರದಮ್ಮ
ಇಂತ ಕಡುಕಷ್ಟದ ಜನ್ಮ ಕೋಡಿ ಬ್ರಹ್ಮ ಬರದಾನಮ್ಮ
ಅವನ ಶಿರ ಕರ ಕಡಿಯಲಮ್ಮ ಮಿಡಕಿದರು
ಇನ್ನೇನು ಹಡದಮ್ಮ ಅಗಡಾದೆನಮ್ಮ ||3||
ಬಿಂದು ಬೀಜದ ಭೇದವಾಯಿತು
ಬಿಂದು ಬೀಜದ ಭೇದವಾಯಿತು
ಮಂಗಲವಾಯಿತೊ ಜಯ ಜಯ ||ಪಲ್ಲ||
ನಾದ ಬಿಂದಾಯಿತು ಬಿಂದು ನಾದಾಯಿತು |
ಬಿಂದು ಬೀಜದ ನಡು ಭೇದವಾಯಿತು
ಬಿಂದು ಬೀಜ ಇರುವ ಭೇದವು ತಿಳಿದರೆ
ಸಂದೇಹವಿಲ್ಲದೆ ಸರ್ವವು ತಾನಾಯಿತು ||1||
ಸತ್ತು ತಾನಾಯಿತು ಚಿತ್ತು ತಾನಾಯಿತು |
ಸತ್ತು ಚಿತ್ತುಗಳೆರಡು ಸಮರಸವಾಯಿತು
ಸತ್ತು ಚಿತ್ತುಗಳ ಸಮರಸ ತಿಳಿದಾರೆ
ಬತ್ತಿಯಿಲ್ಲದೆ ಜ್ಯೋತಿ ಬೆಳಗು ತಾನಾಯಿತು ||2||
ಕ್ಷರವು ತಾನಾಯಿತು ಅಕ್ಷರವು ತಾನಾಯಿತು |
ಕ್ಷರ ಅಕ್ಷರ ಎರಡು ಶಾಶ್ವತವಾಯಿತು
ಕ್ಷರ ಅಕ್ಷರ ಯರಡು ಅರ್ಥವು ತಿಳಿದಾರೆ
ಅರವಿಲಿ ಅಮನಸ್ಕ ಆತ್ಮ ತಾನಾಯಿತು ||3||
ಮಾಯಕ್ಕೆ ಒಳಗಾಯಿತು ಮಾಯಕ್ಕೆ ಹೊರಗಾಯಿತು |
ಮಾಯ ಇಪ್ಪತೈದು ತತ್ವವಾಯಿತು
ಮಾಯ ಇಪ್ಪತೈದು ಮರ್ಮವು ತಿಳಿದಾರೆ
ಮಾಯ ನಿರ್ಮಾಯ ಮತ್ತೇನು ಇಲ್ಲದ್ಹೋಯಿತು ||4||
ನೀನೋಗಿ ನಾನಾಯಿತು ನಾನೋಗಿ ನೀನಾಯಿತು |
ನಿನ್ನ ನಾಮ ಮಂತ್ರ ನಿಜ ಭೋಧವಾಯಿತು
ನಿನ್ನ ನಾಮ ಮಂತ್ರ ನಿಜವನ್ನು ತಿಳಿದಾರೆ
ಮಾನಭಿಮಾನವು ಮನಕಿಲ್ಲದಾಯಿತು ||5||
ಅಂಗ ಲಿಂಗವಾಯಿತು ಲಿಂಗ ಅಂಗವಾಯಿತು |
ಅಂಗಲಿಂಗಸಂಗ ಅನುಭವವಾಯಿತು
ಅಂಗಲಿಂಗಸಂಗ ಅನುಭವ ತಿಳಿದಾರೆ
ಮಂಗಳಾಂಗ ಮಹಲಿಂಗ ರೂಪಾಯಿತು ||6||
ಗುರುವು ಶಿಷ್ಯನಾದನು ಶಿಷ್ಯ ಗುರುವಾದನು |
ಗುರುವು ಶಿಷ್ಯರ ನಡುವೆ ಗುರುತು ತಾನಾಯಿತು
ಗುರುವರ ಕರಿಘೂಳಿ ಇರವನು ತಿಳಿದಾರೆ
ಅರಿವು ಮರವು ಸುರಧೇನು ತಾನಾಯಿತು ||7||
ಜಯಮಂಗಳಂ ನಿತ್ಯ ಶುಭಮಂಗಳಂ
ಜಯಮಂಗಳಂ ನಿತ್ಯ ಶುಭಮಂಗಳಂ |
ಜಯಜಯತು ಜಗದೀಶ ಗುರುರಾಯಗೆ ||ಪಲ್ಲ||
ಆರು ಚಕ್ರಂಗಳನು ಮೀರಿ ಸಾವಿರ ದಳದಿ |
ಭೋರೆಂಬ ನಾದವ ಕುಡಿಕಿಯ ಮಾಡಿ
ಸಾರಿಸಾರಿಗೆ ಪವನ ಧಾರಣ ರವಿಚಂದ್ರ
ತಾರಕಾಮೃತ ಸಾರ ಸವಿದಾತಗೆ ||1||
ತ್ರಿವಿಧ ಪ್ರಸಾದ ಧುರೀಣನು ಒಳ ಹೊಳಗೆ |
ತ್ರಿಗುಣಕ್ಕೆ ಮೀರಿದ ವಿಮಲನಿಗೆ
ಅವಿರಳ ಸ್ವಯಂಜ್ಯೋತಿ ದೇವ ನರಹರಿ ಕೀರ್ತಿ
ಭವಹರ ಅಮನಸ್ಕ ಪೂರಿತಗೆ ||2||
ಒಂಟಿ ದೃಷ್ಟಿಯ ಸೂಕ್ಷ್ಮ ಮೀಂಟಿ ಸುಷುಮ್ನದೊಳು |
ನಾಂಟ್ಯವಾಡುವ ನೀಲಕಂಠನಂ ನೋಡಿ
ಅಂಟು ಮುಟ್ಟಿಲ್ಲದೆ ಆನಂದ ಶರಧಿಯೊಳ
ಜಂಟನಾಗಿರುವ ನೀಲಕಂಠನಿಗೆ ||3||
ಗುರುವು ಕರಿಘೂಳೀಶ ಕರ ಮುಗಿದು ಚರಣಗಳ |
ವಿರಸವಿಲ್ಲದೆ ಮುಗಿದು ಸ್ಮರಣೆ ಮಾಡಿ
ಮರಳಿ ಭವ ಜನ ಮನಿಗೆ ಹೊಂದದೆ
ಧೀರ ಸದ್ಗುಣ ಸಾರ ನಿರ್ಮಾಯಗೆ ||4||
ಮಹದೇವನ ರಾಣಿ
ಭವಾನಿ ಭವಭಯ ನಿವಾರಣೀ |
ಕಾವುದಮ್ಮ ದೇವನ ರಾಣಿ
ಮಹದೇವನ ರಾಣಿ ಜ್ಞಾನಿ ||ಪಲ್ಲ||
ಆದಿ ಶೋಧನಿ ವಿಧಿ ಬೋಧ ಧುರೀಣಿ |
ವಿಧಿ ಮಾಧವ ಸದಾಶಿವಾದಿ ಉದಯಿಸಿ
ಮಧುಕೈಟಭ ಮದ ಮರ್ಧಿನಿ
ಪದ್ಮಿನಿ ಜ್ಞಾನಿ ಭವ ಭಯ ನಿವಾರಿಣಿ ||1||
ಮಹಿಷ ಮರ್ಧಿನಿ ಮಹಿನೀ |
ಆ ಮಹ ಸುರ ನಿಕರ ಆಹಾ ಪಾಹಿನೀ
ಮಹ ಮಧುಪಾನಿ ಮಹಾ ಮಾಯಿನೀ
ಜ್ಞಾನಿ ಭವಭಯ ನಿವಾರಿಣಿ ||2||
ಧೂಮ್ರ ಲೋಚನಿ ಧೂಮ್ರರಾಕ್ಷಸನ |
ಹೇಮಶಂದನ ಧೂಮ ನಿಃಕಾಮಿನಿ
ಕಾಮಿತ ಜನಿ ಪ್ರೇಮ ಕರುಣಿ
ಜ್ಞಾನಿ ಭವಭಯ ನಿವಾರಿಣಿ ||3||
ಚಂಡಮುಂಡಸಿರ ರುಂಡಮಾಲಿನಿ |
ದಂಡಿ ರಕುತ ಬೀಜಾ ಖಂಡ ಖಂಡಿನಿ
ತಾಂಡವಾಯಿನಿ ಖಂಡರೂಪಿಣಿ ಜ್ಞಾನಿ ಭವ ||4||
ಅಂಬಾ ಶಂಭು ನಿಶುಂಬ ಜಂಭಿನೀ |
ಶಂಭು ಕರಿಘೂಳೀಶನ ರಾಣಿ
ಸಂಭ್ರಮದ ನಿರಾಲಂಬ ವದನಿ ಜ್ಞಾನಿ ಭವಾನಿ ||5||
ಒಪ್ಪನಪ್ಪಿಕೊಳ್ಳೊ ನೀ ಪರಮಾತ್ಮ
ಒಪ್ಪನಪ್ಪಿಕೊಳ್ಳೊ ನೀ ಪರಮಾತ್ಮ
ಆತ್ಮದೊಳಾನಾ ಪರಮಾತ್ಮ ಜೀವಾತ್ಮ ಆತ್ಮ ||ಪಲ್ಲ||
ಆತ್ಮದೊಳಗೆ ಪರಮಾತ್ಮನ ಶೃತಿಸಿದ |
ಪಥಗತಿ ಹತ್ತಿಸಲು ವ್ಯಥೆ ಸತಿಸುತರದು
ಅತಿ ಹಿತದಲ್ಲಿ ಸತ್ಯ ಪತಿತನ ಸ್ತುತಿಸಲು
ಜಾತಿ ಅಜಾತಿ ಸುಜಾತಿಲಿ ಮಥಿಸುವ ||1||
ಅಣುರೇಣು ತೃಣ ಧಣಿಯಾಗಿರುವ |
ಅಣು ಮಾಯ್ಮಲ ಕಾರ್ಮಿಕದಿ ಕಾಣುವ
ತನು ಮನ ಧನವನು ನೆನಿಸದೆನುಣಿಸಲು
ಕಣ್ಣಿನೊಳಗೆ ಪರಿಪೂರ್ಣ ಕಾಣಾತ್ಮ ||2||
ಸದಾ ಸದ್ಭಕ್ತರ ಹೃದಯದೊಳಿರುವ |
ವೇದದೊಳುದಿಸಿದ ಬೋಧನೋದಿಸುವ
ಸದಾ ನಾದದ ಆಧಾರದೊಳಿರುವ
ಸಾಧಿಸೊ ಸ್ವಾದಿಷ್ಟ ಮಣಿಪೂರದಿರುವ ||3||
ಅಷ್ಟವರ್ಣಷ್ಟದಳನಟ್ಟು ನಟ್ಟಿರುವ ವಿಷ್ಣು ಜೇಷ್ಠರ |
ಸುರ ಸೃಷ್ಟಿಯೊಳಿರುವ ತುಟಿ ಮಿಸುಕದೆ
ನಿಟಿಲಾಕ್ಷನ ಪಠಿಸಲು ನಿಟಿಲದೊಳಗ
ನಿಟಿಲಾತ್ಮನು ನಟಿಸುವ ||4||
ನೃಪಲತೆಯಲ್ಲಿ ತಪವ್ಯಾಪಕನರುವ |
ಅಪ್ಪ ಕರಿಘೂಳೀಶ ಕೃಪಾಕರ
ಗುಪಿತದಿ ಜಪಿಸುವ ಜಪತಪ ತಪಿಸುವ
ಒಪ್ಪನಪ್ಪಿಕೊಳ್ಳೊ ನೀ ಪರಮಾತ್ಮ ||5||
ಶಿವೋಹಂ ಸದಾ
ಶಿವೋಹಂ ಸದಾ ಸೋಹಂ ಸೇವೆಯೊಳಿರಿಸೋ |
ದಯದಿಂದಲಿ ಎನ್ನಯ ಭವಭಯ ತವಿಸೊ ||ಪಲ್ಲ||
ಮನುಮುನಿ ಸುರಗಣ ಘನಕೆಲ್ಲ ಘನವಾದ |
ಅಣುರೇಣು ತೃಣದೊಳು ಪೂರ್ಣನೆ ಪರಮ ||1||
ಕನ್ನ ಬೇಡನು ಕಾಲಿಲೊದೆಯಲು ಮನ್ನಿಸಿ |
ಉನ್ನತವಾದಂಥ ಘನ ಪದವಿಯನಿತ್ತೆ ||2||
ತತ್ವ ತತ್ವದಿ ಸತ್ಯ ತತ್ವವ ಹತ್ತಿ |
ತತ್ವದಿ ತತ್ವಮಸಿ ಸತ್ಯದಿ ಸ್ಥಿತನೆ || ||3||
ಧರಿಯೊಳರಸಪೂರ ಕರಿಘೂಳಿ ಗುರುವರ |
ಕರುಣಾದಿ ತರುಳರಿಗೆ ಚರಣಾಮೃತುಣಿಸೊ ||4||
ಓಂ ಶಿವಾಯ ನಮಃ
ಶಿವಾಯ ನಮಃ ಓಂ ಶಿವಾಯನಮ ಓಂ |
ಶಿವಾಯನಮ ಓಂ ನಮಶ್ಯಿವಾಯ ||ಪಲ್ಲ||
ಶಿವ ಮಹಾದೇವಾಯ ಶಿವಶಂಕರಾಯ |
ಶಿವ ಸರ್ವಭರಿತಾಯ ಗೌರೀಧವಾಯ
ಶಿವನಂದಿವಾಹಾನಾಯ ಶಿವದೇವನುತಾಯ
ಶಿವದಕ್ಷನಾಶಾಯ ನಮಶ್ಯಿವಾಯ ||1||
ನಾಗೇಂದ್ರಧರಾಯ ನಗಚಾಪಕರಾಯ |
ಅಘಹರ ಮಾರಾಯ ಸುಗನಿರ್ಮಲಾಯ
ನಿಗಮಾಗಮಾಶಾಯ ಯೋಗಿ ಜನಾಯ
ಸಾಗರ ಕರುಣಾಯ ನಮಃ ||2||
ಶ್ರೀ ನೀಲಕಂಠಾಯ ಶ್ರೀ ನತಜನಪಾಲಾಯ |
ಶ್ರೀ ಗೌರಿವರ ಧಾರ ಗಣನಾಥಾನಾಯ
ಶ್ರೀ ಭುವನೇಶಾಯ ಶ್ರೀ ವೇದಾಂಗಾಯ
ಶ್ರೀ ಸುಖಸದಾಯ ನಮಃ ||3||
ಶಿವ ಧನ ಸಖಾಯ ಶಿವಮನ ಸುಖಾಯ |
ಶಿವ ಭವಭಯ ಮಾಯ ಶಿವಸಾಕ್ಷಾತಾಯ
ಶಿವ ಪಶುಪತಿಯಾಯ ಶಿವ ಪಂಚಮುಖಾಯ
ಶಿವ ಸಹಸ್ರಾಕ್ಷಾಯ ನಮಃ ||4||
ಭವಭರ್ಗಭಸಿತಾಯ ಬಾಳ ಲೋಚನಾಯ |
ಭವ ಮೇರುಕಾರಣ ಕಪರ್ದಿಯಾಯ
ಶಿವಸೋಮ ಶಾಂತಾಯ ಶಿವ ಅಭಯಾಯ
ಶ್ರೀ ವಿರೂಪಾಕ್ಷಾಯ ನಮಃ ||5||
ವಿಶ್ವಾಭಿರಾಮಾಯ ಶಿವಗಂಭೀರಾಯ |
ಶಿವಕಾಲ ಕಾಂತಾಯ ಶಿವಲೋಲುದಾಯ
ಶಿವಭವ ಭರಿತಾಯ ಶಿವದೈವರಾಯ
ಶಿವ ಶಾಂತಿ ದಾಂತಾಯ ನಮಃ ||6||
ಭುವ ವಾಮದೇವಾಯ ಶಿವ ಅಘೋರಾಯ |
ಶಿವ ಓಂಕಾರಾಯ ಶಿವರುದ್ರಭದ್ರಾಯ
ಶಿವತತ್ವ ಪುರುಷಾಯ ಶಿವ ಪಂಚಾಕ್ಷರಾಯ
ಶಿವಮಂತ್ರ ಪಾಠಾಯ ನಮಃ ||7||
ಶಿವ ಸದ್ಯೋಜಾತಾಯ ಶಿವ ಭೀಮರಾಮಾಯ |
ಶಿವ ಮೃಢಮಹಾಯ ಶಿವಕಾಲರಾಯ
ಶಿವ ಕಾಮಜಿತಾಯ ಶಿವ ಮೃತ್ಯುಂಜಯಾಯ
ಶಿವಪುರನಾಥಾಯ ನಮಃ ||8||
ಶಿವ ಪರಾತ್ಪರಾಯ ಶಿವ ಅನಂತಾಯ |
ಶಿವ ತೇಜೋರಾಶಾಯ ಶಿವ ನಿರ್ಮಯಾಯ
ಶಿವ ಸರ್ವಜ್ಞಾಯ ಶಿವ ಶಾಶ್ವಿತಾಯ
ಶಿವ ಬ್ರಹ್ಮಬ್ರಹ್ಮಾಯ ನಮಃ ||9||
ಶಿವ ಸುರಪಾಲಯ ಶಿವ ರುಂಡಮಾಲಾಯ |
ಶಿವ ದಂಡಕರಾಯ ಶಿವ ಕಪಾಲಾಯ
ಶಿವ ತ್ರಿಶೂಲಧರಾಯ ಶಿವಬಾಂಧವಾಯ
ಶಿವ ನಿಜವಾಸಾಯ ನಮಃ ||10||
ಶಿವ ಸದಾಶಿವಾಯ ಶಿವ ಚಂದ್ರಮೌಳ್ಯಾಯ |
ಶಿವ ಮಹಿಮೋಗ್ರಜಾ ಚರ್ಮಾಂಬರಾಯ
ಶಿವ ಅಸುರ ಶಿರಾಯ ಶಿವ ಧರಮಾಲಾಯ
ಶಿವ ಮಂದಾಕಿನೀ ದಾಯ ನಮಃ ||11||
ಶಿವ ಮಹೇಶ್ವರಾಯ ಶಿವ ಮೇಘವಾಹಾಯ |
ಶಿವ ಯೋಗಮಂದಿರ ಶಿವ ಜೀವವಾಸಾಯ
ಶಿವ ನೀಲಹಿತಾಯ ಶಿವ ಲೋಹಿತಾಯ
ಶಿವ ಪಾರಿಜಾತಾಯ ನಮಃ ||12||
ಶಿವ ಪಾವನಾಯ ಶಿವ ಲೋಕಪಾಲಾಯ |
ಶಿವ ವಾಸ ಕೈಲಾಸ ಉಮೆಸುತ ಸಹಿತಾಯ
ಶಿವ ಮಂತ್ರಭರಿತಾಯ ಶಿವ ಭಕ್ತಿದಾಯ
ಶಿವ ಪಂಚಬ್ರಹ್ಮಾಯ ||13||
ಶಿವ ಪರನಾದಾಯ ಶಿವಪರಬಿಂದಾಯ |
ಶಿವ ಪರಮಾತ್ಮಾಯ ಶಿವ ಈಶ್ವರಾಯ
ಶಿವ ಪುರಹರಾಯ ಶಿವ ಸಂಪದಾಯ
ಶಿವ ಇಂದ್ರಮಿತ್ರಾಯ ನಮಃ ಶಿವಾಯ ||14||
ಶಿವ ವಧುವರಾಯ ಶಿವ ವಾಗೀಶಾಯ |
ಶಿವ ವರ್ಣಾತೀತಾಯವಂದ್ಯ ಜಯಾಯ
ಶಿವಪರತರಾಯ ಪರಂಜೋತ್ಯಾಯ
ಶಿವ ಪರಮಾನಂದಾಯ ನಮಃ ||15||
ಶಿವ ನಿರಘ ನಿರೂಪಾಯ ಶಿವ ನೀರವರ್ಣಾಯ |
ಶಿವ ನಿರಲೇ ಪಾಯ ನಿರವಯಾಯ
ಶಿವ ನಿತ್ಯ ತೃಪ್ತ್ಯಾಯ ಶಿವ ನಾಗಭೂಷಾಯ
ಶಿವ ವಿಶ್ವಬ್ರಹ್ಮಾಯ ನಮಃ ||16||
ಶಿವ ವಿಶ್ವತಾತ್ಮಾಯ ದಿವಪೂಜಿತಾಯ |
ಶಿವ ಗಣಾರ್ಚಿತ ಸನಾತನಾಯ
ಶಿವ ಸದಾಗತಿಯಾಯ ಶಿವಸೋಹಂ ಸದಾಯ
ಶಿವ ಗಿರೀಶಾಯ ನಮಃ ||17||
ಶಿವ ಪಿತ ಗಾಂಗೇಯ ಶಿವಗಣನಾಥಾಯ |
ಶಿವ ಜಗದೀಶ್ವರ ಶಿವ ವಿಷಧರಾಯ
ಶಿವ ಮಧುಮಧುರಾಯ ಶಿವ ಪಿನಾಕಾಯ
ಶಿವ ಸದಾಪಾಲಾಯ ನಮಃ ||18||
ಶಿವ ರಾಜಪುರಾಯ ಶಿವ ರಾಜಯೋಗ್ಯಾಯ |
ಶಿವ ಕರಿಘೂಳೀಶ ಗುರು ಕರುಣಾಯ
ಶಿವ ಯೋಗಿ ವರಕವಿ ಮುರುಗೇಂದ್ರ ಗುರುವಾಯ
ಶಿವಾಯ ಶಿವಧೋಂ ನಮಃ ||19||
ಶಿವ ಸೇವಿಲಿರಿಸು
ದೇವ ದೇವ ಆವಾಗಲು ಶಿವ |
ಸೇವೆಲಿರಿಸಿ ಕಾವುದೈ
ಜೀವ ತ್ರಿಗುಣವಾ ವಿರಹಿತನೆ
ಸಾವಧಾನವೀವುದೈ ದೇವ ||ಪಲ್ಲ||
ಅಂಗಜನ ವಧ ತುಂಗ ಸಿರದೊಳು |
ಗಂಗಾಧರ ಧವಳಾಂಗನೆ
ಸಂಗ ಶರಣ ಸುಸಂಗವಾ ಶಶಿ
ಕಂಗಳಲಿ ನೋಡ್ಲಿಂಗನೆ ದೇವ ||1||
ಇಷ್ಟದಾಯಕ ನಿಷ್ಠರಿಗೆ |
ಸುಖ ಕೊಟ್ಟು ಸಲಹುವ ಧಿಟ್ಟನೆ
ನೆಟ್ಟನಂಧಕ ದುಷ್ಟಸುರನ್ಹೆದಿ
ಕುಟ್ಟಿ ತುಳಿದಾ ಸಂತುಷ್ಟನೆ ದೇವ ||2||
ಅಷ್ಟ ದಳಗಳನಟ್ಟಿ ಸುಳಿದು |
ನಟ್ಟನಡುನಾಳಿಷ್ಟನೆ ಸೃಷ್ಟಿ
ಶ್ರೇಷ್ಠ ಕಷ್ಟಕಳಿ ಉತ್ಕೃಷ್ಟ
ಕರಿಘೂಳೀಶನೆ ದೇವ ||3||
ಘೋರ ತರದ ಸಂಸಾರವ ಹರಿಸೊ
ಸದಾ ರಾಮನಾಮ ಸ್ಮರಿಸೊ |
ಪ್ರೇಮವಾದ ಭವ ನೇಮವ ಹರಿಸೊ ಸದಾ| ||ಪಲ್ಲ||
ಸತಿಸುತರು ಹಿತ ಬಾಂಧವರೆಲ್ಲ |
ಹಿತದಿರಲು ನಿನಗಿಂದಿವರೆಲ್ಲ
ಗತಿಸುವಾಗಾರಿಲ್ಲ ಸುಪಥ ಅನುಸರಿಸೊ ಸದಾ ||1||
ಧನಕನಕವ ನನ್ನದೆಂದು ನಂಬಿರುವಿ |
ನಾನೆಂಬ ಮಮಕಾರದಿಂದ ತುಂಬಿರುವಿ
ತನುಮನ ಧನ ಗುರುವಿನ ಧ್ಯಾನದಿರಿಸೊ ಸದಾ ||2||
ಆರು ನಾನೆಂಬ ವಿಚಾರ ವಿಚಾರಿಸೊ |
ಘೋರ ತರದ ಸಂಸಾರವ ಹರಿಸೊ
ಕರಿಘೂಳಿ ಚರಣಾಮೃತವನು ಪೂರಿಸೊ ಸದಾ| ||3||
ಓಂ ನಮಃ ಶಿವ ಎನು ಮನವೆ
ಅನುದಿನ ಓಂ ನಮಃ ಶಿವಯೆನು ಮನವೆ |
ಹೀನ ಗುಣಗಳಿಸು ತಿಳಿ ತಿಳಿದು ತಿಳಿದು ಅನು | ||ಪಲ್ಲ||
ಶಿವನಾಮ ಸ್ಮರಿಸಲು |
ಭವ ಭಯವೆಲ್ಲಿಹದು
ಜಡಜೀವಾದು ಭಾವಾದು ಕಳೆದು ಕಳಿದು ಅನು| ||1||
ಯಾವ ಶಿವನ ಓಂ |
ಶಿವಾಯನಮ ಓಂ ಕಾಣುಮ
ಓಂ ನಮಶಿವಾಯ ಶಿವಾಯ ಅನು ||2||
ಉದಯದಿ ಆ ನಾಮ |
ಮಧುರ ಮ ಮಧ್ಯನಾಮ
ಆದಿ ಮಧ್ಯಾಂತ ಮನಾಮ ಓನಾಮ ಅನು ||3||
ರಜತಾದ್ರಿಲಿರುವ ರಾಜ ಯೋಗುಸುರುವ |
ರಾಜಮಹಾರಾಜ ಸುಪೂಜ
ಕರಿಘೂಳೀಶಜಾ ಅನು ||4||
ಜತನ ನೋಡಾತ್ಮ
ಜತನ ನೋಡಾತ್ಮ ಜತನ ಮಾಡಾತ್ಮ |
ಮಥನದಿ ಪೃಥುವಿಯಲ್ಲಿ ಪತನವಾಗುವದಯ್ಯೊ ||ಪಲ್ಲ||
ಎಲ್ಲಿ ನೋಡಲಲ್ಲಿ ಕಲಿ ಖುಲ್ಲ ಸ್ತ್ರೀಯರೆಲ್ಲ ಬಂದು |
ಬಲಿಮೆಯಿಂದಲಿ ನಿನ್ನ ಬಲಿಯೊಳಗ್ಹಾಕುವರಯ್ಯೊ ||1||
ಮೋಹಿನಿ ರೂಪದಿಂದ ಇಹದೊಳು ಜನಿಸಿ ಬಂದ |
ಮೋಹಿಸಿ ವಿಧವಿಧದಿಂದ ಮಹ ನರ್ಕದ್ಹಾಕುವರಯ್ಯೊ ||2||
ಮಾಯದಿಂದ ಜನಿಸಿದ ಬಳಗ ಕಾಯದಿಂದ ತುಂಬ್ಯಾದ ವಳಗ |
ಆಯಸಿಲ್ಲ ಬೇಗು ಬೆಳಗ ಕಾಯ ಜೀವಗಳಿಯುವದಯ್ಯೊ ||3||
ಹತ್ತೊಂಬತ್ತು ಎಂಟೇಳಾರು ಮೇಲೈದುನಾಲ್ಕು ಮೂರು |
ಸುತ್ತಮುತ್ತ ಸುತ್ತಿ ವಿಷಯ ತುತ್ತು ಮಾಡಿ ವುಣಿಸುವದಯ್ಯೊ ||4||
ಮರುಳು ಮಾಡಿ ಘೋರ ನರಜನ್ಮದಿರಿಸುವರ |
ಕರಿಘೂಳಿಚರಣಸೇವೆ ಮರಿಸುವರುವಿರಲಯ್ಯೊ ||5||
ಪರಿಶುದ್ಧಾತ್ಮ
ಪರಿಶುದ್ಧಾತ್ಮ ತಾಯಿರುವನೊಬ್ಬ ತಾ |
ಪ್ರಾರ್ಥಿಸಿರಿ ಆತನಿರುವಾ
ಪರಿಪರಿಯಲಿ ಸ್ಮರಣೆಗೈಯ್ಯುತ
ಬೇರೆ ದೇವರಿಲ್ಲೆನುತಾ ||ಪಲ್ಲ||
ಪ್ರೇಮಭರಿತ ಕಾಮಿತಾರ್ಥ |
ನೇಮದಿಂ ನಡಿಸುವಾತ
ಪಾಮರರಿಗಿ ತಾ ಸ್ವಾಮಿಯಾದಾತಾ
ನೇಮಿಸಿದ ಸುಭಾಷಿತ ||1||
ಸರ್ವಕರ್ತ ಸರ್ವಧಾತ |
ಸರ್ವರಲಿ ಬೆರಿಯುವಾತ
ಪೂರ್ವದಲಿ ತಾ
ಸರ್ವೇಶನುತ ಸರ್ವದೊಂದಾಗಿರುತ ||2||
ತಂದಿ ತಾಯ್ಮನ ನೊಂದಿಸದೆ ದಿನ |
ವಂದನೆಯ ಮಾಡು ಸತತಾ
ಬಂಧನರಿ ತಾನಂದದಿರುತಾ
ಇಂದುಧರ ನಾನಂದತಾ ||3||
ಜೀವಘಾತಗೈವದಿರುವಾತ |
ಭಾವಭರಿತ ಕರುಣಿತ ಆವ ಕಾಲದಿ
ಮೋಹ ತ್ಯಜಿತ ಜೀವಿಗನ್ನ
ಜಲ ಕೊಡುವಾತ ||4||
ಪರಸ್ತ್ರೀ ಮಾತೆ ಸರಿಯೆಂದೆನ್ನುತ |
ಪರಧನವ ಮೃತ್ತಿಕೆನ್ನುತ
ಧರಿಯೊಳಗೆ ಕಳವರಿಯದಿರುತ
ನಿರುತ ಸುಬೋ ಧರಿಸುತ ||5||
ಸತ್ಯ ವಚನಗಳ್ನಿತ್ಯನಾಡುತ |
ಸತ್ಯ ಪಥಗತಿಯನ್ನುವಾತಾ
ಸತತ ಸತ್ಯವೇದವ್ಯಾಖ್ಯಾತ
ಸತ್ಯಕರಿಘೂಳೀಸುತಾ ||6||
ಮಾಯ ಸಂಸಾರ
ಗೋಪಿ ತಾಪವಿದೂರ ಭವಸಾರ |
ಸುವಿಚಾರ ಆಪದ್ಬಾಂಧವ ಬಾ ಬಾರ ||ಪಲ್ಲ||
ಅನುದಿನದೊಳು ನಿನ್ನ ಧ್ಯಾನದೊಳಿರುವೆ |
ಕನಿಕರದಿಂದಲಿ ಬಾರೊ ಸುಖದೋರೊ
ಮಾನಿನಿಯಳ ಮನ ಸಾರೊ ||1||
ಖಗಪತಿ ಮೋಹನ ನಿಗಮಾಗಮನೆನ್ನ |
ಆಘಹರಿಸಲು ಬಹದ್ದೂರ ದಯಾಪೂರ
ದ್ವಾಪಾರ ಯುಗಯುಗದಲಿ ಅವತಾರ ||2||
ದುಷ್ಟರ ದೂರ ಶ್ರೇಷ್ಠರುದ್ಧಾರ |
ಕಷ್ಟವ ಕಳಿಯಲು ಶೂರ
ಶ್ರೇಷ್ಠರ ಈಕ್ಷಿಪರ ಕೃಷ್ಣನೆ ಅಷ್ಟವತಾರ ||3||
ಮಾಯ ಸಂಸಾರ ಆಯಾಸ ನೀರ |
ಕಾಯಲು ಬಾ ಗುರುವರ ಘೂಳೇಶ್ವರ
ಕರುಣಾಕರ ಮಾಯವಿಜಿತ ಕಾಮಾರ ||4||
ಕರುಣಿಸಬಾರದೇಮಿ ಶ್ರೀಗುರುದೇವ
ಕರುಣಿಸಬಾರದೇನು ಶ್ರೀ |
ಗುರುದೇವ ಕರುಣಿಸಬಾರದೆ
ಧರುಣಿ ನರರು ಗೈವ ಕಿರಿಕಿರಿ
ಹರಿಸೆಂಬ ತರುಳನ ಮೊರಿ ಕೇಳಿ ||ಪಲ್ಲ||
ನಿನ್ನ ವಾಚವ ನಂಬರು |
ಅನುದಿನ ನಿನ್ನ ಧ್ಯಾನ ಮನದೋಳ್ಮಾಡರು
ಧ್ಯಾನಗೈವರಿಗಪಮಾನಗೈಯುವರಯ್ಯೋ
ಜ್ಞಾನ ಮೂರುತಿ ನಿನ್ನ ಜ್ಞಾನವನೆಲ್ಲರಿಗು ||1||
ಮಹಾತ್ಮೆಯ ತೋರೆಂಬುವರು |
ಇಹದೊಳಗವರೆ ಬಹಳವಾಗಿರುತಿಹುರು
ಕುಹಕ ಗುಣಗಳಿಂದೆ ಮಹನೀಯರನು ಕಂಡು
ಗಹಗಹಿಸಿ ನಗುವರು ಮಹದೇವ ನಿನಗಿನ್ನು ||2||
ಮುಂದಿನ ಭಕುತರೆಲ್ಲ |
ಬಂಧನದಿರಲು ಬಂದು ರಕ್ಷಿಸಿದಿಯಲ್ಲ
ಇಂದುಧರನಂದದಿಂದ ಬಂದು ನಿನ್ನ
ಕಂದನೆಂದು ದಯಾಸಿಂಧು ಇಂದೀಕ್ಷಿಸಿ ||3||
ದುರುಳರಘವ ಮನ್ನಿಸಿ |
ಧರೆಯೊಳು ನಿನ್ನ ಶರಣಾಗತರ ರಕ್ಷಿಸಿ
ಬೆರಿಯೊ ಭಕ್ತಪರಾಧೀನೆಂಬೊ ಬಿರುದ ಮೋಹಿಸಿ
ಪರಮ ಪಾವನ ಕರಿಘೂಳೇಶ ನಿರುತದಿ ||4||
ಮಹಾಂಕಾಳಿ ಮಹದೇವಿಯೆ ಮಾತೆ
ಮಹಾಂಕಾಳಿ ಮಹದೇವಿಯೆ ಮಾತೆ ಮಂಗಲಂ |
ಮಹಾಂಕಾಳಿ ಮನೋಹರಿ ಶ್ರೀದಾತೆ ಮಂಗಲಂ
ಮಹಾ ಮಾಯಿಯೆ ಮಾತಾಂಗಿ ಮಂತ್ರಾದಿ ಶಕ್ತಿದೇವಿ
ಮಹನೀಯಳೆ ಮಹದಯಳೆ ಮಹಿತೆ ಮಂಗಲಂ ||ಪಲ್ಲ||
ಮಹಾಂಕಾಳಿ ಮಧುಕೈಟಭ ಗೌರಿ ಮಂಗಲಂ ಮಹಂಕಾಳಿ |
ಮಧುಸೂಧನಕಾರಿ ಮಂಗಲಂ ಮಧು ಅಮೃತೆ ಮದ್ಯಪಾನಿ
ಮದ ಮಹಿಷಾಸುರ ಮರ್ಧಿನಿ ಮದನ
ರಕ್ಷಮದನ ಭಕ್ಷ ಮಹಿತೆ ಮಂಗಲಂ ||1||
ಮಹಾಂಕಾಳಿ ಮರಕತಮಣಿ ಮಾತೆ ಮಂಗಲಂ |
ಮಹಾಂಕಾಳಿ ಮದನಯ್ಯನಲೀಲೆ ಮಂಗಲಂ
ಮಹಾರಾಜ್ಯಳೆ ಅಮರ ಪೂಜ್ಯಳೆ ಮರೆಯದಿರು ಮಮ ಕಾಯ್ವಳೆ||
ಮರಿಸು ಅಮಳಳೆ ಮರಣಜರ ಸಮಾಪ್ತಿ ಮಂಗಲಂ ||2||
ಮಹಾಂಕಾಳಿ ಮನು ಮುನಿಜನಪಾಲೆ ಮಂಗಲಂ |
ಮಹಾಂಕಾಳಿ ಮಾನಹೀನರ ಲೀಲೆ ಮಂಗಲಂ
ಮಾಣನಿತರರು ಮನ್ನಿಸು ಶ್ರೀ ಮಾನವಂತಿ ಮಾನ್ಯಳೆ ಪೊರಿ
ಮನದನುವಳೆ ಉನ್ಮನಿಯಳೆ ಮನುತೆ ಮಂಗಲಂ ||3||
ಮಹಾಂಕಾಳಿ ಮಾರುತ ಸಂಜೀವಿ ಮಂಗಲಂ |
ಮಹಾಂಕಾಳಿ ಮರುತನ ಸದ್ಭಾವಿ ಮಂಗಲ
ಮಾರುಗೊಂಬೆ ಮಾರಿ ನಿನ್ನ ಮರ ಮರಿಯದೆ ಮರತೆ ಘನ
ಮಾರುದ್ರ ಕರಿಘೂಳಿಗೆ ಮನ ಸೋತೆ ಮಂಗಲಂ ||4||
ಶಿವಲಿಂಗ ಭಜೇಹಂ
ಅಜಹರಿಸುರಂ ಮೂಜಗ ಪೂಜಿತಂ |
ವಿಜಯ ಶಿವಲಿಂಗ ಭಜೇಹಂ
ಭುಜಗಭೂಷಂ ಭಜಕ ಪೋಷಂ
ಸುಜನ ಶಿವಲಿಂಗಂ ಭಜೇಹಂ ||ಪಲ್ಲ||
ಅಂತಕಾಂತಂ ಅಂತಃಕರುಣಂ |
ಶಾಂತಿ ಶಿವಲಿಂಗಂ ಭಜೇಹಂ
ಭ್ರಾಂತಿರಹಿತಂ ತಂತಂರಾತ್ಮಂ
ಸ್ವಾಂತ ಶಿವಲಿಂಗಂ ಭಜೇಹಂ ||1||
ನಂಜುಗೊರಲಂ ಕುಂಜತಾವರಂ |
ಸಂಜ ಶಿವಲಿಂಗಂ ಭಜೇಹಂ
ಅಂಜನೇಶಂ ಮಂಜುಘೋಷಂ
ಕೆಂಜಡಿಯ ಲಿಂಗಂ ಭಜೇಹಂ ||2||
ಸಂಗ ರಹಿತಂ ಸಂಗ ಸಹಿತಂ |
ಸಂಗ ಶಿವಲಿಂಗಂ ಭಜೇಹಂ
ಅಂಗಜನಮಂ ಮಂಗಲಾತ್ಮಂ
ತುಂಗ ಶಿವಲಿಂಗಂ ಭಜೇಹಂ ||3||
ಧರಿಯೊಳಧಿಕಂ ಅರಸಪುರಕಂ |
ಧೊರಿಯು ಶಿವಲಿಂಗಂ ಭಜೇಹಂ
ಕರಿಯ ತಾತಂ ಕರಿಘೂಳೀಶಂ
ಕರುಣ ಶಿವಲಿಂಗಂ ಭಜೇಹಂ ||4||
ಸತ್ಯ ಬ್ರಹ್ಮವಿದ್ಯೆ
ಸತ್ಯ ಬ್ರಹ್ಮವಿದ್ಯೆವೊ ಇದರರ್ಥವೆ ಪರಬ್ರಹ್ಮವೊ |
ಆಹಾ ಮತ್ರ್ಯದ ಮನುಜರಿಗರ್ಥವಾಗಿರುವಂತ
ಅರ್ಥಭಿಮಾನ ಪ್ರಾಣನಾತ್ಮನ ತೋರುವಂತ ಸತ್ಯ ||ಪಲ್ಲ||
ಶಾಸ್ತ್ರದೊಳಗಿಲ್ಲವೊ ಮಾತ್ರೆ ಗಾತ್ರವಾದುದಿಲ್ಲವೊ |
ನೇತ್ರೆರಡರ ನಡು ಜಾತ್ರಿ ತೋರುತಲಾದೆ
ಸೂತ್ರ ತಿಳಸಿ ಪರಮಾತ್ಮನ ತೋರುವಂತ ಸತ್ಯ ||1||
ಎತ್ತ ನೋಡಲಿಹುದು ಸುತ್ತಮುತ್ತಲಿ ತಾನಿಹುದು |
ಗುರ್ತು ತಿಳಿದವರ ಹತ್ತಿಲಿರುವದು ಸಪ್ತ
ಪಾತಾಳದೊಳು ಗುಪ್ತವಾಗಿರುವದು ಸತ್ಯ ||2||
ವೇದಾದಿ ಮೂಲಾಗ್ಯಾದೋ ಭೇದ ಭೇದಾಗೆ ಸಾಧ್ಯಾಗ್ಯಾದೋ |
ವಾದಿಪರಿಗೆ ಕಾದ ಬೂದಿಯಂತಾಗ್ಯಾದೊ
ಸಾಧಿಪರಿಗೆ ಸದಾ ಸುಖದೊಳಿರಿಸುವಂತ ಸತ್ಯ ||3||
ಅಣುರೇಣುವಾಗಿಹದೊ ಸಣ್ಣ ರಾಜಹಳ್ಳಿರುವದೊ |
ಅಣ್ಣ ಕರಿಘೂಳಿ ಗುರು ಪಾದದೊಳಿರುವದು
ಸಣ್ಣ ಮುರುಗೇಂದ್ರನ ಕರದೊಳಗಾಡ್ವದು ಸತ್ಯ ||4||
ಶಾಂತಿಯ ನೀಡೊ
ಶಾಂತಿಯ ನೀಡೊ ಸತತಾ |
ಸಿದ್ಧಾಂತ ಶಾಂತಿ ಶಾಂತಿಯ ನೀಡೊ ಭವ
ಭ್ರಾಂತಿಯನಿಲ್ಲದೆ ಅಂತರಂಗದಿ ನಿಂತ
ಅಂತನಾಂತಕಾಂತ ಶಾಂತಿ ||ಪಲ್ಲ||
ಉಡುವಾ ಗುಣುವಾಗಲು ಶಾಂತ |
ಕೊಡುವಾಗ ಕೊಂಬಾಗಲು ಶಾಂತ
ಅಡಿಗಡಿಗಾಶಾಂತ ಮೃಢನುಡಿ
ನುಡಿಯಲು ಶಾಂತ ||1||
ಸ್ನಾನ ಧ್ಯಾನದಿ ಶಾಂತ |
ಮಾನಪಮಾನದಿ ಶಾಂತ
ಮಾನು ನಿಯರ ಮನ ಶಾಂತ
ತಾನೆಲ್ಲಿರಲಲ್ಲೆ ಶಾಂತ ಶಾಂತಿ ||2||
ರಜತಮ ಸತ್ವದಿ ಶಾಂತ |
ತೇಜಭೂಧನ್ಹೆಣ್ಣಿಲಿ ಶಾಂತ
ರಜತಾದ್ರಿ ಕರಿಘೂಳೀಶ
ರಾಜಯೋಗದಿರಿಸೊ ಶಾಂತ ||3||
ಶಿವ ಸೇವೆಗೈಯಲಿಲ್ಲ
ಶಿವ ಸೇವೆಗೈಯಲಿಲ್ಲ
ಶಿವ ಸೇವೆಗೈಯಲಿಲ್ಲ ಜೀವ ಜೀವ ||ಪಲ್ಲ||
ಶಿವ ಸೇವೆಗೈಯಲನುಭಾವ |
ಸಾವಧಾನದಿ ತಿಳಿವದು ನಿಜವ
ಭವ ನೆವಗಳು ಜವ ಕಳಿಯುವ
ಆವಾಗಲು ಸ್ಥಿರ ಸುಖ ವೀವ
ಕೈವಲ್ಯವು ಕೈಸೇರುವ ಜೀವ ||1||
ತಡಿಯೋ ಕೇಡ ಗುಣಗಳು ಬಾರದೆ ತಡಿಯೊ |
ಈಡಪಿಂಗಳ ನಾಡಿಲಿ ನಡಿಯೊ
ನಡುವಿರುವದು ಸುಷುಮ್ನಿಡಿಯೋ
ಅಡಗಡಿಗೆ ಮೃಡ ನುಡಿ ನುಡಿಯೊ
ಜಡದೇಹ ಬಿಡಿಸಿ ಪದ ಪಡಿಯೋ ಜೀವ ||2||
ನೋಡೊ ಬಿಡದನುದಿನ ಸಾಧನೆ ಮಾಡೊ |
ಎಡನೇತ್ರದಿ ದೃಷ್ಟಿಯನೀಡೊ
ಓಡ್ಯಾಡುವ ಮನ ಸ್ಥಿರಮಾಡೊ
ಧೃಡ ತಾರಕ ರೂಪನಗೂಡೋ
ಸಡಗರದಲಿ ಸದಾ ಲೋಲ್ಯಾಡೊ ಜೀವ ||3||
ನಾದ ಆದಿಯಲಿ ಸಾಧಿಸುನಾದ |
ಸದ ಸಾಧಿಸಿ ದಶ ವಿಧನಾದ
ಯಿದು ಮನವನು ನಿಲಿಸುವದಾದ
ಸದಾಶಿವನ ಪಾದದಲ್ಯಾದ
ಇದರಲ್ಲಿ ಆದ ನಿಜ ಬೋಧ ಜೀವ ||4||
ತಿಳಿಯೊ ಥಳಥಳ ಬೆಳಗಿಲಿ ಸುಳಿಯೊ |
ಬಿಳಿದ್ಹಳದಿ ನೀಲದೋಳ್ಹಳಿಯೊ
ಕಳಿಕಳೀದು ಪುನಃ ನೀವುಳಿಯೊ
ಏಳು ಸುಳಿಗಳ ಮೇಲೇರಿ ಹೊಳಿಯೊ
ಇಳಿಯೊಳಗೆ ಅಳಿಯದಂತು ಳಿಯೊ ಜೀವ ||5||
ಸಾಕೊ ಕಾಕು ಗುಣಗಳು ಕಡಿಯಲಿ ನೂಕೊ |
ಈ ಲೋಕದ ಜೀವನ ಸಾಕೊ
ನೇಕಿಯೆಂಬುದು ನಿಜ ತಿಳಿಬೇಕೊ
ಅಕಲಂಕ ಕರಿಘೂಳಿ ಪಾಕೊ
ಬೇಕಾದರೆ ವಶ ಮಾಡೀಕೊ ಜೀವ ||6||
ಆಗೋ ಶರಣಾಗತ
ಆಗೋ ಶರಣಾಗತ ಶರಣರಿಗಾಗೋ ಶರಣಾಗತ |
ಯೋಗಿಗೆ ಬಾಗು ಶಿರ ನಿತ್ಯ ನೀಗಿಸುವನು ಅಘಸತ್ಯ
ಸಾಗರ ವಿಷಯದ ಭೋಗವು ತ್ಯಾಗಿಸು
ಆಗಮ ವಚನಾವಾಗಲು ಆಲಿಸು
ಸಾಗುವ ಮನ ಶಿವಯೋಗದಿ ನಿಲ್ಲಿಸಿ
ಆಗೀಗೆನ್ನದೆ ಇರುಳ್ಹಗಲಲಿ ತ್ವರಿತ ಆಗೊ ||ಪಲ್ಲ||
ಹೇಸಕಿ ಪುಸಿಯು ವಿಷಯಾಸಿ |
ಮೋಸದಿ ವಶವನಾದಿ ಘಾಸಿ
ಯೇಸೇಸು ಜನುಮದಿ ಕೂಸಾಗಿ ಜನಿಸಿದಿ
ಈಶನಾಶಿಸದೆ ವಸುಧಿಲಿ ಅಸಮದಿ
ಕಸಿಬಿಸಿಯಲಿ ತಾಮಸದಲಿ ಮಸಗುತ
ಈ ಸಮಯ ಈಶನ ಆಶಿಸು ನಿರುತಾ ಆಗೊ ||1||
ಪೃಥವಿಯಲಿ ವ್ರತಗಳನು ಮಾಡಿ |
ವೃಥಾ ಪಥ ವ್ಯರ್ಥವಾಗಬೇಡಿ
ಅತಿ ಹರುಷದಿ ಸತ್ಯ ಸತತದಿ ಮಥಿಸುತ
ಗತಿಗಾಣುವ ಪಥ ಮತ್ತೆ ನಿತ್ಯವೆನಿಸುತ
ಪತಿತ ಪಾವನ ಕರಿಘೂಳೀಶನ ಮತ
ಪಥತೋರಿ ಸದ್ಗತಿ ಹತ್ತಿಸುವ ಪುರತ ಆಗೊ ||2||
ಮೃಢನಡಿಗಳು ಹಿಡಿ
ಸುಡಗಾಡ ಇದೆ ನೋಡು |
ಗಡಿಬಿಡಿಜಡ ಅಡಿಯೇನಿಲ್ಲ
ಮೃಢನಡಿಗಳು ಹಿಡಿ ಅವನಲ್ಲಿ
ಜಡ ದೇಹಬಿಡು ಪಡಿ ಮೋಕ್ಷಲ್ಲಿ ||ಪಲ್ಲ||
ನಿರುತೊಳಗ್ಹೊರಗೊಂದೆ |
ಪರಿಯಲ್ಲಿ ಉರಿಯುತ್ತಿಹುದು
ಧರಿ ನರರಿಗೆ ಆರಿಗೆ ಬಿಡದು
ಶರಣರಿಗೆ ಆರಮನಿಯಹುದು ||1||
ಕೈಲಾಸ ವಾಸನಲ್ಲಿ |
ಲೀಲೆಯೊಳಿರುವನಲ್ಲಿ
ಕಾಲಕಾಲ ಕಾಲನಲ್ಲಿ
ಕಲಿಯುಗವೆ ಜನಿಸಿಹುದಲ್ಲಿ ||2||
ಸತ್ಯವಂತರಿಗೆ ಕಾಡು |
ಸತ್ಯಶಾಂತರಿಗೆ ಜೋಡು
ಮಿಥ್ಯ ಸುಟ್ಟು ಮಾಡ್ವದು ಬೀಡೊ
ಎತ್ತ ಹೋದರ್ಹತ್ತಿರ ಬಿಡದು ||3||
ಧರಿಸಲರಸಪುರದಲ್ಲಿಹುದು |
ಕರಿಘೂಳಿ ಗುರುವಾಗಿಹುದು
ಮುರುಗೇಂದ್ರ ತಾನಾಗಿಹುದು
ಚರಣದಿ ಮಾಣಿಕ್ಯಹುದು ||4||
ಶಿವ ಸೇವೆ ನೆನವಿರಲಿ
ಶಿವ ಸೇವೆ ನೆನವಿರಲಿ |
ಆವಾಗಲೂ ಶಿವ ಸೇವೆ ನೆನವಿರಲಿ
ಭವಬಾಧೆ ತ್ಯಜಿಸಲಿ
ಜವ ಪಾಶ ಜವದರಿ ಝಾವ ಝಾವಕೆ ಶಿವ ||ಪಲ್ಲ||
ಸ್ನಾನದಿ ಧ್ಯಾನದಿ |
ಮೌನದಿ ಜ್ಞಾನದಿ
ಅನ್ನಪಾನಾದಿ ಗಾನ
ಅನುದಿನ ದಿನದಿ ||1||
ಮಾತುಕಥೆ ಶ್ರವಣದಿ |
ಸತಿರತಿ ಸುತರದಿ
ಪಥದಿತ ದ್ವೈತದಿ
ಸೂತಕ ಪಾತಕದಿ ||2||
ದಿನಸಿಲಿ ಕನಸಿಲಿ |
ಮನಗಿರೆ ಮನಸಿಲಿ
ವನಸಿರಿ ಮೃಗ ರೋಗ
ಹನಿಗಾಳಿ ಬಿಸಲಲಿ ||3||
ಅಂತ್ಯದಿ ಭ್ರಾಂತದಿ |
ಚಿಂತದಿ ಶಾಂತದಿ
ಅಂತಕಾಂತ ಕರಿಘೂಳಿ
ಶಾಂತನ ಶಾಂತಿಲಿ ||4||
ಪತ್ರವು ಬರೆದಿದ್ದನು ಸದ್ಗುರುರಾಯ
ಪತ್ರವು ಬರೆದಿದ್ದನು ಸದ್ಗುರುರಾಯ
ಪತ್ರವು ಬರೆದಿದ್ದನು ಸದ್ಗುರುರಾಯ ಉತ್ರವು ಬರೆದಿದ್ದನು ||ಪಲ್ಲ||
ಪತ್ರವು ಬರೆದಿದ್ದ ಇತ್ತ ನಿ ಬಾರೆಂದು |
ಯತ್ತ ಹೋದರು ಮನ ಗೊತ್ತಿನೊಳಿರಲೆಂದು ||1||
ವಾಸನ ಅಳಿಯಂದನು ಸದ್ಗುರುರಾಯ ಆಸನ ಹಾಕೆಂದನು |
ಸೂಸದೆ ದೃಷ್ಟಿಯು ನಾಶಿಕಾಗ್ರದಿ ನಿಲಿಸಿ
ಧ್ಯಾಸದಿ ದಶವಿಧ ನಾದವು ಕೇಳೆಂದು ||2||
ಆಡುತಲಿರು ಯೆಂದನು ಸೋಹಂ ಜಪ ಮಾಡುತಲಿರು ಯೆಂದನು |
ರೂಢಿಯೊಳಗೆ ನೀ ಜೋಡಿಲ್ಲದಿರಬೇಡ
ಜೋಡು ನಿನ್ನಗ ಬೇಡ ಕೇಡು ಬರುವದೆಂದು ||3||
ಕತ್ತಲ ಕಳಿಯಂದನು ಸದ್ಗುರುರಾಯ ಬತ್ತಲಿಯಾಗೆಂದನು |
ಕತ್ತಲೊಳು ಬೆಳಕಾದ ಬೆಳಕಿನೊಳು ಬೈಲಾದ
ಬೈಲೊಳು ನಿರ್ಬೈಲಾದ ಗುರು ಕರಿಘೂಳೀಶ ||4||
ಮಂಗಲಂ ಸದಾಶಿವನಿಗೆ
ಮಂಗಲಂ ಸದಾಶಿವನಿಗೆ |
ಶಶಿಧರ ಹರಶಿವ ವಿಷಕಂಧರನಿಗೆ ||ಪಲ್ಲ||
ಕರಿ ಚರ್ಮಾಂಬರ ಉರಗ ಭೂಷಿತಹರ |
ಶಿರ ಗಂಗಾಧರ ಧೀರಗೆ
ಗಿರಿಸುತೆವರ ಆ ಹರಿಣ ಧಾರನಿಗೆ ||1||
ಆಶರಹಿತಗೆ ಶೇಷಭೂಷಗೆ |
ಕಾಶೀವಾಸ ವಿಶ್ವೇಶನಿಗೆ
ಶಿಶುಗಳ ಪೋಷಿಪ ವಾಸುಕಿ ಧರನಿಗೆ ||2||
ಕನ್ನಬೇಡನು ಕಾಲಿಲಿ ಒದಿಯಲು |
ಮನ್ನಿಸಿ ಪದವಿತ್ತಾತಗೆ
ಸನ್ನುತಾಮಲ ಕರುಣಾಕರನಿಗೆ ||3||
ದಾಸಜನವಳಿ ಪೋಷಿಸು ಬೇಗನೆ |
ಕ್ಲೇಶನಾಶ ಮಹೇಶನಿಗೆ
ವಾಸಭೂಷಣ ಪುರೀಶ ಘೂಳೀಶನಿಗೆ ||4||
ಕರ್ಪುರಾರುತಿ ಸರ್ಪಭೂಷಣನಿಗೆ
ಕರ್ಪುರಾರುತಿ ಸರ್ಪಭೂಷಣನಿಗೆ |
ದರ್ಪಣ ವಾಸನಿಗೆ ಮುಪ್ಪುರಹರಗೆ ||ಪಲ್ಲ||
ಹಾಲ ಕುಡಿಸ ಬಂದ ಬಾಲಕಿಯಳಲಿ
ಸುಶೀಲನೆನಿಸಿದವಗೆ ಮಲ್ಲೇಶಗೆ ||1||
ಬಂಧನ ಬಿಡಿಸುವ ಕಂದುಗೊರಳನಿಗೆ |
ಇಂದುಧರ ಶಿವಗೆ ಮಂದಾರಧರಗೆ ||2||
ನಾಶಿಕ ಶ್ವಾಸದಿ ವಾಸ ಮಾಡಿರುವಂಥ |
ಶೇಷಭೂಷಣಿಗೆ ಶಶಿಧರಗೆ ||3||
ಪರಮ ಪರತರ ಪರಿಪೂರ್ಣ ಬ್ರಹ್ಮನಾದ |
ಶ್ರೀ ಕರಿಘೂಳೀಶಗೆ ಗುರುವರಗೆ ||4||
ಜಯಮಂಗಲ ಮಾಯವಿದೂರಗೆ
ಜಯಮಂಗಲ ಮಾಯವಿದೂರಗೆ |
ಜಯಮಂಗಲ ಭಯ ನಿವಾರಣಗೆ
ಕಾಯ ರಹಿತ ಕರಿಕಂಠನಿಗೆ
ನಯದ್ವಯದಲಿ ಕೋಟಿ ಪ್ರಕಾಶನಿಗೆ ||ಪಲ್ಲ||
ಭೀಮಾ ಶಾಮ ಕಾಮ ಹೋಮನಿಗೆ |
ಸೋಮ ನೇಮ ಪ್ರೇಮ ಉಮಾ ರಮಣನಿಗೆ
ಹೇಮ ಧೂಂ ನಾಮಸ್ವಾಮಿಗೆ
ಭೂಮಿ ನಿರ್ಮಾಣ ಕಮಲಜ ಮರ್ಮನಿಗೆ ||1||
ಮಾರ್ಗಣ ಸೇವಿತ ಭಾರ್ಗನಿಗೆ |
ದುರ್ಗುಣಗಳು ನಂದಿಪ ನಿರ್ಗುಣಗೆ
ಭೋರ್ಗರಿಪನಾದ್ವರ್ಗನಿಗೆ
ಸ್ವರ್ಗಾಧಿಪ ಕರಿಘೂಳೀಶನಿಗೆ ||2||