ಭಾಗ-3: ತಾತ್ವಿಕ ಹಿನ್ನೆಲೆಯ ಕೀರ್ತನೆಗಳು
95
ಅದಕೋ ವೈರಾಗ್ಯ ಅದಕೋ ವೈರಾಗ್ಯ
ಅದಕೋ ವೈರಾಗ್ಯ ಅದಕೋ ವೈರಾಗ್ಯ
ಅದಕೋ ವೈರಾಗ್ಯ ಕೇಳದಕೋ ವೈರಾಗ್ಯ ಪ
ಸತಿಸುತ ಭಾಗ್ಯವ ಸರ್ವವ ತ್ಯಜಿಸಿಯೆ
ಮತಿಬ್ರಹ್ಮವಾದುದೆ ಅದಕೋ ವೈರಾಗ್ಯ 1
ಅನ್ನೋದಕ ವಸ್ತ್ರ ಅಪೇಕ್ಷೆ ಅಡಗಿಯೆ
ಚಿನ್ಮಾತ್ರನಾದುದೆ ಅದಕೋ ವೈರಾಗ್ಯ 2
ದೂಷಣಭೂಷಣವೆರಡಕ್ಕೆ ಹೊಂದದೆ
ವಾಸನ ಕ್ಷಯವಿರೆ ಅದಕೋ ವೈರಾಗ್ಯ 3
ಇಹಪರ ಭೋಗವ ತೊರೆದಿಹ ಭಾವವೆ
ಮಹಾಶಿವನಾದುದ ಅದಕೋ ವೈರಾಗ್ಯ 4
ಇರುಳು ಹಗಲು ಚಿದಾನಂದ ಸದ್ಗುರುವಾಗಿ
ಶರೀರವ ಕಳೆದುದೆ ಅದಕೋ ವೈರಾಗ್ಯ 5
96
ಅಪ್ಪ ಕೇಳೋ ಬೇಡಿಕೊಂಬೆ ನಿನ್ನ ತಿಳಿಯಪ್ಪ
ಅಪ್ಪ ಕೇಳೋ ಬೇಡಿಕೊಂಬೆ ನಿನ್ನ ತಿಳಿಯಪ್ಪ
ಒಪ್ಪಿ ಮಾತನ್ನಾಡಿಸಿದರೆ ನೀನೆ ಜಗದಪ್ಪ ಪ
ನಾನದಾರು ಬಂದೆನೆಲ್ಲಿಗೆ ಎನ್ನುತ ನೀನಪ್ಪ
ನಾನು ಹೋಗುವೆ ಎಲ್ಲಿಗೆ ಎಂದು ಚಿಂತಿಸು ನೀನಪ್ಪ
ನೀನು ಸುಳಿಗಾಳಿಯ ಶಾವದ ತೆರದಂದದಿ ಇಹೆಯಪ್ಪ
ನಾನಾ ಭವವಾಚರಿಸುತಿಹೆ ಆದಿ ಅಂತ್ಯವಿಲ್ಲಪ್ಪ 1
ತನುವ ನೆಚ್ಚಬೇಡ ಮೊದಲಿನ ತನುವದೇನಾಯಿತಪ್ಪ
ತನಯ ಸತಿಯರನೆಲ್ಲ ಬಿಟ್ಟುಬಂದೆ ನೀನು
ಮನೆ ಕಟ್ಟುವೆ ನೀನು ಮೊದಲಿನ ಮನೆ ಏನಾಯಿತಪ್ಪಾ
ನಿನಗೆ ಕುಲವು ಎಷ್ಟಾದವು ಎಣಿಸಿಕೊಳ್ಳಪ್ಪ 2
ಹಿಂದೆ ಮುಂದೆ ಕಾಣದಂತೆ ತಿರುಗಿ ತಿರುಗಿ ಅಪ್ಪ
ಬೆಂದು ಬೆಂದು ಓಡಾಡುತಿಹೆ ಸ್ವರ್ಗ ನರಕಕಪ್ಪ
ಎಂದೆಂದಿಗೂ ಅರಿವಾಗದ ಮರೆವು ಮುಚ್ಚಿ ಅಪ್ಪ
ಅಂಧಕಾರ ಸಂಸಾರದಿ ಕಳವಳಿಸುತ ಅಪ್ಪ 3
ಕಣ್ಣುಯಿದ್ದು ಕಣ್ಣಿಗೀಗ ಬೀಳಬೇಡವಪ್ಪ
ನಿನ್ನ ನರಿವುದಕ್ಕೆ ಮನುಜ ಜನ್ಮ ಸಾಧನವಪ್ಪ
ಹೊನ್ನು ಹೆಣ್ಣು ಮಣ್ಣು ಎನಗೆ ಬೇಡ ಬೇಡಪ್ಪ
ಎನ್ನ ಬೋಧೆ ಕೇಳದಿರಲು ಕೆಟ್ಟುಹೋದೆಯಪ್ಪ 4
ವಾಸನದಿಂದ ತಿರುಗುವೆ ರಾಟಾಳರಂತಪ್ಪ
ದೇಶಿಕ ಸದ್ಗುರು ಹೊಂದು ದೇವನಹೆಯಪ್ಪ
ನಾಶವಹವು ನಾನಾ ಗುಣಗಳು ಜೀವನ ತನುವು ಅಪ್ಪ
ಈಶ ಚಿದಾನಂದನಹೆ ಜನ್ಮವಳಿದು ಅಪ್ಪ 5
97
ಅರಿತುಕೊಳ್ಳಿರೋ ನಿಮ್ಮ ಆತ್ಮವಸ್ತುವನು
ಅರಿತುಕೊಳ್ಳಿರೋ ನಿಮ್ಮ ಆತ್ಮವಸ್ತುವನು
ಪರಮ ಗುರು ಕರುಣದಿ ನೀವು ನಿಮ್ಮನು ಪ
ಬಿದಿಗೆ ಚಂದ್ರನು ಆವುದೆಂದು ಕೇಳಲಿಕೆ
ಅದಕೋ ಶಾಖಾಗ್ರ ಎಂದೆನಲು ಅರಿದಂತೆ
ವಿಧಿಸಿ ಗುರುಮುಖದಿ ವಿವರಿಸಿ ಕಂಡು ಅರಿದು
ಸದಯಲಾನಂದ ತಾವೆಂದು ಭಾವಿಪುದು 1
ಊರು ಆವುದು ಎಂದು ಕೇಳುತಿರಲಿಕೆ
ಊರದಕೋ ಗುಡ್ಡದ ಮೇಲೆನಲು ಅರಿದಂತೆ
ಧೀರ ಗುರು ಮುಖದಿ ದಿಟ್ಟಿಸಿ ಕಂಡು ಅರಿತು
ಸಾರ ಸಂಪತ್ತು ತಾವೆಂದು ಧ್ಯಾನಿಪುದು 2
ಅರಸು ಅವನು ಎಂದು ಕೇಳುತಿರಲಿಕೆ
ಅರಸ ಅಲ್ಲಿಹನೆಂದು ನಡೆವವನೆ ಅರಿತಂತೆ
ಪರಮ ಗುರು ದಯದಿ ಪಾಟಿಸಿ ಕಂಡು ಅರಿದು
ಪರಮ ಗುರು ಚಿದಾನಂದ ತಾವೆಂದು ಭಾವಿಪುದು 3
98
ಅಳತದೆ ಕೂಸು ಅಳತದೆ
ಅಳತದೆ ಕೂಸು ಅಳತದೆ
ಈ ಭವ ಭಯದೊಳು ಬಿದ್ದು ಬರಲಾರೆನೆಂದು ಪ
ಅಂಬೆಗಾಲೂರುತ್ತ ಕುಂಬಿಣಿ ತಿರುಗುತ
ಡೊಂಬನಂಥ ಹೊಟ್ಟೆ ಎಳೆಯಲಾರೆನೆಂದು 1
ಕಂದನಾಗಿ ಬಂದು ಹಿಂದು ಮುಂದುರಿಯದೆ
ಇಂದುಧರನ ರೂಪ ಕಣ್ಣೊಳಗಿಟ್ಟುಕೊಂಡು 2
ಜನನ ಮರಣ ಹುಟ್ಟು ಮುರಿದು ಮೂಲ್ಯಾಗಿಟ್ಟು
ಚಿದಾನಂದ ಸ್ವಾಮಿನ್ನ ಕೂಡಿಕೊಂಡೆನೆಂದು 3
99
ಆತ್ಮನ ಕೊಂಬುವರಾರು ಅವರಿಗೆ ಸರಿಯಾರು
ಆತ್ಮನ ಕೊಂಬುವರಾರು ಅವರಿಗೆ ಸರಿಯಾರು
ಆತ್ಮನು ಅವನೆ ಗುರುವು ಅವನೆ ಅವನೆ ಈಶ್ವರ ಕೇಳಿ ಪ
ಘಟದ ದೀವಿಗೆಯಂತೆ ಪಟದ ಚಿತ್ರದಂತೆ
ಅಡವಿಯ ಅಗ್ನಿಯಂತೆ ನಿಜವನೆತ್ತಿ ತೋರಿದಂತೆ 1
ಪಡೆದ ದೇವತೆಯಂತೆ ಮರುಳನರಿವಿನಂತೆ ಉರಗನ
ಹೆಡೆಯು ಗಿರಿಯ ಧೂಮದ ತೆರದಿ ಕಾಣಿಸಿದಂತೆ 2
ಮರೆಯ ವೇಷದಂತೆ ಭರಣಿಯ ರಸದಂತೆ
ಅರಿವೆಯ ರತುನ ಧರಣಿ ಸ್ವರ್ಗವು ಸ್ಥಿರದಿ ಕಾಣಿಸಿದಂತೆ 3
ಕೊಳದ ತಾವರೆಯಂತೆ ಘನ ಮರೆಯ ರವಿಯಂತೆ
ಜಲದ ಬಡಬಾನಲಗಿನ ಪ್ರಭೆಯು ಬೆಳಗಿ ತೋರಿಸಿದಂತೆ 4
ಈ ಪರಿ ಆತ್ಮನ ನಿಜವತಾ ಪರದೈವವೆಂದರಿವ
ಭೂಪ ಚಿದಾನಂದ ರೂಪನೇ ತಾನಾಗಿ ವ್ಯಾಪಿಸಿಕೊಂಡಿಹ ಜಗದ 5
100
ಆತ್ಮನೊಬ್ಬನೆ ದೇವಾತ್ಮನೆಂಬುದು ಉಪಾಧಿ ಬೇಡ
ಆತ್ಮನೊಬ್ಬನೆ ದೇವಾತ್ಮನೆಂಬುದು ಉಪಾಧಿ ಬೇಡ
ಆತ್ಮನೆಂಬುದೇ ಕಾಂಬುದು ನಿಮ್ಮ ಮಹಾತ್ಮರಾದವರು ಪ
ಕುಂಭಗಳು ಇರುತಲಿರೆ ಅಂಬರದ ಚಂದ್ರನು
ಕುಂಭಗಳೊಳಗೆ ಹಲವಾಗಿ ಬಿಂಬಿಸುವ ತೆರದಿ
ಅಂಬುಜಾಸನ ಮೊದಲು ಜೀವ ಕಂಬದೊಳು
ದೃಷ್ಟಿಯಿಟ್ಟು ಇಂಬಾಗಿ ಇರುವನೊಬ್ಬ ಚೇತನಾತ್ಮಕನು 1
ಕನ್ನಡಿ ಪಳುಕಿನ ಗೃಹದಿ ಸನ್ನಿಧಿಯಲೊಂದು ದೀಪವಿಡೆ
ಕನ್ನಡಿಯೊಳಗೆ ದೀಪ ಹಲವಾದ ತೆರದಿ
ಉನ್ನತ ಜೀವರಾಶಿಯ ತನ್ನ ಛಾಯೆ ಹೊಳೆ ಹೊಳೆದು
ತನ್ನ ತಾವೇ ಇರುವನೊಬ್ಬ ಚೇತನಾತ್ಮಕನು 2
ಒಬ್ಬನಾ ಕಾಂತಿಯಿಂ ಹಬ್ಬಿಕೊಂಡಿದೆ ಲೋಕ
ಒಬ್ಬನೆಂದೇ ತಿಳಿದೆಡೆ ತಾನೊಬ್ಬನೇ ಇಹನೀಹರನು
ಒಬ್ಬನನೊಯ್ದು ನೀವು ಹಾಗಿಬ್ಬರ ಮಾಡಲಾಗದು
ಒಬ್ಬನೇ ಚಿದಾನಂದನು ಚೇತನಾತ್ಮಕನು 3
101
ಆತ್ಮವೇ ಜೀವಾತ್ಮನು
ಆತ್ಮವೇ ಜೀವಾತ್ಮನು
ಆತ್ಮ ಬೇರೆ ಜೀವಾತ್ಮ ಬೇರೆಯಲ್ಲ ಪ
ಅರಸು ಎಂಬುವ ಹೋಗಿ ಚಾಕರನಾಗಿರೆ
ಅರಸು ಬೇರೆ ಚಾಕರ ಬೇರೆ ತಿಳಿ 1
ಬ್ರಹ್ಮಚಾರಿಯು ಹೋಗಿ ಯತಿಯಾಗಿ ಆಗಿರೆ
ಬ್ರಹ್ಮಚಾರಿಯು ಬೇರೆ ಯತಿ ಬೇರೆ ತಿಳಿ 2
ಸಾಧಕನು ಹೋಗಿ ಸಾಧ್ಯನು ಆಗಿರೆ
ಸಾಧಕನು ಬೇರೆ ಸಾಧ್ಯನು ಬೇರೆ ತಿಳಿ 3
ಆತ್ಮನೆಂಬುವ ಹೋಗಿ ಜೀವನೇ ಆಗಿರೆ
ಆತ್ಮನು ಬೇರೆ ಜೀವನು ಬೇರೆ ತಿಳಿ 4
ಒಬ್ಬ ಉಪಾಧಿಯಿಂದಲಿ ನಾನು ಎರಡಿರೆ
ಒಬ್ಬ ಚಿದಾನಂದ ತಾನೆ ಸತ್ಯ ಸತ್ಯ 5
102
ಆಧ್ಯಾತ್ಮ ಹೆಚ್ಚೇನು ಅವಿದ್ಯೆ ಕಡಿಮೆಯೇನು
ಆಧ್ಯಾತ್ಮ ಹೆಚ್ಚೇನು ಅವಿದ್ಯೆ ಕಡಿಮೆಯೇನು
ಆಧ್ಯಾತ್ಮ ವಿದ್ಯೆಯರು ಅನುಭವಿಸಲರಿಯದವಗೆ ಪ
ಪುಸ್ತಕಂಗಳ ಪಿಡಿದು ಪುಸ್ತಕದೊಳಿದ್ದುದನು
ವಿಸ್ತರಿಸಿ ಎಲ್ಲರಿಗೆ ಹೇಳುತಿಹನು
ಪುಸ್ತಕದ ಅರ್ಥವನು ಮನಕೆ ತಾರದಲೆ
ಪುಸ್ತಕದ ಅಕ್ಷರವ ಪೇಳುವವಗೆ 1
ಜ್ಞಾನವನು ಹೇಳುತಿಹ ಜ್ಞಾನವನು ತಾನರಿಯ
ಜ್ಞಾನಿಗಳ ನಡೆಯನು ಮೊದಲೆ ತಿಳಿಯ
ಜ್ಞಾನಿಗಳೇ ಕಂಡು ಜ್ಞಾನವಿಲ್ಲೆಂದೆಂಬ
ಜ್ಞಾನಿ ತಾನೆಂತೆಂದು ಬರಿ ಬಣ್ಣಿಸುವಗೆ 2
ದೇವತಾರ್ಚನೆ ಜಪವ ತಪವ ಡಂಭದಿ ತಾಳ್ದು
ಪಾವುಗೆಯ ಮೆಟ್ಟಿ ಸುಳಿ ಸುಳಿದಾಡುತ
ಸಾಧಿಸದೆ ಪುಣ್ಯ ಪುರುಷರ ನೆಲೆಯ ತಿಳಿಯದಲೆ
ದೇವ ತಾನೆಂದು ಬರಿ ಬೋಧಿಸುವವಗೆ 3
ಯೋಗೀಶ್ವರರ ಕಂಡು ಯೋಗದಿಂದೇನೆಂಬ
ಯೋಗವಳವಟ್ಟ ತೆರನಂತೆ ನುಡಿದ
ಯೋಗಾಮೃತದ ಪೂರ್ಣರಸವ ಸವಿದುಣ್ಣದೆಲೆ
ಯೋಗಿ ತಾನೆಂದು ಬರಿ ತೋರುತಿರುವವಗೆ 4
ಮಾಡಿದಡೆ ಬಹದಲ್ಲ ಕೇಳಿದಡೆ ಬಹದಲ್ಲ
ಆದರಿಸಿ ಒಬ್ಬರಿಗೆ ಹೇಳಿದಡೆ ತಾ ಬರದು
ಸಾಧಿಸಿಯೆ ಮನನದಭ್ಯಾಸದಿಂ ದೃಢವಾಗಿ
ವಾದಹರ ಚಿದಾನಂದ ತಾನಾದರಲ್ಲದೆ 5
103
ಆನಂದವಾಯಿತು ಬ್ರಹ್ಮ ಆನಂದವಾಯಿತು
ಆನಂದವಾಯಿತು ಬ್ರಹ್ಮ ಆನಂದವಾಯಿತು
ಆನಂದದೊಳು ಆನಂದವೇ ಆಗಿ
ಸ್ವಾನಂದ ಸುಖ ಶರೀರ ವ್ಯಾಪಿಸೆ ಪ
ಬಂಧತ್ರಯಾಭ್ಯಾಸದ ಬಂಧವ ಪಿಡಿಯುತ
ನಿಂದು ನಾಸಿಕಗೊನೆ ನಿಟಿಲವ ನೋಡುತ
ಛಂದ ಛಂದದ ಪುಷ್ಪ ಚದುರಲಿ ಕಾಣುತ
ಸುಂದರನಾದ ಕೇಳಿ ಸುಖಿಸುವರ ಕಂಡು 1
ಎಡಬಲ ಹಾದಿಯ ಎಡಬಲಕಿಕ್ಕುತ
ನಡುವಿನ ಮಾರ್ಗವ ನೇರದಿ ಪೊಕ್ಕು
ನಡೆದು ಸುಷುಮ್ನದ ನಾಳನೆಲೆಯ ನೋಡಿ
ಕುಡಿದಮೃತವ ಸೊಕ್ಕಿ ಕುಳಿತಿಹರ ಕಂಡು 2
ನಿದ್ರೆಯ ಕುಂಡಲಿ ನಿದ್ರೆಯ ತಿಳಿಪುತ
ಮುದ್ರಿಸಿ ನವಬಾಗಿಲನೆಲ್ಲವ ಮುಚ್ಚುತ
ಭದ್ರ ಮಂಟಪದೊಳು ಭಾಸದಿ ಬೆಳಗಿ ಸ-
ಮುದ್ರ ಗುರು ಚಿದಾನಂದ ಬೆರೆದವರ ಕಂಡು 3
104
ಆನೆ ಬಂದಿತಯ್ಯ ಯೋಗಿ ಎಂಬ ಆನೆ
ಆನೆ ಬಂದಿತಯ್ಯ ಯೋಗಿ ಎಂಬ ಆನೆ ಬಂದಿತಯ್ಯ
ಆನೆ ಬಂದಿತು ಪ್ರಪಂಚ ಪೇಟೆಯ
ತಾನೆ ಕೀಳುತ ತಳಪಟ ಮಾಡುತ ಪ
ಪಾಷಗಳೆಂದೆಂಬ ಸರಪಳಿ ಹರಿದು
ಈಷಣಗಳು ಎಂಬ ಸಂಕೋಲೆ ಮುರಿದು
ದ್ವೇಷವೆನಿಪ ಗಾಡಿಕಾರರನರೆದು
ಕ್ಲೇಷವೆನಿಪ ಕಾವಲವರ ಜಡಿದು 1
ದಶವಾಯುಗಳೆಂಬ ದನಗಳನೋಡಿಸಿ
ವ್ಯಸನ ಕುದುರೆಗಳ ಸೀಳಿ ಸೀಳಿಕ್ಕಿ
ಹಸಿವು ತೃಷೆಗಳನು ಕಾಲೊಳಿಕ್ಕಿ
ಕಸೆಕಸೆ ಅಂಗಡಿಗಳನು ತೂರಿಕ್ಕಿ 2
ಬಹುಮತಗಳು ಎಂಬ ಮನೆಯನೆ ಕೆಡಹಿ
ಇಹಪರ ವಾಸನೆ ಕೊಟ್ಟಿಗೆ ಕೊಡಹಿ
ಮಹಾ ಅಭಿಮಾನದ ನಾಯಿಗಳ ಮುಡುಹಿ
ಬಹು ಕಲ್ಪನೆಯ ಕುರಿ ಕೋಳಿಗಳ ಉಡುಹಿ 3
ಆನಂದ ಮದಧಾರೆ ಸಾಲುಸಾಲಿಡುತ
ಸ್ವಾನಂದ ಬೋಧ ಲಹರಿಯಲಿ ತೂಗುತ
ಜ್ಞಾನ ಸೊಕ್ಕಿನಲಿ ಕೆಕ್ಕರಿಸಿ ನೋಡುತ
ತಾನೆ ತಾನಾಗಿ ತನ್ನ ಮರೆಯುತ 4
ಬೆಳಗುವ ಸುಷುಮ್ನ ಬಾಜಾರವಿಡಿದು
ಗೆಲುವಿನಲಿ ಭ್ರೂಮಧ್ಯ ಜಾಡಿನಲಿನೆಡೆದು
ತಿಳಿಗೊಳ ಸಹಸ್ರಾರದ ನೀರ ಕುಡಿದು
ಬಲು ಚಿದಾನಂದವೆಂಬ ಆನೆಯು ನಡೆದು 5
105
ಆವಾವಯ್ಯ ಇಹದ ಕುಲಗಳು
ಆವಾವಯ್ಯ ಇಹದ ಕುಲಗಳು
ಆವಾವಯ್ಯ ಇಹದ ಕುಲಗಳು
ಅಷ್ಟಮದಗಳನ್ನೇ ಗೆದ್ದು
ಭಾವಶುದ್ಧಿಯಿಂದ ಮುಕ್ತಿಭಾಮಿನಿಯನ್ನು ಸೇರಿದವಗೆ ಪ
ಮೂರನಳಿದು ಏಳ ಕಳೆದು ಮೂರ ಖಂಡಿಸಿ
ಏಳ ಮುರಿದು ಆರ ಮೂರ ಮೀರಿದವಗೆ 1
ನಾಕ ಕಳೆದು ಎರಡ ಮರೆತು ನಾಲ್ಕು ಮರೆತು ಎರಡ ತಿಳಿದು
ನಾಲ್ಕು ಎಂಟು ಎಂಬ ಜರೆದು ನಾಲ್ಕರಲ್ಲಿ ನಿಂತವನೆ 2
ಹತ್ತನಟ್ಟಿ ನವವ ಮೆಟ್ಟಿ ಹರಿಯ ಕೋಟಿ ಕಿರಣವೆಂಬ
ತತ್ವ ಚಿದಾನಂದ ತಾನೆ ತಾನೆ ಆದವಗೆ 3
106
ಇಲ್ಲವಿಲ್ಲವು ಮಾಯೆಯಿಲ್ಲ ಬ್ರಹ್ಮರ ಹೊಳೆವು
ಇಲ್ಲವಿಲ್ಲವು ಮಾಯೆಯಿಲ್ಲ ಬ್ರಹ್ಮರ ಹೊಳೆವು
ಬಲ್ಲವನರಿಯಲವ ಬ್ರಹ್ಮವಿನಾ ಜಗವಿಲ್ಲ ಪ
ಕಾಷ್ಟದಲಿ ರೂಪು ನಾಮಗಳೆಷ್ಟು ಆದರೇನು
ಕಾಷ್ಟದ ಹೊರತು ಮತ್ತಿನ್ನೊಂದು ಉಂಟೇ
ಶ್ರೇಷ್ಠ ಮೊದಲಾಗಿ ತೃಣವರೆಗೆ ದಿಕ್ಕುಗಳೆಲ್ಲ
ಶಿಷ್ಟಬ್ರಹ್ಮವಲ್ಲದೆ ಬೇರೆ ಜಗವಿಲ್ಲ 1
ಕನಕದಿಂದಲಿ ಒಡವೆ ನಾನಾ ಬಗೆಯಲಾಗೆ
ಕನಕವೇ ಹೊರತು ಮತ್ತಿನ್ನೊಂದು ಉಂಟೆ
ಏನಿತೆನಿತಸುರ ಸುರರು ಯಮುನೆ ಪರ್ವತವೆಲ್ಲ
ಘನಬ್ರಹ್ಮವಲ್ಲದಲೆ ಬೇರೆ ಜಗವಿಲ್ಲ 2
ಬ್ರಹ್ಮ ಆಧಾರದಲಿ ತೋರುತಡಗುವುದು ಮಾಯೆ
ಸುಮ್ಮನೆಯೆ ಮೃಗಜಲವು ತೋರಡಗಿದಾತ
ಹೆಮ್ಮೆ ತಾನೆಷ್ಟು ಮಾತಿನ ಮಾತ್ರವಲ್ಲದಲೆ
ನಿರ್ಮಲ ಚಿದಾನಂದ ವಿನಾ ಜಗವಿಲ್ಲ 3
107
ಇಲ್ಲವೋ ಮುಕ್ತಿ ಇಲ್ಲವಿಲ್ಲವೋ ಮೆಲ್ಲ ಮೆಲ್ಲನೆ
ಇಲ್ಲವೋ ಮುಕ್ತಿ ಇಲ್ಲವಿಲ್ಲವೋ ಮೆಲ್ಲ ಮೆಲ್ಲನೆ ದೃಷ್ಟಿನಿಲ್ಲಿಸಿ
ಮೇರು ಶಿಖರವ ನೋಡುವತನಕ ಪ
ಚಕ್ರವಾರ ಮೆಟ್ಟಿನಿಂತು ಚಂಚಲಿಸದಂತೆ ದೃಷ್ಟಿಯಿಟ್ಟು
ವಿಕ್ರಮದಲಿ ಬ್ರಹ್ಮರಂದ್ರ ಪೊಕ್ಕು ತೇಜ ಕಾಣುವತನಕ 1
ದೃಢಚಿತ್ತದಲಿದ್ದು ಮಾರುತನ ಮೇಲಕೆ ಊದಿ
ಒಡನೆ ಕೂಡಿಸಿ ವಾಯುಮನವನು ಅಸುವನು ಕಾಣುವತನಕ 2
ಓಂಕಾರ ಧ್ವನಿಯ ಕೇಳಿ ಒತ್ತೊತ್ತು ಬೆಳಗಿನೊಳು
ಶಂಕರನೆನಿಪ ಚಿದಾನಂದ ಬ್ರಹ್ಮವನೆ ಕಾಣುವ ತನಕ 3
108
ಇಹಾತನೆ ಯೋಗಿ ಜಗದೊಳಗೆಲ್ಲವೂ ತಾನಾಗಿ
ಇಹಾತನೆ ಯೋಗಿ ಜಗದೊಳಗೆಲ್ಲವೂ ತಾನಾಗಿ
ಇಹಾತನೆ ಯೋಗಿ ಪ
ಉಡುವರ ಕಂಡು ಉಡುವನು ತಾನು
ತೊಡುವರ ಕಂಡು ತೊಡುವನು ತಾನು
ಕೊಡುವರ ಕಂಡು ಕೊಡುವನು ತಾನಾಗಿ 1
ನಡೆವರ ಕಂಡು ನಡೆವನು ತಾನು
ಹಿಡಿವರ ಕಂಡು ಹಿಡಿವನು ತಾನು
ಬಿಡುವರ ಕಂಡು ಬಿಡುವನು ತಾನು 2
ಪೇಳ್ವರ ಕಂಡು ಪೇಳ್ವನು ತಾನು
ಕೇಳ್ವ ಕಂಡು ಕೇಳ್ವನು ತಾನು
ತಿಳಿವರ ಕಂಡು ತಿಳಿವನು ತಾನಾಗಿ 3
ಆಡುವರ ಕಂಡು ಆಡುವನು ತಾನು
ಕಾಡುವರ ಕಂಡು ಕಾಡುವನು ತಾನು
ಓಡುವರ ಕಂಡು ಓಡುವನು ತಾನಾಗಿ 4
ಹಿರಿಯರ ಕಂಡು ಹಿರಿಯನೆ ತಾನಾಗಿ
ಕಿರಿಯರ ಕಂಡು ಕಿರಿಯನೆ ತಾನಾಗಿ
ಗುರು ಚಿದಾನಂದನೆ ತಾನಾಗಿ 5
109
ಎಂಬೆನು ವಿವೇಕ ಮನುಜಗೆ ಇರೆ ಎಂಬೆನು
ಎಂಬೆನು ವಿವೇಕ ಮನುಜಗೆ ಇರೆ ಎಂಬೆನು ಬ್ರಹ್ಮನು ಎಂಬೆ
ಎಂಬೆನು ವಿವೇಕ ಮನುಜಗೆ ಇಲ್ಲದಿರೆ
ಕತ್ತೆಯಮರಿಯದು ಎಂಬೆ ಪ
ವೇದದ ನಿಜ ಅರ್ಥವ ತಿಳಿದಡೆ ಉತ್ತಮೋತ್ತಮನು ಎಂಬೆ
ಕ್ರೋಧದಿ ತರ್ಕದಿ ಕಾದಾಡುವವನು
ಕೋಳಿಯ ಹುಂಜನು ಎಂಬೆ
ನಾನಾರೆನುತಲಿ ನಿಜವನು ತಿಳಿವನ ನಾರಾಯಣನು ಎಂಬೆ
ನಾದದ ತಿಳಿವನು ನಿಂದಿಸುವಾತನ ಸರಸವಾಡೋ ಪಶು ಎಂಬೆ 1
ಮತಿಯ ವಿಚಾರದಿ ಜಗ ಬ್ರಹ್ಮವೆಂಬನ ವಿಚಾರವಾದಿಯು ಎಂಬೆ
ಯತಿಗಳು ಬರೆ ಕುಳಿತೇಳದ ಮನುಜನ
ಎಮ್ಮೆಯ ಮಗನವನೆಂಬೆ
ಸುತ್ತಮುತ್ತಂಗನೆ ಮೋಹವ ತೊರೆದನ
ಯೋಗಪುರುಷ ತಾನೆಂಬೆ
ಗತಿಮತಿ ತೊರೆದಿಹ ನರನನು ಈಗಲೆ
ಎಂಜಲು ತಿಂಬುವ ನಾಯೆಂಬೆ 2
ಪರಮಾರ್ಥದಿ ಶಮದಮದಿಂದಿಹನನು ಪಂಡಿತನೀಗಲು ಎಂಬೆ
ಹಿರಿಯರ ಕಾಣಲು ಹಲ್ಲನೆ ಕಿರಿವನ ಹಿರಿಯ
ಮುಸುವನು ತಾನೆಂಬೆ
ಗುರಿಯನು ತಪ್ಪದೆ ದೃಷ್ಟಿಸಿ ನಡೆವನ ಗುಣಕೆ ಅತೀತನು ಎಂಬೆ
ಬರಿಯ ಪ್ರತಿಷ್ಟೆಯ ಸಾಧಿಸುತಿರುವನ
ಬರಡು ಗೊಡ್ಡು ಎಂದೆಂಬೆ 3
ನಾದದ ಧ್ವನಿಯನು ಕೇಳುತಲಿಹನನು ಜಗಜೀವನನು ಎಂಬೆ
ನಾದದ ಸುಖವನು ಅರಿಯದ ನರನನು
ಜೀನುಗಾರನು ಎಂದೆಂಬೆ
ದಿನಕರ ಕೋಟಿಯ ತೇಜದಿ ಹೊಳೆವನ ದಿವ್ಯ
ಮೂರುತಿ ಎಂದೆಂಬೆ
ವನವನ ಅಲೆಯುವ ಬರಡು ಮುನಿಯನು
ವನಕೆಯ ತುಂಡದು ತಾನೆಂಬೆ 4
ಆತ್ಮದ ಕಳೆಯನು ಅರಿತವನಿದ್ದರೆ ದೃಢದಲಿ ಬ್ರಹ್ಮನು ಎಂಬೆ
ಸತ್ವಶಾಲಿ ಆ ಮಹಿಮರ ಜರೆವರ ಗುಡ್ಡದ
ಗೂಗೆಯಮರಿ ಎಂಬೆ
ಚಿನುಮಯ ಚಿನ್ಮಾತ್ರನೆ ತಾನಾದವನನು ಚಿದಾನಂದ ಗುರುವೆಂಬೆ
ಕರೆಕರೆ ಎನಿಸುವ ಸಾಧು ವೇಷವನು ದೂರಕೆ ನೀ ನಿಲ್ಲೆಂಬೆ 5
110
ಎಂಥಾ ಮರವೆ ಮಾಡಿತೋ ಈ ಪ್ರಣವ ನಾದಾ
ಎಂಥಾ ಮರವೆ ಮಾಡಿತೋ ಈ ಪ್ರಣವ ನಾದಾ
ಎಂಥಾ ಮರವೆ ಮಾಡಿತೋ
ಅಂತರಂಗದಲಿ ಭೋರೆಂದು ತುಂಬಿ
ಅಂತು ಅಂತೆನಲು ಕೂಡದು ಪ್ರಣವನಾದ ಪ
ಹೊಟ್ಟೆಗುಣ್ಣುವುದನೆ ಮರೆಸಿತು ಈ ಪ್ರಣವನಾದ
ಮುಟ್ಟು ಚಟ್ಟನೆ ಮರೆಸಿತು
ಕೆಟ್ಟಕೇಡನೇನ ಹೇಳಲಿ
ಉಟ್ಟ ಬಟ್ಟೆಯ ಅರಿವೇ ಇಲ್ಲ 1
ಆಸೆಯೆಂಬುದ ಮರೆಸಿತು ಈ ಪ್ರಣವನಾದ
ದ್ವೇಷವೆಂಬುದು ತೊರೆಸಿತು
ನಾಶವಾಯಿತು ಜಪತಪವೆಲ್ಲ
ಮೋಸವೆನಗಿಂತು ಮಾಡಿತು 2
ಧ್ಯಾನವೆಂಬುದು ಮರೆಸಿತು ಈ ಪ್ರಣವನಾದ
ಓಂಕಾರವೆಂಬುದು ಕಲಿಸಿತು
ಜ್ಞಾನಮೂರುತಿ ಚಿದಾನಂದ
ತಾನೆ ತಾನೆ ತಾನೆ ಎಂಬ 3
111
ಎತ್ತಲಿಂದ ಬಂದೆ ಎನ್ನ ಒಗೆತನಕೆ
ಎತ್ತಲಿಂದ ಬಂದೆ ಎನ್ನ ಒಗೆತನಕೆ ಎಲೆಖೋಡಿ ಸವತಿ
ಎತ್ತಲಿಂದ ಬಂದೆ ಎನ್ನ ಒಗೆತನಕೆ ಪ
ಕತ್ತಲು ಬೆಳುದಿಂಗಳಂತಾಯಿತು
ಮಿತ್ತು ಎತ್ತಲಿಂದ ಬಂದು ಸೇರಿತು
ಬಂದು ಎದುರಿಗೆ ಹಲ್ಲ ತೆರೆದಳು
ಒಂದು ಮಾತನು ಆಡದೆನ್ನೊಳು
ಒಂದನ್ನು ಸೇವೆಗೆ ಬರಗೊಡಳು
ಸಂದಿಯಲಿ ಲೊಟಕೆಯ ಹಾಕುತಲಿಹಳು 1
ಹಾಲೊಳು ವಿಷವ ಹೊಯ್ದಂತೆ ಮಾಡಿದಳು
ಇಲ್ಲವನೆ ಹೇಳಿ ಕಾಲಕಾಲಲಿ ಎನ್ನ ಒದೆಸಿದಳು
ಬೇಳ ಮೇಳದಿ ತೊಡೆಯ ಮೇಲೆ ಹೊರಳಿ
ಮೇಲೆಯೆ ಮೀಸೆಯ ಹುರಿ ಮಾಡುವಳು 2
ನೆರಳ ನೀರೊಳು ಬಗ್ಗಿ ನೋಡುವಳು ಎಬ್ಬಿ ತೆಗೆದು
ಮರಳಿ ಮರಳಿ ಒಡವೆಯ ನಿಡುವಳು
ಹೊರಯಿಕೆ ಒಳಯಿಕೆ ಮುರುಕಿಸಿ ನಡೆಯುತ
ಲಿರೆ ಗಂಡಸು ಎಂದು ಅಣಕಿಸುತಿಹಳು 3
ಮೋರೆಯನೀಗ ಎನಗೆ ತೋರಿಸಳು
ಸೀರೆ ಕುಪ್ಪಸವ ಆರು ಕಾಣದಂತೆ ಉಡುವಳು
ದಾರಿಯ ಹಿಡಿ ನೀನಿರಬೇಡೆಂಬಳು
ನೂರು ಬಾರಿಯು ಸಾರಿದೆನೆಂಬಳು 4
ಮಾತವಳ ಕೂಡ ಆಡಿ ಎಂಬಳು ಎನ್ನ ಕೈಯಲಿ ಖಡ್ಡಿ
ಯಾತಕೆ ಎನ್ನ ಕರದೆ ಎಂಬಳು
ದಾತ ಚಿದಾನಂದನ ಚಿಂತನೆ ಮರೆಸಿ
ಪಾತಕಿ ಎನ್ನ ಒಗೆತನ ಕೊಂಡಳು 5
ಜನನ ಮರಣಗಳಳಿದು ಜಠರ ಬಾಧೆಗಳಳಿದು
ಘನ ಪುರುಷನಾಗಿ ಘನತಾನಾಗಿ ಇರುವನವನ 6
ಸಕಲ ವಾಸನೆಯಳಿದು ಸಪ್ತ ವ್ಯಸನಗಳಳಿದು
ಅಖಿಲೇಂದ್ರಿಯಗಳ ವ್ಯಾಪಾರವಳಿದು
ಸುಖ ದುಃಖವೆರಡಳಿದು ಸೂಕ್ಷ್ಮ ದೇಹವನಳಿದು
ಮುಕುತಿ ಪತಿ ಚಿದಾನಂದ ಮೂರುತಿ ತಾನಾದವನು 7
112
ಎದ್ದ ನೋಡಿ ಯೋಗಿ ದಿವಾಳಿ ತನ್ನ
ಎದ್ದ ನೋಡಿ ಯೋಗಿ ದಿವಾಳಿ ತನ್ನ
ಉದ್ಯೋಗವುಡುಗಿ ಕೈಗಂಟು ಮುಳುಗಲು ಪ
ಕ್ಲೇಶ ಪಂಚಕವೆಂಬ ಕಡು ತವಕವದು ಹರಿಯಿತು
ಈಷಣತ್ರಯವೆಂಬ ಇಟ್ಟ ಉದ್ರಿನಿಂತಿತು 1
ತಪ್ತನಾಲಕು ಒಡವೆ ತಾರದಲ ಹೋಯಿತು
ಲಿಪ್ತಿ ಇಂದ್ರಿಯ ಲಾಭ ಲಿಂಗಾರ್ಪಿತವಾಯಿತು
ಗುಪ್ತ ಜೀವವು ತಾನು ಗುರುತಿಲ್ಲದೆ ಮುಳುಗಿತು 2
ದೇಣಿಗಾರನು ಚಿದಾನಂದನು ಒಂದೇ ಕುಳಿತು
ದೇಣಿಯ ಸಲಿಸೆಂದು ಗಾಣಗತಿಯನೆ ಮಾಡಿ
ದೇಣಿಯಕೆ ಸರ್ವವೆಲ್ಲ ಧಾರೆಯನೆರೆದೆ
ಮಾಣದಲೆ ತನ್ನಾಳು ಮಗನ ಮಾಡಿಕೊಂಡ 3
113
ಎಲ್ಲಿದ್ದರೇನು ಯೋಗಿ ಮತ್ತೆಲ್ಲಿದ್ದರೇನು
ಎಲ್ಲಿದ್ದರೇನು ಯೋಗಿ ಮತ್ತೆಲ್ಲಿದ್ದರೇನು
ಫುಲ್ಲ ಲೋಚನನರಿತು ಪುರುಷೋತ್ತಮನಾದ ಬಳಿಕ ಪ
ಈಷಣ ತ್ರಯವಳಿದು ಇಷ್ಟ ಕಾಮ್ಯಗಳಳಿದು
ದೋಷವೆಂಬುದ ನಳಿದು ದ್ವೇಷವಳಿದು
ಆಸೆಯೆಂಬುದು ಅಳಿದು ಅಷ್ಟಪಾಶಗಳಳಿದು
ಈಶ ಸರ್ವೇಶವಿಭು ತಾನಾಗಿರುವವನು 1
ಮನದ ವರ್ತನೆಯಳಿದು ದುಷ್ಟಮದಗಳ ಕಳೆದು
ಕನಸು ಜಾಗೃತಿ ಸುಷುಪ್ತಿ ಕರ್ಮವಳಿದು
ಜನನ ಮರಣಗಳಳಿದು ಜಠರ ಬಾಧೆಗಳಳಿದು
ಘನ ಪುರುಷನಾಗಿ ಘನ ತಾನಾಗಿ ಇರುವವನು 2
ಸಕಲ ವಾಸನೆಯಳಿದು ಸಪ್ತವ್ಯಸನಗಳಳಿದು
ಅಖಿಲೇಂದ್ರಿಯಗಳ ವ್ಯಾಪಾರವಳಿದು
ಸುಖದುಃಖವೆರಡಳಿದು ಸೂಕ್ಷ್ಮ ದೇಹವನಳಿದು
ಮುಕುತಿ ಪತಿ ಚಿದಾನಂದ ಮೂರುತಿ ತಾನಾದವನು 3
114
ಏನು ಭಯ ನನಗೆ ಏನು ಭಯ
ಏನು ಭಯ ನನಗೆ ಏನು ಭಯ
ತಾನೆಯಾದ ಪರಬ್ರಹ್ಮ ತಾನೆಯಾಗಿ ತಾನಿಹಗೆ ಪ
ಕಾಮಿಸಿ ಸುತರು ಸೊಸೆಯು ಕೊನೆಯಿಲ್ಲದ ಬಯಕೆಯಾಗೆ
ಕಾಮನನ್ನು ಕಾಲಲೊದ್ದು ಕಸಕೆ ಮಾಡಿದವಗೆ 1
ಇಹಪರ ವಾಸನೆಯನೆಲ್ಲ ಲೋಕ ವಾಸನೆಯ
ದಹಿಸಿ ಬೂದಿಯನ್ನೆ ಮಾಡಿ ಧೂಳಿಪಟ ಮಾಡಿದವಗೆ 2
ಬಣ್ಣ ಬಣ್ಣದ ಕ್ರೋಧಮದಗಳ ಬಳಿದು ಶೋಕ ಮೋಹವ
ನುಣ್ಣಗೆ ಮಾಡಿ ಎಲ್ಲವ ನುಂಗಿ ನೀರು ಕುಡಿದವಗೆ 3
ದಿಟ್ಟ ತಾಪತ್ರಯ ಕ್ಲೇಶ ದುಷ್ಟಗುಣ ವೆಂಬುದೆಲ್ಲವ
ಹೊಟ್ಟು ಮಾಡಿ ಹಾರಲೊದ್ದಿಹ ದಿಟ್ಟ ಮಾನವಗೆ 4
ಕ್ರಿಯಾ ಭ್ರಾಂತಿ ಸಂಶಯ ಕಪಟ ಮೋಹ ಮೊಳೆಯ ಕಿತ್ತು
ಬಯಲು ಚಿದಾನಂದ ಸದ್ಗುರು ಬ್ರಹ್ಮವಾಗಿ ತೂಗುವಗೆ 5
115
ಏಸು ಜನ್ಮದ ಸುಕೃತವದು ಬಂದು ಒದಗಿತೋ
ಏಸು ಜನ್ಮದ ಸುಕೃತವದು ಬಂದು ಒದಗಿತೋ
ದೇಶಿಕೋತ್ತಮನ ದಯದಿ
ಆಸೆಗಳು ಮರೆಯಾಗಿ ಅಷ್ಟ ಪಾಶಗಳಳಿದು
ಈಶ ಸರ್ವೇಶನಾಗಿ ಹೋದೆ ಪ
ಕಂಗಳ ಮುಚ್ಚಿ ದೇಹದೊಳು ದಿಟ್ಟಿಸಿ ನೋಡೆ
ಮಂಗಳವೆ ತೋರುತಿಹುದು ಅಹುದು
ತಿಂಗಳಿನ ಕಳೆಯಂತೆ ಬೆಳಕಬೀರುತ ಬೆಳು-
ದಿಂಗಳನೆ ಹರಡಿದಂತೆ ಅಂತು
ಕಂಗೊಳಿಸುತಿಹುದು ಬಗೆಬಗೆಯ ವರ್ಣಭಾಯೆ
ಅಂಗ ವರ್ಣಿಸುವರಾರೋ ಆರೋ
ಬಂಗಾರ ಪುಟದಂತೆ ನಡುಮಧ್ಯೆ ಹೊಳೆಹೊಳೆದು
ಹಿಂಗದನುದಿನ ತೋರುವ ಗುರುವಾ 1
ನಾದವದು ಸುನಾದ ಸುಸ್ವರವರಳೆ
ಭೇದವೆಂಬುದು ಮರೆಯಿತು ಕುರಿತು
ಮದವು ಇಂದ್ರಿಯ ಸ್ವರ ವ್ಯಾಪಾರ ಉಡುಗಿ
ಹೋದವು ಸುಖದಿ ಮುಳುಗಿ
ಕ್ರೋಧ ಕಾಮವು ಲೋಭ ಎಂಬುವರ ಕೈಕಾಲು
ಸೇದಿದುವು ಬೋಧದೊಳಗೆ ಕೆಳಗೆ
ಛೇದವಾದುವು ತಾಪತ್ರಯವು ಈಷಣ ವ್ಯಸನ
ಮೋದಿದರು ಅಮೃತ ಕಳದಿ ಝಳದಿ 2
ನಿತ್ಯವಹ ಪರಮಾತ್ಮ ನಿಶ್ಚಲದಿ ತೋರುತಿದೆ
ಚಿತ್ತವೆಂಬುದು ಸಾಯೇ ಬೇಯೆ
ಮತ್ತೆ ಮನ ದೃಗ್ ದೃಶ್ಯ ಧಾರಣರವರು
ಎತ್ತ ಹೋದರೋ ಎಲ್ಲರೂ
ಸತ್ಯವಾಗಿಹ ಪರಮ ಬಾಹ್ಯಾಂತರೀಯ ಹೆಸರು
ಎತ್ತುವರು ಇಲ್ಲದಾಯ್ತು ಹೋಯ್ತು
ಪ್ರತ್ಯಗಾತ್ಮನು ಚಿದಾನಂದ ಗುರು ತಾನಾದ
ಅತ್ಯುಕ್ತಿ ಹೇಳ್ವುದೇನು ಏನು 3
116
ಒಂದೇ ಬ್ರಹ್ಮವು ಮತ್ತೊಂದಿಲ್ಲವು
ಒಂದೇ ಬ್ರಹ್ಮವು ಮತ್ತೊಂದಿಲ್ಲವು
ಇದ್ದುದು ಬ್ರಹ್ಮವು ಒಂದೇ
ಒಂದನು ಎರಡಾಗಿ ಮಾಡುವುದೆಂತೈ
ಮಾಡಲು ಕೆಡುವನು ಮುಂದೆ 1
ಕನಕದಿಂದ ಒಡವೆ ಬಹಳಾಗಲು ಒಡವೆಗೆಲ್ಲ
ಕನಕವೊಂದೇ ಘನ ಬ್ರಹ್ಮದಿಂದ ನಾನಾ ಜೀವವಾಗೆ
ನಾನಾ ಜೀವಕೆ ಬ್ರಹ್ಮವೊಂದೇ 2
ಲೋಹಗಳಿಂದಲಿ ಅನೇಕ ವಿಧವಿರೆ
ಅನೇಕ ವಿಧಕೆ ಲೋಹವೊಂದೇ
ಮಹಾಬ್ರಹ್ಮಾದಿ ಮಹತ್ತು ಅಣುವಿರೆ
ಮಹತ್ತು ಅಣುವಿಗೆ ಬ್ರಹ್ಮವೊಂದೇ 3
ಬೀಜದಿಂದ ಬೀಜವನೇಕವಾಗಲು
ಅನೇಕ ಬೀಜಕೆ ಬೀಜವೊಂದೇ
ತೇಜ ಚಿದಾನಂದ ಬ್ರಹ್ಮವು ಸರ್ವವು
ಆ ಸರ್ವಕೆ ಬ್ರಹ್ಮವು ತಾನೊಂದೆ 4
117
ಕಂಡಿರೇ ಬ್ರಹ್ಮದಾಟವ ಕಂಡಿರೆ ಬ್ರಹ್ಮದಾಟ
ಕಂಡಿರೇ ಬ್ರಹ್ಮದಾಟವ ಕಂಡಿರೆ ಬ್ರಹ್ಮದಾಟ ಅ-
ಖಂಡರಾದ ಮಹಾತ್ಮರಿರಾ ಪ
ಬುದ್ಧಿಯನ್ನು ಹೇಳುತಿದೆ ಬುದ್ಧಿಯನ್ನು ಕೇಳುತಿದೆ
ಬುದ್ಧಿಹೀನನೆಂದು ತಾನೆ ಬದ್ಧನಾಗಿ ಕುದಿಯುತಿದೆ 1
ಒಮ್ಮೆ ಸುಖಪಡುತಲಿದೆ ಒಮ್ಮೆ ದುಃಖ ಮಾಡುತಿದೆ
ಒಮ್ಮೆ ಹಾಡಿಪಾಡಿ ನಕ್ಕು ಒಮ್ಮೆ ಕೆಲೆದು ಕೆನೆಯುತಿದೆ 2
ದುಡುಕು ತಾನು ಮಾಡುತಿದೆ ದುಡುಕು ಅವನದೆನ್ನುತಿದೆ
ದುಡುಕು ದುಡುಕು ಎಂದು ತಾನೆ ಬಿಡಿಸಿ ನ್ಯಾಯ ಹೇಳುತಿದೆ 3
ಗಂಡ ಹೆಂಡಿರಾಗಿ ಇದೆ ಗಂಡು ಮಗನ ಬೇಡುತಿದೆ
ಗಂಡು ಗಂಡು ಎಂದು ತಾನು ಗಂಡ ದೀಪ ಹೊರುತಲಿದೆ 4
ಬಹಳ ವೇಷ ಹಾಕಿ ಇದೆ ಬಹಳ ಹೆಸರ ಕರೆಸುತಿದೆ
ಬಹಳ ಚೇಷ್ಟೆಯಿಂದ ತಾನು ಬಹಳ ಭೇದವಾಗಿ ಇದೆ 5
ಇಂತು ಬಹಳ ರೂಪವಿದೆ ಇಂತು ತಿಳಿಯಲೊಂದೆ ಇದೆ
ಇಂತು ಚಿದಾನಂದ ಬ್ರಹ್ಮ ಇಂತು ಹೊತ್ತು ಕಳೆಯುತಿದೆ 6
118
ಕಂಡ್ಯ ಕೆಳದಿ ಮಾಡಿದ ಮಾಟ ಕಂಡ್ಯ ಕೆಳದಿ
ಕಂಡ್ಯ ಕೆಳದಿ ಮಾಡಿದ ಮಾಟ ಕಂಡ್ಯ ಕೆಳದಿ
ಗಂಡನು ತಾನೆಂಬ ಖಂಡನಂಬುಗೆ ಗೊಟ್ಟು
ಹಿಂಡನಗಲಿಸಿದನು ಉದ್ದಂಡ ಚಿದಾನಂದ ಪ
ಅವರಿಗೆ ನಾ ಮರುಳಾಗಿ ತನಯ
ರೈವರ ಬಿಟ್ಟೆ ನಾಲ್ವರು ಭಾವಂದಿರನು ಬಿಟ್ಟೆ ಸನುಮ-
ತವಾಗಿದ್ದ ಸರಿವರ್ಗತನವ ಬಿಟ್ಟೆ
ನಿನಗೆ ಮಾಡಿದ ಲೇಸ ಎನ್ನಲೇಸನು ನೀನು 1
ಅರಸನೊಳ್ಳಿದನೆಂದು ಅರಣ್ಣರ ಬಿಟ್ಟೆ
ಹಿರಿಯ ಮಮತೆಯಲ್ಲಿದ್ದ ಅಕ್ಕಂದಿರನು ಬಿಟ್ಟೆ
ಸರಿಹೋಗಿ ಎನಗಿಷ್ಟದ ಸವತಿ ಮೂವರ ಬಿಟ್ಟೆ
ಕರುಣಾಕರನು ಕೈ ವಿಡಿಯಲಂತಾದುದಾ 2
ಅತಿಮೋಹ ಮಾಡುವ ಅಷ್ಟಾಪ್ತರನು ಬಿಟ್ಟೆ
ಪಿತರೀರ್ವರನು ನಾನು ಹೇವರಿಸಿ ಬಿಟ್ಟೆ
ಸತತ ಚಿಂತಿಪ ಹತ್ತು ಸಖಿಯರನು ನಾ ಬಿಟ್ಟೆ
ಮತಿ ಎನಗಿನ್ನೇನೆ ಮಂದಗಮನೆ ಹೇಳೆ 3
ನಿತ್ಯ ಕಾಲದಿ ಅವನ ನಿಜಸೇವೆ ಮಾಡುತಿಹೆ
ಸತ್ಯ ಸತ್ಯವೆ ಎಂಬ ತೆರದಿಂದಲಿ
ಪ್ರತ್ಯಗಾತ್ಮನು ತನ್ನ ಕೀರ್ತಿವಾರ್ತೆಯ ನೆಲ್ಲ
ಕೂರ್ತು ಮರೆಯಾದಂತೆ ಎನಗೆ ಮಾಡಿದುದ ನೀನು 4
ಎನ್ನ ಸುಖದುಃಖ ಫಲ ಎನ್ನ ಕೈ ಮೇಲುಂಟೆನೆ
ಚೆನ್ನ ಚಿದಾನಂದ ಗುರುವಿನಿಂದ
ಉನ್ನತ ನಂಬುಗೆ ಎಂಬುದಿಂತಾಯಿತೇ
ಬಣ್ಣಿಸಲೇನವ್ವ ಬಯಲ ಕೂಡಿಸಿ ಬಿಟ್ಟ 5
119
ಕವಿ ಮಾತುಗಳ ಕೇಳಿ ಕೆಟ್ಟೋಗಬೇಡಿರಿ
ಕವಿ ಮಾತುಗಳ ಕೇಳಿ ಕೆಟ್ಟೋಗಬೇಡಿರಿ
ಕವಿ ನಾಶ ತನವೆಂದು ಹೇಳಲಿಲ್ಲ
ಶಿವನ ತಿಳಿದು ನಿಮ್ಮ
ಶಿವನೆಂದು ಕಂಡರೆ ಸಾಕ್ಷಾತ್ ಬ್ರಹ್ಮನೆ ನೀವೆಯೆಲ್ಲಾ ಪ
ಸೋಗೆಗಣ್ಣುಗಳೆಂದು ಹೇಳಿದನಲ್ಲವೇ
ಸೋಗೆಗಣ್ಣಿನ ಸೀಳ ಹೇಳಲಿಲ್ಲ
ಮೂಗನು ಸಂಪಿಗೆ ನನೆಯೆಂದನಲ್ಲವೆ
ಮೂಗಿನ ಸಿಂಬಳ ಹೇಳಲಿಲ್ಲ 1
ಬಾಯಿ ಕರ್ಪೂರದ ಕರಡಿಗೆ ಎಂದನಲ್ಲವೆ
ಬಾಯೊಳಗಣ ಲೊಟ್ಟೆ ಹೇಳಲಿಲ್ಲ
ಕಾಯವು ಕನಕದ ಬಾಳ ಎಂದನಲ್ಲವೆ
ಕಾಯ ದುರ್ಗಂಧವ ಹೇಳಲಿಲ್ಲ 2
ಮಂದಗಮನೆ ಎಂದು ನಡೆಗಂದನಲ್ಲವೆ
ಹಂದಿದುಟಿಯನದ ಹೇಳಲಿಲ್ಲ
ಸುಂದರ ಸರ್ಪವೇಣಿ ಎಂದನಲ್ಲವೆ
ಸಂದಿ ಸಂದಿಯ ಹೇನ ಹೇಳಲಿಲ್ಲ 3
ನರದೇಹವನು ಕೊಂಡಾಡಿದನಲ್ಲವೆ
ನರದೇಹ ನರಕವೆಂದ್ಹೇಳಲಿಲ್ಲ
ಗುರು ಚಿದಾನಂದ ಸದ್ಗುರುನಾಥನ ನಂಬಿ
ಶರೀರವ ಕಳೆ ಎಂದು ಹೇಳಲಿಲ್ಲ 4
120
ಕಾಲ ಮೃತ್ಯುವು ಸ್ತ್ರೀಯಲ್ಲದಲೆ ಕಾಯುವವಳು
ಕಾಲ ಮೃತ್ಯುವು ಸ್ತ್ರೀಯಲ್ಲದಲೆ ಕಾಯುವವಳು
ತಾನಲ್ಲಣ್ಣ ಕಾಳಕವೀಶ್ವರ ಬಲ್ಲನು ತಾನೇನ ಕಾಳ ಕಿಚ್ಚಿನ ಕುಂಡವಣ್ಣ ಪ
ಮಲ ಮೂತ್ರವು ಮಜ್ಜೆಯು ಮೇದಸ್ಸು ಮೇಲೆ ಚರ್ಮ ಹೊದ್ದಿಹೆವಣ್ಣ
ಎಲುಬುಗಳಡಕಲಿ ನರಗಳ ಬಿಗಿವು ಎಡದೆರಪಿಲ್ಲದೆ ಇಹುದಣ್ಣ ಬಲು
ಹೊಲಸಿನ ಮಡುವದು ಮತ್ತೆ ಬಗೆಬಗೆಯ ಕ್ರಿಮಿಗಳು ಮನೆಯೊಳಣ್ಣ
ಹೊಲೆಮಯವಿರುವ ಸ್ತ್ರೀಯ ವರ್ಣಿಪೆನು ಹೇವ ಮಾರಿಯು ಕಾಣಣ್ಣ 1
ಕಳಸ ಕುಚವು ಎದೆಎಂಬನ ಬಾಯಲಿ ಕರಿಯ ಮಣ್ಣನೆ ಹಾಕಣ್ಣ
ಹೊಳೆವ ಕಂಗಳು ಎಂಬನ ಮೋರೆಗೆ ಹುಡಿಯನೀಗಲೆ ಚೆಲ್ಲಣ್ಣ
ಬಳಕು ನಡೆಯಂತೆಂದು ಬೊಗಳುವನ ನಿಲಿಸದೆ ಅಲ್ಲಿಂದಟ್ಟಣ್ಣ
ಚೆಲುವಿನ ಸುಂದರ ಚೇಷ್ಟೆಗೆ ನಲಿವನ ಚಪ್ಪಲಿಯಿಂದಲಿ ಕುಟ್ಟಣ್ಣ 2
ಬ್ರಹ್ಮಧ್ಯಾನವ ಮಾಡುವುದಕ್ಕೆ ಬ್ರಹ್ಮರಾಕ್ಷಸವು ಇದು ಅಣ್ಣ
ಹಮ್ಮಳಿದು ಯೋಗಾಭ್ಯಾಸದಲಿರೆ ಹೃದಯದಲಿ ಹರಿದಾಡುವುದಣ್ಣ
ಬ್ರಹ್ಮೇತಿಯು ತಾನಿವನ ಸಂಗದಿ ಭವಭವತಿರುಗುವುದ ಬಿಡದಣ್ಣ
ಸಮ್ಮತದಲಿ ಚಿದಾನಂದ ಹೊಂದಿಯೆ ಸೀಮಂತಿನಿಯ ಬಿಡಬೇಕಣ್ಣ 3
121
ಕುಲವೇನೆಂತು ಹೇಳಲಿ ಯೋಗೀಶನ
ಕುಲವೇನೆಂತು ಹೇಳಲಿ ಯೋಗೀಶನ
ಕುಲವೇನೆಂತು ಹೇಳಲಿ
ಕುಲವ ಕೇಳುತಿಹ ಕತ್ತೆಯ ಮಗನಿಗೆ ಪ
ಬಲಿದು ಆಧಾರವನು ಕುಂಬಕದೊಳು ನಿಲಿಸಿ ವಾಯುವನು
ನೆಲೆಯನು ಹತ್ತಿಸಿ ನೆಲೆಯಾಗಿ ನೆಲೆಸಿ
ನೆಲೆಯೊಳು ಕುಳಿತಿಹ ಪುಣ್ಯ ಪುರುಷನಿಗೆ 1
ಜಾಗ್ರತದಿ ಸ್ವಪ್ನವನು ಸುಷುಪ್ತಿಯು ಸಹ
ನಿಗ್ರಹಿಸೆಲ್ಲವನು ಸ್ವರ್ಗದ ಮೇಲೆ ಮಹಾ ಸ್ವರ್ಗವಿರಲು
ಸುಸ್ವರ್ಗದಿ ನೆಲೆಸಿಹ ಭರ್ಗನಾದವಗೆ 2
ಎಣಿಕೆಯ ಜನ್ಮವನು ಕಳೆದು ಮುಂದೆ
ಕ್ಷೀಣಿಸಿ ಪ್ರಾರಬ್ಧವನು ತ್ರಿಣಯನನಾಗಿ ದಿನ
ಮಣಿಯಾಗಿ ಕಣಿಯಾಗಿ
ಗುಣಕಗೋಚರ ಚಿದಾನಂದನಾದವನಿಗೆ 3
122
ಕೊಡವನು ಹೊರಲಾರೆನೆ ಅಕ್ಕ
ಕೊಡವನು ಹೊರಲಾರೆನೆ ಅಕ್ಕ
ಕೊಡವನು ಹೊರಲಾರೆನೆ
ಕೊಡವನು ಹೊರಲಾರೆ ಕಷ್ಟಪಡಲಾರೆ
ಕೊಡವನು ಒಡೆದರೆ ಕಡೆಹಾಯುವೆನೆ ಪ
ತಿಳಿಯಲು ಒಂಭತ್ತು ಪೂರ್ತಿ ಕೊಡನೆ
ತೊಳೆಯುವ ನಿತ್ಯವು ತುಂಬಿಹ ಕೊಡನೆ
ಹೊಲಸಿನ ಹೊದಿಕೆಯ ಹೊದ್ದಿಹ ಕೊಡನೆ
ತೊಳೆದರು ನಿತ್ಯ ಶುಚಿಯಾಗದ ಕೊಡನೆ 1
ರೂಪು ದಿನದಲಿ ಮಾಸಿಹ ಕೊಡನೆ
ಅಪತ್ತಿನಿಂದ ನರಳುವ ಕೊಡನೆ
ಪಾಪದ ಪುಂಜದ ಪಡಿಶಂಟು ಕೊಡನೆ
ಜೋಪಾನ ಮಾಡಲು ಜರಿವಾ ಕೊಡನೆ 2
ಎಲ್ಲಿಂದ ಬಂದಿತೋ ಎನಗೀ ಕೊಡವು
ಎಲ್ಲಿಯ ಪಾಪಿಯು ಮಾಡಿದ ಕೊಡವು
ಬಲ್ಲ ಚಿದಾನಂದನ ಮರೆಸುವ ಕೊಡವು
ಬಾಳನು ಕೊಡಿಸುವ ಸತಿಯೆಂಬ ಕೊಡವು 3
123
ಕೋಲನ್ನ ಕೋಲೇ ಕೋಲೇ ಕೋಲನ್ನ ಕೋಲೇ
ಕೋಲನ್ನ ಕೋಲೇ ಕೋಲೇ ಕೋಲನ್ನ ಕೋಲೇ
ಸದ್ಗುರುವ ಬಲಗೊಂಬೆ ಕೋಲನ್ನ ಕೋಲೆ ಪ
ನಾಯಿಗೋಣನೆ ಮುರಿದು ನಾಗಾರ ಇಲಿ ತಿಂದು
ಹೋಯಿತೇ ಕಣ್ಣು ಕಾಗೆಯದು ಕೋಲನ್ನ ಕೋಲೆ 1
ಕಷ್ಟದ ಹದ್ದನೆ ಬಡಿದು ಇಷ್ಟವಿಲ್ಲದೆ ಗುಡ್ಡವನೇರಿದವನ ನರಿ
ಸೂಚಿಸಿತೇ ಕೋಲನ್ನ ಕೋಲೆ 2
ಆನೆಯ ಅಣುನುಂಗಿ ಅಡರಿತೇ ಮೇಲಕೆ
ಕೋಣನ ಕೋಗಿಲೆ ನುಂಗಿತೇ ಕೋಲನ್ನ ಕೋಲೆ 3
ಊದಿತ್ತು ಓಲೆಯು ಒಂಭತ್ತು ಮಡಕೆಗೆ
ಹಾದಿಯಾಯಿತೇ ನಡುವಣ ಮಾರ್ಗ ಕೋಲನ್ನ ಕೋಲೇ 4
ಕದವನೆ ತೆರೆದು ಕಳ್ಳರ ಬಲಿಕೊಟ್ಟು
ಮೊದಲಗಿತ್ತಿಗೆ ಮೂಗುತಿಯಿಟ್ಟೆ ಕೊಲನ್ನ ಕೋಲೇ 5
ಬೆಳುದಿಂಗಳು ತುಂಬಿ ಬೆಳ್ಳಿಯ ತೆರೆಯೆದ್ದು
ಕೊಳವುಕ್ಕಿ ಕಮಲ ಕಳೆಯೇರೆ ಕೋಲನ್ನ ಕೋಲೇ 6
ಓಡಿಲಗಲ ಮಾಡಿ ಉಣ್ಣದೂಟವುಂಡು
ಓಡುವ ಹಾರುವನ ಕಟ್ಟಿಹಾಕಿ ಕೋಲನ್ನ ಕೋಲೆ 7
ಕೋತಿಯು ಸತ್ತಿತೇ ಕೊಡವೀಗ ಒಡೆಯಿತೇ
ಜೋತಿಯು ಒಳಗ್ಹೊರಗೆ ಬೆಳಗಿತೇ ಕೋಲನ್ನ ಕೋಲೆ 8
ಮುದುಕಿಯನೆ ಕೊಂದು ಮರವನೆ ಮುರಿದೊರಗಿ
ಚಿದಾನಂದ ಬ್ರಹ್ಮ ತಾನಾಯಿತೇ ಕೋಲನ್ನ ಕೋಲೆ 9
124
ಕೋಲು ಕೋಲು ಕೋಲು ಕೋಲೇ
ಕೋಲು ಕೋಲು ಕೋಲು ಕೋಲೇ
ಕೋಲೇ ಕೋಲನ್ನ ಪ
ಆಧಾರವನೆ ಮೆಟ್ಟಿ ಚಕ್ರಾರ ಭೇದಿಸಿ
ನಾದದ ನಾದ ಸುನಾದವ ಕೇಳಿ
ಶೋಧಿಸಿ ಸುಷುಮ್ನ ಮಾರ್ಗ ಮನೆಯ ಪೊಕ್ಕು
ಮೋದಿ ಬೆಳಗಿನೊಳ ಬೆಳಕು ತಾನಹುದೆ ಹಟ 1
ಪ್ರಾಣಾಪಾನವು ಕೂಡಿ ಸರ್ಪವನೆಬ್ಬಿಸಿ
ಜಾಣತನದ ನಾಗ ಸ್ವರವನೂದಿ
ಮಾಣದೆ ಮುತ್ತುಗಳುದುರುವ ಬಯಲಲಿ
ಕೇಣವಿಲ್ಲದೆ ಆಡಿಪುದೆ ಕುಂಡಲಿಯೋಗ 2
ಪೀಕುತ ನಾಲಗೆ ಕ್ಷೀರಾಹಾರದೊಳಿದ್ದು
ನೂಕುತಂಗಲದೊಳು ರಸನವನು
ತೇಕ ನಿಲ್ಲಿಸಿ ನಾಲಗೆಯಲಮೃತವನ್ನುಂಡು
ಮೂಕ ಸಕ್ಕರೆ ತಿಂದ ತೆರದಲಂಬಿಕ ಯೋಗ 3
ಷಣ್ಮುದ್ರೆ ಹಿಡಿದು ಷಡಂಗುಲದಲಿ ಒತ್ತಿ
ಕಣ್ಣ ಅಂತರ್ಯದಿ ದೃಷ್ಟಿಯಿಟ್ಟು
ಹುಣ್ಣಿಮೆ ಚಂದ್ರನ ಕಳೆಯ ಬೆಳಗಿನೊಳು
ಥಣ್ಣಗೆ ಥಳ ಥಳಿಸುವುದದು ಹಟ ರಾಜ 4
ವಾಯುವ ಸಮನಿಸಿ ರೇಚಕ ಪೂರಕದಿಂದ
ಸಾಯಾಸದಲಿ ಕುಂಭಕವ ನಿಲ್ಲಿಸಿ
ಬಾಯಿ ಮಾಡುವ ಸುನಾದವ ಲಕ್ಷಿಸಿ
ಹಾಯಿ ಎಂದೆನಿಪ ಸುಖಹೊಂದೆ ಲಯಯೋಗ 5
ದೃಷ್ಟಿಯರ್ಧವನೀಗ ಮುಚ್ಚಿ ಸದ್ಗುರುವಾಗಿ
ದೃಷ್ಟಿಸಿ ತನ್ನನೆ ನೋಡುತಿರೆ
ಸುಟ್ಟು ಜೀವತ್ವವ ದೇಹಭಾವವ ಮರೆತು
ಮುಟ್ಟಿ ಬ್ರಹ್ಮಾದುದೆ ಅದುವೆ ಸದ್ಗುರು ಮಾರ್ಗ 6
ಹೊರಗೊಂದು ಆಗದೆ ಒಳಗೊಂದು ಆಗದೆ
ಹೊರಗೆ ಒಳಗೆ ತಾನೆ ತಾನೆಯಾಗಿ
ಗುರು ಚಿದಾನಂದನು ಸಹಜ ತೋರುತ ಸರ್ವ
ಪರಮ ಮಂಗಳ ಸಾಕ್ಷಿಯದು ರಾಜಯೋಗ 7
125
ಗುಡುಗುಡಿ ಭಾರಿ ಗುಡುಗುಡಿ
ಗುಡುಗುಡಿ ಭಾರಿ ಗುಡುಗುಡಿ
ಗುಡುಗುಡಿ ಪಡೆಯಿರಿ ಗುರುಪುತ್ರರಾದವರು ಪ
ಆಸನ ನಳಿನವೆಂಬ ಸಿಂಬೆಯ ಮಾಡಿ
ಭೂಷಣ ಶರೀರವ ಕಾಯ ಮಾಡಿ
ಭಾಸುರ ಭಕ್ತಿ ಎಂದೆಂಬ ನೀರನೆ ಹೊಯ್ದು
ಸುಷುಮ್ನವೆಂಬ ಸೂಲಂಗಿಯನೆ ಹಾಕಿ 1
ತ್ರಿಕೂಟವೆಂದೆಂಬ ತ್ರಿವಿಧ ಮೂಲೆಯ ಚೊಂಗೆ
ಭೂತಲದ ಹಮ್ಮೆಂಬ ತೊಪ್ಪಲು
ಸಾಕಾರ ಗುರುವೆಂಬ ಬೆಂಕಿಯನೆ ಹಾಕಿ
ಏಕಚಿತ್ತವೆಂಬ ಮುಚ್ಚಳವನೆ ಮುಚ್ಚಿ 2
ಸೋಹಂ ಎಂದೆಂಬ ಕೊಳವೆಯನೆ ಹಚ್ಚಿ
ಬಹ ಪೂರಕ ಸೂರಿಯನೆ ಸೇದುತ
ಆಹ ರೇಚಕವೆಂಬ ಹೊಗೆಯನೆ ಬಿಡುತ
ಮಹಾ ಕುಂಭಕವೆಂಬ ಉಸುರನೆ ಹಿಡಿಯುತ 3
ಘುಡು ಘುಡು ಎಂದೆಂಬ ಮೇಘದ ನಾದವನು ನುಡಿಸೆ
ಸುಡು ಮಾಯೆಯೆಂದು ಥೂ ಎಂದು ಉಗುಳುತ
ಬಿಡಬಾರದು ಇದು ನಿತ್ಯವೆಂದೆನುತ
ಅಡಿಗಡಿಗೆ ಊದುತ್ತ ಉರಿಯ ಎಬ್ಬಿಸುತ 4
ಹಾರಿತು ಬ್ರಹ್ಮಾನಂದವೆಂದೆಂಬ ಹರಳು
ಏರಿತು ಪೂರ್ಣಾನಂದದ ಲಹರಿ
ಜಾರಿತು ತನುಮನವೆಲ್ಲ ಮರೆತು ಚಿತ್ತ
ಸೇರಿತು ಚಿದಾನಂದನೊಳಗೆ ಲಯಿಸಿ ಕೂಡಿ 5
126
ಗುಮ್ಮವ ನೋಡಿರೋ ಮೂಲಮಾಯೆ
ಗುಮ್ಮವ ನೋಡಿರೋ ಮೂಲಮಾಯೆ ಗುಮ್ಮವ ನೋಡಿರೋ
ಗುಮ್ಮವು ಹೀಗೆಂದು ಶತಕೋಟಿ ಬ್ರಹ್ಮರು ಆಗಿವೆ
ಗುಮ್ಮವ ಹೀಗೆಂದು ಗುರುತರಿವರಿಲ್ಲಯ್ಯ ಪ
ಇಲ್ಲದೆ ತಾನೀಗ ತೋರುವ ಗುಮ್ಮ
ಎಲ್ಲ ಲೋಕತಾನೆ ಆಗಿಹ ಗುಮ್ಮ
ಗೆಲ್ಲುವೆನಗೆ ಗೆಲುವಾಗದ ಗುಮ್ಮ
ಒಳ್ಳೆ ಒಳ್ಳೆಯವರನು ಅಂಜಿಪ ಗುಮ್ಮ 1
ಏನು ಜ್ಞಾನವ ನೋಡೆ ಹೋಗುದು ಗುಮ್ಮ
ಏನುಸಾಧನೆಮಾಡೆ ಎತ್ತದ ಗುಮ್ಮ
ಮಾನಿನಿ ಸುತ ಸಂಪತ್ತಾದ ಗುಮ್ಮ
ನಾನಾ ಭವವು ಆಗಿ ತೊಳಲಿದ ಗುಮ್ಮ 2
ತಿಳಿವೆನೆಂದರೆ ತಿಳಿಗೊಡದು ಗುಮ್ಮ
ತಿಳಿದರೆ ತನ್ನೊಳಗಡವುದು ಗುಮ್ಮ
ಬಲು ಚಿದಾನಂದ ಗುರುವಿನಲಿ ಗುಮ್ಮ
ಹೊಳೆ ಹೊಳೆದು ತೋರಿಪುದು ಗುಮ್ಮ 3
127
ಗುರು ಎಂಥಾ ಗಾರುಡಿಗ
ಗುರು ಎಂಥಾ ಗಾರುಡಿಗ
ಗುರುವಿನ ನಂಬಿ ಗುಣವೆಲ್ಲ ಕಳಕೊಂಡೆ ಪ
ಶರಣು ಮಾಡೆಂದರೆ ಶರಣು ಮಾಡುತ್ತಲಿರ್ದೆ
ಕರದಲ್ಲಿ ಏನಿತ್ತೋ ಜವೆಯ ಬೂದಿ
ಶಿರದ ಮೇಲೆನ್ನ ಮೈಮೇಲೆ ಎಳೆಯಲು ಶರೀರವ
ಮರೆತೆನೆ ಇದಕೆ ಸಾಕ್ಷಿಯಾದನೆ ಗುರು 1
ಆರು ಇಲ್ಲದುದ ನೋಡಿ ಬೇರೆನ್ನ ಕರೆದೊಯ್ದು
ಮೋರೆಯನು ಕಿವಿಯೊಳಗಿಟ್ಟು ಮಂತ್ರಿಸಿದ
ನಾರಿ ಬದುಕು ಮನಮಕ್ಕಳನೆಲ್ಲವ
ಸೇರಿ ಸೇರದಂತೆ ಮಾಡಿದನೆ ಗುರು 2
ಭವಗೇಡಿ ಕುಲಗೇಡಿ ಸಂಗಗೇಡಿಯಾದೆ
ಇವನ ವಿಶ್ವಾಸದ ಫಲದಲಿಂದ
ಇವನ ಮೇಲೆ ಎನ್ನ ವ್ಯಾಕುಲ ಹತ್ತಿದೆ
ವ್ಯವಹಾರವೆಂಬುದು ಎಡವಟ್ಟಾಯಿತು 3
ಮಂತ್ರಿಸಿದ ಕ್ರಿಯೆ ಮರಳಲೀಯದೆ ಎನ್ನ
ಮಂತ್ರ ತಂತ್ರಕ್ಕದು ಬಗ್ಗಲಿಲ್ಲ
ಮಂತ್ರದ ಮಹಿಮೆಯು ಮಹಾಮಹಿಮೆಯು
ಮಾಂತ್ರಿಕರೊಳಗೆ ದೊಡ್ಡವನಹುದೋ ಗುರು 4
ಇವನ ನಂಬಿದ ಮೇಲೆ ಇವನಂತಲ್ಲದೆ
ಭುವನಕ್ಕೆ ತಿರುಗಿ ತಾ ತಾರೆನೆ
ವಿವರಿಸೆ ಹುರುಳಿಲ್ಲ ಹೇಳಿ ಕೇಳೋದೇನು
ಭುವನ ರಕ್ಷಕ ಚಿದಾನಂದನೆ ಗುರು 5
128
ಗುರುನಾಥ ಗುರುನಾಥ ಹೇಳಿದ
ಗುರುನಾಥ ಗುರುನಾಥ ಹೇಳಿದ
ಮಾತು ಮಾತೆನ್ನಬಹುದು ಮಾತುವೊಂದೇ ಪ
ವೇದಕ್ಕೆ ನಿಲ್ಲದು ವಿವರಕ್ಕೆ ತೋರದು
ಆದಿ ಪುರಾಣದ ಅರ್ಥ ಅರ್ಥ ಅದು
ವಾದಕ್ಕೆ ದೂರದು ಕರವಶವಾಗದು
ಸಾಧಿಸಿ ತನಗೆ ತಿಳಿದು ಹೇಳಿದ ಮಾತು ಮಾತು ವೊಂದೇ 1
ಮೂರರ ನಡುವದು ಮೂಲವೆ ತಾನದು
ಧೀರ ಧೀರರೆಲ್ಲ ದಿಟ್ಟಿಪುದು
ಬೇರೆ ಮತ್ತಿಲ್ಲದು ಬೆಗಡಾಗಿ ಇಹುದು 2
ಸಾರಾಯದಿಂದೆನಗೊಲಿದು ಹೇಳಿದ ಮಾತು ಮಾತುವೊಂದೇ
ಮಾತಿನ ಮಹಿಮೆಯ ಮತ್ತೇನ ಹೇಳಲಿ
ಪ್ರೀತಿ ಎಂಬವೆಲ್ಲ ಪೀಡೆಯಾದವು
ಭೂತನಾಥ ಚಿದಾನಂದ ಭೂಪತಿಯಾದ
ಈ ತೆರದಲಿ ತಾನಿಂತು ಹೇಳಿದ ಮಾತು ಮಾತುವೊಂದೇ 3
129
ಘಂಟಾನಾದವ ಕೇಳೋ ಮುಕ್ತ
ಘಂಟಾನಾದವ ಕೇಳೋ ಮುಕ್ತ
ಘಂಟಾನಾದವ ಕೇಳೋ
ಘಂಟಾನಾದವು ಘಣ ಘಣವೆನಲು
ಅಂಟಿಕೊಳ್ಳದೆ ಲೌಕಿಕ ಸುಖಕೆ 1
ಈಷಣ ತ್ರಯಗಳು ಎಲ್ಲವು ಕೆಟ್ಟು
ಪಾಶವೆಂಟನು ಎಲ್ಲವ ಸುಟ್ಟು
ವಾಸನೆ ಹದಿನೆಂಟನು ಕಳಚಿಟ್ಟು
ಕ್ಲೇಷ ಪಂಚಕಗಳು ಹುಡಿಯಿಟ್ಟು 2
ಅರಿಗಳು ಅರುವರ ತಲೆಯನೆ ಹೊಯ್ದು
ಕರಣ ನಾಲ್ವರ ಕಾಲನೆ ಕೊಯ್ದು
ಹರಿವಾ ಹತ್ತರ ನೆತ್ತಿಗೆ ಹೊಯ್ದು
ಮೆರೆವಾವರಣ ಏಳನೆ ಮೇದು 3
ಘಂಟಾನಾದದ ಇಂಪನಾಲಿಸು
ಎಂಟು ಮೂರ್ತಿಗಳೊಡೆಯನಹೆ
ಕಂಟಕಹರ ಚಿದಾನಂದ ಬ್ರಹ್ಮವು
ತಾನಾಗಿಯೇ ನೀ ನಿಜ ವಿರುವೆ 4
130
ಚರಣವನೀಗ ಹೊಂದಬೇಡ ಕೇಡಿಗ
ಚರಣವನೀಗ ಹೊಂದಬೇಡ ಕೇಡಿಗ
ಗುರುವಿನ ಚರಣವನೀಗ ಹೊಂದಬೇಡ ಪ
ಜಾರಣ ಮಾರಣ ಬೋಧಿಸಿ ಗುರುವ
ಜೀವನ ನೀಗಲೆ ತಿನ್ನುವ ಗುರುವ
ಕಾರಣಿಕವನೆ ನುಡಿಯುವ ಗುರುವ
ಕಾಮಿತವನೆ ಹೇಳುವ ಗುರುವ ಕೇಡಿಗ ಗುರುವ 1
ಮಹಿಮೆ ಗಿಹಿಮೆ ತೋರುವ ಗುರುವ
ಮರಳಿ ಜನ್ಮಕೆ ತರುವ ಗುರುವ
ದಹಿಸಿ ಮನೆಯ ಹೋಹ ಗುರುವ
ದಂಡಣೆಯ ಗುರುವ ಕೇಡಿಗ ಗುರುವ 2
ಹರಿದು ತಿನ್ನುವ ಮೋಸದ ಗುರುವ
ಬರಕತವಿಲ್ಲದ ಗುರುವ
ಕರಕೊಳ್ಳುತಲಿರುವ ಕರ್ಮಿತಾ
ಗುರುವ ಕೇಡಿಗ ಗುರುವ 3
ಶಾಂತಿ ಶಮೆ ದಮೆಗಳು ದೊರಕದ ಗುರುವ
ಸೈರಣೆ ಎಂದಿಗು ನಿಲುಕದ ಗುರುವ
ಕರುಣೆಯ ತಾತೋರದ ಗುರುವ ದಯವಿಲ್ಲದ
ಗುರುವ ಕೇಡಿಗ ಗುರುವ 4
ಆಸೆಯನು ಬಿಡದಿಹ ಗುರುವ
ಅಂಗದ ಹಸಿವನು ತಿಳಿಯದ ಗುರುವ
ಬಾಸ ಚಿದಾನಂದನ ನರಿಯದ ಗುರುವ
ಬ್ರಹ್ಮನಾಗದ ಕೇಡಿಗ ಗುರುವ 5
131
ಜಯತು ಜಯತು ಜಯತು ಸತ್ಯ ಸನಾಥ
ಜಯತು ಜಯತು ಜಯತು ಸತ್ಯ ಸನಾಥ
ಜಯತು ನಿಜ ನಿರ್ಭೀತ
ಜಯತು ಸದ್ಗುರುನಾಥ ಜಯತು ಅವಧೂತ
ಜಯತು ಜಯತು ಪ
ಭುಗು ಭುಗಿಸೆ ಪ್ರಭೆ ಛಾಯೆ ಝಗಝಗಿಸೆ ಖಳೆ ಮಾಯೆ
ನಿಗಿನಿಗಿಸೆ ಶತಸೂರ್ಯ ಹೊಳೆವ ಮಧ್ಯ
ಧಗಧಗದಗಿಪ ಶಶಿ ಪ್ರಭೆಯು ಸವಿದುಂಬಮೃತಸುಧೆಯನ್ನು
ತಗತಗತಗಿಪ ನಿತ್ಯ ನಿರ್ವಿಕಾರ 1
ಪಾಲಿಸಗಣಿತ ಮಹಿಮ ಪಾಲಿಸಕ್ಷಯ ರೂಪ
ಪಾಲಿಸೈ ನಿಷ್ಕಾಮ ನಿರ್ವಿಕಲ್ಪ
ಪಾಲಿಸನಂತ ಪರಮಾತ್ಮ ಹರ ನಿರ್ಲೇಪ
ಪಾಲಿಸೈ ಚಿದ್ರೂಪ ಸತ್ಯ ಸಂಕಲ್ಪ 2
ಶರಣು ನಿತ್ಯಾನಂದ ಶರಣು ನಿರ್ಗುಣ ಸಾಂದ್ರ
ಶರಣು ಪ್ರಭೆಯ ಖಂಡ ಸಹಜ ಆನಂದ
ಶರಣು ಭವಭವ ದುರಿತ ದಾವಾಗ್ನಿ ನಿಜ ಬಾಧ
ಶರಣು ಭಕುತರ ವಂದ್ಯ ರಾಜಯೋಗೀಂದ್ರ 3
ವಂದಿಪೆ ಚಿದಂಬರ ನಿರಾಮಯ ನಿರಪೇಕ್ಷಾ
ವಂದಿಸುವೆ ಆರೂಢ ಪರಮ ಅಧ್ಯಕ್ಷ
ವಂದಿಸುವೆ ನಿಶ್ಚಲ ಪರಬ್ರಹ್ಮ ಘನರಕ್ಷಾ
ವಂದಿಸುವೆ ಗುಣಾತೀತ ದಕ್ಷ ನಿಜ ಮೋಕ್ಷ 4
ನಿರುಪಮ ನಿಜಾನಂದ ನಿಸ್ಪೃಹನೆ ನಿಶ್ಚಿಂತ
ಪರಮ ಪರತರವಸ್ತು ನಿರ್ಭಯಾನಂದ
ಗುರುತರ ನಿರಂಜನ ನಿರಾಧಾರ ನಿರ್ಲಿಪ್ತ
ಗುರು ಚಿದಾನಂದ ಅವಧೂತ ಪ್ರಖ್ಯಾತ 5
132
ಜೀವನ ಶಟವಿ ಹೇಳುವೆ ಕೇಳು
ಜೀವನ ಶಟವಿ ಹೇಳುವೆ ಕೇಳು
ಜೀವನವೆಂಬುವ ಮಾತೇ ಶಟವಿ
ದೇವ ಚಿದಾನಂದ ನೀನಿಹೆಶಟವಿ ಎಲೆ ಜೀವನ ಶಟವಿ ಪ
ನಾರಿಗೆ ಒಗೆತನವೋಂದೇ ಶಟವಿ
ಮೋರೆಯ ನಾದರೆ ಮುರುಕಿಪ ಶಟವಿ
ಮೂರುದಿನದ ಒಗೆತನ ಶಟವಿ ಎಲೆ ಜೀವನ ಶಟವಿ 1
ಆರ ಸಂಗಡ ಜಗಳವು ಶಟವಿ
ಆರನಾದರು ಅಣಕಿಪೆ ಶಟವಿ
ಊರು ನನ್ನದೆಂಬ ಶಟವಿ ಎಲೆ ಜೀವನ ಶಟವಿ 2
ನನ್ನದು ನನ್ನದು ಎಂಬೆ ಶಟವಿ
ನಿನ್ನ ತಂದೆಯು ಹೋದನೆ ಶಟವಿ
ನನ್ನದೆನೆ ನಾಚಿಕೆ ಬಾರದು ಶಟವಿ ಜೀವನ ಶಟವಿ 3
ಗುರು ಹಿರಿಯರ ನೀ ನಿಂದಿಪೆ ಶಟವಿ
ಗುಣ ನಿನಗೇನೇನಿಲ್ಲವೊ ಶಟವಿ
ಬರಿದೇ ಬಯಲಿಗೆ ಹಂಬಲಿಪೆ ಶಟವಿ ಎಲೆ ಜೀವನ ಶಟವಿ 4
ಶರೀರವು ಸ್ಥಿರವಲ್ಲವು ಶಟವಿ
ತೆರಳುವೆ ನೀನು ಬೆಳಗಿಗೆ ಶಟವಿ
ತರಳನ ಆರ ಕೈಯಲಿಟ್ಟೆ ಶಟವಿ ಎಲೆ ಜೀವನ ಶಟವಿ 5
ನಿನ್ನ ಸಂಸಾರ ಸುಳ್ಳಿದು ಶಟವಿ
ನೀರಲಿ ಅಕ್ಷರ ಬರದಂತೆ ಶಟವಿ
ನಿನ್ನನು ಏನಂತ ಕಂಡಿಹೆ ಶಟವಿ ಎಲೆ ಜೀವನ ಶಟವಿ 6
ನಿನಗೆ ಅನಂತ ಜನ್ಮವು ಶಟವಿ
ನೀನು ಹೆಣ್ಣು ಗಂಡಲ್ಲ ಶಟವಿ
ನಿನಗೆ ಹೇಳಲು ಹೆಸರಿಲ್ಲ ಶಟವಿ ಎಲೆ ಜೀವನ ಶಟವಿ 7
ಪಾಪದ ವಿದ್ಯದ ಮೂಲದಿ ಶಟವಿ
ರೂಪಿಗೆ ಬಂದಿಹೆ ನೀನೀಗ ಶಟವಿ
ಆ ಪರಿಚಂದ್ರನು ಹೊಳೆದಂತೆ ಶಟವಿ ಎಲೆ ಜೀವನ ಶಟವಿ 8
ಭೂಪ ಚಿದಾನಂದನ ಹೊಂದೆಲೋ ಶಟವಿ
ರೂಪು ವಿರೂಪು ಆಗುವಿ ಶಟವಿ
ದೀಪದೊಳು ನಿಜದೀಪ ನೀ ಶಟವಿ ಎಲೆ ಜೀವನ ಶಟವಿ 9
133
ಜೀವನು ಹೋಗಿ ನಿರಂಜನ
ಜೀವನು ಹೋಗಿ ನಿರಂಜನ
ಪಂಕ್ತಿಗೆ ಕೂರಲು ಅನಬೇಕೇನ
ಜೀವನೆ ಬ್ರಹ್ಮವು ಸತ್ಯವೆಂದು
ಇದಕೇನಿಲ್ಲನುಮಾನ ಪ
ಗುಲಾಮ ಹೋಗಿ ಸದರಿಗೆ ಕೂರಲು
ಗುಲಾಮನನ ಬೇಕೇನ
ಗುಲಾಮನಹುದೇ ಸದರಿಗೆ ಕುಳಿತವ
ಗುರು ಅವ ಸಂಶಯವೇನ 1
ಗೌಡಿಯು ಅರಸಗೆ ಪಟ್ಟದರಸಿಯಾಗೆ
ಗೌಡಿಗೆ ಅನಬೇಕೇನ
ಗೌಡಿಯೆ ಪಟ್ಟದರಸಿಯಾಗಲಿಕೆ
ಗೌಡಿಯೆ ಅರಸು ಅನಮಾನೇನು 2
ನರ ಚಿದಾನಂದ ಸದ್ಗುರುವನು ಹೊಂದಲು
ನರನನು ಅನುಬೇಕೇನ
ನರಚಿದಾನಂದ ಸದ್ಗುರು
ತಾನಲ್ಲದೆ ಯೋಚನೆ ಮಾಡಲಿಕೇನು 3
134
ಜೀವನ್ಮುಕ್ತನೆ ಇದ ಮಾಡು ನಿನಗುಂಟೆ ಜೋಡು
ಜೀವನ್ಮುಕ್ತನೆ ಇದ ಮಾಡು ನಿನಗುಂಟೆ ಜೋಡು
ದಿವಸದಿಂದಲಿ ದೃಢನಾಗಿ ಸಾಧಿಸು
ಕೇವಲ ಶಿವನೀನಾಗುವಿ ಆಗುವಿ ಪ
ಏರಿಸು ವಾಯುವನು ಏರಿಸಿದ ಬಳಿಕ
ಪೂರಿಸು ಕುಂಭವನು ಘಳಿಗಿಂತಿರಲಲ್ಲಿ
ಭೇರಿಯ ಕಹಳಾರವ ಮೃದಂಗವ
ಸಾರಿಯೆ ಕೇಳುತ ಶ್ರಮವನು ಹರಿಸುತ 1
ಆರು ನೆಲೆಗೆ ಮುಟ್ಟಿನಿಲ್ಲು ನಿಂತ ಬಳಿಕ
ಕಾರಣ ಮೃಡನಾಳಪೊಕ್ಕು ಮರವೆಂದು ಕಳೆದಿಕ್ಕು
ವಾರಿಯಮೃತಧಾರೆ ತ್ರಿವೇಣಿಯ
ಸಾರಸನದಿಯಲಿ ಮುಳುಗುತ ಮುಳುಗುತ 2
ಚಂದ್ರಮಂಡಲ ಎದುರಲಿ ಇರಲು ನೊಡುತಲಿ
ಮುಂದೆ ಜೋತಿರ್ಮಯವಿರಲು ಬ್ರಹ್ಮವೆ ತಾನಿರಲು
ಇಂದ್ರಾದಿಗಳಿಗಳವಡದಿಹ ಸ್ಥಾನವಾ
ನಂದದೆ ಎರೈ ಗುರು ಕೃಪೆಯಿಂದಲಿ 3
ಕಾಮ ಕ್ರೋಧಗಳವು ನಾಶ ಜನ್ಮ ನಿರ್ನಾಶ
ಧೂಮವಾಗುವವು ಆಶಾ ಎಲ್ಲ ನಿರ್ದೋಷ
ಕಾಮಿತ ಕರ್ಮ ಅವಿದ್ಯೆಯನುಳಿದು
ತಾಮರ ಸಾಧಿಪ ನಂದದಿ ಬೆಳಗುತ 4
ಯೋಗವ ಸಾಧಿಸು ಇದು ನಿತ್ಯ ಆಗುವುದು ತಥ್ಯಾ
ಯೋಗಿ ಜನಕೆ ಇದು ಪಥ್ಯಾ ಸತ್ಯವಿದು ಸತ್ಯ
ಭೋಗೈಶ್ವರ್ಯದ ಮುಕ್ತಿಗಧಿಪತಿ
ಯಾಗು ಚಿದಾನಂದ ಗುರು ನೀನಾಗಿಯೆ 5
135
ತನ್ನ ತಿಳಿದು ತಾ ನಿರ್ಲಿಪ್ತನಾದವಗೆ ಇನ್ನೇನಿನ್ನೇನು
ತನ್ನ ತಿಳಿದು ತಾ ನಿರ್ಲಿಪ್ತನಾದವಗೆ ಇನ್ನೇನಿನ್ನೇನು
ತನ್ನ ತನ್ನೊಳು ಕಂಡು ತಾನಾದ ಮಹಾತ್ಮಗೆ ಇನ್ನೇನಿನ್ನೇನು ಪ
ನಾನು ನೀನೆಂಬ ಹಮ್ಮುಳಿದುಳಿದಾತಗೆ ಇನ್ನೇನಿನ್ನೇನು
ನಾನು ನೀನೇ ನಿಶ್ಚಯವೆಂದು ನಿಶ್ಚಲನಾದವಗೆ ಇನ್ನೇನಿನ್ನೇನು 1
ಸರ್ವವನರಿತು ಸರ್ವವೆ ತಾನಾದವಗೆ ಇನ್ನೇನಿನ್ನೇನು
ಸರ್ವ ಸರ್ವವು ಆದ ಸರ್ವಾತ್ಮಗೆ ಇನ್ನೇನಿನ್ನೇನು 2
ಮನದ ಮಾಟಗಳಿಗೆ ಮರುಳಾದವಗೆ ಇನ್ನೇನಿನ್ನೇನು
ಮನವು ತಾನಾದವಗೆ ಮನಕೆ ನಿಲುಕದವಗೆ ಇನ್ನೇನಿನ್ನೇನು 3
ಸುಖ ದುಃಖಗಳಿಗೆ ತಾ ಸಾಕ್ಷಿಯಾದವಗೆ ಇನ್ನೇನಿನ್ನೇನು
ಸುಖ ದುಃಖ ತೋರದೆ ಸಮಮನನಾದವಗೆ ಇನ್ನೇನಿನ್ನೇನು 4
ಆರು ಸ್ಥಾನವ ಬಿಟ್ಟು ಮೂರನಾಶ್ರಯಿಸಿದವಗೆ ಇನ್ನೇನಿನ್ನೇನು
ಆರು ಆರನೆ ಸುಟ್ಟು ಅಗಣಿತ ಮಹಿಮಗೆ ಇನ್ನೇನಿನ್ನೇನು 5
ಎರಡನುಳಿದು ಮತ್ತೆರಡನು ಮರೆತವಗೆ ಇನ್ನೇನಿನ್ನೇನು
ಎರಡರೊಳು ತಾನೆಡೆಬಿಡದಿಪ್ಪಗೆ ಇನ್ನೇನಿನ್ನೇನು 6
ಮುಟ್ಟು ಚಟ್ಟುಗಳ ಮುಗಿಸಿದಾತಗೆ ಇನ್ನೇನಿನ್ನೇನು
ಮುಟ್ಟು ಚಟ್ಟಲಿ ಅಡಗಿರುವಾತಗೆ ಇನ್ನೇನಿನ್ನೇನು 7
ಸಕಲ ವಿಧವ ನೋಡಿ ಸಂತುಷ್ಟನಾದವಗೆ ಇನ್ನೇನಿನ್ನೇನು
ಸಕಲದಿ ಬೆರೆತು ಸಂಶಯವಳಿದಿಪ್ಪವಗೆ ಇನ್ನೇನಿನ್ನೇನು 8
ಚಿದಾನಂದ ಗುರುವಿನ ಚಿತ್ತದಿ ಪಿಡಿದಾತಗೆ ಇನ್ನೇನಿನ್ನೇನು
ಚಿದಾನಂದ ಗುರುವಿನ ಚಿತ್ಸುಖಭರಿತಗೆ ಇನ್ನೇನಿನ್ನೇನು 9
136
ತಾನೆ ಬ್ರಹ್ಮಪುಟ್ಟಿರೆ ಮಾನವರೆದೆಂಬರಯ್ಯ
ತಾನೆ ಬ್ರಹ್ಮಪುಟ್ಟಿರೆ ಮಾನವರೆದೆಂಬರಯ್ಯ
ತಾನೆ ತನ್ನ ತಿಳಿದು ನೋಡೆ ತಾನೆ ಚಿದಾನಂದ
ವಸ್ತು ತಾನೆ ಬ್ರಹ್ಮ ಪುಟ್ಟಿರೆ ಪ
ತಂದೆ ತಾಯಿಯೆಂಬುವರು ಒಂದನ್ನೂ ಮಾಡಲಿಲ್ಲ
ಇಂದು ಕಿವಿ ಮೂಗು ತಾಳಿ ಬಂದಿದೆ ಸಾಕ್ಷಾತ್ ವಸ್ತು
ತಾನೆ ಬ್ರಹ್ಮಯಿರುತಲಿದೆ 1
ಭಾವ ಕಲ್ಪಿತವಲ್ಲದ ದೇವನೆ ತಾನಾಗಿರೆ
ದೇವತೆಯೆಂಬುದ ಮರೆತು ಕಲ್ಲದೇವರ ಪೂಜಿಪರಯ್ಯಾ
ತಾನೆ ಬ್ರಹ್ಮ ಇರುತಲಿರೆ 2
ಕಾರಣಪುರುಷನಾಗಿ ದೇಹವನ್ನೇ ಧರಿಸಿರೆ
ಕಾರಣಪುರುಷನ ಬಿಟ್ಟು ಬೇರೆ ಧ್ಯಾನಿಸುವರಯ್ಯಾ
ತಾನೆ ಬ್ರಹ್ಮ ಪುಟ್ಟಿರೆ 3
ವೇದಶಾಸ್ತ್ರಪುರಾಣದ ಓದೆಲ್ಲ ತಾನೆ ಇರೆ
ಓದನ್ನು ತಿಳಿಯದ ತಾವು ಓದಿ
ಓದಿ ಸಾವರಯ್ಯೋ ತಾನೇ ಬ್ರಹ್ಮ ಪುಟ್ಟಿರೆ 4
ಇಂದು ಹರವಾಸರೆಂದು ಬಂಧ ಹೆಸರ ಮಾಡುತ
ಬಂಧ ಹರ ಚಿದಾನಂದಗೆ ಒಂದು ಕುತ್ತ ಎಣಿಸ
ರಯ್ಯೋ ತಾನೆ ಬ್ರಹ್ಮ ಪುಟ್ಟಿರೆ 5
137
ತಾರಕ ತಾರಕ ತಾರಕ ತಾರಕವೆಂಬ
ತಾರಕ ತಾರಕ ತಾರಕ ತಾರಕವೆಂಬ
ತಪನಿಧಿಯನು ತಪಿಸುತಲಿದೆ ನೋಡಾ ಪ
ಮುಗಿಲಾಕಾರದಿ ಮೋಹರಿಸುತಲಿಹ ಮಿಂಚುಗಳನೆ
ಭುಗಿಲು ಭುಗಿಲು ಎನಿಸುವ ಕಳೆಗಳ
ಬುದು ಬದಗಳ ನೋಡ 1
ಥಳಕು ಥಳಕು ಥಳಥಳನೆಂದೆಂಬ ಥರಗಳನದ ನೋಡ
ಬೆಳಕುಗಳಹ ಬಲು ಬೆಳಗನೆ ಬೆಳಗುವ ಭೇದಗಳನೆ ನೋಡ 2
ತೋರುತಡುಗುವ ತೋರು ಕಿಡಿಗಳ ಕೋಟಿಗಳನೆ ನೋಡ
ಮೀರಿಯೆ ಮಿಣಿ ಮಿಣಿ ಮಿಣಿಕಿಪ ವಿಸರದ ಮಿಶ್ರಗಳನೆ ನೋಡ 3
ಝಣಝಣರೆಂಬ ಝೂಗಟೆ ಮೊಳಗಿನ ಝೇಂಕಾರವ ನೋಡ
ಎಣಿಸಲು ಬಾರದ ಎಡೆದೆರಪಿಲ್ಲದ ಏಕಾರವ ನೋಡ 4
ಸಾಗರ ಸುಖವನು ಸವಿಸವಿದುಣ್ಣುವ ಸಾಕಾರವೇ ನೋಡ
ಯೋಗಿ ಎನಿಪ ಚಿದಾನಂದನೊಲಿದ ಯೋಗಿಗೆ ಇದು ನೋಡ 5
138
ತುಂಬಿ ತುಂಬಿ ತುಂಬಿದೆ ಮುಕ್ತಿಯು
ತುಂಬಿ ತುಂಬಿ ತುಂಬಿದೆ ಮುಕ್ತಿಯು
ತುಂಬಿದೆ ಮುಕ್ತಿಯು ತುಂಬಿದೆ ಮುಕ್ತಿಯು ತುಂಬಿ ಪ
ಧಡಧಡ ಧಡಿಸುತ ದಟ್ಟಣೆಯಿಂದಲಿ ದಯೆಗೈಯುತಲಿದೆ ತುಂಬಿ
ಎಡದೆರಹಿಲ್ಲದೆ ಏಕವೆ ಎನಿಸುತ ಎಲ್ಲೆಡೆ ತುಂಬಿದ ತುಂಬಿ 1
ಅಂಬರದೊಳು ಚಿದಂಬರವೆನಿಸುವ ಅಂಬರತಾನಿದೆ ತುಂಬಿ
ಬಿಂಬದಿ ತೋರುವ ಬಿಂಬಂತೆಲ್ಲವನಿಂಬಿಡುತಿದೆ ತಾ ತುಂಬಿ 2
ಜ್ಞಾನಾಮೃತ ರಸರಸವನೆ ಬೀರುತ ಜ್ಞಾನಕೆ ದೂರಿದೆ ತುಂಬಿ
ತಾನೆ ತಾನೆ ತಾನಾದ ಪುರುಷಗೆ ತಾನೆಯಾಗಿದೆ ತುಂಬಿ 3
ನಾದದ ಮನೆಯಲಿ ನಾದದಿ ಮರೆಸುವ ನಾದದಿಬೆರೆತಿದೆ ತುಂಬಿ
ಭೇದಾಭೇದಗಳಹ ದೃಗ್ದೃಶ್ಯದ ಭೇದವ ಸಾಕ್ಷಿಪ ತುಂಬಿ 4
ಇಂದು ಅಮೃತಕರ ಸೂಸುವ ತೆರದಲಿ
ಹೊಂದಿರುವವರನು ತಾತುಂಬಿ
ಮಂದಹಾಸ ಮಹಾಲೀಲಾತ್ಮಕ ಸಿಂಧು ಚಿದಾನಂದ ತುಂಬಿ 5
139
ತುಂಬಿಕೊಂಡಿರುತಿಹನೊಬ್ಬ ಜಗ
ತುಂಬಿಕೊಂಡಿರುತಿಹನೊಬ್ಬ ಜಗ
ವಿಂಬಿಲ್ಲದೆಲ್ಲವ ಸಕಲವೆಲ್ಲವ ತುಂಬಿ ಪ
ಆರರೊಳಗೆ ತುಂಬಿ ಅತ್ತತ್ತಲು ತುಂಬಿ
ಮೂರು ಠಾವಲಿ ತುಂಬಿ ಮೂರು ಮನೆ ತುಂಬಿ
ಬೇರೆ ಮೇಲಕೆ ತುಂಬಿ ಬೆಳಗಿನೊಳಗೆ ತುಂಬಿ
ಸಾರಾಮೃತದಿ ತುಂಬಿ ಸಾಕ್ಷಾತ್ಕಾರದಲಿ ತುಂಬಿ 1
ಮನಸಿನೊಳಗೆ ತುಂಬಿ ಮನವರ್ತನದಿ ತುಂಬಿ
ತನುವಿನಲ್ಲಿಯೆ ತುಂಬಿ ಸರ್ವಾಯವ ತುಂಬಿ
ತನುತ್ರಯದಲಿ ತುಂಬಿ ತನುವಿನಲ್ಲಿಯೆ ತುಂಬಿ
ಘನ ಸುಖದಿ ತುಂಬಿ 2
ಇಳೆಯ ಒಳಗೆ ತುಂಬಿ ಇಹಜಂಗಮದಿ ತುಂಬಿ
ಬಲು ಸ್ಥಾವರದಿ ತುಂಬಿ ಬಯಲಿನಲ್ಲಿಯೆ ತುಂಬಿ
ಕೆಳಗೆ ನಡುವೆ ತುಂಬಿ ಕೇವಲ ಕೊನೆಯ ತುಂಬಿ
ಚಲಿಸದಂದದಿ ತುಂಬಿ ಚಿದಾನಂದನೇ ತುಂಬಿ 3
140
ತೇರನು ನೀವು ನೋಡಿಲ್ಲ ತಿಳಿಪುವೆ ಸಡಗರವೆಲ್ಲ
ತೇರನು ನೀವು ನೋಡಿಲ್ಲ ತಿಳಿಪುವೆ ಸಡಗರವೆಲ್ಲ
ಚಾರು ಯೋಗಿಯು ನೋಡಿಲಿದು ಚಲನೆ ಮನುಜರಿಗೆ ಸಲ್ಲದು ಪ
ಆರು ಚಕ್ರದ ಆರುನೆಲೆ ಮೂರು ಅವಸ್ಥೆಗಳ ಮೂರುಗಾಲಿ
ಕುಂಡಲಿ ಎಂಬುದು ಕೀಲು ಚದುರಿನ ದಳಪಟ್ಟಿ ಮೇಲು 1
ಸಹಸ್ರಾರವೇ ಕೊನೆಯ ಸ್ಥಾನ ಸ್ವಾಮಿಯ ಸಿಂಹಾಸನ
ಸೋಹಂ ಎಂದೆನಿಸುವ ಶಿಖರ ಸೊಗಸಿಂದಲಿಹುದು ಸುಪ್ರಕಾರ 2
ಸ್ಥಾನ ಸ್ಥಾನಕೆ ಒಂದು ಬೊಂಬೆ ಸಡಗರ ಏನೆಂಬೆ
ಅನುರಾಗವೇ ಎಂಬ ಫಲವು ಆಶ್ಚರ್ಯ ತೇರಿನ ನಿಲುವು 3
ಹೇಷೆ ಎಂಬುವೆ ಕೋಟಿ ಚಂದ್ರ ಹೊಡೆವ ನಾದವೆ ವಾದ್ಯ ಸಾಂದ್ರ
ಬಲುಹು ಆನಂದ ಸಲ್ಲಲಿ ಭಾಪು ಎನಲಿ ಸುಖದಲಿ 4
ಇಡಾಪಿಂಗಳ ಮಿಣಿಗಳಿಂದ ಎಳೆವುದು ಗುರುದಯದಿಂದ
ಮೂಡಲಿಂದ ಪಶ್ಚಿಮಕ್ಕೆ ಗುರು ಚಿದಾನಂದನ ಸ್ಥಾನಕ್ಕೆ 5
141
ತೋರು ಶರೀರದೊಳಗಾತ್ಮನಾ ತೋರು ಶರೀರದೊಳಗೆ
ತೋರು ಶರೀರದೊಳಗಾತ್ಮನಾ ತೋರು ಶರೀರದೊಳಗೆ
ಸಾರ ನಿರ್ಗುಣ ನಿತ್ಯ ಶುದ್ಧನಾ ಪ
ಲೋಕಂಗಳ ಮಾಡಿರುವ ಲೋಕಕೆ ತಾನೆ ಗುರುವ
ಲೋಕವೇ ತಾನಾಗಿರುವ ಬಹು
ಲೋಕ ಲೋಕದ ಹೊರಗಿರುವ ದೇವನೇ 1
ದೃಶ್ಯವೇ ತಾನೆನಿಪ್ಪ ದೃಶ್ಯವ ನೋಡುತಲಿಪ್ಪ
ದೃಶ್ಯಕ್ಕೆ ಆನಂದಿಪ ಎಲ್ಲ ದೃಶ್ಯಕೆ ಆಧಾರವಿಪ್ಪನೇ 2
ಬೋಧನೆ ತಾನಾಗಿರ್ದ ಬೋಧಾಬೋಧದ ಸಿದ್ಧ
ಬೋಧದಿ ತಾ ಬೆರೆದಿರ್ದಾ ಬರೆ-
ಬೋಧಾ ಬೋಧಂಗಳ ಹೊದ್ದದ ದೇವನೇ 3
ನಾದದ ಮನೆಯಾಗಿಪ್ಪ ನಾದವ ಕೇಳುತಲಿಪ್ಪ
ನಾದದಿಂ ನಲಿದಿಪ್ಪ ಮಹಾನಾದನಾದಕೆ ಬೆರೆದಿಪ್ಪ ದೇವನೇ 4
ನಿರುಪಮ ನಿರಾಲಂಬ ನಿರವಯ ನಿಶ್ಚಲಬಿಂಬ
ಶರಣರೊಳು ಬಲಗೊಂಬ ವರ
ಪರಮ ಗುರು ಚಿದಾನಂದ ದೇವನೇ 5
142
ದಣಿದು ಮಲಗಿದೆನು ನಾನು
ದಣಿದು ಮಲಗಿದೆನು ನಾನು-
ದಣಿದು ಮಲಗಿದೆನು
ಮಣಿದೆ ಗುರುವಿಗೆ ಹಣಿದೆ ಶತ್ರುಗಳ
ತಣಿದೆ ರಕ್ತವ ಕುಣಿದೆ ತಲೆಗಳ
ಘಣ ಘಣ ಘಣ ಘಣ ನಾದವ ಕೇಳುತ
ಮಣಿಮಯ ಮಂಟಪ ಉನ್ಮನಿ ಬಯಲಲಿ ಪ
ತರಿಸಿ ತಾಪವನು ಕಾಲಲಿ ಒರೆಸಿ ಮಮತೆಯನು
ಹರಿಸಿ ಸಂಶಯ ಹುರಿಸಿ ದುರ್ಗುಣ
ಕೊರೆಸಿ ವ್ಯಸನವ ಜರಿಸಿ ಮದಗಳ
ಸುರಿ ಸುರಿ ಸುರಿವ ಸುಧಾ ಕಾರಂಜಿಯ
ಮೆರೆವ ಸಹಸ್ರಾರ ಚಪ್ಪರ ಮಂಚದಿ 1
ಹೊಡೆದು ವಾಯುಗಳ ತುಂಡರಿಸಿ ಕ್ಲೇಶಗಳ
ಮಡಿಯೆ ಈಷಣವು ಕಡಿಯೆ ಕಲ್ಪನೆ
ಕೆಡೆಯೆ ಭ್ರಾಂತಿಯು ಒಡೆಯೆ ಶತ್ರುಗಳು
ಕಿಡಿ ಕಿಡಿಯುಗುಳುತ ವಿಷ ಮೂರ್ಧ್ನಿಯ
ಬಿಡಿ ಮುತ್ತುದುರುವ ಹಂಸತೂಲದಿ 2
ಬಳಿದು ವ್ರತಗಳನು ಎಳೆದು ಮತಗಳನು
ತುಳಿದು ಗರ್ವವ ತೊಳೆದು ಶೋಕವ
ಮುರಿದು ರಾಗವ ಸೆಳೆದು ಮಾನವ
ಥಳಥಳ ಬೆಳುದಿಂಗಳಿನೊಳು
ಬಲು ಚಿದಾನಂದ ಬ್ರಹ್ಮವೇ ಆಗಿಯೆ 3
143
ದಶವಿಧ ನಾದವು ಭಕ್ತರಿಗೆ ಕೇಳುತಿದೆ
ದಶವಿಧ ನಾದವು ಭಕ್ತರಿಗೆ ಕೇಳುತಿದೆ
ದಶವಿಧ ನಾದವು ಭಕ್ತರಿಗೆ ಕೇಳುತಿದೆ
ದುಶ್ಮಾನರು ಇಬ್ಬಗೆಯಾಗಲು ದೆಸೆ ಬಿರಿಯಲು
ಯೋಗಿಯ ಕಿವಿ ಎರಡರಲಿ ಪ
ಛಿಣಿ ಛಿಣಿ ಎಂಬ ಚಿನ್ನಿನ ನಾದವು ಚಿತ್ಕೃತಿಯಾಗಿ ಚಿಮ್ಮತಿರೆ
ಝಣಝಣವೆಂಬ ಝಿಲ್ಲಿಯ ನಾದವು
ಎಣಿಕೆಯಿಲ್ಲದೆ ನಾಗಸ್ವರದ ಧ್ವನಿ
ಎಡೆದೆರೆಪಿಲ್ಲದೆ ಕೂಗುತಿದೆ
ಧಣಧಣ ಎನಿಪ ತಾಳನಾದವು ದಟ್ಟಣೆಯಾಗಿ ತುಂಬುತಿದೆ 1
ಮೃಣು ಮೃಣು ಎನಿಪ ಮೃದಂಗ ನಾದವು
ಮುಂಕಾಟ್ಟಾಗಿಯೆ ನುಡಿಯುತಿದೆ
ತನನಾ ಎಂಬ ವೀಣಾಸ್ವರವು ತಂಪಾಗೆಲ್ಲವ ಮುಚ್ಚುತಿದೆ
ಘನಘನ ಎನುತಲಿ ಶಂಖನಾದವು
ಘಮ್ಮೆನ್ನುತಲಿ ಭೋರೆನುತಲಿದೆ
ಘಣಘಣ ಎನುತಲಿ ಘಂಟಾನಾದವು
ಘಂಟ್ಯಾಗಿಯೆ ಓಂ ಎನುತಲಿದೆ 2
ಭೇರಿಯ ನಾದವು ಧಮಧಮ ಎನುತಲಿ
ಬಹಳಾಗಿಯೆ ಭೋಂಕರಿಸುತಿದೆ
ಘೋರದಿ ಮೇಘದ ನಾದವು ಘರ್ಜಿಸುತಿದೆ ಘುಡಿ ಘುಡಿಸುತಿದೆ
ನೂರಾರು ಸಿಡಿಲಂತೆ ನೂಕು ನುಗ್ಗಡಿಸುತಿದೆ
ವೀರ ಚಿದಾನಂದ ವಿಸ್ಮಯನಾಗಲು ವಿಚಿತ್ರದಿ ಬಾರಿಸುತಿದೆ 3
144
ದಶವಿಧ ನೌಬತ್ತಾಗುತದಣ್ಣ
ದಶವಿಧ ನೌಬತ್ತಾಗುತದಣ್ಣ
ದಶವಿಧ ನೌಬತ್ತಾಗುತದೆ
ದುಸುಮಾನರ ಎದೆ ಇಬ್ಬಗೆಯಾಗಲು
ದೆಸೆ ಬಿರಿಯಲು ಯೋಗಿಯ ಕಿವಿಯೆರಡಲ್ಲಿ ಪ
ಚಿಣಿ ಚಿಣಿ ಎಂಬ ಸಿಂಜಿಣಿನಾದವು
ಚಿತ್ಕೃತಿಯಾಗಿ ಚಿಮ್ಮುತಿದೆ
ಝಣಝಣಕೃತವೆಂಬ ಝಿಯಾನಾದವು
ಝೇಂಕಾರದಿ ಝೇಂಕರಿಸುತಿದೆ
ಎಣಿಕೆಯು ಇಲ್ಲದೆ ನಾಗಸ್ವರ ಧ್ವನಿ
ಎಡದೆರಪಿಲ್ಲದೆ ಕೂಗುತಿದೆ
ಘಣಘಣ ಎನಿಪ ತಾಳದ ನಾದವು
ದಟ್ಟಣೆಯಲಿ ತಾ ತುಂಬುತಿದೆ 1
ಮೃಣು ಮೃಣು ಎನಿಪ ಮೃದಂಗ ನಾದವು
ಮುಂಕಟ್ಟಾಗಿಯೆ ನುಡಿಯುತಿದೆ
ತನನಾ ಎಂಬವೀಣಾಸ್ವನವು ತಂಪಾಗೆಲ್ಲವ ಮುಚ್ಚುತಿದೆ
ಘನ ಘನ ಎನುತಲಿ ಶಂಖನಾದವು
ಘಮ್ಮೆನ್ನುತಲಿ ಭೋರೆನುತಲಿದೆ
ಘಣಘಣ ಎನುತಲಿ ಘಂಟಾನಾದವು
ಘಂಟ್ಯಾಗಿಯೆ ಓದಿ ಎನುತಲಿದೆ 2
ಭೇರಿಯ ನಾದವು ಧಮಧಮ ಎನುತಲಿ
ಧಾಂಧಮ ಧಾಂಧಮ ನುಡಿಯುತಿದೆ
ಘೋರದಿ ಮೇಘದ ನಾದವು ಗರ್ಜಿಸುತಿದೆ
ಘುಡಿ ಘುಡಿಸುತಿದೆ ನೂರಾರು ಸಿಡಿಲಂತೆ
ನೂಕು ನುಗ್ಗಡಿಸುತಿದೆ ವೀರ ಚಿದಾನಂದ
ವಿಸ್ಮಯನಾಗಲು ವಿಚಿತ್ರದಿ ಬಾರಿಸುತಿದೆ 3
145
ದಶವಿಧ ಬ್ರಹ್ಮರ ಮನೆಯಲಿ ಭಿಕ್ಷವ ಕೊಳುತಿಹ
ದಶವಿಧ ಬ್ರಹ್ಮರ ಮನೆಯಲಿ ಭಿಕ್ಷವ ಕೊಳುತಿಹ ಅವಧೂತ
ದಶವಿಧ ಬ್ರಹ್ಮರ ವಿವರವನೀಗಲೆ ಪೇಳುವೆ ಪ್ರಖ್ಯಾತ ಪ
ಸತ್ಯವು ಶೌಚವು ಸಮಸ್ತ ಬ್ರಹ್ಮವು ಸರ್ವದಿ ದಯವಿಟ್ಟಿಹನು
ನಿತ್ಯವು ತತ್ವವು ಈತನು ಬ್ರಾಹ್ಮಣರೊಳಗೆ ಬ್ರಾಹ್ಮಣನು 1
ಮಾಯೆಯು ಇಲ್ಲವು ಸ್ನಾನಕರ್ಮದಲಿ ದೇವಗೋವು ಪ್ರಿಯನು
ಆಯುಧದಿಂ ರಣ ಜಯಿಸುವನೀತನು ಬ್ರಾಹ್ಮಣ ಕ್ಷತ್ರಿಯನು 2
ಸಿದ್ಧವು ಕರ್ಮದಿ ದೇವಗೋವುಗಳ ಪೂಜಿಸುತಿಹನೀತ
ಉದ್ದಿಮೆ ಮಾಡುವ ನಾನಾ ಬ್ರಹ್ಮರೊಳು ವೈಶ್ಯನೆ ಇವನೀತ 3
ಚಲ್ಲಣ ಹಾಕಿಯೆ ಮಿಣಿನೊಗ ಹೊತ್ತಿಹನೀತ
ಎಲ್ಲ ಕೃಷಿಯ ವ್ಯವಹಾರವನು ಮಾಡುವ ಬ್ರಾಹ್ಮಣರೊಳು ಇವ ಶೂದ್ರ 4
ಹಲಬರು ಇಹೆವೆಂದು ಸ್ವಯಂಪಾಕಕೆತ್ತುವ ಮಾಡುತ ಬಹುಜಾಲ
ಆಚಾರದ ಸೋಗಿನಲಿ ಹೊರಗುಂಬುವರು ಬ್ರಾಹ್ಮಣಮಾರ್ಜಾಲ 5
ಎಡಗೈ ಅರಿಯನು ಬಲಗೈ ಅರಿಯನು ನುಡಿವನು ಬಿರುಮಾತ
ಉಡುವನು ಹಬ್ಬಕೆ ಧೋತ್ರವ ಬ್ರಾಹ್ಮಣರೊಳಿವನೀಗ ಕುರುಬ 6
ಚೋರರ ಕೂಡಿಯೆ ಪಾಲನೆಕೊಂಬನು ಮಾಡುತ ಬಲು ಘಾತ
ಆರಾದರನು ಅರಿಯನು ಬ್ರಾಹ್ಮಣರೊಳಿವ ಕಿರಾತ 7
ಕಾಣನು ಭೇದವ ತಂದೆ-ತಾಯಿಯಲಿ ಜೀವರುಗಳ ನೋಡ
ಪ್ರಾಣವ ಕೊಂಬನು ಬ್ರಹ್ಮೆಂತೆನ್ನದೆ ಬ್ರಾಹ್ಮಣರೊಳಿವ ಕಟುಕಾ 8
ಬಗೆ ಬಗೆ ನಾಮವು ನಿರುವುಡಿಧೋತ್ರವು ಸಂಧ್ಯಾಧಿಗಳವ ದೃಶ್ಯ
ಸೊಗಸನೆ ಮಾಡಿಯೆ ಕಣ್ಣನೆ ಹಾರಿಪ ಬ್ರಾಹ್ಮಣರೊಳಿವ ವೇಶ್ಯಾ 9
ತಾಯಕ್ಕತ್ತೆಯು ಸೊಸೆ ಸಹೋದರಿ ರಜಕೀಪರಿಭಾಳಾ
ಮಾಯಾದಿ ಸ್ವಪಚಳ ಹೋಗುವ ಬ್ರಾಹ್ಮಣರೊಳಿವ ಚಂಡಾಲ 10
ಈ ಪರಿ ದಶವಿಧ ಬ್ರಹ್ಮರುಗಳಲಿ ಭಿಕ್ಷೆಯ ಬೇಡುತ
ಭೂಪ ಚಿದಾನಂದ ಅವಧೂತ ಸದ್ಗುರು ಮನವೊಪ್ರಿಯೆ ಉಂಬ 11
146
ದುಃಖವಿಲ್ಲವೋ ಪರಮಾತ್ಮನಿಗೆ ಲಿಂಗದ ದೇಹದ
ದುಃಖವಿಲ್ಲವೋ ಪರಮಾತ್ಮನಿಗೆ ಲಿಂಗದ ದೇಹದ
ದುಃಖವಿಲ್ಲವೋ ಪರಮಾತ್ಮನಿಗೆ ಪ್ರತ್ಯಗಾತ್ಮನಿಗೆ
ದುಃಖವುಂಟೆ ನಿಜ ನಿರ್ಲಿಪ್ತಗೆ
ಮಿಕ್ಕ ಥಳಥಳ ಸಾಕ್ಷಿಬ್ರಹ್ಮಂಗೆ ಪ
ಜಲದೊಳು ಹೊಳೆವ ಇಂದುವಿಂಗೆ
ಜಲದ ಕಂಪವು ಹೊಳೆವುದೇ ಪೂರ್ಣಚಂದ್ರಗೆ
ಆ ಪರಬ್ರಹ್ಮಂಗೆ ಹೊಳೆಯಲು ಲಿಂಗದಿ
ಲಿಂಗದ ಗುಣಗಳು ಕೆಲವನು ತಿಳಿಯಲು ಪುಣ್ಯಾತ್ಮನಹೆ 1
ಉದಧಿಲಿ ತೋರ್ವ ಸೂರ್ಯನಿಗೆ ಆ
ಉದಧಿಯ ಕೊಳಕು ಬೆರೆಸೀತೆ
ದ್ವಾದಶಾತ್ಮಂಗೆ ಆ ಪರಿ ಆತ್ಮಂಗೆ ಲಿಂ-
ಗಾದಿ ಜನ್ಮವೊಂದುಗುಡೆ ಕಷ್ಟಪಡುವಿಕೆ
ಲಿಂಗವೆ ಅಳಿಯಲು ನಿತ್ಯಾತ್ಮನುತ
ಭಂಗವ ಕಳದೇ ಚಿದಾನಂದ ಬ್ರಹ್ಮನಹನು 2
147
ದೃಷ್ಟಿ ಇರಬೇಕಯ್ಯ ಬ್ರಹ್ಮದಿ ದೃಷ್ಟಿಯಿರಬೇಕು
ದೃಷ್ಟಿ ಇರಬೇಕಯ್ಯ ಬ್ರಹ್ಮದಿ ದೃಷ್ಟಿಯಿರಬೇಕು
ದೃಷ್ಟಿಯಿಲ್ಲದಿರಲು ಅನುಭವ ಪಟು ದೊರಕದು ಪ
ಆಲಿಯು ನಿಂತೆ ಆಲಿಯ ಗೊಂಬೆಯು ತಿರುಗದಲಿರಬೇಕು
ಆಲಿಯು ಮುಚ್ಚದೆ ಆಲಿಯ ರೆಪ್ಪೆಯು ಬಡಿಯದಲಿರಬೇಕು 1
ಅನಿಮಿಷ ದೃಷ್ಟಿಯಂದದಿ ಬ್ರಹ್ಮವ ಆಲಿಸುತಿರಬೇಕು
ಅನಿಮಿಷದಂದದಿ ಕಣ್ಣಿನ ಗುಡ್ಡೆ ತಿರುಗದಲಿರಬೇಕು 2
ದೃಷ್ಟಿಯು ಕುಳಿತಾ ದೃಷ್ಟಿಯು ಮುಂದಕೆ ಸಾಗಲಿರಬೇಕು
ದೃಷ್ಟಿಯು ತಾನೆಡಬಲಕೆ ಸರಿಯದೆ ದೃಷ್ಟಿಯು ಇರಬೇಕು 3
ಕುಳಿತಾ ಸ್ಥಳವು ತಪ್ಪಲು ಮತ್ತೆಯು ಕುಳಿತುಕೊಳ್ಳಬೇಕು
ಥಳಥಳ ಹೊಳೆಯುವ ಬೆಳಗದ ಪಸರಿಸಿ ತರನಾಗಿರಬೇಕು 4
ಉದಯಾಸ್ತಮಾನವು ದಿವರಾತ್ರಿಯುಡುಗಿ ಇರಬೇಕು
ಚಿದಾನಂದ ಸದ್ಗುರು ತಾನಾಗಿಯೆ ತಾನೆ ಇರಬೇಕು 5
148
ದೇಹವ ಬಿಟ್ಟು ಬ್ರಹ್ಮವು ಎಂತೆನೆ ದೇಹಬಿಟ್ಟು
ದೇಹವ ಬಿಟ್ಟು ಬ್ರಹ್ಮವು ಎಂತೆನೆ ದೇಹಬಿಟ್ಟು ಬ್ರಹ್ಮವೆಲ್ಲಿ
ದೇಹವು ಬ್ರಹ್ಮವು ಒಂದೆಯೋ ದೇಹವು ಇಹುದು ಬ್ರಹ್ಮದಲ್ಲಿ ಪ
ಮಾಯೆಯು ಬಿಟ್ಟು ಬ್ರಹ್ಮವು ಎಂದೆನೆ
ಮಾಯೆಯು ಬಿಟ್ಟು ಬ್ರಹ್ಮೆಲ್ಲಿ
ಕಾಯ ಬಿಟ್ಟು ಆತ್ಮವು ಎಂತೆನೆ
ಕಾಯವ ಬಿಟ್ಟು ಆತ್ಮೆಲ್ಲಿ 1
ಪಿಂಡವ ಬಿಟ್ಟು ಬ್ರಹ್ಮಾಂಡ ವೆಂತೆನೆ
ಪಿಂಡಾಂಡಿಲ್ಲದೆ ಬ್ರಹ್ಮಾಂಡವೆಲ್ಲಿ
ಖಂಡವ ಬಿಟ್ಟಾಖಂಡವೆಂತೆನೆ
ಖಂಡವ ಬಿಟ್ಟು ಅಖಂಡವದೆಲ್ಲಿ 2
ಜಗವನು ಬಿಟ್ಟು ತನ್ನನು ತೋರೆನೆ
ಜಗವನು ಬಿಟ್ಟು ತಾನೆಲ್ಲಿ
ಜಗಪತಿ ಚಿದಾನಂದ ಸದ್ಗುರು ನೀನು ನೀ
ಜಗಸಂಶಯವೆಲ್ಲಿ 3
149
ದೊರೆಯಾಗಿ ನಾನಿಹೆನಮ್ಮ ಅಜ
ದೊರೆಯಾಗಿ ನಾನಿಹೆನಮ್ಮ ಅಜ
ಹರಿಹರರ್ಗಿಲ್ಲದೆ ಪದ ಸೇರಿತಮ್ಮ ಪ
ಭೂಮಿಯೆ ಮಣಿಮಂಚವಮ್ಮ ಮಹಾ
ವ್ಯೋಮವೆಂಬುದೆ ಹೊಸ ವಸ್ತ್ರವಮ್ಮ
ಸಾಮವೆ ಮಣಿಭೂಷಣವಮ್ಮನಿ
ಸ್ಸೀಮ ಭಿಕ್ಷವೇ ಪರಿ ಪರಮಾನ್ನವಮ್ಮ 1
ಸಂಗರಹಿತ ಸತಿಯಮ್ಮ ಆ
ಮಂಗಳವೆಂಬ ಘನಸುತರಮ್ಮ
ಜಂಗಮವೇ ಜನವಮ್ಮ ಭೇ
ದಂಗಳ ಪರಿದಿಹುದೇ ಅರಮನೆಯಮ್ಮ 2
ನಾದವೆಂಬುದ ವಾದ್ಯವಮ್ಮ ಸು
ನಾದವೆಂಬುದೇ ಗೀತಗಾಯಕರಮ್ಮ
ಆದಿ ಬಂಧುವೇ ಮದವಮ್ಮ ತೇಜ
ವಾದ ಚಿತ್ತವೇ ದೀವಟಿಗೆಮ್ಮ 3
ಜ್ಞಾನವೆಂಬುದೇ ಬಲವಮ್ಮ ಮಹ
ದಾನಂದ ರಾಜ್ಯಕ್ಕೆ ಅಧಿಪತಿಯಮ್ಮ
ತಾನೆ ಎಂಬುದೇ ಮುದ್ರೆಯಮ್ಮ ಇಂತು
ನ್ಯೂನವಿಲ್ಲದೆ ಸ್ಥಿರ ಸೇರಿದುದಮ್ಮ 4
ಸುರವರರ್ಗಿನಿತುಂಟೆ ಅಮ್ಮ
ಹಿರಿಯಾರಾರಾದರೇನು ದೊರಕದಮ್ಮ
ಗುರುವಿನ ದಯದಿಂದಲಮ್ಮ ನಿಜ
ಗುರು ಚಿದಾನಂದನೇ ತಾನಾದುದಮ್ಮ 5
150
ನಂಬುವುದು ತಾನು ಎಂತು ಸತಿಯು ಸುತರು
ನಂಬುವುದು ತಾನು ಎಂತು ಸತಿಯು ಸುತರು ಮಗಳನು
ನಂಬಿ ಕಡೆ ಹಾಯ್ದುದುಂಟೆ ಹಾದಿಕಾರರನು ಪ
ದಾರಿಕಾರರಿಗೆ ವಸತಿ ಮಳಿಗೆ ಭೇಟಿಯಲ್ಲೇ
ದಾರಿ ಹಿಡಿದ ಬಳಿಕ ತಿರುಗಿ ಭೇಟಿಯಾಗೋದೆಲ್ಲಿ
ದಾರ ಸುತರ ಭೇಟಿಯಿದೇ ದೇಹದೊಳಗೆ ಎಂದರಿಯೋ
ಶರೀರವು ಬಿದ್ದ ಬಳಿಕ ಭೇಟಿ ಮುಂದೆ ಮರೆಯೋ 1
ಕನಸಿನವರ ತಾನು ಈಗ ನೆನಸಲಿಕ್ಕೆ ಬಹರೆ
ಕನಸಿನಂತೆ ತೋರುವರು ನೀನು ನಚ್ಚುವರೆ
ಮನೆಯ ಬದುಕುಭಾಗ್ಯವೆಲ್ಲ ಮನದಿ ಜರೆದು ಬಿಡು
ನಿನಗೆ ಗತಿಯು ಏನು ಎಂದು ನೀನು ತಿಳಿದು ನೋಡು 2
ಹೆಗ್ಗಣವು ಜಾಗಿನೊಳಗೆ ಬಿದ್ದು ಮಿಡುಕಿದಂತೆ
ವೆಗ್ಗಳಾಗಿ ಸಂಸಾರಕೆ ಮಾಡಿವೆಯೋ ಚಿಂತೆ
ನುಗ್ಗು ಆದೆ ಬಯಲಭ್ರಾಂತಿ ನಿನಗೆ ವ್ಯಾಪಕಾಗಿ
ಮುಗ್ಗುವೆ ನೀನೊಣನ ತೆರದಿ ನರಕದಲ್ಲಿ ಹೋಗಿ 3
ನನ್ನ ಸಂಸಾರವೆನ್ನಬೇಡ ನೀನು ಇದನು ಈಗ
ನನ್ನ ನನ್ನದೆಂದೆ ಹೋದ ನಿಮ್ಮಪ್ಪ ಮುಕ್ತನು
ಇನ್ನು ನಾಶವಿದು ಒಬ್ಬರಿಲ್ಲ ಸತ್ಯ
ನಿನ್ನದಾರೆಂದು ಮರೆಯದಡೆ ನಿತ್ಯಾ 4
ಇಂದ್ರಜಾಲ ನೋಡಲಿಕ್ಕೆ ಖರೆಯದಾಗಿ ಇಹುದು
ಅಂದದಾ ಪರಿಯು ಸಂಸಾರವೆ ನಿತ್ಯವಿಹುದು
ಬಂಧನವು ನಿನಗೆ ಇಹುದು ಗುರುವಿನ ಪಾದವ
ಹೊಂದು ಮುಂದೆ ಚಿದಾನಂದನಹೆ ನೀನೀಗ ಎಂದು 5
151
ನಡೆಯೇ ತೀರ್ಥವು ನುಡಿ ಪ್ರಸಾದವು
ನಡೆಯೇ ತೀರ್ಥವು ನುಡಿ ಪ್ರಸಾದವು
ಕೊಡುವುದೇ ತಾನೀಗನುಗ್ರಹವು
ಹಿಡಿವುದೇ ತತ್ವವು ಬಿಡುವುದೇ ವೈರಾಗ್ಯ
ದೃಢದಲಿ ತನ್ನ ತಿಳಿದಾ ಮಹಾತ್ಮನಾ ಪ
ಮೆಟ್ಟಿದ್ದೆ ಕಾಶಿಯು ಮಲಗಿದ್ದೆ ಶ್ರೀ ಶೈಲ
ದಿಟ್ಟಾಗಿ ಕುಳಿತುದೇ ಕುರುಕ್ಷೇತ್ರವು
ಘಟ್ಟಿಯಾಗಿಹುದೇ ಗಯವೀಗ ಗೋಕರ್ಣ
ಮುಟ್ಟಿಯೇ ತನ್ನತಾ ತಿಳಿದ ಮಹಾತ್ಮನಾ 1
ಉಂಡದ್ದೆ ಕೇದಾರ ಉಟ್ಟಿದ್ದೆ ಶ್ರೀ ಬದರಿ
ಕಂಡದ್ದೆ ಕಂಚಿ ಕಾಳಹಸ್ತಿ
ಮಂಡೆಗೆರಕೊಂಡುದೇ ಮೈಲಾರ ಮಧುರೆಯು
ಖಂಡಿಸಿ ತನ್ನತಾ ತಿಳಿದ ಮಹಾತ್ಮನಾ 2
ಸುಧಾ ಶರಧಿಯು ಆತ ಸಾಕ್ಷಾತ್ತು ದೈವವು
ವಿಧ ವಿಧದ ಜಗ ತಾನೆಯಾದಾತನು
ಮದಕಾಮ ಕ್ರೋಧ ಪಾಶ ಶೋಕ ವರ್ಜಿತ
ಚಿದಾನಂದ ಗುರುವೇ ತಾನಾದ ಮಹಾತ್ಮನಾ 3
152
ನಾ ಕಂಡ ಕನಸು ಕನಸಲ್ಲ ಅದು ಹೇಳಲು
ನಾ ಕಂಡ ಕನಸು ಕನಸಲ್ಲ ಅದು ಹೇಳಲು
ಬಾರದು ಕೇಳಲು ಬಾರದು ಪ
ಕಂಗಳ ಮುಟ್ಟಿ ನಾನಿರುತಿಹೆ ಅಂತರಂಗದೊಳಗೆ ದೃಷ್ಟಿಯನಿಡೆ
ಮಂಗಳವಿತ್ತು ಮಹತ್ತುಯಿತ್ತು ಜಂಗಮವಿತ್ತು ಜಗತ್ತು ಇತ್ತು 1
ಧ್ಯಾನವು ಗುರುಪಾದದಲ್ಲಿದೆ ಒಳ್ಳೆ ಗಾನವು ಕಿವಿಗೆ ಕೇಳಿಸುತಲಿರೆ
ಆನಂದವಿತ್ತು ಸುಖತರವಿತ್ತು ತನ್ಮಯವಿತ್ತು ಥಳಿಥಳಿಸಿತ್ತು 2
ಆನಂದ ಮನೆಯೊಳಗಾನಿರೆ ಚಿದಾನಂದ ದೇವರ ಕೂಡಿರೆ
ತಾನೆ ತಾನಿತ್ತು ತವೆ ಬೆರೆತಿತ್ತು ಏನೇನೋ ಇತ್ತು ಎಂತೆಂತೋ ಇತ್ತು 3
153
ನಾ ಕೆಟ್ಟ ಕೇಡ ಹೇಳುವೆನು ಎಲ್ಲ ಲೋಕದಂತೆನ್ನ
ನಾ ಕೆಟ್ಟ ಕೇಡ ಹೇಳುವೆನು ಎಲ್ಲ ಲೋಕದಂತೆನ್ನ
ಬದುಕು ಆಗಲಿಲ್ಲ ಪ
ಹೆಂಡರಿಚ್ಛೆಯಿಲ್ಲ ಹೀನವೆಂಬುದಿಲ್ಲ
ಪಂಡಿತತ್ವದ ಪರಮಾರ್ಥಕಿಲ್ಲ
ಉಂಡೆ ಉಟ್ಟೆನೆಂಬ ಊಹೆ ಮೊದಲಿಗಿಲ್ಲ
ಕಂಡ ಕಂಡಂತೆ ಚರಿಸುವಂತಾಯಿತೆ 1
ಅರಿವು ಮರೆವು ಇಲ್ಲ ಆಸೆಗಳೇನಿಲ್ಲ
ಇರುಳು ಹಗಲು ಎಂಬುದೆರಡಿಲ್ಲವೋ
ಶರೀರ ಸ್ಮರಣೆಯಿಲ್ಲ ಶ್ರೇಷ್ಠ ಭಾವಗಳಿಲ್ಲ
ಮರುಳು ಮರುಳು ಆಗಿ ತಿರುಗುವಂತಾಯಿತು 2
ಚಿದಾನಂದ ಗುರುವಿನ ಚಿತ್ತದಿ ಪಿಡಿದರೆ
ಒದವಿದ ಬ್ರಹ್ಮಾನಂದವ ಸವಿದು
ವಿಧವಿಧವಾದ ಬೆಳಕಿನೊಳಾನಡಗಿರೆ
ಇದರಿಂದಲಿ ಇಂತಾದುದಿದೆಲ್ಲವು 3
154
ನಾಚಿಸಿದೆಯ ದೇವಯನ್ನ ಎಲ್ಲ
ನಾಚಿಸಿದೆಯ ದೇವಯನ್ನ ಎಲ್ಲ
ಈ ಚರಾಚರ ತುಂಬಿಹ ವ್ಯುತ್ಪನ್ನ ಪ
ಶ್ರೀಗಿರಿ ನೋಡುವೆನೆಂದು ನಾ
ಸಾಗಿ ಪಯಣಗೊಂಡು ಬಂದು
ರಾಗವುದಿಸಿ ಮನಕಿಂದು ಮುಂದೆ
ಭೋಗ ತರದ ಮನ ತೂರಿತು ನಿಂದು 1
ಮಧ್ಯಾಹ್ನ ಬಿಸಿಲೊಳು ನಡೆಯೆ ನಾನು
ಅದ್ವಯವಿಲ್ಲದೆ ಹಾದಿ ನೀರ್ಗುಡಿಯೆ
ಇದ್ದ ಚೈತನ್ಯ ತಾ ನುಡಿಯೆ ಇಂತು
ಹೊದ್ದ ಶರೀರ ಬಳಲಿ ನೆಲಕೆಡೆಯೆ 2
ಧರಣಿಯ ಸುರರೂಪ ತಾಳಿ ನೋಡೆ
ವರಣ ವರಣ ರುದ್ರಾಕ್ಷಿ ಚಾಳಿ
ಚರಣ ಕಿರಣದಲ್ಲಿ ಹೂಳಿ ನಾನು
ಗುರುವೆ ಎಂದು ನುಡಿವುದ ಕೇಳಿ 3
ಎಲ್ಲಿ ಪೋಗುವೆ ಎಂದು ಕೇಳೆ
ಮಲ್ಲಿಕಾರ್ಜುನನ ನೋಡಿಯೇ ಬಹೆನೆಂದು
ಸೊಲ್ಲುಡುಗಲು ನಾನಿತ್ತೆಂದು ಗುರು
ಸುಳ್ಳು ಆದನೆ ಸರ್ವ ಪೂರಿತನಿಂದು 4
ಸರ್ವರೂಪದು ಮೃಷೆಯಾಯ್ತು ಎಲ್ಲ
ಸರ್ವಜನರಿಗೆ ಬೋಧಿಸುವಡೇನಾಯ್ತು
ಸರ್ವತಾನೆನಿಪುದೇನಾಯ್ತು ಎಲ್ಲ
ಸರ್ವರನುಳಿದು ಬಂದಿಹುದೊಳಿತಾಯ್ತು 5
ಇಂತು ಬುದ್ಧಿಗಳಿಂದ ಝಡಿಯೆ ಎಲ್ಲ
ಅಂತು ಕೇಳುತ ನೀವು ಆರೆಂದು ನುಡಿಯೆ
ನಿಂತಲ್ಲಿ ದೃಶ್ಯವ ಪಡೆಯೆ ಕಂಡು
ಸಂತೋಷದಿಂ ನಾ ಸಾಷ್ಟಾಂಗವೆರಗೆ 6
ಆನಂದ ತೊರೆಯೊಳು ಮುಳುಗಿ ಚಿ-
ದಾನಂದ ಗುರುವ ಕಾಣದೆ ಮನಮರುಗಿ
ಧ್ಯಾನದಿ ಕಂಗಳು ತಿರುಗಿ ನೋಡಿ
ತಾನೇ ತಾನಾದ ಘನದಿ ಮನ ಕರಗಿ 7
155
ನಾದದಿ ಬೆರೆತಿರು ಮುಕ್ತಾ ನಿತ್ಯವಿರಕ್ತಾ
ನಾದದಿ ಬೆರೆತಿರು ಮುಕ್ತಾ ನಿತ್ಯವಿರಕ್ತಾ
ವಾದದಿ ಬೆರೆತಿರುಮುಕ್ತಾ ನಾದದಿ ತಾನಾಗಿ ನಿನ್ನ ವಿಚಾರಿಸು
ನಾದಂ ಧಿಂಧಿಂಧಿಮಿಕೆ ಎಂಬ ಪ
ಸರ್ವರೂಪಕವಿದೆ ನಾದ ಸಕಲ ವಿನೋದ
ಪರ್ವಿಕೊಂಡಿರುತಿಹ ನಾದ ಬಹುಲೋಕ ಮೋದ
ದುರ್ವಿಕಾರದ ಮನವ ಎಲ್ಲೆಡೆ ಹರಿಯಿಸುವ ವೀಣಾನಾದ 1
ಆನಂದಕಾಶ್ರಯನಾದ ಆಗಿದೆ ಭೇದ
ಸ್ವಾನಂದ ತಾನೆಯದೆ ನಾದ ಹೇಳಲಿಕ ಭೇದ
ಜ್ಞಾನ ಶುದ್ಧನು ಸುಭಕ್ತಿ ವಿರಕ್ತಿಯು
ತಾನಹುದಹುದೆಂದು ಭೇರಿಯ ನುಡಿಸುವ 2
ತಾಪತ್ರಯದ ಮೂಲ ಹರಣ ಯೋಗಿಗಳ ಭರಣ
ಪಾಪ ಪುರುಷನ ಸಂಹರಣ ತಾನಿಹುದು ಸದ್ಗುಣ
ಭಾಪು ಚಿದಾನಂದ ಗುರುವನು ಕೂಡಲು
ಈ ಪಥವಲ್ಲದೆ ಇನ್ನೊಂದು ತಾನಿಲ್ಲ 3
156
ನಾದದಿ ಮಲಗ್ಯಾನೆ ಯೋಗಿ ನಿತ್ಯಾನಂದ ಭೋಗಿ
ನಾದದಿ ಮಲಗ್ಯಾನೆ ಯೋಗಿ ನಿತ್ಯಾನಂದ ಭೋಗಿ
ನಾದದಿ ಮಲಗ್ಯಾನೆ ಯೋಗಿ
ನಾದಂ ಝಣಂ ಝಣನಾದಂ ಭಿಣಿಂಭಿಣಿ
ನಾದಸಲೆಯ ವೀಣಾನಾದವ ಕೇಳುತ ಪ
ಈಷಣತ್ರಯ ಪಾಪಾತ್ಮರಿರಾ ಎಬ್ಬಿಸಲು ಬ್ಯಾಡಿ
ವಾಸನವೆಂಬ ಅಷ್ಟಕರ್ಮಿಗಳೇ ಒದರ ಬ್ಯಾಡಿ
ಪಾಶವ ಹರಿವುತ ಪಂಚಕ್ಲೇಶವ
ಈಸು ಉಳಿಯದಂತೆ ತರಿದಾಯಾಸದಿ 1
ಅಂತರ ಎಂಬ ಘಾತಕರಿರಾ ಅತ್ತ ಹೋಗಲು ಬ್ಯಾಡಿ
ಭ್ರಾಂತುಯಂದೆಂಬ ಬ್ರಷ್ಟರಿರ ಜಗಳಾಡಲಿ ಬ್ಯಾಡಿ
ಅಂತರಿಸದೆ ಆರು ಶತ್ರುವ ಛೇದಿಸಿ
ಅಂತಿಂತೆನ್ನದೆ ಆಯಾಸದಿಂದಲಿ 2
ಸಂಕಲ್ಪವೆಂಬೋ ಖೋಡಿಗಳಿರಾ ಸದ್ದು ಮಾಡಲಿ ಬ್ಯಾಡಿ
ಮಂಕು ಎಂದೆಂಬ ಮಾಂದ್ಯಗಳಿರ ಮುಂದಕ್ಕಡ್ಡಾಡಬೇಡಿ
ಬಿಂಕದಹಂಕಾರ ಬೇರ ಕಿತ್ತು
ಓಂಕಾರ ಚಿದಾನಂದ ವಸ್ತು ಆಯಾಸದಿ 3
157
ನಾದನಾದ ಸುನಾದವ ತಿಳಿದವ ನಾದ ಮೂರುತಿ
ನಾದನಾದ ಸುನಾದವ ತಿಳಿದವ ನಾದ ಮೂರುತಿ ನಿಜನಾದ ಪ
ಆರು ಅರಿಗಳು ಅವರನು ಗೆಲುವೊಡೆ ಆಶ್ರಯ ತಾನಿದೆ ನಾದ
ಧೀರತನದಲಿಹ ನಾಲ್ವರ ಸಾಧಿಸೆ ದಿಟವು ತಾನಿದೆ ನಾದ 1
ಅಷ್ಟಮದಂಗಳನೆಲ್ಲವ ತಿಳಿವೊಡೆ ಅದಿಯಹುದು ಈ ನಾದ
ದುಷ್ಟರು ಇವರ ದೃಢವನು ಕೆಡಿಸಲು ದೃಷ್ಟಿಗೆ ತಾನಿದೆ ನಾಧ 2
ಮೂರು ಮೂರು ಮೂರೆನಿಸುವ ತ್ರಿಪುಟಿಯ ಮೂಲನಾಶವಿದೆ ನಾದ
ಚೋರರು ಸಪ್ತಾ ಸಪ್ತರು ಎಂಬರ ಭೇದಿಸೆ ತಾನಿದೆ ನಾದ 3
ಎರಡರ ಭೇದವನೆಲ್ಲವನಳಿವೊಡೆ ಎದೆದೆರಪಿಲ್ಲದ ನಾದ
ಭರಿತವನಂದಾನಂದವ ತುಳುಕುವ ಭಾಗ್ಯವು ತಾನಿದೆ ನಾದ 4
ನಾದದಿ ನಿತ್ಯವು ಬೆರೆತಿಹ ಪುರುಷನೆ ನಾದ ಚತುರ್ಮಖನಾದ
ವಾದರಹಿತ ಚಿದಾನಂದ ಗುರುವಿನ ಪಾದದೊಳಗೆ ಅವನಾದ 5
158
ನಾದವನಾಲಿಸೋ ನಿತ್ಯದಿ ನಾದದೊಳಗಿನ
ನಾದವನಾಲಿಸೋ ನಿತ್ಯದಿ ನಾದದೊಳಗಿನ ನಾದ ಸುನಾದ
ಓಂಕಾರ ನಾದವನರಿವನೆ ಧನ್ಯ ಯೋಗೀಶ ಪ
ನಾದದಿಂದಲಿ ಅಷ್ಟಪಾಶವಿಕ್ಕಡಿಯಹುದು
ನಾದದಿಂದಲಿ ಮದಗಳೆಂಟುಡುಗಿ ಹೋಗುವವು
ನಾದದಿಂದಲಿ ಅರಿಗಳರುವರೂ ತೊಲಗುವರು
ನಾದದಿಂದಲಿ ಕರ್ಮವು ದೂರಹುದು
ನಾದದಿಂದಲಿ ಧರ್ಮವು ವೃದ್ಧಿಪುದು
ನಾದದಿಂದಲಿ ಬ್ರಹ್ಮವು ಯೋಗೀಶ 1
ನಾದದಿಂದಲಿ ಮೌನ ತನಗೆ ತಾನಾಗುವುದು
ನಾದದಿಂದಲಿ ಚತುಸ್ವಾಧನವು ದೊರಕುವುದು
ನಾದದಿಂದಲಿ ಸಪ್ತ ಭೂಮಿಕೆಗಳಾಗಿಹವು
ನಾದದಿಂದಲಿ ಜ್ಞಾನವು ಸ್ಥಿರವಹುದು
ನಾದದಿಂದಲಿ ಚಿತ್ರವಚಲವಹುದು
ನಾದದಿಂದಲಿ ಸರ್ವರು ಯೋಗೀಶ 2
ನಾದದಿಂದಲಿ ಬುದ್ಧಿ ನಿರ್ಮಲವಾಗುವುದು
ನಾದದಿಂದಲಿ ಮನವು ಹಿಡಿತದಲಿರುತಿಹುದು
ನದದಿಂದಲಿ ದೃಕ್ದೃಶ್ಯ ಸಾಧನವಹುದು
ನಾದವೆ ಬ್ರಹ್ಮವಹುದು
ಚಿದಾನಂದನಾದವನ ತೋರಲು ಬಹುದು ಅವನಲಿ
ಭೇದವಿಲ್ಲದೆ ಕೂಡಲುಬಹುದು ಯೋಗೀಶ 3
159
ನಾದವಾದನು ನಾದದ ಮನೆಯಿದ್ದ ಅಚ್ಚರಿ ನೋಡಿ
ನಾದವಾದನು ನಾದದ ಮನೆಯಿದ್ದ ಅಚ್ಚರಿ ನೋಡಿ
ವಾದಿಗಳನು ಗೆದ್ದು ಜಯವ ತಾ ಮಾಡಿ ನಾದವಾದನು ಪ
ಸುಮನಸವೆಂದೆಂಬ ಕುದುರೆಯ ಹತ್ತಿ
ಅಮಲವೆನಿಪ ಧೈರ್ಯದ ಕತ್ತಿಯ ಹಿಡಿದು
ಭ್ರಮಣೆಯಲ್ಲದ ವಿವೇಕ ಫೇರಿಯಿಂದ
ವಿಮಲಾನಂದದಿ ದುಮುಕಿಸುತಿರುತಿಪ್ಪ ನಾದವಾದನು 1
ಅಷ್ಟ ಆನೆಗಳ ತಲೆಗಳ ಹೊಡೆದು
ಷಷ್ಟರಧಿಕರ ಸಾಲನು ಕಡಿದು
ದುಷ್ಟಕುದುರೆಗಳ ಏಳರ ಕಾಲನು ಉಡಿದು
ಕಷ್ಟರೂಪದ ಚೋರರೈವರನು ದೂಡಿದ ನಾದವಾದನು 2
ಈಷಣತ್ರಯ ಪ್ರಧಾನರ ಜೀವವ ಕಳೆದು
ವಾಸನೆ ದಳವಾಯ್ಗಳೀರ್ವರ ನೆರೆ ತುಳಿದು
ಮೋಸಗಾರರ ದೊರೆ ನಾಲ್ವರನಳಿದು
ಏಸು ನುಡಿಯಲಿ ತಾನೊಬ್ಬನೇ ಉಳಿದು ನಾದವಾದನು 3
ದೋಷಕರೆಲ್ಲರ ದೇಶ ಬಿಟ್ಟೋಡಿಸೆ
ನಾದವಾದರು ಎಲ್ಲರು ಕೊನೆಗೆ ಉಳಿದವರೆಲ್ಲಾ
ಸಾಷ್ಟಾಂಗವೆರಗಿದರು
ವಾಸಿ ಪಂಥವ ಬಿಟ್ಟು ಕೊಂಡಾಡುತ ನಾದವಾದನು 4
ಇಂತು ರಣವ ಮಾಡಲು ಕೈಯ ಸುರಗಿ
ಸಂತೋಷವೆಂಬ ಮೃತದಿ ತಾ ಮುಳುಗಿ
ಶಾಂತನಾಗಿಯೆ ಚಿದಾನಂದ ಗುರುವಿಗೆರಗಿ
ನಿಂತು ನೋಡಿಯೆ ಕಂಡನಾತನೆ ತಿರುಗಿ ನಾದವಾದನು 5
160
ನಾದವ ಕೇಳುತ ನಿದ್ರೆಯ ಮಾಡುತ ಬ್ರಹ್ಮವು
ನಾದವ ಕೇಳುತ ನಿದ್ರೆಯ ಮಾಡುತ ಬ್ರಹ್ಮವು ತಾನಾಗಿ
ನಾದವ ಕೇಳುತ ನಾನಾ ಗುಣಗಳು ಹೋದವು ತಾವಾಗಿ ಪ
ಕೂಡಿತು ದೃಷ್ಟಿ ಪರಬ್ರಹ್ಮದಿ ತಾ ಅನುದಿನದಲಿ ಬಾಗಿ
ಮನ ಇಂದ್ರಿಯಗಳು ಹುಡುಕಿದರಿಲ್ಲ ಹೋದವು ತಾವಾಗಿ 1
ನಾನಾ ವರ್ಣದ ಛಾಯೆಯ ನೋಡುತ ನಿದ್ರೆಯ ಮಾಡಿದೆನೋ
ಭಾನು ಕೋಟಿ ಛಾಯೆಯ ನೋಡುತ ನಿದ್ರೆಯ ಮಾಡಿದೆನೋ 2
ಕಾಣದ ರೂಪದ ಕಾಣುತಲೆ ನಾ ಕಾಮಿಸಿ ಮಲಗಿದೆನೋ
ಬೋಧ ಚಿದಾನಂದ ಸದ್ಗುರುನಾಥನ ಧ್ಯಾನವ ಮಾಡಿದೆನೊ 3
161
ನಾದಾನಂದದಿ ಮುಳುಗಾಡೋ
ನಾದಾನಂದದಿ ಮುಳುಗಾಡೋ ಪ
ಇಲ್ಲವೆಂಬುದು ಸಲ್ಲ ಗುರು
ಎಲ್ಲಾ ಪೂರಿತನಹುದಲ್ಲ ಇದ ಬಲ್ಲವರು ಬಲ್ಲರೆಲ್ಲ
ತಾನೆಲ್ಲ ತಿಳಿಯೆ ನೀ ಸಾಕ್ಷಿಕನಹುದಲ್ಲ 1
ಮತಿಯಿಂದ ತಿಳುಕೋ ವಿಚಾರ ಈ
ಗತಿಯಲ್ಲಿ ಆತ್ಮನು ಪೂರ
ಗತಿಗೆ ಕೇಡಿಲ್ಲ ಇದು ಸ್ಥಿರ ಮಹ
ದತಿ ಸೌಖ್ಯ ಪದಕೆ ರಾಜ ನೀನೆ ಉದಾರ 2
ಭೇದ ಭೇದವು ನಿನಗೇತಕೆ ನೀ
ವಾದ ದೂರನು ಪರಕೆ ಈ
ವಾದ ಸಂವಾದಗಳ್ಯಾತಕೆ ಮಹ
ದಾದಿ ಪುರುಷನು ನೀನಹುದು ಬಿಡು ಜೋಕೆ 3
ಸತ್ಯ ಸಂವಿದ್ರೂಪ ಆತ್ಮ ನೋಡೆ
ಪ್ರತ್ಯಾಗಾತ್ಮ ಪರಕತೀತ ಅರಿಂದಲಾದುದು
ಖ್ಯಾತ ಸುನಾದವರಿದನೇ ನಿ
ರ್ಭೀತ ಮಹಾನಾದ ಚಿದಾನಂದನ ಕೂಡಿದನಾತ 4
162
ನಿನ್ನನೆ ತಿಳಿದು ನೀ ನೋಡು ಕಂಡ್ಯಾ
ನಿನ್ನನೆ ತಿಳಿದು ನೀ ನೋಡು ಕಂಡ್ಯಾ
ನೀ ನನ್ನ ತಿಳಿಯೆ ನೀ ಶಿವನು ಕಂಡ್ಯಾ ಪ
ಆದಿ ಮಧ್ಯಂತರ ಅನಾದಿ ಕಂಡ್ಯಾ
ನಾದ ಬಿಂದು ಕಳಾತೀತ ಕಂಡ್ಯಾ
ಭೇದಾಭೇದಕೆ ಅಭೇದ ಕಂಡ್ಯಾ ನೀ
ವಾದ ಸುವಾದ ವರ್ಜಿತನು ಕಂಡ್ಯ 1
ಮೂರು ಗುಣಕೆ ನೀ ಮೂಲ ಕಂಡ್ಯ
ನೀನಾರು ಅರಿಗಳಿಗತ್ತತ್ತ ಕಂಡ್ಯ
ತೋರುವುದಕೆ ನೀ ತೋರ್ಕೆ ಕಂಡ್ಯ
ನೀ ಮಾರನಟ್ಟುಳಿಗೆ ಮಹೇಶ ಕಂಡ್ಯ 2
ಮಂಗಳ ತರಕೆ ಮಂಗಳನು ಕಂಡ್ಯ ನೀ
ಮಂಗಳ ಮೂರುತಿ ಮಹಾತ್ಮ ಕಂಡ್ಯ
ಮಂಗಳ ವಸ್ತುಮಾಪತಿಯು ಕಂಡ್ಯ ನೀ
ಮಂಗಲನಿಗೆ ಮಾಯೆ ಮಾತು ಕಂಡ್ಯ 3
ನಿರುಪಮ ನಿರ್ಗುಣ ನೀನು ಕಂಡ್ಯ ನೀ
ಪರಮ ಪರಾತ್ಪರನು ಕಂಡ್ಯ
ಸುರವರ ಜೇಷ್ಠ ಸ್ತುತಿಪನು ಕಂಡ್ಯ ನೀ
ಭರಿತವಾನಂದ ಸಿಂಧು ಕಂಡ್ಯ 4
ಗುರುವಿನ ಪಾದ ಸೇರು ಕಂಡ್ಯ
ಗುರು ಕಟಾಕ್ಷವ ನೀನು ಪಡೆಯೋ ಕಂಡ್ಯ
ಗುರುವೆಂದು ಎಲ್ಲವನರಿಯೋ ಕಂಡ್ಯ
ಗುರು ಚಿದಾನಂದ ನೀನೆನ್ನು ಕಂಡ್ಯಾ 5
163
ನೆಲೆಯಾವುದಯ್ಯ ಹೊಲಬಾವುದಯ್ಯ
ನೆಲೆಯಾವುದಯ್ಯ ಹೊಲಬಾವುದಯ್ಯ
ತಿಳಿದು ಆತ್ಮನನು ತಿಳಿಯದ ಮನುಜರಿಗೆ ಪ
ವೇದ ಸಾರವನೋದಿ ವೇದದರ್ಥವ ಕಂಡು
ಆದಿಯಾಗಿಹಅನಾದಿ ಮೂರುತಿಯನ್ನು
ಸಾಧಿಸಿ ಸಾಧ್ಯವಾಗದೆ ಸರ್ವರೊಳಗಾಗಿ
ಬಾಧೆಯೊಳಗೆ ಸಿಕ್ಕುಬಿದ್ದ ಮನುಜಗೆ 1
ತನುದುಸ್ಥಿತಿಯ ಕಂಡು ತನುವಲಿಹನ ಕಂಡು
ಚಿನುಮಯವಾದ ಚಿದ್ರೂಪನೆಂಬನ
ಮನದ ಕೊನೆಯಲಿಟ್ಟು ಮಥಿಸಲಾರದೆ ತಾನು
ಘನ ದುಃಖದೊಳು ಬಿದ್ದು ಗಲಭೆಯಾದವಗೆ 2
ಕರಣ ಚರಿತೆಯ ನೋಡಿ ಕರಣ ಸಾಕ್ಷಿಯ ಕಂಡು
ಸ್ಥಿರ ಬುದ್ಧಿಯಾಗಿಯೆ ಸ್ಥಿಮಿತನಾಗದೆ ತಾನು
ವರ ಚಿದಾನಂದ ಪದ ಹೊಂದಲಾರದೆ
ನರಕದೊಳಗೆ ಬಿದ್ದು ನರಳಾಡುವವನಿಗೆ 3
164
ಪಥವ ಬಿಡು ಬಿಡು ದೇವ ಪಥದಿ ಮಲಗುವರೆ
ಪಥವ ಬಿಡು ಬಿಡು ದೇವ ಪಥದಿ ಮಲಗುವರೆ
ಗತಿ ಚಿದಾನಂದನಿರೆ ಗತಿಗೆಡುವೆನೆ ಭಯಕೆ ಪ
ಅಲ್ಲಿ ನಾನಾ ಬೋಧೆ ಬೋಧಿಸಲು ಭವ ಹರಿದು
ನಿಲ್ಲದಲೆ ನಾನೀಗಲೈ ತರಲಿಕೆ
ಇಲ್ಲಿ ಸರ್ವವೆ ಆಗಿ ನೀ ಬಂದು ಮಲಗಿರುವೆ
ಸುಳ್ಳನಿತು ಸೇರದಿದು ನಿನ್ನವಗೆ ಬಿಡು ಪಥವ 1
ಮನುಜ ಸಂಗವನಳಿದು ಮಹದರಣ್ಯವ ಹೊಕ್ಕು
ಆನಂತರದ ಪುಣ್ಯದಾಶ್ರಮವ ನೋಡಿ
ಸನುಮತದಿ ಪೂಜೆಯನು ಮಾಳ್ವೆನಾನೆಂದು ಬರೆ
ಘನಸರ್ಪವಾಗಿ ನೀನಡ್ಡ ಬಿದ್ದಿಹೆ ದೇವ 2
ಸಕಲ ಸಂಗವನುಳಿದು ಸ್ವಾನುಭಾವಗಳಿಂದ
ಅಖಿಲ ಮೃಗಗಳ ಕೂಡಿ ನಿಶ್ಚಲತೆಯಿಂದ
ಭಕುತಿಯಲಿ ನಿನ್ನನು ಭಜಪೆನೆಂದೈದುತಿರೆ
ಭಕುತನಿಗೆ ಸರ್ಪನಂತಿಹುದಿದೇನೈ ಸ್ವಾಮಿ 3
ಏಕಾಂತ ಗೃಹಗಳಲಿ ಏಕಾಂತ ಸ್ಥಳಗಳಲಿ
ಏಕಾಂತವಾಗಿ ನಿನ್ನನೆ ಪೂಜಿಸಿ
ಏಕಾಂತ ಸರ್ವಸಾಧನವೆನುತಲೈದುತಿರೆ
ಏಕಾಂತ ಮಾತೇಕೆ ಪಥವ ಬಿಡು ಎಲೆ ದೇವ 4
ಶುಕಗೆ ಪಂಜರದಂತೆ ಸಾಕ್ಷಿಯೆನಗಿರುತಿರಲು
ಅಖಿಲ ಚಿಂತೆಯ ಗಿಡುಗ ಬರಲಹುದೆ
ಮುಕುತಿದಾಯಕ ಚಿದಾನಂದ ಗುರು ಕೇಳೆನಗೆ
ಯುಕುತಿಯುಂಟೇ ಬೇರೆ ಬಿಡುಬಿಡಿರೆ ಬಿಡು ಪಥವ 5
165
ಪರಮ ಪುರುಷ ನಿನಗೆ ನಮೋ ನಮೋ
ಪರಮ ಪುರುಷ ನಿನಗೆ ನಮೋ ನಮೋ
ಪರಮ ಪರಾತ್ವರಗೆ ನಮೋ ನಮೋ ಪ
ಆದಿ ಅನಾದಿಗೆ ನಮೋ ನಮೋ ಮಹ
ದಾದಿ ತತ್ವಕೆ ನಮೋ ನಮೋ
ವಾದರಹಿತನಿಗೆ ನಮೋ ನಮೋ ನಿಜ
ವಾದ ವಸ್ತುವಿಗೆ ನಮೋ ನಮೋ 1
ಲೋಕ ಹಿತಾಖ್ಯಗೆ ನಮೋ ನಮೋ ಜಗ
ದೇಕವಲ್ಲಭನಿಗೆ ನಮೋ ನಮೋ
ನಾಕ ವಂದಿತಗೆ ನಮೋ ನಮೋ ನಿ-
ರಾಕಾರ ನಿತ್ಯನಿಗೆ ನಮೋ ನಮೋ 2
ಸಿಂಧು ಆನಂದಗೆ ನಮೋ ನಮೋ
ನಾದ ಬಿಂದು ಕಳಾತ್ಮಗೆ ನಮೋ ನಮೋ
ಸುಂದರ ತೇಜಗೆ ನಮೋ ನಮೋ
ಚಿದಾನಂದ ವಿಗ್ರಹಗೆ ನಮೋ ನಮೋ 3
166
ಪೂಜೆಯ ಮಾಡಿದೆನೆ ದೇವರ ಪೂಜೆಯ
ಪೂಜೆಯ ಮಾಡಿದೆನೆ ದೇವರ ಪೂಜೆಯ ಮಾಡಿದೆನೆ
ಈ ಜಗದರಸ ಚಿದಾನಂದ ತಾನೆಂದು ಪ
ಶುದ್ಧ ಸ್ನಾನವನೆ ಮಾಡುತ ನಿರ್ಮಲ ವಸನವನು
ಬಂಧಿಸಿ ಬಿಗಿದು ಸ್ವಸ್ಥಾನಾಸ ಮಧ್ಯದಲ್ಲಿ ಕುಳಿತು 1
ನಿಸ್ಪೃಹ ಭಸಿತವನೇ ಧರಿಸುತ ನಿಷ್ಕಲಂಕನಾಗಿ
ವಿಶ್ವೇಶ್ವರ ವಿರೂಪಾಕ್ಷನೇ ತಾನೆಂದು 2
ಸರ್ವ ಪೂಜಿತನು ತಾನೀಗ ಸರ್ವನಿವಾರಿತನು
ಸರ್ವರೂಪಕ ತಾನೀಗೆಂದು ಧ್ಯಾನವರ್ಪಿಸಿದೆನೆ 3
ಆನಂದ ವ್ಯಾಪಕನೆ ತಾನೀಗ ಸರ್ವನಿವಾರಿತನು
ಸರ್ವರೂಪಕ ತಾ ನೀಗೆಂದು ಧ್ಯಾನವರ್ಪಿಸಿದೆನೆ 4
ಇಂದ್ರಿಯ ರೂಪಕ ತಾನೀಗ ಇಂದ್ರಿಯ ವ್ಯಾಪಕನೇ
ಇಂದ್ರಿಯ ಸಾಕ್ಷಿಕ ತಾನೀಗೆಂದು ಸಿಂಹಾಸನವರ್ಪಿಸಿದೆನೆ 5
ನಿಶ್ಚಲಾತ್ಮಕನವ ತಾನೀಗ ನಿಶ್ಚಲೈಕ್ಯನಾದ
ನಿಶ್ಚಲವಸ್ತು ನಿಜತಾನೇ ಎಂದರ್ಘ್ಯವರ್ಪಿಸಿದೆನೆ 6
ವಿಶ್ಚದ ವಿಶ್ವಕರ್ತು ತಾನೀಗ ವಿಶ್ವ ವಿಶ್ವಭೋಕ್ತೃ
ವಿಶ್ವಲೀಲಾತ್ಮಕ ತಾನೀಗೆಂದು ಪಾದ್ಯವರ್ಪಿಸಿದೆನೆ 7
ಅನಂತ ಮಹಿಮ ತಾನೀಗ ಅನಂತ ನಿಗಮ
ಅನಂತ ನಿಗಮ ಗೋಚರ ತಾನೆಂದು ಸ್ನಾನವರ್ಪಿಸಿದೆನೆ 8
ಅಂಬರ ರೂಪಕ ತಾನೀಗ ಅಂಬರ ವ್ಯಾಪಕನೇ
ಅಂಬರದೊಳು ಚಿದಂಬರ ತಾನೆಂದು ವಸ್ತ್ರವರ್ಪಿಸಿದೆನೆ 9
ಚೈತನ್ಯಾಧಾರ ತಾನೀಗ ಚೈತನ್ಯಾದೂರ ಚೈತನ್ಯಾಧಿಪ
ತಾನೆಂದು ಯಜ್ಞೋಪವೀತ ವರ್ಪಿಸಿದನೆ 10
ಕಲುಷ ನಿರ್ಧೂತ ತಾನೀಗ ಕಲುಷ ನಿರ್ಜಿತನೇ
ಕಲುಷ ಹರತಾ ನಿಜವೆಂದಾಭರಣವರ್ಪಿಸಿದೆನೆ 11
ಲೇಪಕ್ಕಾಧಾರ ತಾನೀಗ ಲೇಪ ನಿರಾಧಾರ
ಲೇಪಹರ ತಾ ನಿಜವೆಂದು ಅನುಲೇಪವರ್ಪಿಸಿದೆನೆ 12
ಪುರತನು ವಿಸ್ತರಿಸಿ ತಾನೀಗ ಪುರಾಧಿಪತಾನೆನಿಸಿ
ಪುರುಷೋತ್ತಮ ತಾನೆಂದು ಸುಪುಷ್ಪವರ್ಪಿಸಿದೆನೆ 13
ಪರ ಇಹವು ತಾನೇ ತಾನೀಗ ಪರಾತ್ಪರನು ತಾನೆ
ಪರವಸ್ತು ತಾ ನಿಜವೆಂದು ಧೂಪವರ್ಪಿಸಿದೆನೆ 14
ಜ್ಯೋತಿಯ ರೂಪ ತಾನೀಗ ಜ್ಯೋತಿ ನಿರ್ಮಯನು
ಜ್ಯೋತಿಯಹ ಚಿಜ್ಯೋತಿಯು ತಾನೆಂದು ಜ್ಯೋತಿಯರ್ಪಿಸಿದೆನೆ 15
ನಿತ್ಯನಿರ್ಲಿಪ್ತನು ತಾನೀಗ ನಿತ್ಯ ತೃಪ್ತನು
ನಿತ್ಯತೃಪ್ತ ತಾನೆಂದು ನೈವೇದ್ಯವರ್ಪಿಸಿದೆನೆ 16
ಮಂಗಳವೆ ಆದ ತಾನೀಗ ಮಂಗಳಾಂಗನಾದ
ಮಂಗಳ ಮೂರುತಿ ತಾನೆಂದು ತಾಂಬೂಲವರ್ಪಿಸಿದೆನೆ 17
ನಿರ್ವಿಕಾರ ನಿಜ ತಾನೀಗ ನಿರಾವಲಂಬ ನಿಜ ನಿ-
ರಾವರಣ ತಾನೆಂದು ಪ್ರದಕ್ಷಿಣವರ್ಪಿಸಿದೆನೆ 18
ಜಯ ಜಯಾತ್ಮಕನೆ ತಾನೀಗ ಜಯ ಸದಾತ್ಮಕನೆ
ಜಯನಿತ್ಯಾತ್ಮಕ ತಾನೆಂದು ನಮಸ್ಕಾರವರ್ಪಿಸಿದೆನೆ 19
ಲೋಕೈಕನಾಥ ತಾನೀಗ ಏಕೈಕ ನಾಥನು
ಏಕ ನಾಥಾ ತಾನೆಂದು ವಿಸರ್ಜನವರ್ಪಿಸಿದೆನೆ 20
ಈ ಪರಿ ಪೂಜೆಯನು ನಿತ್ಯದಿ ಆ ಪರಬ್ರಹ್ಮದಲಿ
ಭೂಪ ಚಿದಾನಂದ ರೂಪನೆ ತಾನೆಂದೀ ಪರಿ ಮಾಡಿದೆನೆ 21
167
ಬಿಡಬೇಕು ಸ್ತ್ರೀಸಂಗ ಬ್ರಹ್ಮನಾಗುದಕೆ
ಬಿಡಬೇಕು ಸ್ತ್ರೀಸಂಗ ಬ್ರಹ್ಮನಾಗುದಕೆ
ಬಿಡದಿರಲು ಕೆಡುತಿಹನು ಬಿಡೆಯವಿಲ್ಲಯ್ಯ ಪ
ಕಣ್ಣುಗಳು ತಿರುಹಲಿಕೆ ಕಾಲುಕೈಯುಡುಗುವುದು
ನುಣ್ಣನೆಯ ಗಂಟೊಲಿಯೆ ಎದೆಗುಂದುವುದು ಅಯ್ಯ
ಸಣ್ಣ ಹಲ್ಲನು ಕಾಣೆ ಸರಿವುದು ಶಿವಧ್ಯಾನ
ನುಣ್ಣನೆಯ ಮುಖಕ್ಕೆ ನುಗ್ಗಹುದು ದೃಢ ಚಿತ್ತ 1
ಕಿರುನಗೆಯ ಕಾಣಲು ಕಳಚಿಹೋಹುದು ಬುದ್ಧಿ
ಸೆರಗು ಸಡಿಲಲು ಸೈರಣೆಯು ಅಡಗುವುದು ಅಯ್ಯ
ತಿರುಗಾಡುತಿರಲು ತಿಳಿವಳಿಕೆ ಹಾರುವುದು ಮು-
ಕುರ ಮುಖ ಕಾಣಲು ಮುಳುಗುವುದು ಅರಿವು ಅಯ್ಯ 2
ಗಾಳಿಯದು ಹಾಯಲಿಕೆ ಗತವಹುದು ಅನುಭವವು
ಬೀಳೆ ಅವರ ನೆರಳು ಬಯಲಹುದು ಬೋಧನೆಯು
ಬಾಲ ನುಡಿಗಳ ಕೇಳೆ ಬೀಳುವುದು ಬಲ್ಲವಿಕೆ
ಬಾಲೆಯರ ಸಂಗವದು ಭವದ ತಿರುಗಣೆಯಯ್ಯ 3
ನವನೀತ ಪುರುಷನು ನಾರಿಯೇ ಅಗ್ನಿಯು
ನವನೀತ ಕರಗದೆ ಅಗ್ನಿಯೆದುರಿನಲಿ
ಯುವತಿ ಸನಿಹದಲಿರಲು ಎಲ್ಲಿ ಬ್ರಹ್ಮವು ನಿನಗೆ
ಶಿವನಾಣೆ ಸತ್ಯವಿದು ಸುಳ್ಳೆಂದಿಗೂ ಅಲ್ಲ 4
ಪಾತಕದ ಬೊಂಬೆಯು ಫಣಿವೇಣಿಯರ ರೂಪ
ಘಾತಕವು ತಾನಹುದು ಯೋಗಗಳಿಗೆಯಲಯ್ಯ
ಮಾತು ಬಹಳವದೇಕೆ ಮಹಿಳೆಯನು ತ್ಯಜಿಸಿದರೆ
ದಾತ ಚಿದಾನಂದನು ತಾನೆ ಅಹನಯ್ಯ 5
168
ಬಿಟ್ಟೆನಯ್ಯ ಬಿಟ್ಟೆನಯ್ಯ ಪ್ರಪಂಚವ
ಬಿಟ್ಟೆನಯ್ಯ ಬಿಟ್ಟೆನಯ್ಯ ಪ್ರಪಂಚವ
ಮುಟ್ಟಿದೆನು ಬ್ರಹ್ಮವನು ಮುಕ್ತನಾದೆನು
ಹುಚ್ಚು ಮೂಳಿ ಹೆಂಡತಿಯ ಪ
ಮೆಚ್ಚಿ ನಲಿವ ಮಗನು ಸೊಸೆಯು
ಉಜ್ಜಿ ಬದುಕನೆಲ್ಲ ನಾನು ಉಡುಗಿ ಕಳೆದೆನು 1
ನೆಂಟರಿಷ್ಟರೆಲ್ಲರನ್ನು ದೂರಮಾಡಿ ಕುಳಿತೆ ನಾನು
ಹೆಂಟೆಯಂತೆ ಕಂಡೆನಯ್ಯ ಹೇರು ಹೇಮವ 2
ಅಷ್ಟದೇವರನ್ನು ನಾನು ಅಡವಿಗೆಂದು ಅಟ್ಟಿಬಿಟ್ಟೆ
ಕಷ್ಟಪಡಿಪ ಪುರೋಹಿತನ ಕಡೆಗೆ ತಳ್ಳಿದೆ 3
ವಾರವಾರ ನೇಮವನ್ನು ಒಲೆಯನೀಗ ಹೊಗಿಸಿದೆ
ದಾರಿ ಹಚ್ಚಿಸಿದೆನು ಕುಲವ ಶೀಲವ್ರತಗಳ 4
ಮತಗಳೆಂಬ ವಾದವನ್ನು ಮಣ್ಣುಪಾಲು ಮಾಡಿದೆನು
ಸತತ ಚಿದಾನಂದ ಬ್ರಹ್ಮ ಸಾಕ್ಷಿಯಾದನು 5
169
ಬೆಳಗಾಯಿತು ಕೇಳಿ ಭ್ರೂಮಧ್ಯ ಮಂಟಪದೊಳಗೆ
ಬೆಳಗಾಯಿತು ಕೇಳಿ ಭ್ರೂಮಧ್ಯ ಮಂಟಪದೊಳಗೆ
ಬೆಳಕು ಪಸರಿಸುತಿದೆಕೊ ಎತ್ತಿತ್ತ ನೋಡೆ
ಮುಂಬೆಳಕು ಕಾಣಿಸುತ್ತ ರವಿಕೋಟಿಯರ ಪಳಿಯುತಿದೆ
ನಿರ್ಮಳ ನೋಡಲುಪ್ಪವಡಿಸ ಯತಿರಾಜ ಪ
ಷೋಡಶಾಕಾರವಹ ಸೋಮ ಕಳೆಗುಂದಿಹುದು
ಖೋಡಿ ಜನನ ಮರಣ ಚಕ್ರ ತಾ ಕೊರಗಿದುದು
ಪಾಡಳಿದು ಜೀವಶಿವ ಶೈತ್ಯ ಬಿಟ್ಟಾಡಿದುದು
ಆರೂಢನೊಲಿದುಪ್ಪವಡಿಸ ಯತಿರಾಜ 1
ತಾಪತ್ರಯಗಳೆಂಬ ರಾತ್ರಿ ತಾ ಜಗುಳಿದುದು
ಪಾಪಿ ಇಹಪರವೆಂಬ ಸುಳಿಗಾಳಿ ಜಾರಿದುದು
ಕೋಪಿ ಸಪ್ತವ್ಯಸನ ಗೂಗೆ ಕಣ್ಣುಡುಗಿದುದು
ನಿರ್ಲೇಪನುಪ್ಪವಡಿಸ ಯತಿರಾಜ 2
ಅಷ್ಟ ಪ್ರಕೃತಿಗಳೆಂಬ ನಕ್ಷತ್ರವಡಗಿದವು
ದುಷ್ಟ ಪಂಚೇಂದ್ರಿಯದ ಕುಮುದಗಳು ಬಾಡಿದವು
ನಷ್ಟರಾರುವರೆಂಬ ಶಿವನಿಕರ ವೋಡಿದವು
ಶಿಷ್ಟ ನೀನೊಲಿದುಪ್ಪವಡಿಸ ಯತಿರಾಜ 3
ಶಾಂತರಸ ಲಹರಿ ತನಿವಾತ ಸೂಸುತಲಿದೆ
ಸ್ವಾಂತನಾದ ಭ್ರಮರ ಪರಿಪರಿಯ ಪಾಡುತಿದೆ
ಅಂತರಂಗದ ಕಮಲ ತಾನಿಲ್ಲಿ ಬಿರಿಯುತಿದೆ
ನಿಶ್ಚಿಂತನೊಲಿದುಪ್ಪವಡಿಸ ಯತಿರಾಜ 4
ನಿರುಪಮ ನಿರಾಲಂಬ ನಿರಮಾಯ ನಿರಪೇಕ್ಷ
ಪರಮ ಪರತರ ವಸ್ತು ಪರಮೇಶ ಪರಮಾತ್ಮ
ನಿರುತ ನಿತ್ಯಾನಂದ ಮೂರ್ತಿ ಚಿದಾನಂದ
ಗುರುನಾಥನುಪ್ಪವಡಿಸ ಯತಿರಾಜ 5
170
ಬೇಡಿದೆನು ಕೊಡುಕಂಡ್ಯ ಬೇಡಿದೆನು
ಬೇಡಿದೆನು ಕೊಡುಕಂಡ್ಯ ಬೇಡಿದೆನು ಕೊಡುಕಂಡ್ಯ
ಬೇಡಿದೆನು ನೀ ನೀಡು ಕಂಡ್ಯಾ ಪ
ನಿನ್ನ ಹಾಡನು ಹಾಡಿ ನಿನ್ನ ನಿಜದೊಳಗಾಡಿ
ನಿನ್ನನೇ ಕಾಡಿ ನಿನ್ನನೇ ಬೇಡಿ
ನಿನ್ನ ಓಲಗವ ಮಾಡಿ ನಿನ್ನ ನಿಟ್ಟಿಸಿ ನೋಡಿ
ನಿನ್ನ ಲೀಲೆಯೊಳು ನಾನಿರುತಿಹುದದನಾ 1
ನೋಟದೊಳಗಿನ ನೋಟ ಕೂಟದೊಳಗಿನ ಕೂಟ
ಆಟದೊಳಗಿನ ಆಟ ಇಂಥ ಆಟ
ನೀಟದೊಳಗಿನ ನೀಟ ನಿನ್ನಲ್ಲಿ ಬೆರೆದಾಟ
ಪಾಟ ಮಾಡಿಯೆ ಎನಗೆ ಪಾಲಿಸುವುದನ 2
ಶರೀರದಿಚ್ಚೆಯನುಳಿದು ಶರೀರ ವಾಸನೆ ಕಳೆದು
ಶರೀರ ವಿಷಯದ ಹೊಲಬೆಲ್ಲ ಬಳಿದು
ಶರೀರದ ನೆಲೆಯು ತಿಳಿದು ಶರೀರದೊಳೊಬ್ಬನನುಳಿದು
ಶರೀರದ ಸಂಗ ದೊರಕದಿಹದದನಾ 3
ನಾದಲಕ್ಷಿಸಿ ಹಿಡಿದು ನಾದ ಸಂಗವ ಪಡೆದು
ನಾದಾಮೃತವ ಕಿವಿತುಂಬ ಕುಡಿದು
ನಾದ ದಾರಿಯ ನಡೆದು ನಾದದೊಳ್ವೆಳಗೊಡದು
ನಾದವನೆ ಮರೆತು ಸುಖಿಸುತಿಹದದನ 4
ನಿನ್ನ ನೀನುಳಿದಿಲ್ಲ ನೀ ದೈವ ಜಗಕೆಲ್ಲ
ನಿನ್ನಂತೆ ಆಪ್ತರಿಲ್ಲ ನಿನ್ನ ನಂಬಿದೆನಲ್ಲ
ನೀ ಕಾಯಬೇಕಲ್ಲ ಚೆನ್ನ ಚಿದಾನಂದ
ನೆನೆಹಂಬತಾತ್ವಿಕ ಹಿನ್ನೆಲೆಯ ಕೀರ್ತನೆಗಳುದದನಾ 5
171
ಬ್ರಹ್ಮವೆಂಬಿರಿ ನಿಮ್ಮ ಬರಿದೆ ಮಾತಲ್ಲದೆ
ಬ್ರಹ್ಮವೆಂಬಿರಿ ನಿಮ್ಮ ಬರಿದೆ ಮಾತಲ್ಲದೆ
ಬ್ರಹ್ಮನಾದವನ ಬಗೆಯನು ಹೇಳುವೆ ಕೇಳಿ ಪ
ಆಶಾಪಾಶಗಳಿಗೆ ವಶವಾಗದವ ಬ್ರಹ್ಮ
ಮೋಸಹೋಗದೆ ಮಾಯೆಗೆ ಇರುವವ ಬ್ರಹ್ಮ
ಕೂಸಿನಂದದಿ ಭಾವ ಕೂಡಿಹನವ ಬ್ರಹ್ಮ
ಘಾಸಿಯಾಗನು ಮದನಗೆ ಅವನು ಬ್ರಹ್ಮ 1
ಸತಿಸುತರಿಚ್ಛೆಯ ಸಮನಿಸದವ ಬ್ರಹ್ಮ
ಇತರರ ವಾಕ್ಯಕೆ ಕಿವಿಗೊಡದವ ಬ್ರಹ್ಮ
ಗತಿ ಯಾವುದೆನಗೆಂದು ಗುಣಿಸುತಿಪ್ಪವ ಬ್ರಹ್ಮ
ಅತಿ ಹರುಷದಿಂ ಬಾಳುತಿರುವವನು ಬ್ರಹ್ಮ 2
ಸಕಲ ವಿಶ್ವವು ಎನ್ನ ಸರಿಯು ಎಂಬುವವ ಬ್ರಹ್ಮ
ಸುಖ ದುಃಖವನು ಸಮದೃಷ್ಟಿಯಲಿ ನೋಡುವವ ಬ್ರಹ್ಮ
ಭಕುತಿ ಭಾವನೆಯಿರುವ ಮಾನವನು ತಾ ಬ್ರಹ್ಮ
ಮುಕುತಿ ಮಾರ್ಗದಲಿರುವ ಯೋಗಿಯವ ಬ್ರಹ್ಮ 3
ಹುಚ್ಚರಂದದಿ ನೋಡೆ ಹುದುಗಿಕೊಂಡಿಹ ಬ್ರಹ್ಮ
ಅಚ್ಚರಿಯ ಅವನಾಟ ತಿಳಿವವನು ಬ್ರಹ್ಮ
ನಿತ್ಯಕಾಲದಿ ಜ್ಞಾನ ಬೇಕೆನ್ನುವವ ಬ್ರಹ್ಮ
ಕೊಚ್ಚಿತೆಂಬನು ಎಲ್ಲ ಕುಲಜ ಬ್ರಹ್ಮ 4
ದಾಸದಾಸರ ದಾಸನಾದವನೆ ಬ್ರಹ್ಮ
ಈ ದೇಹದಾ ಹಂಗ ತೊರೆದವನು ಬ್ರಹ್ಮ
ಭಾಸುರ ಚಿದಾನಂದನ ಭಜಿಪ ಭಕ್ತನೆ ಬ್ರಹ್ಮ
ವಾಸರಿಲ್ಲವೋ ಈ ವಾಕ್ಯಕೆಂಬುವವ ಬ್ರಹ್ಮ 5
172
ಬ್ರಹ್ಮತಾನೆ ನಿತ್ಯಾ ಬ್ರಹ್ಮತಾನೆ
ಬ್ರಹ್ಮತಾನೆ ನಿತ್ಯಾ ಬ್ರಹ್ಮತಾನೆ
ಬ್ರಹ್ಮ ಪರಾತ್ಪರ ಬ್ರಹ್ಮ ತಾನೇ ಪ
ಕಾಲು ಕಣ್ಣು ಕೈ ಬಾಯಿ ಕಿವಿ ಮೂಗು ತಾಳಿಕೊಂಡು
ಕಾಲವನಿಲ್ಲಿಯೆ ಕಳೆಯಲು ಬಂದ ಗುರುಮೂರ್ತಿ
ಮೂಲಾಧಾರನೆಂದು ತಿಳಿದುಕೊಳ್ಳಿರಾ ಬ್ರಹ್ಮ ತಾನೇ 1
ಪುತ್ರ ಮಿತ್ರರರು ಕಳತ್ರರಾಗಿ ಬಂಧುವಾಗಿ
ನಿತ್ಯದಾಟವ ಇಲ್ಲಿ ಕಳೆಯಲು ಬಂದ ಬ್ರಹ್ಮ ತಾನೇ 2
ಆಪವಿರಲು ಚಂದ್ರನು ಬಂದ ತೆರನಂತೆ
ಉಪಾಧಿಯಿಂದ ಚಿದಾನಂದ ಬಂದ ಬ್ರಹ್ಮತಾನೇ
ಉಪಾಧಿಯಿಂದ ಚಿದಾನಂದ ಬಂದ ಗುರುಮೂರ್ತಿ
ಉದಾಧಿ ಹರನೆಂದು ತಿಳಿದುಕೊಳ್ಳಿ ಬ್ರಹ್ಮತಾನೆ 3
173
ಬ್ರಹ್ಮಾಸ್ತ್ರ ಬ್ರಹ್ಮಾಸ್ತ್ರ ಎಂಬ ಮಾತೆಂತನೆ
ಬ್ರಹ್ಮಾಸ್ತ್ರ ಬ್ರಹ್ಮಾಸ್ತ್ರ ಎಂಬ ಮಾತೆಂತನೆ
ಬದಲಿಲ್ಲದಿರುವುದೇ ಬ್ರಹ್ಮಾಸ್ತ್ರ
ಬ್ರಹ್ಮಾಸ್ತ್ರಕೆ ಬ್ರಹ್ಮಾಸ್ತ್ರವೇಯಲ್ಲದೆ
ಬ್ರಹ್ಮಾಸ್ತ್ರವೇ ಬ್ರಹ್ಮಾಸ್ತ್ರವು ಬ್ರಹ್ಮಾಸ್ತ್ರ ಪ
ಪಾಶುಪತಾಸ್ತ್ರ ನಾರಾಯಣಾಸ್ತ್ರವನೆಲ್ಲ
ಪೂರ್ಣಾಹುತಿಯ ಕೊಂಬುದೇ ಬ್ರಹ್ಮಾಸ್ತ್ರ
ವಾಸವಾದಿತ್ಯ ಆಗ್ನೇಯಾಸ್ತ್ರವನೆಲ್ಲ
ಬೆದರದೇ ನುಂಗುವುದೆ ಬ್ರಹ್ಮಾಸ್ತ್ರ 1
ಬ್ರಹ್ಮರಂದ್ರವೆ ಅದು ರಾಜಯೋಗ ಸ್ಥಾನ
ಬ್ರಹ್ಮರಂದ್ರದ ನಿವಾಸಿ ಬ್ರಹ್ಮಾಸ್ತ್ರ
ಬ್ರಹ್ಮದೇವರ ಜಿಹ್ವೆ ಹಿಡಿದತುರೀಯ ದೇವತೆ
ಬ್ರಹ್ಮಾಸ್ತ್ರವೇ ಅಸ್ತ್ರವು ಬ್ರಹ್ಮಾಸ್ತ್ರ 2
ಬ್ರಹ್ಮ ತುರೀಯಾತೀತ ಬ್ರಹ್ಮಾಸ್ತ್ರ
ನಿರ್ಗುಣ ಬ್ರಹ್ಮಾಸ್ತ್ರನ ಸ್ವರಾಟ್ ಬ್ರಹ್ಮಾಸ್ತ್ರ
ಬ್ರಹ್ಮ ಚಿದಾನಂದ ಬ್ರಹ್ಮಾಸ್ತ್ರವೆನಿಸಿತು
ಬ್ರಹ್ಮಾಸ್ತ್ರವೇ ಬಗಳ ಬ್ರಹ್ಮಾಸ್ತ್ರ 3
174
ಬ್ರಹ್ಮಾಸ್ತ್ರದ ನಿಜವನು ನಾ ಪೇಳುವೆ
ಬ್ರಹ್ಮಾಸ್ತ್ರದ ನಿಜವನು ನಾ ಪೇಳುವೆ
ಬ್ರಹ್ಮಾಸ್ತ್ರವೇ ಬ್ರಹ್ಮವು
ಬ್ರಹ್ಮಾಸ್ತ್ರ ತಾನೆಂದು ಭಜಿಸುವಾತನು
ಬ್ರಹ್ಮಾಸ್ತ್ರವೇ ಆತನು ಬ್ರಹ್ಮಾಸ್ತ್ರ ಪ
ಪೀತಾಂಬರದುಡಿಗೆ ರಾಶಿಯು ಹಾಕಿದ ಎದೆಕಟ್ಟು
ಪೀತವಾಗಿಹುದೇ ಬ್ರಹ್ಮಾಸ್ತ್ರ
ಪೀತವರಣ ಪೀತ ಪುಷ್ಟ ಗಂಧಾನುಲೇಪನ
ಪೀತದಿಂದಿಹುದೇ ಬ್ರಹ್ಮಾಸ್ತ್ರ ಪ್ರೀತಸರ್ವವು ಆಗಿ
ಪ್ರೀತ ಪ್ರೀತೆಯೆ ಆಗಿ ಪೀತಾವರಣವೆ ಬ್ರಹ್ಮಾಸ್ತ್ರ 1
ಬಿಗಿದ ಬತ್ತಳಿಕೆಯು ಎಡಹಸ್ತ ಶಾರ್ಙದಿ
ಝಗಿ ಝಗಿಸುವುದೇ ಬ್ರಹ್ಮಾಸ್ತ್ರ
ತೆಗೆದು ಕೆನ್ನೆಗೆ ಶರವನೆಳೆದು ರೌದ್ರದಿ
ನಿಗಿನಿಗಿಸುವುದೇ ಬ್ರಹ್ಮಾಸ್ತ್ರ 2
ವೀರ ಮಂಡಿಯ ಹಾಕಿ ಖಡ್ಗವ ಸೆಳೆದು
ತೂರತಲಿಹುದೇ ಬ್ರಹ್ಮಾಸ್ತ್ರ
ಕಾರುವ ಕಿಡಿಗಳ ಕ್ರೂರ ದೃಷ್ಟಿಯಲಿ
ಘೋರವಾಗಿಹುದೇ ಬ್ರಹ್ಮಾಸ್ತ್ರ
ಬಾರಿಬಾರಿಗೆ ಹೂಂಕಾರಗೈಯುತ ಅವಡುಗಚ್ಚಿ
ಮಾರಿಯಾಗಿಹುದೇ ಬ್ರಹ್ಮಾಸ್ತ್ರ
ಸಾರ ಕಿಚ್ಚಿನ ಜ್ವಾಲೆ ಭುಗುಭುಗು ಭಟಭಟ
ಎನುತಲಿಹುದದೇ ಬ್ರಹ್ಮಾಸ್ತ್ರ 3
ದಿಸೆಗಳು ಮುಳುಗಿವೆ ಉರಿಯ ಕಾಂತಿಯಲಿ
ರವಿಶತ ಕೋಟೆಯ ರಶ್ಮಿ ಚೆಲ್ಲುವುದೇ ಬ್ರಹ್ಮಾಸ್ತ್ರ
ಪಸರಿಸಿ ಇಹ ಬ್ರಹ್ಮಾಂಡವನಂತವ
ಭಸ್ಮ ಮಾಡುವುದೇ ಬ್ರಹ್ಮಾಸ್ತ್ರ
ನುಸಿಗಳು ಅಸಂಖ್ಯಾದಿ ಬ್ರಹ್ಮರುದ್ರಾದ್ಯರ
ಅಸುವ ಕೊಂಬುದೇ ಬ್ರಹ್ಮಾಸ್ತ್ರ 4
175
ಭಂಗಿ ಹತ್ತಿದೆ ಜ್ಞಾನ ಭಂಗಿ ಹತ್ತಿದೆ
ಭಂಗಿ ಹತ್ತಿದೆ ಜ್ಞಾನ ಭಂಗಿ ಹತ್ತಿದೆ
ನುಂಗಿ ಕಾಮ ಕ್ರೋಧಗಳನ್ನು
ಅಂಗ ಮೆರೆವ ಮರವೆನಿಕ್ಕಿ ಪ
ನಿತ್ಯತೃಪ್ತನು ನಿರಾಕಾರ ನಿರ್ಲಿಪ್ತನು
ಪ್ರತ್ಯಗಾತ್ಮ ಅತ್ಯಾಧಿಕ
ಸತ್ಯಸಂಧನು ತಾನೆ ಎಂಬ 1
ವಿಶ್ವ ನಾಟಕ ಮಹಾವಿಶ್ವದಾಧಾರ
ವಿಶ್ವದೊಳ ಹೊರಗೆಲ್ಲ
ವಿಶ್ವತೃಪ್ತ ತಾನೆ ಎಂಬ 2
ಏನ ಕೇಳುವಿರೋ ನೀ
ವೇನ ಹೇಳುವಿರೋ
ಜ್ಞಾನ ಮೂರುತಿ ಚಿದಾನಂದ
ತಾನೆ ತಾನೆ ಎಂಬ 3
176
ಭವ ಸಂಸಾರ ಶರಧಿಯ ಗುರು ಅಂಬಿಗ
ಭವ ಸಂಸಾರ ಶರಧಿಯ ಗುರು ಅಂಬಿಗ ದಾಟಿಸಿದ
ಶಿವನ ಮಾಡುತಲೆನ್ನ ಮುಕ್ತಿಗೇರಿಸಿದ ಪ
ಬಯಕೆಗಳೆಂಬ ತೆರೆಯು ತಾಪತ್ರಯಗಳೆ ಲಹರಿಯು
ಪ್ರಿಯಗಳೆಂಬುವೆ ನೊರೆಯು ಕ್ಲೇಶವೆಂಬುದೆ ಹರಿಯು 1
ತಿಳಿವು ಇಲ್ಲದ ಮಡುವು ಕಸಿವಿಸಿ ಎಂಬುದೆ ದಡವು
ಬಲು ಅವಿವೇಕವೆ ಗುಡುಗು ಸುಖದುಃಖಗಳೆಂಬುವು ತೆರೆಯು 2
ಸತಿಯೆಂಬುವಳೆ ಮೊಸಳೆ ಸುತರೆಂಬವರೆ ಜಿಗಳೆ
ಅತಿ ಬಗುಳವೇ ನೀರ್ಗೋಳಿ ಮೋಹವೆಂಬುದೆ ಸುಳಿ 3
ಸಂದಣಿಯೆಂಬುವು ಜಲಚರವು ಸಡಗರವೆಂಬುದೆ ತಳವು
ಹೊಂದಿಹ ಚಿಂತೆಯೆ ದಡವು ಸ್ಥಿರವಿಲ್ಲದುದೇ ಗಡುವು 4
ಜ್ಞಾನದ ನಾವೆಗಳಿಂದ ಪ್ರಣವದ ಹುಟ್ಟುಗಳಿಂದ
ದಾಟಿಸಿದ ಚಿದಾನಂದ ಅಂಬಿಗ ಛಲದಿಂದ 5
177
ಭ್ರಮೆಯಿಂದ ಎರಡಾಯ್ತು ಇದ್ದುದೊಂದೆ ವಸ್ತು
ಭ್ರಮೆಯಿಂದ ಎರಡಾಯ್ತು ಇದ್ದುದೊಂದೆ ವಸ್ತು
ಭ್ರಮೆಯಳಿದ ಬಳಿಕ ಮುನ್ನಿಹುದೆ ನಿಜವಸ್ತು ಪ
ಸ್ಥಾಣುವೆಂಬುದು ಪೋಗಿ ಮನುಜ ರೂಪಾದಂತೆ
ಕಾಣಿಸಿತು ರಜ್ಜುವದು ಸರ್ಪದಂತೆ 1
ಕೆಂಪು ಎಂಬುದು ಪೋಗಿ ಕನಕರೂಪಾದಂತೆ
ಇಂಪು ಕಾಣಿಸಿ ಶುಪ್ತಿ ರಜತದಂತೆ 2
ಒಬ್ಬನಿರುತಿಹ ಆತ್ಮ ಜೀವತ್ವವದು
ಭ್ರಾಂತಿ ಒಬ್ಬನೆ ಚಿದಾನಂದ ತಾನೆ ಸತ್ಯ 3
178
ಮಡಿಯಾಗಿ ತಂಗಿ ಮಹಾಲಿಂಗ ಪೂಜೆ
ಮಡಿಯಾಗಿ ತಂಗಿ ಮಹಾಲಿಂಗ ಪೂಜೆ ಮಾಡೆ
ಮುಕ್ತಿ ಸದನಕೇರುವೆ ನೋಡೇ ಪ
ದೇಹವೆಂಬ ಮನೆಯ ಸಾರಿಸೆ
ಮೋಹವೆಂಬ ತಂಗಳ ಮಡಕೆ ಹೊರಗಿರಿಸೆ
ಸೋಹಂ ಎಂಬ ರಂಗವಲ್ಲಿಯನಿಡೆ
ಜ್ಯೋತಿಯನು ಬೆಳಗಿಸೆ ನೀನು 1
ನಾನಾವಾಸನೆಯ ಮೈಲಿಗೆಯನು ಬಿಡೆ
ಮನಮೈಲಿಗೆಯನು ತೊಳೆ
ಸ್ವಾನುಭವದ ಪೀತಾಂಬರವನುಡೆ
ನಾನು ಎಂಬ ಕಸವನು ಗುಡಿಸೆ
ನಾದದ ಸುಖವನು ಅನುಭವಿಸೆ ನೀನು 2
ಧ್ಯಾನ ಮನನೆನಪಿಲ್ಲದಾಗಿ
ಸ್ವಸ್ಥಾನದಲ್ಲಿ ಭಾನುವೀಗ ಬೆಳಗಿದಂತಾಗಿ ನೀನು
ನಾನು ಎಂಬುದು ಅಳಿದು ನೀನೆ
ಚಿದಾನಂದನಾಗಿ ಪೂಜಿಸು 3
179
ಮನವೆಂಬ ಬೇಟೆಗಾರ
ಮನವೆಂಬ ಬೇಟೆಗಾರ
ಹತ್ತಿಂದ್ರಿಯ ನಾಯಿ
ಮನ ಬಂತು ಘೋರವಾದ
ಮನಮನಾದಿ ಮೃಗಂಗಳನು
ಮಹಾಕೊಲೆಯ ಕೊಲ್ಲುತಿಹನು ಪ
ಮಹಾಪ್ರಪಂಚ ಬಲೆಯು
ತಾಪತ್ರಯ ತೊಡಕು
ಮಹಾವಿಷಯ ಮೇವು ಮಹಾವಿಷಯ
ಮೇವಿಗೆ ಬಂದು ಮನುಜಮೃಗಗಳು ಕೆಡವುತಿಹವು 1
ನಯನೇಂದ್ರಿಯಗಳೆಂಬ ನಾಯಿ
ಕಂಡಾಗಲೆ ಹಿಡಿವುದು
ಪ್ರಾಯ ಒಳ್ಳೆಯ ನಾಯಿ
ನಿಯತವಿಹುದಲ್ಲೆ-
ನ್ನದಲೆ ನೆನೆದಾಗಲೇ ಹಿಡಿಯುತಿಹುದು 2
ಒಂದಕ್ಕದೊಂದು ವೇಗವುಹತ್ತೀಪರಿನಾಯಿ
ಬಂದರೆಂತೊಂದು ಸತ್ಯವು
ಬಂದು ಹಿಡಿಯದಿರೆ
ಮತ್ತೊಂದಾದರೆ ಹಿಡಿದು ಕೆಡವುತಿಹುದು 3
ಬಾಹ್ಯದ ಅಡವಿಯೊಳಗೆ
ಮೃಗಂಗಳಿಗೆ ಬಹಬಾಧೆ ನಿತ್ಯದೊಳಗೆ
ಬಾಹ್ಯ ವಿಷಯಪೇಕ್ಷೆಯ
ಬಿಟ್ಟರೆ ಬದಿಯ ನಾಯಿಗಳು ಸೇರದಿಹವು 4
ತನಗೆ ತಿಳಿಯಬೇಕು
ತಾನುಳಿವುದಕೆ ತನಗೇಯಬೇಕು
ತನ್ನ ಚಿದಾನಂದನೆಂದು ತನ್ನ ಕಂಡರೆ ಭಯವಿಲ್ಲ 5
180
ಮರತೆ ನೀ ಕಂಡ್ಯ ಮನವೇ ಎಚ್ಚರವು
ಮರತೆ ನೀ ಕಂಡ್ಯ ಮನವೇ ಎಚ್ಚರವು
ಗುರುವರನ ನೆನೆಯೋ ನೀನು
ಅರಿತು ಸರ್ವಸರ್ವರಲ್ಲಿ ಆತ ತಾನಿಹನೆಂದು
ಹಿಂದು ನೆಲೆಗೊಳಿಸು ಬೇಗ ಪ
ಅಣುಮಹತ್ತಾದನೆಂದು
ಅನಂತ ಗುಣಗಣನೆಯಾದನೆಂದು
ಎಣಿಸೆ ಏಕ ದೇವಾದವನ
ಕುಣಿಕುಣಿದು ನೆನೆದು ಆಡುವಾಡು 1
ಆವಾವಸ್ಥೆಯ ತೋರ್ಪ
ಅವನೆಲ್ಲ ತೀವಿಹನು ಪೂರ್ಣನಾಗಿ
ದೇವದೇವಾದನ ಧೈರ್ಯದಿಂ ಹೃದಯದಲಿ
ಸಾವಧಾನದಲಿ ನಿಲಿಸು ಬಲಿಸು 2
ನಿರುಪಮ ನಿರಾಶಾಪರ ನಾ
ನಿಶ್ಚಿಂತ ನಿರುತ ನಿರ್ಲೇಪನಾ
ಪರಮ ಪಾವನ ಮೂರ್ತಿ ಪದ್ಮಾವತಿ ಶತಕೋಟಿ
ವರ ಚಿದಾನಂದ ಗುರುವಾ ಸ್ಥಿರವಾ 3
181
ಮಾಡುತಿಹ ಸಂಸಾರ ಮಲಿನ ಹೊದ್ದೆದೆಯೋಗಿ
ಮಾಡುತಿಹ ಸಂಸಾರ ಮಲಿನ ಹೊದ್ದೆದೆಯೋಗಿ
ಆಡಲೇನವ ಆನಂದವಿಹ ಸುಖವ ಪ
ಬಾಲ ಶಿಶುಲೀಲೆಗಳ ಬಗೆ ಬಗೆಯ ಲಾಲಿಸುತ
ಶೂಲಧರಸುತರೀಗ ಬಂದರೆನುತ್ತ
ಕಾಲು ಕೈ ಮೋರೆಗಳ ತೊಳೆದುಣಿಸಿ ರಕ್ಷಿಸುತ
ಮೂಲೋಕಕೆನ್ನ ಭಾಗ್ಯ ಮಿಗಿಲು ಮಿಗಿಲೆನುತ 1
ಸತಿ ವಿನೋದವ ಮಾಡೆ ಸರಸವನೆ ಮಾಡುತ್ತ
ಅತಿ ಆದಿವಸ್ತು ತಾನೀಕೆಯನುತಾ
ಮತಿಭ್ರಾಂತನಾಗದಲೆ ಮಂಗಳನು ತಾನೆನುತ
ಮತಿಯಾಟ ಬ್ರಹ್ಮವಿದು ಇದುವೆ ಎನ್ನುತ್ತ 2
ಬಡತನವು ಬಂದು ಕಾಡುತ್ತಲಿರೆ ನೋಡುತ್ತ
ದೃಢಬುದ್ಧಿಯಾಗಿ ತಾನೀಗಲಿರುತ
ಬಿಡದೆ ರಕ್ಷಿಪ ವಿಶ್ವಕುಟುಂಬಿಯಹನೆನುತ
ಪಡದೆ ಆಯಾಸ ಸುಖವಾಸಿಯಾಗಿರುತ 3
ಬಡಿದಾಡುತಿಹ ಗೃಹದ ಜನರುಗಳ ನೋಡುತ್ತ
ಬಿಡು ನಿನ್ನ ಬುದ್ಧಿಯನು ಎಂದು ಹೇಳುತ್ತ
ಕಡೆಗಣಿಸಿದವರ ಅತ್ತಿತ್ತ ಮಾಡುತ್ತ
ಕಡಹ ನಿಶ್ಚಲದಿಂದ ಮತಿಶಾಂತವಿರುತ 4
ನಿಂದ್ಯದೂರಪವಾದವನು ಕೇಳುತ್ತ
ಮಂದ ಶ್ರವಣನೋ ಎಂಬ ತರದಲಿರುತ
ನಿಂದು ದೃಢ ಚಿತ್ತದಲಿ ನಿರ್ಲೇಪ ತಾನೆನುತ
ಬಂಧಹರ ಚಿದಾನಂದ ತಾನಾದಗೆನುತ 5
182
ಮಾರಿಯನು ತೋರುತಿಹೆನು ಅದನೀಗ
ಮಾರಿಯನು ತೋರುತಿಹೆನು ಅದನೀಗ
ನಾರಿ ಎಂದೆಂಬರಯ್ಯ ಪ
ಸೀರೆ ಕುಪ್ಪಸವನುಟ್ಟು
ಸಿಂಗರದಿ ತೋರ ಕಂಕಣವನಿಟ್ಟು ಅಯ್ಯ
ಮೂರಳೆಯ ಕಟ್ಟಾಣಿ ಕಟ್ಟಿಯೇ
ಮೋರೆ ಮುರಕಿಸುತಿಹುದು ಅಯ್ಯ 1
ಚಳ್ಳತುಂಬುಗಳಿಂದ
ಚವುರಿ ಬೆಳ್ಳಿಯ ಬಳೆಗಳಿಂದ ಅಯ್ಯ
ಮುಳ್ಳು ಗಜ್ಜೆಗಳ ಧರಿಸಿ ಮನೆಯೊಳಗೆ
ಹಲ್ಲು ಕಡಿಯುತಲಿಹುದು ಅಯ್ಯ 2
ಓಲೆ ಮಾಡಿಸು ಎಂಬುದು
ವರಹಕೆ ಬಾಳುವೆ ನೋಡಿರಿ ಎಂಬುದಯ್ಯ
ಹೇಳುವುದು ಕಿವಿಯೊಳಗೆ ಲೋಭ
ಕಾಲು ಕೈ ತಿರುಹುವುದು ಅಯ್ಯ 3
ಕರೆಕರೆಯ ಮಾಡುತಿಹುದು ತಾಯಿಯ
ಹೊರಡಿಸು ಮನೆಯಿಂದಲೆಂಬುದಯ್ಯ
ಹರನ ಚಿಂತೆಗೆ ಹಾನಿಯು ಇದರಿಂದ
ನರಕ ಬಹಳವ ತಿರುಗುವೆ ಅಯ್ಯ 4
ನಾರಿಯೆನಿಸಿಹುದೆ ಮೃತ್ಯು
ಇದನೀಗ ದೂರ ಮಾಡಿದನಾದರೆ ಅಯ್ಯ
ಸೇರುವುದು ಸರ್ವಮುಕ್ತಿ
ಚಿದಾನಂದನಿರೆ ತಾನೆಯಹುದು ಅಯ್ಯ 5
183
ಮುಕ್ತಿ ಬೇರಿಲ್ಲಯ್ಯ ಸಾಯುಜ್ಯಮುಕ್ತಿ ಬೇರಿಲ್ಲವೋ
ಮುಕ್ತಿ ಬೇರಿಲ್ಲಯ್ಯ ಸಾಯುಜ್ಯಮುಕ್ತಿ ಬೇರಿಲ್ಲವೋ
ಮುಕ್ತಿ ಬೇರಿಲ್ಲ ಭಕ್ತಾ ಭಕ್ತ ವಿರಕ್ತರ
ಪಾದ ನೆನೆಹು ಎಂಬುದು ನಿಜ ಪ
ನಿತ್ಯನಿರ್ಗುಣಧಾರನ ನಿರಾಲಂಬ
ಪ್ರತ್ಯಯ ಮಂಗಳಕಾರನ
ಸತ್ಯಸಂಪದನಿಂದ ಸುಗುಣಾದಿವರ್ದಿಪ
ನಿತ್ಯಾನಂದರ ನೆನಹು ಎಂಬುದು ನಿಜ 1
ಆಶಾಪಾಶಗಳಳಿದುದು ಅಹಂ ಎಂಬ
ವಾಸನೆಯ ಕಳೆದು ದೋಷರಹಿತವಾದ
ದಾಸರ ದಾಸನೆಂದೆನಿಪ ಸುದಾಸನೆಂಬುವನೆ ನಿಜ 2
ತರಣಿ ಕಿರಣಾಬ್ಧಿಯ ತಾಳಿರುವಂಥ
ಗುರು ಚಿದಾನಂದ ಮೂರ್ತಿಯ
ಸಿರಿಚರಣವ ಕಂಡು ಶೀಘ್ರದಿ ಪೂಜಿಸೆ
ಗುರುತಾನದನೆ ಗುಣನೆನೆವುದೆ ನಿಜ 3
184
ಮುಟ್ಟು ಚಟ್ಟೆಂದು ನಗುವಯ್ಯ
ಮುಟ್ಟು ಚಟ್ಟೆಂದು ನಗುವಯ್ಯ
ನಿನ್ನ ತಿಳಿಯಯ್ಯ
ಮುಟ್ಟು ಚಟ್ಟೆಂಬುದು ನಗುವಯ್ಯ
ಮುಟ್ಟಿದು ಅದುದು ನಿನ್ನಿಂದಲೆ
ಮುಟ್ಟಿಗೆ ಸಾಕ್ಷಿಯು ನೀ ಪರವಸ್ತು ಪ
ತಿಂಗಳು ತಿಂಗಳು ರಕ್ತಕಲಕು ಘಟ್ಟಾಗಿ ಬಲಿಶು
ಇಂಗಾ ಇಂಗಡದ ವಯವ ಜಿಗಿತು
ಅಂಗಾಯಿತು ತೆರದ
ಅಂಗವ ಮುಟ್ಟಿರಿ ಮುಟ್ಟಿರಿ ಎಂದು
ಮಂಗನ ತೆರದಲಿ ಕುಣಿವುದು ಮುಟ್ಟು 1
ಮೃಗಜಲದಂತೆ ಮಾಯೆ ಮುಟ್ಟು
ಅದುದು ಯಥೇಷ್ಟ
ಬಗೆಬಗೆ ರೂಪಳವಟ್ಟು
ತೋರಿದವರದುರಿಟ್ಟು
ನಗಸಾಗರನದಿ ನರಸುರ ಕ್ರಿಮಿಪಶು
ನಗಧರ ಹರವಿಧಿ ಲೋಕವೆ ಮುಟ್ಟು 2
ಮುಟ್ಟು ಭಟ್ಟರು ಹೇಳುವಂತಿಲ್ಲ
ಬೆಳಗಿದುದು ಎಲ್ಲ
ಅಷ್ಟಾಗಿ ಕಳೆಥಳಿಥಳಿಪುದೆಲ್ಲ
ತನ್ನರಿದವ ಬಲ್ಲ
ಶಿಷ್ಟ ಚಿದಾನಂದ ನೀನೆಂದು ಕಾಣಲು
ಮುಟ್ಟಿಗೆ ಜಾಗವಿಲ್ಲ ನೀಚರ ವಸ್ತು ನಿಜ ಬ್ರಹ್ಮ 3
185
ಮುತ್ತು ಬಂದಿದೆ ಕೊಳ್ಳಿರಣ್ಣಾ ಅದಕೆ
ಮುತ್ತು ಬಂದಿದೆ ಕೊಳ್ಳಿರಣ್ಣಾ ಅದಕೆ
ವೆಚ್ಚವೇನಿಲ್ಲ ಬೆಲೆಯಾಗದಣ್ಣಾ ಪ
ಥಳಥಳ ಹೊಳೋಯುತದಣ್ಣ
ಅದು ಬಲ್ಲ ಜಾಣಂಗಿನ್ನು ಬಯಲೊಳಗಣ್ಣ
ಕೂದಲ ಎಳೆಗಿಂತ ಸಣ್ಣ ಅದು
ಬಣ್ಣ ಬಣ್ಣದ ಬ್ರಹ್ಮದ ಲೋಕಣ್ಣ 1
ತನು ಎಂಬ ತಕ್ಕಡಿ ಪಿಡಿದು
ಆದಿ ಶರಣರು ತೂಗ್ಯಾರು ವಾಸನೆ ಕಳೆದು
ಮನವೆಂಬ ಮಣಿದಾರ ಪಿಡಿದು
ಲೋಕ ಹೋಗದೆ ತೂಗ್ಯಾರು ಯೋಗ ಮಾಡಿ ಅವರು 2
ಮುತ್ತಿನ ಮಹಿಮೆ ಮುಂದದ
ಇದರ ಗೊತ್ತು ತಿಳಿಯದೆ ಮಂದಿ ಸತ್ತುಹೋಗೇದ
ಸುತ್ತಮುತ್ತಲ ಸುಳಿವುತಲದು
ಚಿದಾನಂದನ ಚಿತ್ತದೊಳಗದ 3
186
ಮುದಕಿಯ ಕಂಡರೆ ಸೇರದೆನಗೆ
ಮುದಕಿಯ ಕಂಡರೆ ಸೇರದೆನಗೆ ಮುದಕಿಯ ಕಂಡರೆ ಸೇರದೋ
ಸದಮಲಪರತತ್ವದ ಗುರಿಯ ತೋರದಂತೆ ಮಾಡಿದ ಪ
ಒಬ್ಬನನೊಯ್ದಿಬ್ಬರ ಮಾಡಿ ಓಡಿಶ್ಯಾಡುವ ಮುದಕಿ
ಹಚ್ಚಿಕೊಂಡು ಜಗವೆನಲ್ಲ ಹರಿದು ಆಡುವ ಪಾಡುವ ಮುದುಕಿ 1
ನಿಲ್ಲದೆ ಸ್ವರ್ಗಕೆ ನರಕಕೆ ಮನುಜರನೆಲ್ಲರ ತಿರುಗಿಪ ಮುದುಕಿ
ಎಳ್ಳಷ್ಟೂ ಎಚ್ಚರ ಹುಟ್ಟಿಸದ ಎಡವಟ್ಟಾದ ಮುದುಕಿ 2
ಇಂದ್ರಜಾಲವ ಖರೆಯಂದದಲಿ ಎಸಗಿಕೊಂಡಿಹ ಮುದುಕಿ
ಬಂಧಿಸಿಯಿಹಳು ಊನವಿಲ್ಲದಲೆ ಬಾಜಿಗಾರ ಮುದುಕಿ 3
ಏನೇನಿಲ್ಲವು ತನಗದು ರೂಪವು ಎಲ್ಲವು ಆದ ಮುದುಕಿ
ತಾನಾರೆಂದು ತನ್ನನ್ನು ತಿಳಿಯೆ ತನ್ನೊಳಗಡಗಿಹ ಮುದುಕಿ 4
ಮುನ್ನ ಅನಾದಿಯು ಎನಿಸಿಕೊಂಡರು ಮೂಲಮಾಯೆ ತಾ ಮುದುಕಿ
ತನ್ಮಾತ್ರಾದ ಚಿದಾನಂದ ಬ್ರಹ್ಮದಿ ತೋರುತ ಅಡಗುವ ಮುದಕಿ 5
187
ಮುಳುಗಿದನು ಯೋಗಿ ಮುಳುಗಿದನು
ಮುಳುಗಿದನು ಯೋಗಿ ಮುಳುಗಿದನು
ಒಳ್ಳೆ ಬಲಹುಳ್ಳ ನಾದ ಸಮುದ್ರ ಮಧ್ಯದಿ ಯೋಗಿ ಪ
ಸತಿ ಮೂವರ ಸಮನಿಸಲಾರದೆ
ಪಿತರೀರ್ವರ ಕರಕರೆಯನು
ನೀಗಿಸುತರೈವರೆನಿಪರು ಮಾತು ಕೇಳದಿರೆ
ಮತಿಯೇನು ಹೇಳಲಿ ಎಲ್ಲ ಸಂಗವ ಬಿಟ್ಟು 1
ಜೇಷ್ಟರಾರುವರ ಕಾಟವ ತಾಳದೆ
ದುಷ್ಟನಾದಿನಿಯ ನಾಲ್ವರ ತೊರೆದು
ಅಷ್ಟಮಾತುಳರಪ್ರಯೋಜಕವೆಂದು
ಕಷ್ಟರಿವರು ಎಂದು ಮನವ ಭೀತಿಯ ಬಿಟ್ಟು 2
ಇಂತು ಎಲ್ಲವ ಬಿಟ್ಟು ಚಿಂತಕ ತಾನಾಗಿ
ಭ್ರಾಂತು ಎಳ್ಳಿನಿತು ಒಬ್ಬರೊಳಿಲ್ಲದೆ
ಚಿಂತಕನು ಚಿದಾನಂದ ಮೂರುತಿಯನು
ಅಂತು ಬಲಿದು ಎನ್ನ ದೇಹ ಮರೆವಗಿಳಿ 3
188
ಮೋರೆಯ ಕಾಂತಿಗೆ ಹಚ್ಚಿರೋ ಕಿಚ್ಚಾ
ಮೋರೆಯ ಕಾಂತಿಗೆ ಹಚ್ಚಿರೋ ಕಿಚ್ಚಾ
ಮರುಳಾಗುತಿರುತಿಹನವ ಹುಚ್ಚಾ ಪ
ಯೋನಿಯ ಮುಖ ನೋಡೆ ಎಲ್ಲಕೆ ಹೇಸಿಕೆ
ತಾನೆ ರಕ್ತವ ನಿತ್ಯತವಿಸುತಿಹುದು
ಏನೇನು ಶುಚಿಯಲ್ಲ ಇಂತು ವಿವೇಕವಿಲ್ಲ
ಏನು ಕಾರಣ ಮೋಹ ಪಡುವರೋ 1
ನರಕಾಣುವ ಪೂರಿತವದು ಭಗವದು
ಭರದಿ ದುರ್ಗಂಧ ವಾಸನೆ ಬಹುದು
ಸರಸಿಚೋದ್ಭವನಾಗಲಿ ಶಿವನೆ ತಾನಾದರಾಗಲಿ
ಮರುಳೆ ಪುನಾ ಜನ್ಮಕೆ ತಾರದೆ ಬಿಡುವುದೇ 2
ಚಕ್ರಿ ಖಂಡವು ಆಸ್ತಿ ಚದುರಸ್ತಿರೊಪಾಗಿ
ಕರ್ಮವೆಂಬುದಕೆ ಸ್ಥಾನವಾಗಿಹುದು
ನಿರ್ಮಳ ಚಿದಾನಂದ ವಸ್ತುವ ತಿಳಿಗೊಡದ
ಧರ್ಮದಾ ಪಥದಲ್ಲಿ ಕೆಡಹುತಿಹುದು 3
189
ಯಮದೂತರು ನರನನು ಎಳೆದೊಯ್ದುದನು
ಯಮದೂತರು ನರನನು ಎಳೆದೊಯ್ದುದನು
ಎಲ್ಲರಿಗೆ ಹೇಳುವೆನು
ಕುಮತಿಯಲಿ ಸದ್ಗುರು ಚರಣವ ಹೊಂದದ
ಕೇಡಿಗಾಗುವ ಫಲಗಳನು ಪ
ಮುರಿದ ಮೀಸೆಯಲಿ ಮಸಿದೇಹದಲಿ
ಉರಿಹೊಗೆ ಹೊರಡುವ ಉಸುರಿನಲಿ
ಕರುಳು ಮಾಲೆಯಲಿ ಕೋರೆದಾಡೆಯಲಿ
ಜರೆಮೈ ಹಸಿದೊಗಲುಡುಗೆಯಲಿ 1
ಝಡಿವ ಖಡುಗದಲಿ ಹೂಂಕಾರದಲಿ
ಕಡಿದವಡೆಯಲಿ ಹುರಿಮೀಸೆಯಲಿ
ಬಿಡಿಗೂದಲಲಿ ಕರದ ಪಾಶದಲಿ
ಸಿಡಿಲ ತೆರೆದ ಬಿಡುಗಣ್ಣಿನಲಿ 2
ಮಿಡುಕುತ ಸತಿಸುತರನು ಆಪ್ತರನು
ಹಿಡಿದೊಪ್ಪಿಸುತಿಹ ವೇಳೆಯಲಿ
ಕಡಿಯಿರಿ ಹೊಡಿಯಿರಿ ತಿನ್ನಿರಿ ಎನುತಲಿ ಧುಮುಕಲು
ಬಿಡುವನು ಪ್ರಾಣವ ಕಾಣುತಲಿ 3
ಯಾತನೆ ದೇಹವ ನಿರ್ಮಿಸಿ ಅದರೊಳು
ಪಾತಕ ಮನುಜನ ಹೊಗಿಸುತಲಿ
ಘಾತಿಸುವು ನಾನಾಬಗೆ ಕೊಲೆಯಲಿ
ಘನನುಚ್ಚು ಕಲ್ಲೊಳಗೆ ಎಳೆಯುತಲಿ 4
ಈ ತೆರವೈ ಈ ಧರ್ಮ ಶಾಸ್ತ್ರವ
ನೀತಿಯ ತೆರದಲಿ ಮಾಡುತಲಿ
ಪಾತಕವನು ಬಹುಪರಿ ಶಿಕ್ಷಿಪರು
ದಾತ ಚಿದಾನಂದನಾಜ್ಞೆಯಲಿ 5
190
ಯೋಗಕ್ಕೆ ಸ್ಥಿತಿ ನಾಲ್ಕೇ ಒಡವೆ
ಯೋಗಕ್ಕೆ ಸ್ಥಿತಿ ನಾಲ್ಕೇ ಒಡವೆ
ಯೋಗಕ್ಕೆ ಈ ನಾಲ್ಕು ಇಲ್ಲದಿದ್ದರೆ ಅದು ಅಡವಿ ಪ
ಸುಸುಖ ಬುದ್ಧಿಯ ತಾಳು ಎಲ್ಲ ವ್ಯವಹಾರ ತಾಳ್ದು
ಹಸಿವೆ ಎಂಬುದು ನೀಗಿ ಮೌನಕ್ಕೆ ಮನಸಾಗಿ
ಅಸನವಿಕ್ಕಿದರುಂಡು ಸಾತ್ವಿಕವ ಕೈಗೊಂಡು
ಉಸುರೆ ಪ್ರಥಮ ಸ್ಥಿತಿ ಇದುವೆ ಪಶುಸಿದ್ಧಿ 1
ಕರ್ಮಂಗಳನ ಸುಟ್ಟು ವಿಧಿ ನಿಷೇಧಗಳ ಬಿಟ್ಟು
ನಿರ್ಮಳತ್ವವ ತಾಳಿ ಪಾಪ ಪುಣ್ಯವ ದೂಡಿ
ದುರ್ಮತಿ ಸನ್ನತಿಗಳಿಲ್ಲ ದೋಷ ಭೂಷಣವಿಲ್ಲ
ಧರ್ಮವೆರಡನೆಯ ಸ್ಥಿತಿ ಇದುವೆ ಶಿಶುಸ್ಥಿತಿ 2
ಅಂತರವೆ ಸಹ್ಯವಾಗಿ ಬ್ರಾಂತ್ಯ ಅಸಹ್ಯವಾಗಿ
ನಿಂತು ಕಣ್ಣು ಮುಚ್ಚಿ ಕುಳಿತು ಮೈಯ ಮರೆಯುತ
ಸಂತತಾನಂದದ ಬೆಳಗ ತೋರುತಿರೆ ನಿತ್ಯಬೆಳಗು
ಇಂತಿದು ಮೂರನೆಯ ಸ್ಥಿತಿ ಇದುವೆ ತೂಕಡಿಸುವ ಸ್ಥಿತಿ 3
ಧ್ಯಾನವೆಂಬುದ ನೀಗಿ ಧಾರಣೆಯದು ಹೋಗಿ
ಹೀನ ಮೈಲಿಗೆ ತೊಳೆದು ಆತ್ಮ ಜ್ಯೋತಿಯು ಹೊಳೆದು
ತಾನೆ ಮಲಗಿಹನು ರಾತ್ರೆ ದಿವಗಳ ಕಾಣ
ಇದುವೆ ನಾಲ್ಕನೆಯ ಸ್ಥಿತಿ ಇದುವೆ ನಿದ್ರಾಸ್ಥಿತಿಯು 4
ಒಂದರಿಂದ ಒಂದರಂತೆ ಇವನು ಸಾಧಿಸಬೇಕು
ಒಂದಲ್ಲದಿರೆ ನಿರ್ವಿಕಲ್ಪ ಸಮಾಧಿ ತಾನಿಲ್ಲ
ಸಂದುಗೊಂದಿನ ಹಾದಿಯಲ್ಲ ವಿಹಂಗ ಪಥ
ಬಂಧ ಹರನು ಚಿದಾನಂದನೆ ತಾನಂಹನು 5
191
ಯೋಗಿ ಬಂದ ಕಣೇ ಚಿದಾನಂದ ಯೋಗಿ ಬಂದ ಕಣೇ
ಯೋಗಿ ಬಂದ ಕಣೇ ಚಿದಾನಂದ ಯೋಗಿ ಬಂದ ಕಣೇ
ಪೋಗಿ ಮಾಗಿಯು ವಸಂತ ಬಂದಂತೆ
ತಾನಾಗಿ ಭಕುತ ಜನ ಹೃದಯದಾಗರಕೆ ಪ
ಶಾಂತಕುಂಡಲಗಳನು ತೂಗುತ
ಸ್ವಾಂತನಿರ್ಮಳ ಕೌಪವ
ಸಂತಸದಲಿ ಬಗಿದಳವಡಿಸಿಯ ವಿ-
ಶ್ರಾಂತ ಸುಭಸಿತವ ಪೂಸಿ ರಂಜಿಸುತ್ತಿಪ್ಪ 1
ನಿಷ್ಕಲ ಹೃದಯದಲಿ ಒಲೆಯುತಿಪ್ಪ
ಪುಷ್ಕಲ ಜಪಮಾಲೆಯ ಮುಸುಕಿ ನಿಂದಲಿ
ಮಹಾಪ್ರಳಯಂಗಳೆಣಿಸುತ್ತ
ಪುಷ್ಕರ ಶತಕೋಟಿ ತೇಜನಾಚಿಸುತಿಪ್ಪ 2
ಇಹಪರ ಪಾದುಕೆ ಮಾಡಿ ಮೆಟ್ಟುತ
ಅಹಿಧರ ಬೆಳಗುತಲಿ ವಿಹಿತದಿಂದಲಿ
ಬ್ರಹ್ಮಗಾನವ ಮಾಡಲು ವಿಷ್ಣು
ವಹಿಸೆ ಅಮೃತ ಕಳಶದ ಕಳೆಯಸೆಯಲು 3
ವಿವೇಕ ಧೈರ್ಯರೆಂಬ ಚಡಿಕಾರರು
ತಾನೆ ಮುಂಗಡೆಯಲಿರ್ದು
ಸಾವಧಾನದಿ ಪಥವಬಿಡಿಸುತಿರಲು ಸರ್ವ
ದೇವೆಂದು ಪೊಗಳಿದ ವಿಜಯ ಭಟ್ಟಾದೀಶ
ಇಂತು ವೈಭವದಿಂದ ಚಿದಾನಂದ
ನಿಂತ ನಿಜಸ್ಥಿರವಾ ಸಂತಸದಲ್ಲಿ ಕಂಡು ಸರ್ವವ ಮರೆತು ನಾ
ನಂತು ಇಂತೆನಲೇನ ಆತ ತಾನಾಗಿರ್ದ 4
192
ಯೋಗಿ ಬಿಟ್ಟರೆ ಬಿಡದು ನಾದವು
ಯೋಗಿ ಬಿಟ್ಟರೆ ಬಿಡದು ನಾದವು
ಯೋಗಿ ಬಿಟ್ಟರೆ ಬಿಡದು ನಾದವು
ಕೂಗುತಿಹುದು ಸರ್ವಕಾಲದಿ
ಜಾಗಟೆ ಕೊಳಲು, ತಮ್ಮಟೆ
ಚಂಗು ಕೊಂಬು ತಾಳರವಗಳಿಂದ ಪ
ಮಲಗೆ ಕುಳಿತರೆ ಕೂಗುತಿಹುದು
ನಿಲಲು ನಡೆಯೆ ಕೂಗುತಿಹುದು
ಒಲಿದು ಮಾತುಗಳಿರಲಿಕೆ
ಬಲಿದು ಧುಂಧುಂ ಎಂದು ಭೇರಿಯ ಶಬ್ದರವಗಳಿಂದ
ನಿಲದೆ ಮುರಿದು ಮದವ
ಸುಲಭ ಸುಖವ ಸುರಿಸುತ 1
ಕಣ್ಣು ಮುಚ್ಚಲು ಕೂಗುತಿಹುದು
ಕಣ್ಣು ತೆರೆಯೆ ಕೂಗುತಿಹುದು
ಉಣ್ಣುತಲಿ ತಾನು ಇರಲಿಕೆ
ಘಣ್ಣ ಘಣ್ಣ ಘಣ್ಣಲು ಎಂದು ಘಂಟೆ ಶಬ್ದದ ರವಗಳಿಂದ
ಮಣ್ಣಗೂಡಿಸಿ ಶೋಕ ಮೋಹವ
ಪುಣ್ಯರವವ ಬೀರುತ 2
ಸುಮ್ಮನಿರಲು ಕೂಗುತಿಹುದು ಸುಳಿದಾಡೆ ಕೂಗುತಿಹುದು
ಬಮ್ಮನೊಮ್ಮೆ ಮರೆತು ಇರಲಿಕೆ
ಘಮ್ಮ ಘಮ್ಮ ಘಮ್ಮ ಎಂದು ಶಂಖ ಶಬ್ದದ ರವಗಳಿಂದ
ಹಮ್ಮುವಾಸನ ಕ್ಷಯವಮಾಡಿ
ನಿರ್ಮಲತ್ವವ ತೋರುತ 3
ಅರುಣಕಾಲದಿ ಅಸ್ತಕಾಲದಿ ಅವಸ್ಥಾತ್ರಯ ಕಾಲದಿ
ಅರಗಳಿಗೆ ಕ್ಷಣ ಮೂಹೂರ್ತದಿ
ಸರಿಗರಿ ಗಮಪ ಎಂದು ಸ್ವರಮಂಡಲರವಗಳಿಂದ
ತರಿದು ಜನನ ಮರಣವನ್ನು ತೇಜ ಬಿಂದು ಸುರಿವುತ 4
ಇಂತು ನಿತ್ಯ ಕಾಲದಿ ಬಿಡದೆ
ಸಂತತದಲಿ ಹಾಡಿಪಾಡಿ
ನಿಂತು ಚಾಕರಿಯನೆ ಮಾಡುತ
ಚಿಂತಕರನುತಾ ಚಿದಾನಂದನಾಗಿ ತೋರ್ಪ ಯೋಗಿಯನ್ನು
ಅಂತ್ಯವಿಲ್ಲದಾನಂದಪಡಿಸಿ ಆಶೀರ್ವಾದವ ಪಡೆಯುತ 5
193
ಯೋಗಿಗದ್ಯಾತಕೆ ತಳ್ಳಿ ಸಂಸಾರಬಳ್ಳಿ
ಯೋಗಿಗದ್ಯಾತಕೆ ತಳ್ಳಿ ಸಂಸಾರಬಳ್ಳಿ
ಯೋಗಿಗದ್ಯಾತಕೆ ತಳ್ಳಿ ಯೋಗಿಸು
ನಿಶ್ಚಲಯೋಗಿ ಸುನಿರ್ಮಲ
ಯೋಗಿ ಸುಖೋನ್ನತಯೋಗಿ ಚಿದಾನಂದ ಪ
ನಿದ್ರೆಯಿಂದಲಿ ಮೈಯ ಮರೆತು
ನಿರ್ಗುಣದೊಳು ಬೆರೆತು
ಶುದ್ಧಮಂಡಲದಂತೆ ಪೊಳೆದು
ಸುಖದುಃಖಗಳನುಳಿದು
ಶುದ್ಧವಿಶುದ್ಧ ಚಿನ್ಮಾತ್ರವೇ ಎಂಬ
ಬದ್ಧಹರನಾಗಿ ಭಾಗ್ಯೋದಯನಾದ 1
ಆನಂದ ಮೂರ್ಛಿತನಾಗಿ
ಅಹುದಹುದಹುದಾಗಿ
ಧ್ಯಾನಮೌನಗಳವು ಪೋಗಿ
ಧಾರಣೆಯನು ನೀಗಿ
ಜ್ಞಾನಂಜ್ಞೇಯಂ ಜ್ಞಾತೃವು ತೊರದೆ
ಸ್ವಾನಂದಾಮೃತ ಶರಧಿಯೊಳ್ ಮುಳುಗಿದ 2
ಏನೇನರಿಯನು ತುರಿಯ
ಎರಡೆಂಬುದನರಿಯ
ಮೌನಮೂರುತಿ ಅದನು ಅರಿಯ
ತಾನೆ ತಾನೆ ತಾನಾಗಿರುತಲಿ
ತಾನೆ ಚಿದಾನಂದ ಗುರು ತಾನೆ ಆದ 3
194
ಯೋಗಿಗೆ ಸೃಷ್ಟಿ ಬರುವುದೆಂತು ವಿದ್ಯದಲಲ್ಲದೆ
ಯೋಗಿಗೆ ಸೃಷ್ಟಿ ಬರುವುದೆಂತು ವಿದ್ಯದಲಲ್ಲದೆ
ಯೋಗ ವಿದ್ಯೆದಲ್ಲಿ ಎಂತು ಅನ್ನಬಹುದೆ ಇಂತು
ಯೋಗಿಯೆ ಈಶ್ವರ ತಾನೀಗೇಕೆ
ಯೋಗಿಯು ಈಶ್ವರ ಬೇರೆ ಎನೆ ನರಕವು ಪ
ಆಲಿಯು ನಿಂತೆ ಆಲಿಯ ಗೊಂಬೆಯು ತಿರುಗದಲಿರಬೇಕು
ಆಲಿಯು ಮುಚ್ಚದೆ ಆಲಿಯು ರೆಪ್ಪೆಯು ಬಡಿಯದಲಿರಬೇಕು 1
ಅನಿಮಿಷ ದೃಷ್ಟಿಯಂದಲಿ ಬ್ರಹ್ಮವ ಆಲಿಸುತಿರಬೇಕು
ಅನಿಮಿಷದಂದದಿ ಕಣ್ಣಿನ ಗುಡ್ಡೆ ತಿರುಗದಲಿರಬೇಕು 2
ದೃಷ್ಟಿಯು ಕುಳಿತಾ ದೃಷ್ಟಿಯು ಮುಂದಕೆ ಸಾಗಲಿರಬೇಕು
ದೃಷ್ಟಿಯು ತಾನೆಡಬಲಕೆ ನಲಿಯದೆ ದೃಷ್ಟಿಯು ಇರಬೇಕು 3
ಕುಳಿತಾ ಸ್ಥಳವು ತಪ್ಪಲು ಮೆತ್ತೆಯು ಕುಳಿತುಕೊಳ್ಳಬೇಕು
ಥಳಥಳ ಹೊಳೆಯುತ ಬೆಳಗದ ಪಸರಿಸಿ ಗೂಢನಿರಲುಬೇಕು 4
ಉದಯಾಸ್ತಮಾನವು ದಿವರಾತ್ರಿಯುಡಗಿ ಇರಬೇಕು
ಚಿದಾನಂದ ಸದ್ಗುರು ತಾನಾಗಿಯೆ ತಾನೆ ಇರಬೇಕು 5
195
ಯೋಗಿಯ ಲಕ್ಷಣವಿದೆ
ಯೋಗಿಯ ಲಕ್ಷಣವಿದೆ
ಯೋಗಿಯ ಲಕ್ಷಣ ತಿಳಿಯದಡೆ ಇವನಿಂತು ಬಲ್ಲ ಪ
ಮೌನವೆಂಬುದು ಬಹಳ ಏನೇನೆಂದರು ಕೇಳ
ಕಾನನವೊಂದೇ ಊರು ಒಂದೇ ತಾನೆಂಬುದು ಢಾಳ
ಹೀನವಾದವ ಕೇಳ ತಾನ ಈ ಪರಿಯಲಿಹ ಯೋಗಿ 1
ಮಾತಾಡೆ ಮಾತಿಲ್ಲ ಯಾತರ ಗೊಡವೆಯಿಲ್ಲ
ಭೂತ ಹೊಡೆದಂತೆ ಸುಮ್ಮನಿಹನು
ಭೀತಿಯ ತಾನಿಲ್ಲ ಈ ತೆರದಲಿ ತಾನಿರುತಿಹ ಯೋಗಿ 2
ಎದ್ದರೆ ಎದ್ದಿಹ ಬಿದ್ದರೆ ಬಿದ್ದಿಹ
ನಿದ್ದೆಯು ಯಾವಾಗಲು ಕಟ್ಟಿಹುದು
ಬುದ್ಧಿಯ ಮಾತಿಲ್ಲ ಬುದ್ಧಿಯವರ್ಜಿಸಿಹ
ಇದ್ದು ಈ ತೆರದಿ ತಾನಿದ್ದು ಇರುತಿಹ ಯೋಗಿ 3
ಶರೀರದ ಸ್ಮರಣೆಯಿಲ್ಲ ಶ್ರೇಷ್ಠ ಭಾವಗಳಿಲ್ಲ
ಪೋರರ ಕಂಡರೆ ಪೋರರಂತೆ
ಮಾರನ ಬಾಧೆಯಿಲ್ಲ ಮಹಾಕೋಪಗಳಿಲ್ಲ
ಧೀರತನದಲಿಂತು ಇರುತಿಹ ಯೋಗಿ 4
ಹೊರಗಿಂತು ತೋರಿಹನು ಹೃದಯದ ಪರಿಯನ್ನು
ಅರಿವೆನೆಂದರೆ ಅರಿಗಳವಲ್ಲವೋ
ಇರುಳು ಹಗಲು ಚಿದಾನಂದ ಮೂರುತಿಯನು
ಸ್ಥಿರವೀಗ ತಾನಂದು ನಿತ್ಯ ಬೆರತಿಹನು 5
196
ಯೋಗಿಯಹುದಹುದೋ ಚಿದಾನಂದ
ಯೋಗಿಯಹುದಹುದೋ ಚಿದಾನಂದ
ಯೋಗಿಯಹುದುಹುದೋ ದಯಾ
ಸಾಗರ ಕಾರಣ್ಯದಾಗರ ನಿತ್ಯಾತ್ಮ ಪ
ಅಷ್ಟಮದಂಗಳನ್ನು ಸುಟ್ಟು ಭಸ್ಮವ ಮಾಡಿಹ
ಅಷ್ಟ ಪ್ರಕೃತಿಯನ್ನು ಕಾರಿ ಮಹ
ದಷ್ಟ ಯೋಗವ ಸಾಧಿಸಿ ಶ್ರವಣವನ್ನು
ಕೊಟ್ಟುನಾದವ ಭೇದಿಸಿ ಆತ್ಮದಲ್ಲಿ
ದೃಷ್ಟಿ ಎಂಬುದ ನಿರಿಸಿ ಸರ್ವಕಾಲ
ಶಿಷ್ಟರೆಂದೆನಿಪ ಉತ್ಕೃಷ್ಟಮಾರ್ಗದ ವಾಸಿ 1
ಆರು ಅರಿಯ ಮೀರಿದರು ಭ್ರಮೆಯ ವಿಕಾರವ ತರಿದು
ತರಿದು ಹೀರಿ ಆರು ಚಕ್ರದ ಮೇಲೆ
ಏರಿ ಸಹಸ್ರಾರ ಸ್ಥಳದಿ ನಿಂದು ಜ್ಯೋತಿರ್ಮಯ
ಸಾರವ ಸೇವಿಸುತಲಂದು ನಿತ್ಯಾ ನಿತ್ಯ
ಘೋರ ತಪದಿ ಯೋಗಿ ಶೂರ ಭಕ್ತರ ಬಂಧು 2
ಸಪ್ತವ್ಯಸನ ರೂಪ ಕೆಡಿಸಿ ಬಳಿಕ ದುಷ್ಟ
ಸಪ್ತಾವರಣವನ್ನು ತುಳಿದು ಪಾದದಲೊದ್ದು
ಗುಪ್ತವಾಗಿಹ ಪ್ರಭೆಯ ಶೋಧಿಸಿ ಘನ
ತೃಪ್ತ ಅಮೃತ ಸುಧೆಯ ಸುರಿದು ಮೇರು
ಕಾಂಚನ ಗಿರಿಯ ಸೇರಿಯೆ ಜ್ಯೋತಿ
ವ್ಯಾಪಕ ಭಾಸ್ಕರ ದೀಪ್ಯಮಾನ ಪ್ರಭಾ 3
ಕರ್ಮ ಪಾಪವು ಪುಣ್ಯ ಹಮ್ಮು ವಾಸನ ಕ್ಷಯ
ದುರ್ಮತಿ ದುರ್ಗುಣವೆಲ್ಲ ದೊಡ್ಡ
ಬ್ರಹ್ಮಾನಂದದ ಲಕ್ಷಣ ತಿಳಿದಾ ನಿತ್ಯಾ
ನಿರ್ಮಳ ನಿರಾವರಣ ರೂಪಿತ ಆತ್ಮ
ಸ್ವರ್ಮಣಿ ಸುಗುಣ ನಿರ್ಗುಣ ಪರ
ಬ್ರಹ್ಮವೇ ತಾನಾಗಿ ಬೆಳಗುವ ಯತಿ ಜಾಣ 4
ಸಾಧನ ನಾಲ್ಕನು ಸಾಧಿಸಿ
ನಾದವ ಭೇದಿಸಿ ಜ್ಯೋತಿ ಸಂಪಾದಿಸಿ ಆತ್ಮನ
ಭೇದವೆಂಬುದನರಿತ ಬಳಿಕ ಘನ
ಸಾಧನ ಗುಣ ಚರಿತಯೋಗಿ ತಾನೆನಿಸಿ ಕೈವಿಡಿಯೆನ್ನ
ಬೋಧ ಸದ್ಗುರು ಚಿದಾನಂದ ಅವಧೂತ 5
197
ರಕ್ಷ ಚಿದಾನಂದ ರಕ್ಷಚಿದಾನಂದ ರಕ್ಷಮಾಂ ರಕ್ಷ
ರಕ್ಷ ಚಿದಾನಂದ ರಕ್ಷಚಿದಾನಂದ ರಕ್ಷಮಾಂ ರಕ್ಷ ಪ
ಪಟುತರ ಕಾಂತಿ ವಿಸ್ಪುಟಿತ ಮಧುರ ಪುಂಜ
ಘಟವಿಧಿಪೂರ ಸದ್ಘಟನ ಚಿದಾನಂದ 1
ಸಾರ ನಿಗಮತತಿ ದೂರ ಸುಮನ ಮನೋ-
ಹರ ನಿಖಿಳ ಜಗೋತ್ತಾರ ಚಿದಾನಂದ 2
ಬಿಸಜರಿಪು ನೇತ್ರ ಸುಭಸಿತ ಮಂಗಳಾಕಾರ
ವಿಷಧರೋದ್ಧಾರ ದಿಗ್ವಸನ ಚಿದಾನಂದ 3
ಈಶ ಭೂತೇಶ ಮಹೇಶ ಗಿರೀಶ
ಉಮೇಶ ನಟೇಶ ಸರ್ವೇಶ ಚಿದಾನಂದ 4
ಗುರು ಪ್ರಣವಾನಂದ ಗುರು ತ್ರಿಯಕ್ಷರ
ಗುರು ಚಿದಾನಂದ ಗುರುವೇ ಚಿದಾನಂದ 5
198
ಲಕ್ಷ್ಯವ ಹಿಡಿದೆ ಅಂದವಳ
ಲಕ್ಷ್ಯವ ಹಿಡಿದೆ ಅಂದವಳ
ಲಕ್ಷ್ಯನಿಂತೆ ನೀನೇ ಬ್ರಹ್ಮವಾಗಿ ಹೊಳೆಯೋ ಪ
ಸುಣ್ಣದ ಬಟ್ಟಿಸುಟ್ಟಂತೆ
ಕೆಂಗಣ್ಣಲಿ ತಂಬಾಕವ ನೊಣ ನೋಡಿದಂತೆ
ನಿನ್ನೊಳಾಪರಿ ಲಕ್ಷ್ಯನಿಂತೇ ತೇಜ
ತಾನಾಗಿಯೇ ಬೆಳಗೋದು ಚಿಕ್ಕೆಯಂತೆ 1
ಒಡವೆಯ ಅಮರಿಸಿದಂತೆ
ಕಾಲಡಿ ಮುಳ್ಳ ಚಿಮ್ಮಟಿಗೆಯು ಹಿಡಿದಂತೆ
ದೃಢದಲೀ ಪರಿ ಲಕ್ಷ್ಯನಿಂತೇ
ಕಿಡಿಕಿಡಿಯ ಕೆಂಕರಿಗೆದರಿ ಹರಡುವ ಕಾಂತಿಯಂತೆ 2
ಕಳೆಗಳು ಬಹು ತೇಜ ತೋರಿ ನೋಡೆ
ಕಳೆಯಡಗಿದ ಶುದ್ಧಮಂಡಲದ ಪರಿ
ಥಳಥಳ ರವಿ ಕೋಟಿ ಮೀರಿ
ಬಲು ಸುಲಭ ಚಿದಾನಂದ ಕಾಣುವುದೀ ಪರಿ 3
199
ವಿಷಯದೊಳಿರೆ ಬ್ರಹ್ಮಜ್ಞಾನ
ವಿಷಯದೊಳಿರೆ ಬ್ರಹ್ಮಜ್ಞಾನ
ವಿಷಯ ಪಾಪ ಹತ್ತಿತೇನ
ವಿಷಯದೊಳಿರುತಾತ್ಮನಾಗಿಯೆ ಎಚ್ಚರಿಕೆ
ಭಸ್ಮವಹುದು ದುರ್ಗುಣ ಪ
ಮುತ್ತೈದೆ ಇರುತಿರಲ್ಕೆ ಆಕೆಗೆ ಕೆಲಸವು ಬಹಳವಾಗಿ
ಮುತ್ತೈದೆಯು ತಾನು ಎಂಬುದು ಮರೆತರೆ
ಮತ್ತೆ ವಿಧವೆಯಾದುದೆಲ್ಲಿ 1
ಒತ್ತೊತ್ತು ಮನೆ ಇರುತಿರಲು
ಸ್ವಪ್ನಹತ್ತಿರೆ ಕೆಟ್ಟುಹೋಗಿರಲು
ಮತ್ತುತ್ತಮನು ಸ್ವಪ್ನದಲಿ ಕೆಟ್ಟು ಎಚ್ಚರವಾಗೆ
ಉತ್ತುಮನು ಕೆಟ್ಟಿದೇನು 2
ಶರೀರ ಧರ್ಮವು ಜ್ಞಾನಿಗೆ ಹೊಳೆಯೆ
ಕಾಮ ಹೊರಳಿ ಕ್ರೋಧ ಲೋಭ ಸುಳಿಯೆ
ವರ ಚಿದಾನಂದ ಗುರುತಾನಾಗೆ ಎಚ್ಚರಿಕೆ
ಮರೆದ ಕರ್ಮನಿಂದುರಿಯೇ 3
200
ವೀರ ಬಂದ ವೀರ ಬಂದ
ವೀರ ಬಂದ ವೀರ ಬಂದ
ಘೋರ ಹಮ್ಮು ಎಂಬ ದಕ್ಷನ
ತೋರ ಶಿರವರಿಯಲೋಸುಗ ಪ
ಭಯನಿವಾರಣವೆಂಬ ಕಾಸೆಯನೆ ಹೊಯ್ದ
ಜಯಶೇಖರನೆಂಬ ವೀರ ಕಂಕಣ ಕಟ್ಟಿ
ನಿಯತ ಸಾಹಸವೆಂಬ ರತ್ನ ಮುಕುಟವಿಟ್ಟು
ಸ್ವಯಂ ಸೋಹಂ ಎಂಬ ಕುಂಡಲವ ತೂಗುತ 1
ಆಡಲೇನದ ಶುದ್ಧವೆಂಬ ಭಸಿತವಿಟ್ಟು
ರೂಢಿಯ ಸತ್ಯವೆಂದೆಂಬ ಹಲಗೆಯಾಂತು
ಇಡಾಪಿಂಗಳವೆಂಬ ಪಾವುಗೆಗಳ ಮೆಟ್ಟಿ
ಗಾಢ ಧೈರ್ಯವೆಂಬ ಖಡುಗ ಝಳಪಿಸುತ 2
ಒಂದೊಂದೆ ಹೆಜ್ಜೆಯನಂದು ಪಾಲಿಸುತಾಗ
ಹಿಂದೆಡಬಲ ನೋಡದೆ ಮುಂದು ನಿಟ್ಟಿಸಿ
ಛಂದಛಂದದಲಾಗುವಣಿ ಲಗುವಿನಿಂದ
ಬಂದನು ಬಹು ಶೂರಧೀರ ಮಹಾವೀರ 3
ದಾರಿ ಊರುಗಳನೆ ಧೂಳಗೋಂಟೆಯ ಮಾಡಿ
ಆರಾಧರೇನು ಶಿಕ್ಷಿಸುವೆನೆಂದೆನುತ
ಭೇರಿ ಕರಡಿ ಸಮ್ಮೇಳಗಳೊಡಗೂಡಿ
ಕಾರಣವಹ ಯಜ್ಞಮಂಟಪದೆಡೆಗಾಗಿ 4
ಸುಷುಮ್ನವೆಂದೆಂಬ ಬಾಗಿಲ ಮುರಿಯುತ ಆ
ಸಮಯದಿ ಬಂದ ಅಸುರರ ಕೊಲ್ಲುತ
ಭೇಸರಿಸುವ ದೊರೆ ದೊರೆಗಳನಿರಿಯುತ
ದ್ವೇಷರೆನಿಪ ಷಡುರಥಿಕರ ಕಟ್ಟುತ 5
ಅಷ್ಟಸಿದ್ಧಿಗಳೆಂಬ ದಿಕ್ಪಾಲಕರ ನಟ್ಟಿ
ಭ್ರಷ್ಟ ಮೋಹವದೆಂಬ ಯಮನ ಹಲ್ಮುರಿದೆತ್ತಿ
ನಷ್ಟಮನವೆಂಬ ಬೃಗುವಿನ ಮೀಸೆಯ ಕಿತ್ತು
ಶಿಷ್ಟಶಿಷ್ಟರನು ಎಲ್ಲರ ಕೆಡೆಮೆಟ್ಟಿ 6
ಹಮ್ಮು ತಾನಾಗಿರುತಹ ಉನ್ಮತ್ತ
ದಕ್ಷನ ಶಿರವನು ತರಿಯುತಲಾಗ
ಗಮ್ಮನೆ ತ್ರಿಕೂಟ ಯಜ್ಞಕುಂಡದೊಳು
ಸುಮ್ಮನಾಹುತಿಯಿಟ್ಟು ಸುಲಭದಲಿ ನಲಿಯುತ 7
ಪಾಪರೂಪನಾದ ಜೀವದಕ್ಷನನು
ಈ ಪರಿಯಲಿ ಕೊಂದು ನಾಟ್ಯವಾಡಲು
ಭಾಪುರೇ ಎಂದು ಸಾಧು ಪ್ರಮಥರು ಹೊಗಳಲು
ತಾಪಹರನಾಗಿ ಶಾಂತಿಯ ಹೊಂದುತ 8
ನಿರುಪಮ ನಿತ್ಯ ನಿರಾಳನೆ ತಾನಾಗಿ
ಪರಮೇಶ ಪರವಸ್ತು ಪರತರವೆಯಾಗಿ
ಭರಿತ ಚೇತನ ಪ್ರತ್ಯಗಾತ್ಮನೆ ತಾನಾಗಿ
ನಿರುತ ನಿತ್ಯಾನಂದ ಚಿದಾನಂದ ಯೋಗಿ 9
201
ವೀಣಾಸ್ವರವನು ಕೇಳುತಲಿರುವನ ವಿಶ್ವಾತ್ಮನೆಂದೆಂಬೆ
ವೀಣಾಸ್ವರವನು ಕೇಳುತಲಿರುವನ ವಿಶ್ವಾತ್ಮನೆಂದೆಂಬೆ
ವೀಣಾಸ್ವರ ಕೇಳಲು ದುರ್ಗುಣವುಡಗಿ ಪೋಗುವುವು ಎಂದೆಂಬೆ ಪ
ನಾದಬ್ರಹ್ಮವನಾಲಿಸುತಿಹನು ನರನಲ್ಲವು ನಾನೆಂಬೆ
ನಾದಬ್ರಹ್ಮವನಾಲಿಸುತಿರಲಿಕೆ ನಾನಾಗುಣವು ಲಯವೆಂಬೆ 1
ಘಂಟಾ ಸ್ವರವನು ಕೇಳುತ ಸುಖವನು ಅನುಭವಿಸುವನ ಗುರುವೆಂಬೆ
ಘಂಟಾಘೋಷದಿಜನನ ಮರಣವು ಮುಳುಗಿಹವು ಎಂದೆಂಬೆ 2
ಭೇರಿನಾದವ ಕೇಳುತಲಿರುವನ ಭಾಗ್ಯವಂತನು ಎಂಬೆ
ಧೀರ ಚಿದಾನಂದ ಸದ್ಗುರುನಾದದಿ ಲಯವಿಹನು ಎಂದೆಂಬೆ 3
202
ವೈರಾಗ್ಯದಾವಾಗ್ನಿ ಉರಿಯು ಛಟಿಭಟಿಸಿತು
ವೈರಾಗ್ಯದಾವಾಗ್ನಿ ಉರಿಯು ಛಟಿಛಟಿಸಿತು
ಸರ್ವಪ್ರಪಂಚವೆಲ್ಲವ ಅಟ್ಟಟ್ಟಿ ಸುಟ್ಟಿತು ಪ
ಸತಿಸುತರು ಎಂಬ ಹೆಮ್ಮರವೀಗ ಸುಟ್ಟವು
ಪಿತೃ ಮಾತೃವೆಂಬ ಪಲ್ಲವ ಕರಿಕಿಟ್ಟಿತು
ಹಿತವೆಂಬ ಬಳ್ಳಿಗಳು ಅನಿಲ ಪುಟ್ಟವಿಟ್ಟವು
ಅತಿಭಾಗ್ಯವೆಂದೆಂಬ ಸಿಂಗಾರ ಹೊಗೆಯಿಟ್ಟವು 1
ಏಸೋ ಬಂಧುಗಳೆಂಬ ಧ್ರುಮವು ಶಿಖಿಸೋಂಕಿದವು
ಕ್ಲೇಶವೆಂದೆಂಬ ಕರಡವು ಭುಗಿ ಭುಗಿ ಲೆಂದವು
ವಾಸಗಳೆಂದೆಂಬ ಕುಡಿ ಕಿಡಿಯಾಗಿ ಉದುರಿದವು
ಆಸೆ ಎಂಬ ಫಲ ವಹ್ನಿಗಾಹಾರವಾದವು 2
ಘನಭ್ರಾಂತಿ ಎಂಬ ಪಕ್ಷಿಗಳು ಹಾರಿಹೋದವು
ಮನೆಯೆಂಬ ಗೂಡುಗಳು ನಿಗಿನಿಗಿಯಾದವು
ಬಿನುಗು ಚಿಂತೆ ಎಂಬ ಹರಿಣ ಮುಗ್ಗರಿಸಿದವು
ಮನಸಿಜನ ಕ್ರೋಧವೆಂಬ ಕಳ್ಳರು ಸತ್ತಿಹರು 3
ಅಷ್ಟಮದದಾನೆ ಎಂಬುವು ಅಡವಿಯ ಹಿಡಿದವು
ತುಚ್ಛ ವಿಷಯಗಳೆಂಬ ನರಿಗಳೋಡಿದವು
ದುಷ್ಟಗುಣವೆಂದೆಂಬ ದುರ್ಜನ ಮೃಗವು ಚಲ್ಲಿದವು
ಕಷ್ಟ ತಾಪತ್ರಯದ ಕತ್ತಲು ಹರಿಯಿತು 4
ಇಂತು ಪ್ರಪಂಚವೆಂಬೀ ವೈರಾಗ್ಯದಾವಾಗ್ನಿ
ಯಂತೆ ಧಗಧಗನೆ ಝಗಝಗನೆ ಸುಡುತಲಿ
ಚಿಂತಯಕ ಚಿದಾನಂದ ಉರಿಯು ಅಖಂಡವಾಗಿ
ಶಾಂತರೆಂಬರ ಮುಕ್ತರುಗಳ ಮಾಡಿತ್ತು 5
203
ಶಾಂತ ಶಾಂತವು ಎಂದು ಎಂಬರಿ ನಿಮ್ಮನು
ಶಾಂತ ಶಾಂತವು ಎಂದು ಎಂಬರಿ ನಿಮ್ಮನು
ಶಾಂತವಿಂತಿರುತಿರೆ ಶಾಂತ
ಶಾಂತವಿಂತಿರೆ ಜೀವ ಮುಕ್ತನು
ಶಾಂತಿಲಿ ಭ್ರಾಂತಿರೆ ಭಯವುಕೃತಾಂತ ಪ
ಸತಿ ಜಾರೆಯಾಗಲು ಗುರುನಾಥಲೀಲೆಯೆಂದು
ಸತಿಗನುಕೂಲವೇ ಶಾಂತ
ಖತಿಯ ಮಾಡಲು ನಾನಾಜನರು ಚಂಚಲವಾಗದ
ಸ್ಥಿತಿಯೇ ಶಾಂತ ಸತತ ಸಂಸಾರ ಕರಕರೆ ಬಳಲಿಕೆ
ಸಂಗವಿಲ್ಲದಿಹುದೇ ಶಾಂತ
ಅತಿ ಚೋರ ಸುಲಿದೊಯ್ಯೆ ಆನಂದದಲಿ
ನಸುನಗುತಿರುವುದೇ ಶಾಂತ 1
ವಿಷವನಿಕ್ಕಿದವರನ್ನು ಕಾಣಲು ಅವರೊಳು
ವಿಶ್ವಾಸವಿಹುದೇ ಶಾಂತ
ದುಶ್ಮನನು ತನ್ನನ್ನು ಕಡಿಯಬರೆ ಇದು
ಮೋಕ್ಷವೆಂಬುದೆನೆ ಶಾಂತ
ಮುಸುಕಿನ ಮಾತ ಊರ ಮುಂದಿಕ್ಕಲು
ಮತಿಗೆಡದಿಹುದದು ಶಾಂತ
ಹಸಿದು ಮಕ್ಕಳು ಅಳೆ ಹೆಂಡತಿ ರೋಧಿಸೆ
ಕುಸಿದು ಬೀಳದೊಡದು ಶಾಂತ 2
ಕೊಟ್ಟಿದ್ದು ಸುಳ್ಳು ಎಂಬುವರೆದುರಿಗೆ
ಕೊಟ್ಟಿಲ್ಲವೆಂಬುದೇ ಶಾಂತ
ಭ್ರಷ್ಟರು ನಾನಾ ನಿಂದೆಯ ಮಾಡಲು
ಭಯ ಹುಟ್ಟಿದಿರುವುದೇ ಶಾಂತ
ಬಿಟ್ಟುಹೋಗಲು ತನ್ನ ಸತಿ ಸುತರೆಲ್ಲರು
ಭ್ರಾಂತಿಯ ತೋರುವುದೇ ಶಾಂತ
ದಿಟ್ಟ ಚಿದಾನಂದ ಸದ್ಗುರು ತಾನಾಗಿ
ದೃಢನಾಗಿಹುದದು ಶಾಂತ 3
204
ಶಿವನೀ ಹ್ಯಾಗಲ್ಲ ಮನುಜ
ಶಿವನೀ ಹ್ಯಾಗಲ್ಲ ಮನುಜ
ಶಿವನೀಹ್ಯಾಗಲ್ಲ
ಶಿವನೇ ಜೀವನು ಬ್ರಹ್ಮಾಂಡಪಿಂಡಾಂಡ ಪ
ಶಿವಜೀವನು ತಿಳಿ ತಾನೊಬ್ಬ
ಕಣ್ಣೇ ಸೂರ್ಯನು ಕಿವಿಯೇ ದಿಕ್ಕು
ಚಿನ್ನಾದ ಪ್ರಾಣವೆ ತಾವಶ್ವಿನಿ 1
ಜಿಹ್ವೆಯೇ ವರುಣತ್ವ ತ್ಪಕ್ಕುತಾವಾಯುವು
ಗುಹ್ಯವೇ ವಿಧಾತೃ ಉಪಸ್ಥವೇ ಮೃತ್ಯು 2
ವಾಕ್ಕು ತಾನಗ್ನಿ ಪಾದ ಉಪೇಂದ್ರನು
ಚೊಕ್ಕೂಟದಿಂತಿಳಿ ಪಾಣಿಯೆ ಇಂದ್ರನು 3
ಮನವೆ ಚಂದ್ರನು ಬುದ್ಧಿಯೆ ಬ್ರಹ್ಮನು
ಘನ ಚಿತ್ತವು ತಾನದು ಕ್ಷೇತ್ರಜ್ಞ 4
ಅಹಂಕಾರ ರುದ್ರನು ಜ್ಞಾತೃವೇ ಈಶ್ವರ
ಶಂಕರ ಚಿದಾನಂದನೀ ಪರಮಾತ್ಮನು 5
205
ಶ್ರವಣ ಮನನ ನಿಧಿ ಧ್ಯಾನವು ಯೋಗಕ್ಕೆ
ಶ್ರವಣ ಮನನ ನಿಧಿ ಧ್ಯಾನವು ಯೋಗಕ್ಕೆ
ಸಮನಿಸೆ ಸಾಧಕಂಗೇತಕೆ ಈ ಮೂರು ಪ
ನಿತ್ಯಗುರುಮುಖದಿಂದ ನಿಜವೇದಾಂತ ಸಾರವ-
ನಿತ್ಯಕಾಲದಲ್ಲಿ ಕೇಳುತಲಿ ಇದ್ದು
ನಿತ್ಯಜೀವರ ಪರಮ ನಿಲುಗಡೆಗಳ ತಿಳಿದು
ಸತ್ಯತಾನೆಂದು ಕಂಡು ನಿಶ್ಚೈಸಿದುದೆ ಶ್ರವಣ 1
ವಾಸನೆ ಹರವಾಗಿ ಬಲಿದು ಆತ್ಮಾನಂದಕೆ
ಸೂಸದೆ ಮನವನು ನಿಲ್ಲಿಸುತ
ದೇಶಿಕೋತ್ತಮನಿಂದ ತನಗಾವ ಉಪದೇಶ
ಬೇಸರಿಸದೆ ಮತ್ತೆ ಮತ್ತೆ ನೆನೆವುದೆ ಮನನ 2
ದಧಿಮಥನವ ಮಾಡೆ ನವನೀತ ತೇಲುವೊಲು
ಉದಧಿಮಥಿಸೆ ಅಮೃತ ತಾ ಬಂದಂತೆ
ಮಥಿಸೆ ಕಾಷ್ಟಕ್ಕೆ ಕಾಷ್ಠ ಅಗ್ನಿ ತಾ ಪುಟಿದಂತೆ
ವಿಧಿಸೆ ಈ ತೆರದಲಿ ತಾನದುವೆ ನಿಧಿಧ್ಯಾಸ 3
ಈ ಮೂರು ಸಾಧನಗಳಿರಬೇಕು ಯೋಗಕ್ಕೆ
ಈ ಮೂರು ಸಾಧಿಸಲು ರಾಜಯೋಗಿ ತಾನು
ಇವರೊಳು ಒಂದು ಕಡಿಮೆಯಾದರು ಯೋಗಿಯಾಗನು
ಇಂತಿಲ್ಲದಿರೆ ನಿಜಮುಕ್ತಿ ದೊರಕದು 4
ಶ್ರವಣವೆಂಬುದು ಅದು ಸರ್ವಸಾಧನವಯ್ಯ
ಶ್ರವಣ ಮನನವಾಗೆ ಶ್ರಮ ಪರಿಹಾರವು
ಶ್ರವಣ ಮನನ ನಿಧಿಧ್ಯಾಸ ಮೂರಾಗೆ
ಶಿವನೆ ಆತನು ಚಿದಾನಂದ ದೇವನವನು 5
206
ಶ್ರೀ ಗುರುವಿನ ನೆನದು ಸುಖಿಯಾಗು ಮನವೇ
ಶ್ರೀ ಗುರುವಿನ ನೆನದು ಸುಖಿಯಾಗು ಮನವೇ ನೀನು
ದುರ್ಗುಣ ಪಾಪಹರಿದು ಭೇದಿಸು ಜನನವ ಪ
ನಾನಾ ಜನ್ಮದಿ ತೊಳಲಿ ನೀ ಬಂದು ನರ
ಮನುಷ ಜನ್ಮವ ತಾಳಿ ಮರತ ಕಂಡ್ಯಾ ತನುವಿನಲಿ
ಧ್ಯಾನಿಸುಸದಾಕಾಲದಿ ದುರ್ಜನ ಬುದ್ಧಿ
ಮಾಣಿಸು ಪರಂಜ್ಯೋತಿಯ
ನೆನೆದು ನೆನೆದು ದೃಷ್ಟಿಸಿ ಕಾಣುಗುಣಜ್ಞನ ಕರುಣ
ಪ್ರಾಜ್ಞನ ಜ್ಞಾನ ಸಿದ್ಧನ ಗುರುವ ಸಿದ್ಧನ
ಮಾನಸ ರೂಪನ ಮೂಜಗ ವ್ಯಾಪನ
ದೀನರನಾಥನ ವಾಙ್ಮಯಾತೀತನ 1
ಸುಜನರ ಸಂಗವ ಮಾಡದೆ ಸಾಯುತಲಿಹೆ
ಕುಜನರ ಸಂಗದಿಂದ ಕರುಣವೆಂಬುದು ಮರೆತೆ
ತ್ಯಜಿಪುದು ನಿನಗೆ ನೀತಿಯೆ ಥೂ ನಿನಗೆ ಬುದ್ಧಿಯೇ
ಭಜಿಸು ಪರಾತ್ಪರವ ನೆನೆದು ದೃಷ್ಟಿಸು ಮನವೇ
ತ್ರಿಜಗ ವಂದ್ಯನ ತ್ರಿಗುಣಕೆ ಮಾನ್ಯನೆ
ಸುಜನವ್ರಾತನ ಸುಪ್ರಭಾತೀತನ
ಭಜಕರ ಭಾಗ್ಯನ ಬಹುಗುಣ ಯೋಗ್ಯನ
ಸರ್ವಬೇಧಜ್ಞನ ನಯಸರ್ವಜ್ಞನ 2
ಇರುವೆ ಮೊದಲು ಗಜ ಕಡೆಯಾದ ಎಂಭತ್ತನಾಲ್ಕು
ತಿರುವಿನ ಲಕ್ಷಜೀವದಿ ಜನಿಸಿ ಜನಿಸಿ ಪುಟ್ಟುವ
ಪರಿಯನೆಲ್ಲವ ಛೇದಿಪ ಉಪಾಯವ ತಿಳಿವ
ಚಿರಕಾಲ ನೆನೆಯೋ ಕಂಡ್ಯಾ ಚಿದಾನಂದಾವಧೂತನ
ಪರಮ ಪರೇಶನ ಪಂಡಿತ
ಪುರುಷನ ಶರಣು ಜನಾಂಗನ ಸುಗುಣ ಕೃಪಾಂಗನ
ಕರುಣಾ ಕಟಾಕ್ಷನ ಕಾರಣ ಮೋಕ್ಷನ
ಮರಣ ವಿದೂರನ ಮುನಿಯತಿ ವರನ 3
207
ಸಂತೆ ಮಾಡಿದರೆ ಸಂಸಾರ ಸಂತೆ ಮಾಡಿದನೆ
ಸಂತೆ ಮಾಡಿದರೆ ಸಂಸಾರ ಸಂತೆ ಮಾಡಿದನೆ
ಸಂತೆಯವರ ನಂಬಿದರೆ ಕೆಟ್ಟುಹೋಗುವೆ ಕಾಣೆ ಪ
ತಂದೆತಾಯಿ ನೆವಗಳಿಂದ ಸಂತೆಗೆ ಬಂದೆ
ಬಂದು ಕೂಡಿದನು ಗಂಡ ಜೋಡಾದೆನು ಎಂದೆ
ಬಂದನೀಗ ಮಗೆನೆಂಬುವನು ಸೊಸೆಯು ಆತನ ಹಿಂದೆ
ಬಂಧುಬಳಗ ಬಹಳಾಯಿತು ನೆರೆದುದು ಸಂತೆಯು ಮುಂದೆ 1
ಸಂತೆ ಮಾಡಿಕೊಂಡು ಗಂಡನೀಗ ತೆರಳಿದನೆ
ಅಂತು ಸಂತೆಯ ಮಾಡಿ ಮಗನೀಗ ಹೋಗಿಹನು
ಇದಕು ಮೊದಲೇ ಸೊಸೆಯ ಇಹಲೋಕ ಬಿಟ್ಟಿಹಳು
ಇಂತು ಸಂತೆಯ ಮಾಡಿ ಬಯಲಿಗೆ ಬಿದ್ದೆನೇ 2
ದಾರಿಕಾರರೆಲ್ಲ ಸರಿದು ಸಂತೆ ಬಯಲಾಗೆ
ಅರಿಗಾರು ಇಲ್ಲವಾಗಿ ನನ್ನ ಬಿಟ್ಟು ಹೋಗೆ
ಧೀರ ಚಿದಾನಂದ ಗುರು ಕೈಯ ಹಿಡಿದ ಬೇಗ
ನೀರೆ ಅಂಜಬೇಡವೆಂದು ಮುಟ್ಟಿಸಿದ ಮನೆಗೆ 3
208
ಸಂಸಾರ ಶರಧಿಯೊಳು ಮುಳುಗಿ ಮುಳುಗಿ
ಸಂಸಾರ ಶರಧಿಯೊಳು ಮುಳುಗಿ ಮುಳುಗಿ ಸಂಶಯವಿಲ್ಲದೆ
ಬಳಲುತಿಹ ಮರುಗಿ ಮರುಗಿ ಪ
ಅಜ್ಞಾನ ತಿಮಿರವೆಂಬ ವ್ಯಾಪಾರದೊಳೋಡಾಡಿ
ಸುಜ್ಞಾನ ಜ್ಯೋತಿಯ ಬಿಡುಗಡೆಯ ಮಾಡಿ
ಭಗ್ನ ಮಾಡಿಯೆ ಶಾಂತ ಬುದ್ಧಿಗಳನೇ ನೋಡಿ
ಪ್ರಾಜ್ಞನಾಗದೆ ಕೆಡುವೆ ನರಕವನು ಕೂಡಿ 1
ಕಾಲವಿಪರೀತದಿಂದ ಕೇಡುಬರೆ ನೀನದನು
ಕಾಲಲೊದೆಯದೆ ಬಹಳ ಚಿಂತೆಯನು ಮಾಡಿ
ಓಲಗಿಸಿ ಮನದೊಳಗೆ ತಾ ಕೆಟ್ಟೆಯೆನ್ನುವನು
ಪಾಲಿಸುವರಿಲ್ಲೆಂದು ಸೇರುವೆಯ ನರಕವನು 2
ಬೇಡ ಮನದೆ ಇನ್ನು ಖುಲ್ಲ ಗುಣಗಳ ಬಿಟ್ಟು
ಖೋಡಿ ಸಂಸಾರವೆಂಬುದನು ಸುಟ್ಟು
ಗೂಢ ಚಿದಾನಂದಾವಧೂತನೊಳು ಅಳವಟ್ಟು
ಕೂಡು ಕೆಲಸಾರದಲೆ ದೃಷ್ಟಿ ಆತ್ಮನಲಿಟ್ಟು 3
209
ಸತ್ಕರ್ಮ ತ್ಯಾಗವೇ ನಿಜಬ್ರಹ್ಮವು
ಸತ್ಕರ್ಮ ತ್ಯಾಗವೇ ನಿಜಬ್ರಹ್ಮವು
ಸತ್ಕರ್ಮ ಬ್ರಹ್ಮಕೆ ಉಪಾಧಿರೂಪವಯ್ಯಾ ಪ
ಹುಟ್ಟಿಗೆ ಶಾಖಗಳ ರುಚಿ ಹತ್ತದಿದ್ದಂತೇ
ಬಿಟ್ಟಿಹನು ಮತ್ತೆಂಬೆ ಸಂಸಾರದಿ ಹುಟ್ಟಿಗೆಯು ವಾಸವೆಯು
ಹತ್ತದಲೆ ಇಹುದೆ ಬಿಟ್ಟು ಕೊಡಬೇಕು ಸತ್ಕರ್ಮ ಪಥವ 1
ಹೂಡುವೆತ್ತುಗಳೆತ್ತ ನಡೆಪ ಘೋಡವದೆತ್ತ
ಮಾಡ್ವ ಎರಡರಲಿ ಬಿಟ್ಟಿಹ ಯೋಗವನು ಎತ್ತ
ಝೂಡಿಸಿಯೆ ಬಿಡದಿ ಸತ್ಕರ್ಮ ಪಥವ 2
ಎರಡು ಕಡೆ ಚಿತ್ತವು ಸಮನಿಸುವುದೇತಕ್ಕೆ
ಗುರು ಗುಟ್ಟಲೇಕೆ ಉರಲಿಕ್ಕಲೇಕೆ
ಕರೆಕರೆಯ ಸತ್ಕರ್ಮ ತ್ಯಾಗವನು ಮಾಡಿ ಬಿಡಿ
ಗುರು ಚಿದಾನಂದ ಸಹಜರಾಗುವಿರಿ ನಿಜದಿ 3
210
ಸತ್ಕರ್ಮವೆಂಬುದು ಸಾಧನವಲ್ಲದಲೆ
ಸತ್ಕರ್ಮವೆಂಬುದು ಸಾಧನವಲ್ಲದಲೆ
ಸತ್ಕರ್ಮವೀಗ ಶುದ್ಧಬ್ರಹ್ಮವಲ್ಲವು
ಸತ್ಕರ್ಮ ಭಕ್ತಿಭಾವ ಸುಗುಣವಾದ ಮಾರ್ಗವು
ಸತ್ಕರ್ಮತ್ಯಾಗ ನಿಶ್ಯಬ್ಧ ವಸ್ತು ಪ
ಗಾರುಡಿಯನರಿವೆನೆಂದು ಮಹೋರಗನ ಮೇಳವೇ
ಆರು ನಂಬಲು ಬಹುದು ವಿಕಾರ ಮನವನು
ನಾರಿ ಪುತ್ರರೊಳಗೆ ಕೂಡಿ ನಾನು ಮುಕ್ತನು ಎನಲು
ಸೇರುವುದು ಎಂತು ಪೂರ್ಣ ಬ್ರಹ್ಮ 1
ಬ್ರಹ್ಮನರಿದು ಸಂಸಾರವ ಮಾಡು ಈಗ ಎಂಬನು
ಬ್ರಹ್ಮಘಾತನು ಅವನು ಮಿಥ್ಯವಲ್ಲವು
ನಿಮ್ಮ ಮನಕೆ ತಿಳಿದು ನೋಡಿ ನಿಶ್ಚಿತದ ಮಾತ ಪೇಳ್ವೆ
ಸುಮ್ಮನೆ ಬಿಡಲಿಬೇಕು ಸತಿ ಸುತರನು 2
ವಾಸನಾಕ್ಷಯವು ವಸ್ತು ಎಂಬ ಮಾತು ದಿಟವದಿರಲು
ವಾಸನಾಕ್ಷಯವು ಎಂತು ಸಂಸಾರದಿ
ಗೋಪನಾರಬೇಡವೆನಲು ನಾರುವುದು ಬಿಡುವುದೇ
ಕಾಸ ವೀಸಿಯಲ್ಲದಲೆ ನಿಶ್ಚಯಿಲ್ಲವು 3
ಸಾಕ್ಷಿ ತಿಳಿದ ಬಳಿಕ ಸಂಸಾರವನೀಗ ತ್ಯಜಿಸಿದೆ
ಅಕ್ಕಿನೀರುವಗ್ಗಿದಂತೆ ಆಗಬಾರದು
ರಕ್ಷಕನು ಇಲ್ಲದಲೆ ಸಂಸಾರವ ಬ್ರಹ್ಮವೆನಲು
ಭಕ್ಷಣಹುದು ಬ್ರಹ್ಮಜ್ಞಾನ ಬಿಡುವುದಿಲ್ಲವು 4
ಸಂಸಾರದಿ ಮುಕ್ತ ನಾನು ಎನಲು
ತಿಲಾಂಶ ಮಾತ್ರ ಅನ್ನವಾಸನ ಅಂಟದಿಹುದೇ
ಸಂಸಾರವ ತ್ಯಜಿಸಿದರೆ ಸಾಧ್ಯವಹುದು ವಸ್ತು
ಹಂಸಪರಮ ಚಿದಾನಂದ ತಾನೆಯಾಹನು 5
211
ಸರ್ವಂ ಬ್ರಹ್ಮಮಯಂ ತಿಳಿವಡೆ
ಸರ್ವಂ ಬ್ರಹ್ಮಮಯಂ ತಿಳಿವಡೆ
ಸರ್ವ ಬ್ರಹ್ಮಮಯಂ ಪ
ಮತಿಗತಿ ಬ್ರಹ್ಮಮಯಂ ಮಹಾಕೃತು ಜಪ ಬ್ರಹ್ಮಮಯಂ
ಸತಿಸುತ ಬ್ರಹ್ಮಮಯಂ ಶಾಂತವು ಖತಿಯು ಬ್ರಹ್ಮಮಯಂ 1
ಪಶುಧನ ಬ್ರಹ್ಮಮಯಂ ಪಟ್ಟಣಸುಧೆಯು ಬ್ರಹ್ಮಮಯಂ
ಶಿಶುಗಳು ಬ್ರಹ್ಮಮಯಂ ಸಮಸ್ತದಸೆಗಳು ಬ್ರಹ್ಮಮಯಂ 2
ಯುಗತಿಥಿ ಬ್ರಹ್ಮಮಯಂ ನಾನಾ ಖಗಮೃಗ ಬ್ರಹ್ಮಮಯಂ
ನವನಧಿ ಬ್ರಹ್ಮಮಯಂ ಚಿದಾನಂದ ಬಗಳೆ ಬ್ರಹ್ಮಮಯಂ 3
212
ಸುರತ ಸುಖಕೆ ಅಂಗನೆಯರ ಮೇಳದಲಿ
ಸುರತ ಸುಖಕೆ ಅಂಗನೆಯರ ಮೇಳದಲಿ
ಇಹಗೆ ಆಧ್ಯಾತ್ಮದ ಗೊಡವೆ ಏತಕೆ ಪ
ಭಂಗಿ ಮಧ್ಯದಿ ಕೂಡಿ ಇಹಗೆ ಭಜನೆ ಸಾಧನೆಗಳೇತಕೆ
ರಂಗುರಾಗದಿ ಮುಳುಗುವವನಿಗೆ ರೇಚಕ ವಿದ್ಯೆಯಾತಕೆ
ಶೃಂಗಾರದ ಪದವಿಡಿದ ಮನುಜಗೆ ಸುಷುಮ್ನದ ಮಾರ್ಗವಿದೇತಕೆ 1
ನಲ್ಲೆಯರ ನುಡಿಯಿಂದ ಕೇಳುವಗೆ ನಾದಧ್ವನಿ ತಂಪೇತಕೆ
ಚೆಲ್ಲೆಗಣ್ಣರ ಕುಚದಲೊರಗುವಗೆ ಚಿತ್ಕಳ ವಿಷಯವೇತಕೆ
ಜೊಲ್ಲು ಕುಡಿಯುತಲಿಹ ಜಡನಿಗೆ ಜ್ವಲಿಸುತಿಹ ಅಮೃತವದೇತಕೆ
ಹಲ್ಲು ತೆರೆವಹೊತ್ತಿಲಿರುವನಿಗೆ ಹಂಸದ ಕೂಟವದೇತಕೆ 2
ಭಾಮಿನಿಯರ ಸಭೆಯಲಿದ್ದವನಿಗೆ ಭ್ರೂಮಧ್ಯದ ಸದರೇತಕೆ
ವಾಮಲೋಚನೆಯ ಅಂಗಸಂಗಗೆ ಹೃನ್ಮನ ಚಿಂತನವೇತಕೆ
ಕಾಮಿನಿಯ ಕಣ್ಬಲೆಗೆ ಬಿದ್ದವಗೆ ಕಡೆಹಾಯುವ ಚಿಂತನೆಯೇತಕೆ
ಸ್ವಾಮಿ ಚಿದಾನಂದ ಗುರುವಿನ ಸ್ಮರಣೆಯದು ಅವಗೇತಕೆ 3
213
ಸೈಶಬಾಸ ಗಬರು ದರೋಡೆ ಬರತದ
ಸೈಶಬಾಸ ಗಬರು ದರೋಡೆ ಬರತದ
ಅಬಬ್ಬ ನೋಡಿದರೆ ಆರ್ಭಟ
ಸಬಬ ಐತಿದು ಸಾಧುರ ಪುಣ್ಯ
ಶುಭ ನುಡಿಯುತದ ಶಕುನದ ಹಕ್ಕಿ ಪ
ಐದು ಮಂದಿ ನೆಲೆಗಳ್ಳರು ಕೂಡಿ
ಊರ ಆತ್ಮದಲಿ ಸೇರುವರು
ಐಕ್ಯದಿಂದ ಶ್ರೀ ಗುರುವಿನ ಕೂಡಿ
ಐದು ಮಂದಿ ಬಿಟ್ಟೋಡುವರು 1
ಎಂಟು ಹತ್ತು ಮಂದಿ ಬಂಟರು ಕೂಡಿ
ಮುತ್ತಿಗೆ ಹಾಕಿ ನಿನ್ನ ಕೆಡಿಸುವರು
ಸತ್ಯನಾದ ಶ್ರೀ ಗುರುವಿನ ನೆನೆದರೆ
ಹತ್ತು ಮಂದಿ ಬಿಟ್ಟೋಡುವರು 2
ನೋಡಿ ಬಗೆಯೋ ನಿನ್ನ ಕಾಡವು ಹುಲಿಗಳು
ಬೇಡಿದ ಪದಾರ್ಥ ದೊರಕುವುದು
ಕೂಡಿ ಭಜಿಸೊ ಶ್ರೀ ಚಿದಾನಂದನ
ಮೂಲ ಮಂತ್ರ ಪ್ರಣವ ದೊರಕುವುದು 3
214
ಸೊಕ್ಕು ನೋಡಿ ಯೋಗೀಶನ ಸೊಕ್ಕು ನೋಡಿ
ಸೊಕ್ಕು ನೋಡಿ ಯೋಗೀಶನ ಸೊಕ್ಕು ನೋಡಿ
ಮಿಕ್ಕು ಮೀರಿ ಮೂರಕ್ಕರಗಳಕಂಡು
ನಕ್ಕು ಪಶ್ಚಿಮಗಿರಿ ಪೊಕ್ಕು ಬೆಳಗಿ ಜನ ಪ
ಮೂರ ಕಟ್ಟಿ ಮೂರನು ಅರಶೀರಗುಟ್ಟಿ
ಆರು ಎಂಟನೆ ಅಟ್ಟಿ ಐದು ಏಳನು ಮೆಟ್ಟಿ
ತೋರುವ ಎರಡು ನಾಲ್ಕನು ತೊಲಗಿಸಿದಾತನ 1
ಲೋಕದ ಕೂಡ ಕೂಡಿಯೆ ವಿವೇಕ ಬೇಡ
ಏಕವೆಂಬುದು ಬಿಡ ಅನೇಕವೆಂಬುದ ನಾಡ
ಮೂಕ ಪದಗಳೆಂದು ನಿರಾಕರಿಸುತಲಿಹನು 2
ಅಕ್ಷಯ ಮುಚ್ಚಿ ತೆರದು ತೆರದಕ್ಷಯ ಮುಚ್ಚಿ
ರಕ್ಷಿಸುತಿಪ್ಪ ಭಾಳೇಕ್ಷಣ ತಾನೆಂದು-
ಪೇಕ್ಷೆಮಾಡುತ ಸರ್ವವ ನಿರೀಕ್ಷಿಸುತಿರುವವನ 3
ಮತಗಳ ನೆನೆದು ಶಾಸ್ತ್ರಗಳ ಗೆಲಿದು
ಪಾತಾಳಕಿಟ್ಟ ಮತಿ ಮೋಕ್ಷಗಳ ಬಿಟ್ಟ ತಿರುಗಿಸಿ ತಿರುಗಿಸಿ ಹುಟ್ಟಿ
ಸತತ ಕಾಲದಿ ತನ್ನ ಮತಿ ಹಿಡಿಯೆಂಬನ 4
ಏನುಪಾಯ ಈ ಯೋಗಿಗೆ ಇನ್ನೇನು ನ್ಯಾಯ
ತಾನಾಗದ ಗುರು ಚಿದಾನಂದನ ತಾ ಕಂಡು
ತಾನೆ ತಾನಾಗಿ ತೋರುವ ನಿಜ ಯೋಗಿಯ 5
215
ಸ್ಥಳವಲ್ಲದ ಸ್ಥಳದಲ್ಲಿ ಕಸ್ತೂರಿಯನಿಟ್ಟ ಬ್ರಹ್ಮ
ಸ್ಥಳವಲ್ಲದ ಸ್ಥಳದಲ್ಲಿ ಕಸ್ತೂರಿಯನಿಟ್ಟ ಬ್ರಹ್ಮ
ಬಳಿಕ ಬೈದರೆ ವಿವೇಕವಹುದೇ ಎಲೆ ತಮ್ಮ ಪ
ಶೀಲಮೃಗ ನಾಭಿಯಲಿ ಕಸ್ತೂರಿಯನಿಡುವುದು
ಖೂಳರ ಜಿಹ್ವೆಯಲಿ ಅದನಿಡಲು ನೀತಿಯಹುದು
ನಾಲಗೆಯ ಲೋಕೋಪಕಾರವಹುದು
ಮೇಲೆ ಕಸ್ತೂರಿಬಹುದು ಜಗಸಮ್ಮತವಹುದು 1
ಕಸ್ತೂರಿಗೋಸ್ಕರವೆ ಧರ್ಮ ಮೃಗವಾದುದನು ಬಿಡದೆ
ಕೊಲ್ಲುವವನು ವ್ಯಾಧನೀಗ
ಸಂಚಲ ಚಿತ್ತವುಳ್ಳವನು ವಿಧಿವರವರಿಯನು
ಅಸ್ತವ್ಯಸ್ತದಿ ಪಶುಗೆ ನೀರತಿದ್ವಿದನು 2
ಧರಿಸಿದನು ದೋಷವನು ತಾನೀಗ ಎರಡನ್ನ
ಹಿರಿಯರನು ನಿಂದಿಪುದು ಮೃಗವ ಕೊಂದವನು
ಕರುಣೆ ಚಿದಾನಂದ ಸದ್ಗುರುವಿಗೆ ಮೆಚ್ಚಿಸು ಅದು
ಮರವಾದ ಮುಪ್ಪಿನಲಿ ವಿಧಾತ್ರನು 3
216
ಹಿರಿದು ಸಂಸಾರ ನೆಲೆಯದು ಕಲ್ಪತರು
ಹಿರಿದು ಸಂಸಾರ ನೆಲೆಯದು ಕಲ್ಪತರು
ಕಾಮಧೇನುವದು ಸುಖವೋ ದುಃಖವೋ
ಹೊನ್ನು ಸತಿಯು ಸುತರೆನ್ನವರೆನ್ನದೆ
ಚಿನ್ಮಯರೂಪೆಂದು ತಿಳಿದು
ಉನ್ನತವಾಗಿಹ ಸಾಧುಗುಣದಿ ತಾ
ಮುನ್ನ ನೋಡುವವನ ನರನೋ ಹರನೋ 1
ಮನೆಯು ಮಾತಾ ಪಿತ ಮನುಜವರ್ಗವನೆಲ್ಲ
ಘನ ಮಹಿಮನ ವಿನೋದವೆಂದು
ಸನುಮತದಲಿ ತಾನಧಿಕಾರಿಯೆನಿಸಿಯೆ
ಮನದಿ ಸೂಚಿಪುದು ಉರಿಯೋ ಸಿರಿಯೋ 2
ಬಂಧನದೊಳು ಮಹಾ ನಿಂದನೆಯನು ಕೇಳುತಲಿ
ಕುಂದು ಕೊರತೆಗೆಲ್ಲ ಹಿಗ್ಗುತಲಿ
ಇಂದಿದು ಆತ್ಮನ ಲೀಲಾ ಚರಿತನೆಂದು
ಮುಂದೆ ತೋರುವದಿದು ಭಯವೋ ಜಯವೋ 3
ಜನನ ಮರಣ ಸುಟ್ಟು
ಮನುಜ ಜೀವನ ಕೆಟ್ಟು
ಕನಸಿನ ತೆರ ಸಂಸಾರ ಮೂಡಿ
ದಿನಕರ ಜ್ಯೋತಿಯಲಿ ಬಹುಬೆಳಗುತಲಿ ತಾ ನಿಹುದು
ಗೆಲುವೋ ಒಲವೋ 4
ಕರುಣ ಕಟಾಕ್ಷ ಸುಕರುಣ ಶಾಂತತ್ವದಿ
ಸರಸ ಸುಜ್ಞಾನವನಳವಡಿಸಿ
ಗುರು ಚಿದಾನಂದಾವಧೂತನೆ ತಾನಾಗಿ
ಹರುಷಿಸಿ ಸುಖಿಪುದು ದೊರೆಯೋ ಚರಿಯೋ 5
217
ಹುಚ್ಚು ಹತ್ತಿತು ಹುಚ್ಚು ಹುಚ್ಚು ಜ್ಞಾನದ ಹುಚ್ಚು
ಹುಚ್ಚು ಹತ್ತಿತು ಹುಚ್ಚು ಹುಚ್ಚು ಜ್ಞಾನದ ಹುಚ್ಚು
ಹುಚ್ಚು ತಿಳಿವುದಲ್ಲ ಹುಚ್ಚನ ಗುರುವೇ ಬಲ್ಲ ಪ
ನಿರ್ಮಳಾಂಗದ ಹುಚ್ಚು ನಿಗಮ ಶಿರದ ಹುಚ್ಚು
ಕರ್ಮರಹಿತನ ಹುಚ್ಚು ಕಮನೀಯ ಹುಚ್ಚು 1
ಸಜ್ಜನ ಸಂಗದ ಹುಚ್ಚು ಸಂತೋಷಪೂರಿತ ಹುಚ್ಚು
ವೆಚ್ಚವಿಲ್ಲದ ಹುಚ್ಚು ಎಣಿಸಬಾರದು ಹುಚ್ಚು 2
ಬ್ರಹ್ಮಾನಂದದ ಹುಚ್ಚು ಭೇದರಹಿತದ ಹುಚ್ಚು
ಹಮ್ಮನಳಿದ ಹುಚ್ಚು ಪರಿಪೂರ್ಣ ಹುಚ್ಚು 3
ಮತವ ಕಡಿದಾ ಹುಚ್ಚು ಮಹತ್ತೆನಿಪಾ ಹುಚ್ಚು
ಸತತ ಶಾಂತಹ ಹುಚ್ಚು ಸಹಜಾನಂದದ ಹುಚ್ಚು 4
ಲೋಕ ಸಾಕ್ಷಿಕ ಹುಚ್ಚು ಲೋಕವುತಾನಾದ ಹುಚ್ಚು
ಏಕವೆಂಬ ಹುಚ್ಚು ಯಮನ ಗೆಲಿದಾ ಹುಚ್ಚು 5
ಆರರ ಮೇಲಣ ಹುಚ್ಚು ಅನ್ಯಮನಸ್ಕದ ಹುಚ್ಚು
ಚಾರು ತಾಮಸ ಹುಚ್ಚು ಚಲನೆಯಿಲ್ಲದ ಹುಚ್ಚು 6
ಗುರುಭಕ್ತಿಯ ಹುಚ್ಚು ಗುರೂಪದೇಶದ ಹುಚ್ಚು
ಸ್ಮರಣೆ ಬಲಿದ ಹುಚ್ಚು ಸಮನಿಸಿದ ಹುಚ್ಚು 7
ಜ್ಯೋತಿರ್ಮಯದ ಹುಚ್ಚು ಜಾತಿ ನಿರ್ಮೂಲದ ಹುಚ್ಚು
ಖ್ಯಾತಿಯಾಗಿಹ ಹುಚ್ಚು ಭೇದರಹಿತದ ಹುಚ್ಚು 8
ಚಿನ್ಮಯ ಚಿದ್ರೂಪದ ಹುಚ್ಚು ಚಿದಾನಂದನ ಹುಚ್ಚು
ತನ್ಮಯವಾಗಿದೆ ಹುಚ್ಚು ತಿಳಿಯಲರಿಯುವುದು ಹುಚ್ಚು 9