Categories
Tatvapadagalu ತುರುವನೂರು ಲಿಂಗಾರ್ಯರ ತತ್ವಪದಗಳು ಭಾಗ – 1

ಅಕಾರಾದಿ ತತ್ವಪದಗಳು


ಅದು ನೀನೆನ್ನುವುದೆ ತತ್ವಮಸೀ
ಅರ್ಥವಿಲ್ಲದ ಓದು ವ್ಯರ್ಥಾ
ಅತಿಥಿಯೆ ಪರದೈವಾ
ಅಡ್ಡಿಯಿಲ್ಲದೆ ಬರುವ ಅಡ್ಡಪಲ್ಲಕ್ಕಿಯ ನೋಡಿರಣ್ಣಾ
ಅಕ್ಕಾ ಯೀ ಲೆಕ್ಕ ತಿಳಿಯಕ್ಕ
ಅಕ್ಷಯ ಪಾತ್ರೆಯ ಕೊಟ್ಟನು ಗುರುವು
ಅರಿವೇ ಇದು
ಅರಿವೆ ಹೆಚ್ಚೋ ಮರವೆ ಹೆಚ್ಚೋ
ಅರಿವೆ ಬ್ರಹ್ಮ ಮರವೆ ಮಾಯೆ ಅರಿತುಕೊಳ್ಳಿರಿ
ಅರಿವಾಯಿತು ಗುರುದೇವನಿಂದ
ಅರಮನೆ ಸ್ಥೂಲವು
ಅಂತರಂಗದ ಗುಡಿಯೊಳಗೆ
ಅಂತಃಕರಣ ಧರ್ಮ
ಅಂಗಡಿಯಿಲ್ಲಿದೆ ನೋಡಣ್ಣಾ
ಅಂಬುಜಾನನೆ ನಂಬು ನೀನೆ
ಅಷ್ಟಾಂಗ ಯೋಗದ
ಅಪಕಾರಗೈದವರಿಗುಪಕಾರಗೈವನು
ಅನುಮಾನವ್ಯಾಕೆ ತನುವಿನೊಳಗೆ ಶಿವನೆ ಕಾಣುವಾ
ಅನುಭವವೇ ಪರಮಾರ್ಥ
ಅಭಯವ ಕೊಡು ಯೆನಗೆ


ಆನಂದಪುರವಿದು ಏನು ಸಂಶಯವಿಲ್ಲ
ಆವ ಜನ್ಮದ ಪುಣ್ಯದ ಫಲವೋ


ಇವರೆ ನೋಡಮ್ಮ ಸಾಧುಗಳು
ಇಂದು ನಾಳೆಯೆಂದು ಕಾಲ ಸಂದೀತವ್ವಾ
ಇದು ಸನಾತನ ಧರ್ಮ ರಹಸ್ಯ
ಇರವಾಗಿರುವಾ ಅರಿವಾಗಿ ಮೆರೆವಾ
ಇರವೇ ಹಂಸನಾಗಿರುವೆ
ಇದು ಸನ್ಮುಹೂರ್ತ ಬೋಧೆ
ಇದೇ ಕ್ಷೀರಸಾಗರಾ
ಇರವೇ ಕಳಹಂಸನಿರುವೇ


ಈತನ ಕಂಡರೆ ಭೀತಿಯೆ ಯಿಲ್ಲವು
ಈತ ಶರಣನು ಈತನೆ ಯೋಗಿ
ಈಜಲಾರೆನು ಗುರುವೆ
ಈಷಣತ್ರಯದಾಸೆ ನೀಗಿ
ಈಶ್ವರಾಜ್ಞಾ ಚಕ್ರಬಲವು
ಈ ಜಗದೊಳಗೆಲ್ಲ ಸೋಜಿಗವಾಗಿದೆ


ಉದಾಸೀನನಾಗುವೆ
ಉಂಡುಪವಾಸಿಯ ಕಂಡವರಿಗೆ
ಉಪವಾಸವನು ಮಾಡಿರಿಂತು


ಎಚ್ಚರವಿದ್ದರೆ ಭಯವಿಲ್ಲಾ
ಎತ್ತು ಕೈಲಾಸದಲ್ಲಿಯಿತ್ತು
ಎಣಿಸುತ್ತ ಜಪವಗೈದವರು
ಎಂಥಾ ಗಾರುಡಿಗಾರನು
ಎಂಥ ಗಂಡನ ಕೂಡಿದೆಲೆ ತಾಯೆ
ಎಂಥ ಮೂಗುತಿ ಕೊಟ್ಟನವ್ವ ಗುರುವು
ಎಂಥ ಮೂಗುತಿಯಿಟ್ಟನು
ಎಂಥ ಪುಂಡಯನ್ನ ಗಂಡ
ಎಂತಿರುವನು ಜ್ಞಾನಿ
ಎಲ್ಲರು ಜಾಗ್ರದಿ ಸಂಸಾರಿಗಳು
ಎಲ್ಲವು ಜೂಜಾಟ
ಎಲ್ಲ ದೈವವು ನೀನೆಯೆಂದೆ
ಎನ್ನ ನಿನ್ನದಯ್ಯ ಶಿವನೆ


ಏನು ಸೋಜಿಗವಾಯಿತಯ್ಯಾ
ಏನು ಸೋಜಿಗವಯ್ಯ
ಏನು ಧೀರ ಏನು ಶೂರ ಯನ್ನ ಗಂಡನು|
ಏನು ಮಾಯವ ಮಾಡಿದಾ
ಏನು ಮಾಡಲಯ್ಯ ಯನ್ನ ಭ್ರಾಂತಿ ನೀಗದು
ಏನು ಮಾಡಲೀ ಕರ್ಮವು ಬಿಡದು
ಏನೋ ಆನಂದವಾಗಿಹುದು
ಏನೆಂದು ಹೇಳಲೀ ಬ್ರಹ್ಮದಾಟವನು
ಏಳು ಕೋಟಿಯ ದ್ರವ್ಯ
ಏಳು ಚಕ್ರದ ಕೀಲ


ಒಂಭತ್ತು ಕೋವಿಯ ಹುತ್ತವು ತಾನಿಂಬುಗೊಂಡಿದೆ
ಒಂಟಿಯಾಗಿ ನಾನು ಇದ್ದರೆ
ಒಡಲೆಂಬ ಸುಡುಗಾಡು ಸೇರಿ
ಒಡಲು ನಶ್ವರ ಒಡೆಯನೀಶ್ವರ
ಒಡೆಯ ನಿನ್ನಡಿಯ


ಓಂಕಾರವೇ ನಾದ
ಓಂಕಾರ ಮಾತೆ
ಓಂಕಾರ ಧ್ವಜವೆ ಹಾರು


ಕಾಮಿತಾರ್ಥವನೆಲ್ಲ ಪ್ರೇಮದಿ
ಕಲ್ಪವೃಕ್ಷದ ಸ್ವರೂಪ
ಕಾಲಕೂಟ ಹಾ ವಿಷವ ಕುಡಿದಾ
ಕಾಲಕ್ಕೆ ತುದಯಿಲ್ಲ ಕಾಲಕ್ಕೆ ಮೊದಲಿಲ್ಲ
ಕಳೆದುಹೋಯಿತು ಕಾಲ
ಕೂಡಿದೆ ನೀ ಶಿವನಾ
ಕೂಗುತ್ತಲಿದೆ ನಮ್ಮ ಕೋಳಿ
ಕಾಯಕವೆ ಯನಗೆ ಕೈಲಾಸ
ಕಂಡುಕೊಳ್ಳುವುದೆಂತು ಶಿವನಾ
ಕಂಡೆ ಶ್ರೀಗುರು ದೇವನಾ
ಕಂಡೆನೆನ್ನೊಳಗೆ ವುದ್ಧಂಡ ಮುನೀಂದ್ರರ
ಕಂಡೆನಿಲ್ಲಿಯೆ ಶಿವನಾ
ಕಂಡೆವೆಂಬವರಿಲ್ಲ ಶಿವನಾ
ಕಂಡಿರೇನೇ ಮೂಗುತೀ
ಕೃಪೆ ಮಾಡು ಯನ್ನೊಳು ಗುರುವೇ
ಕ್ಷಮೆಯ ಬಿಟ್ಟಿರಬೇಡ ಮನುಜಾ
ಕರುಣಾ ಮಯನೇ ಮಂಗಳ ಗುರುರಾಯ
ಕರ್ಮಗತಿಯನು ವರ್ಣಿಸಲರಿದು
ಕಣ್ಣು ಕಾರಣ ದೇಹ
ಕಣ್ಣು ಗೆದ್ದವ ಶಿವಯೋಗಿ
ಕೇಳಿರಿ ಮಹ ವಾಕ್ಯದರ್ಥ
ಕೋಪ ಮಾಡಬೇಡ ಮನುಜ
ಕೋಪ ಭಸ್ಮಾಸುರ ರೂಪಾ
ಕೈಯಾರ ಗುರುಸೇವೆ ಮಾಡಬೇಕಮ್ಮ


ಗುರು ಕೊಟ್ಟ ಮಂತ್ರವ
ಗುರುವಿನ ಪುತ್ರರು ತಿರಿದುಣ್ಣುವವರು
ಗುರುವಿಗೆ ಗುಟುಕು ನೀರು
ಗುರುನಾಥ ಪಾಲಿಸೋ
ಗುರು ಪುತ್ರರಿವರಂತೆ ನೋಡಿ
ಗುರು ಪಾದವನು ನಂಬಿ
ಗುರುವೆ ಲೋಕಕ್ಕೆ ಪರಮೋಪಕಾರಿ
ಗುರುವೆ ನಿನ್ನಯ ಪಾದವ ಕಂಡೆ
ಗುರುವೆ ರೇವಣಸಿದ್ಧ ಯೋಗೀಂದ್ರ
ಗುರುವೆ ನಿನ್ನಯ ಕರುಣವ ಪಡೆದ
ಗುರುವೇ ಭಕ್ತರ ಸಂಸಾರಿ|
ಗುರುವೇ ಪಾಲಿಸೋ ಗುರಿಯನ್ನು ಮುಟ್ಟಿಸೋ
ಗುರುವೇ ಪರಶಿವನು
ಗುರುವೇ ಬ್ರಹ್ಮನು ಗುರುವೇ ವಿಷ್ಣುವು
ಗುರುವೇ ಕಳೆಯೆನ್ನ ಮರವೇ
ಗುರು ರೇವಣ ಜೀವನ ಪಾವನ ಮಾಡೆನ್ನ ಧನ್ಯನಾ
ಗುರು ಕೃಪೆಯಾದವರು ಪರತತ್ವ ಬಲ್ಲವರು
ಗುರು ಕೃಪೆಯೆನಗಾಯಿತು
ಗುರು ಕೊಟ್ಟ ಜೋಳಿಗೆ
ಗುರು ತೋರಿದ ದಾರಿ
ಗುರು ದೇವನೆ ತಿಪ್ಪೇರುದ್ರಾ
ಗುಣವಂತನೇ ಗುರುಭಕ್ತ
ಗುಣವಾರನು ಸದ್ಗುಣಿ
ಗಂಗಾ ಸ್ನಾನವ ಮಾಡಿರೋ
ಗಂಧದ ಬಾಗಿಲ ಸುಂದರ ದೇವರ
ಗಗನದರ್ಧವು ಜ್ಞಾತೃವಾಯಿತು
ಗೋಪೀ ಜಾರಾ


ಘಮಘಮಿಸುವ ಸೌಗಂಧಿಕ ಪುಷ್ಪ


ಚಾಲಕನಿಲ್ಲದೆ ಯಂತ್ರ
ಚಕ್ರವ್ಯೂಹವ ಹೊಕ್ಕು
ಚೌಡಿಕೆಯನ್ನು ಬಾರಿಸುತಾಳೆ


ಜನ್ಮವೆಂಬರಣ್ಯವನ್ನು ಸೇರಿಕೊಂಡೆನು
ಜಯಭೇರೀ ನಾದವ ಕೇಳಿ
ಜಯವಾಗಲಿ ಗುರುದೇವನಿಗೇ
ಜಗವೆ ನಾಟಕ ಶಾಲೆಯಾಯ್ತು
ಜಗವೆಲ್ಲ ತುಂಬಿದೆ ಬ್ರಹ್ಮ
ಜಗಜೀವನ ರಾಮಾ ಚಿನ್ಮಯ ಜಗ ಪಾವನ ನಾಮಾ
ಜಗಕೆಲ್ಲ ಕೊಡಬಲ್ಲಶಿವನು
ಜ್ಞಾನಾಸ್ತ್ರಕಿನ್ನಿದಿರಿಲ್ಲಾ
ಜ್ಞಾನಾನುಭವ ಅಮೃತ ಸಂಜೀವಿನಿ
ಜ್ಞಾನ ಯೋಗಿಗೆ ಮಹಿಮೆಯಿಲ್ಲಾ
ಜ್ಞಾನ ಗಂಗೆಯ ಸೇರಿ
ಜ್ಞಾನೇಂದ್ರಿಯ ಕರ್ಮೇಂದ್ರಿಯ ಕೂಡಿ
ಜ್ಞಾನಿಯ ಗುಣ ಬೇರೆ ಲೋಕದೊಳು
ಜ್ಞಾನಿಗಳೊಡನಾಡು
ಜ್ಞಾತೃವ್ಯಾನವ ಸೇರಿ
ಜೋ ಜೋ ಕಂದ
ಜೋಜೋ ಜೋಜೋ


ತನುವನ್ನು ತೊಳೆಯಲಾರೋಗ್ಯಾ
ತನುವು ಎಂಬ ಹರಿವ ತೇರು
ತನುಗುಣಗಳೆಲ್ಲವೂ
ತಾನೇ ಕಟ್ಟಿದ ಗುಡಿಯೊಳಗಿಟ್ಟನು
ತೂಗು ಬಾರಮ್ಮ ಈ ತೊಟ್ಟಿಲು
ತೂಗುವ ತೊಟ್ಟಿಲ ನೋಡಮ್ಮಾ
ತೂಗುವ ತೊಟ್ಟಿಲ ನೋಡಮ್ಮಾ (ತಾರಕ)
ತೂಗು ಮಂಚನೇರಿ ಕುಳಿತಿಹರು
ತಂದುದುಣ್ಣದೆ ತೀರದು
ತಾರಕ ಯೋಗ
ತ್ರೈಮೂರ್ತಿಗಳ ಮಹಿಮೆ ಸಾಮಾನ್ಯವಲ್ಲವು
ತಿಪ್ಪೆಯೊಳಗೆ ಇದ್ದನಂತೆ
ತಿಳಿವೇ ಬಲು ಚೆಂದಾ
ತಿಳಿಯಬೇಕೈ ಶ್ರೀಗುರುವಿನಿಂದ
ತಿಳಿದುಕೊಳ್ಳಿರಿ ಇಂಥ ಲೆಕ್ಕ ನೀವು
ತ್ರಿಗುಣಗಳಿಂದಲೆ ಜಗವಿದು ನಡೆವುದು
ತೀರಿತಣ್ಣಾ ಸಾಲ


ದಾಸೋಹಂ ಭಾವ ಪಡೆಯೋ
ದಯವಿಲ್ಲದಿಹ ಧರ್ಮವೇಕೆ
ದಗ್ಧಪಟದಂತಿರ್ಪ ಯೋಗಿ
ದೇವಾ ಕೊಡು ನಿನ್ನ ಸೇವಾ
ದೇವರೆ ಕಟ್ಟಿದ ದೇವಾಲಯದೊಳು
ದೇವರೇ ಮಾಡಿಟ್ಟ ದೇವಾಲಯ
ದೇವರಿತ್ತ ದೇವದತ್ತ ಶಂಖ ವೂದಿದಾ
ದೇಹ ಕೈಲಾಸ ಕಾಣಿರೋ
ದೇಹ ವಿಚಾರವ ಮಾಡಮ್ಮಾ
ದೇಹವಾತ್ಮರಿಗೆ ಸಂವಾದ


ಧಾತ್ರಿಯೊಳು ಭಿಕ್ಷಕ್ಕೆ ತಿರುಗುತ್ತಲಿರುವಾತ ಜಂಗಮಯ್ಯ


ನಮ್ಮ ಶಿವನನ್ನು ಧ್ಯಾನವ ಮಾಡಿ
ನಂಬು ನಂಬೆಲೆ ಮಾನವಾ
ನಂಬಿದೆ ನಾನೀ ಮಹಾತ್ಮನಾ
ನಮಸ್ತೆ ಜ್ಞಾನದಿ ಸಮರ್ಥರೆನಿಸಿದ
ನಮ್ಮ ಊರಿಗೊಬ್ಬ ಮಂತ್ರವಾದಿ ಬಂದಾ
ನಮ್ಮ ದೇವರು ಮೂವರಮ್ಮ
ನಾಮ ಧ್ಯಾನದ ಮಹತ್ವ
ನಾಮಾಮೃತ ಪಾನ
ನಮೋ ವಿಶ್ವ ರೂಪಕಾ
ನುಡಿಮಾತೆ ನಿನ್ನ ಪಾದ|
ನುಡಿಯಮೃತದ ಸಾರಾ
ನರರೇನು ಬಲ್ಲರು ಗುರುಮಂತ್ರ ಮಹಿಮೆಯ
ನಾರಿಯನು ಬಿಡು
ನಡೆಯೆ ಮೌನದ ಲಕ್ಷಣವು
ನಗಬೇಕೋ ಇದಕೇನು ಅಳಬೇಕೋ
ನಾದಾನುಸಂಧಾನ ಮಾಡಿ
ನಾದಯೋಗಿಯೆ ವರ್ಣ
ನಾದದೊಳಗೆ ಬ್ರಹ್ಮಾ ಇರುತಿಹ
ನಾದೋಪಾಸನ ದೀಪಕಮಾಲೆ
ನೋಡಲಿಲ್ಲವೆ ನಮ್ಮ ಶಿವನಾ
ನೋಡು ಗುರುವಿನ ಗಾರುಡಿ ವಿದ್ಯ
ನೋಡು ತಂಗೆಮ್ಮ ಈ ಕಂದನ
ನೋಡಿರಿ ಬ್ರಹ್ಮವನು
ನೋಡಿಕೊಂಡೆನು ಶಿವನ ಕೂಡಿಕೊಂಡೆನು
ನೆರೆ ನಂಬಿದೆ ನಿನ್ನಾ ಗುರುವರ ಪರಿಪಾಲಿಸು ಯನ್ನಾ
ನಿನ್ನ ನಡೆಯನರಿತ ಮೇಲೆ
ನಿನ್ನ ಪಾದವ ಕಂಡೆ
ನಿನ್ನ ಪಾದವು ದೊರೆತರೆ ಸಾಕು
ನಿನ್ನ ಪ್ರೇರಣೆಯಿಲ್ಲದೆ
ನಿನ್ನ ಮರೆತವನೆ ಪಾಮರನು
ನಿನ್ನಲ್ಲೆ ನೋಡಿಕೋ ಬ್ರಹ್ಮವಾ
ನಿನ್ನಂಥ ಕರುಣಾಳು ಇನ್ನುಂಟೆ ಜಗದೊಳು
ನಿನ್ನೊಳಗೆ ಸುಳಿವ ಸದ್ಭಾವಂಗಳೇ ಸುರರು
ನಿಷ್ಕಾಮ ಕರ್ಮಯೋಗ
ನೀನು ಕೊಟ್ಟರೆ ಎಲ್ಲವು ಸಫಲಾ
ನೀನಾಗಿ ಕೊಟ್ಟದ್ದು ಈ ಭಾಗ್ಯವೆಲ್ಲಾ
ನಿಜ ಬೋಧಾ ಸಂಜೀವನವು
ನಿರ್ಗುಣವಾಗಿಹ ಶಿವನು


ಪಂಚೀಕರಣದೊಳು ಪ್ರಪಂಚವಾಗಿಹುದ
ಪ್ರಜ್ಞೇ ಶಿವನಾಜ್ಞೆ
ಪುರುಷೋತ್ತಮಾ ಗುರು
ಪಂಚಸ್ಥಾನದಿ ಪಂಚಭೂತಗಳ
ಪಂಚವಿಂಶತಿ ಲೀಲೆಯ
ಪಂಚ ಪ್ರಾಣಗಳು
ಪಂಚಾಕ್ಷರೀ ಶಿವ ಪಂಚಾಕ್ಷರೀ
ಪಂಚತನ್ಮಾತ್ರೆಗಳಿಂದಾ
ಪರಬೋಧವಾ ತಾನೀಯುವಾ
ಪರಬ್ರಹ್ಮವೆಂಬುದು ಎಲ್ಲಿದೆ
ಪರುಷವು ಶಿಲೆಯಲ್ಲ
ಪರಮಾನುಭವದಿಂದ
ಪರಮಾರ್ಥ ವಿಹಾರಿ
ಪಾರಮಾರ್ಥವ ಪಡೆದೇ
ಪರತತ್ವ ಪೂರ್ಣ ರಹಸ್ಯ
ಪತಿತ ಪಾವನ ಜಯಶಂಕರಾ


ಬಾಲಾ ತಿಳಿ ನಿನ್ನ ಮೂಲಾ
ಬಾಯಿ ತುಂಬಾ ಹೊಗಳೆಲೋ ನೀನು
ಬೇಡಬೇಡ ಕಾಮ್ಯಫಲವ
ಬೇಡಿದ ಭಿಕ್ಷವ ನೀಡಮ್ಮಾ
ಬೈದವರೆನ್ನಯ ಬಂಧುಗಳು
ಬನ್ನಿರಯ್ಯ ಭಕ್ತರೇ
ಬಲು ಸುಖಸಾರ ಆತ್ಮವಿಚಾರ
ಬಳಸಿದ ಬ್ರಹ್ಮಚಾರಿಯನು
ಬ್ರಹ್ಮಾಂಡ ಕೋಟಿಯ ನಿರ್ಮಾಣ ಮಾಡಿತ್ತು
ಬ್ರಹ್ಮಾಂಡ ಕೋಟಿಯ ತುಂಬಿದಾ
ಬ್ರಹ್ಮಾಂಡ ಕೋಟಿಯ ತುಂಬಿದಾ
ಬ್ರಹ್ಮಾತ್ಮ ಐಕ್ಯದ ಸಾಧನೆ
ಬಯಲಾಟವಾಡುತಾನೆ
ಬಡವನೆ ಲೋಕಕೆ ಉಪಕಾರಿ
ಬಿಡದೀ ಸಂಸಾರ ವಿಕಾರ
ಬಿಡಲುಂಟೆ ಸಂಸಾರಾ


ಭೂತ ವಿಕಾರ ಸಂಭೂತವಾಗಿರುತ್ತಿತ್ತು ಮಾಂಸಪಿಂಡಾ
ಭಯವುಂಟೆ ಭಕ್ತರಿಗೆ
ಭದ್ರಕಾಳಿಯ ಶುದ್ಧ ಯೋಗದ ಮುದ್ರೆಯೆಂಬುದೆ ನಿದ್ರೆಯು
ಭೋಗಿಯೊಳು ಕೂಡಿ
ಭಿಕ್ಷಾ ಸತ್ವಪರೀಕ್ಷಾ
ಭಿಕ್ಷಾಟನ ಲೀಲೆ


ಮನ ಮಂದಿರ
ಮನವೆಂಬ ಮೋಸಗಾತಿ
ಮನೆಯಿಲ್ಲದೆ ಶಿವನು
ಮನೆಯ ಸೇರಿದೆ ದೊಡ್ಡ ಹಾವು
ಮಳೆ ದೇವರ ಪ್ರಾರ್ಥನೆ
ಮುಂದೇನು ಗತಿಯೆನ್ನಬೇಡಾ
ಮೂವರು ಮೂರ್ತಿಗಳೀಯುವ ಸ್ಫೂರ್ತಿಯ
ಮೂರು ಅಂಗಗಳಲ್ಲಿ ಮೂರು ಲಿಂಗವನುಳ್ಳ ವೀರಶೈವ
ಮೂರು ಲಿಂಗಗಳರಿಯೋ
ಮೂರವಸ್ಥೆಗೆ ಸಾಕ್ಷಿ ಲಿಂಗಯ್ಯ
ಮೂರವತಾರವ ದಿನವೂ ತಪ್ಪದೆ
ಮೂರೇಳ್‍ಸಾವಿರದಾರ್ನೂರು ಸಂಚಾರವು
ಮೂಗುತಿಯಿಲ್ಲದ ರಂಡೇ
ಮುರಳೀಧರ ಗೈದಾ
ಮಂತ್ರಾ ಸರ್ವ ಸ್ವತಂತ್ರ ಬ್ರಹ್ಮತಂತ್ರ
ಮಂತ್ರವೆ ತಾರಕವಾಗಿಹುದು
ಮರವೇ ನೀನೆಲ್ಲಿ ಯಿರುವೇ
ಮರಣವಾಗುವ ವೇಳೆಯೊಳಗೆ
ಮಡಿಯುವ ದೇಹಕೆ
ಮಾಯಾ ನಾಟಕ ಹೂಡಿದ ಶಿವನು
ಮಾಯಾಮಯ ಕಾಯ
ಮಾಡು ಮಾನಸ ಪೂಜೆಯಾ
ಮಾಡೋ ವಿಚಾರ
ಮಾತೃಭೂಮಿ ಜನನಿ
ಮೌನ ನಿಲ್ಲದೆ ಧ್ಯಾನ ಸಲ್ಲದೆ
ಮೌನವೇ ಶಿವಜ್ಞಾನ ಕೇಶವ
ಮೇಘ ಸೈನ್ಯವ ಕೂಡಿಬಾ
ಮೈಲಿಗೆಯಾಗದ ಮಡಿ ಮಾಡಯ್ಯಾ


ಯಾರಿಗಂತೆ ಮೋಕ್ಷ
ಯಾರಯ್ಯ ದಾನವನು
ಯೋಗಿಯೆಂಬೆನೆ ಭೋಗದೊಳಿರುವೆ
ಯಾವ ಕಣ್ಣಿಲಿ ನೋಡಿದೆ
ಯೋಗವಾಹವೇ
ಯೋಗ ಮಾಯೆಯ ಗೆದ್ದ ಯೋಗಿ
ಯೋಗಿಗಳೊಳು ಬ್ರಹ್ಮಜ್ಞಾನಿಯೆ
ಯೋಗ ಮಾಯೆಯ ಗೆಲ್ಲಬೇಕು
ಯೋಗೀ ಪರಮ ವಿರಾಗಿ
ಯೋಗವ ತಿಳಿದವರ್ಯಾರಯ್ಯ
ಯನಗಾಗಿ ಕಳೆದುಬಿಟ್ಟೆ
ಯೋಗಮುದ್ರಾ ಲಕ್ಷಣ
ಯೋಗ ಸಾಧನೆ ಮಾಡಿ
ಯೋಗಿ ಶಿವಾಭವ ನೀಗಿಸುವಾ


ರಾಧಾರ ಮಣಾ
ರೂಪಾಂತರದೊಳಿತ್ತು ಹಿರಿಯ ಮಾಯೆ


ಲಿಂಗ ಪೂಜಿಸಿ
ಲಿಂಗ ಪೂಜೆಯ ಮಾಡಿರಿ ಇಂತು
ಲೆಕ್ಕವೆಯಿಲ್ಲದ ದುಃಖವನೀಯುತ


ವರುಣ ದೇವನೆ ಇಳಿದು ಬಾ
ವೈದಿಕರೆನ್ನುವ ನಾವೆಲ್ಲ
ವೇದವನೋದಿದರೇನು ಫಲಾ
ವಿದ್ಯೆ ಲೋಕಕೆ ನಿಜವಾದಾಸ್ತಿ


ಶ್ರವಣಗೈದವನೆ ಶ್ರೋತ್ರಿಯನು
ಶಂಕರ ದುರಿತ ಭಯಂಕರ
ಶರಣನಾದರೆ ಹೇಗಿರಬೇಕು
ಶರೀರ ನಾನೆಂಬುದೆ
ಶರೀರವೆನ್ನುವ ಸೆರೆಮನೆಯೊಳಗೆ
ಶಿವಶಕ್ತಿಯರ ಲೀಲೆ ಜಗವು
ಶಿವನ ಭಕ್ತರು ಶ್ರವಣಯುಕ್ತರು
ಶಿವ ನಾಮಾಮೃತವಾ ಸವಿಯುತ
ಶಿವನಕ್ರೀಡಾ ಭವನ ನೋಡಾ
ಶಿವನೇ ಮಾಡುವ ಯೋಗವ
ಶಿವನಿಗೆ ಒಡಲಾದ ಮಂತ್ರಾ
ಶಿವಶಿವ ಎಂದೆನ್ನಿರೋ
ಶಿವಶಿವಶಿವಶಂಭೋ
ಶಿವಾ ಯೆನ್ನಬಾರದೇ (ತಾರಕ)
ಶಿವಯೋಗ ಮಾಡಿದವಗೆ
ಶಿವಯೋಗಿಯ ಸ್ವರೂಪ
ಶಿವಜೀವರ ನೈಜವನರಿಯದೆ ಸಂಭವಿಸಿತು
ಶಿವಕೊಟ್ಟ ಸುಪ್ರಸಾದವ
ಶಿವಧರ್ಮ ತಿಳಿಯಮ್ಮ ತಂಗೀ
ಶಿವಧರ್ಮವರಿಲಯಲು
ಶ್ರೀ ಗುರುಬೋಧೆ


ಸನ್ಯಾಸವನು ತಾಳು ಸಂಸಾರದಲ್ಲೆ
ಸನ್ಮೋಹನಾಸ್ತ್ರ
ಸಪ್ತ ಚಕ್ರಗಳನ್ನು ಶೋಧಿಸು
ಸಂಸ್ಕಾರದಿಂದಲೆ ಶಿಲೆ ಲಿಂಗವಹುದು
ಸುಲಭ ಪೂಜೆಯ ಮಾಡೆಲೈ ಮನವೇ
ಸುಲಭಜ್ಞಾ ಯೋಗ
ಸುಷುಮ್ನಾ ಸುಷಿರವಾಸಿ
ಸುತ್ತಲು ಕತ್ತಲು ಮುತ್ತಲು ಬೆಳಕ
ಸಂಧ್ಯಾ ವಂದನೆಯಾ ಮಾಡಿದೆ
ಸ್ವಾರ್ಥವಳಿದರೇ ಪರಮಾರ್ಥವಾಗುವುದೆಂದು
ಸಾರಾಸಾರ ವಿಚಾರ ತರಂಗ
ಸಾಕಾರದೊಳಗೆ ನಿರಾಕಾರ
ಸಖನೇ ಪೇಳುವೆನು ಸುಖದ ಮಾರ್ಗವನು
ಸ್ನಾನ ಮಾಡಿರಯ್ಯ
ಸಗುಣ ಸಾಕಾರ
ಸತ್ಯ ಸನಾತನ ಬ್ರಹ್ಮವನು
ಸತ್ಯ ಶೋಧನೆ ಮಾಡಿರೋ
ಸತ್ತ ಮೇಲುಂಟೆ ಸಮಾಧಿ
ಸತಿಯೇ ದೇಹವು ಪತಿಯೇಆತ್ಮನು


ಹಿಂದಕೆ ಮುಂದಕೆ ತೂಗಿ ಸಾಗಿ
ಹಿಡಿಯಬಾರದೆ ಶ್ರೀಗುರು ಪಾದ
ಹಂಸನ ಮಂತ್ರವೆ ತತ್ವಮಸಿ
ಹಾರುವ ಹಂಸನ ನೋಡಮ್ಮಾ
ಹರಿಪಾದದೊಳು ಗಂಗೆ ಹುಟ್ಟಿ
ಹರಿಯ ನಿಂದಿಸಬೇಡ
ಹಡಗು ಸಾಗಿದೆ ನೋಡು

Categories
Tatvapadagalu ತುರುವನೂರು ಲಿಂಗಾರ್ಯರ ತತ್ವಪದಗಳು ಭಾಗ – 1

ತುರುವನೂರು ಲಿಂಗಾರ್ಯರ ತತ್ವಪದಗಳು ಭಾಗ – 1

ನಮ್ಮ ಶಿವನನ್ನು ಧ್ಯಾನವ ಮಾಡಿ
ನಮ್ಮ ಶಿವನನ್ನು ಧ್ಯಾನವ ಮಾಡಿ|
ನಿಮ್ಮ ಪಾಪಕ್ಕೆ ಹೆದರಲೆಬೇಡಿ ||ಪ||
ಒಮ್ಮೆ ಮನಸಾರ ನುಡಿಯದ ಖೋಡಿ|
ಸುಮ್ಮನೇ ಪೋಪ ನರಕಕ್ಕೆ ನೋಡಿ ||ಅಪ||
ನೀಲಕಂಠನ ಗುಡಿಯೊಳಗಿರುವಾ|
ನಾಲಗೆಯೆಯಿಲ್ಲದಾ ಘಂಟೆ ನುಡಿವಾ||
ಮೂಲನಾದವ ಕೇಳಿ ಮೈಮರೆವಾ|
ಲೀಲೆಯಿಂದಿರ್ಪಶರಣಗೆ ಮಣಿವಾ ||1||
ಮೂಲಕುಂಡಲಿಯನ್ನೀಗ ತಡೆದು|
ಕಾಲಕರ್ಮದ ಸಂಯೋಗ ತೊಡೆದು ||
ಹೇಳಲಾಗದಾನಂದವ ಪಡೆದು|
ಮೂಲಮಂತ್ರವ ತಾನಾಗಿ ನುಡಿದು ||2||
ಗಂಗೆ ಗೌರಿಯರೊಡಗೂಡಿ ಬಂದು|
ಮಂಗಳಾತ್ಮಕತಾನಾಗಿ ನಿಂದು||
ಕಂಗಳಿರೆ ಮೂರವಸ್ಥೆಯ ತಂದು|
ಲಿಂಗವಾದನು ನರಹರಿಯಿಂದು ||3||

ಸುಲಭ ಪೂಜೆಯ ಮಾಡೆಲೈ ಮನವೇ
ಸುಲಭ ಪೂಜೆಯ ಮಾಡೆಲೈ ಮನವೇ| ನಿನ್ನೊಳಗೆ ಪರಶಿವ|
ಕಳೆಯ ಕೂಡುತಲಹುದು ನಿರ್ಗುಣವೇ ||ಪ||
ಕಳೆದು ಕಾಯವ ತಿಳಿದುಪಾಯವ|
ಹೊಳೆವ ಮಂತ್ರವತಳೆದು ತಂತ್ರವ||
ನಿಲಲು ವೈಭವ| ಉಳಿಯಧೀ ಭವ|
ಸಲುವುದಾ ಶಿವನೊಲುಮೆಯನುಭವ ||ಅಪ||
ನಿನ್ನ ಮೈಯನು ನೀನೆ ತೊಳೆವಾಗ| ಅಭಿಷೇಕ ಶಿವನಿಗೆ|
ಎನ್ನುತಾ ಚರಿಸುವುದೆ ಸುವಿರಾಗ||
ನಿನ್ನ ಮುಖ ಕೈಕಾಲ ತೊಳೆದರೆ|
ಇನ್ನು ಶಿವನಿಗೆ ಪೂಜೆಯೆಂದರೆ||
ಮುನ್ನ ಮಾಡಿದ ಕರ್ಮವೆಲ್ಲವು|
ನಿನ್ನ ಪಾಲಿಗೆ ನಿಲ್ಲಲಿಲ್ಲವು ||1||
ಆವಗಂಧವ ಮೂಸಿಸಲು ನೀನು| ಶಿವನಿಗೆ ಸಮರ್ಪಿಸು ||
ಜೀವ ಭಾವವೆ ನೀಗಿತಿನ್ನೇನು ||
ಆವ ರಸ ರುಚಿ ರೂಪ ಸ್ಪರ್ಶವ|
ಆವ ಶಬ್ದದೊಳಾದ ಹರ್ಷವ||
ದೇವದೇವನಿಗರ್ಪಿಸಲು ಶಿವ|
ನೀವ ನಿತ್ಯಾನಂದ ಪದವ ||2||
ಏನು ಮಾಡುವುದೆಲ್ಲ ಶಿವಗೆಂದು | ಮಾಡುತ್ತಲಿದ್ದರೆ |
ಹೀನ ಕರ್ಮದ ಬಾಧೆ ನಿನಗಿರದು||
ಧ್ಯಾನ ಮೌನವು ಜ್ಞಾನ ಸರ್ವವು|
ತಾನೆ ಶಿವನೆಂದೆಲ್ಲ ಕಾಲವು||
ಮೌನಿ ನರಹರಿ ಪಾದಕಮಲವ |
ನೀನು ನಂಬಲು ಪಡೆವೆ ಮೋಕ್ಷವ ||3||

ಜ್ಞಾನಗಂಗೆಯ ಸೇರಿ
ಜ್ಞಾನಗಂಗೆಯ ಸೇರಿ| ಸ್ನಾನ ಮಾಡೆಲೆ ನಾರಿ|
ಮಾನಸವೆನ್ನುವ ವೈಯಾರಿ ||ಪ||
ಹೀನ ಗುಣ ಮೈಲಿಗೆಯ| ನೀನಳಿದು ನಿಜ ಮಡಿಯ|
ಸ್ವಾನುಭಾವದಿ ಹೊಂದಿ ಸನ್ಮತಿಯ ||ಅಪ||
ತಾಯಿ ತಂದೆಯ ಸೇವೆ| ಗೈಯಲಾಯಿತು ಸ್ನಾನ|
ಮಾಯಗುಣವಳಿದಿರಲೊಂದು ಸ್ನಾನ |
ಬಾಯಲ್ಲಿ ಶಿವಮಂತ್ರ ಧ್ಯಾನವೆಂಬುದು ಸ್ನಾನ|
ಕಾಯ ಕರ್ಮವ ಮೀರಲೊಂದು ಸ್ನಾನ ||1||
ನಿತ್ಯ ಶ್ರವಣವಗೈದು| ಸತ್ಯಾರ್ಥವಂ ತಿಳಿದು|
ಚಿತ್ತಶುದ್ಧಿಯಗೈವುದೊಂದು ಸ್ನಾನ||
ಶೃತ್ಯರ್ಥ ಮನನದೊ| ಳುತ್ತಮ ಸುಜ್ಞಾನ|
ವೇತ್ತನಾಗಿರುವುದೆ ನಿಜ ಸ್ನಾನ ||2||
ವಿನಯ ಸೌಶೀಲ್ಯಸಾ | ಧನ ನೀತಿ ಸ್ನಾನವು||
ಧನಮದವಳಿದಿರ್ಪುದದು ಸ್ನಾನ||
ಜನನ ಮರಣಂಗಳ | ನೆನಹಿಲ್ಲದುದೆ ಸ್ನಾನ|
ನೆನೆಯೆ ನರಹರಿಯನ್ನು ನಿಜಸ್ನಾನ ||3||

ಕಂಡೆನೆನ್ನೊಳಗೆವುದ್ಧಂಡ ಮುನೀಂದ್ರರ
ಕಂಡೆನೆನ್ನೊಳಗೆ ವುದ್ಧಂಡ ಮುನೀಂದ್ರರ|
ಖಂಡಿಸಿದರೆನ್ನ ದುರ್ವ್ಯವಹಾರ ||ಪ||
ಕಂಡಕೂಡಲೆ ಜ್ಞಾನ | ಮಂಡಿಸಲು ಶಿವಧ್ಯಾನ|
ಮಂಡಲತ್ರಯ ಮಧ್ಯ ಸಂಧಾನ ||ಅ|ಪ||
ತನುಗುಣಗಳೆನಿಸುತ್ತ | ಮನದಲ್ಲಿ ಜನಿಸುತ್ತ |
ಶುನಕನಾಯಿತು ನುಡಿಯ ಬೊಗಳುತ್ತ ||
ಶುನಕ ಗರ್ಭದಿ ಜನಿಪ| ಅನುಭಾವ ನುಡಿಮುನಿಪ||
ಪ್ರಣವ ಶೌನಕನಿದ್ದ ಸುಖ ರೂಪ ||1||
ಕತ್ತೆಯಂತೀ ತನುವ | ಹೊತ್ತು ತಿರುಗುವ ಮನವ |
ಸತ್ತು ಹುಟ್ಟುವ ತನುವ ಬಿಡಿಸಿರುವಾ||
ಕತ್ತೆ ಗರ್ಭದಿ ಜನಿಸಿ| ಮತ್ತೆ ಗಾರ್ಗ್ಯನುಯೆನಿಸಿ||
ಉತ್ತಮ ಜ್ಞಾನಿಯಾದನು ಸೊಗಸೀ ||2||
ಸುಖರೂಪ ಸನ್ನುಡಿಯ | ಶುಕ ಗರ್ಭದೊಳು ಪುಟ್ಟಿ||
ಅಕಳಂಕ ಮಂತ್ರಕೋಟಿಯ ನುಡಿದು ||
ಶುಕಮುನಿಯು ಭಾಗವತ | ಪ್ರಕಟ ಕಾವ್ಯವ ಬರೆದ |
ಸಖನಾದ ನರಹರಿಗೆ ಸುಖಬೋಧಾ ||3||

ದೇವರೇ ಮಾಡಿಟ್ಟ ದೇವಾಲಯ
ದೇವರೇ ಮಾಡಿಟ್ಟ ದೇವಾಲಯ ||
ನೀವಿಲ್ಲಿ ಪೂಜೆಯ ಮಾಡಿರಯ್ಯ ||ಪ||
ಪಾವನಕ್ಕೆ ಪಾವನವು ದೇಹಾಲಯ |
ಕೈವಲ ಸಾಧನಕ್ಕೆ ಸದಾಶ್ರಯ ||ಅಪ||
ದೇವರಿಲ್ಲಿ ಠಾವು ಮಾಡಿ ನಿಂತನಯ್ಯಾ |
ಜೀವನನ್ನೆ ಕಾವಲಿಟ್ಟು ಕುಂತನಯ್ಯ ||
ಸಾವು ಹುಟ್ಟು ಇಲ್ಲದಾತ್ಮ ನೋಡಿರಯ್ಯ |
ಸಾವು ಹುಟ್ಟು ಲೀಲೆಯಾಡುತಿರ್ಪನಯ್ಯ || 1||
ಮುನಿಗಳೆಲ್ಲ ಮೌನವಾಗಿ ಜಪಧ್ಯಾನವ |
ಮನುಗಳೆಲ್ಲ ಮಂತ್ರಾನುಸಂಧಾನವ ||
ವಿನಯಶೀಲರಾಗಿಗೈವ ಸುವಿಧಾನವ |
ಮನವು ಕಂಡು ಕಲಿಯಲಾಗಿ ನಿಧಾನವ ||2||
ಅಮರರಿಲ್ಲಿ ಅಮರಗಾನ ಮಾಡುತ್ತಿರೆ |
ರಮಿಸಿ ಬೋಧ ಸುಧೆಯ ಪಾನ ಮಾಡುತ್ತಿರೆ ||
ಪ್ರಮಥರೆಲ್ಲ ಶಿವನ ಧ್ಯಾನ ಗೈಯುತ್ತಿರೆ |
ಸಮತೆಯನ್ನು ಸಾರಿ ಶರಣರಾಗುತ್ತಿರೆ ||3||
ನಾದವಾದ್ಯ ತಾನೆ ತಾನೆ ನುಡಿಯುತ್ತಿದೆ |
ವೇದ ಘೋಷ ನಿತ್ಯವಾಗಿ ನಡೆಯುತ್ತಿದೆ ||
ಸಾಧುಸಂತರಿಂದ ಪೂಜೆಯಾಗುತ್ತಿದೆ |
ಬೋಧೆ ಎಂಬ ಗಂಗೆಯಿಲ್ಲೆ ಹರಿಯುತ್ತಿದೆ ||4||
ಒಂಭತ್ತು ಬಾಗಿಲುಳ್ಳ ದೇವಾಲಯ |
ಇಂಬಾಗಿ ಲೋಕಕೆಲ್ಲ ಮಹಾಪ್ರಿಯ ||
ನಂಬಿಕೊಂಬ ಹುಂಬರಿಂಗೆ ಮಹಾಭಯ |
ಡಾಂಭಿಕರ್ಗೆ ಶಿಕ್ಷೆಯೀವ ಯಮಾಲಯ ||5||
ಎಂಟು ಗೇಣು ಉದ್ದವಾದ ದೇವಾಲಯ |
ಉಂಟು ಇಲ್ಲಿ ಎಲ್ಲ ಸೃಷ್ಟಿ ಸ್ಥಿತಿಲಯ ||
ಬಂಟರಾದ ಸುರರಿಗಾಯ್ತು ಮಹಾಲಯ|
ಅಂಟಿ ಅಂಟದಿರುವ ಆತ್ಮನಿರಾಮಯ ||6||
ಪಂಚಪ್ರಾಣವೆನ್ನುವಂಥ ಪರಿಚಾರರು |
ಕೊಂಚ ಬಿಡುವು ಇಲ್ಲ ನಿತ್ಯ ಸಂಚಾರರು||
ಮಿಂಚಿನಂತೆ ಹೊಳೆವ ಬುದ್ಧಿ ಮನವೆಂಬರು|
ಸಂಚು ತಿಳಿದುಕೊಂಡು ಸೇವೆ ಮಾಡುವರು ||7||
ಎಲ್ಲ ಪುಣ್ಯ ತೀರ್ಥಕ್ಷೇತ್ರ ಉಂಟಿಲ್ಲಿಯೆ |
ಎಲ್ಲ ಭಕ್ತಿ ಜ್ಞಾನ ಯೋಗ ಗಂಟಿಲ್ಲಿಯೆ ||
ಎಲ್ಲಿ ನೋಡಲಿಲ್ಲ ಇಂಥ ಗುಡಿಯಲ್ಲವೆ ||
ಎಲ್ಲ ಲೋಕ ಇಲ್ಲೆ ಉಂಟು ಕಂಡಿಲ್ಲವೆ ||8||
ದುಷ್ಟರೇನು ಬಲ್ಲರಿದರ ಮಹತ್ವವ |
ಇಷ್ಟ ಬಂದ ಹಾಗೆ ಕುಣಿದು ದಿವ್ಯತ್ವವ ||
ನಷ್ಟ ಮಾಡಿಕೊಂಡರಲ್ಲ ನಿಜ ತತ್ವವ |
ಸ್ಪಷ್ಟ ತಿಳಿಯುವಾತ ಪಡೆವ ಪರ ತತ್ವವ ||9||
ಸಪ್ತ ಕೋಟಿ ಮಂತ್ರಪಾಠಕ್ಕಿದೇ ಸ್ಥಲ |
ಗುಪ್ತವಾಗಿ ದೇವರೊಲಿಸಲಿದೇ ಬಲ ||
ಕ್ಲುಪ್ತವಾಗಿ ಸರ್ವಭೂತಕ್ಕಿದೆ ಫಲ |
ಜ್ಞಪ್ತಿ ಮಾತ್ರ ನರಹರೀಂದ್ರ ನಿರಾಕುಲ ||10||

ಯಾರಿಗಂತೆ ಮೋಕ್ಷ
ಯಾರಿಗಂತೆ| ಮೋಕ್ಷ | ಯಾರಿಗಂತೆ ||ಪ||
ತೋರ ತನುವಿಗೊ| ಜೀವ ನಿಂಗೋ|
ಜಾರಿಕೊಳ್ಳುವ ಮನಸಿಗಾಯ್ತೊ ||ಅ|ಪ||
ಪಂಚ ಪ್ರಾಣಕೊ| ಪಂಚ ವಿಷಯಕೊ |
ಪಂಚ ಜ್ಞಾನೇಂದ್ರಿಯಕೆ ಮುಕ್ತಿಯೊ ||
ಪಂಚ ಕರ್ಮೇಂದ್ರಿಯಕೊ ಬುದ್ಧಿಗೊ |
ಪಂಚ ಕೋಶಕೆ ಮುಕ್ತಿಯಾಯ್ತೊ ||1||
ಭೂತಗಳಿಗೋ ತ್ರಿಗುಣಗಳಿಗೋ |
ಜಾತಿ ಕರ್ಮಕೋ ಭಕ್ತಿ ಭಾವಕೊ ||
ನೀತಿ ನಿಯಮಕೊ ಚಿತ್ತವೃತ್ತಿಗೋ |
ಕೀರ್ತಿ ಗೌರವಗಳಿಗೆ ಮುಕ್ತಿಯೋ ||2||
ಮನೆಗೊ ಹೊಲಕೋ| ಧನಕೋ ಧಾನ್ಯಕೋ||
ವನಿತೆಪುತ್ರರಿಗಾಯ್ತೋ ಮುಕ್ತಿ ||
ಜನನಿ ಜನಕರಿಗಾಗುತಿಹುದೋ|
ಜನಿಸಿದಾಹಂಕಾರಕಾಯ್ತೋ ||3||
ಎಲವು ತೊಗಲು ರಕ್ತಮಾಂಸಂ |
ಗಳಿಗೆ ಮುಕ್ತಿಯಾಗುತಿಹುದೇ ||
ಕಳಚಿಕೊಳ್ಳುವ ಸ್ಥೂಲ ತನುವಿಗೊ |
ತಿಳಿಯದಿದ್ದ ಮಲಿನ ಮನಕೊ ||4||
ಯಾರಿಗಿಲ್ಲವು ಮುಕ್ತಿ ದೇಹವ |
ಸೇರಿಕೊಂಡ ಜೀವ ತಾನೇ ||
ಬೇರೆ ದೇಹ ಬೇರೆಯೆಂದು |
ಮೀರಿ ನರಹರಿಯಲ್ಲಿ ಸೇರಲು ||5||

ಬಲು ಸುಖಸಾರ ಆತ್ಮವಿಚಾರ
ಬಲು ಸುಖಸಾರ | ಆತ್ಮವಿಚಾರ ||ಪ||
ಸುಲಲಿತ ಪೂರ| ಮೂಲಾಧಾರ ||ಅಪ||
ಜಗವಿದು ಮಿಥ್ಯ | ಬ್ರಹ್ಮವೇ ಸತ್ಯ ||
ಅಗಣಿತ ಬ್ರಹ್ಮ| ಜಗದಾಧಾರ ||1||
ಶಿವನ ವಿಯೋಗ | ಭವಭಯ ರೋಗ ||
ಶಿವನೊಳಗೈಕ್ಯ| ಜೀವಗೆ ಸೌಖ್ಯ ||2||
ವ್ಯಷ್ಟಿಯೆ ಜೀವ ಸ| ಮಷ್ಟಿಯೆ ಶಿವನು ||
ದೃಷ್ಟಿಗೆ ಕಾಣನು| ಶ್ರೇಷ್ಠನು ಶಿವನು ||3||
ಕಲ್ಪಿತ ಜೀವನು | ಅಲ್ಪನ ನಿತ್ಯನು ||
ಕಲ್ಪನಾತೀತನು | ಶಿವನೇ ನಿತ್ಯನು ||4||
ಭ್ರಾಂತಿಯ ಜೀವ| ವಿ| ಶ್ರಾಂತಿಯಕಾಣನು ||
ಶಾಂತಿಯೆ ಶಿವನೀ| ಚಿಂತಾಹರಣನು ||5||
ವಿಶ್ವವಿರಾಟ | ನಶ್ವರಮಾಟ |
ಶಾಶ್ವತನೀಶ್ವರ | ತಾನೆ ಸ್ವರಾಟ ||6||
ದೇಹವ ದಹಿಸುವ | ಮೋಹ ನಿಗ್ರಹವ ||
ವಹಿಸಿ ನಿಂತಿರುವ | ಸೋಹಂಭಾವ ||7||
ದುರ್ಗುಣ ನರಕ | ಸದ್ಗುಣ ನಾಕ ||
ನಿಗ್ರಹ ಶೋಕ | ನಿರ್ಗುಣ ಮೋಕ್ಷ ||8||
ನಿರ್ಮಲ ನೀತಿ | ಧರ್ಮದ ಜ್ಯೋತಿ ||
ಕರ್ಮದ ಭೀತಿ ಇಲ್ಲದ ಮೂರ್ತಿ ||9||
ನರಹರಿಬೋಧಾ | ಪರಮಾಹ್ಲಾದ ||
ಶರಣರ ವೇದಾ | ದೊರೆತರೆ ಸ್ವಾದ ||10

ಉಪವಾಸವನು ಮಾಡಿರಿಂತು
ಉಪವಾಸವನು ಮಾಡಿರಿಂತು| ಗುರು|
ಉಪದೇಶವನ್ನಾಂತು ನಿಜದಲ್ಲಿ ನಿಂತು ||ಪ||
ಕಪಟ ನಾಟಕ ಸೂತ್ರಧಾರಿ | ಗುರು |
ಕೃಪೆಯಿಂದಲಾಗುವುದು ಮುಕ್ತಿಗೆ ದಾರಿ ||ಅಪ||
ಅನ್ನ ಬಿಡುವುದೆ ಉಪವಾಸ| ಎನ|
ಲನ್ಯಾಯವಿದು ಎಂದ ಗುರು ಪರಮೇಶಾ ||
ಅನ್ಯ ವಿಷಯಗಳಾಸೆ ಬಿಟ್ಟು| ತನ|
ಗನ್ಯವಿಲ್ಲೆನ್ನುವುದುಪವಾಸ ಗುಟ್ಟು ||1||
ತನು ಭೋಗ ತನಗೆಂಬುದೂಟ| ಸರ್ವ|
ತನು ಭೋಗ ತನಗಿಲ್ಲವೆನಲುಪವಾಸ||
ಮನ ವೃತ್ತಿ ತನಗೆಂಬುದೂಟ | ಸರ್ವ|
ಮನ ವೃತ್ತಿರಹಿತ ತಾನೆನಲುಪವಾಸ ||2||
ಬೋಧಾಮೃತದ ಹಾಲ ಕುಡಿದು| ಪಕ್ವ|
ವಾದನುಭವವೆಂಬ ಪಣ್ಗಳ ತಿಂದು||
ಸಾಧುತ್ವ ತೀರ್ಥವ ಕೊಂಡು| ತತ್ವ|
ಸಾಧನೆಯೆಂಬ ಪ್ರಸಾದವ ಪಡೆದು ||3||
ವಿಷಯ ಸಂಗ್ರಹದೂಟ ದೋಷ| ನಿ|
ರ್ವಿಷಯಾನುಭವ ಜ್ಞಾನವದು ಉಪವಾಸ||
ಸಸಿನ ಸುಜ್ಞಾನ ವಿಲಾಸ| ಪರ|
ವಶನಾಗಿ ತಾನಿರ್ಪುದದು ಉಪವಾಸ ||4||
ಧ್ಯಾನದಲ್ಲಿಹುದುಪವಾಸ| ಪರ|
ಮಾನಂದ ಮಯನಾದರದು ಉಪವಾಸ||
ಮೌನವೆನ್ನುವುದುಪವಾಸ| ಸು|
ಜ್ಞಾನಿ ಶ್ರೀನರಹರಿ ಗೈದುಪದೇಶ ||5||

ಹಿಂದಕೆ ಮುಂದಕೆ ತೂಗಿಸಾಗಿ
ಹಿಂದಕೆ ಮುಂದಕೆ ತೂಗಿ ಸಾಗಿ|
ಬಂದನವ್ವ| ಅಲ್ಲೆ| ನಿಂದನವ್ವ ||ಪ||
ಅಂದಿಗೆ ಇಂದಿಗೆ ಎಂದಿಗೆ ಒಂದೇ
ಎಂದನವ್ವ| ನಿತ್ಯಾನಂದನವ್ವ ||ಅಪ||
ಹುಚ್ಚರಿಗಚ್ಚರಿಯಾದ ಲೋಕ |
ನೆಚ್ಚನವ್ವ | ಕಂಡು| ಮೆಚ್ಚನವ್ವ||
ಎಚ್ಚರಕೆಚ್ಚರ ಹೆಚ್ಚಿರುವಾತ
ಸ್ವಚ್ಛನವ್ವ| ಮುಂದೆ| ಸ್ವೇಚ್ಛನವ್ವ ||1||
ಸುತ್ತಲು ಕತ್ತಲು ಮುತ್ತಲು ಬೆಳಕು|
ಇತ್ತಾನವ್ವ| ಎಲ್ಲ| ಹೊತ್ತಾನವ್ವ ||
ಎತ್ತಲು ಬೆತ್ತಲೆಯಾಗಿ| ನಿಂತು|
ಸುತ್ತ್ಯಾನವ್ವ| ನಿತ್ಯ| ಸತ್ಯಾನವ್ವ ||2||
ನೂತನ ಚೇತನದಾತನ ಕಂಡು|
ಸೋತೆನವ್ವ | ಭೂತ| ನಾಥನವ್ವ||
ಜಾತಕ ಸೂತಕ ಪಾತಕ
ಹರಿಸುವಾತನವ್ವ| ಮುಕ್ತಿ| ದಾತನವ್ವ ||3||
ಮಂತ್ರವ ತಂತ್ರವ ಯಂತ್ರವ ಬಲ್ಲ|
ಸಂತನವ್ವ| ಪುಣ್ಯ| ವಂತನವ್ವ||
ಶಾಂತಿಯ ಕಾಂತಿಯ ನಾಂತಿರುವಾತ|
ನಿಂತನವ್ವ| ಇಲ್ಲೆ| ಕುಂತನವ್ವ ||4||
ಎಂಜಲು ಮುಂಜಲಿಗಂಜದೆ ಉಂಡು|
ಬೆಳದೇನವ್ವ| ಪಾಪ| ಕಳೆದೇನವ್ವ ||
ಸಂಜೆಗೆ ಮುಂಜೆಗೆ ರಂಜಿಪನೀತ|
ಕಂಡೇನವ್ವ| ನಂಬಿ| ಕೊಂಡೇನವ್ವ ||5||
ನರಹರಿ ತಾತನು | ಕರುಣಿಸಿದಾತನ|
ಬೆರೆದೆನವ್ವ| ಬೋಧೆಯರಿದೆನವ್ವ ||
ಮರಣಕೆ ಸಿಕ್ಕದೆ| ದುರುತಕೆ ದಕ್ಕದೆ |
ಸರಿದೆನವ್ವ| ಮೈಯ ಮರೆದೆನವ್ವ ||6||

ತ್ರಿಗುಣಗಳಿಂದಲೆ ಜಗವಿದು ನಡೆವುದು
ತ್ರಿಗುಣಗಳಿಂದಲೆ| ಜಗವಿದು ನಡೆವುದು|
ತ್ರಿಗುಣಗಳೇ ತ್ರೈಮೂರ್ತಿಗಳು ||ಪ||
ತ್ರಿಗುಣಾತೀತನೆ| ಜಗದಾತ್ಮಕನು||
ಸಗುಣಾಶ್ರಯನಾ ಪರವಸ್ತು ||ಅ|ಪ||
ಸತ್ಯವು ಶಾಂತಿಯು| ಭಕ್ತಿ ವಿರಕ್ತಿಯು|
ಸತ್ವಗುಣದ ನಿಜವೃತ್ತಿಗಳು||
ನಿತ್ಯವು ಕರ್ಮಾ| ಸಕ್ತಿರ ಜೋಗುಣ|
ವೃತ್ತಿಯೊಳಿರುವುದು ತಾಮಸವು ||1||
ನಿರ್ಮಲವಾಗಿಹ| ಧರ್ಮವೆ ಸತ್ವವು|
ಉಮ್ಮಳಿಸುವುದೆ ರಜೋಗುಣವು ||
ಕರ್ಮದಿ ಮುಳುಗುತ| ಧರ್ಮವನರಿಯದ|
ಹಮ್ಮೆನಿಸಿಹುದೆ ತಮೋಗುಣವು ||2||
ಅರಿವು ಸತ್ವಗುಣ| ಮರೆವು ತಮೋಗುಣ|
ಅರಿವು ಮರೆವುಗಳ ಹರಿದಾಟ||
ಅರಿಯೆ ರಜೋಗುಣ| ಮೆರೆವ ಮೂರು ಗುಣ|
ಬೆರೆಯದೆ ಇರುವುದೆ ಪರಮಾತ್ಮ ||3||
ಸಾತ್ವಿಕ ರಾಜಸ | ತಾಮಸ ಗುಣಗಳ|
ವೃತ್ತಿಯೊಳಿಲ್ಲವು ಪರಮಾತ್ಮ||
ವೃತ್ತಿಗಳೆಲ್ಲ ನಿ| ವೃತ್ತಿಯ ಮಾಡುವ|
ನಿತ್ಯ ಸಾಕ್ಷಿಕನು ಪರಮಾತ್ಮ ||4||
ಸೃಷ್ಟಿ ರಜೋಗುಣ| ಲಯವೆ ತಮೋಗುಣ|
ಸೃಷ್ಟಿಲಯಂಗಳ ನಡುವಿರುವ||
ಶ್ರೇಷ್ಠ ಸ್ಥಿತಿಯೇ| ಸತ್ವಗುಣವುನಿ|
ರ್ದಿಷ್ಟವು ತಮರಜಕಾಶ್ರಯವು ||5|
ತನುವೇ ತಾಮಸ| ಮನವೇ ರಾಜಸ|
ಅನಘಾತ್ಮನು ತಾಂ ಸಾತ್ವಿಕನು ||
ಘನತರ ಮಹಿಮನು| ಮನುಮುನಿ ವಂದ್ಯನು||
ವಿನುತನು ನರಹರಿ ಗುರುವರನು ||6||

ಗಗನದರ್ಧವು ಜ್ಞಾತೃವಾಯಿತು
ಗಗನದರ್ಧವು ಜ್ಞಾತೃವಾಯಿತು|
ಗಗನದುಳಿದರ್ಧದಲಿ ನಾಲ್ಕಾ|
ಗೊಗೆದು ವಾಯುವು ಅಗ್ನಿಯಾಪೋ ಪೃಥ್ವಿಗಳ ಸೇರಿ ||
ಸೊಗಸಿ ಮಾನಸ ಬುದ್ಧಿ ಚಿತ್ತವು|
ಮಿಗಿಲಹಂಕಾರಗಳು ಕ್ರಮದಲಿ|
ಗಗನ ಪಂಚಕವೆನಿಸಿದುವು ತಾನಂತರಿಂದ್ರಿಯವು ||1||
ಮಾರುತ ದರ್ಧವು ದಾನವಾಯಿತು|
ಮರುತದೊಳಗುಳಿದರ್ಧ ನಾಲ್ಕಾ|
ಗಿರುತ ಲಂಬರವಗ್ನಿಯಾಪೋ ಪೃಥ್ವಿಗಳ ಸೇರಿ||
ಮೆರೆವ ವ್ಯಾನಸಮಾನ ಪ್ರಾಣವು|
ನೆರೆಯ ಪಾನವು ಕ್ರಮದೊಳಾದುವು|
ಮರುತ ಪಂಚಕವೆಂದೆನಿಸಿದವು ಪಂಚಪ್ರಾಣಗಳು ||2||
ಅನಲದರ್ಧವೆ ನೇತ್ರವಾಯಿತು|
ಅನಲದುಳಿದರ್ಧವದು ನಾಲ್ಕೆಂ|
ದೆನಿಸಿಯಂಬರವಾಯುವಾಪೋ ಪೃಥ್ವಿಗಳ ಸೇರಿ|
ವಿನುತ ಶ್ರೋತ್ರವು ತ್ವಕ್ಕು ಜಿಹ್ವಾ|
ಘನದ ಘ್ರಾಣವು ಕ್ರಮದೊಳಾದುವು
ಅನಲ ಪಂಚಕವಿವುಗಳೇ ಜ್ಞಾನೇಂದ್ರಿಯಗಳೆನಿಸಿ ||3||
ಜಲದೊಳರ್ಧವೆ ರಸವು ಎನಿಸಿತು|
ಜಲದೊಳುಳಿದರ್ಧದಲಿ ನಾಲ್ಕಾ|
ಗುಳಿದ ವ್ಯೋಮವು ವಾಯುವಗ್ನಿಯು ಧರೆಗಳಂಸೇರಿ||
ಪೊಳೆವ ಶಬ್ದವು ಸ್ಪರ್ಶ ರೂಪವು |
ಸುಳಿವ ಗಂಧವು ಕ್ರಮದೊಳಾದುವು |
ತಿಳಿಯಲಿವು ಜಲಪಂಚಕವು ವಿಷಯಂಗಳೆನಿಸಿದುವು ||4||
ಧರಣಿಯರ್ಧವೆ ಗುದವು ಎನಿಸಿತು | ಧರಣಿಯುಳಿದರ್ಧವದು ನಾಲ್ಕಾ|
ಗಿರುತಲಂಬರ ವಾಯುವಗ್ನಿಯು ಜಲಗಳಂ ಸೇರಿ||
ಮೆರೆವ ವಾಕ್ಕುವುಪಾಣಿ ಪಾದವು|
ಸುರಿವ ಗುಹ್ಯವು ಕ್ರಮದೊಳಾದುವು|
ಧರೆಯ ಪಂಚ ಕವಿವುಗಳೆ ಕರ್ಮೇಂದ್ರಿಯಗಳಹವು ||5||

ಪಾರಮಾರ್ಥವ ಪಡೆದೇ
ಪಾರಮಾರ್ಥವ ಪಡೆದೇ | ಭವಸಾಗರವ|
ಪಾರುಗಾಣಿಸಿ ನಡೆದೇ ||ಪ||
ಮೂರು ಲೋಕದ ಸ್ವಾಮಿ| ತೋರದಂತರ್ಯಾಮಿ||
ಸೇರಿರ್ಪಮರ್ಮವ| ತೋರಿಸಿದ ಗುರುದೇವ ||ಅಪ||
ಶಿವನು ಯನ್ನೊಳಗಿದ್ದನು| ನಾನರಿಯದೆ|
ಭವಬಂಧದೊಳು ಬಿದ್ದೆನು ||
ಶಿವನೆ ಗುರುರೂಪಾಗಿ| ಭುವಿಗವತರಿಸುತ್ತ||
ಶಿವನ ಸ್ವರೂಪಾನು| ಭವವ ಪೇಳಲ್ಕೆನಗೆ ||1||
ಶರಿರೇಂದ್ರಿಯಗಳೆನ್ನವು| ಎನ್ನುತ ನಾನು|
ಬರಿದೇ ದುಃಖದೊಳಿರಲು||
ಶರಿರೇಂದ್ರಿಯಕೆ ಸಾಕ್ಷಿ| ಯಿರುವೆನೀ
ನೆಂದೆನಗೆ||ಅರಿವಿತ್ತು ಅಜ್ಞಾನ|
ಹರಿಸಿದ ಗುರುದೇವ ||2||
ಜಗವೆ ನಿಜವೆಂದೆನ್ನುತೆ| ಭ್ರಮೆಯೊಳಗಿದ್ದೆ|
ಜಗದೀಶ್ವರನ ಮರೆತೇ||
ಜಗವುನಶ್ವರವೆಂದು| ಜಗದಾತ್ಮ ನೀನೆಂ
ದು|| ನಿಗಮಾರ್ಥದನುಭವ|
ಬಗೆಗೊಳಿಸೆ ನರಹರಿ

ಮಾಯಾಮಯ ಕಾಯ
ಮಾಯಾಮಯ ಕಾಯ| ಮಾಯಾ ನಿರ್ಮಿತ ಮನಛಾಯಾ ||ಪ||
ಮಾಯೆಯ ನಂಬಲಿಬೇಡ|
ಮಾಯಾ ಹಂಬಲ ಬಿಡುಗಾಡ ||1||
ಕಣ್ಣನು ಸೇರಿತು ಮಾಯಾ|
ಬಣ್ಣವ ತೋರಿತು ಬಲು ಛಾಯಾ ||2||
ಅನ್ಯವನರಿವುದೆಮಾಯಾ|
ತನ್ನನು ತಿಳಿದರೆ ನಿರ್ಮಾಯಾ ||3||
ಬಹಿರಂಗವೆ ಸಾಕಾರ|
ಮಹಿ| ಮಾ ರೂಪ ನಿರಾಕಾರ ||4||
ಮಾಯಾಮಯ ಸಾಕಾರ|
ಮಾಯೋಪಾಧಿ ನಿರಾಕಾರ ||5||
ಸಗುಣಗಳೆಲ್ಲವು ಮಾಯಾ||
ಸಗುಣವನಳಿದುದೆ ನಿರ್ಮಾಯಾ ||6||
ಮೋಹಿಸುತಿರ್ಪುದು ಮಾಯಾ||
ಮೋಹವಳಿದು ನೆನೆ ನರಹರಿಯಾ

ಪಂಚವಿಂಶತಿ ಲೀಲೆಯ
ಪಂಚವಿಂಶತಿ ಲೀಲೆಯ| ತೋರುವ ಕಾಯ|
ಪಂಚಮುಖ ಶಿವನಾಲಯ ||ಪ||
ಪಂಚವಿಂಶತಿ ತತ್ವ| ಪಂಚವಿಂಶತಿ ಲೀಲೆ||
ಪಂಚಭೂತಂಗಳೇ| ಪಂಚಮುಖ ಶಿವನಿಗೆ ||ಅಪ||
ಧರೆಯ ಮುಖದೊಳಗೀತನು| ಗಂಧವ ಧರಿಸೀ |
ಉರಗ ಭೂಷಣನಾದನು|
ಹರಿವ ಜಲ ಮುಖಗಂಗಾ| ಧರನೀತ ಗುರುಲಿಂಗ|
ಧರಿಸುತ್ತ ಸುರಸವ| ಪೊರೆವ ನೀಲೋಕ ||1||
ಅಗ್ನಿಮುಖವನ್ನಾಂತನು| ಅಂಧಕಹರಣ |
ಪ್ರಜ್ಞಾನ ಸುಖವಂತನು ||
ಅಜ್ಞಾನವಳಿದುಸ| ರ್ವಜ್ಞನೆಂದೆನಿಪನು||
ಅಜ್ಞಾಚಕ್ರದಿರೂಪ| ಮಗ್ನ ನಟರಾಜನು ||2||
ಮರುತ ಮುಖವನು ತಾಳಿದಾ| ಯೋಗವ ಕೂಡಿ| ಬೆರೆತ
ಸ್ಪರ್ಶದೊಳಾಳಿದಾ||
ವರನೀಲಕಂಠ | ಸುಂದರ ಡಮರುಗ ಧರಿಸಿ |
ಚರಿಪ ನಂದಿಯನೇರಿ| ಮರವೆಮಾಯೆಯ ತೂರಿ ||3||
ವ್ಯೋಮಕೇಶನು ಯೆನ್ನಿಸೀ| ಶಬ್ದವ ಕೂಡಿ|
ವ್ಯೋಮ ಮುಖದೊಳು ರಾಜಿಸೀ|
ಸೋಮಶೇಖರನಾಗಿ| ಕಾಮಸಂಹರ ಯೋಗಿ|
ತಾಮಸಂಗಳ ನೀಗಿ| ಸಾಮರಸ್ಯಕೆ ಭಾಗಿ ||4||
ಪಂಚಭೂತವು ಕೂಡುತಾ | ಅದರೊಳು ಜ್ಞಾತೃ |
ಪಂಚಕಂಗಳು ಮೂಡುತಾ||
ಪಂಚವಾಯುಗಳಲ್ಲಿ | ಪಂಚ ಜ್ಞಾನೇಂದ್ರಿಯ|
ಪಂಚವಿಷಯವ ಪೊಂದಿ| ಪಂಚ ಕರ್ಮೇಂದ್ರಿಯ ||5||
ಪಂಚಮುಖ ಪರಶಿವನು| ಸದ್ಗುರುವರನು
ಪಂಚೀಕರಣವೊರೆದನು ||
ಪಂಚಭೂತಗಳ ಪ್ರ| ಪಂಚವಂ ಲಯಿಸಿದ|
ಸಂಚಿತಾರ್ಥದ ಪಾಪ| ಮಿಂಚಿ ನರಹರಿಯಾದ ||6||

ಗಂಧದ ಬಾಗಿಲ ಸುಂದರ ದೇವರ
ಗಂಧದ ಬಾಗಿಲ ಸುಂದರದೇವರ|
ಮಂದಿರವೆಲ್ಲಿದೆ ನೋಡಣ್ಣ ||ಪ||
ಎಂದಿಗು ಮುಚ್ಚದು ಬಂಧುರ ಬಾಗಿಲು|
ಇಂದಿಗು ಬೀಗವೆ ಇಲ್ಲಣ್ಣ ||ಅಪ||
ಒಳಗೆ ಪ್ರವೇಶಿಸಿ ನೋಡಿದರಲ್ಲಿಯೆ |
ಬೆಳಗಿವೆ ರವಿಶಶಿ ಕೋಟಿಗಳು ||
ಇಳೆಯೇಳಲ್ಲಿಯೆ ಕಳಕಳಿಸುತ್ತಿವೆ|
ನೆಲಸಿಹರಲ್ಲಿಯೆ ದೇವರ್ಕಳು ||1||
ಹೊರ ಬರಲಾಕ್ಷಣ ಬರಿ ಬಯಲಾಗಿದೆ|
ಪರಮಾದ್ವೈತದ ನಿಜಸುಖವು||
ಪರಿಪರಿ ತೋರ್ಕೆಗಳಿರದಂತಾದುವು|
ಮರೆದೆನು ಶರೀರವ ಚಿನ್ಮುಖವು ||2||
ಪಾವನ ಗರ್ಭದ ಗುಡಿಯೊಳು ಬೆಳಗುವ|
ದೇವನು ನರಹರಿ ನೋಡಣ್ಣ ||
ದೇವರ ಕಂಡರೆ ಸಾವಿಲ್ಲವು ನಮ|
ಗಾವುದು ದುಃಖವು ಇಲ್ಲಣ್ಣ ||3||

ಅರ್ಥವಿಲ್ಲದ ಓದು ವ್ಯರ್ಥಾ
ಅರ್ಥವಿಲ್ಲದ ಓದು ವ್ಯರ್ಥಾ| ಗುರು|
ಸೂತ್ರವಿಲ್ಲದ ಬೋಧೆಯಿಂದಲಪಾರ್ಥ ||ಪ||
ಕರ್ತೃವಿಲ್ಲದ ಕಾರ್ಯ ವ್ಯರ್ಥ| ಸ|
ತ್ಪಾತ್ರವರಿಯದ ದಾನದಿಂದಲನರ್ಥಾ ||ಅಪ||
ಭೋಗವಿಲ್ಲದ ಭಾಗ್ಯವೇಕೆ | ಸುವಿ|
ರಾಗವಿಲ್ಲದ ಯೋಗ ತರವಲ್ಲ ಜೋಕೆ ||
ತ್ಯಾಗವಿಲ್ಲದ ಸಿರಿಯೇಕೆ| ಭವ|
ರೋಗವಿಲ್ಲದೆ ಬ್ರಹ್ಮವಿದ್ಯೆಯು ಬೇಕೆ ||1||
ಭಾವವಿಲ್ಲದ ಭಕ್ತಿ ಬೇಡಾ| ಸಮ|
ಭಾವವಿಲ್ಲದ ಜ್ಞಾನ ನಿಜವಲ್ಲ| ನೋಡಾ||
ಹೇವವಿಲ್ಲದ ಹೆಣ್ಣು ಬೇಡಾ| ನಿಜ|
ಸೇವೆಯರಿಯದ ಧಣಿಯ ನಂಬಿದವ ಮೂಢಾ ||2||
ಧ್ಯಾನವಿಲ್ಲದ ಪೂಜೆ ಮರುಳು| ಸುವಿ|
ಧಾನವಿಲ್ಲದ ಬೋಧೆಯೊಳಗಿಲ್ಲ ಹುರುಳು||
ನಾನತ್ವವನು ಬಿಟ್ಟು ತೆರಳು| ಮತಿ|
ಹೀನ ತಿಳಿವನೆ ನರಹರಿ ಬೋಧೆ ತಿರುಳು |3||

ರೂಪಾಂತರದೊಳಿತ್ತು ಹಿರಿಯ ಮಾಯೆ
ರೂಪಾಂತರದೊಳಿತ್ತು ಹಿರಿಯ ಮಾಯೆ ||
ಪಾಪಾಂತರದೊಳಾಯ್ತು ಕಿರಿಯ ಮಾಯೆ ||ಪ||
ರೂಪಾಂತರದೊಳೀಶ್ವರನ ಮಾಯೆ|
ಪಾಪಾಂತರದೊಳಾಯ್ತು ಜೀವ ಛಾಯೆ ||ಅಪ||
ದೃಶ್ಯಕ್ಕೆ ಮೂಲವೀಶ್ವರನ ಮಾಯೆ||
ವಿಶ್ವಕ್ಕಧೀನವೀ ಜೀವ ಛಾಯೆ||
ನಶ್ವರವೆನಿಸಿದೀ ಕಾಯ ಮಾಯೆ||
ಶಾಶ್ವತ ಬ್ರಹ್ಮದೊಳಿಲ್ಲ ಮಾಯೆ ||1||
ಲೇಪವಿಲ್ಲದೆಯಿತ್ತು ಹಿರಿಯ ಮಾಯೆ|
ಲೇಪವಾಗುತಲಿತ್ತು ಕಿರಿಯ ಮಾಯೆ||
ತಾಪದೂರದೊಳಿತ್ತು ಶಿವನ ಮಾಯೆ|
ತಾಪದಿಂದಳುತಿತ್ತು ಜೀವ ಛಾಯೆ ||2||
ಸಗುಣ ಸಾಕಾರವೀಶ್ವರನ ಮಾಯೆ|
ಜಗರೂಪ ತಾಳಿತ್ತು ಬರಿಯ ಛಾಯೆ||
ಸಗುಣ ನಿರ್ಗುಣವನ್ನು ಬ್ರಹ್ಮಗೈಯೆ |
ಜಗದಾತ್ಮ ನರಹರಿ ಮಂತ್ರಕಾಯೆ ||3||

ಜಗವೆ ನಾಟಕಶಾಲೆಯಾಯ್ತು
ಜಗವೆ ನಾಟಕ ಶಾಲೆಯಾಯ್ತು| ಯುಗ|
ಯುಗದಿಂದ ನಿಲ್ಲದೆ ನಡೆಯುತ್ತ ಹೋಯ್ತು ||ಪ||
ಹಗಲೆ ನಾಟಕ ನಡೆದಿತ್ತು| ರಾ|
ತ್ರಿಗೆ ಮಾತ್ರ ಬಿಡುವಾಗಿ ವಿಶ್ರಾಂತಿಯಿತ್ತು ||ಅಪ||
ನೀಲ ಗಗನವೆ ದೊಡ್ಡ ಢೇರಾ| ಸುವಿ|
ಶಾಲ ಪೃಥ್ವಿಯೆ ಹಾಸಿಗೆಯಾಗಿ ಪೂರಾ||
ಮೇಲೆ ಹೊಳೆಯುವ ದೀಪಸೂರ್ಯ| ನಟ|
ಜಾಲ ಜೀವಿಗಳು ತಾಳಿದ ವೇಷ ತೂರ್ಯ | |1||
ಶಿವನೆ ನಾಟಕ ಸೂತ್ರಧಾರಿ| ವೈ|
ಭವ ಪೂರ್ಣವಾಯ್ತು ನಾಟಕ ಕಳೆಯೇರಿ||
ಅವಸಾನ ಕಾಲಕ್ಕೆ ಜಾರಿ| ನಾ|
ಟ್ಯವೆ ನಿಂತುಹೋಯ್ತು ಜೀವನೆ ಪಾತ್ರಧಾರಿ ||2||
ಜಾಗ್ರದಲ್ಲಿಯೆ ಬಲು ದೃಶ್ಯ| ನಟ|
ವರ್ಗ ದಣಿದಿರಲು ವಿಶ್ರಾಂತಿಯವಶ್ಯ||
ಶೀಘ್ರ ಪರದೆಯು ಬೀಳೆ ಹಾಸ್ಯ ಲಘು
ದೀರ್ಘ ಸ್ವಪ್ನವ ಕಂಡು ಸುಪ್ತಿಗೆವಶ್ಯ ||3||
ಅಂಕವೈದುಳ್ಳು ನಾಟಕವು| ಮೊದ|
ಲಂಕ ಜನನವು ಬಾಲ್ಯ ಯೌವನ ಮುಖವು||
ಸಂಕಟಾತ್ಮಕ ವಾರ್ಧಿಕವು | ಕೊನೆ|
ಯಂಕವಾಯಿತು ಮರಣ ನಿಂತು ನಾಟಕವು ||4||
ಎಲ್ಲರಾಡುವರು ನೋಡುವರು| ಇದ|
ರಲ್ಲಿ ಭೇದವೆಯಿಲ್ಲ ಹುಟ್ಟಿ ಸಾಯುವರು||
ಬಲ್ಲವರು ಕಡೆಗಾಗುತಿಹರು| ಶಿವ|
ನಲ್ಲಿ ಸೇರಲು ನರಹರಿಯ ಬೇಡುವರು ||5||

ಪಂಚೀಕರಣದೊಳು ಪ್ರಪಂಚವಾಗಿಹುದ
ಪಂಚೀಕರಣದೊಳು ಪ್ರಪಂಚವಾಗಿಹುದ | ನಿ |
ರ್ವಂಚನೆಯೊಳರುಹಿದ ಗುರುವರನು ||ಪ||
ಪಂಚಭೂತವು ಹಂಚಿ ಹಂಚಿ ಬೆರಸಲಿವು|
ಪಂಚವಿಂಶತಿ ತತ್ವವೆನಿಸಿದುವು ||ಅಪ||
ಜ್ಞಾತೃಮನ ಬುದ್ಧಿಚಿತ್ತಾಹಂ ಕೃತಿಗಳೈದು |
ಜ್ಞಾತೃಪಂಚಕವಾಗಸಾಂಶಂಗಳು ||
ಜ್ಞಾತೃವಂತಃಕರಣ | ವೃತ್ತಿಯೊಳುಮೈದೋರಿ|
ನಿತ್ಯ ಪ್ರವೃತ್ತಿ ಮುಖವಾದವುಗಳು ||1||
ವ್ಯಾನವು ದಾನ ಸಮಾನ ಪ್ರಾಣಾಪಾನ|
ಪ್ರಾಣಪಂಚಕ ವಾಯು ವಂಶಂಗಳು||
ತ್ರಾಣದಿಂದೀ ಸ್ಥೂಲನಾನಕರ್ಮಂಗಳ|
ತಾನೆ ನಡೆಸುತಲಿ ಬಾಳಿದುದೀಗಲು ||2||
ಶ್ರೋತ್ರತ್ವಗಿಂದ್ರಿಯ ನೇತ್ರ ಜಿಹ್ವಾಘ್ರಾಣ|
ಮಾತ್ರ ಜ್ಞಾನೇಂದ್ರಿಯವಗ್ನಿಯಂಶ||
ಸೂತ್ರವಾಗಿಹವರಿವಿತ್ತು ಜಾಗ್ರದಿ ದೇಹ|
ವೃತ್ತಿಗಾಶ್ರಯವಾಗಿ ಬೆಳಗುವುವು ||3||
ಶಬ್ದ ಸ್ಪರ್ಶವು ರೂಪ ರಸಗಂಧ ವಿಷಯವು|
ಲಬ್ಧವಾಗಲು ಜಲದಂಶಂಗಳು||
ಹಬ್ಬಿ ಜನ್ಮಗಳ ಪ್ರಾರಬ್ಧರೆನ್ನಿಸಿ ಬಂದು|
ಉಬ್ಬಿದಂಬುಧಿಯಂತೆ ಮುಳುಗಿಪವು ||4||
ವಾಕ್ಕುಪಾಣಿಯು ಪಾದಗುದಗುಹ್ಯವೆಂಬಿವು|
ಅಕ್ಕು ಕರ್ಮೇಂದ್ರಿಯ ಧರೆಯಂಶವು||
ಸೊಕ್ಕಿ ಕರ್ಮದಿ ಜನ್ಮ ಮರಣ ಕಾರಣವಿವು|
ಸಿಕ್ಕಿ ನರಹರಿಗೆ ಪಾವನವಾದುವು ||5||

ಜ್ಞಾತೃವ್ಯಾನವ ಸೇರಿ
ಜ್ಞಾತೃವ್ಯಾನವ ಸೇರಿ| ಶ್ರೋತ್ರದಲ್ಲಿಯೇ ಸಾರಿ|
ಅರ್ಥವಾಯಿತು ಶಬ್ದವದು ತೋರಿ ||ಪ||
ಮತ್ತೆ ಶಬ್ದಕೆ ದಾರಿ| ಯಿತ್ತ ವಾಕ್ಕಿದು ಜಾರಿ|
ಸೂತ್ರದಾಕಾಶ ಸೇರಿತು ಹಾರಿ ||ಅ|ಪ||
ಮನವ ಸೇರುತ ಜ್ಞಾತೃ | ಘನವುದಾನದಿ ನಿಂತು|
ಗುಣಿಸಿ ತ್ವಗೀಂದ್ರಿಯವನ್ನಾಂತು||
ನೆನೆದು ಸ್ಪರ್ಶವ ಪೊಂದಿ| ವಿನುತ ಪಾಣಿಯೊಳಾ
ಕ್ಷಣದಿ ವಾಯುವನೈದಿ ಲಯವಾಯ್ತು ||1||
ಬುದ್ಧಿಯೊಡನೆ ಜ್ಞಾತೃ| ವಿದ್ದುಸಮಾನ ಪ್ರ |
ಸಿದ್ಧವಾಯುವ ಸೇರಿ ನೇತ್ರವನು||
ಹೊದ್ದಿ ರೂಪವನರಿದಿದ್ದ ಪಾದದಿ ನಡೆದು|
ಶುದ್ಧವಾಗುತ ಸೇರಿತಗ್ನಿಯನು ||2||
ಚಿತ್ತದೊಡನೆ ಸೇರಿ ಜ್ಞಾತೃ ಪ್ರಾಣವ ಕೂಡಿ|
ಮತ್ತೆ ಜಿಹ್ವೆಯ ತೂರಿ ರಸವನಾಂತು||
ಅತ್ತಗುಹ್ಯದಿರಸ ನಿವೃತ್ತಿಯಗೈದು |
ಮತ್ತೆಯಪ್ಪುವಿನಲ್ಲೆ ಲಯವಾಯಿತು ||3||
ಹಮ್ಮು ಸೇರುತ ಜ್ಞಾತೃ| ನಿರ್ಮಲಾ ಪಾನದೊಳು|
ರಮ್ಯ ಘ್ರಾಣದಿ ಗಂಧವನ್ನರಿತು||
ದುರ್ಮಲವಂ ಗುದದಿಂದ ವಿಸರ್ಜಿಸಿ |
ಸೌಮ್ಯದಿಂಧರೆಯಲ್ಲೆ ಲಯವಾಯಿತು ||4||
ಪಂಚಭೂತಗಳಿಂದ| ಹಂಚಿಬಂದೀಕರಣ|
ಮುಂಚಿನಂದದಿ ಭೂತದೊಳು ಲಯವು||
ಪಂಚಭೂತಂಗಳು | ಮಿಂಚಿ ಪರಬ್ರಹ್ಮದಿ|
ಹೊಂಚಿ ನರಹರಿಯಲ್ಲೆ ಲಯವಾದವು ||5||

ಪಂಚತನ್ಮಾತ್ರೆಗಳಿಂದಾ
ಪಂಚತನ್ಮಾತ್ರೆಗಳಿಂದಾ| ಈ|
ಪಂಚಭೂತಂಗಳಾದುದು ಬಲು ಚೆಂದಾ ||ಪ||
ಪಂಚವಿಂಶತಿ ತತ್ವದಿಂದಾ| ಶಿವ|
ಪಂಚವಿಂಶತಿ ಲೀಲೆಗಳು ಸಮವೆಂದಾ ||ಅ|ಪ||
ಭೂತ ಪಂಚಕದಿಂದ ಜಗವು| ಸಂ|
ಭೂತವಾಗಿಹುದು ಜೀವಿಗಳಿಂಗೆ ಸೊಗವು||
ಚೇತನಾ ಚೇತನಗಳಿರವು| ಸಂ|
ಜಾತವಾದುದು ನಾನಾ ದೇಹ ವಿಸ್ತರವು ||1||
ಐದು ಜ್ಞಾನೇಂದ್ರಿಯಗಳಿಗೆ| ಬಲ|
ವಾದ ಭೂತಂಗಳೈದಿರುತಿರಲೊಳಗೆ||
ಐದು ವಿಷಯಂಗಳರಿವಿಗೆ| ಬಲ|
ವೈದಿತನ್ಮಾತ್ರೆಗಳು ಕಾರಣವಾಗೆ ||2||
ಪಂಚಮುಖಗಳು ಪರಶಿವಂಗೆ | ಈ|
ಪಂಚಭೂತಗಳೆಂಬುದುನು ತಿಳಿದವನು ||
ಮಿಂಚಿ ಬಾರನು ಜನ್ಮಗಳಿಗೆ | ನಿ|
ಶ್ಚಂಚಲ ಜ್ಞಾನ ನರಹರಿಯೀಯೆ ತನಗೆ

ಗುಣವಂತನೇ ಗುರುಭಕ್ತ
ಗುಣವಂತನೇ ಗುರುಭಕ್ತ| ದು|
ರ್ಗುಣ ನೀಗಿ ಸದ್ಗುಣ ಪಡೆದಾತ ಶಕ್ತ ||ಪ||
ಹಣವಂತ ಸದ್ಗುಣಯುಕ್ತ | ಎಂ|
ದೆನಿಸಿಕೊಂಡರೆ ಸಾಕು ಅವನೀಗ ಮುಕ್ತ ||ಅ|ಪ||
ಭಾಗ್ಯವಂತರ ಕಂಡು ಮರುಗೀ| ನಿ|
ರ್ಭಾಗ್ಯ ತಾನೆಂದುಕೊಳ್ಳದೆ ಮನ ಕರಗಿ||
ಯೋಗ್ಯರಾದವರ ಕಂಡೆರಗಿ| ವೈ|
ರಾಗ್ಯಶೀಲರ ಸೇವೆ ಮಾಡುತಿರಲಾಗಿ ||1||
ಕಾಮ ಕ್ರೋಧಂಗಳನಳಿಸೀ| ನಿ|
ಷ್ಕಾಮ ಶಾಂತಿಗಳನ್ನು ಮನದಲ್ಲಿ ಗಳಿಸೀ||
ಸೌಮ್ಯ ಭಾವದೊಳು ಕಂಗೊಳಿಸೀ| ದು|
ರ್ದಮ್ಯ ಲೋಭವ ಬಿಟ್ಟು ತ್ಯಾಗಿಯೆಂದೆನಿಸೀ ||2||
ಮದ ಮತ್ಸರಂಗಳ ನೀಗಿ| ನಿ|
ರ್ಮದ ನಿರ್ಮಾತ್ಸರ್ಯ ಭಾವವು ನೆಲೆಯಾಗಿ||
ಸದಯನಾದವ ರಾಜಯೋಗಿ| ಸದು
ಹೃದಯವುಳ್ಳವ ನರಹರಿ ಕೃಪೆಯಾಗಿ ||3||

ಶರೀರವೆನ್ನುವ ಸೆರೆಮನೆಯೊಳಗೆ
ಶರೀರವೆನ್ನುವ ಸೆರೆಮನೆಯೊಳಗೆ |
ಸೆರೆಯು ತಪ್ಪದು ಸಾಯುವವರೆಗೆ ||ಪ||
ನಿರುತ ದುಃಖವು ಸೆರೆಯಾಳುಗಳಿಗೆ|
ತೆರಪು ಇಲ್ಲದ ಶಿಕ್ಷೆ ಜೀವರಿಗೆ ||ಅಪ||
ಚಿತ್ರಹಿಂಸೆಯ ಸೆರೆಮನೆ ದೇಹ|
ಚಿತ್ರಗುಪ್ತರ ಕಾವಲು ಗೇಹ||
ಚಿತ್ತಪಲ್ಲಟವಾಗಲು ಮೋಹ|
ಮತ್ತೆ ಮತ್ತೆ ವಿಚಿತ್ರದ ದಾಹ ||1||
ರೋಗರುಜಿನಂಗಳೆನ್ನುವ ಶಿಕ್ಷೆ|
ರಾಗದ್ವೇಷಂಗಳುಪಟಳ ಶಿಕ್ಷೆ||
ನೀಗಲಾಗದು ನಷ್ಟದ ಶಿಕ್ಷೆ|
ಸಾಗಲಾರದು ಕಷ್ಟದ ಶಿಕ್ಷೆ ||2||
ಮೊದಲ ಶಿಕ್ಷೆಯು ಜೀವರ ಜನನಾ|
ತುದಿಯ ಶಿಕ್ಷೆಯು ಜೀವ ರಮರಣಾ||
ತುದಿಗೆ ಮೊದಲಿಗೆ ಶಿಕ್ಷೆಯ ಸದನಾ|
ಬದುಕು ಬಾಳುವೆ ದುಃಖದ ಕಥನಾ ||3||
ಸತಿಯ ಮೋಹದ ಬೆಂಕಿಗೆ ಬಿದ್ದು|
ಸುತರ ಹಂಬಲ ಬಲೆಗೆ ಸಿಕ್ಕಿದ್ದು|
ಹಿತರ ಕಾಣದೆ ಎಲ್ಲವನೊದ್ದು |
ಗತಿಯು ನರಹರಿ ಎಂಬುದೆ ಮದ್ದು ||4||

ಶ್ರೀ ಗುರುಬೋಧೆ
ಶ್ರೀಗುರುಬೋಧೆ ಸ| ರಾಗದಿ ಕೇಳ್ದವ|
ಈಗಲೆ ಮುಕ್ತಿಯಪಡೆಯುವನು ||ಪ||
ಆಗಮ ನಿಗಮ ಸ| ಮಾಗಮ ಪಡೆದವ|
ಯೋಗಿಗಳರಸನೆ ಆಗುವನು ||ಅಪ||
ಅಂತಃಕರಣವು ಶಿವ ಚೈತನ್ಯವ|
ನಾಂತರೆ ಸ್ವಪ್ನವು ತೋರುವುದು ||
ಅಂತರ್ಬಾಹ್ಯದಿ ಶಿವ ಚೈತನ್ಯವು |
ನಿಂತಿರೆ ಜಾಗ್ರವದೆನಿಸುವುದು ||1||
ಅಂತರಂಗದೊಳು ಅಂತರಾತ್ಮನೊಳು|
ಅಂತರ್ಬಾಹ್ಯದ ಕರಣಗಳು||
ಶಾಂತಿಯಾಂತುವಿಶ್ರಾಂತಿಯ ಪೊಂದಲು|
ಸ್ವಾಂತದಿಸುಪ್ತಿಯುತೋರುವುದು ||2||
ಮೂರವಸ್ಥೆಗಳ ಸೇರುತ ಏಕಾ|
ಕಾರದೊಳಿರುವ ಪರಮಹಂಸಾ||
ತೋರಿಯು ತೋರದೆ ಧಾರಿಣಿ ಪಥದೊಳು |
ಸಾರುವ ನರಹರಿ ಮಂತ್ರವಶಾ ||3||

ಪಂಚ ಸ್ಥಾನದಿ ಪಂಚಭೂತಗಳ
ಪಂಚ ಸ್ಥಾನದಿ ಪಂಚ ಭೂತಗಳ|
ಹಂಚಿಟ್ಟನು ಸದ್ಗುರು ದೇವಾ ||ಪ||
ಪಂಚೇಂದ್ರಿಯಗಳೆ ಪಂಚ ತತ್ವಗಳ |
ಹೊಂಚಿರುವಂದವನರುಹಿಸುವಾ ||ಅಪ||
ಘ್ರಾಣದೊಳಗೆ ಆಘ್ರಾಣಿಸಿ ಗಂಧವ|
ಸ್ಥಾನವು ಪೃಥ್ವಿಗಿ ದೇ ಎಂದಾ||
ತಾನೆ ನಿರಂತರ ಮೌನದಿಚರಿಸುವ| ಜ್ಞಾನಿಗಳಿಗೆ ಹಂಸನೆ ಎಂದಾ ||1||
ರಸನೆಯೊಳಗೆ ಷ| ಡ್ರಸಗಳನುಣ್ಣುತ|
ಒಸೆದೀ ಸ್ಥಲವೇ ಜಲವೆಂದಾ||
ಸಸಿನಸುಮಂತ್ರವನು ಸುರುತ ಕೊನೆಯೊಳು|
ಎಸೆದನು ಸೋಹಂಫಲವೆಂದಾ ||2||
ಚಕ್ಷುವಿನೊಳು ತಾನೀಕ್ಷಿಸಿ ರೂಪವ
ರಕ್ಷಿಸುವಗ್ನಿಗೆ ಸ್ಥಲವೆಂದಾ||
ಲಕ್ಷಿಸಿ ಜಾಗ್ರವ| ಅಕ್ಷಿಯು ಮುಗಿಯಲು|
ತಕ್ಷಣ ಸುಪ್ತಿಯು ಬಹುದೆಂದಾ ||3||
ತ್ವಗಿಂದ್ರಿಯದಿತಾಂ| ತಗಲಿದ ಸ್ಪರ್ಶವ|
ಸೊಗಸುತ ವಾಯುಸ್ಥಲವೆಂದಾ||
ಅಗಣಿತ ಬ್ರಹ್ಮವ| ನಗಲದೆ ಯೋಗದಿ|
ಬಿಗಿದಿರಲೈಕ್ಯವೆ ಫಲವೆಂದಾ 4||
ಶ್ರೋತ್ರದಿ ಶಬ್ದವ | ನರ್ಥಿಯೊಳರಿಯುತ|
ಸೂತ್ರವು ಗಗನ ಸ್ಥಲವೆಂದಾ||
ಪಾತ್ರವು ಶ್ರವಣ ಪ| ವಿತ್ರ ಸುಬೋಧೆಗೆ|
ಸತ್ಯವು ನರಹರಿ ತಾನೆಂದಾ ||5||

ಮೂವರು ಮೂರ್ತಿಗಳೀ ಪುರವಾ
ಮೂವರು ಮೂರ್ತಿಗಳೀ ಪುರವಾ|
ಕಾವಲು ಮಾಳ್ಪುದುನರಿತಿರುವಾ ||ಪ||
ಭಾವದಿ ಸಂಶಯ ಹರಿದಿರುವಾ|
ಕೇವಲ ಜ್ಞಾನಿಯೆ ಪರದೈವಾ ||ಪ||
ಕಾಮನ ಪಿತನಿಹ ಜಾಗ್ರದೊಳು|
ಕಾಮನ ವೈರಿಸು ಷುಪ್ತಿಯೊಳು|
ತಾಮರಸೋದ್ಭವ ಸ್ವಪ್ನದೊಳು|
ನೇಮದಿ ಕಾಯ್ವರುಪಗಲಿರುಳು ||1||
ಮಂತ್ರದ ಸೃಷ್ಟಿಯು ಬ್ರಹ್ಮನಿಗೆ|
ಮಂತ್ರದ ರಕ್ಷಣೆ ವಿಷ್ಣುವಿಗೆ||
ಮಂತ್ರದ ಲಯವಾರುದ್ರನಿಗೆ|
ಸಂತತ ಕಾರ್ಯವು ಮೂವರಿಗೆ ||2||
ಕರಣ ಪ್ರವೃತ್ತಿಯೆ ಬ್ರಹ್ಮಗುಣ|
ಕರಣದರಕ್ಷಕವಿಷ್ಣು ಕಣಾ||
ಕರಣದ ಲಯವೇ ರುದ್ರ ಗುಣಾ|
ನರಹರಿಯೊಳು ಮೂವರ ಕಾಣಾ ||3||

ಶಿವಧರ್ಮವರಿಯಲು
ಶಿವ ಧರ್ಮವರಿಯಲು| ಗುರು ಧರ್ಮ ಮೊದಲು||
ಶಿವ ಮಂತ್ರವದು ತಾನೆ ಗುರು ವಶವಲ್ಲವೆ ||ಪ||
ಗುರು ಲಿಂಗ ಜಂಗಮ| ತೀರ್ಥ ಪ್ರಸಾದವು|
ವರವೀಭೂತಿ ರುದ್ರಾಕ್ಷ ಮಂತ್ರಗಳು ||1||
ಅಷ್ಟಾವರಣಗಳ | ನಿಷ್ಠೆಯೊಳಿರುವವ|
ಶ್ರೇಷ್ಠ ಶಿವಭಕ್ತನು| ಸೃಷ್ಟಿಯೊಳೆಲ್ಲಾ ||2||
ಗುರುವಿಂದಲಷ್ಟಾ| ವರಣಂಗಳಾದವು||
ಸರಸ ಸುಬೋಧೆಯೇ | ಮೆರೆವಷ್ಟಾವರಣ ||3||
ನುಡಿಬ್ರಹ್ಮ ಗುರುವು| ನಡೆಬ್ರಹ್ಮ ಲಿಂಗವು|
ನಡೆನುಡಿಯೆರಡರ| ನಡುವೆ ಜಂಗಮವು ||4||
ನಡೆಸು ಪ್ರಸಾದವು| ನುಡಿಪಾದ ತೀರ್ಥವು||
ನಡೆನುಡಿಯೊಂದಾದ| ಕಡೆ ಜ್ಞಾನ ರುದ್ರಾಕ್ಷಿ ||5||
ಶ್ರವಣ ವೀಭೂತಿಯು| ಮನನವೆ ಮಂತ್ರವು||
ಶಿವನಿಧಿ ಧ್ಯಾಸವೇ| ಶಿವಪೂಜೆಯಲ್ಲವೆ ||6||
ಅಷ್ಟಾವರಣಗಳ ಸ್ಪಷ್ಟವಾಗಿಯೆತಿಳಿದು||
ನಿಷ್ಠೆಯ ನರಹರಿಯೊ| ಳಿಟ್ಟವರೆ ಮುಕ್ತರು ||7||

ಅಭಯವ ಕೊಡು ಯೆನಗೆ
ಅಭಯವ ಕೊಡು ಯೆನಗೆ| ಲೋಕಕೆ|
ಪ್ರಭು ನೀನೇ ಕೊನೆಗೆ ||ಪ||
ಉಭಯವನಳಿಯುವ| ಶುಭ ಸುಜ್ಞಾನವ|
ಅಭವನೆ ಕೊಡು| ಚಿ| ತ್ಪ್ರಭೆಯೊಳು ಸುಳಿಯುವ ||ಅಪ||
ಯಮ ಯೋಗದ ಬಲದೀ | ಯಮ ಭಯ| ಕ್ರಮಿಸುವ ನಿಶ್ಚಯದೀ||
ಸಮತೆಯ ಸಾಧಿಸಿ| ಸುಮನಸನೆನ್ನಿಸಿ||
ಭ್ರಮೆಯನು ಭೇದಿಸಿ| ರಮಿಸುವೆ ಸುಖಿಸೀ ||1||
ಸುಸಮಾಧಿಯನಾಂತು| ನಿನ್ನನು| ಬೆಸೆಯುತ ನಾ ನಿಂತು||
ವಿಷಯಗಳೆನ್ನುವ| ಹೆಸರನ್ನಳಿಸುವ|
ಅಸಮಾನತೆ ಸಾ| ಧಿಸಿ ಸಂಭ್ರಮಿಸುವ 2||
ಹೊರಗಿನ ವ್ಯಾಪಾರ| ಏನೆಂ|ದರಿಯದವೊಲು ಪೂರಾ||
ಬೆರೆಯುತ ನಿನ್ನೊಳು| ಮರೆಯುತಲನ್ಯವ|
ಅರಿದೇಕತ್ವವ| ನರಹರಿಯೆನ್ನುವ ||3||

ಅಷ್ಟಾಂಗ ಯೋಗದ
ಅಷ್ಟಾಂಗ ಯೋಗದ| ನಿಷ್ಠಾ ಗರಿಷ್ಠರು|
ಸ್ಪಷ್ಟ ಮಾಡಿರುವರ್ಥ ತಿಳಿಯಣ್ಣಾ |ಪ||
ದುಷ್ಟ ಗುಣಗಳನೆಲ್ಲ| ನಷ್ಟ ಮಾಡುತ ಸರ್ವ|
ಶ್ರೇಷ್ಠ ಸದ್ಗುಣಗಳ ಪಡೆಯಣ್ಣಾ ||ಅಪ||
ಮಂತ್ರವೆ ಯಮಯೋಗ| ಮಂತ್ರ ನಿಯಮ ಯೋಗ|
ಮಂತ್ರ ಆಸನ ಯೋಗ ಕಾಣಣ್ಣಾ||
ಮಂತ್ರ ಪ್ರಾಣಾಯಾಮ| ಮಂತ್ರ ಪ್ರತ್ಯಾಹಾರ||
ಮಂತ್ರ ಧ್ಯಾನದ ಯೋಗ ಕೇಳಣ್ಣಾ ||1||
ಮಂತ್ರ ಧಾರಣ ಯೋಗ| ಮಂತ್ರ ಸಮಾಧಿಯು |
ತಂತ್ರವ ಗುರುವಿಂದ ತಿಳಿಯಣ್ಣಾ||
ಮಂತ್ರಾರ್ಥವಷ್ಟಾಂಗ| ವೆಂತೆನ್ನುವರ್ಥವ|
ಚಿಂತನದೊಳು ನೀನೆ ತಿಳಿಯಣ್ಣಾ ||2||
ಅಷ್ಟಾಂಗ ಯೋಗಸ| ಮಷ್ಟಿಯಾಗಲು ಮಂತ್ರ|
ಸೃಷ್ಟಿಯಾಗುವದೆಂದು ತಿಳಿಯಣ್ಣಾ||
ಕಷ್ಟವಿಲ್ಲದೆ ನುಡಿದು | ಶ್ರೇಷ್ಠ ಮಂತ್ರದ ಯೋಗ|
ದೃಷ್ಟಿಯಿಂ ನರಹರಿಯಸೇರಣ್ಣಾ ||3||

ತೂಗುಬಾರಮ್ಮ ಈ ತೊಟ್ಟಿಲು
ತೂಗು ಬಾರಮ್ಮ| ಈ ತೊಟ್ಟಿಲು| ತೂಗು ಬಾರಮ್ಮ ||ಪ||
ತೂಗಿದವರಿಗೆ ಮುಕ್ತಿ| ಯಾಗಿ ಬಿಡುತಿಹುದಮ್ಮ ||ಅಪ||
ಎಲ್ಲರಿಗೆ ನಡುವಿದ್ದು| ಎಲ್ಲರರಿಯದ ಬಾಲ||
ಬಲ್ಲವರೊಳಾಡುತ್ತ| ಸೊಲ್ಲೆನಿಸಿದ ಬಾಲ ||1||
ಇರವೆನ್ನಿಸಿದ ಬಾಲ| ಅರಿವೆನ್ನಿಸಿದ ಬಾಲ||
ಮರವೆಯಿಲ್ಲದ ಬಾಲ| ಪರಬ್ರಹ್ಮ ನೀ ಬಾಲ ||2||
ಶ್ರವಣವೆನ್ನುವ ಪಾಲ| ಸವಿದು ಬೆಳೆದಿಹ ಬಾಲ||
ಸುವಿರಾಗ ಸದ್ಭಾವ| ಸುವಿವೇಕವೀ ಬಾಲ ||3||
ಹುಟ್ಟಿದಾಕ್ಷಣ ನುಡಿಯ| ಥಟ್ಟನಾಡುವ ಬಾಲ||
ಕಟ್ಟಕಡೆಯಲಿ ಮೋಕ್ಷ| ಕೊಟ್ಟು ಬಿಡುವ ಬಾಲ ||4||
ಎಲ್ಲ ಲೋಕದ ಸುದ್ದಿ| ಯಿಲ್ಲೆ ತಿಳಿಯುವ ಬಾಲ||
ಬಲ್ಲವರ ಒಡನಾಟ| ದಲ್ಲೆ ಬೆಳೆಯುವ ಬಾಲ ||5||
ಗುರುಪಾದ ಕೃಪೆಯಿಂದ| ದೊರಕಿದಂಥಾ ಬಾಲ|
ಗುರು ಬೋಧಾಮೃತದಿಂದ| ಭರಿತನಾಗಿಹ ಬಾಲ ||6||
ಕಾಲಕರ್ಮವ ಮೀರಿ| ಲೀಲೆಯಾಡುವ ಬಾಲ||
ಏಳುಕೋಟಿಯ ಮಂತ್ರ| ಮೂಲವಾಗಿಹ ಬಾಲ ||7||
ಈರೇಳು ಲೋಕಕ್ಕಾ| ಧಾರವಾಗಿಹ ಬಾಲ||
ಮೂರವಸ್ಥೆಗೆ ಮೂಲ| ಕಾರಣನು ಈಬಾಲ ||8||
ಎತ್ತಿಕೊಂಡವರೆಲ್ಲ| ಮತ್ತೆ ಇಳಿಸದ ಬಾಲ||
ಕರ್ತ ನರಹರಿರೂಪ| ವೆತ್ತಿ ಬಂದಿಹಬಾಲ ||9||

ಜೋಜೋ ಜೋಜೋ
ಜೋಜೋ ಜೋಜೋ ಜೋಜೋ ಎಂದು|
ಜೋಗುಳವನು ಹಾಡಿ ತೂಗುವೆ| ಬೇಗನೆ ಮಲಗಮ್ಮ ||ಪ||
ಶರೀರವೆಂಬ ಅರಮನೆಯಲ್ಲಿ|
ಚರಿಸುವ ವರ ಹಂಸ| ನಿನಗೆ| ವರತೂಲಿಕಾತಲ್ಪ ||1||
ಬೆಳಕನು ನೋಡು| ನಲಿನಲಿದಾಡು|
ಅಳುವುದು ಯಾಕಮ್ಮ | ಸುಮ್ಮನೆ ಮಲಗಿರಬೇಕಮ್ಮಾ ||2||
ಚಿನುಮಯವಾದ| ಪ್ರಣವ ಸುನಾದದ|
ಘನ ಜೋಗುಳ ನಿನಗೆ| ಕೇಳುತ ತನ್ಮಯಳಾಗಮ್ಮ ||3||
ಮುತ್ತಿನಹಾರ| ಕತ್ತಿನೊಳಿಹುದು|
ಕಸ್ತೂರಿಯ ತಿಲಕ| ಹಣೆಯಲಿ| ಬಿತ್ತರಿಸುವುದಮ್ಮಾ ||4||
ಅಘಹರ ನರಹರಿ| ಮಗಳಾಗಿರುವೆ|
ಬಗಳಾಂಬೆಯು ನೀನೆ| ನಿಗಮ| ಆಗಮ ಪೂಜಿತಳೆ || 5||

ಸಪ್ತ ಚಕ್ರಗಳನ್ನು ಶೋಧಿಸು
ಸಪ್ತ ಚಕ್ರಗಳನ್ನು ಶೋಧಿಸು| ನಿ |
ರ್ಲಿಪ್ತ ಬ್ರಹ್ಮವನಲ್ಲಿ ಸಾಧಿಸು|
ಗುಪ್ತನಾದವನು ಸಂಪಾದಿಸು| ಸಂ|
ತೃಪ್ತಿಯನಲ್ಲಿಯೆ ಸಂಧಿಸು ಅಪ||
ಗುದದಲ್ಲಿ ಮೂಲಾಧಾರವು| ಧರೆ|
ಗಧಿಕ ಗಣೇಶ್ವರನಿರುತವು|
ಪಡೆದಾರು ನೂರರ ಜಪವನು| ಸಂ|
ಮುದದಿಂದ ಸ್ವೀಕರಿಸಿರ್ಪನು ||1||
ಸ್ವಾಧಿಷ್ಠಾನವು ಗುಹ್ಯವೆಂಬುದು | ಜಗ|
ದಾದಿ ಬ್ರಹ್ಮನ ಸೃಷ್ಟಿಗಾದುದು||
ಹೋದುವಾರ್ಸಾವಿರ ಜಪಗಳು| ಜಲ|
ವಾದಂಥ ತತ್ವವಿದಾಗಲು 2||
ಮಣಿಪೂರಕವು ನಾಭಿಯಲ್ಲಿದೆ| ರ
ಕ್ಷಣಗೈವ ವಿಷ್ಣುವಿಗಾಗಿದೆ|
ನೆನೆವಾರು ಸಾವಿರ ಜಪವನು |ಅ|
ರ್ಪಣ ಮಾಡಲಗ್ನಿತತ್ವೇಶನು ||3||
ಹೃದಯವನಾ ಹತಚಕ್ರವು| ಲಯ|
ಸದನರುದ್ರನಿ| ಗಿದು ಯುಕ್ತವು||
ಪಡೆದಾರು ಸಾವಿರ ಜಪಗಳು| ಮರು|
ತದ ತತ್ವವೆಂಬುರು ಮುನಿಗಳು ||4||
ಕಂಠವಿ ಶುದ್ಧಿಯ ಚಕ್ರವು |ಶಿವ|
ಭಂಟ ಜೀವನಿಗಿದು ಸ್ಥಾನವು||
ಉಂಟಿಲ್ಲಿ ಸಾವಿರ ಜಪಗಳು|
ಅಂಟಿತ್ತು ಗಗನದೊಳೀಗಲು ||5||
ಭ್ರೂಮಧ್ಯವಾಜ್ಞಾ ಚಕ್ರವು| ಗುರು|
ಸ್ವಾಮಿ ನಿಂತನು ನಿತ್ಯ ಸೌಖ್ಯವು||
ನೇಮಸಾವಿರ ಜಪ ಸಲ್ಲಲು| ಮನ|
ಧಾಮ| ಚಂದ್ರನ ತತ್ವ ನಿಲ್ಲಲು ||6||
ಬ್ರಹ್ಮರಂಧ್ರದಿ ಸಹಸ್ರಾರವು| ಗುರು|
ಬ್ರಹ್ಮ ನರಹರಿ ಸಂಪೂರ್ಣವು||
ಧರ್ಮ ಸಾಸಿರ ಜಪವಿಚಾರವು| ಮತಿ|
ರಮ್ಯಸೂರ್ಯ ಸತತ್ವಸಾರವು ||7||

ಏನು ಸೋಜಿಗವಯ್ಯ
ಏನು ಸೋಜಿಗವಯ್ಯ| ನೀನು ಪೇಳಿದುಪಾಯ|
ಸ್ವಾನುಭಾವ ಪ್ರಿಯ ಮಹನೀಯಾ ||ಪ||
ಮೌನವನು ಮಾಡೆಂದೆ| ಧ್ಯಾನದೊಳು ಕೂಡೆಂದೆ|
ಆನಂದಮಯ ಜ್ಞಾನ ಪಡೆಯೆಂದೇ ||ಅ|ಪ||
ದುರ್ಗುಣವ ಬಿಡು ಎಂದೆ| ಸದ್ಗುಣವ ಪಡೆಯೆಂದೆ|
ನಿರ್ಗುಣವೆ ಸದ್ಗುಣದ ಕೊನೆಯೆಂದೆ||
ಉಗ್ರವನು ನೀಗೆಂದೆ| ಶೀಘ್ರದೊಳು ಸಾಗೆಂದೆ|
ನಿಗ್ರಹದೊಳಿಂದ್ರಿಯವ| ನಿಲಿಸೆಂದೆ ||1||
ತನುವೆ ಸಾಕಾರವು| ತನುವಿಗಾಶ್ರಯವಾದ|
ಮನನಿರಾಕಾರವು ತಿಳಿಯೆಂದೆ||
ಮನಸ ಗುಣವಾಗಿತ್ತು| ಜನನ ಮರಣಕೆ ಬಿತ್ತು|
ಅನಘಾತ್ಮ ನಿರ್ಗುಣನು ನೋಡೆಂದ ||2||
ತೋರುವಿಂದ್ರಿಯ ಜಾಲ| ದ್ವಾರಮಾನಸ ಮೂಲ||
ಬೇರೆ ಬೇರೆನೆ ಸಗುಣಗಣ ಶೀಲ||
ಭೂರಿ ಬ್ರಹ್ಮವು ಸಗುಣ| ಹಾರಿತಾ ನಿರ್ಗುಣ|
ತೋರಿತೋರದ ನರಹರಿ ಜ್ಞಾನ ||3||

ತಾನೇ ಕಟ್ಟಿದ ಗುಡಿಯೊಳಗಿಟ್ಟನು
ತಾನೇ ಕಟ್ಟಿದ ಗುಡಿಯೊಳಗಿಟ್ಟನು |
ತಾನೇ ಮಾಡಿದ ದೇವರನು ||ಪ||
ತಾನೇ ಪೂಜಿಸಿ ನಮಿಸುತ ವರವನು|
ಮಾನವ ಪಡೆವುದು ನಿಜವೇನು ||ಅಪ||
ದೇವರು ತಾನಾಗಿರುವುದರಿಂದಲೆ|
ದೇವರ ಮಾಡುವ ಹಂಬಲವು||
ಸೇವೆಯ ಮಾಳ್ಪನು ದೇವರಿಗಾಗಿಯೆ|
ದೇವರ ಕಾಣುವುದೇ ನಿಜವು ||1||
ಕಾಣದ ದೈವಕೆ ಕಲ್ಪಿಸುತಿರ್ಪನು|
ಕಾಣುವ ವಿಗ್ರಹ ರೂಪವನು ||
ಕಾಣುವುದೆಲ್ಲವು ದೇವರೆಯೆಂದರೆ |
ಕಾಣುವನಲ್ಲಿಯೆ ದೇವರನು ||2||
ಮೂರ್ತಿಯ ಪೂಜೆಯ ಮಾಡುತ| ದೇವರ|
ಸ್ಫೂರ್ತಿಯ ತನ್ನೊಳು ತುಂಬುವನು||
ಮೂರ್ತಿಯ ಧ್ಯಾನವ ಮಾಡುತ
ನರಹರಿ | ಮೂರ್ತಿಯ ಕಾಣಲು ನಂಬುವನು ||3||
ವಿಗ್ರಹ ಪೂಜೆಯ ಮಾಡಿದರೇ ಮನ|
ನಿಗ್ರಹ ಮಾಡಲುಬಹುದಿನ್ನು||
ಹಗ್ಗದಿ ಕಟ್ಟಿದ ಪಶುವಿನವೊಲು ಮನ|
ಶೀಘ್ರದಿ ವಶವಾಗುವುದೆನ್ನು ||4||
ಹೊರಗಿನ ಮೂ%B