ಅಡಗಿದಾ ಸಡಗರವು ತಿಳಿಯದೈಯ್ಯ
ಅಡವೀಶ ನಿನ್ನ ಮಹಿಮಾ ಲೋಕದೊಳು ಆಡಲಿಕ್ಕರಿದು ದೇವಾ
ದೃಢವುಳ್ಳ ಭಕ್ತರಾ ನುಡಿಯಲ್ಲಿ ಅಡಗಿದಾ ಸಡಗರವು ತಿಳಿಯದೈಯ್ಯ ||ಪ||
ಕುಂದರ ನಾಡಿನಲ್ಲೀ ನೀ ನಿಂತು ಕುಹಕರ ಯೆದೆದಲ್ಲಣೌ
ವಂದೆ ಮನದಲಿ ತನ್ನ ಹೊಂದಿಕೊಂಡಿದ್ದವರಾ ಮಂದಿರಕೆ ಮಹಮೂರ್ತಿಯಾ ||1||
ಮೂಢ ತಾನೇನು ಬಲ್ಲಾ ನೀ ಬಂದ ಗೂಢ ಗುಪ್ತದ ಲೀಲವಾ
ಕಾಡದೆ ಬೇಡದೆ ಕಾಡೊಳು ಮನೆ ಮಾಡಿ ಆಡುವ ಆಟ ಬೇರೆ ||2||
ನರ ಕಾಯ ಧರಿಸಿ ಬಂದು ಧರೆಯೊಳಗೆ ಅರರೆ ಕೌತುಕವ ತೋರಿ
ಗುರುಲಿಂಗ ಜಂಗಮಕ್ಕೆ ವರ ಸೂತ್ರಧಾರಕನು ಗುರುತು ಬಲ್ಲವರಿಗರಿಕೀ ||3||
ಯೇನೇನು ಇಲ್ಲದಂತ ಸ್ಥಳದಲ್ಲಿ ತಾನೆ ತಾನಾಗಿ ನಿಂತಾ
ಸ್ವಾನುಭಾವದ ಮೂರ್ತಿ ಸಾಕ್ಷತ ಅವತಾರ ಯೇನು ಹೇಳಲಿ ಶೃಂಗಾರ ||4||
ಹರಹರಿ ಬ್ರಹ್ಮನಾಗಿ ಈಶ್ವರ ವರ ಸದಾಶಿವನು ನೀನೇ
ಗುರುಲಿಂಗ ಜಂಗಮ ಪರಿ ಪರಿ ಲೀಲವು ವುರುತರದ ಬೈಲರೂಪಾ ||5||
ವಂದರೊಳಗಿಲ್ಲ ನೀನು ತಿಳಿದರೆ ಸಂದಿಲ್ಲದಿರ್ಪ ತಾನು
ಕುಂದು ಕೊರತಿಯು ಹೊಂದದಂತಾ ಚಿನ್ಮಯ ವಸ್ತು ಮಂದಮನುಜರು ಅರಿಯರ ||6||
ಕಪ್ಪಿ ಕಮಲವು ಬಲ್ಲುದೇ ಕೆಚ್ಚಲೊಳಲು ಉಂಣಿ ಹಾಲನು ಸವಿವುದೇ
ಕಪ್ಪು ಗೊರಳನ ಲೀಲಾ ಅಹುದಹುದು ನಿಜವೆಂದು ವಪ್ಪವಿಟ್ಟರು ಶರಣರು ||7||
ಕಾಂತರವನ್ನು ಸೇರಿ ತನ್ನಯ ಕಾಂತಿ ಜಗಕೆಲ್ಲ ಹರಹಿ
ಚಿಂತೆ ದೂರಾನಂದಯೆಂತು ವರ್ಣಿಸುವೆ ನಾನೂ ||8||
ನಾಲಿಗೆಯು ವಂದು ಯನಗೆ ಹೊಗಳಲಿಕೆ ಹಸ್ತ ಯರಡೈ ಬರಿಯಲಿಕೆ
ಕಾಲ ಕಾಲದ ಲೀಲಾ ಕರುವೇನು ಬಲ್ಲದು ಕೀಲಿಸಿದ ನುಡಿ ನುಡಿವದು ||9||
ಅನ್ನದಾನಿಯು ಯನ್ನಿಶಿ ನಿನ್ನದಾಸನೆನ್ನಿಶಿ ಶಿವನೆನ್ನಿಸಿ
ಚಿನ್ಮಯನೆನ್ನಿಸಿ ಚಿತ್ರಕನೆಸಿ ಉನ್ನತೋನ್ನತವೆನ್ನಿಸಿ ||10||
ಸಗುಣ ನಿರ್ಗುಣನು ನೀನೇ ಪರಿ ಪರಿ ಹಗರಣದ ರೂಪೂ ನೀನೇ
ನಿಗಮ ವೇದ್ಯನು ನೀನೇ ನಿತಾ ಅನಿತನು ಗಜ ನುಂಗಿದ ಬೆಳವಲು ||11||
ಸಾಕ್ಷಿ ರೂಪನೆ ನಿನ್ನೊಳು ಸರ್ವವೆಲ್ಲ ಸಕಾರವಾಗಿಹುದೂ
ಯೀಕ್ಷೀಶಿ ನೋಡಿದರೆ ನಾನು ಕೃತಾರ್ಥನಯ್ಯ ಯೇಕಮೇವಾತ್ಮ ನೀನೇ ||12||
ಅಪರಾಧಿ ನಾನು ದೇವಾ ನೋಡದೆ ಗುಪಿತ ರೂಪದ ತೋರಿಸೂ
ವಿಪರೀತ ಭಾವನೆಯ ಬಿಡಿಸಿ ನಿಶ್ಚಯ ಹಿಡಿಸಿ ಸುಪಥ ಕೊಡುವದು ನುಡಿಸೂ ||13||
ಪಾಪಿ ನಾನೈಯ್ಯ ದೇವಾ ನನ್ನೊಳಗನೀತಿ ಗುಣಗಳ ನೋಡದೆ
ಭೂಪ ನಿನ್ನ ಕರುಣ ನಿನಗೆ ನಾ ಹೇಳುವದೇ ವ್ಯಾಪಾರ ನಿನ್ನದಯ್ಯ ||14||
ಕರ್ಮಿ ನಾನೈಯ್ಯ ಗುರುವೆ ನನ್ನೊಳಗೆ ಅಧರ್ಮ ಗುಣಗಳ ಹುಡುಕದೇ
ನಿರ್ಮಳ ದೃಷ್ಟಿಯಲಿ ನಿಜ ಕೃಪ ಮಾಡುವ ಧರ್ಮ ನಿನ್ನದು ಸಾಂಬನೇ ||15||
ನಾನಾ ಕ್ಷೇತ್ರದ ಮೂರ್ತಿಯೋ ನೀನಿರುವ ಸ್ಥಾನಕ್ಕೆ ಯಳದುಕೊಂಡು
ಕೂನ ವರಿತರೆ ನೀನೇ ಸಾಕ್ಷಾತ ಪರದೇವಾ ಮಾನದಿಂ ರಕ್ಷಿಸೈಯ್ಯ ||16||
ಕೆಟ್ಟ ದುರ್ಗುಣಿಯು ನಾನೂ ನನ್ನಲ್ಲಿ ನಿಕೃಷ್ಟ ಗುಣಗಳ ಹುಡುಕದೇ
ದೃಷ್ಟ ಮೂರುತಿ ನಿನ್ನಾ ಬಿರದಿಗಾಗಿಯೆ ಬಿಡದೇ ಕಷ್ಟಮನ ಸುಖವ ಮಾಡು ||17||
ಪ್ರತಿ ರಹಿತನಯ್ಯ ನೀನೂ ನಿನ್ನಂತ ಹಿತಯಿಲ್ಲಾ ಲೋಕದೊಳಗೆ
ಗತಿ ಮತಿಗೆ ವಡಿಯನು ಗಾಡಿಕಾರ ಪ್ರಭುವು ನುತಿಸಲಿಕ್ಕೆ ಪುಣ್ಯ ಬೇಕು ||18||
ಬಾಲ ನಾನಯ್ಯ ದೇವಾ ಮಹಾ ಭಕ್ತಿ ಕೀಲಿನೊಳಗಾಡಿಸೈಯ್ಯ
ಕಾಲ ಕಾಲದ ಮಹಿಮಾ ಕರುವೇನು ಬಲ್ಲೆನೈ ಲೋಲ ಮಾರುತಿ ನೀನೆಲ್ಲಾ ||19||
ಶರಣು ಗುರುಕುಲಕೆ ಭಾನು ನೀನೈಯ್ಯ ಶರಣು ಚಂದ್ರಶೇಖರಾ
ಶರಣನು ಶ್ರೀ ಶಂಭುವೆ ಪರಮ ಯತಿಕುಲರಾಜ ಶರಣು ಶ್ರೀಗುರು ಮೂರ್ತಿಯೆ ||20||
ಶರಣು ಪೂರ್ವ ಪ್ರಮಥನೇ ನಿಜಶರಣು ಶರಣು ಆದಿಪುರುಷನೆ
ಶರಣು ಕರುಣಿ ನೀನು ಕಲ್ಪವೃಕ್ಷಾದನೇ ಶರಣು ಶರಣೈ ನಿನ್ನಗೆ ||21||
ಶರಣು ನಿರುಪಾಧಿ ಗುರುವೆ ಅಂಕಲಗಿ ಪರಮ ಶಿವ ಅಡವೀಶನೇ
ಪರಿ ಪರಿಯ ಲೀಲಾದಿಂ ಕಾದುಕೊಂಡಿರುವೆಯೆಂದು ಮರೆಯ ಹೊಕ್ಕೆನು ನಿನಗೆ ||22||
ಹೂವ್ವನಿಲ್ಲದ ದೇವಪೂಜೆ ಮಾಡಲು ಚಂದವೆ ಪರಮಹಂಸಾ
ಏಕೋ ಭಾವವಿಲ್ಲದ ಮನುಜ ಭಕ್ತನಾದರೆ ಚಂದವೆ ಪರಮಹಂಸಾ ||ಪ||
ಸತಿ ಸುತರಿಲ್ಲದ ಸಂಸಾರ ಮಾಡಲು ಚಂದವೆ ಪರಮಹಂಸಾ
ದೊಡ್ಡ ಯತಿಗಳಾದ ಮೇಲೆ ಇಂದ್ರಿಯ ಬಲಿಸದಿದ್ದರೆ ಚಂದವೆ ಪರಮಹಂಸಾ
ಮತಿ ಹೀನ ಮೂರ್ಕನು ಮಂತ್ರಿಯಾದರೆ ಚಂದವೆ ಪರಮಹಂಸಾ
ಗತಿಗೆಟ್ಟ ಮುದುಕಗೆ ಗಮಕದಾ ಸತಿ ಚಂದವೆ ಪರಮಹಂಸಾ ||1||
ಬಾಳೆಯ ಫಲ ಹಣ್ಣಾಗದೆ ಉಣಲು ಚಂದವೆ ಪರಮಹಂಸಾ
ಶಾಸ್ತ್ರ ಆಲಿಸಿ ಸವಿಯದ ಮಕ್ಕಳಿದ್ದು ಚಂದವೆ ಪರಮಹಂಸಾ
ಆಳು ಕುದುರೆಯಿಲ್ಲದ ಅರಸು ಇದ್ದು ಚಂದವೆ ಪರಮಹಂಸಾ
ಅಳುವ ಪತಿ ನುಡಿಯ ಕೇಳದ ಸತಿಯಿತದ್ದು ಚಂದವೆ ಪರಮಹಂಸಾ ||2||
ಫಲವ ಕಾಯದ ವೃಕ್ಷ ಬಲು ಬೆಳೆದರೇನು ಚಂದವೆ ಪರಮಹಂಸಾ
ನೆಲೆಗಾಣದ ನಾರಿಯ ನೆರೆ ನಂಬಿ ನಡೆದರೆ ಚಂದವೆ ಪರಮಹಂಸಾ
ಸಲುಗೆಯಿಂದ ಪರುವನು ಮಾಡಿದ ಕೃತಿಗೇಳಿ
ಸಲೆನಂಬಿ ಶಿವನ ಸತ್ಕೀರ್ತಿ ಸಡಿಲದೆ ಪಡೆ ನೀ ಪರಮಹಂಸಾ ||3||
ಅಡಗಿದಾ ಸಡಗರವು ತಿಳಿಯದೈಯ್ಯ
ಅಡವೀಶ ನಿನ್ನ ಮಹಿಮಾ ಲೋಕದೊಳು ಆಡಲಿಕ್ಕರಿದು ದೇವಾ
ದೃಢವುಳ್ಳ ಭಕ್ತರಾ ನುಡಿಯಲ್ಲಿ ಅಡಗಿದಾ ಸಡಗರವು ತಿಳಿಯದೈಯ್ಯ ||ಪ||
ಕುಂದರ ನಾಡಿನಲ್ಲೀ ನೀ ನಿಂತು ಕುಹಕರ ಯೆದೆದಲ್ಲಣೌ
ವಂದೆ ಮನದಲಿ ತನ್ನ ಹೊಂದಿಕೊಂಡಿದ್ದವರಾ ಮಂದಿರಕೆ ಮಹಮೂರ್ತಿಯಾ ||1||
ಮೂಢ ತಾನೇನು ಬಲ್ಲಾ ನೀ ಬಂದ ಗೂಢ ಗುಪ್ತದ ಲೀಲವಾ
ಕಾಡದೆ ಬೇಡದೆ ಕಾಡೊಳು ಮನೆ ಮಾಡಿ ಆಡುವ ಆಟ ಬೇರೆ ||2||
ನರ ಕಾಯ ಧರಿಸಿ ಬಂದು ಧರೆಯೊಳಗೆ ಅರರೆ ಕೌತುಕವ ತೋರಿ
ಗುರುಲಿಂಗ ಜಂಗಮಕ್ಕೆ ವರ ಸೂತ್ರಧಾರಕನು ಗುರುತು ಬಲ್ಲವರಿಗರಿಕೀ ||3||
ಯೇನೇನು ಇಲ್ಲದಂತ ಸ್ಥಳದಲ್ಲಿ ತಾನೆ ತಾನಾಗಿ ನಿಂತಾ
ಸ್ವಾನುಭಾವದ ಮೂರ್ತಿ ಸಾಕ್ಷತ ಅವತಾರ ಯೇನು ಹೇಳಲಿ ಶೃಂಗಾರ ||4||
ಹರಹರಿ ಬ್ರಹ್ಮನಾಗಿ ಈಶ್ವರ ವರ ಸದಾಶಿವನು ನೀನೇ
ಗುರುಲಿಂಗ ಜಂಗಮ ಪರಿ ಪರಿ ಲೀಲವು ವುರುತರದ ಬೈಲರೂಪಾ ||5||
ವಂದರೊಳಗಿಲ್ಲ ನೀನು ತಿಳಿದರೆ ಸಂದಿಲ್ಲದಿರ್ಪ ತಾನು
ಕುಂದು ಕೊರತಿಯು ಹೊಂದದಂತಾ ಚಿನ್ಮಯ ವಸ್ತು ಮಂದಮನುಜರು ಅರಿಯರ||6||
ಕಪ್ಪಿ ಕಮಲವು ಬಲ್ಲುದೇ ಕೆಚ್ಚಲೊಳಲು ಉಂಣಿ ಹಾಲನು ಸವಿವುದೇ
ಕಪ್ಪು ಗೊರಳನ ಲೀಲಾ ಅಹುದಹುದು ನಿಜವೆಂದು ವಪ್ಪವಿಟ್ಟರು ಶರಣರು ||7||
ಕಾಂತರವನ್ನು ಸೇರಿ ತನ್ನಯ ಕಾಂತಿ ಜಗಕೆಲ್ಲ ಹರಹಿ
ಚಿಂತೆ ದೂರಾನಂದಯೆಂತು ವರ್ಣಿಸುವೆ ನಾನೂ ||8||
ನಾಲಿಗೆಯು ವಂದು ಯನಗೆ ಹೊಗಳಲಿಕೆ ಹಸ್ತ ಯರಡೈ ಬರಿಯಲಿಕೆ
ಕಾಲ ಕಾಲದ ಲೀಲಾ ಕರುವೇನು ಬಲ್ಲದು ಕೀಲಿಸಿದ ನುಡಿ ನುಡಿವದು ||9||
ಅನ್ನದಾನಿಯು ಯನ್ನಿಶಿ ನಿನ್ನದಾಸನೆನ್ನಿಶಿ ಶಿವನೆನ್ನಿಸಿ
ಚಿನ್ಮಯನೆನ್ನಿಸಿ ಚಿತ್ರಕನೆಸಿ ಉನ್ನತೋನ್ನತವೆನ್ನಿಸಿ ||10||
ಸಗುಣ ನಿರ್ಗುಣನು ನೀನೇ ಪರಿ ಪರಿ ಹಗರಣದ ರೂಪೂ ನೀನೇ
ನಿಗಮ ವೇದ್ಯನು ನೀನೇ ನಿತಾ ಅನಿತನು ಗಜ ನುಂಗಿದ ಬೆಳವಲು ||11||
ಸಾಕ್ಷಿ ರೂಪನೆ ನಿನ್ನೊಳು ಸರ್ವವೆಲ್ಲ ಸಕಾರವಾಗಿಹುದೂ
ಯೀಕ್ಷೀಶಿ ನೋಡಿದರೆ ನಾನು ಕೃತಾರ್ಥನಯ್ಯ ಯೇಕಮೇವಾತ್ಮ ನೀನೇ ||12||
ಅಪರಾಧಿ ನಾನು ದೇವಾ ನೋಡದೆ ಗುಪಿತ ರೂಪದ ತೋರಿಸೂ
ವಿಪರೀತ ಭಾವನೆಯ ಬಿಡಿಸಿ ನಿಶ್ಚಯ ಹಿಡಿಸಿ ಸುಪಥ ಕೊಡುವದು ನುಡಿಸೂ ||13||
ಪಾಪಿ ನಾನೈಯ್ಯ ದೇವಾ ನನ್ನೊಳಗನೀತಿ ಗುಣಗಳ ನೋಡದೆ
ಭೂಪ ನಿನ್ನ ಕರುಣ ನಿನಗೆ ನಾ ಹೇಳುವದೇ ವ್ಯಾಪಾರ ನಿನ್ನದಯ್ಯ ||14||
ಕರ್ಮಿ ನಾನೈಯ್ಯ ಗುರುವೆ ನನ್ನೊಳಗೆ ಅಧರ್ಮ ಗುಣಗಳ ಹುಡುಕದೇ
ನಿರ್ಮಳ ದೃಷ್ಟಿಯಲಿ ನಿಜ ಕೃಪ ಮಾಡುವ ಧರ್ಮ ನಿನ್ನದು ಸಾಂಬನೇ ||15||
ನಾನಾ ಕ್ಷೇತ್ರದ ಮೂರ್ತಿಯೋ ನೀನಿರುವ ಸ್ಥಾನಕ್ಕೆ ಯಳದುಕೊಂಡು
ಕೂನ ವರಿತರೆ ನೀನೇ ಸಾಕ್ಷಾತ ಪರದೇವಾ ಮಾನದಿಂ ರಕ್ಷಿಸೈಯ್ಯ ||16||
ಕೆಟ್ಟ ದುರ್ಗುಣಿಯು ನಾನೂ ನನ್ನಲ್ಲಿ ನಿಕೃಷ್ಟ ಗುಣಗಳ ಹುಡುಕದೇ
ದೃಷ್ಟ ಮೂರುತಿ ನಿನ್ನಾ ಬಿರದಿಗಾಗಿಯೆ ಬಿಡದೇ ಕಷ್ಟಮನ ಸುಖವ ಮಾಡು ||17||
ಪ್ರತಿ ರಹಿತನಯ್ಯ ನೀನೂ ನಿನ್ನಂತ ಹಿತಯಿಲ್ಲಾ ಲೋಕದೊಳಗೆ
ಗತಿ ಮತಿಗೆ ವಡಿಯನು ಗಾಡಿಕಾರ ಪ್ರಭುವು ನುತಿಸಲಿಕ್ಕೆ ಪುಣ್ಯ ಬೇಕು ||18||
ಬಾಲ ನಾನಯ್ಯ ದೇವಾ ಮಹಾ ಭಕ್ತಿ ಕೀಲಿನೊಳಗಾಡಿಸೈಯ್ಯ
ಕಾಲ ಕಾಲದ ಮಹಿಮಾ ಕರುವೇನು ಬಲ್ಲೆನೈ ಲೋಲ ಮಾರುತಿ ನೀನೆಲ್ಲಾ ||19||
ಶರಣು ಗುರುಕುಲಕೆ ಭಾನು ನೀನೈಯ್ಯ ಶರಣು ಚಂದ್ರಶೇಖರಾ
ಶರಣನು ಶ್ರೀ ಶಂಭುವೆ ಪರಮ ಯತಿಕುಲರಾಜ ಶರಣು ಶ್ರೀಗುರು ಮೂರ್ತಿಯೆ ||20||
ಶರಣು ಪೂರ್ವ ಪ್ರಮಥನೇ ನಿಜಶರಣು ಶರಣು ಆದಿಪುರುಷನೆ
ಶರಣು ಕರುಣಿ ನೀನು ಕಲ್ಪವೃಕ್ಷಾದನೇ ಶರಣು ಶರಣೈ ನಿನ್ನಗೆ ||21||
ಶರಣು ನಿರುಪಾಧಿ ಗುರುವೆ ಅಂಕಲಗಿ ಪರಮ ಶಿವ ಅಡವೀಶನೇ
ಪರಿ ಪರಿಯ ಲೀಲಾದಿಂ ಕಾದುಕೊಂಡಿರುವೆಯೆಂದು ಮರೆಯ ಹೊಕ್ಕೆನು ನಿನಗೆ ||22||
ಅಡವಿ ಸ್ವಾಮಿ ನಿಮ್ಮ ಸೇವಕರನು
ಅಡವಿಸ್ವಾಮಿ ನಿಮ್ಮ ಪಾದಕ್ಕಾಗಿ ಮಹ|
ಸಡಗರದಿಂದೆ ಉಬ್ಬಿ ಬಂದೆ ನೋಡು ||ಪ||
ಕರುಣದಿಂದ ಹಸ್ತವಿಟ್ಟು ಯಿತ್ತ ನೋಡು |ನಿನ್ನ|
ಚರಣ ಸೇವಕನು ನಾನರಿದು ನೋಡು
ಪರಮ ತೇಜದಲ್ಲಿ ದೃಷ್ಟಿಯಿರಿಸಿ ನೋಡು |ನಿನ್ನ|
ದರಶನಕ್ಕೆ ಪಾಪಕ್ಹಚ್ಚಿದೆ ನೋಡು ||1||
ನಿತ್ಯಾನಂದ ನಿನ್ನ ಮೂರ್ತಿಶೇವಿಪಲ್ಲೆ |ಬಾಳಿ|
ಅತ್ಯಧಿಕ ನರಕ ಮೆಚ್ಚುಗೊಳಿಪಲ್ಲೆ
ಸತ್ಯವಯ್ಯ ನಿನ್ನ ಧ್ಯಾನಾ ಅರಿವಿನಲ್ಲೇ | ಸದಾ
ಮೃತ್ಯುಂಜಯನು ನಿನ್ನ ವಚನ ಪಾಲಿಪನಲ್ಲೆ ||2||
ಅಂಕಲಗಿ ಸ್ವಾಮಿ ಮಹತ್ತು ತಿರುಗಿ ನೋಡೂ| ಈತ
ಶಂಕರನು ಯಂದು ದೇಶದೊಳಗೆ ನೋಡೂ|
ಲೆಂಕನಾಗಿ ಹೊಗಳಲಿಕ್ಕೆ ಆನೆ ನೋಡೂ
ನಿಃಶಂಕ ನಿರುಪಾಧಿ ತಾನೆ ತಾನೆ ನೋಡೂ ||3||
ಅಡವೀಶ ಸಿಗುವಂತ ಬೆಡಗು
ಅಡವೀಶ ಸಿಗುವಂತ ಬೆಡಗು ಅದು ಬೇರೆ
ಹುಡುಗರೇನ್ ಹಿರಿಯರೇನ್ ದೃಢಗುಣವು ಬೇಕು ||ಪ||
ಕೇವಲ ಸುಜ್ಞಾನ ಪೀಠ ಹಾಕಿಸಿಕೊಂಡು
ಭಾವ ಭರಿತಾನಂದದಿಂ ಮೂರ್ತವಾಗಿ
ನಾವು ನೀವೆಂಬು ಭಯವಳಿದು ಏಕಾಂತದೊಳು
ಠಾವು ಮಾಡಿಯೆ ತಾನು ಸಾಕ್ಷಾತನಾದಾ ||1||
ವಂದು ನೂರಾರು ವಂಬತ್ತು ನೂರಾವಂದು
ಮುಂದೆ ಇನ್ನೂರು ಹದಿನಾರರೊಳಗೆ
ಚಂದ ಚಂದ ಮೂರ್ತಿ ಮಂತ್ರ ಬೀಜಾಕ್ಷರಾ
ಒಂದರೊಳು ಸರ್ವವೆಲ್ಲ ಅಡಕ ಮಾಡಿದ್ದಾ ||2||
ನಿರುಪಾಧಿ ತಾನಾದೆ ನಿಜಲಿಂಗ ಗುರುತಿನೊಳು
ಕರಿಗೊಂಡು ಪೂರ್ಣ ಬ್ರಹ್ಮದ ಬಯಲಿನೊಳಗೇ
ಬೆರೆದು ನಿಬ್ಬೆರಗಾಗಿ ಎಲ್ಲಾ ಸುಖದಿಂ ತೂಗಿ
ಅರಿತು ಅರಿಯದೆಯಿರುವಾ ಶೂನ್ಯ ತಾನಾದ ||3||
ಅಡವಿ ಪಾಶ್ಯಾ
ಅಡವು ಪಾಶ್ಚ್ಯ ಹರನೆ ನಿಶ್ಚಯಾ ಘನವೆಂದು
ಮುಂಡಿಗಿಡುವೆ ವೇದಾಂತ ವಾಕ್ಯದಿ
ಪೊಡವಿಯೊಳಗೆ ಜ್ಞಾನ ವೈರಾಗ್ಯೋಪರತಿಗಳಿಂದಾ
ದೃಢದಿ ಮೆರೆವ ಕಾರಣಕೇ ಹೊಡದೆ ಡಂಗುರವಾ ಗುರುವೇ ||ಪ||
ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣಾ
ಯುಕ್ತ ಐಕ್ಯನೆಂಬೋ ವಚನದಾ
ಯುಕ್ತಿಯಲ್ಲಿ ನಿಜವ ಕಂಡೆ ವಪ್ಪುವಾರು ಆರು ಸಲವು
ಮುಕ್ತಿಗೊಡೆಯನಾಗಿ ಜಗದಿ ಭಕ್ತಿಲೀಲೆ ಆಡುವಾತಾ ||1||
ಕರ್ಮಿ ಮುಮುಕ್ಷಭ್ಯಾಸನುಭವಿ ಆರೂಢ
ನಿರ್ಮಳಾದ ಚೇತನಾತ್ಮನು
ಮರ್ಮ ತಿಳಿದರೀತ ಜಗದಿ ಗುರುವು ಆರು ಮತದ ಜನರು
ಬರುವದೈಯ್ಯಾ ಸುತ್ತದೇಶ ಕರುಣಿ ಕಲ್ಪವೃಕ್ಷನೀತ ||2||
ಮೂಢ ಮತಿಗಳೇನು ಬಲ್ಲರು ಶಿವ ಆಡುವಂತಾ
ಗೂಢ ಗುಪ್ತವಾದಾ ಲೀಲವಾ
ನೋಡಿದರೆ ನರ ಶರೀರ ತಾಳಿ ಅಂಕಲಗಿ ಸ್ಥಳಕೇ
ಆಡಬಂದ ನಿರುಪಾಧಿ ನಾಡಿನೊಳಗೆ ಶಿದ್ಧಲಿಂಗ ||3||
ಅಡವಿ ಪಾಶ್ಚನ ಪಾದ ಕಾಣುತ
ಅಡವಿ ಪಾಶ್ಚನ ಪಾದ ಕಾಣುತ
ದಿಡಿಗಿನಲಿ ಓಡುವವು ಪಾತಕ
ಸಡಗರಾನೂಗುವ ಒಂದೆ ನಿಮಿಷದಲೀ ||ಪ||
ಲಂಕ ಪುರಕೆಯು ಹೋಗಿರಲ್ಲಿಹ
ಶಂಕರಿಯ ದರುಶನ ತಕ್ಕೊಳೆ
ಸಖ್ಯ ಇಲ್ಲದ ಮುಕ್ತಿ ದೊರೆಯದು ನಿಃಷ್ಪಲವು ಚರಿಸೇ
ಶಂಕರಿಯಪತಿ ಶಂಕರಿಲ್ಲಹ (ದೆ)
ಡಂಕ ಹೊಡೆಯಿತು ಮೂರು ಲೋಕದಿ
ಬಿಂಕ ಬೀರಿತು ಸಾಧು ಶಿವನೆಂದೆನುತು ಶೃತಿಸಾರೇ ||1||
ಕಂಚಿಯೆಂಬೋ ಪುರದ ವಳಗಿಹ
ಕೆಂಚೆ ಕಾಮಾಕ್ಷಿಯನ್ನು ನೋಡಲು
ಸಂಚಿತಾರಾಬ್ದಾಗಾಮಿಗಳಿವು ಮಾರರೊಳಗೊಂದು
ಹಂಚಿ ಹಾಕಲು ಹೋಗಲಿಲ್ಲವು
ಮಿಂಚಿನಾ ಪ್ರಭೆ ಬಲ್ಲ ಪುರುಷಗೆ
ಕಿಂಚಿತಿಹ ಅಣುವಾಗಿ ನಡದವ ಭವವ ಕಳಕೊಂಬಾ ||2||
ಪೃಥ್ವಿಯನು ನಾ ನೋಡ್ವೆನೆನುತಲಿ
ಶುದ್ಧದಲಿ ಸ್ರುಂಕಾಳಿ ದ್ವೀಪದಿ
ಬಿದ್ದು ಬಂದರೆ ಯೇನು ಯಿಲ್ಲವು ಬರಿದೆ ನಿಃಷ್ಪಲವು
ಸಿದ್ಧ ಪುರುಷನ ಸಂಗದಿಂದಲಿ
ಬುದ್ಧಿ ಬರುವದು ಜ್ಞಾನಿಯೆನಿಸುವ
ಬದ್ಧವೈ ಈ ಮಾತು ಶರಣನೆ ಶಂಭು ಶಿವ ಸತ್ಯ ||3||
ಚ್ಯಾಮುಂಡಿಯನು ಕಾಣ್ವೆನೆನುತಲಿ
ಕಾಮ್ಯದಲಿ ನಾ ಕ್ರೌಂಚ ಪಟ್ಟಣ
ಭೂಮಿ ತಿರುಗಿದರಲ್ಲೇನಿಲ್ಲೆಲೆ ಬರಿದೆ ಬರಿ ಗಂಟೆ
ನೇಮದಿಂದಲಿ ಸಾಧು ದುರುಶನ
ಸ್ವಾಮಿಯಿವನೆಂತೆಂದು ಆಗಲು
ಭೂಮಿಕೆಯ ಮೆಟ್ಟುವನು ತೂರ್ಯಾತೀತ ದೊರಕುವದು ||4||
ಅಡವಿ ಪಾಶ್ಚನ ಮಹಿಮೆ
ಅಡವಿ ಪಾಶ್ಚನ ಮಹಿಮೆ ಆಡಲಿಕ್ಕದರಿದು
ಬೆಡಗು ಆಗದೆ ಲೋಕಕೇ ಮಗುವೇ
ಇಡಬೇಕು ಭಕ್ತಿ ತಾ ಪರಿಪೂರ್ಣ ಮನದಿಂದ
ವಡಿಯ ಸಿಗುವನು ಸೂಕ್ಷ್ಮದಿ ಮಗುವೇ ||ಪ||
ಗೂಢದೊಳಗಿಹ ಗುಪ್ತವಾದಂತ ವಸ್ತುವಾ
ನೋಡುವ ದೃಷ್ಟಿ ಬೇರೆ ಮಗುವೆ
ಕಾಡ ಸಿದ್ಧನ ಮಹಿಮೆ ಕಾಪಟ್ಯಗೇನರಿಕೇ
ಆಡವನು ತಾನೇ ತಾನೇ ಮಗುವೇ
ಮಾಡಬಾರದ ಕೆಲಸ ಮಾಡಿದರೆ ಮಗನೆಂದು
ನೋಡುವನು ಕರಣದಿಂದ ಮಗುವೇ
ಕೂಡಿಕೋ ಬಿಡದಲೆ ಇದೇ ವ್ಯಾಳ್ಳೆ ಮೊಂದಿಲ್ಲ
ಕೇಡು ತಪ್ಪಿಸುವ ದೇವಾ ಮಗುವೇ ||1||
ಮೂರೊಂದು ಹಿಡಕೊಂಡ ನಾಲ್ಕಕು ಮೊದಲರಿವದು
ಆರು ಹತ್ತನ್ನೆರಡು ಮಗುವೇ
ಮೀರಿದ ಹದಿನಾರು ಎರಡು ತಿಳಕೊಂಡಲ್ಲಿ
ಭೋರೆಂಬ ನಾಡವುಂಟು ಮಗುವೇ
ಸೇರಿಕೊಂಡುನ್ಮನಿಯ ಬಿಂದುಕಳದೊಳು ಮೊಳಗೆ
ತೋರುವನು ಬ್ರಹ್ಮವಾಗಿ ಮಗುವೇ
ಧೀರ ಶ್ರೀಗುರುನಾಥ ವಲಿದರೇ ತನ್ನರಿವಾ
ಜ್ಞಾನದ ಕಣ್ಣು ಕೊಡುವಾ ಮಗುವೇ ||2||
ಕಾಲಕಾಲದ ಪುಣ್ಯ ವದಗಲಿಕೆ ಅಡವೀಶ್ಯಾ
ತೋಲ ಮೂರ್ತಿಯ ಪದದಲೀ ಮಗುವೇ
ಕೀಲಹುದು ಸಾಧುಗಳ ಕೇಳಿ ನಿರುಪಾದ್ಯಾಗಿ
ಜಾಲ ಹರಿವದು ಉತ್ತಮಾ ಮಗುವೇ
ಮೂಲವಾಗಿಹ ಕರ್ಮ ಹರಿಯಲಿಕೆ ಈ ನುಡಿಯು
ಮೇಲು ಮಂತ್ರವಾಗದೆ ಮಗುವೇ
ಸೋಲು ಗೆಲುವೇನಿಲ್ಲ ಒಂದರೊಳಗಿಹುದೆಲ್ಲ
ಮೂಲ ಮೂರುತಿ ನಿಶ್ಚಯ ಮಗುವೇ ||3||
ಕಾಲ ಕಾಲದ ಪುಣ್ಯ ವದಗಲಿಕೆ ಅಡವೀಶ್ಯಾ
ಲೋಲ ಮೂರ್ತಿಯ ಪದದಲೀ ಮಗುವೇ
ಕೀಲಹುದು ಸಾಧುಗಳ ಕೇಳಿ ನಿರುಪಾದ್ಯಾಗಿ
ಜಾಲ ಹರಿವದು ವುತ್ತಮಾ ಮಗುವೇ
ಮೂಲವೇಗಿಹ ಕರ್ಮ ಹರಿಯಲಿಕೆ ಈ ನುಡಿಯ
ಮೇಲು ಮಂತ್ರವಾಗsದೆ ಮಗುವೇ
ಸೋಲು ಗೆಲುವೇನಿಲ್ಲ ಒಂದರೊಳಗಿಹುದೆಲ್ಲಾ
ಮೂಲ ಮಾರುತಿ ನಿಶ್ಚಯ ಮಗುವೇ ||4||
ಅಂಗ ವಾಚಮನ ತೀನೋ ತೇರಾ
ಅಂಗ ವಾಚಮನ ತೀನೋ ತೇರಾ ಪರು ಭಜಿಸೈ
ಅಂಗ್ವಾಚಮನ ತೀನೋ ತೇರಾ ಪರು ಭಜಿಸೈ ||ಪ||
ಜಾಹ ದೇಖೆ ಹೋ ಹೈ ತುಮೆ ಕೋಹಿನಹಿ ದುಸರಾ
ಸಾಹೆಬ್ಮೆಹರಬಾನಿ ತೇರಾ ಗುರುಜಿಸೈ ||1||
ಸೋಬ್ತುಮೆ ಹುಯಬಾದು ಅಬುಕಬುಕಾಹೈ
ಚಾಮನೈ ಬೋಲೆ ಕು ಮೇರಾ ಗುರುಜಿಸೈ ||2||
ನಿರುಪಾಧಿ ಗುರುಹೋನಾ ಸಾರದಿನ್ನು ಸಖನಿ
ಪೂರಣಬ್ರಹ್ಮಮೋ ಮಿತಿ ಗುರುಜಿಸೈ ||3||
ಉದಯವಾದಿತೇಕೊ
ಉದಯವಾದಿತೇಕೊ ತೀವ್ರ ಹೊತ್ತು ನಿಲ್ಲದೇ ||ಪ||
ಪರಮ ನಿದ್ರಾ ಯೋಗದಲ್ಲಿ ಹರುಷದಿಂದ ಪಾರ್ವತಿಯೊಳು
ಸರಸದಿಂದ ಸಮರಸದೊಳಿರುವ ವ್ಯಾಳ್ಳೆದೀ ||1||
ಹಾಡಿ ನೋಡಿ ಮಾಡಿ ಕೂಡಿ ಕಾಡ ಸಿದ್ಧನರ್ಧಾಂಗಿಯನು
ನಾಡೊಳರಿಯದಂಥ ವಸ್ತು ಬೇಡವಾಗಲೀ ||2||
ನಿರುಪಾಧಿಯ ತಾನೆ ಎಂದು ಶಿರದಿ ಕರವನಿಟ್ಟು ತನ್ನ
ಅರಿತು ನಿದ್ರಿ ಜಾಗ್ರ ಸ್ವಪ್ನ ಸ್ಮರಣ ವ್ಯಾಳ್ಳೆದಿ ||3||
ಏನು ಹೇಳಲೈ
ಏನು ಹೇಳಲೈಯ್ಯಾ ನಿನ್ನಗೇ| ಗುರು ಜಂಗ್ಮ ಖೂನಾ
ಮೂರುತಿಯು ತಾನಾಗೇ|
ಕಾನನದಿ ಮಠವು ಮಾಡಿ| ಸ್ವಾನುಭವ ಶ್ರೇಷ್ಠನೆನಿಸಿ|
ಧೇನುವಾಗಿ ಭಕ್ತರನ್ನು| ಭಾವದಂತೆ ನಡೆಸುವಧಿಕಾ ||ಪ||
ಅರಿತು ಅರಿಯದಂತೆ ಜಗದೊಳು ನರವೇಷ ಹಾಕಿ
ಗುರುತು ತಿಳಿಯಗೊಡದೆ ಮೆರೆವುತಾ
ಪರಮ ಪಾವನ್ನ ನೀನೂ ಪಾಪ ಕ್ಷಯವ ಮಾಡಲಿಕ್ಕೆ
ಧರೆಗೆ ಬಂದು ಲೀಲವಾಡಿ| ಶರಣರಿರವು ನೀನೇದೇವಾ ||1||
ಅನ್ನದಾನಿ ಆದಿ ಶರಣನು| ಆಗಾದನು|
ವುನ್ನತಾದ ವಸ್ತು ರೂಪನು|
ಕುನ್ನಿ ನಾನು ಕಾಲ ಕಾಲ| ಮನ್ನಿಸುವ ವಡಿಯ ನೀನು ||2||
ತಂದೆ ನಿರುಪಾಧಿ ನೀನೆಲೋ| ಅಂಕಲಗಿವಾಸ|
ಬಂದು ಅಡವಿ ಸಿದ್ಧನಾಗಿಯೇ| ಕುಂದು ಕೊರತೆ ಬಾರದಂತೆ|
ಹಿಂದು ಮುಂದು ಕಾಯ್ವ ನೀನೇ| ಎಂದು ಬಂದೆ ಕಟಾಕ್ಷವನ್ನು|
ಚಂದವಾಗಿ ತೆರೆದು ನೋಡೋ ||3||
ಏನು ಕಾರಣ ಸುಮ್ಮನಿರುವೆ
ಏನು ಕಾರಣ ಸುಮ್ಮನಿರುವೆ ಅಡವೀಶ್ಯಾ
ಖೂನದೊಳಗಿಡು ನಿನ್ನಾ ಶಾಖದ ಅಣುವು ||ಪ||
ನಿತ್ಯ ನಿರ್ಗುಣ ಮೂರ್ತಿ ನಿಜರೂಪ ನೀನೂ
ತೊತ್ತಿನ ಮ್ಯಾಲೆ ಕರಣವ ಮಾಡೊ ದೇವಾ
ಅತ್ಯಧಿಕ ಆನಂದದಿಂದ ಮೆರೆವವನೇ
ಚಿತ್ತ ನಿಲುಕಡೆ ಮಾಡು ಶೇವಕನು ನಾನು ||1||
ನೋಡೋ ದಯದೃಷ್ಠಿಯಲ್ಲಿ ಅಂತರಂಗದೊಳು
ನೀಡೊ ಕರುಣಾಮೃತವ ನಿಜ ರೂಪ ನೀನೇ
ಆಡಲೇನಯ್ಯ ಸರ್ವೆಲ್ಲ ನಿನಗರುವು
ಬೇಡಿದ ಪದವಿಯಾ ನಡೆಸುವಧಿಕಾರೀ ||2||
ಬಂಧು ಬಳಗದಿಯನ್ನಾ ಕೊರತೆ ಆಲಿಸದೆ
ತಂದೆ ತಾಯಿ ನೀನಾಗಿ ಪೊರೆಯ ಬೇಕೆಂಬೆ
ಕಂದ ನನ್ನಾ ಬಿರದು ಪೊಗಳುವನೆಂದು ತಿಳಿದು
ಸಂದೇಹ ಕಳದು ಸಾಕ್ಷಾತನ ಮಾಡೊ ||3||
ಶರೀರಯಿರುವನ್ಕ ನಿಜ ಸುಖದ ಬೇಡುವೆನು
ಗುರುವೇ ಕಡಿಯಲ್ಲಿ ನಿನ್ನೊಳಗೇ ರೂಪಾ
ಯಿರಿಸೆಂಬೊ ಬಯಕೆ ವಂದಲ್ಲಾದೆ ಮತ್ತೆ
ನಿರುತದಿಂ ನಿಮ್ಮ ನೆನೆವಂತ ಸುಖವಿರಲಿ ||4||
ಅಂಕಲಗಿ ವಾಸನೇ ಅಡವಿ ಸಿದ್ದೇಶ್ಯಾ
ಕಿಂಕರ ಪ್ರೀತಿಯ ಗುಣ ಪಾಲಿಸೆಂಬೇ
ಶಂಕರಾ ಶಿವ ಶಂಭೋ ಹರ ಗುರು ಲಿಂಗ
ಸೋಂಕೋ ನೀ ನಿರುಪಾದಿ ಜಂಗಮದೇವಾ ||5||
ಏನು ಹೇಳಬೇಕು
ಏನು ಹೇಳಬೇಕು ಜೀವಗೆ| ಅಡವೀಶ ಕೊಡುವಾ ಕೂನವನರಿಯೆದೆಲೆ ಬಳಲುವಾ||
ಧ್ಯಾನದೊಳಗೆ ಐಕ್ಯವಾಗೆ| ಬೋನ ಬಟ್ಟೆ ದುಡ್ಡು ರುಚಿಯೂ|
ತಾನೆ ನಡೆಸುವಂತ ದೇವಾ| ಮೌನ ಮೂರುತಿಯು ಸಿದ್ಧಾ ||ಪ||
ಕೊಡುವದರಿಯದೆ ಚಿಂತಿಯ| ಮನದೊಳಗೆ ತಾನು
ಹಿಡಿದು ಹೊಯ್ಯದಾಡಿ ವರುಲುವಾ| ವಡೆಯನಾಗ್ನೆ ಅರಿಯ ಮಂತ್ರ
ಪಡೆದು ವಳಗೆ ಜಪಿಸಿದಾಗಲೆ ವಡಲ ಆಶೆಗಳಲುವಾನು|
ದೃಢವು ಇಲ್ಲಾ ಬಯಕೆ ಬಿಡದು ||1||
ನಾಥನಾಟ ಅರಿಯದಲೆಯೂ| ಸಂಶಯದಿ ತಾನೆ
ಕೋತಿಯಂತೆ ಕುಣಿದು ಕೆಡುವನು| ನೀತಿ ಭೀತಿಯರಡು ಮರೆತು|
ಕಾತುರದಿ ಕಂಡ ಕಡೆಗೆ| ಪ್ರೀತಿ ಇಡುವದಯ್ಯಾ ಇದರ
ಜ್ಯಾತಿ ಸುಡಲಿ ತಿಳಿಯದೆನಗೆ ||2||
ಹಿತವ ಬಯಸುವದು ನಿತ್ಯದಿ| ಅರಿಯದೆ ಬಹ
ಕೃತಕವೇನು ಬೇಡಿಕೊಂಡರೇ ಪತಿತ ಪಾವನ ನಾನು ಪುಣ್ಯ
ಗತಿಯು ಇದ್ದಾ ಪರಿಯು ಮೂಡ್ವ ಪಥವನರಿತು ಪಾದದಲ್ಲಿ|
ರತಿಯನಿಡರು ನಿಶ್ಚಯಿಲ್ಲಾ ||3||
ನಾನು ನನ್ನನೆಂದು ಕೆಡುವದು| ನಿನ್ನಾಜ್ಞೆ ಮರದು|
ಸ್ವಾನನಂತೆ ಸೊಟ್ಟ ಚರಿಪದು| ಧೇನುವಾದ ಗುರುವಿನಂಘ್ರಿಯ|
ಮೌನದಿಂದ ಭಜಿಪದಗಲೀ| ತಾನೇ ಶ್ರೇಷ್ಟನಾಗಿ ಮನದಿ|
ಹೀನ ಕಂಜದಾತಿ ಇಹುದು ||4||
ಮೂರರಂತೆ ನಡೆಸುವಾತನು ಅಂಕಲಗಿ ಮಠದಿ
ಸಾರ ಸೌಖ್ಯ ಸಿದ್ಧಲಿಂಗನು| ಪೂರಣನಂದೈಕ್ಯ ಕಾರ್ಯ|
ಕಾರಣಡವಿಯ ಪಾಶ್ಚಾ| ಧೀರ ಗುರು ನಿರುಪಾಧಿಯಾದ|
ಸೇರುವಿಯೊಳು ಸಮ್ಮತಿಲ್ಲ ||5||
ಏನು ಹೇಳಲಮ್ಮಾ
ಏನು ಹೇಳಲಮ್ಮಾ| ಅಡವಿಸಿದ್ದಂತಾ| ಮಹಾ ಪ್ರಚಂಡಾ
ಸ್ವಾನುಭಾವದ ಸುಖ ತಾನೆ ವುಂಡಾ| ನಿಜ ಮುಕ್ತಿ ಕಂಡಾ ||ಪ||
ಹಮ್ಮು ಅಹಂಕಾರವಾ ಬಿಟ್ಟನಮ್ಮಾ| ಸುಖ ಕೊಟ್ಟನಮ್ಮಾ|
ವಮ್ಮಾನ ಇರುಯೆಂದು ಇಟ್ಟನಮ್ಮಾ| ಭವಗೆಟ್ಟನಮ್ಮಾ|
ಅಮ್ಮಮ್ಮಾ ಈತನ ಮ್ಯಾಲೆನಮ್ಮಾ| ಮಮತೆ ಹತ್ತಿತಮ್ಮಾ
ನಮ್ಮ ನಿಮ್ಮ ವರೆಂಬೊದ್ಹೊಯಿತಮ್ಮಾ| ಸುಮ್ಮನಾಯಿತಮ್ಮಾ ||1||
ಕಂಡ ಕಡಿಗಿ ಚಿತ್ತಯಿಡಲಿ ಬ್ಯಾಯೆಂದಾ| ಯನ್ನ ನೋಡುಯಂದಾ|
ಹಿಂಡು ದೋಷಾದಿಗಳ ಕಳಿವೆಯೆಂದಾ| ಬಹು ಪ್ರೀತಿಯಿಂದಾ|
ಚಂಡಿತನ ಮನದೊಳು ಬ್ಯಾಡಯಂದಾ| ತಿಳಿದು ನೋಡುಯಂದಾ|
ಭಂಡಾಟ ಲೌಕಿಕ ಪಾಡಲ್ಲಂದಾ| ಯನ್ನ ಕೂಡುಯಂದಾ ||2||
ನಿರುಪಾಧಿ ತಾನೆ ಅಡವೀಶನೆಂದು| ಸ್ವಪ್ನಾದಿ ಬಂದಾ|
ಗುರುಲಿಂಗ ಜಂಗಮ ತಾನೆಯಂದಾ| ಸಂಶಯಯಿಲ್ಲಂದಾ|
ಪರಕೆ ಪರತರ ವಸ್ತು ಇದೆಯೆಂದಾ| ಗುಪ್ತಯಿರುಯಂದಾ|
ಧರೆಯೊಳು ನರರಂತೆ ಮೆರೆಯಂದಾ| ಮುಕ್ತಿ ಅರಿಯಂದಾ ||3||
ಏನು ಬರಿಯಲಿ
ಏನು ಬರಿಯಲಿಬೇಕು ಬ್ರಹ್ಮ ತಾನಾದಂಥ
ಖೂನ ಬಲ್ಲ ಗ್ನಾನಿ ಆನಂದಗೊಂಡಾ ||ಪ||
ಮುಕುತಿ ಮಾರ್ಗವ ಲಿಖಿಸೊ| ವಿಧ ಮೂರವಸ್ತೆಯೊಳು
ಯುಕುತಿ ಆನಂದಾಗಿ ತೂಗುತಿಹುದು
ವಿಕಳ ಪ್ರಪಂಚದಲಿ ತೋರುವದು ಬಹು ಪರಿಯು
ನಕಲು ಆಗ್ವದು ಇದ್ದ ವಚನವನು(ದು) ಖರಿಯೆ ||1||
ಬಲ್ಲಗಾರನು ಬಲ್ಲ ಮಾರು ಪ್ರಾರಬ್ಧಗಳ
ನಿಲ್ಲೋಣಾಗದೆ ಮಾರು ಮಾರ್ಗದವನಲ್ಲಿ
ಎಲ್ಲಾಗೇನರಕಿ ಶಿವನು ಶರಣನು ಎಂಬೊ
ಸೊಲ್ಲು ತಿಳಿದವಗೆ ಸುಕೃತವು ಬೇಕು ಜ್ಯಾಣಾ ||2||
ಜೀವ ಭಾವಿಗೆ ಏನು ನಿರುಪಾಧಿ ಸುಖವರಿಕೀ
ಕೇವಲ ಸ್ವರ್ಗ ಕೈಲಾಸ ಕೈವಲ್ಲ್ಯೆ
ಭಾವ ಭರಿತನು ಅಡವಿಶಿದ್ಧ ಯೋಗೀಶ್ವರನಾ
ಸೇವೆಯೊಳಗಿದ್ದವಾ ಭವವನು ಕಳಕೊಂಬಾ ||3||
ಓಂ ನಮೊ ಅಡವಿಸಿದ್ದಾ
ಓಂ ನಮೊ ಅಡವಿಸಿದ್ದಾ ಬಂದೇನಯ್ಯ|
ಕೃಪೆ ಮಾಡು ತಂದೆ ಹಿಡಿಯನ್ನಯ ಕೈಯ್ಯ
ತೊತ್ತು ನಾನು ದಯದಿಂದ| ||1|
ಅತ್ಯಧಿಕ ಸುಖವ ಕೊಡು ಎನಗೆ ನೀನು ||2||
ಕರುಣ ಮಾಡೋ ಮಗುವಿನಾ|
ಹರಣದಾನಂದೊಳು ನೀನೆ ಕೂಡೊ ||3||
ಶಿರವ ಬಾಗಿ ಮನವನು ಚರಣದಲ್ಲಿಡುವೆ|
ಸಾಕ್ಷಾತ್ ಯೋಗಿ ||4||
ನಿನ್ನ ಮಾಯಾ ತಿಳಿಯದು| ವುನ್ನತಾ ಮೂರ್ತಿ ಛಾಯಾ|
ನಿನ್ನ ವಳಗೆ ನಾನಿರುವ| ಸನ್ನುತವ ಪಾಲಿಸೆನಗೆ ||5||
ನಾಥ ನೀನು ನೀ ವಲಿಯೆ|
ಪ್ರೀತಿ ಮಾಡಂಬೋದೇನು ||6||
ದೇವನಾಗಿ ನಿಜ ಸುಖ|
ಭಾವ ಒಂದರಲಿ ತಾನಾಗಿ ತೂಗಿ ||7||
ಎಲ್ಲಾ ಜಗದಿ ನೀನಿದ್ದು|
ಉಲ್ಲಾಸ ನಾಡ್ವೆ ಮುದದಿ ||8||
ದಯದಿ ನೋಡು ಕೇವಲ|
ಭಯ ಭಕ್ತಿ ಇರುವ ಆನಂದ ನೀಡು ||9||
ನೀನೇ ದೇವಾ ತತ್ವದಾ|
ಕೂನದೊಳು ಏಕವಾದಂಥ ಭಾವ ||10||
ಮಾರರೊಳಗೆ ಮನವಿರುವ|
ಸಾರಾಂಶ ತನ್ನ ಒಳಗೆ ||11||
ಕರುಣಿಸಿ ಕಾಯೋ ಯನ್ನ
ಕರುಣಿಸಿ ಕಾಯೋ ಯನ್ನ| ಅಂಕಲಿನಾಥ|
ಕರುಣಿಸಿ ಕಾಯೋ ಯನ್ನ ||ಪ||
ಕರುಣಿಸಿ ಕಾಯೋ ಯನ್ನ| ಗುರುಲಿಂಗ ಜಂಗಮನೆ
ಮರೆಯ ಹೊಕ್ಕೆನು ನಿನ್ನಾ ಬಿರದಿಗಾಗಿಯೆ ಬಿಡದೆ ||ಅ.ಪ||
ನಂಬಿ ಬಂದೆನು ಇಲ್ಲಿಗೆ ನೀನೇ ಮಹಾ
ಸಾಂಬಶಿವನು ಯನ್ನುತಾ|
ಹಂಬಲಿಸುತ ಬಂದ| ಕಂದನ ಯತ್ತಿಕೊಂಡು|
ಯಿಂಬು ಮಾಡಿದು ಮುಕ್ತಿ ತಕ್ತಮಾಲಿಯ ಹಾಕಿ ||1||
ನಿತ್ಯ ನಿರ್ಗುಣ ಮಾರುತಿ| ಅರವಿರಳ ಜ್ಯೋತಿ|
ಅತ್ಯಧಿಕಾರಿ ಪ್ರಭುವೇ|
ಸತ್ಯ ಸದಾಚ್ಯಾರಿ ಸಾಕ್ಷಿರೂಪನೇ|
ತೊತ್ತೆನ್ನ ಮಾಡಿಡು ಬೃತ್ಯನಾನಯ್ಯ ||2||
ನಿರುಪಾಧಿ ನೀನೆಂದೆನೋ| ಕರ್ತೃವು ಪರನೇ|
ಪರತರ ಗುರುವೆಂದೆನೋ| ಸ್ಮರಣಿ ಮಾತ್ರದಿ ನಿನ್ನಾ|
ಕುರುಹು ಕಾಣಿಸುವಂತಾ ಇರವು ತೋರಿಸಿ ಭವವಾ|
ಹರಿಯೋ ಶ್ರೀ ಅಡವೀಶಾ ||3||
ಕರುಣ ಮಾಡೊ ದೇವಾ
ಕರುಣ ಮಾಡೊ ದೇವಾ| ಶ್ರೀಗುರು| ಕರುಣ ಮಾಡೊ ದೇವಾ||
ಕರುಣ ಮಾಡೊ ನೀ ಧೊರಿ ಅಡವೀಶನೇ|
ಚರಣ ಧೂಳಿನಾ| ಪರಿಪರಿ ನುತಿಸುವೇ ||ಪ||
ಹಿಂದೆ ಮುಂದೆ ನೀನು ಕಾದಿರು
ಬಂಧು ಬಳಗ ತಾನೂ ಮಗುವಿನ
ಅಂದ ಚಂದವನು ನೋಡಲಿ
ಕಂದುಗೊರಳನೆ ಕಾಲ ಕಾಲದಲೀ| ಸಂದೇಹ ಬಿಟ್ಟಾನಂದವಾಗುವಾ ||1||
ನೀತಿ ಪುರುಷನೆಂದು ಲೋಕದಿ
ಧಾತ ನೀನೆ ಎಂದು ಅರಿವುತ ಭೀತಿಯಿಂದ ಬಿಂದೂ
ಮಾತು ಮನ್ನಿಸು ಅನಾಥ ನೀನೆ ತಿಳಿ
ಯಾತರೊಳಗೆ ಬಹು ನೂತನವಾಗುವಾ ||2||
ನಿರುಪಾಧಿಯು ನೀನೇ ಎನ್ನುತಾ
ಮರಿಯ ಹೊಕ್ಕೆ ನಾನೆ ಅಂಕಲಗಿ ಪುರದ ಸಿದ್ಧ ತಾನೆ ನಿಶ್ಚಯಾ
ಅರಮರಿಲ್ಲದೆ ಹಾಡಿ ಹರಸುವಾ
ಗುರುತಿನೊಳಗೆ ಮೈ ಮರೆವ ಮಹ ಸುಖಾ ||3||
ಕಳೆದ ವಸ್ತುವ ನಿನ್ನ ಬಳಿಯಲ್ಲಿ
ಕಳೆದ ವಸ್ತುವ ನಿನ್ನ ಬಳಿಯಲ್ಲಿ ಕೇಳಲಿಕೆ
ಯಿಳೆಯಲ್ಲ ಬಂದು ಕೂಡಿತೊ ಅಡವಿಸಿದ್ಧಾ ||ಪ||
ಮಗನು ಹೋದನೆ ಎಂದು ತಾಯ್ ಜಗವೆಲ್ಲಾ ತಿರುಗುತಾ
ನಿಗಮಗೋಚರ ನಿನ್ನಲ್ಲಿ ಹುಡುಕುತ ಬಂದು
ಅಘಹರ ನಿನ್ನಪಾದ ಮಗನ ಮೋಹದಿ ಕಂಡೆ
ಸುಗುಣ ಕೊಟ್ಟಿಡು ಸುಖದೀ ಎನ್ನುವರೈಯ್ಯಾ ||1||
ಗಂಡ ಬಿಟ್ಟೋದನೆಂದು ಹೆಂಡತಿ ಹುಡುಕುತಾ
ಕಂಡಾಳು ನಿನ್ನ ಪಾದದೀ ಆನಂದವಾಗಿ
ಮಂಡಲದೊಳು ಭಕ್ತಿ ಪುಂಡ ದೇವರ ದೇವಾ
ಗಂಡನಾಳ್ವಂತೆ ಮಾಡೋ ಯನ್ನುವರೈಯ್ಯಾ ||2||
ತಂದೆ ಹೋಗಲು ಮಗನು ಬಂದು ಹುಡುಕುತಾ
ತಂದೆ ಕಂದುಗೊರಳ ನಿನ್ನಲ್ಲಿ ಕಂಡು
ಸಂತೋಷದಿಂದ ಕಳುಹಿಯನ್ನ ಮಂದಿರ ಸುಖದುಃಖ
ನಿಂದೆ ನಿಜವು ಸರ್ವೇಶ್ಯಾ ಯನ್ನುವರೈಯ್ಯಾ ||3||
ತಮ್ಮ ಹೋದನು ಯಂದು ಸುಮ್ಮನೆ ತಿರುಗಿ
ಅಂಣಾ ನಿಮ್ಮ ಚರಣದಿ ಕಂಡನು ಅರ್ಥೀ ಅಹಲ್ಹಾದ
ವಮ್ಮನ ಕೊಟ್ಟೆನ್ನ ತಮ್ಮನ ಕಳುಹಿಸಿ
ನಿಮ್ಮ ಧರ್ಮವು ಮಹಾದೇವಾ ಯನ್ನುವರೈಯ್ಯಾ ||4||
ಮುಕುತಿ ಕಾಣದೆ ಹೋಗಿ ಭಕ್ತಿ ಪುರುಷರೆಲ್ಲಾ
ಸುಕೃತಾದಿ ಬಂದು ಕಂಡು ನಿರುಪಾಧಿಯಂದ
ಅಕಲಂಕ ಮಹಿಮಾ ನೀನು ಸುಖರೂಪ ಅಡವಿಸಿದ್ಧಾ
ಮುಕುತಿ ಕೊಡಿಸೂ ಯನ್ನಗೆ ಯನ್ನುವರೈಯ್ಯಾ ||5||
ಕನಸು ಕಂಡೆನು
ಕನಸು ಕಂಡೆನು ಕಾಮಿನೀ| ನಿಮಿಷದೊಳು
ಚಿನುಮಯನು ಕಂಡು ಬಯಲು ಆದಾ|| ||ಪ||
ನಾಲ್ಕು ಮನಗಳಿಂದ| ವಪ್ಪುವನು|
ಮೂಲೋಕದೊಡೆಯನಾಗೀ ತಾನೇ||
ಕಾಲ ಕರ್ಮವ ಹರಿವನು| ಯಿಂತವನ
ಕೀಲರಿದ ಯೋಗ ನಿದ್ರೆಯೊಳಗೇ|| ||1||
ಹತ್ತು ದಿನಸಿಲಿ ಕೂಗಿತು| ಅದು ತಾನು|
ಚಿತ್ರ ವಿಚಿತ್ರದಿ ತೂಗುತ್ತಾ
ಮುತ್ತು ಮಾಣಿಕ ಉಗುಳಿತು| ಪ್ರಭೆ ತಾನು|
ಮೊತ್ತ ಮೊತ್ತಾಗಡಗಿತೂ ಸುಖದಿ|| ||2||
ಬೆಳಗೂತನ ಭಯಗೊಂಡೆನು| ಎಚ್ಚತ್ತು|
ಕಳೆವರನ ಕೊಂಡಾಡಿದೆ ಯನ್ನಾ
ವುಳುಹಿ ಚಿನ್ಮಾತ್ರ ಮಾಡೀ| ನಿರುಪಾಧಿ
ಭಳಿರೆ ಭಳಿರೆ ಅಡಿವಿಸಿದ್ಧಾ|| ||3||
ಕಥೆ ಕಾವ್ಯದೊಳು ನೀನೇ
ಕಥೆ ಕಾವ್ಯದೊಳು ನೀನೇ ಪ್ರಥಮ ಮೂರುತಿಯಂದು
ನುತಿಸಬಲ್ಲವ ಪುಣ್ಯನೂ ಪತಿತ ಪಾವನ
ಚೇತನಾತ್ಮನು ಅಶಿತ ಆನಂದೈಕ್ಯ ತಾನೇ
ಕೃತಕವಲ್ಲವು ತಾನೆ ಆಧಾರಾ ಹಿತದಿ ತಿಳಿಯಬಲ್ಲ ಶಾಂತಗೆ ||ಪ||
ನವಚಕ್ರ ನವಲಿಂಗ ನವಶಕ್ತಿ ನವಭಕ್ತಿ
ನವವಿಧವನು ತಿಳಿಯೋ ಕವಲುಯಿಲ್ಲದೆ ಏಕ ಬ್ರಹ್ಮದ
ವಿವರದೊಳು ತಾ ತುಂಬಿ ತುಳಕುವ
ಭವವುಯಿಲ್ಲದ ಪೂರ್ಣ ಸುಖಮಯ ಸುವಿವೇಕಗಳಿಗೇ ಸೂಕ್ಷ್ಮದರ್ಥವು ||1||
ಜಗಮಯಾ ಶಿವನಂಬೋ ಬಗಿಯನರಿದು ಬ್ರಹ್ಮಾ
ನಗರಾದಿಚರಿಸುವಗೇ ನಗಿಯು ಕಾಣ್ವದು ನಾನಾ ಅರ್ಥವು
ನಿಗಮಗೋಚರ ಒಬ್ಬ ತಾನಿರೇ ಸುಗುಣ ತನದಲಿ ತಿಳಿದು ತನ್ನದು
ಅಗಲದಲೆಯಿರಬಲ್ಲ ವೀರಗೇ ||2||
ನಿರುಪಾಧಿ ಅಡವಿಪಾಶ್ಚಾ ತಾನೇ ತಾನೇ ಎಂದು
ವರಲಿ ವರಲಿ ವೇದವು ಚರಣ ಕಾಣದೆ ಮೌನಗೊಂಡವು
ಖರಿಯ ಖರಿಯ ಖರಿಯ ನಿಜ ನಿಜ
ವುಸುರಲೇತಕೆ ಗುಪ್ತವಸ್ತುವಾ ಕರದಿ ಕಂಡೂ ಅಣುರೂಪಾದಗೇ ||3||
ಕಾಯಯ್ಯ ಕರುಣಾ ನಿಧಿಯೇ
ಕಾಯಯ್ಯ ಕಾಯಯ್ಯ ಕರುಣಾ ನಿಧಿಯೇ ನೀನು| ಅಡವಿಶಿದ್ಧಾ|
ನೋಯಲಾರೆನು ಭಯ ಸಂಕಟ ಹರಿಸಯ್ಯ| ಅಡವಿಶಿದ್ಧಾ|| ||ಪ||
ನಿತ್ಯಾನಂದಾ ನಿನ್ನ ತೊತ್ತೆಂದು ಅನಿಸೈಯ್ಯ ಅಡವಿಶಿದ್ಧಾ| ನೀನು
ಸತ್ಯ-ಸದಾಚಾರಿ ಸಾಕ್ಷಾತ್ನೆನ್ನುವಾ ಅಡವಿಶಿದ್ಧಾ
ಮೃತ್ಯುಂಜಯನು ನೀನು ಮಹಾದಾದಿ ವಡಿಯನು ಅಡವಿಶಿದ್ಧಾ| ನಾನು
ಯತ್ತ ಹೋದರೆ ನಿನ್ನಾ ಚಿತ್ತದೊಳಿರಿಸೈಯ್ಯ ಅಡವಿಶಿದ್ಧಾ ||1||
ಸ್ವರ್ಗ ಕೈಲಾಸ ಕೈವಲ್ಯ ನೀನಿರುವದೂ| ಅಡವಿಶಿದ್ಧಾ
ನರ್ಮ ಮಾಡುಯನ್ನ ಸಂಶಯ ಚಿಂತೆಯಾ| ಅಡವಿಶಿದ್ಧಾ
ಆರ್ಗಳ ವಡಿದಂಥ ಅನಾದಿ ಶಂಭುವೇ ಅಡವಿಶಿದ್ಧಾ
ಭರ್ಗೋದೇವೀಶ್ವರ ರುದ್ರ ವಿಷ್ಣು ಬ್ರಹ್ಮ| ಅಡವಿಶಿದ್ಧಾ ||2||
ನಿರುಪಾಧಿ ನೀನೆಂದು ಪರಿಪರಿ ಹೊಗಳಿದೆ| ಅಡವಿಶಿದ್ಧಾ
ಗುರುಲಿಂಗ ಜಂಗಮ ಪರತರ ವಸ್ತುವೆ| ಅಡವಿಶಿದ್ಧಾ
ವರದ ಅಂಕಲಿನಾಥ ಸ್ಮರಹರ ವುರುತರ| ಅಡವಿಶಿದ್ಧಾ
ಮರೆಯನು ಹೊಕ್ಕೆನು ಬಿರದಿಗೆ ಕಾದುಕೊಂಡಿರು| ಅಡವಿಶಿದ್ಧಾ ||3||
ಕಾಡಿ ಬೇಡದ ಗುರುಗಳಿಲ್ಲಾ
ಕಾಡಿ ಬೇಡದ ಗುರುಗಳಿಲ್ಲಾ ಭಿಕ್ಷೆ ಬೇಡುವರು
ಭಕ್ತರನು ನಾಡಿನೊಳಗೆಲ್ಲಾ ||ಪ||
ವಂದೆ ಜಾಗದಿ ಕುಳಿತುಕೊಂಡು ದೇವಾ ಭಕ್ತ
ಬಂದು ಬೇಡಿದ ಭಕ್ತಿ ತೀರಿಸಲಿ ಸದ್ಗುರುವು
ಯಂದು ಕಂಡು ಕೇಳಿ ತಿಳಿದೇ ಗುರು ನಿಜವೆಂದು
ಸಂದೇಹ ಇಲ್ಲದಲೆ ಹಾಡಿ ಹರಸಿದೆ ನಿತ್ಯ
ಬಂದು ಸಾರೂ ಜೋಗಿ ಬೈರಾಗಿ ಗಣವೆಲ್ಲಾ
ಹಿಂದಿನಾ ಶರಣೀತ ಲೀಲವಾಡಲಿಕ್ಕೆ
ಬಂದ ಯನ್ನವರೂ ಐನೂರು ಗಾವುದದವರು
ಕಂದಗಳು ಮುದುಕರೂ ಕೊಂಡಾಡುವದು ನೋಡಿ
ವಂದು ಜಾಗದಿ ಮನೆ ವರುಷಾಸನಗಳಿಲ್ಲಾ
ದುಂದು ಕಾಣ್ವದು ನಿತ್ಯ ಖರ್ಚು ಕಂಡಾಬಟ್ಟಿ
ಬಂದ ಭಕ್ತರ ತಂದದೊರುಷ ದಿನ ಕಲಶಿದರೆ
ವಂದೇ ದಿನಕೆ ಸಾಲದೈಯ್ಯಾ ವಿಚಾರಿಸಲು
ಕಂದು ಗೊರಳನ ಆಟ ಅರಿಯಲಸಾಧ್ಯ ||1||
ಆನೆ ಒಂಟಿ ಕುದುರೆ ಎತ್ತು ಕಂಟಲಿ ಹಾಕಿ
ನಾನು ಸಿಂಹಾಸನ ಪತಿಯೆಂದು ಜಗದ್ಗುರುವೆಂದು
ಮಾನ ನಮ್ಮದು ಬಹಳ ಬಿರುದು ಬಟ್ಟಂಗಿಯಾ
ಶ್ಯಾನೆ ನೂರಾರು ಕಾಲ್ಮಂದಿ ಚತ್ರ ಚಾಮರ
ಯೇನು ಕೊಡುವಿರಿ ಭಕ್ತ ಜನರು ಕರ್ತು
ಪೈಣ ಪಟ್ಟಣಕೆ ಪಂಚರಾತ್ರಿ ಹಳ್ಳಿಗೆಯೇಕ ರಾತ್ರಿ
ಜಾಣರಲ್ಲದ ದಡ್ಡ ಮತಿಗಳು ಬಡಿದ್ಹೊಡಿದು
ಯೇನು ಕೊಟ್ಟರೆ ಕೊಡಲು ಮಾನ ಕೊಡುವರು
ಅವರ ಮನೆಯೊಳಗೆ ಉಣ್ಣುವರು
ಗ್ನಾನಿಯಾಗಿರುಯೆಂದು ಹೇಳಿ ಘಳಿಸಿದ ದ್ರವ್ಯ
ಖೂನವರಿತರೆ ನಿನ್ನಾ ಅಂಬುಲಿಗೆ ಸಾಲದೂ
ಮೌನಿ ನಿನ್ನಾ ಮಹತ್ತು ತಿಳಿಯದರಿದರಿದೂ ||2||
ಪೊಡಯೊಳು ವೇದ ಆಗಮ ಪುರಾಣಗಳಲ್ಲಿ
ನಡೆ ನುಡಿಯಂತೆ ವಪ್ಪುವದು ಆರೂ ಸ್ಥಲವೂ
ಯಡಬಿಡದೆ ಶ್ರವಣ ಮನನ ನಿಧಿ ಧ್ಯಾಸವನೂ
ಬಿಡದೆ ಆನಂದಾಗಿ ಸವಾಕಾರ್ಯವು ತೂಗಿ
ಯಿಡಿಕಿರಿ ಬ್ರಹ್ಮವನು ತಿಳಿದು ಸುಮ್ಮನೆ ಕುಳಿತು
ವಡಲ ಆಶಯ ಬಿಟ್ಟು ವಸ್ತು ರೂಪನು ಆಗಿ
ಕೊಡುವ ಭುಕ್ತಿ ಮುಕ್ತಿ ಸಕಲ ಸಂಪದಗಳನು
ಬೆಡಗೇನು ಅಲ್ಲ ಕೇಳಿ ಕಂಡು ತಿಳದವಗೆ
ಸಡಗರೈಶ್ವರ್ಯ ಕಾಣ್ವದು ಮಠದ ಶೃಂಗಾರಾ
ವಡಿಯ ನೀನಲ್ಲದಲೆಯಿಲ್ಲ ಮೂಲೋಕದೊಳು
ಕೊಡುವರುಗಳಿಲ್ಲ ಬೇಡುವರು ಬಹಳುಂಟು
ಅಡವಿಪಾಶ್ಚನೆ ನಿರುಪಾಧಿ ಗುರು ಘನವೆಂದು
ಯಿಡುವೆ ಮಂಡಿಗೆಯನ್ನು ಯಿಲ್ಲನಿನ್ಹೊರತು ||3||
ಕಿವಿಯು ಹೋದವು
ಕಿವಿಯು ಹೋದವು ನಿನ್ನಗೇ| ಶ್ರೀಗುರು ಶಿದ್ಧ
ಸುವಿವೇಕ ಜನ ಬಲ್ಲಾರೂ ವಿವರ ತಿಳಿಯಲು ಗಂಗೆ ಜಡಿಯಲಿ
ಸವನಿಸಿ ಹಳಿದು ಒಂದು ಚಂದ್ರನ ನಯನ ಎರಡರ ಸೀತ ಮುಚ್ಚಲು
ಭುವನದವರಾಡುವದು ಕೇಳದೇ ||ಪ||
ಯಾಗ ದಾನಗಳಿಂದಲೀ ಜಪ ನೀತಿಯು
ಯೋಗ ಪೂಜೆಗಳಿಂದಲೀ ಆಗಮ ಪುರಾಣಗಳು
ತಿಳಿದು ಸುಖಾ ಭೋಗವ ಬೇಡುವರೂ
ಯೋಗ ಹಾಗೆಂತೆಂದು ಕರ್ಮದಿ
ಸಾಗಿದವು ಬಹುದಿವಸ ಕೇಳದೆ
ತೂಗುವಿಯು ಆನಂದ ಸಂಬ್ರಮಾ
ರಾಗ ರಹಿತ ನಿಃಶಬ್ದ ಬ್ರಹ್ಮವೇ ||1||
ಆರು ಮತದ ವಳಗೆ ಹದಿನೆಂಟು ಜ್ಯೋತಿ
ನೂರೆಂದು ಕುಲವೆಲ್ಲವೂ ಸೇರಿವೆಯಲಿ ನಿನ್ನನೂ
ಹೊಗಳ್ವದು ಅವರಾ ಆರೈಕೆ ತೀರಿಸಲೂ
ಭಾರಿ ಭಾರಿಗೆ ನಿನ್ನ ನೆನಿವರು
ಭೂರಿ ಪಾಪದಿ ಆಗದಿದ್ದರೆ
ತೋರಿ ಹೇಳಲಿ ಕರೆದು ಬೈವದು
ತಾರದಲೆ ನೀ ಮನಕೆ ಸುಮ್ಮಿರೆ ||2||
ಬಾಲವುನ್ಮದ ಪಿಶ್ಯಾಚೀ ಮೂಕ್ಬದಿರಂಥಾ
ಲೀಲಾವು ಶಿವಯೋಗಿಗೇ ಹೇಳುವ ಮಾತು ನಿಜವು
ಸುಳ್ಳಲ್ಲವೋ ಕೇಳಿ ಕಂಡ ತಿಳಿದೇ
ನಾಲ್ಕುವೇದಾರು ಶ್ಯಾಸ್ತ್ರವು ಕಾಲ ಕಾಲದಿಂದ ನುಡಿವವು
ಕೀಲು ತಿಳಿದರೆ ನೀನೆ ಶಿವ ನಿನ್ನ
ಮೂಲ ಅರಿಗು ಅರಿಯದು ಮೌನಿಯೇ ||3||
ಸುಖವಿರೇ ಹೊಗಳುವರೂ ಅವರ ಕರ್ಮ
ದುಃಖವಿರೇ ಬೊಗಳುವರೂ ಅಕಲಂಕ ಮಹಿಮಾ ನೀನೂ
ಪುಣ್ಯ ಪಾಪ ನಿಕರಕ್ಕೆ ನೀರಾವರಣಾ
ವಿಕಳ ಮತಿಯಲಿ ನಿನ್ನ ಬೈದರೆ
ಸಕಲ ನಿನ್ನ ಚೇತನೆನುತಲಿ
ಪಕಪಕನೆ ನಗುವಂತ ದೇವನೆ
ಲಕಲಕ ಹತನಾದ ಮಯದಲಿ ||4||
ನಿರುಪಾಧಿಯಾದವನೆ ವಂದ್ಯನೆ ನಿಂದೆ
ಗುರುತೀಗತ್ತತ್ತ ತಾನೇ ಯಿರುವನೆಂತೆಂದು ಶೃತಿ
ಕೂಗಲೂ ನೋಡಿ ವರದೆ ನೀ ಮುಡಿಸಿದಂತೇ
ಪರಮ ಮುಕ್ತಿ ಪತಿಯೆ ನಿನ್ನಯಾ
ಬಿರದು ಸ್ತುತಿಪನ ದೂರಯಿಡುವದು
ತರವೆ ನಿನ್ನಯ ಶ್ಯಾಖ ತಿಳಿದರೆ
ಕರಸಿಕೋ ಏಕಾಂತದಲಿ ಪ್ರಭು ||5||
ಕೇಳಿರಣಾ ಲೋಲಮೂರ್ತಿ
ಕೇಳಿರಣಾ ಲೋಲಮೂರ್ತಿ ಕೀಲು ತಿಳಿಸಲಿಕ್ಕೆ ಯೀತಾ
ಕಾಲ ಕರ್ಮ ಹರಿದು ನಿಂತಿಹಾ ಕೇಳಿ ಜನಾ ||ಪ||
ನರ ಶರೀರವನ್ನು ಧರಿಸಿ ಹರಹಿ ಲೋಕದಲಿ ಪ್ರಭುವು
ಗರುಲಿಂಗ ಜಂಗಮ ನೆನಸಿದಾ ಕೇಳಿಜನಾ|
ಪರಮ ಸದಾ ಶಿವನು ಯೀತಾ ಪಾಪಕ್ಷಯವ ಮಾಡಲಿಕ್ಕೆ
ಧರೆಗೆ ಬಂದು ಲೀಲಾ ಆಡುವಾ ಕೇಳಿ ಜನಾ ||1||
ನಾದ ಬಿಂದು ಕಳಾಯೀತ ಭೇದ ಭೇದಕ್ಕೆ ಹೊರಗು
ಶೋಧಿಸಿರಿ ಶಂಭುಯೀತನು ಕೇಳಿ ಜನಾ|
ಸಾಧು ಇವನು ಸಾಕ್ಷಿರೂಪ ವೇದ ನಾಲ್ಕು ಹೊಗಳುತಿಹನು
ವಾದಿ ಮಾಡದಾಲೆ ಭಕ್ತಿಲೀ ಕೇಳಿ ಜನ ||2||
ಬೋಧ್ಯ ಬೋಧಕನು ತಾ ಆದ್ಯ ಸಾಧ್ಯ ವೇದ್ಯ ಪೂರ್ಣ
ಚೋದ್ಯವಾದ ಮಹತ್ತುಮೆ ಶಿವನೂ ಕೇಳಿ ಜನಾ|
ಶಿದ್ಧ ಶುದ್ಧ ಮಹಾಪ್ರಸಿದ್ಧ ಯಿದ್ದು ಯಿಲ್ಲದಂತಮೂರ್ತಿ
ಸಾಧ್ಯ ನೋಡಿಯಿದರು ಕಾಣ್ವದೂ ಕೇಳಿ ಜನಾ ||3||
ಮುಕುತಿಗೊಡೆಯ ಮಹಾರಾಜ ಭಕ್ತಿ ಜ್ಞಾನ ವೈರಾಗ್ಯ
ಯುಕ್ತಿಯಲ್ಲಿ ನಿಂತು ಮೆರೆವನೂ ಕೇಳಿ ಜನಾ|
ಸುಖದ ರೂಪು ಶೂನ್ಯ ಕಾಯಾ ನಿಖಿಳವೆಲ್ಲ ತನ್ನ ಬೆಳಗು
ಪ್ರಕಟವಾಗದಲೆ ಅಡಗಿಹಾ ಕೇಳಿ ಜನಾ ||4||
ತಾನೆ ತಾನೆ ನಿಂತು ನಿಜದ ಖೂನದಲಿ ಮುಳುಗುತಲಿ
ಯೇನೂ ತಿಳಿಯಗೊಡದೆ ಮೆರೆವನು ಕೇಳಿ ಜನಾ|
ಸ್ವಾನು ಭಾವ ಶ್ರೇಷ್ಠ ಈತ ಮೌನಿ ಮಹಾದಾದಿ ವಡಿಯ
ಧ್ಯಾನ ಮಾಡಿ ತ್ರಿಕಾಲದೀ ಕೇಳಿ ಜನಾ ||5||
ಆಧಾರಾದಿ ಪಶ್ಚಮಂತ್ಯ ಶೋಧ ಮಾಡಿ ತಾನು ಮಹಾ
ವಿನೋದದಲ್ಲಿ ತಿರುಗುತಿಹನೂ ಕೇಳಿ ಜನಾ|
ಪಾದ ಮರಿಯದಲೆ ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ
ಸಾಧಿಸಿರಿ ಸರ್ವಯೀತನು ಕೇಳಿ ಜನಾ| ||6||
ಕಾಲಜ್ಞಾನ ಪುರುಷನೀತ ಕಾಲ ಕಾಲದಲ್ಲಿ ಇರುವ
ಮೂಲವರಿತು ಮುಕ್ತಿ ಪಡೆಯಿರೀ ಕೇಳಿ ಜನಾ|
ಜ್ಯಾಲ ಮಾಯವಗದು ಭಕ್ತಿ ಕೀಲು ಅಡಗಿಸಿಹ್ಯಾ ಅರಿದು
ಆಲಯದಿ ಧ್ಯಾನ ಮಾಡಿ ಕೇಳಿ ಜನಾ ||7||
ಬ್ರಹ್ಮ ವಿಷ್ಣು ರುದ್ರ ಈಶ್ವರುಂ ಯೆಂಬೊ ಸದಾಶಿವನು
ಬೊಮ್ಮ ಪಂಚಾಕ್ಷರೀತನೂ ಕೇಳಿ ಜನಾ|
ನಿಮ್ಮವಳಗೆ ನಮ್ಮವಳಗೆ ನೆಮ್ಮಿಕೊಂಡು ಯಿರುವನೀತ
ಹಮ್ಮು ಬಿಟ್ಟರೊಲಿಯುತಿಹನೂ ಕೇಳಿ ಜನಾ ||8||
ಅಂಕಲಗಿ ಮಠದ ವಾಸ ಶಂಕರನು ಅಡವಿಸಿದ್ಧಾ
ಲೆಂಕರಾದವರಿಗೊಲಿವನು ಕೇಳಿ ಜನಾ|
ಮೊಂಕು ನಾನು ತೊದಲ ನುಡಿ ಸೊಂಕು ನಿರುಪಾಧಿಯಂದು
ಕಿಂಕರಾದಿ ಹಾಡಿ ಹರಿಸಿರೀ ಕೇಳಿ ಜನಾ ||9||
ಕೇಳಿ ಕಂಡು ತಿಳಿದು ನುಡಿದೆ
ಕೇಳಿ ಕಂಡು ತಿಳಿದು ನುಡಿದೆ ಹರುಷದಿಂದಲೀ
ಬಾಳ ಲೋಚನನಹುದು ನಿಶ್ಚಯವು ನಿಜವೂ ||ಪ||
ವೇದ ಆಗಮ ಪುರಾಣಗಳ ನಡೆ ನುಡಿಯಂತೆ
ಸಾಧು ಶಿವನೆಂದೆ ಸಾಕ್ಷಾತನಹುದೆಂದೆ
ವಾದಿ ಮಾಡಲಿಕಿಲ್ಲಾ ವಸ್ತು ರೂಪನು ಪೂರ್ಣ
ವಾದ ಆರೂಢ ಆರೂಕ್ಷೈಕ್ಯನೆಂದೇ ||1||
ಗುರುಲಿಂಗ ಜಂಗಮನು ಹರಹರಿ ಬ್ರಹ್ಮನು
ವುರುತರಕೆ ವುರುತರನು ವುತ್ತಮೋತ್ತಮನೆಂದೇ
ಪರಕೆ ಪರತರನೀತ ನರಕಾಯಧರನೆಂದೆ
ಶರಿರಿರುವ ಪರಿಯ ನಿನ್ನಾ ಸ್ಮರಣೆಯಿರಿಸೆಂದೇ ||2||
ಬಹಳ ಆನಂದಾಗಿ ಬಹು ನಾಮದವನೆಂದೇ
ವಿಹಿತ ಬಸವಾದಿ ಪ್ರಮಥರ ಸೂತ್ರನೆಂದೇ
ದಹಿಶಿದವ ಆರು ಗುಣ ಅಷ್ಟಮದಗಳನೆಂದೇ
ವಹಿಸಿಹುದು ಗುರು ಲೀಲಾ ಪೂರ್ಣಕಳೆಯೆಂದೇ ||3||
ಗೂಢಾರ್ಥ ಗುಪ್ತನು ಗಾಡಿಕಾರನುಯೆಂದೇ
ಕಾಡಶಿದ್ಧನೆ ಶಂಭು ಶರಣನಹುದೆಂದೂ
ನಾಡಿನೊಳಗೆ ತುಂಬಿಕೊಂಡಿಹ ಪ್ರಭುವು ನೀನೆಂದೆ
ನೀಡು ಭಕ್ತಿಯ ಕೀಲು ನಿನ್ನವನೂಯೆಂದೇ ||4||
ನಾಲಿಗೆಯು ವಂದೆ ನಗೆಯೆಷ್ಟು ಹೊಗಳಿದರು ಅಲ್ಪೇ
ಶೂಲಿಯ ಶೃತಿಯಂತೆ ಸಹಜವನು ಕಂಡೇ
ಆಲೋಚನಿಯ ಹರಿಸು ಅತಿತ ಅಡವಿ ಪಾಶ್ಚ
ಲೋಲ ವಿರಾಟೂರ್ತಿ ನೀನೆ ನಿರುಪಾಧಿ ||5||
ಕೇಳು ಯನ್ನ ಬಿನ್ನಪವನೆ
ಕೇಳು ಯನ್ನ ಬಿನ್ನಪವನೆ ಅಳಿದಾನೆ ಅಡವಿ ಪಾಶ್ಚಾ
ಬಹಳ ಬಲ್ಲವನು ಅಲ್ಲಾ ಚರಣ ಧೂಳಿಯು ||ಪ||
ನೀನೆ ಬಲ್ಲೆ ನಿನ್ನ ಶ್ಯಾಖಾ ಯೇನು ಹೇಳಲೈಯ್ಯಾ ನಾನು
ಖೂನದೊಳಗೆ ಯಿಡುವ ಭಾರ ನಿನ್ನದೆಂದೆನೊ
ಸ್ವಾನುಭಾವ ಶ್ರೇಷ್ಠ ನೀನೇ ಕಾನನದೊಳು ಮಠವ ಮಾಡಿ
ದೇನುವಾಗಿ ಭಕ್ತಭಿಷ್ಠ ನಡೆಸುವಧಿಕಾರೀ ||1||
ಕರ್ತು ನೀನೆಯಂದು ಮನದಿ ಬೃತ್ಯ ಭಾವದಿಂದ ಹಾಡೋ
ಅರ್ಥಿಯಿಡು ಎನ್ನುವಂಥ ಬಯಕೆ ಯನ್ನದೂ|
ತುರ್ತಿನಿಂದ ಕರುಣವಾಗೋ ವಾರ್ತಿ ಕೊಡು ದೇಶ ಚರಿಸಿ
ನಿರ್ತದಿಂದ ನಿನ್ನ ನಿಜದ ವಳಗೆ ಯಿರಿಸೈಯ್ಯಾ ||2||
ಎತ್ತ ಹೋದರೆಯು ನಿನ್ನ ಚಿತ್ತದೊಳಗೆ ನೆನೆವಾ ಮನವ
ಯಿತ್ತು ರಕ್ಷಿಸಯ್ಯಾ ಯಂಬೊ ಹರಕೆ ಯನ್ನದೂ|
ಸತ್ಯ ಸದಾಚಾರಿ ನೀನೂ ಅತ್ಯಧಿಕ ಮಹತ್ತು ಮೆರೆವೆ
ಉತ್ತಮರ ಸಂಗವಿರಿಸೂ ಘಟವು ಇಹಪರೀ ||3||
ನಾನು ನೀನು ಎಂಬೊ ಭಾವ ಖೂನಬಲ್ಲ ಭಕ್ತಗರಿಕೀ
ಹೀನ ನರರೇ ಬಲ್ಲರೇನು ನಿಮ್ಮ ಮಹಿಮೆಯ
ಮೌನಿ ಮಹದಾದಿ ವಡಿಯಾ ಭಾನು ಕೋಟಿ ಪ್ರಭೆಯು ನೀನೇ
ಮಾನ ಅಭಿಮಾನ ನಿನ್ನದಾಗಿ ರಕ್ಷಿಸು ||4||
ಅಡಿವಿಪಾಶ್ಚಾ ಅಂಕಲಗಿಯೊಳ್ ಸಡಗರಾನಂದಾ ನಿರುಪಾಧಿ|
ಅಡಿಯ ಬಿಡದೆ ಭಜಿಸುವಂಥಾ ಮನವಯಿರಿಸೈಯ್ಯಾ|
ದೃಢದಿ ಕಾಲ ಕಾಲದಲ್ಲಿ ವಡಿಯನೆಂದು ಸ್ತುತಿಪ ಹಾಗೆ
ಕೊಡು ನಿರೂಪ ಸಕಲ ಭಾರ ನಿನ್ನದೆಂದೆನೋ ||5||
ಕೊಹಿ ನಹಿ
ಕೊಹಿ ನಹಿ ತುಮೆ ಏಕ ಮಹಸಿದ್ಧ ರಾಜ್ಯ ಜೀ
ಕಾಹ ದೇಖೇತೊಜಾಹೈ ಪರಬೂಜಿ
ಸೋಹಂ ಸೋಹಂ ನಾದ ಬ್ರಹ್ಮ ತೂಹೀ
ಅಡವಿ ಪಾಶ್ವಪೀರಾ ಸಿದ್ಧರಾಜಾಜಿ ||1||
ಜಂಗ್ಮ ಧೆಡಮೊ ಸಂಗ ತುಮಾರಾ
ಸಂಗರಾಗ ನಹಿ ಪೂರ್ಣಾ
ಸಂಗ ಅಡವಿ ಪಾಶ್ವಪೀರಾ ಸಿದ್ಧರಾಜಾ ಜೀ ||2||
ನಿರೂಪಾಧಿಕಾ ಗುರು ಮಝರಿಕೊ
ಕರಾರು ಹುಯೆ ಬಾದತುಮೆ
ಪರ ಅಡವಿ ಪಾಶ್ವಪೀರಾ ಸಿದ್ಧರಾಜಾಜಿ ||3||
ಕೋಲು ಕೋಲಿನ ಕೋಲು
ಕೋಲು ಕೋಲಿನ ಕೋಲು| ಕೋಲು ಕೋಲಿನ ಕೋಲು
ಶಿದ್ಧೇಶನ ಬಲಗೊಂಬೆ ಕೋಲು ||ಪ||
ಮಹದಾದಿ ವಡಿಯನು ಸಹಜಾನಂದದಿಂದಾ
ಮಹಿಯೊಳು ಬಂದ ಲೀಲವ ಕೇಳಿ || ಕೋಲು||
ದಹಿಸುವ ಸಕಲ ದೋಷ ಭಕ್ತ ಜನಂಗಳ
ವಹಿಸಿ ಸಂತೋಷವ ಕೊಡವನು ಕೋಲು ||1||
ಮುಕ್ತನಾಗುವೆನೆಂದು ಭಕ್ತಿಯಿಂದಲಿ ಬಂದು ತಾ
ಮುಕ್ತನಾದರೆ ಕೊಡುವಾತ ಕೋಲು
ಶಕ್ತನಾದರೆ ತನ್ನ ತಕ್ತನೇರುವಂಥಾ
ಫೊಕ್ತ ಮಾರ್ಗವ ತೋರಿಸುವನೀತಾ ||ಕೋಲು|| ||2||
ಕಂದ ಬಾರೆಂದು ಆನಂದದಿಂದಲಿ ತನ್ನ
ಮುಂದೆ ಕರೆದು ಸ್ಥಲವ ತೋರುವಾ ||ಕೋಲು||
ಸಂದೇಹ ಬ್ಯಾಡನೀ ಸಾಕ್ಷಿ ಬ್ರಂಹ್ಮನೆಂಬ
ಹೊಂದಿಕೆಯ ತಿಳಿಸುವ ಗುರು ||ಕೋಲು|| ||3||
ಆಧಾರದೊಳಗೀಹಾ ಭೇದ ನಾಲ್ಕಕ್ಷರ
ಶೋಧಿಸಿ ತಿಳಿಸುವ ಗುರುರಾಯ ||ಕೋಲು||
ಸ್ವಾಧಿಷ್ಠನೊಳು ಇರುವ ಭೇದಕ್ಷರ
ವಿನೋದದಿಂದಲಿ ತೋರ್ವ ಗುರುರಾಯಾ ||ಕೋಲು|| ||4||
ಪಣಿಪೂರಕದೊಳಿಹ ಅನುವು ಹತ್ತಕ್ಷರಾ
ವಿನಯಾದಿಂದಲಿ ತೋರ್ವ ಗುರುರಾಯಾ ||ಕೋಲು||
ಅನಹತದಲ್ಲಿ ಹನ್ನೆರಡು ಅಕ್ಷರಾ
ಸಂತೋಷದಿದೋರಿದ ಗುರುರಾಯಾ ||ಕೋಲು|| ||5||
ವಿಶುದ್ಧಿ ಸ್ಥಲದಲ್ಲಿ ಹದಿನಾರು ಅಕ್ಷರಾ
ಸೋಸಿ ತೋರಿದಾ ತಾನು ಗುರುರಾಯಾ ||ಕೋಲು||
ಈಶ ಇರು ಆಗ್ನೇಯ ಎರಡಾಕ್ಷರದ ನೆಲೆ
ಬ್ಯಾಸರಿಲ್ಲದೆ ತೋರ್ವ ಗುರುರಾಯಾ ||ಕೋಲು|| ||6||
ಸಾಸಿರದಳ ಪೀಠ ಬ್ರಹ್ಮ ಸ್ಥಾನವು ಯಂದು
ಆಶರಹಿತನಾದ ಗುರುರಾಯಾ ||ಕೋಲು||
ಕೂಶೆ ನೀನರಿ ಶಿಖಾದಲಿ ಮೂರಕ್ಷರಾ
ಪಾಶ ರಹಿತನೆಂದು ಗುರುರಾಯಾ ||ಕೋಲು|| ||7||
ಪಶ್ಚಿಮದೊಳು ಒಂದೇ ಅಕ್ಷರ ಇರುವಂತಾ
ಸ್ವಚ್ಛವ ತಿಳಿಸಿದ ಗುರುರಾಯಾ ||ಕೋಲು||
ಮುಚ್ಚು ಮರೆಯೊಳು ತನ್ನಂಗದಿ ಒಂಬತ್ತು
ನಿಚ್ಚಳ ಸ್ಥಳ ತೋರ್ವ ಗುರುರಾಯಾ ||ಕೋಲು|| ||8||
ನವ ಚಕ್ರದೊಳು ನವಲಿಂಗವ ಹೇಳಿದಾ
ಮೂರುತಿ ಗುರುರಾಯಾ ||ಕೋಲು||
ವಿವರಿಸಿ ತನ್ನ ಶರೀರದೊಳಿಹವೆಂದು
ಸುವಿವೇಕ ತೋರ್ವಂತ ಗುರುರಾಯಾ ||ಕೋಲು|| ||9||
ಪಂಚ ತತ್ವದ ಮಿಶ್ರ ಹಂಚಿಗಿಯಿದುಯಂದು
ಸಂಚೀತ ಕಳಿದಾತ ಗುರುರಾಯಾ ||ಕೋಲು||
ಗೊಂಚಲನೇಕ ಒಂದೆ ವೃಕ್ಷದೊಳಗೆಂದು
ಮಿಂಚಿನ ಪ್ರಭೆ ತೋರ್ವ ಗುರುರಾಯಾ ||ಕೋಲು|| ||10||
ಸುಖದ ಯಿಚ್ಛೆಯೊಳಿರೆ ಸುಖರೂಪದ ದೊರಕುವಾ
ನಿಖಳ ಎಲ್ಲವು ಆದ ಗುರುರಾಯಾ ||ಕೋಲು||
ಆಕಳಂಕ ಆತ್ಮ ವಿಚಾರದಿ ನಡೆದರೆ
ರಕಮು ತೀರಿಸುವಂಥಾ ಗುರುರಾಯಾ ||ಕೋಲು|| ||11||
ನಿಸ್ಸಂಗದೊಳಗಾಡಿ ನೀತಿದೋರುವದೆಂದು
ಪುಸಿ ಪ್ರಪಂಚೆಂದನು ಗುರುರಾಯಾ ||ಕೋಲು||
ದುಸ್ಸಂಗ ಹರಿವಾ ವಾಸನಗಳು ಕ್ಷಯವಾಗೆ
ಸುಸೀಲನಾದಂಥ ಗುರುರಾಯಾ ||ಕೋಲು|| ||12||
ಸ್ವಾನುಭಾವದಿಂದ ಆನಂದವಾಗಲು
ಮೌನೀತನೆನಿಸುವಾ ಗುರುರಾಯಾ ||ಕೋಲು||
ಏನು ಹೇಳಲಿ ತೂರ್ಯದೊಳಗೆ ನಿರ್ಭಯವೆಂದಾ
ಮೌನ ಮೂರುತಿಯಾದ ಗುರುರಾಯಾ ||ಕೋಲು|| ||13||
ತೂರ್ಯಾತೀತದಲ್ಲಿ ಸುಷುಪ್ತಿ ಸುಖಪರಿ
ಕಾರ್ಯಕಾರಣ ಮೀರ್ದ ಗುರುರಾಯಾ ||ಕೋಲು||
ಪ್ರೇರ್ಯ್ಯ ಪ್ರೇರಕತ್ವ
ಎರಡಕ್ಕೆ ನಿಲ್ಕದಾ ಗುರುರಾಯಾ ||ಕೋಲು|| ||14||
ಈ ಪರಿ ಸಪ್ತ ಭೂಮಿಕೆಗಳ ತೋರುವಾ
ಭೂಪ ಅಡವೀಶನೇ ಗುರುರಾಯಾ ||ಕೋಲು||
ಕಾಪಟ್ಯ ಕಳದು ನಿರುಪಾಧಿಯೆನಿಸುವಾ
ಇಹ ಪರದೊಳು ಬ್ರಹ್ಮನಾಗುವ ಗುರುರಾಯಾ ||ಕೋಲು|| ||15||
ಕೋಪ ಸಲ್ಲದು ಸಾಧು ಸಂಗದೊಳು
ಕೋಪ ಮಾಡಿದರೆ ನಾನೇನಂಬೆ| ನಿನ್ನೊಳು ತಿಳಿಯಂಬೆ||
ಕೋಪ ಸಲ್ಲದು ಸಾಧು ಸಂಗದೊಳು|
ಅಪರ ಮೋಕ್ಷವ ಕೂಡಿದ ಪುರಷಗೆ ||ಪ||
ತಾನೇ ತನ್ನೊಳು ತನ್ನನು ತಿಳಿದು|
ಹಂಕಾರ ಅಳಿದು ಹೀನ ದುರ್ಗುಣವೆಲ್ಲ ಬಳಿದೂ|
ಮಾನ ನಿಧಿಯೆ ನಿಜ ಧ್ಯಾನದೊಳಿರುತಿಯ|
ಸ್ವಾನುಭವಿಯ ಖೂನಕೆ ತರದಲೆ ||1||
ತನುವಿನ ಗುಣಗಳೆಲ್ಲಾ ನೀಗಿ|
ಆನಂದದಲ್ಲಿ ತೂಗಿ ಘನ ಪರಬ್ರಹ್ಮದಲ್ಲಿ ಭೋಗಿ|
ನಿನಗೆ ನನಗೆ ಎಂಬೊ ಭೇದ ವಿಲ್ಲದ|
ಚಿನುಮಯ ಮೂರುತಿ ಅನುವಿನೊಳಾಡ್ವಗೇ ||2||
ನಿರುಪಾಧಿ ಎಂದು ಗುರುವಿನ ತಿಳಿದು| ಸಂಶಯವನು ಅಳಿದು
ಹರುಷದಿ ಪುಣ್ಯ ಪಾಪವ ಕಳಿದು
ಅರವು ಮರವು ವುಭಯದ ಸಂಕಟಗಳ
ಹರಿದು ತೂರ್ಯಾತೀತದ ಸುಖಯಿರುವಗೆ ||3||
ಗುರು ಶಿದ್ಧಲಿಂಗಾ
ಗುರು ಶಿದ್ಧಲಿಂಗಾ| ನಿಂದೇ| ಪ್ರಾಣಿಗಳರಿಯರೈಯ್ಯ
ಮಹಾ ಪುರುಷರ ನಡೆ ನುಡಿ ನಿಂದೇ ಪ್ರಾಣಿಗಳರಿಯರೈಯ್ಯ
ನಿಂದೆ ಪ್ರಾಣಿಗಳು ಬಲ್ಲರೆಯಾಗಿಯಾ
ಕಂದುಗೊರಳ ಶಿವ ಅಡವೀಶನ ನಿಜಾ ||ಪ||
ನಾಯಿ ಬಲ್ಲದೇ ನಾನಾ ರುಚಿಯಾ
ಅದರಂತೇ ಮೂರ್ಖಗೆ ನ್ಯಾಯವೆ
ನರ ಹಿರಿ ಕಿರಿದೆಂಬೋ ಸೋವೆ ಅರಿಯದೆ ಬೊಗಳುವ
ಮಾಯಾ ಪಾಶದೊಳಗೆ ಬಿದ್ದುರುಳಿ ಮುಳಿಗ್ಯಾಡುವಾ ||1|
ಗುರುಲಿಂಗ ಜಂಗಮವೇನು ಭಲ್ಲಾ ತಿಳಿಯದ
ಗುಣ ಹೀನರಿಗೇನು ನರಕ ಸ್ವರ್ಗದ ಹಾದಿ
ಪರ ತರದೊಲು ಮನ ಯರಕವಾಗದೆ
ಗರಿವಿನಿಂದ ಶರಣರ ಜರಿವಂತಾ ||2||
ನಿರುಪಾಧಿ ಅಡವಿಸಿದ್ಧನ ಗುರುತೂ| ಮೈ ಮರತು
ಭವ ಭವ ತಿರುಗುವ ಜನ್ಮ ಅನಂತಗಳ
ಗುರು ಕರುಣದಿ ತಾ ತಿರುಗಿ ಭಾರದಾ
ಅರವು ತಿಳಿದು ಆನಂದವಾಗದಾ ||3||
ಗುರು ನಾಮ
ಗುರು ನಾಮ ಏಕ ಮೂಲ ಸಂತಕೊ
ಸಬ್ ತಾಡೇಕಾ ಬಾಲಾ ||ಪ||
ನಿತ್ಯ ನಿರಂಜಾನಂದ ತಃಕ್ತಮೊಬೈಟಿ
ಸತ್ಯ ಚಿತ್ತಾನಂದ ಭರಗೌಯೆಬಾದ ||1||
ಗಗನ ಮಹಲಮೋ ಜೋತಿಲಗಾಕರ
ಜಗ ಸರ್ವಮೋ ಆಪು ಹೆ ಬಾದ ||2||
ಅಡವಿ ಸಿದ್ದಜೀ ಚರಣ ಮಿಮತ್ಯಾ
ಖಡೆಗುರು ನಿರುಪಾದಿ ಬ್ರಹ್ಮ ||3||
ಗುರುವಿನ ವಚನವ
ಗುರುವಿನ ವಚನವ ಸರಿ ನೋಡು ಮಗುವೇ ||ಪ||
ಭವಗೆಡಿಸುವ ಸುವಿವೇಕ ಕಲಿಸುವಾ
ವಿವರಿಸಿದರೆ ನಿಜ ಮುಕ್ತಿ ತೋರಿಸುವಾ ||1||
ದುರ್ಗುಣ ಕಳಿವನ ನಿರ್ಗುಣತಿಳುಹಿ
ಭಾರ್ಗೋ ದೇವ ವೈರ ವರ್ಗವ ಕಳೆವಾ ||2||
ನಿರುಪಾಧಿಯೊಳು ಮನ ಯರಕವಾಗುತಲಿ
ತಿರುಗಿಬಾರದ ಗುರು ರೂಪಾ ಅಡವೀಶ್ಯಾ ||3||
ಚಿತ್ತ ಸ್ವರೂಪನೆ
ಚಿತ್ತ ನಿಲುಕಡಿ ಮಾಡೊ ಚಿತ್ತ ಸ್ವರೂಪನೆ
ಹೆತ್ತ ತಾಯಿ ತಂದೆ ಬಂಧು ಬಳಗ ನೀನೇ|| ||ಪ||
ವಳಗದೋ ಹೊರಗದೋ ಹಿಂದು ಮುಂದೆಡಬಲವೋ
ತಿಳಿಯದೈ ನಿನ್ನಾಟ ತಿರುಗುತಿಹುದೋ
ಕಳವಳಿಸುವದು ಮತ್ತೆ ಮರಳಿ ಧೈರ್ಯವ ಮಾಡಿ
ಸುಳಿ ನೀರಿನಂತೆ ಮರಳಿ ಜಾಗ್ರದಿ ಹೊರಳುತಿಹುದೊ|| ||1||
ನೀನಾರೋ ಅದು ನೀನೋ ಯರಡು ತಿಳಿಯದು ಯನಗೇ|
ಮಾನಿತರ ವಾಕ್ಯ ಮಹದಾದಿ ಮನವೆಂದೂ
ಕೂನ ವರಿತರೆ ಸರ್ವ ನಿನ್ನ ಚೇತನವಂತೆ
ಯೇನು ಹೇಳಲಿ ಅಹುದೊ ಅಲ್ಲವೆಂಬಂತಾ|| ||2||
ನಿರುಪಾಧಿ ನೀನಂತೆ ಸಕಲ ಜಾಗ್ರದಿ ಚರಿಪಾ
ಗುರುತು ತಿಳಿದರೆ ಅಡವಿಸಿದ್ಧ ನಿಜವಂತೇ
ವರಲಿ ಓಡಾಡುವದು ಅರಿದು ಸುದ್ದಾಗುವದು
ಗುರುಲಿಂಗ ಜಂಗಮಾ ತಾನೆಯಾದಂತಾ|| ||3||
ಚಿನ್ಮಯ ಮೂರುತಿ
ಚಿಂತಿಸಲೇತಕೆ ಚಿನ್ಮಯ ಮೂರುತಿ
ಹಂತೆಲಿ ಇರುತಿರೆ ಕಲ್ಪನೆ ಮಾಡುವ
ಭ್ರಾಂತಿಯ ಕಳದನು ಅಡವೀಶನೀ ನಿಶ್ಚಿಂತ ಪದವ ನೋಡಿ ||ಪ||
ಬೇಡಿದ ಪದವಿಯ ನಡೆಸುವನಿರುತಿರೆ
ಆಡಲಿಯೇಂ ಯಾತಕೆ ಹಾಗ್ಹೀಗೆನ್ನತಾ
ನೋಡಿದೆ ಮುಕ್ತಿಯ ಕೂಡಿದೆ ವಸ್ತುವ ಕಾಡಶಿದ್ಧನಲ್ಲೀ ||1||
ದೇಶದ ಜನಗಳ ಆಸೆಯ ಸಲಿಸುವ
ಈಶನ ಇದಿರಲಿ ಕಾಣಿತ ಸಂಶಯ
ಪಾಶವು ಹರಿದವು ದೋಷವು ಹುರಿದಾವು
ಸೋಸಿ ನೋಡಿದೆ ನನ್ನೊಳಗೆ ||2||
ಸೇವಕನಾಗುತಾ ಕಾವವ ನೀನಿಹೆ
ನಾವರಲಿದರೇನಹುದು ಶಂಕರಾ
ಕೇವಲ ಕತ್ರ್ರುವು ಕಲ್ಪವೃಕ್ಷವಿರೆ
ನೋವು ಸಂಕಟಳಿದೇ ||3||
ಹಿಡಿದೆನು ಸ್ತುತಿಯನು ಬಿಡೆ ಘಟವಿಹರಪರಿ
ಇಡು ಕರುಣವು ನಿನ್ನಂಶದ ಅಣುಗಾ
ಸಡಗರರ್ಥಿಯು ಗುಡಿಗಟ್ಟಿತು
ನಿನ್ನಡಿಯ ಸ್ಮರಣೆಯೊಳಗೆ ||4||
ನಿರುಪಾಧಿಯು ನಿಜ ಗುರುತಿನ ಬೈಲೊಳು
ಪರ ಬ್ರಹ್ಮಾನಂದದಿ ಹೊಯಿದಾಡುತಾ
ವುರುತರ ಸಿದ್ಧನ ಮರೆ ಹೊಕ್ಕೆನು ನಾ
ಬಿರದು ನಿನ್ನದೆಂದೂ ||5||
ಜಾತ್ರಿ ನೋಡುವನು ಬನ್ನಿ
ಜಾತ್ರಿ ನೋಡುವನು ಬನ್ನಿ ನಿತ್ಯ ನಿತ್ಯ ಜಾತ್ರಿ ನೋಡುವನು ಬನ್ನಿ|
ಜಾತ್ರಿ ನೋಡುವನು ಬನ್ನಿ ಧಾತ್ರಿಯೊಳಧಿಕಾದ ಕರ್ತೃ ಅಂಕಲಗಿಯಾ
ಅಡವಿ ಪಾಶ್ಚಾಯೋಗಿ ||ಪ||
ದಿಕ್ಕು ಎಂಟರಿಂದ ಹೊರಟು ಬರುವ ಜನಾ|
ಲೆಖ್ಖ ಮಾಡುವರಿಗೆ ತೀರದು ಶಿದ್ಧಾಟ|
ಅಕ್ಕರದಿಂದಲಿ ಮೇಣೆ ಪಾಲಕಿ ಬಂಡಿಯೂ|
ಚಕ್ಕಡಿ ಕುದುರೆ ಎತ್ತು ಕತ್ತೆ ಕೋಣಗಳು|
ಕುಕ್ಕ ಕುರಿಕೋಳಿ ಗಿಳಿ ಜಕ್ಕವಕ್ಕಿ ಕೌಜುಗಾ|
ಅಕ್ಕರತಿಯಿಂದ ಸಕಿ ಹಿಡಿದು ಬರುವಂತ|
ಮೂಕರಾಪಾಟ ಜಂಗಮ ಜೋಗಿ ಭೈರಾಗಿ|
ಲಕ್ಕಿನಲಿ ಸಾಧು ಫಕೀರ ಹುಚ್ಚಾ ಶಾಣ್ಯಾ|
ಮಕ್ಕಳಾ ಫಲ ಮೊದಲು ಸರ್ವ ಭೋಗವ ಬೇಡ್ವ|
ಅಕ್ಕವ್ವಗಳು ಬಂದು ಬಯಕೆ ತೀರಿಸುವಂತಾ|
ಮುಕ್ಕಂಣ ಹರಸಿದ್ದ ಮಹಾತ್ಮಕ್ಕೆ ವಡಿಯನೂ|
ಅಕ್ಕಿ ಗೋಧಿಯು ಬೇಳೆ ಅಲ್ಲ ಜೀರಿಗೆ ಮೆಂತೆ|
ಮೆಕ್ಕೆ ಜೋಳವು ರಾಗಿ ನವಣಿ ಶ್ಯಾವಿಯು ಚಣಗಿ|
ಚೊಕ್ಕಟಾ ತೊಗರಿ ಕಡಲಿ ವುದ್ದು ಅಲಸಂದಿ|
ಸಕ್ಕರೆ ಬೆಲ್ಲ ಹೆಸರೂ ಸಜ್ಜಿ ಮಡಿಕೆಯೂ
ರೊಕ್ಕ ಮೊದಲು ಹುರುಳಿ ರೂಪಾಯಾವರ ಹೊನ್ನು|
ಇಕ್ಕಬೇಕು ಮುಂದೆ ಬಾಳೆ ತೆಂಗು ಹಲಸೂ|
ಮುಕ್ಕರಿಸುವಾ ಅಷ್ಠಗಂಧ ಊದಿನ ಕಡ್ಡಿ|
ಯಿಕ್ಕಿ ಕಾರಿಯ ಕಾಯಲಿ ಅಡಕಿ ನಸಿಪುಡಿ ಸಹಾ|
ಚೋಕ್ಕ ಸಿದ್ದೇಶನಮ್ಹರಕಿ ನಡೆಸೆನುತಲಿ|
ಚಿಕ್ಕವರು ಮುದಕರು ನಡು ಜನವೂ ಎಲ್ಲಾ ||1||
ಯಂಟು ದಿನಕೊಮ್ಮೆ ಸೋಮವಾರ ಪಾಲಕಿ ಸೇವೆ|
ಕಂಟಣಿ ಗೋಣಿ ಹಸಬಿ ಕಂಬಳಿ ಕಲೂತಿ|
ಸೊಂಟ ಹೆಗಲ ಮೇಲೆ ಹೊತ್ತು ಬರುವಾ ಜನಾ|
ಕುಂಟೆತ್ತು ಕುರುಡೆತ್ತು ಚಿಂಚ ಹಂಡಾ ಗುದಗ|
ಒಂಟೆತ್ತು ಮಾಸ ಬೂದ ಚಿಲ್ಲಗಿವಿಯತ್ತು|
ಸೊಂಟ ಎಳೆವಾಯತ್ತು ಮಲಗಿ ಏಳುವ ಎತ್ತು|
ಸೊಂಟ ಕೋಡು ಮುರಕ ಕಿವಿ ಹರಕ ಮೊಂಡ ಬಾಲ|
ಸುಂಟರಗಾಳಿಯಂತೆ ಓಡಿಯಾಡುವ ಎತ್ತು|
ವುಂಟು ಆಕಳ ಕರಾ ಕೋಣ ಎಮ್ಮಿ ಹೆಳಗಾ|
ಕಂಟಕಾಕಳಿ ಅಡವಿ ಪಾಶ್ಚಾ ಸಿದ್ದೇಶ್ಯಾ|
ವುಂಟು ಮಾಡಯ್ಯ ಫಾಲಾಕ್ಷ ಪರಮ ಶಿವಯೆಂದ್ಹೊಂಟಿತು ಪರುಷಿ|
ಕಾಳಿಕೊಂಬೂ ಕರಡಿಯಾ ಟೆಂಟೆಣೌ ಹೊಡೆವುತಾಡೊಳು|
ಸಮಾಳ ತಪ್ಪಡಿಗುಂಟ ಕುರುಡಾ ಹೇಳುವಾ ರೋಗಿ ಸ್ವಶ್ಚಾಕಿಲ್ಲ|
ಗಂಟೆ ಜಂಗೂ ಧೂಳ್ತ ವಿಭೂತಿ ಕೊಡಗಡಿಗಿ|
ಟೆಂಕಲು ಬಡಗಲು ಪಡುವಲು ಮೂಡಲು|
ಹೊಂಟು ಸೊಪ್ಪೆ ಬಿದರು ತೊಲಿ ಕಲ್ಲು ಮೊದಲಾಗಿ|
ನೆಲ್ಲವರಳಿಯರು ಮಾವ ಅತ್ತೆ ಮಕ್ಕಳು ನಾರಿ|
ವುಂಟ ವರವಿಲ್ಲಿ ಹರಹರಾ ಹರನು ನಿಜ ನಿಜವೂ|
ಮಂಟಪದ ಶೃಂಗಾರ ಮಹಾದಾದಿ ಕೈವಲ್ಯ|
ತೊಂಟರು ಪ್ರಾಜ್ಞರು ನಡುತರದ ಪ್ರಾಜ್ಞರೂ ||2||
ಬಂದ ತಡಾಕಿಲೆ ಕಜ್ಜ ಅಂಬಲಿ ಖಾರಾ|
ಆನಂದದಿಂದಲೇ ಸಲಿಸು ವಿಸ್ತಾರ ಬಲ್ಲೋಹುಜು|
ದುಂದು ಕೊಡಗಡಿಗಿ ಬಿಂದಿಗಿ ಸ್ವಾರಿ ಮಗಿ|
ಮನಿಯಿಂದ ತಂಬಿಕೆ ದೊನ್ನೆ ಹಂದು ಹರಿವಾಣದಲೀ|
ಚಂದ ಕಡಿಯುವರು ಋಪ್ತಿ ಕೈಯ ನೆಲದಾ ಮ್ಯಾಲೆ|
ಮಂದಿ ಕುಲ ನೂರೊಂದು ಎಲ್ಲ ಜಿನಸಿನ ದೈವ|
ತಂದೆ ಅಡವೀಸಿದ್ಧ ಅನ್ನದಾನಿಯು ಎಂದು|
ಸಂದೇಹ ಅಡಗುವದು ಪಾದ ಕಂಡಾಕ್ಷಣಕೆ|
ಒಂದೆರಡು ಮೂರು ಲಕ್ಷ ದಿನವೇಕೆ|
ಯೆಂದು ತಮ್ಮೊಳು ತಾವು ಯಳದಂಥ ಸ್ಥಳದಲ್ಲಿ|
ಕುಂದು ಕೊರತೆಯ ಕಳೆವಾ ಸಾಕ್ಷತ್ ಪರದೇವಾ|
ಬಂದ ಅವತಾರ ತಾಳೀ ಜನವ ರಕ್ಷಿಸಲಿ|
ಹಿಂದು ಮುಂದಿನ ಕರ್ಮಾ ಹರಿವಾ ಶ್ರೀ ಗುರುಸಿದ್ಧಾ|
ಬಂದು ತೋರಿಸು ಪಾದಾ ಪಾತಕರು ನಾವೆನುತ|
ನಿಂದು ಕುಂತು ಮಲಗಿ ತಿಗಾಡಿ ಧ್ಯಾನಿಸುತ|
ಬಂದ ಜಂಗಮ ಜೋಗಿ ಹಕೀರ್ರು ಪಕೀರ್ರು|
ನಿಂದು ಸಕ್ಷಾತ್ ದರುಶನ ರುದ್ರ ಹರಿ ಬ್ರಹ್ಮ|
ವೆಂದು ಕೈ ಜೋಡಿಸಿ ಬರುವ ದಾರಿ ನೋಡ್ವು|
ಅಂದವೇನೆಂಬೆ ಮಾರು ಹಾದಿ ಪರುಷಿಬಾಹ|
ಛಂಡ ಕಲ್ಯಾಣವು ಯಿದೇಯಿದೇ ನಿಶ್ಚವೂ|
ಹೊಂದುವಾ ಮುಕ್ತಿಯ ವಡಿಯ ಸದ್ಗುರುವೂ ||3||
ದೂರಲ ದೇಶದ ಪರುಷಿಯ ಬರುವಂತಾ|
ತಾರಿಪ ಕಂಚಿ ಕಾಳಾಶ್ರೀ ವಾಲೋಜಿ ಕಪ್ಪಲಿ|
ಶಹರ ಕಾಶಿ ವುಜ್ಜನಿಯೂ ಬಳಿಹಳ್ಳಿ ಗಡಾ|
ತೇರ್ದಾಳು ಕೊಪ್ಪ ಬಾರದ ಬಂಡಿ ಗದ್ವಾಲಿ|
ತಾರೀಪ ಸುರುಪುರ ಗಟ್ಟು ಗುಣ (ರ) ಮಟಕಲ್ಲು|
ನಾರಾಯಣ ಪೇಟೆ ಕೋಶ್ಗಿ ಕೋಡಂಗಲ್ಲು|
ಧೀರ ಹುಬ್ಬಳ್ಳಿ ಧಾರ್ವಾಡ ಮೈಸೂರ ಮಿರ್ಜಿ|
ಪುರಾಣಾ (ಪುಣಾ) ವುಳವಿ ಗೋಕರ್ಣ ಪುಣ ಪುನೇ ಸಾತಾರಿ|
ದ್ವಾರಕ ಮಥುರ ರಾಮೇಶ್ವರಾ ನಗರ ಹಂಪಿ|
ಧೀರ ಮೊಂಮಾಯಿ (ಬೊಂಬಾಯಿ) ಚನ್ನಪಟ್ಟಣ ಗುತ್ತಿಯೂ|
ಧಾರವಾಢವು ಕದಡಿ ಮಸಗಿ ಬಳಗಾನೂರ|
ಸೂರೆ ಜಮಖಂಡಿ ನರಗುಂದ ಆನೆಗುಂದಿ|
ಪುರಾಣ ಕಲ್ಯಾಣ ಕಲಬುರಗಿ ಬಿದ್ರಕೋಟೆ|
ಮಾರಹರಿನಾನಾ ನಾಮಪೇಟೆ ಶ್ಯಾಪೂರ ಸಗರ|
ಪೂರ ಬಿಜಾಪುರ ಸವನೂರ ಬಂಕಾಪೂರ|
ಕಾರಿಗನೂರು ಸೊಲ್ಲಾಪೂರ ಸುಲೆಗಾಂವಿ|
ಭಾರಿವುಕ್ಕೇರಿ ನಿಡಗುಂದ ಸಾಲಗುಂದ ಹರತಿ|
ತೀರದೈ ಶಿವನಾಟ| ಐವತ್ತಾರು ದೇಶ ಸಾರಿ
ಬರುವದುವೂರ ಹೇಳಲಿಕೆ ಅರಿದರಿದೂ|
ಮಾರಹರಬಲ್ಲ ಸುತ್ತಲಿರುವ ಗ್ರಾಮಗಳು|
ತೋರಿ ಹೇಳುವ ತೊತ್ತು ತಾಕಂಡು ಕೇಳ್ದಷು|
ಭೋರನೊದಗುವದು ಹೋಗುವದುಯಿರುವದಷ್ಟೆ ||4||
ಅರಿದೆನೆಂದರೆ ಮಹಿಮೆ ಗುರುಲಿಂಗ ಮನೆರಹದಿಹದು|
ಪಂಚ ಸಮಯವು ಏಕ ರೂಪದಲೀ|
ನರಗುರಿಗಳರಿಯರಿದು ವರಸಾಧು ಸಾಕ್ಷಾತ್|
ಪರಮ ಪಾವನನೀತಾ ಪಾಪಕ್ಷಯ ಮಾಡ್ವ ತಾಧರೆಗೆ ನರರೂಪ|
ತಾಳಿದ ಕುರುಹು ಕಾಣಿಸನು ಹರಶಬ್ದ ಜ್ಞಾನವೆಲ್ಲಾ ಕೂಗುವದು ಸರ್ವಮನೇ|
ಇರುವರು ಅಲ್ಲಲ್ಲೆ ಲಿಂಗಾರ್ಚನೆಯ ಮಾಡಿ|
ಇರುಳು ಹಗಲೆನ್ನಲೆ ವೂಟ ಅರವತ್ತುಗಳಿಗೆ|
ಚರಣ ತೋರಿಸುವ ನಾಲ್ಕೈದು ತಾಸಿನ ಒಳಗೆ|
ಪರಮ ಆನಂದ ಕಾಣ್ವದು ಮಠದ ಶೃಂಗಾರ|
ಗುರುಲಿಂಗ ಜಂಗಮಾ ಭಕ್ತ ಸರ್ವರೂ ಕೂಡಿ|
ಹರಹರ ಶಂಭೂ ಮಹಾದೇವಾ ಶಿವಶಿವೆನುತಾ|
ಬಿರದಿನಾ ಭಜನೆ ಸರ್ವ ಮಾರ್ತಿವಳ ಮಾಡಿ|
ತಿರಿಗ್ಯಾಗಾಡಿಯೇ ಕಾಂತವನದಲ್ಲಿ ವಾಸಾಗೀ|
ಭರದಿಂದ ಜನಕ್ಕೆಲ್ಲಾ ಸಾಹಗಿತ್ಯವನೂ|
ಹೊರಿಸಿ ಸಿದ್ದೇಶಾ ಬಲಭಾಗ ಚಿನ್ಮಯ ಮೂರ್ತಿ|
ಬರಲಿಕ್ಕೆ ಸಕಲಜನ ಸಾಷ್ಟಾಂಗದಿಂ ನಮಿಸಿ|
ಹರಣದು ಶುಭವನು ಕೇಳುವರು|
ಮನಬಿಷ್ಟ ಹರುಷ ಮಾಡುವದೇ ಜಂಗಮಕೆ ಅತೀಪ್ರೇಮಾ|
ಬರುವನು ತಾ ಶಿರಲಿ ಹೊರಹೊಂಟು ಗವಿ ಹೋಗುವಾ|
ಬರುವದೈ ಸಕಲ ಸಾಹಿತ್ಯ ಪಾರಾಳ ಜಿನಸು|
ನೆರಸಿ ಮಂದಿಯನೆಲ್ಲಾ ಪಂಗ್ತಿ ಲಿಂಗಾರ್ಚನೆಯಾ|
ಹರಿಹರಾಯೆಂದು ಮೃಷ್ಟಾನ್ನ ಭೋಜನ ಬಡಿಸಿ|
ಹೊರವಳಗೆ ಎಲ್ಲಾ ಉಂಡು ತೇಗಿ ತೃಪ್ತ್ಯಾಗಿ|
ನೆರೆಹಳ್ಳಿಯವರು ವಳಗಿರುವರೂ ಬೀಸುವರೂ|
ವುರುವೈ ಜ್ಯೋತಿ ಹಗಲಿರುಳು ಎನ್ನದಂತೆ ನಿಂತು|
ಗುರು ಅಂಕಲಗಿ ಅಡವಿಪಾಶ್ಚಾ ನಿರುಪಾಧಿ ||5||
ಜೋಯಂದು ಹಾಡಿರೆ
ಜೋ ಜೋ ಯನ್ನಿ ಅಡವಿಸಿದ್ದನಿಗೇ
ಜೋ ಜೋ ಯನ್ನಿ ಕಾಲಕಾಲನಿಗೇ
ಜೋ ಜೋ ಯನ್ನಿ ಕರುಣಾ ಸಾಗರಗೇ| ನಿತ್ಯ|
ಜೋಯಂದು ಹಾಡಿರೆ ಸಾಕ್ಷಾತ್ ಶಿವನಿಗೇ ||ಜೋ|| ||1||
ಗುರುಲಿಂಗ ಜಂಗಮ ರೂಪ ಧರಿಸಿದಗೆ
ಪರಕೆ ಪರತರವಾದ ಲೀಲಾ ಹಾಡುವಗೆ
ಇರುವೆ ಮೊದಲಾನೆ ಕಡೆ ಸರ್ವ ಆದವಗೆ| ನಿತ್ಯ|
ಹರುಷ ಆನಂದದಿ ನಲಿನಲಿದಿಹಗೆ ||ಜೋ|| ||2||
ನಿತ್ಯ ನಿರ್ಗುಣ ಮೂರ್ತಿ ನಿಜರೂಪ ಧರಗೆ
ಕರ್ತು ಆಗಿಯೆ ಭಕ್ತಿ ಕಾರ್ಯ ಮೆರೆವನಿಗೆ
ಸತ್ತು ಚಿತ್ತಾನಂದ ಸಕಲ ಸಕಲ ಸೂತ್ರನಿಗೆ| ನಿತ್ಯ
ಅತ್ಯಧಿಕವಾದಂಥ ಗುಪ್ತ ರೂಪನಿಗೇ ||ಜೋ|| ||3||
ಒಂದು ಮೂರಾರು ಒಂಬತ್ತರವಳಗೆ
ಚಂದದಿಂದಲಿ ನಾದ ಬಿಂದು ಕಳೆಬೆಳೆಗೆ
ಸಂದೇಹವಿಲ್ಲ ಶಿವ ಬಂದನು ಇಳೆಗೆ| ನಿತ್ಯ
ಕುಂದು ಕೊರತೆಯ ಹೊಂದದಂಥ ಪ್ರಭುವಿಗೆ ||ಜೋ|| ||4||
ಕಾಡಿನೋಳ್ ಮಠ ಮಾಡ್ದ ಕಾಡಸಿದ್ಧನಿಗೆ
ನೋಡಲಿಕೆ ಆಶ್ಚರ್ಯ ಮಹತ್ತು ಮೆರೆವನಿವಗೇ
ಕೂಡಿ ಕೂಡದ ಮೂರು ಲೋಕದೊಳಿಹಗೇ |ನಿತ್ಯ
ಗಾಡಿಕಾರ ಶಿಸುವು ಗಂಗಾಧರ ಹರಗೆ ||ಜೋ|| ||5||
ನಾನಾ ದಿನಸಿನ ರೂಪತನಾದ ಶಿವಗೇ
ಖೂನವರಿತರೆ ಎಲ್ಲಾರೊಳಗೆ ಹುದಗಿಹಗೇ
ತಾನೇ ತಾನಾದವನು ಬಾರ ಈ ಇಳೆಗೆ | ನಿತ್ಯ
ಸ್ವಾನುಭಾವದ ಲೀಲಾದಿಂದ ಮೆರೆವನಿಗೆ ||ಜೋ|| ||6||
ಶಿವನೆನಿಸಿ ಭಕ್ತ ಜನ ಭವರೋಗ ಹರಗೆ
ವಿವರ ತಿಳಿಯಲು ಐದು ಮೂರ್ತಿಯಾದವಗೇ
ಭುವನದಿ ಬಹು ನಾಮದಿಂದ ಮೆರೆವನಿಗೇ| ನಿತ್ಯ
ಸುವಿವೇಕ ನಿರುಪಾಧಿ ಬೈಲ ರೂಪನಿಗೆ ||ಜೋ|| ||7||
ತಡದ ಕಾರಣವೇನು
ತಡದ ಕಾರಣವೇನು ಶ್ರೀಗುರು ಅಡವಿ ಪಾಶ್ಚನೆ ತಿಳಿಯದು ||ಪ||
ಕೊಡು ದರುಶನವ ಮೃಢನೆ ನಿನ್ನಯ|
ಅಡಿಯ ಕಾಣದೇ ನೊಂದೆನೊ|
ಇಡು ಕರುಣ ಇನ್ನಾರುಯನ್ನಗೆ|
ಒಡೆಯ ನೀನೇ ಎಂದೆನೊ ||1||
ಕರ್ತೃ ನಿನ್ನಯ ಚರಣ ಕಾಣದೇ|
ಅರ್ಥಿ ಆಗದ್ವುರ್ಲಭಾ|
ತುರ್ತುನಿಂದಲಿ ನಿತ್ಯ ನಿರ್ಗುಣ
ಗುರ್ತು ತೋರಿಸು ಬೇಗನೆ ||2||
ನಾದ ಬಿಂದು ಕಳಾದ ಮೂರುತಿ|
ಪಾದ ತೋರಿಸು ದೇವನೇ|
ಆದಿ ಶರಣನೆ ಭೇದ ಹರಿತನೆ|
ವಾದಾತೀತ ವಸ್ತುವೇ ||3||
ಶಾಂತರೂಪನೇ ಶ್ರೇಷ್ಠ ಸಾಧುವೆ|
ಪ್ರಾಂತದೊಳು ಸುಕೀರ್ತಿಯೇ|
ಅಂತ್ಯ ಮಧ್ಯಾ ಆದಿ ರಹಿತನೇ|
ಚಿಂತಿ ದೂರ ಏಕಾಂತನೇ ||4||
ಗುರುವರನೆ ಪರತರನೆ ಅಂಕಲಿ|
ಸ್ಥಿರ ಮಠವು ಬೆಳ್ಳಾರಿಲಿ|
ನಿರುಪಾಧಿ ನೀನಾಗಿ ಮೆರೆಯುತ|
ಕರುಣಾ ಮಾಡ್ವೆ ಭಕ್ತರಾ ||5||
ತಟ್ಟಿನ ಶೃಂಗಾರ
ತಟ್ಟಿನ ಶೃಂಗಾರ ಕೇಳೀ ಲೋಕದ ಜನರು
ಬಿಟ್ಟರೆ ಸರ್ವ ಕಾರ್ಯವು ನಿಂತೀತಣ್ಣ ||ಪ||
ತಟ್ಟು ಮೈಲಿಗೆಯಲ್ಲಾ ನಾರ ಮಡಿಯೆನಿಸುವದು
ಯೆಷ್ಟು ದಿನವಿದ್ದರೆ ಮುಡಚಟ್ಟು ಇಲ್ಲ
ಮುಟ್ಟುವರು ಹೊಲಿ ಬ್ಯಾಡರೆಲ್ಲ ಜೋಳದ ಗೋಣಿ
ಯಿಟ್ಟಿಹರು ನಡು ಗ್ರಹದಿ ತೊಳಿಯಲಿಲ್ಲದನೂ ||1||
ಗೋಣಿ ಕಂಟಲಿಯಾಗಿ ಬಟಾರ ಸೊಬರಾಗಿ
ಕಾಣ ಬಂದರಮನಿಗೆ ಪದರಿ ಹಾಸಲಿಕ್ಕೆ
ಜಾಣನಾದವ ಬಲ್ಲ ಇದರ ಮೊದಲು ಕಡೆಯಾ
ಮಾಣದು ದೂರದಲಿ ಶ್ರವಣವಾಗುವದು ||2||
ಜನಿಸಿದಾ ಮೊದಲಿಂದಾ ಪೆಟ್ಟುಧಕ್ಕಿಯ ತಿಂದು
ಮನುಜರಿಗೆ ಉಪಕಾರ ಮಾಡುತಿಹುದು
ಘನ ಮನುಜರಿಗೆ ಬೇಕು ಬಡವರಾದರೆ ಬೇಕು
ಎನಿತು ಎಲ್ಲವು ಇದೆ ಸರ್ವ ಕಾರ್ಯಕ್ಕೆ ||3||
ಹರಿದು ಚಿನ್ನಾಟ್ಯಾಗೆ ಮತ್ತೆ ಕುಟ್ಟಿ ತಿಕ್ಕಿ
ಅರದರದು ನೀರ್ಮಾಡೆ ಕಾಗದಾಗುವದು
ಬರಿಯಲಿಕೆ ಬಹುಪ್ರಿಯ ವಚನ ಶಾಸ್ತ್ರಾದಿಗಳು
ಸರಿ ನೋಡಿದರೆ ಸರ್ವ ಪೂಜಿಗಧಿಕಾ ||4||
ಗುರು ಅಂಕಲಗಿ ಅಡವಿ ಪಾಶ್ಚಾ ನಿರುಪಾಧಿಯಾ
ಸ್ಮರಣೆ ಸ್ತೋತ್ರವ ಬರಿಯೆ ಮೂಲ ವಿವಸ್ತು
ಜರಿದು ನುಡಿದರೆ ತೊತ್ತು ಯೇನನಗಲಿದಿ ಗಣಾ
ಪರಮ ಷಠಸ್ಥಲ ಬ್ರಹ್ಮ ಹರಹರಗಂಗಾಧರನೇ ||5||
ತಿಳಿಯದೈ ಮಹಿಮಾ
ತಿಳಿಯದೈ ಮಹಿಮಾ ಅಡವಿಸಿದ್ಧಾ ಜನದೊಳು ಪ್ರಸಿದ್ಧ
ತಿಳಿಯದೈ ಮಹಿಮಾ ಅಡವಿಸಿದ್ಧಾ ||ಪ||
ಇಳಿಯೊಳೀ ಮಹಾತ್ತಿನ ಸುಳವು ತಿಳಿಯಲಿಕೆ
ಕೆಳೆವರ ನಿನ್ನೌಂಶಲ್ಲದೆ ಬೇರೆ
ತಿಳಿಯದೈ ಮಹಿಮಾ ಅಡವಿಸಿದ್ಧಾ ||1||
ದೇವ ದೇವರಿಗೆ ಒಡೆಯ ನೀನೂ ತಿಳಿದರೆ ಸುರಧೇನು
ಕಾಯ್ವಾತ ನೀನು ಹೇಳಲೇನೂ
ಜೀವ ಶಿವನು ನೀನೊಲಿಯ ಅರಿದರೆ
ಆವಕಾಲದಲಿ ಕೇವಲ ಮೂರ್ತಿ ||2||
ಬಾವನ್ನ ಅಕ್ಷರಕ್ಕೆ ಮೂಲ ಆದಿ ಮಾರುತಿಯೇ
ಅ ಉ ಮಾ ಮೂರು ಅಕ್ಷರ ಮೊದಲು
ನೋವೆ ತಿಳಿದರೆ ಸಾಕ್ಷಿ ರೂಪನು
ಕಾವ ಭಾರ ನಿನ್ನದು ಮಹದೇವಾ ||3||
ನಿರುಪಾದಿ ನೀನು ನಿಜ ನಿಜವೆಂದು ಹೊಡದೆ ಡಂಗುರವಾ
ಗುರುಲಿಂಗ ಜಂಗ್ಮಾ ಅಹುದಹುದೆಂದು
ವರದೆ ವಾಕ್ಯ ನೀ ನುಡಿಸಿದಂತೆ ಪ್ರಭೂ
ಚರಣ ಧೂಳಿ ಮಹಾ ಕರುಣವಿರಲಿ ಸಖಾ ||4||
ತೂಹಿ ಗುರು
ತೂಹಿ ಗುರುಕೆಕೊ ಮೈ ಜಾಹೀರ ಕರೇಗಿ ತುಮೆ ||ಪ||
ಗ್ನಾನ ತುಮಾರಾ ಮಾನ ತುಮಾರಾ
ಕೋನು ಆಪು ಪಹಚನಾರೇ ಧ್ಯಾನವೆ ತೂ ಸಹ ಹುಯೇ ||1||
ಮರ್ಜಿ ಸಾಹೇಬಕಾ ಅರ್ಜಿ ಸೇವಕಾ ದರ್ಜಿ ಅಂಗಕರೆ ಹಮ್ಮ
ಸರ್ಜಿ ಬಹದ್ದೂರ ಪಾಶ್ಚಾ ಜಾಹಿಕರೇಗೀ ತುಮೆ ||2||
ನಿರುಪಾಧಿ ತೂ ನಿರಂಜನಾ ತೂ
ಕರಾರು ಪ್ರಿಯಾ ಅಡವಿಸಿದ್ಧಾ ವಿರುಪಾಕ್ಷ ಚರಣರೇಣೂ ||3||
ತೊಗಲಿನಾಟವು
ತೊಗಲಿನಾಟವು ತಿಳಿಯದಣ್ಣೌ| ನಿತ್ಯ ಅಘಹರನ ಮುಂದೆ ತಾ|
ಪೂಜೆಗೊಂಬುವದು ತೊಗಲಿನಾಟು ತಿಳಿಯದಣ್ಣ ||ಪ||
ಸಿದ್ಧನ ಮುಂದೆ ಬಾರಿಸುವ ಸಮಾಳ ತೊಗಲು
ಮದ್ದಲಿ ದಮ್ಮಡಿ ಹೊಳೆದಾಟೋ ಹರಗೋಲೂ ತೊಗಲು
ಬುದ್ದಲಿ ನಗಾರಿ ಡೋಲು ತಪ್ಪಡಿ ತೊಗಲು
ಜತ್ತಿಗೆ ಮಿಣಿ ಕಣ್ಣ ಪಾದರಕ್ಷೆಯು ತೊಗಲು
ಉತ್ತಮರು ಕೆಟ್ಟವರು ಹುಟ್ಟೋದ್ಹಶೆ ತೊಗಲು ||1||
ಕರಡಿ ಜೇರು ಬಂದು ಪಟದಾಳಿ ಬಾರು
ಹರಿಯದ್ಹುಡುಗರು ಹಾಡೋ ಹಲಗಿ ಚಿಮ್ಮು ತೊಗಲು
ಕುರುಬರ ಬೀರನದು ವಂದೇ ಡೊಳ್ಳು ತೊಗಲು
ಪರಶಿವನ ಹೊದಿಕೆ ಗಜ ವ್ಯಾಘ್ರ ಯರಡರ ತೊಗಲು
ಪರಿಯ ತಿಳಿಯಲು ನಿನ್ನ ಶರೀರವೆ ತೊಗಲು ||2||
ತೊಗಲು ನಾ ತೊಗಲು ಹುಟ್ಟೋದು ಹುಟ್ಸೋದೊಂದು ತೊಗಲು
ಪ್ರೀತಿಯಿಂದಲೇ ಎತ್ತಿ ಮುದ್ದಾಡೊ ಶಿಶು ತೊಗಲು
ನೂತನ ಧಾನ್ಯ ಪದಾರ್ಥ ಬೆಳೆವದು ತೊಗಲು
ಯಾತರ ಶೀಲ ಹಾಲು ಬರುವ ಮಲಿ ತೊಗಲು
ಜ್ಯೋತಿ ರೂಪಗೆ ಸಂಗವೇನೋ ನಿರುಪಾಧಿ ತೊಗಲಿನಾಟವು ತಿಳಿಯದಣ್ಣ ||3||
ದಯವೇಕೆ ಬಾರದೈಯ್ಯಾ
ದಯವೇಕೆ ಬಾರದೈಯ್ಯಾ| ದಾರಿ ನೋಡುವೆವೈಯ್ಯಾ|
ಪ್ರೀತಿಯಿಂದ ಪಾದ ತೋರಿಸೂ| ಸಂಶಯ ಬಿಡಿಸು|
ಪ್ರೀತಿಯಿಂದ ಪಾದ ತೋರಿಸೂ ||ಪ||
ತಾಯ ಅಗಲಿದ ತರುಳಾ| ತಾವ ಬಿಟ್ಟಂತೆ ಇಹುದು|
ನ್ಯಾಯವೇನೈಯ್ಯಾ ಸದ್ಗುರುವೇ| ಮಾಯ ಜನ ಮರವೆ|
ನ್ಯಾಯವೇನಯ್ಯಾ ಸದ್ಗುರುವೇ|
ರಾಯರಾಯರಿಗೆ ರಾಯ| ರಾಜಶಿವಯೋಗಿ ಎಂದು ಸಾಹಸದಿ
ಪ್ರಜೆಯು ಬಂದಿಹರು|
ಆಯಾಸವಾಗುವದು ಸಾಹಸದಿ ಪ್ರಜೆರು ಬಂದಿಹರು ||1||
ಕಂದಿ ಕುಂದವ ಜೀವರನು ಕರುಣಿಸಿ ಕಾಯ್ವದಕೆ ನೀನೇ ತಂದೆ ತಾಯಿ
ಬಂಧು ಬಳಗವು ನಿಂದೆ ಎಲ್ಲವೂ ತಂದೆ ತಾಯಿ ಬಂಧು ಬಳಗವೂ|
ನಂದಿ ಸೂತ್ರಕನೆ ನಿನ್ನ ನಾಂಟ್ಯಿದ ಸ್ವಲೀಲಾ ಅಂದ ಆರಿಗೆ ತಿಳಿಯದೊ|
ಸಂದೇಹ ಹೋಗದು ಅಂದ ಆರಿಗೆ ತಿಳಿಯದು ||2||
ನಾಮ ರಹಿತ ದೇವನಾದ ಬಿಂದು ಕಾಳಾದ ಸೋಮ ಕೋಟಿಗಳ ತೇಜವನು|
ಪ್ರೇಮದಿ ನೋಡುವೆನು ಸೋಮಕೋಟಿಗಳ ತೇಜವನು|
ಕೋಮಲಡವಿಯ ಸಿದ್ಧೇಶ ಕೋಪರಹಿತ ಸ್ವಾಮಿ ನೀ|
ಸರ್ವಾಂತರ್ಯಾಮಿ ಭಕ್ತರಿಗತಿ ಪ್ರೇಮಿ| ಸರ್ವಾಂತರ್ಯಾಮಿ ||3||
ದುಡ್ಡೇ ಲೋಕಾಧಾರವಾಗಿದೆ
ದುಡ್ಡೇ ಶ್ರೀಗುರು ಮಾರುತಿ| ಈ ಜಗದೊಳು| ದೊಡ್ಡವ ಸಣ್ಣವಗೆ||
ದುಡ್ಡಿನಾ ಸೂತ್ರದೊಳು ಕುಣಿವದು| ದುಡ್ಡೇ ಲೋಕಾಧಾರವಾಗಿದೆ|
ದುಡ್ಡೇ ಸರ್ವ ಪೂಜೆಗಧಿಕವು| ದುಡ್ಡು ಇರುತಿರೆ
ನೇಮ ನಡೆ ನುಡಿ ||ಪ||
ದುಡ್ಡು ಲಿಂಗಕೆ ಮೂಲವು| ವಿಭೂತಿಯು ದುಡ್ಡಿರೆ ಬರುತಿಹದು|
ದುಡ್ಡಿರೆ ಜಂಗಮವು ತಿಳಿದು ನೋಡೀ| ದುಡ್ಡಿನೋಳ್ ಸುಖ ದುಃಖವು|
ದುಡ್ಡಿನಿಂದಲಿ ಸಕಲ ದೇವರು| ದುಡ್ಡಿನಿಂದಲಿ ಮನ ಮನ್ನಣೆ|
ದುಡ್ಡು ಇಲ್ಲದಿರಲು ಛೀ ಛೀ| ದುಡ್ಡೇ ಶ್ರೇಷ್ಠವಾದ ದೈವತಾ ||1||
ದುಡ್ಡಿನಿಂದಲಿ ಜನಿವಾರ| ಅಕ್ಷತಿ ಗಂಧಾ| ದುಡ್ಡಿರೆ ಸಾಲಿಗ್ರಾಮ|
ದುಡ್ಡಿರೆ ಬ್ರಾಹ್ಮಣನೂ ವಿದ್ಯೆವೇದಾ| ದುಡ್ಡಿರೆ ಸಾಧನವು|
ದುಡ್ಡೆ ಬಂಗಾರ ಬೆಳ್ಳಿ ಮೂರ್ತಿಯು| ದುಡ್ಡೇ ಪರಡಿ ಪಾಯಸನ್ನವು|
ದುಡ್ಡೇ ಕಂಠ ಕಡಗ ಉಂಗರ| ದುಡ್ಡು ಬಿಟ್ಟರೆ ಪಾಪಿಯನಿಸುವು ||2||
ದುಡ್ಡೇ ನಾಮವು ಗೋಪಾಳ ದೀಪದ ಕಂಭ| ದುಡ್ಡಿರೆ ದಾಸರಾಟ
ದುಡ್ಡಿರೆ ಅಪು ಗಾಂಜಿಯು| ಆರೂಢಗೆ ದುಡ್ಡಿರೆ ಪೂರ್ಣ ಸುಖಾ|
ದುಡ್ಡು ಚಿನ್ಮಯ ಹಾದಿ ತೋರ್ಪುದು| ದುಡ್ಡು ಚೇತನವ ಮಾಡ್ವದು
ದಡ್ಡೆ ಶ್ರಂಗಾರ ನಾನಾ ವಸ್ತ್ರವು| ದುಡ್ಡಿಗಿಂತ ಅಧಿಕವಿಲ್ಲವು ||3||
ದುಡ್ಡಿರೆ ಕವಡಿ ಸರವು| ಬಂಡಾರ ಚವಡ್ಕಿ| ದುಡ್ಡಿರೆ ಜಾಂಗಟಿ ಹಡ್ಲಿಗಿಯು
ದುಡ್ಡಿರೆ ಜೋಗ್ರಿ ವಗ್ಗಯ್ಯಾ ಬೈರಾಗಿ ಜೋಗಿ| ದುಡ್ಡು ಬಿಟ್ಟವರಿಲ್ಲವು
ದುಡ್ಡೆ ದೊರೆ ದೇಸಾಯಿ ನಾಡಿಗ| ದುಡ್ಡೆ ಸರ್ವಕುಲ ಛಲವು
ಮಠ ದುಡ್ಡು ಜೀವನವೆಲ್ಲ ಚರಿಪದು| ದುಡ್ಡಿನಾಟವ ತಿಲಿವನಧಿಕನೂ ||4||
ದುಡ್ಡೇ ಕರ್ಮವ ಕಳಿವದೂ| ಮೋಕ್ಷಕೆ ಹಾದಿ | ದುಡ್ಡೆ ನರಕಕೆ ಯಳೆವದು|
ದುಡ್ಡಿರೆ ಅಡವೀಶನ ಸುತ್ತಾಮುತ್ತಾ| ದುಡ್ಡಿರೆ ಬಹು ಜನವೂ
ದುಡ್ಡೆ ಕಲಿಯುಗ ಕರ್ತೃವಾಗಿದೆ| ದುಡ್ಡೇ ತಾ ನಿರೂಪಾದಿ ಲಕ್ಷಣ
ದುಡ್ಡಿನಂತವ ತಿಳಿದ ಪುರುಷನು| ದುಡ್ಡು ಗುರುವಾದಂತೆ ಸಕಲದಿ ||5||
ದುಷ್ಟರ ಗೆಳೆತನವು ಭ್ರಷ್ಟ್ರಯನಿಸುವದು
ದುಷ್ಟರ ಗೆಳೆತನವು ಭ್ರಷ್ಟಯನಿಸುವದು
ಶ್ರೇಷ್ಟ ದೇವರಯಡಿಯ ಶ್ವಾನವುಂಡಂತೆ
ತನ್ನ ತಾ ತಿಳಿದಿಲ್ಲ ತಾನಾದ ಸುಖವಿಲ್ಲ ||ಪ||
ವುನ್ನತವಾದಂಥ ಸ್ಥಳವು ನಿಲಿಕಿ|
ಅನ್ಯಾಯ ನ್ಯಾಯ ಎರಡು ಗೊತ್ತು ತನಗಿಲ್ಲ
ಚಿನ್ನ ಲೋಹವೆಂಬ ಗುರುತರಿಯದಂಥ ||1||
ಜ್ಞಾನ ಮಾರ್ಗಕ್ಕೆ ಹೋಗದೆ ನೀತಿಯೆಂದಿಗೂ ಸಿಗದು
ಯೇನೇನೊ ಯೆತ್ತೆತ್ತೊ ಮನ ಬಂದ ತೆರ ಕುಣಿದು
ಕಾನನಕೆ ಬಿದ್ದು ಕೂನವ ಮರೆತು ಇರುವಾ ||2||
ನಿರುಪಾಧಿ ಅಡವೀಶ್ಯಾ ನಿಃಶ್ಚಯ ಯನ್ನದಲೇ
ಬರೆ ಬಾಯ ಬ್ರಹ್ಮವನು ನುಡಿದು ಕೆಡುವಂಥಾ
ಕುರುವರಿಯದಲೆ ಗುರುವು ಹಿರಿಯರೆಂದೆನ್ನದೆ
ಗರಿವಿನಿಂದಲಿ ಜರಿದು ನುಡಿವಂತಾ ಕೆಟ್ಟಾ ||3||
ದೇವದೇವ ದೇವ ನೀನೆ
ದೇವದೇವ ದೇವ ನೀನೆ ಭಾವಭರಿತ ಅಡವಿಸಿದ್ಧಾ
ಕಾವುದೆನ್ನ ಕರುಣನಿಧಿಯೆ ಕೇವಲದ ಅಡವಿಸಿದ್ಧಾ ||ಪ||
ನಿತ್ಯ ನಿನ್ನ ಧ್ಯಾನವನ್ನು ಚಿತ್ತವಿಟ್ಟು ಅಡವಿಸಿದ್ಧಾ
ಗೊತ್ತು ತೋರು ದಿವ್ಯವಾದ ತೊತ್ತು ನಾನು ಅಡವಿಸಿದ್ಧಾ
ಕರ್ತು ನೀನೆ ಒಬ್ಬ ಪ್ರಭುವು ಮಿಥ್ಯ ತೋರ್ಕೆ ಅಡವಿಸಿದ್ಧಾ ||1||
ಕಂದನಾಗಿ ಬೇಡಿಕೊಂಬೆ ಕರುಣವಿರಲಿ ಅಡವಿಸಿದ್ಧಾ
ಹಿಂದು ಮುಂದು ನೀನೆ ಯನ್ನ ತಂದೆ ತಾಯಿ ಅಡವಿಸಿದ್ಧಾ
ಹೊಂದಿಯಿದ್ದವರ ಭಾರ ನಿನ್ನದೆಂದೆ ಅಡವಿಸಿದ್ಧಾ
ಕಂದುಗೊರಳನೆಂದು ನಿನ್ನ ಬೇಡಿಕೊಂಬೆ ಅಡವಿಸಿದ್ಧಾ ||2||
ಪಾತಕನು ಯನ್ನ ಗುಣವ ನೋಡಬೇಡ ಅಡವಿಸಿದ್ಧಾ
ನೀತಿ ಮಾರ್ಗವನು ತೋರಿ ನೀಟು ಮಾಡು ಅಡವಿಸಿದ್ಧಾ
ಯಾತರೊಳಗೆಯಿಲ್ಲದಂತಾ ಶ್ರೇಷ್ಠ ನೀನು ಅಡವಿಸಿದ್ಧಾ
ನೂತನದ ವಸ್ತು ರೂಪು ಜ್ಯೋತಿ ನೀನು ಅಡವಿಸಿದ್ಧಾ ||3||
ಕರ್ಮಿ ನಾನು ಬಹಳ ಜನ್ಮ ತಿರಿಗಿ ಕಂಡೆ ಅಡವಿಸಿದ್ಧಾ
ಧರ್ಮ ಮಾರ್ಗವ ತೋರಿ ಭವವಾ ದಾಂಟಿಸೈಯ್ಯಾ ಅಡವಿಸಿದ್ಧಾ
ಮರ್ಮ ನಿನದೈಯ್ಯ ಮೂಢ ಮತಿಗೆ ಸಿಲುಕಿ ಅಡವಿಸಿದ್ಧಾ
ನಿರ್ಮಳದ ನಿಜದಿ ಗುಣವು ಲೀಯ್ಯಮಾಡು ಅಡವಿಸಿದ್ಧಾ ||4||
ಪಾಮರನು ನಾನು ಗುಣವ ನೋಡೋದೇಕೋ ಅಡವಿಸಿದ್ಧಾ
ಸ್ವಾಮಿ ನೀನು ಕಾರ್ಯ ನಿನ್ನದಲ್ಲೆ ಅಡವಿಸಿದ್ಧಾ
ಧಮ ಸೀಮೆ ರಹಿತ ನಿನ್ನಾ ನೇಮವರಿದು ಅಡವಿಸಿದ್ಧಾ
ಕೋಮಲದ ಮುಕ್ತಿ ಪತಿಯು ಸದಾಶಿವನು ಅಡವಿಸಿದ್ಧಾ ||5||
ದೇವ ಬಂದಾನು ಭಾವ ಭರಿತನು
ದೇವ ಬಂದಾನು| ಭಾವ ಭರಿತನು ಕೇವಲ ಸಾಂಬಾ ಮೂರುತೀ|
ಆವ ಕಾಲದಿಂದವಗತಿಯ| ಮಹದೇವ ಈತ ನಿಜ ನಿಶ್ಚಯಯನ್ನುತಾ
ಜಾವ ಜಾವಕೆ ನೆನದರೆ ಮುಕ್ತಿಯೇ| ಸೋವೆ ತೋರ್ವ ಹರ ಶಿವಡಿವೀಸನೂ ||ಪ||
ದಶದ ನಾದದ ಸಂಭ್ರಮದೊಳು ಬೈಲಿಗೆ ಬಂದಾನೋ| ಮಹಾ
ಕುಶಿಯಿಂದಲಿ ಆನಂದದಿ ನಾನು ನಿಂದೆನೊ
ಪಶುಪತಿ ಯೀತನೆ ಪಾವ್ತಿ ರಮಣನೆಂದೆನೊ ನಾನು
ಅಸಮಾಕ್ಷನ ಕಂಡರುಷದಿ ಮನಕೆ ತಂದೆನೊ
ಶಿಶುವಿನ ಭಾರವು ನಿನ್ನದುಯೆನುತಲಿ
ಯೆಸೆವಾನಂದದಿ ಹೊಗಳಿದೆ ಬಹು ಪರಿ
ರಶಿಕನಲ್ಲ ನೀನು ಸುರಿದರ್ಹಾಡುವೆ|
ಹಸಿತ ಮುಖವ ನೋಡಲೆ ಯತಿಯಾದೇನು ||1||
ಬಿಂದು ಕಳಾ ಸ್ವರೂಪನೆ ನಿನ್ನನು ನೋಡಿದೆ|
ಯನ್ನಯ ತಂದಿಯು ತಾಯಿ ಬಂಧು ಗುರುವೆಂದ್ಹಾಡಿದೆ|
ಕುಂದಿದ ಮನ ಖುಷಿಯಾಯಿತು ಮುಕ್ತಿಯ ಬೇಡಿದೆ|
ಮಹಾಪರವೆಂದೆನ್ನುತಾ ನಿನ್ನೊಳು ನಾನು ಕೂಡಿದೆ|
ಹೊಂದಿದವನು ನಾ ನಿಂದೆ ಭಾರವು|
ಮುಂದು ಮಾಡು ಘಟ ಇರುವ ಪರಿಯ ಸುಖವೆಂದು ಬಯಸುವೆನು|
ಸುಂದರ ಶ್ರೀಗುರು ತಂದೆಯನ್ನಯ ಮಂದಿರ ನಿನ್ನದು ||2||
ನಿರೂಪಾಧಿಯು ನೀನೆಂದೆನು ಅಂಕಲಿನಾಥನೆ|
ನಾನಾ ತರದ ಲೀಲವ ಆಡುವ ಮಹ ಪ್ರಖ್ಯಾತನೆ|
ಗುರುವರ ಅಡವೀಶನೆ ಸಂಭ್ರಮದಾತನೆ|
ಪೂರ್ಣ ಅರುವೈ ನೀ ನಿಸ್ಸಂಶಯಾ ನೀ ನಿರ್ಭೀತನೆ|
ಪರತರ ಗುರುವರ ಸ್ಥಿರಕರ ಉರುತರ ಮರಸು ಮನ ಮಹಾ ಆನಂದವಾಯಿತು|
ಮರವು ಮಾಡದಾವಾವಕಾಲದಲಿ ಕರುಣ
ಮಾಡು ನೀ ಗುರುಲಿಂಗ ಜಂಗಮಾ ||3||
ದೇವಾ ನಂಬಿದ ಭಕ್ತರ ಕಾವ
ದೇವಾ ದಯವು ಬಾರದೇ| ಎನ್ನಯ ಮೇಲೆ|
ದೇವಾ ದಯವು ಬಾರದೇ ದೇವಾ ನಂಬಿದ ಭಕ್ತರ ಕಾವ
ಕೇವಲ ಸುಖದ ಭಾವಾ
ತಿಳಿದರೆ ಶಿವಾ ಜೀವಾ| ನಿಜ ಮುಕ್ತಿ ಈವಾ ||ಪ||
ಬಾರಿ ಬಾರಿಗೆ ಕೇಳಲಾರೇ ಪರಬ್ರಹ್ಮ ನೀನೂ
ಧಾರುಣಿ ವಾಕ್ಯ ಹಾರಲಾರೇ
ತೋರು ಸುಖ ಸಾಮ್ರಾಜ್ಯ ಬೀರು
ನೀನಲ್ಲದೆ ಇನ್ನಾರೂ| ಸಂತೋಷ ತಾ ಸಾರೂ|
ಯನ್ನಲ್ಲೆಯಿರೋ ||1||
ಶಾಂತಿ ಮಾರುತಿ ಕಳೆಯಾ ಚಿಂತೆ|
ನಿನ್ನಗೆ ನಾನು ಯಂತು ಹೇಳಲಿ ಯನ್ನ ಭ್ರಾಂತೆ|
ಹಂತೇಲೆ ನೀನೇ ಇರುವಂತೆ| ಪ್ರೀತಿಯ ಮಾಡಂತೆ
ಹೊಗಳಿದೆ ನಿನ್ನಾಕಾಂತೆ| ಮಾಡೋ ನಿಶ್ಚಿಂತೆ ||2||
ಕಾಡೊಳು ಮನೆ ಮಾಡಿದವನೇ ಅಡವಿಯಾ ಪಾಶ್ಚಾ|
ನಾಡೊಳು ನಿರುಪಾಧಿ ತಾನೇ|
ನೋಡೋ ಕಟಾಕ್ಷವ ಮಾಡೊ ದೃಷ್ಟಿಯನ್ನಲ್ಲೀಯಿಡೋ|
ಭವದಲ್ಲಿ ತರಲಿ ಬ್ಯಾಡೋ| ಸಂತೋಷ ಕೊಡೋ ||3||
ಧಿನ್ ಕ್ಯಾ ಹುಶೇನ್ನು
ಧಿನ್ ಧಿನ್ ಧಿನ್ ಧಿನ್ ಕ್ಯಾ ಹುಶೇನ್ನು| ಬಾ ಹುಶೇನ್ನು ಧಿನ್ ಧಿನ್ ||ಪ||
ತತ್ವ ತಾತ್ವಿಕ ತಾನೆ ನಿತ್ಯ ನಿರ್ಗುಣ ತಾನೇ
ಯತ್ತ ಯತ್ತ ನೋಡಿದರೆ ಕರ್ತೃ ಒಬ್ಬನಾಟವಿಹುದು ||1||
ಪೀರನಾದವ ತಾನೆ ಫಕೀರ ನಾದವ ತಾನೆ
ಭಾರಿ ಖೂನವಳಗೆ ಪದ್ಯ ಸಾರಿ ಹೇಳುವ ಮೂಲ ತಾನೆ ||2||
ನಿರುಪಾಧಿ ತಾನೇ ಪರಕೆ ಪರತರನೇ
ಗುರುವು ಅಂಕಲಗಿ ಅಡವಿಪಾಶ್ಚಾ ಪೀರ ಪೈಂಗಬಾರಿ ||3||
ಧಂ ಛಡಾವು
ಧಂ ಛಡಾವು ಧಂ ಛಡಾವು ಸಿದ್ದಪ್ಪ ಗೆಲಲೆಲಾಗುವು ||ಪ||
ಕಹಾ ಸಿಲ್ಹಾಯೋ ಕಹಾ ಛಲೆಗಾ ದೇಖೋ ತುಮಾರ ದಿಂಮ್ಮೊ
ಸಹಾಸಕರೋ ಸಾಧುಕಾ ಮಹಿಲ್ಜತಿ ಮುನ್ನಾ ||1||
ನೀತಿ ವಾಕ್ಕುಯಿನುವಲೇ ಜೋತಿ ರೂಪುದೇಲುವಲೆ
ನಾಥನಾಂಘ್ರಿ ಕಮಲ ಗಂಧ ಇತೆರಾಯ್ತೆ ದೊರಕುತುಂದಿ ||2||
ನಿರುಪಾದಿಯಾಗುವಿ ಪರಿಭವಗಳ ನೀಗುವಿ
ಗುರು ಅಡವಿಸಿದ್ಧಲಿಂಗ ನಾಮಾಮೃತನುಂಡು ಸೋಕ್ಕು ||3||
ನಗಬ್ಯಾಡೋ ಅಣ್ಣಾ
ನಗೀ ಬರುತದೆ ನಕ್ಕರೆ ಬೈದಿರಿ ಜಗದ ಹಗರಣ ನೋಡಿ
ನಗೀ ಬರುತಿದೆ ನಕ್ಕರೆ ಬೈದೀರಿ
ಪಕ ಪಕ ನಗಲೇನೋ ತಮ್ಮಾ ನಗಬ್ಯಾಡೋ ಅಣ್ಣ ||ಪ||
ಕಾಯ ನಾನು ಯಂದೆಂಬೊ ಹಮ್ಮಿಲಿರುತಾ
ಸಂಶಯದೊಳು ಮುಳುಗಿ ಬಾಯ ಬ್ರಹ್ಮವ
ನುಡಿದನು ಭಯವಿಲ್ಲದಲೇ
ನ್ಯಾಯ ಅನ್ಯಾಯವ ತಿಳಿಯದೆ ಮರಗುತಿರುವಾ ಮತಿಹೀನರ ಕಂಡು ||1||
ಒಬ್ಬ ಶಿವನೆಂದು ಹಾಡಿ ಹರಸಿ ನೋಡಿ ಘನಶಾಸ್ತ್ರವ ಓದಿ
ಮಬ್ಬಿನಿಂದ ತಿರತಿರಗಿ ಬರುವ ಹಾದಿ
ದೊಬ್ಬಿ ಕಲ್ಪನೆಯ ಸಂತರ ಸಂಗದೊಳಗೆ ಇರದವರನು ಕಂಡು ||2||
ನಿರುಪಾಧಿಯು ಅಡವೀಶ ಎಂದು ಅನ್ನದೇ ನಾ ನನ್ನದು ಎಂದು
ಗರವು ಮಾಡಿ ಬಹು ನಿಂದೆಯೊಳಗೆ ಬಿದ್ದು
ಮರ ಮರಳಿ ಹುಟ್ಟುವ ಮಾತುಗಳನು ಕೇಳಿ ಮನದೊಳಗೆ ಮರುಗಿ ||3||
ನಂಬಿರಯ್ಯ ಸಾಂಬನ ಅವತಾರಿದು
ನಂಬಿರಯ್ಯ ಜನರು ನಂಬಿರಯ್ಯ
ಸಾಂಬನ ಅವತಾರಿದೂ ಸಟೆಯಲ್ಲ ನಿಜ ನಿಜವೆಂದು ||ಪ||
ಕಿಂಕರ ನುಡಿಯಿಂದೆ ಶಂಕರ ಬಂದಾನೆ
ಡಂಕಾ ಹೊಡೆಯಿತು ವೇದದಂಕೆಯೊಳಿಹನೆ ಶಿವನೂ ||1||
ಮೂರು ಮಲಗಳಗೆದ್ದು ಸೇರಿ ಉನ್ಮನೀ ಸ್ಥಳದೀ
ಭೋರೆಂಬೊ ವಾದ್ಯ ವಸ್ತುವಾ ಸಾರಾ ಬಲ್ಲವನೇ ಹರನು ||2||
ತಾನೇ ತಾನಾದ ಗುರುತೂ ಸ್ವಾನುಭಾವದಿ ತಿಳಿದು
ಮಾನಿ ತಾ ನಿರುಪಾಧಿ ಖೂನಾ ಅಡವೀಶ ಗುರುತೂ ||3||
ನಾಥ ನಾಥನಮ್ಮ
ನಾಥ ನಾಥನಮ್ಮ| ಲೋಕದಿ ಮಹಾ ಖ್ಯಾತ ಈತನಮ್ಮ|
ಭೀತಿ ರಹಿತ ಬಹು ನೂತನ ವಸ್ತುವಾ
ಜ್ಯೋತಿ ರೂಪು ನಿಜ ಆತ್ಮನು ಅಡವೀಶ್ಯಾ ||ಪ||
ಎಲ್ಲಾ ದೇಶದಲ್ಲಿಯೂ| ನಾಮದ ಮಹಾತ್ತಲ್ಲಲ್ಲೆ ಪ್ರಭೆಯಿಹುದು|
ಬಲ್ಲಿದ ನಿನ್ನ ಕರುಣ ಕಟಾಕ್ಷದ|
ಪಲ್ಲವೆನ್ನಯ ಶಿರದಲ್ಲಿ ಇಡು ದೇವಾ ||1||
ಜೀವ ಶಿವನು ಜಗವು ಮೂರು ನಿನ್ನ ಭಾವದಿ ಆಗಿಹುದು|
ಕೇವಲ ಸುಖದಿಂದ ಗುರುಲಿಂಗ ಜಂಗ್ಮದಾ|
ಸೋವಿ ತಿಳಿದು ಭಕ್ತಿ ಧರಿಸಿ ಮರ್ತ್ಯಕ್ಕೆ ಬಂದಾ ||2||
ನಿಶ್ಚಯಾ ಸೋಮಶೇಖರ ನೀನು
ನಾಮ ಹಾಲೇ ನಿಶ್ಚಯಾ ಸೋಮಶೇಖರ ನೀನು
ಭೂಮಿಯೊಳೆಲ್ಲ ಕಾಣೆ ಈ ಮಹಾತ್ಮೆಯಾ ||ಪ||
ಮೊದಲೆ ಪ್ರಮಾಣವೆ ಹಾಲು ಚದುರ ದ್ವಿತೀಯ ದಧಿ
ವಿಧ ಮೂರರಲ್ಲಿ ಮಜ್ಜಿಗೆ ಬೆಣ್ಣೆ ವೇದಕ್ಕೆ ಸದಮಲ ಜ್ಞಾನಿ ಬಲ್ಲ
ಮದನ ಬಾಣವೆ ತುಪ್ಪಾ ಇದನರಿತವನು ತಿಳಿವನು ಐದು ನೀಡನೇ
ಮಿಂಚಿನ ಮೂಲದಿ ಸಂಚರಿಸುವ ಬಲ್ಲಾ
ಸಂಚಿತಾರಾಬ್ದಾಗಾಮಿ ಕಳದಂತ ಮಹಿಹಾ ||1||
ಹೆಸರಿಗೆ ಹಾಲಪ್ಪ ಹಸುವಿಗೆ ಮಜ್ಜಿಗಿಲ್ಲೆಂದು
ವುಸುರುವೆ ನಿನ್ನ ವಾಕ್ಯದಿ ನಿಜ ನಿಜವೈಯ್ಯ
ಶಿಶುವಿಗೆ ಹಾಲು ಬೆಣ್ಣೆ ತೃಪ್ತಿಗೆ ಮಜ್ಜಿಗೆ ಮೊಸರು
ಪಶುಪತಿ ಸರ್ವಕ್ಕೆ ತುಪ್ಪಾ ನೀಡುವೆವೈಯ್ಯಾ ||2||
ಹಾಲು ಮೊಸರು ಐದು ಕೀಲು ತಿಳಿದರೆ ಕರ್ತು
ಮೂಲ ಮಾರುತಿ ನಿನ್ನದೇ ಏನುಂಟೇನಿಲ್ಲಾ
ಜಾಲ ಮಾಯವ ತುಂಬಿ ಲೀಲ ತಿಳಿಯಗೊಡದೇ
ಕಾಲ ಕಾಲದಿ ಮೆರೆವಂಥ ಮಹಾತ್ಮ ನೀನೈಯ್ಯ ||3||
ನಿರುಪಾಧಿ ಅಡವೀಶನ ಗುರುತು ಬಲ್ಲವನೆ ಬಲ್ಲಾ
ನರಗುರಿಗೆಳೆಲ್ಲಾ ನಿನ್ನನು ಅರಿವರೇನೈಯ್ಯಾ
ಪರಮಾ ಯೋಗಿಯೆ ನಿನ್ನ ಪರಿಪೂರ್ಣವಾದಂತಾ
ಕುರುಹು ಕಾಣಿಸುವನೈಯ್ಯ ಸಾಕ್ಷಾತನೆಂದು ||4||
ನಿಜರೂಪ ಅಡವೀಶ
ನಿಜರೂಪ ಅಡವೀಶ ನಿಶ್ಚಯ ಶರಣನು ನಂಬಿ ಜೋಕೆ|
ಗಜಿಬಿಜಿಯಾದಿರಿ ಭಕ್ತಿಯ ಮರೆತರೆ ನಂಬಿ ಜೋಕೆ ||ಪ||
ಪ್ರಭುವಿನ ಅಪ್ಪಣೆ ಹಿಡಿದು ತಾ ಬಂದಾನೆ ನಂಬಿ ಜೋಕೆ|
ಮಹಾ ವಿಭವಗಳನು ಕೊಟ್ಟು ಸಂರಕ್ಷಿಸುತಾನೇ ನಂಬಿ ಜೋಕೆ|
ಕಬಲಾಗಬೇಕೆನ್ನು ಭಕ್ತಿಯ ಮಾರ್ಗಕೇ ನಂಬಿ ಜೋಕೆ|
ಮಹಾ ಶುಭ ಬೇಕಾದರೆ ಸೂಕ್ಷ್ಮವ ತಿಳಿಕೊಂಡು ನಂಬಿ ಜೋಕೆ ||1||
ಕಾಡೊಳು ಮನಿ ಮಾಡಿ ಕಾಡು ಬೇಡನು ನಂಬಿ ಜೋಕೆ|
ಲೀಲಾ ಆಡಲು ಬಂದಾನೆ ಸಲೆಯಂದು ತಿಳಕೊಂಡು ನಂಬಿ ಜೋಕೆ|
ಪಾಡದೆ ಯೀ ಕಾಯ ಮುಕ್ತಿಯ ಪಡಿಲಿಕ್ಕೆ ನಂಬಿ ಜೋಕೆ|
ನೀವು ಕೇಡಾಗಬೇಡಿರಿ ದಿನ ಮುಂದೆ ಕೆಟ್ಟಾವು ನಂಬಿ ಜೋಕೆ ||2||
ವರದ ಅಂಕಲಿನಾಥ ನಿರುಪಾಧಿ ಅಡವೀಶಾ ನಂಬಿ ಜೋಕೆ|
ಕಾಯವು ಸ್ಥಿರವಲ್ಲ ಈಗಲೋ ಆಗಲೋ ನಂಬಿ ಜೋಕೆ|
ಗುರು ಶಿದ್ಧಾ ದಯವಾಗೊ ಕಾವ್ಯವ ಕೇಳುತಾ ನಂಬಿ ಜೋಕೆ|
ಇದು ಖರಿಯ ನಿಶ್ಚಯವೆಂದು ಧರ್ಮದಿಂದಿರುವದು ನಂಬಿ ಜೋಕೆ| ||3||
ನಿನ್ನ ಖೂನವರಿತು
ನೀನೇ ಶಿವಾ ನೀನೇ ಶಿವಾ
ನಿನ್ನ ಖೂನವರಿತು ನಿಜ ಧ್ಯಾನದೊಳಿದ್ದರೆ ನೀನೆ ಶಿವಾ ||ಪ||
ವೇದಾಂತದೊಳು ಗೋಪ್ಯವಾದ ಅರ್ಥದೊಳು
ಸಾಧು ಶಿವನು ಎಂದು ಓದುವದರಿದರೆ ನೀನೆ ಶಿವ ||1||
ಗುರು ರೂಪವಾಗಿ ತಾ ಮರಳಿ ಬಾರದಂಥ
ಕುರುಹು ತಿಳಿದೂ ನಿಬ್ಬೆರಗಾಗಬಲ್ಲರೆ ನೀನೆ ಶಿವಾ ||2||
ಯೋಳು ಸೋಪಾನದ ಕೀಲನರಿದ ಮ್ಯಾಲೆ
ಮೂಲ ಮೂರತಿ ತಾನೆ ಲೀಲವಾಡುವ ವಸ್ತು ನೀನೆ ಶಿವಾ ||3||
ದೋಷವ ಕಳಕೊಂಡು ಆಶರಹಿತನಾಗಿ
ಪಾಶವ ಹರಿದು ತಾ ಈಶನಾಗಿರುತಿರೆ ನೀನೆ ಶಿವಾ ||4||
ತ್ರಿಪುಟಿಗಳಿರುವನು ಗುಪ್ತ ಭಾವದಿಂದ
ನಿಪುಣ ತನವ ಬಿಟ್ಟು ಸುಪಥದೊಳಾಡಲು ನೀನೆ ಶಿವಾ ||5||
ನಡೆ ನುಡಿಯೇಕಾದ ಗಡಣದೊಳಗೆ ತಾನೇ
ಮೃಢನೆಂದು ಶೃತಿ ಸಾರೆ ಪೊಡವಿಗೊಬ್ಬನೆ ದೇವಾ ನೀನೆ ಶಿವಾ ||6||
ನಿರುಪಾಧಿ ಅಡವೀಶ ಗುರುಲಿಂಗ ಜಂಗಮ
ಖರಿಯವೆಂದು ಯನ್ನ ಕರವನೆತ್ತಿದೆ ನಿಜ ನೀನೆ ಶಿವಾ ||7||
ನೀ ತವರ ಮನಿಯಂದು ಬಂದೆ
ನೀ ತವರ ಮನಿಯಂದು ಬಂದೇ ನಾನು ಬಾಳ ಸಂತೋಷಾ
ಯಾತಕ್ಕ ಅಂಟದಂತ ಅರವೀ ಕೊಡು ನೀನು ಬಾಳ ಸಂತೋಷಾ ||ಪ||
ಭಕ್ತಿಯಂಬೋ ಅಂಗಿಯ ಕೇಳುವೆನು ಬಾಳ ಸಂತೋಷಾ
ಯುಕ್ತಿಯು ಈ ಜಾಕೀಟಾ ದಾನ ಕೊಡರೀ ಬಾಳ ಸಂತೋಷಾ
ವ್ಯಕ್ತೆಂಬ ಸುಗುಣದ ಧೋತ್ರ ಬೇಗ ನೀಡಿ ಬಾಳ ಸಂತೋಷಾ
ವ್ಯಕ್ತೆಂಬೋ ಟೋಪಿ ಇಟ್ಟೆನ್ನ ಹರುಷ ನೋಡಿ ಬಾಳ ಸಂತೋಷಾ ||1||
ಧ್ಯಾನೆಂಬೊ ದೇಶದೊಳು ನಾನು ಹೊಗಳಿವೆನೂ ಬಾಳ ಸಂತೋಷಾ
ನೀನ್ಹಿಂದೆ ತೊಟ್ಟುಬಿಟ್ಟಂತ ಮೈಲಿಗೆಯನು ಬಾಳ ಸಂತೋಷಾ
ತಾನಾದ ಗುರುತು ಕೊಡುಯೆಂದು ತನ್ನ ಬೇಡಿ ಬಾಳ ಸಂತೋಷಾ
ಖೂನಾಗಬೇಕು ಗ್ನಾನೆಂಬ ಪ್ರಭೆಯು ನೋಡಿ ಬಾಳ ಸಂತೋಷಾ ||2||
ದೂರಿಂದ ಸುದ್ದ ಕೇಳುತ ಬಂದೆನೈಯ್ಯಾ ಬಾಳ ಸಂತೋಷಾ
ತೂರ್ಯಾತೀತ ಕೊಟ್ಟೆನ್ನ ರಕ್ಷಿಸೈಯ್ಯಾ ಬಾಳ ಸಂತೋಷಾ
ತಾರಕ ಸಾಂಖ್ಯ ಅಮನಸ್ಕ ಅಡವೀಸಿದ್ಧಾ ಬಾಳ ಸಂತೋಷಾ
ಪೂರ್ಣದ ಬ್ರಹ್ಮ ನಿರುಪಾಧಿ ಮೂರು ಗೆದ್ದ ಬಾಳ ಸಂತೋಷಾ ||3||
ನೀನೆ ತಿಳಿಯೋ ನಿನ್ನೊಳು
ನೀನೆ ತಿಳಿಯೋ ನಿನ್ನೊಳು
ತಿಳಿಯೋ ನಿನ್ನೊಳು ತಿಳಿಯೋ ||ಪ||
ಜಗದ ಆಟದೊಳಗೆ ಸೂಕ್ಷ್ಮ
ಬಗೆಯನರಿದು ನುತಿಸೆ ಮಗುವಾ
ಸುಗುಣರೆನಿಸಿ ಜೀವರೊಳಗೆ
ನಗೆಗೀಡಾಗದಿರುವ ಭಾವ ||1||
ಸುಖದ ಸಕಲ ಜೀವ ಪುತ್ರನಿಂದು
ಸಕಲ ಜೀವ ಪುತ್ರನಿಂದು
ವಿಕಳ ಮತಿಗಳೆಲ್ಲ ಕೂಡಿ
ನಕಲಿ ಆಡ್ಯಾರೆಂಬೊ ಭಾವ ||2||
ಗುರುವು ನಿರುಪಾಧಿ ನೀನು
ಪರಮ ಸಾಧು ಅಡವಿಸಿದ್ಧಾ
ಪೊರೆಯಬೇಕು ಕಾಲ ಕಾಲ
ಬಿರದು ಸ್ತುತಿಪ ತೊತ್ತುಯಂದು ||3||
ನೀನೆ ದೇವಾ
ನೀನೆ ದೇವಾ ನಿನ್ನಾಟದ ಲೀಲವಾ
ತಾನೇ ತಾನಾದ ಪುರುಷಗೇ ಬೇಗೇ ತೂಗೇ
ಆನಂದವಾಗೇ ಹಾ ಆನಂದವಾಗೆ
ಮಾನನಿಧಿ ನೀ ಮೌನ ಯೋಗದಿ
ಖೂನವಡಗಿಸಿ ಲೋಕದವರಿಗೆ
ಸ್ವಾನುಭಾವಿಯಾದ ಪರಿತಾ
ಯೇನು ಬಲ್ಲರು ಮೂಢಮತಿಗಳು ||ಪ||
ಹಿಂದೆ ಮಾಡಿದ ಪುಣ್ಯದ ಫಲದಿಂದೇ ಬಂದೇ ನಿಂದೇ ಪಾದದ ಮುಂದೆ
ಚಂದವಾದಾ ವಸ್ತು ನಿನ್ನ ನೋಡಿ ಹಾಡೀ ಕೂಡಿ ಮುಕ್ತಿಯ ಬೇಡೀ
ಕುಂದು ಕೊರತೆ ಗುಣಗಳನ್ನು ನೀಗಿ ಯೋಗೀ ಭೋಗೀ
ಆನಂದವಾಗೀ ಹಾ ಆನಂದವಾಗೀ
ದುಂದು ನುತಿಸಿದೆ ಅ,ಕ,ಚ,ಟ,ತ,ಪ,ಯ,ಸ ವಂದು ಅರಿಯದೆ ಬಾಲ ಲೀಲದಿ
ಬಂಧು ಬಳಗಾ ಸಾಧು ಯನುತಲಿ ಯಂದ ವಚನ ಬಲ್ಲಗಾರಗೆ ||1||
ಸಾಧು ನಿಂತ ಜಾಗ ಕೈಲಾಸಾ ವಾಸಾ ಯೀಶ್ಯಾ ಭಕ್ತರ ಪೋಷಾ
ಭೇಧ ಭೇಧಗಳೆಲ್ಲ ಹೋದಂತಾ ಶಾಂತಾ ಕಾಂತಾ ನೀನೇ ಕಾಂತಾ
ವಾದ ವರ್ಜಿತವಾದ ಗುರುಮೂರ್ತಿ ಕೀರ್ತಿ ಪೂರ್ತಿ
ಜಗವೆಲ್ಲವಾರ್ತಿ ಹೌ ಜಗವೆಲ್ಲವಾರ್ತೀ
ಖೇದ ಮೋದಗಳಿಲ್ಲದ ಚಲಿತ ನಾದಬಿಂದು ಕಳಾ ಸ್ವರೂಪನೆ
ಆದಿ ಮಾರುತಿ ಬ್ರಹ್ಮನಾದನು ಶೋಧ ಮಾಡಲು ಸಾಕ್ಷಿ ರೂಪನೂ ||2||
ಯೇಕ ದ್ವಂದ್ವ ಮೂರು ನಾಲ್ಕೈದು ತಿಳಿದೂ ಆರನ್ನು ಅಳಿದು
ಜೋಕೆಯಿಂದಲಿ ಯೊಳರೊಡಗಾಡೀ ನೋಡಿ ಕೂಡೀ ಅದರಂತೆ ಆಡೀ
ನಾಕ್ಲೋಕ ಮೀರಿ ಬೈಲಾಟ ನೀಟಾ ಸೋಟಾ ಯಂಟರೊಳು ಕೂಟಾ
ಹಾಯೆ ಎಂಟರೊಳು ಕೂಟ
ಯಾಕೆ ಹೇಳಲಿ ವಂಭತ್ತಾಗಲೂ ಯೇಕ ಸೂನ್ಯದಿ
ಮಾಡ್ವ ಗಣನೀಯಾ ಜೋಕು ಅರಿದರೆ
ವಬ್ಬ ತಾನಿರೆ ಲೋಕ ರಂಜನೆ ತೋರಿತೆಂಬಗೇ ||3||
ಆರು ಕರ್ಮಾ ಮೀರಿದ ಜ್ಞಾನಾ ಖೂನಾ ಧ್ಯಾನಾ ಕೇವಲ ಮೌನಾ
ಶೇರಿ ವುನ್ಮನಿ ಚಿನ್ಮಾತ್ರದಿರವೂ ಅರವು ಮರವೂ
ಯರಡಳಿದ ಪರವೂ ಕಾರ್ಯ ಕಾರಣ
ಮೀರಿದಾನಂದಾ ಚಂದಾ ದುಂದಾ ತೋರಿಕೆ ಸುಳ್ಳೆಂದಾ
ಹಾ ತೋರಿಕೆ ಸುಳ್ಳೆಂದಾ
ಪಾರ ಮಹಿಮಾ ಹೇಕಬ್ರಹ್ಮದ ಸಾರವರಿದು ಸಾಕ್ಷಿಯಾದ
ಧೀರ ಗುರುವಿನ ಹೊಂದಿ ತಾನೇ ಪೂರ್ಣನಾಗಿ ನಿಂದ್ರಬಲ್ಲ ||4||
ಕಾಲ ಕರ್ಮಾತೀತ ತಾನೆಂದೂ ಅಂದೂ ಯಿಂದೂ ಯೆಂದೆಂದು ಅಂದು
ನಾಲ್ಕವೇದಾರು ಶಾಸ್ತ್ರದಿ ಓದೀ ಬೆದಿಸಿದವನಾದಿ
ಕೀಲು ಸರ್ವ ಬ್ರಹ್ಮನದಾಟ ತಾಟಾ ನೀಟಾ ಅರಿಯದೆ
ಭವದಾಟಾ ಹಾ ಅರಿಯದೆ ಭವದಾಟಾ
ಮೂಲ ತಾ ನೆಲೆ ಮೂರುಲಾಗಿಹ ಲೋಲ ಅಡವಿಯ ಸಿದ್ದಲಿಂಗನೆ
ಜ್ಯಾಲ ನಿರುಪಾಧಿ ತನ್ನದು ಆಲಯವ ನಾನೇನು ವರ್ಣಿಪೇ ||5||
ಪರಮ ಗುರುವರ ನೀನೂ
ನೋಡಿದೆನು ನಾ ನಿನ್ನ ಗುರು ಬಂಧು ಯಂದು
ಹಾಡಿದೆನು ಸಂಪನ್ನಾ ಸಲಹೈಯ್ಯಾ ಯನ್ನಾ
ಪೀಡಿ ಸಂಸಾರ ಬಹಳ ಬಗಿಯಲಿ
ಕಾಡುವದು ಯಿದಕೇನು ಗತಿಯಿಂದ್ಹೇಡಿಗೊಂಡಾ
ಮನ ಮನಕೆ ಧೈರ್ಯವ ನೀಡಿ ನಿಜ ಸುಖವ ಮಾಡು ಸಿದ್ದನೇ ||ಪ||
ವಡಿಯ ನಿನ್ನಯ ಮೂರ್ತಿ ದೇಶದೊಳು ನಾಮದ
ಸಡಗರವು ಸಂಪೂರ್ತಿ ತುಂಬಿಹುದು ವಾರ್ತಿ
ಮೃಢನು ಈತನು ಶ್ರೇಷ್ಠ ಶಿವನೆಂದಡಿಗಡಿಗೆ ನುತಿಸುವುದು ಕೇಳತಾ
ಅಡಿಯ ಧ್ಯಾನದಿ ಬಂದು ಕಂಡೆನು
ಇಡು ಕರುಣ ಕಾಯ ಇರುವ ಪರಿಯಲಿ ||1||
ಕಾಲ ಕಾಲ ದೇವಾ ಶಿವ ಶರಣನೆಂದು
ಹೇಳುವತಿ ನುಡಿ ಭಾವ ಸರ್ವರನು ಕಾವಾ
ಕೀಲುಯಿಲ್ಲದೆಯಂದು ಶೃತಿ ನಿಜ ಲೀಲವರಿತೆನು ದರುಶನಾಗಲು
ಮೂಲಯಿವನೆಂತೆಂದು ಕಂಡಾ
ಆಲಯವ ನಾನೇನು ವರ್ಣಿಪೇ ||2||
ಪರಮ ಗುರುವರ ನೀನೂ ಅಂಕಲಗಿ ಮಠದೊಳು
ಹರುಷವತಿ ಸುರಧೇನು ನಾನಾಡಲೇನೂ
ಅರವು ಮರವಿಯ ನೋಡದಲೇ ಯನ್ನಾ
ಶರೀರ ಸುಖ ದುಃಖ ನೋಡಿ ರಕ್ಷಿಸು
ಚರಣ ಧೂಳಿಯು ಬೇರೆ ಅಲ್ಲವು ನಿರುಪಾಧಿಯೇ ನೀ ಅಡವೀಪಾಶ್ಚನೆ ||3||
ಪರ ಶತ್ರುಗಳ ಭಯ
ಗುರುಬ್ರಹ್ಮಾ| ಸರ್ವರಿಗೂ ಶ್ರೀ| ಗುರು ಪರಬ್ರಹ್ಮಾ ||ಪ||
ಗುರುವೇ ಸಾಕ್ಷಾತ್ ಬ್ರಹ್ಮನಲ್ಲದೆ ಬೇರಿಲ್ಲ|
ಪರತತ್ವವೆಲ್ಲ ಪ್ರಕಾಶ ಮಾಡವನಾಗಿ ಗುರು ಪರಬ್ರಹ್ಮಾ ||ಅ.ಪ||
ಭವ ಬೀಜವ ಸುಡುವ| ಇಷ್ಟಾರ್ಥವ| ಜವದಿ ಪಾಲಿಸುವ|
ಶಿವ ಪಂಚಾಕ್ಷರಿ ಮಂತ್ರಗೌಪ್ಯದಿಂದರುಹುತೆ
ನವವಿಧ ಭಕ್ತಿಯ ರಸದಿ ಮುಳುಗೆಂಬುವ| ಗುರು ||1||
ನರಲೋಕ ಸುಖವು| ಭೋಗ ರೋಗ| ದುರಿತ ಭಯವು|
ದುರುತ ಭಯವು| ವರಯಿಂದ್ರ ಪದವಿಯು| ಪರಶತ್ರುಗಳ ಭಯ|
ಪರಶತ್ರುಗಳ ಭಯ|
ವುರು ವೈರಾಗ್ಯೊಂದೇ ನಿರ್ಭಯವೆಂದು ಭೋದಿಪ| ಗುರು ||2||
ಆಲೆಯ ನಿಲಿಸೀ| ಅಜ್ಞಾನದ ಮೂಲವ ಕೆಡಿಸಿ|
ನಿಲ ತೋಯದ ಮದ್ದ್ಯ ಆಪೊ ಜೋತಿಯನು|
ಲೀಲೆಯಿಂ ತಾರಕ ತ್ರಯದಿ ಸೂಚಿಸುವಂತ| ಗುರು ||3||
ಧರೆ ಮೊದಲಾದ ಭೂತಗಳಿಂದ
ವಿರಚಿತಮಾದ ನೆರೆ ಪಂಚವಿಂಶತಿ| ತತ್ವಸಂಕುಳವೆಲ್ಲಾ
ವರಸಾಂಖ್ಯ ಯೋಗದಿ ವಿವರಿಸಿ ಹೇಳುವ| ಗುರು ||4||
ಮರವೆಯ ತೇಗಿಸೀ| ಬ್ರಹ್ಮಜ್ಞಾನ| ದರುವಿನೊಳಿರಿಸೀ|
ಗುರು ಮಹಾ ಅಡವೀಶಿದ್ದನೆ ನೀನೆಂದರುವಿತ್ತು|
ವುರುತರದ ಮನಸ್ಕ ಮುದ್ರೆ ಸೂಚಿಸುವಂತ| ಗುರು ||5||
ಪರದೇವಾ ಪರುಷದ ಖಣಿಯೇ
ಪರಿಪರಿಯ ಹೊಗಳಲಾರೆನು ಅಡವೀಶನಾಟ
ಗುರುತು ಬಲ್ಲವರು ತಿಳಿವರು ಸಾಕ್ಷತನ ಲೀಲಾ ||ಪ||
ಕುಂದರ ನಾಡಿನೊಳಗಿಹ ಕೋಮಲ ಮೂರ್ತಿ
ಚಂದ ಕಾಣುವದು ನೋಡಲಿಕೆ ಸಾಕ್ಷಾತನ ಲೀಲಾ
ಸಂದೇಹ ಬೇಡಿ ಪ್ರಭುಯೀತಾ ಬಂದಂತ ಕುರುಹು
ನಿಂದ್ಯ ಪ್ರಾಣಿಗಳರಿಯರೂ ಸಾಕ್ಷಾತನ ಲೀಲಾ ||1||
ವಸ್ತು ರೂಪನೆ ಓಂಕಾರ ಬೀಜಾಕ್ಷರಾ
ಮಸ್ತಲಿದ್ದವರ ಸಂಹಾರ ಸಾಕ್ಷಾತನ ಲೀಲಾ
ವಿಸ್ತಾರ ಪೂರ ಶೃಂಗಾರ ನೀ ಪಾರಾವಾರ
ಅಸ್ಥಿಯಂದವರ ವುದರ ಸಾಕ್ಷತನ ಲೀಲಾ ||2||
ಕೋಮಲ ಮೂರ್ತಿ ಶಂಕರನೂ ತಾನೆ ಕಿಂಕರನೂ
ಸೋಮ ಸೂರ್ಯಾನ್ನೇತ್ರನೇ ಸಾಕ್ಷಾತನ ಲೀಲಾ
ನಾಮರಹಿತನೇ ನಿಜ ಗುರುವೆ ನಾನಾ ಚಮತ್ಕಾರ
ಸೀಮೆರಹಿತನೆ ನಿಶ್ಯೀಮಾ ಸಾಕ್ಷಾತನ ಲೀಲಾ ||3||
ದೇವ ದೇವೇಶ ಸರ್ವೇಶ್ಯಾ ಜಗದೊಳಗೆ ಬಂದು
ಭಾವ ವಂದಕ್ಕೆ ವಲಿವನು ಸಾಕ್ಷಾತನ ಲೀಲಾ
ಕೇವಲ ಕೀರ್ತಿ ಪ್ರಖ್ಯಾತಾ ನಾ ತೊತ್ತು ನಿನಗೇ
ಆವ ಕಾಲದಲಿ ಕಾಯುವದು ಸಾಕ್ಷಾತನ ಲೀಲಾ ||4||
ಪರದೇವಾ ಪರುಷದ ಖಣಿಯೇ ರಾಜ್ಯಕ್ಕೆ ಧೊರಿಯೇ
ಚರಣ ಕಿಂಕರನು ನಾನೈಯ್ಯ ಸಾಕ್ಷಾತನ ಲೀಲಾ
ಗುರುಲಿಂದ ಜಂಗಮಾದವನೇ ಗತಿಮತಿಗೆ ನೀನೇ
ಹರಣ ಭಾರವು ನಿನ್ನದು ಸಾಕ್ಷಾತನ ಲೀಲಾ ||5||
ಅಕಲಂಕ ಮಹಿಮಾ ಆನಂದಾ ಆದಿ ಮಾರುತಿಯೆ
ಸುಖದುಃಖ ನಿನ್ನ ಚೇತನವು ಸಾಕ್ಷಾತನ ಲೀಲಾ
ಮುಕುತಿಗೊಡೆಯನೆ ಮಹಾದೇವಾ ಯೇನನೂ ಅರಿಯೆ
ಯುಕತೀ ನಿನ್ನನು ತಿಳಿಯಲಿಕೆ ಸಾಕ್ಷಾತನ ಲೀಲಾ ||6||
ಜಯ ಮಹಾದೇವ ಸಾಂಬಶಿವ ಸಗುಣ ನಿರ್ಗುಣನೆ
ಭಯಹರ ಭಕ್ತ ಪೋಷಣ ಸಾಕ್ಷಾತನ ಲೀಲಾ
ಪ್ರಿಯವಾದ ರೂಪು ನಿರೂಪು ನೀನೇ ಸರ್ವೆಲ್ಲಾ
ನಯನ ಮಾನಸಕೆ ನಿಲ್ಕದವನೇ ಸಾಕ್ಷಾತನ ಲೀಲಾ ||7||
ನಮೋಯೆಂಬೆ ಆದಿ ಅನಾದಿ ನೀನೇ ಮಹದಾದಿ
ನಮೋಯೆಂಬೆ ನಾನಾ ರೂಪಕನೆ ಸಾಕ್ಷಾತನ ಲೀಲಾ
ನಮೋಯೆಂಬೆ ನಾನು ಅನಾಥ ನೀ ಅಂತಃಕರುಣಿ
ನಮೋಯೆಂಬೆ ನಿತ್ಯ ನಿತ್ಯದಲೀ ಸಾಕ್ಷಾತನ ಲೀಲಾ ||8||
ತ್ರಾಹಿ ನಾ ನಿನ್ನ ಸೇವಕನು ಯೆನ್ನೊಡೆಯ ನೀನೇ
ತ್ರಾಹಿ ಸರ್ವೇಣಾ ಮಾಂ ಪಾಹಿ ಸಾಕ್ಷಾತನ ಲೀಲಾ
ತ್ರಾಹಿ ನಿರುಪಾಧಿ ಅಡವೀಶಾ ಅಂಗಲಗಿ ವಾಸಾ
ತ್ರಾಹಿ ಅಪರಾಧವ ಕ್ಷಮಿಸುವದು ಸಾಕ್ಷಾತನ ಲೀಲಾ ||9||
ಪರಮ ಶ್ರೀಗುರು ಮಾರುತೀ
ಪರಮ ಶ್ರೀಗುರು ಮಾರುತೀ| ನಿನ್ನಯ ಮಹಾ
ಬಿರದೀನ ಮಗನು ನಾನು
ಕರುಣವಿರಲೈ ಘಟವು ಯಿಹಪರಿ
ಹರನ ನಾಮದಿ ಮೆರೆಯಂದ್ಹಾಡಿದಾ
ಕುರುಹಿಗೆಯು ಕೊರತಿರದೇ
ಕಡಿಯಲಿ ಚರಣದೊಳು ಐಕ್ಯವನು ಮಾಡಿಕೋ ||ಪ||
ಕಾಲ ಕಾಲದಿಂದಲೀ| ನಿನ್ನಗೆ ನಾನು
ಬಾಲನಾಗಿಹ ಕಾರಣಾ| ಲೀಲವ ಹೊಗಳುವೆನು
ತಿಳಿದು ನೋಡೋ| ಬಾಲ ಚಂದ್ರಾಧರನೇ
ಮೂಲ ನೀನೆಲೆ ಮೂರು ಲೋಕಕೆ|
ಜ್ಯಾಲಮಾಯವ ತುಂಬಿ ನಿಜ ಸುಖ
ಆಲಯದಿ ನೀನಿರುತಿ ಅರಿತೆನು ಕಾಲ ಕರ್ಮಾ ಹರಿಯೋ ಪತಿತನೇ ||1||
ಕೊಡು ಸುಖಮಯ ಸಾಧನಾ| ತನುವಿಹಪರಿ ಯಿಡು ನಿನ್ನ ಸ್ಮರಣೆಯೊಳು
ಬಡವನ ಭಾಗ್ಯದಲೇ ಸಾಧುರ ಸಂಗ ಬಿಡುಗಡಿಲ್ಲದೆ ನಡೆಸೂ
ಪೊಡವಿ ಜನಗಳ ಬೇಡಲಾರೆನು| ಅಡಿಯ ಧ್ಯಾನವು ಅರ್ಥಿ ಕಾಣ್ವದು ವಡಿಯ ನೀನೈ
ನಾನು ಸೇವಕ ಬಿಡದೆ ರಕ್ಷಿಸೋ ಭಾರ ನಿನ್ನದು ||2||
ಜನರರಿಯರು ನಿನ್ನಯಾ ಗುಪ್ತ ಲೀಲಾ| ಘನವರಿತಾಡುವರೂ
ಘನ ಗುಣಗಳು ಬಲ್ಲರೂ| ನೀ ಬಂದಂಥಾ ಚಿನುಮಯ ಚಿದ್ವಿಲಾಸಾ ಘನಕೆ ಘನಕೆ
ಘನವಾದ ಮಹತ್ಮೆಯ| ಸುನಯಾಸದಿ ನೀ ನುಡಿಸಿದಂದದಿ ತನು ಮನವು ನಿನದೆಂದು
ಸರ್ವಧಾ| ವಿನಯದಿಂ ಕೊಂಡಾಡಿದೆನು ಹರಾ ||3||
ನರಕ ಸ್ವರ್ಗವನು ವಲ್ಲೇ| ಈ ಜಗದೊಳು ಧೊರಿತನ ಕಿರಿತನವು
ಬರೆ ಕಷ್ಟವಲ್ಲದಲೆ ನಿನ್ನ ದಿವ್ಯ| ಚರಣ ಸ್ಮರಣೆ ಸಮವೇ
ಬರಿದೆ ಆರು ಕರ್ಮ ಫಲವದು ತರುವದೈ| ಮರಳಿ ಮರಳಿ ಜನನಕೆ ಹರುಷ ನಿನ್ನಯ
ತೇಜ ಜ್ಞಾನದ| ಗುರುತಿನೊಳು ಮೈಮರವದುತ್ತಮಾ ||4||
ದೇವಾ ಅಂಕಲಗಿ ವಾಸ ಅಡವಿಸಿದ್ಧಾ| ಜೀವ ಶಿವನು ನೀನಾದಾ
ಓವಿ ಅರಿದವನೆ ಮುಕ್ತಾ| ಜನ್ಮವು ನಾಸ್ತಿ ಸಾಹು ಹುಟ್ಟುಗಳಿಲ್ಲವೂ ನೋವು ಸಂಕಟ
ಹೋಗಿ| ಆನಂದಾವ ಕಾಲದಿ ಮೆರೆವ ನಿಜ ನಿಜ ನೀವು ಹೇಳಿದ ಪೂರ್ಣ ಬೆಳಕಿನ|
ಭಾವದೊಳು ನಿರುಪಾಧಿ ಯೆನಿಸುವಾ ||5||
ಪೊರೆಯೊ ಯನ್ನ ಕರುಣಾಕರನೇ
ಪೊರೆಯೊ ಯನ್ನ ಕರುಣಾಕರನೇ ಚರಣ ಧೂಳಿಯೋ
ನಾನು ಮರೆಯ ಹೊಕ್ಕೆ ಪೂರ್ಣಬ್ರಹ್ಮ ನಿತ್ಯ ಮುಕ್ತಿಯಲೀ ||ಪ||
ಆನೆ ಕಡೆಯು ಇರುವೆ ಮೊದಲು ನೀನೆ ನೋಡಿದರೇ ಇಹುದು
ನೀನೇ ಇಲ್ಲದಿರಲೂ ಇಲ್ಲಾ ತಾನೆ ಶಿವ ನಿಜವೂ
ಮೌನಿ ನಿನ್ನ ಲೀಲದಾಟಾ ಸ್ವಾನ ಬಲ್ಲದೇ ಮರವೆ
ಜ್ಞಾನ ಹೀನ ಜನಗಳೆಲ್ಲಾ ತನ್ನ ಬಲ್ಲಾರೇ ||1||
ಘಟಕೆ ನೇತ್ರ ಸಾಕ್ಷಿ ಹ್ಯಾಗೊ ಕುಟಿಲ ಕಾಣಲಿಕೇ ತಾನೇ
ಕುಟಿಲ ದರ್ಪಣವು ತಿಳಿಯೆ ಸ್ಫಟಿಕ ಮಣಿಯಂತೆ
ಘಟವ ನೋಡುತಲಿ ತಮ್ಮಾ ಹಟದ ಪರಿಯಂತೆ ಗುರುತು
ನಿಟಿಲಾಕ್ಷಿವನೂ ಶಿವಯೋಗೀಶಾ ಸಟೆಯಲ್ಲೆ ದೇವಾ ||2||
ತನ್ನಾಭಜಿಸಿ ತನ್ನ ತಿಳಿದು ತಮ್ಮ ಬಲ್ಲವಾಗಿ ನಿನ್ನಾ
ಯನ್ನುತಿಹನು ಶಿವನು ಈತಾ ಸರ್ವರಾಧಾರಾ
ಭಿನ್ನ ಭಾವಿ ಕರ್ಮಿ ಜನರೂ ನಿನ್ನ ಕಾಣುತಲೀ ಯಾರೋ
ಯನ್ನ ಮನಕೆ ತೋಚದೆಂದು ಅನುವಾ ನುಡೀ ||3||
ನೀನೆ ಮನಕೆ ತಂದು ಯನ್ನ ಮಾನ ಅಭಿಮಾನಾ
ಆನೇನು ಹೇಳಲಯ್ಯ ಭಕ್ತಿಕಾಯ ತಾಳೀದೀ
ಸ್ವಾನುಭಾವಿ ಅಡವಿಸಿದ್ಧಾ ತಾನೆ ನಿರುಪಾಧಿವೇದ
ಖೂನವಾದ ಗೌಪ್ಯ ನುಡಿಯಾ ನುಡಿದೇ ನುಡಿದಂತೆ ||4||
ಮರ್ತ್ಯದೊಂದು ಮುಂದೆ ತಿಳಿದೂ ಗುರ್ತು ಕಾಣಿಸಿತೂ ಪೂರ್ವಾ
ಕರ್ತಲೋಚನಾದಂತೆ ಅಣುವ ಮರ್ತು ಹಾಡಿದರೂ
ಅರತು ಅರಿದ್ಹಾಡಿದಂಥಾ ಗುರ್ತು ನೀನಯ್ಯಾ ದೇವಾ
ಕರ್ತು ನೀನು ಅಡವಿಸಿದ್ಧಾ ಕರ್ತು ನಿರುಪಾಧಿ ||5||
ಬಸವಂತನ ಹಬ್ಬಾ ದುಂದುಮೆ
ಬಂತು ಬಾರೊ ಬಸವಂತನ ಹಬ್ಬಾ ದುಂದುಮೆ ||ಪ||
ಅಡವೀಶ ಆಡುವ ಲೀಲವ ಕೇಳಿ
ಸಡಗರ ಸೌಖ್ಯದಿಂದಲಿ ಬಾಳಿ
ತಡವಿಲ್ಲ ದಿನಗಳು ಅರುವು ತಿಳಿಯಬೇಕು
ವಯಡಿನ ಬಿಟ್ಟರೆ ಗತಿಯಿಲ್ಲವಣ್ಣ| ದುಂದುಮೆ ||1||
ಭಕ್ತಿ ಮಾರ್ಗದ ಮುಕ್ತಿಯ ತಿಳಕೊಂಡು
ಶಕ್ತರಾಗಬೇಕು ಗುರುಪಾದಕೇ
ಫೋಕ್ತು ನಿಲ್ಲುವಂತ ಹಾದಿ ತಿಳಿಯಬೇಕು
ಮುಕ್ತಿ ಮಮಾರ್ಗ ತೋರಲಿ ಬಂದನಣ್ಣ| ದುಂದುಮೆ ||2||
ಸೌಮ್ಯ ಮೊದಲು ಸಾಧಾರಣ ದಿನ ಬಂತು
ಕಮ್ಮೈದ ಗುಣಗಳ ಕಡಿಯಬೇಕು
ಹಮ್ಮು ಕ್ರೋಧ ಲೋಭ ನಾಶವಾಗಿ ಮುಂದೆ
ವಮ್ಮನವಾದರೆ ವಳಿತಾದಿರಣ್ಣ| ದುಂದುಮೆ ||3||
ಗರ್ವ ಬಿಡಲೀ ಬೇಕು ಕರ್ತನಾಟ ಬಂತು
ಇರಲಿಕ್ಕೆ ದಿನವಿಲ್ಲ ಅಸ್ಥಿರವೂ
ಅರುವಿಲೆ ಆನಂದ ಗುರುತಿಗೆ ಮುಟ್ಟಿರಿ
ಧರೆಯಾಟ ಸಮೀಪ ಮರಿಬೇಡಿರಣ್ಣ| ದುಂದುಮೆ ||4||
ಸುಖದ ಇಚ್ಛೆಗೆ ನೀವು ಮನವಿಡಬೇಕು|
ಅಕಲಂಕ ಆತ್ಮದೋರುವ ಸತ್ಯವು
ಲಕಲಕ ಗುರುವರ ನಿಸ್ಸಂಗ ತಿಳಿಸುವ
ಶಕುಲಾತಿ ವಾಸನ ಹೋಗೋದಂಣ| ದುಂದುಮೆ ||5||
ಆನಂದನಾಗಿ ಆಮೇಲೆ ತೂರ್ಯದಿಂದ
ಸ್ವಾನುಭಾವದ ಮದವೇರುವದು
ಯೇನು ಹೇಳಲಿ ತೂರ್ಯತೀತದ ಸುಖವನ್ನು
ಜ್ಞಾನಿಯೆನಿಪ ಮುಕ್ತಿಪರ ಕೇಳಿರಣ್ಣ| ದುಂದುಮೆ ||6||
ಶ್ರವಣವೆ ಬೀಜ ಮೂರು ಜ್ಞಾನ ತಿಳಿಯಲಿ
ಸುವಿವೇಕವಾಗೋದು ಸೂಕ್ಷ್ಮದಿಂದ
ವಿವರಿಸೆ ಮೂಲ ಮೇಲು ಕಾಲಜ್ಞಾನವು
ಸವನಿಶಿ ತನ್ನ ಕಾಂಬುವದಣ್ಣಾ| ದುಂದುಮೆ ||7||
ಈ ಕಾರ್ಯಕ್ಕಾಗಿ ಬಂದನು ಅಡವೀಶನು
ಜೋಕೆಯಿಂದಲಿ ತಿಳಿದರೆ ಸುಖವೂ
ಯೇಕಮೇವಾತ್ಮೆಂಬ ಬಿರದು ಧರಿಸಿ ಬಂದು
ಲೋಕೇಶ ಈತನು ನಂಬ ಬೇಕಣ್ಣ| ದುಂದುಮೆ ||8||
ಆದಿ ಶರಣನು ಬಂದಾ ಅನ್ನದಾನಿಯು ಬಂದಾ
ಶೋಧನ ಮಾಡಿರಿ ಮರತು ನೀವು
ಘಾಸಿಯಾಗುವದೇಕೆ ಘಟ ಸ್ವಲ್ಪು ಆಯುಷ್ಯ
ಭೇದಿಸಿ ನೋಡಿರಿ ಸುಖವಾದಿತಣ್ಣ| ದುಂದುಮೆ 9||
ಮೂರು ಅಕ್ಷರದಾತಾ ನಾಲ್ಕಕ್ಷರಕೆ ಬಂದಾ
ಸಾರಜ್ಞರರಿವರು ಸಂಜ್ಞೆಯನ್ನು|
ಧೀರತನ ಗರ್ವ ಮಾಡಲು ಕೆಟ್ಟೀರಿ
ಮಾರಹರನು ಅಡವೀಶ ಕೇಳಿರಣ್ಣ ದುಂದುಮೆ ||10||
ಕುಂದರ ನಾಡೊಳು ಬಂದವುತ್ತುಂಬಿ
ಹೋದಾನು ತಾನೇಕ ಜನರ ಸಂಗಾ
ತಂದೆ ಈತನೆಂಬೋ ಗುರುತಿನ ಭಕ್ತರು
ತಂದಾರು ಬೈಲಿಗೆ ಸಾಕ್ಷಾತನಣ್ಣ| ದುಂದುಮೆ ||11||
ಕಾರ್ಯ ಕಾರಣವನ್ನು ತಿಳಿಯಗೊಡದಲೆ
ತೂರ್ಯಾತೀತಾವಸ್ಥೆಯೊಳು ನಿಂತಿಹ
ಪ್ರೇರ್ಯ ಪ್ರೇರಕತ್ವ ಎರಡಾಗಿ ಹೊರಗಾಗಿ
ಸೂರ್ಯ ಕೋಟಿ ಪ್ರಭೆ ಶಿವಯೀತನಣ್ಣ| ದುಂದುಮೆ ||12||
ಶಿವಶಿರಿಯಲ್ಲಿ ವೈರಾ ವರ್ಗ ಇಲ್ಲೆಂದು
ಸುವಿವೇಕ ವೇದ ಆಗಮದೊಳಗೆ
ವಿವರಿಸೆ ಅಡವೀಶಾ ಇರುವಂಥ ಸ್ಥಳದಲ್ಲಿ
ಕವಲಿಲ್ಲ ಯೇಕದಿಂ ಸಾಗುವದಣ್ಣ| ದುಂದುಮೆ ||13||
ಇದರಂತೆ ತಿಳಕೊಂಡು ನಂಬಲಿಬೇಕು
ಚದುರಾದ ಜ್ಞಾನ ಪುರುಷರೆಲ್ಲ ಮರವು
ಹೋದರ ಮಹಾಗುರುವು ವಲಿವನೆಂದು
ವಿಧವಿಧವಾದ ವೇದ ವಾಕ್ಯವಣ್ಣ| ದುಂದುಮೆ ||14||
ಚ್ಯಾಟಕತನಗಳು ಬಿಡಬೇಕು ಮುಂದೆ
ನೀಟಾಗಬೇಕು ಭಕ್ತಿಯ ಮಾರ್ಗಕೆ
ಕೋಟಲೆ ಕಳೆವಾನು ಭವ ಭವ ತಿರುಗುವ
ಪಾಟ ಕೆಡಿಸಲಿಕ್ಕೆ ಅಡಿವೇಶನಣ್ಣ| ದುಂದುಮೆ ||15||
ಈತನ ಆಟದ ರೀತಿಯು ತಿಳಿಯದು ಜನಕೆ ಕೋತಿ
ಮನುಜರರಿವರು ಸಾಂಬನ
ಪ್ರೀತಿ ಇಟ್ಟರೆ ಮೋಕ್ಷ ಸಾಧನ ತೋರುವಾ
ನಾಥ ಅಡವೀಶನೆ ಶವ ನಂಬಿರಣ್ಣ| ದುಂದುಮೆ ||16||
ನಾಮ ರಹಿತ ನಿಶೀಮ ಬಂದ ಗುರುತು
ಕಾಮ್ಯ ಕರ್ಮಗಳು ಎಂದೆಂಬುವಾ
ಭೂ ಮಯ ಜನರಿಗೆ ಮಾರ್ಗ ತೋರಲಿ ಬಂದ
ಕಾಮ ಸಂಹರ ಸಾಧು ಬಿಡ ಬೇಡಿರಣ್ಣಾ| ದುಂದುಮೆ ||17||
ಜಗದಿ ಅಡವಿ ಬಂದ ತಾನು ತಾನಾಗಿಯೆ
ಅಘಹರ ಅಡವೀಶ ಯನಿಸುತಲೀ
ನಿಗಮ ವೇದ್ಯನೀತ ನಿರುತದಿಂದಲಿ ಬಂದಾ
ಸುಗುಣತನದಿ ತಿಳಿದರೆ ಸುಖವಣ್ಣ| ದುಂದುಮೆ ||18||
ಛಪ್ಪನ್ನ ದೇಶಕ್ಕೆ ನಾಮಾದ ಪ್ರಭುವು
ಅಪ್ಪ ಅಡವೀಶ ಆದಿಯ ಸಿದ್ಧನ ಎಂದು
ಮೋದದಿ ನುಡಿವರು ಕೇಳಿ ಕಂಡು ತಿಳಿದೂ
ವಪ್ಪವಿಟ್ಟೆನು ಕೇಳಿ ಬಿಡಬೇಡಿರಣ್ಣ| ದುಂದುಮೆ ||19||
ಸ್ಥಿರವಿಲ್ಲ ಕಾಯವು ನೀತಿಯ ತಿಳಿಯಲಿಬೇಕು
ಖಾತರಿ ಇದು ಎಂದು ತಿಳಿದಿಲ್ಲವೊ
ಮರತು ಕೆಡಲಿಬ್ಯಾಡ ಬಹುಜನ್ಮ ಬರಬೇಡಾ
ತರಗಬ್ಯಾಡರಿ ಕ್ಷೇತ್ರ ಇದೆ ನಂಬಿರಣ್ಣ| ದುಂದುಮೆ ||20||
ಬೇಡಿದ ವರಗಳ ನಡೆಸುವನೀತಾ
ಕಾಡನು ಬೇಡನು ತಾ ಕೊಡುತಿಹನು
ನಾಡ ಜನರ ನುಡಿ ಗುರು ಕೊಡುವನು ಎಂದು
ಆಡುವ ವಚನವ ಸರಿ ನೋಡಿರಣ್ಣ| ದುಂದುಮೆ ||21||
ಶ್ರೇಷ್ಠ ಲೋಕದೊಳು ಈತನೇ ನಿಶ್ಚಯಾ
ಭ್ರಷ್ಟಾಗಬೇಡಿರಿ ಮರತು ನೀವು
ನಿಷ್ಠೆಯಿಂದಲಿ ಅಡವೀಶನ ಧ್ಯಾನವ
ಬಿಟ್ಟರೆ ಕೆಟ್ಟೀರಿ ಬಿಡಬೇಡಿರಣ್ಣ| ದುಂದುಮೆ ||22||
ಧರ್ಮ ತಿಳಿಯಬೇಕು ದಾರಿದ್ರ್ಯ ದಿನಮಾನ
ಕರ್ಮಿಗಳಿಗೆ ಕೇಡು ಬಂದಿತೆಂದು
ನಿರ್ಮಳ ಗುರುವರ ಅಡವೀಶ ಬಂದಂಥ
ಮರ್ಮವ ತಿಳಿದರೆ ವಳಿತಾದಿರಣ್ಣ| ದುಂದುಮೆ ||23||
ಅರವು ಮರಿಯಬ್ಯಾಡ್ರಿ ಅಂಕಲಿನಾಥನು
ಗುರುವರ ಪರತರ ಶಂಕರನೂ
ವರದ ವಾಕ್ಯವ ನಂಬಿ ಗಾಡಿಕಾರ ಪ್ರಭು
ಪರಿಪರಿ ಮಹತ್ವ ಗುರುತ್ಹಿಡಿರಣ್ಣ| ದುಂದುಮೆ ||24||
ಬರೆ ಮಾತು ಅಲ್ಲ ಗುರುಹಿರಿಯರ ವಾಕ್ಕು
ಅರಿತು ನಿರುಪಾಧಿಯ ಪೂರ್ಣವನ್ನು
ಪರಮ ಸಂತೋಷದಿ ಗುರುತಿಗೆ ತಂದರೆ
ಕರಕರೆ ನಷ್ಠವು ಬಹು ಸುಖವಣ್ಣ| ದುಂದುಮೆ ||25||
ಬಸವ ನಾಮದ
ಬಸವಿಯಾದರೆ ಮೋಕ್ಷ ವಸುಧೆಯೊಳಗೇ
ಬಸವ ನಾಮದ ಮಾದ್ರಿ (ಮದಿರ) ಬಟ್ಟಲನು ಹೊತ್ತು ||ಪ||
ಬಟ್ಟಲನು ಹೊರುವದಕೆ| ಬಹು ತರದ ಗುಣ ಬೇಕು|
ನಿಷ್ಠೆಯಿರಬೇಕು ವಿವೇಕ ಮಿಂಡರೊಳು
ಪೊಟ್ಟುಗುಡುಪ ಮೋಹಕದ ವರಶ್ಯಾರದಿರಬೇಕು
ಗಟ್ಯಾಗಿ ದೈವದ ವಚನದಂತೀರೂ ||1||
ತಂದೆ ತಾಯಿ ಬಂಧು ಬಳಗ ಮರತು
ಪರ ಪುರುಷರನ್ಹೊಂದಿ ಅನ್ಯರು ಇಲ್ಲ ಯೀತನೇ ಘನವೆಂದು
ಸಂದೇಹ ಗುಣವಳಿದು ಸಾಕ್ಷಿ ಬಾಜರದೊಳು
ವಂದರನು ಮಾನವಿಲ್ಲದೇ ತಿರುಗುವಂತಾ ||2||
ನಿರುಪಾಧಿ ಅಡವೀಶ್ಯಾ ನಿಜಲಿಂಗದೊಳು ಕೂಟ
ಬೆರಿಸಿ ಬೇರಿಲ್ಲದಂತೇಕವಾಗಿ
ಪರಿಪರಿಯ ಕಲ್ಪನೆ ಪರ ಪುರುಷನೊಳು ಮನವಿರದೇ
ನೆರೆ ನಂಬಿದಂತವನ ಬಿಡದೇಕ ನಿಷ್ಠೆ ||3||
ಭ್ರಷ್ಟರಾ ಸಂಗದಿಂದ
ಭ್ರಷ್ಟರಾ ಸಂಗದಿಂದ ಕೆಟ್ಟು ಹೋಗೋದಕ್ಕಿಂತ
ಶ್ರೇಷ್ಟ ನಿನ್ನಯ ಪಾದ ನಂಬುವದೇ ಸುಖ ||ಪ||
ಮೂಢಮತಿ ಕೂಡ ಮಾತಾಡಿ ಮೆರೆವದಕಿಂತಾ
ಆಡಲುತ್ತಮ ಜಗಳ ಸುಖನರಾದರೇ
ನೋಡಿ ನಂಬಲು ನಿನ್ನಾ ನಾಡಿನೋಳಗುತ್ತಾಮಾ
ಕೇಡು ಪ್ರಪಂಚ ನಂಬಿ ಕೆಟ್ಟವರುಂಟೊ ||1||
ತಿಂದರೇ ಸಾಯ್ವದು ಹಿಂದಾಗೆ ನೇತ್ರ ನಾಸ್ತಿ
ಮುಂದೆ ನಿನ್ನಗೆ ಕೊಟ್ಟರೆ ದೋಷವೇ ಪ್ರಾಪ್ತಿ
ಯಂದ ವಚನವ ಸೂಕ್ಷ್ಮದಿಂದ ನಡೆದರೆ ಮೊಕ್ಷ
ಕುಂದುಕೊರತೇ ಮನವಿ ನರಕವೇ ಸಿದ್ದಾ ||2||
ತನ್ನ ನುಡಿ ನಂಬಲು ತನ್ನ ಪದ ಸೇರುವಾ
ವುನ್ನತೋನ್ನತವಾಗುವಾ ನಿಜದೊಳಗಾಗಿ
ಚನ್ನ ಶ್ರೀ ನಿರುಪಾಧಿ ಮನ್ನಿಸೊ ಅಡವಿಯ ಸಿದ್ಧಾ
ಕುನ್ನಿ ನಾನೈಯ್ಯ ಸೇವಕಾ ತೊತ್ತಿನಾ ತೊತ್ತು ||3||
ಬುದ್ಧಿಯ ಬಾರದು
ಬುದ್ಧಿಯ ಬಾರದು ಮನಕೆ ಬುದ್ಧಿ ಬಾರದು|
ಸಾಧು ಮಾಡಿ ಶಿದ್ಧ ನಡೆಯೆಯೊಳ್ಯಿದ್ದ ಬ್ರಹ್ಮ ನಾಗುವಂತಾ ||ಪ||
ಗುರುವಿನೊಚನ ಕೇಳಿ ತನ್ನ|
ಅರವು ಗುರುತು ಹಿಡಿದು ನಿತ್ಯ|
ಮರಿಯದಲೆ ತನ್ನ ನಿಜದೀ|
ಬೆರೆತು ವಸ್ತುವಾಗುವಂತಾ ||1||
ಯಿದರ ನುಡಿಯ ಗುರುವಿಗ್ಹಾಡೋ|
ಚೆದುರಗಾರಕೀಯ ಬಿಟ್ಟು
ಸದಮಲಾನಂದವಾಗೋ|
ಮಧುರ ಮುಕ್ತಿಯಾಗುವಂಥಾ ||2||
ಕಠಿಣ ವಾಕ್ಯಗಳನು ಬಿಟ್ಟು|
ಕುಟಿಲತನಗಳನ್ನು ಸುಟ್ಟು
ಹಟವು ಕಳದು ಶಾಂಥ ಗುಣದೀ|
ಘಟವೆ ಲಿಂಗವಾಗುವಂತಾ ||3||
ಸುಳ್ಳು ಮಾತಿನಿಂದ ಕಷ್ಟ|
ಕಳ್ಳ ವಚನ ಮಹಾ ಕನಿಷ್ಟ
ಎಳ್ಳಿನಷ್ಟು ಸುಖವಿಲ್ಲಂತಾ|
ವಳ್ಳೇಬೈಲು ಆಗುವಂತಾ ||4||
ಅಡವಿಸ್ವಾಮಿ ನಿರುಪಾಧೀ|
ಬೆಡಗು ಅಲ್ಲವೆಂದು ತಿಳಿದು
ದೃಢದಿ ನಂಬಿ ಶುದ್ಧವಾಗಿ| ಮೃಢನು ತಾನೇಯಾಗುವಂತಾ ||5||
ಬೇಡುವ ಪದವಿಗಳಾ
ಬೇಡುವನಲ್ಲಿನ ರೂಢಿಯೊಳಧಿಕನು
ನೀಡುವ ಬೇಡುವ ಪದವಿಗಳಾ
ಕಾಡದೆ ಬೇಡದೆ ಕಾಡೊಳು ಮನೆ ಮಾಡಿ
ಗಾಡಿಕಾರ ಪ್ರಭು ಈತನಮ್ಮಾ ||ಪ||
ಅಷ್ಟ ಭೋಗವೀವಾ ಶ್ರೇಷ್ಠಯೀತನೆಂದು
ಯಿಟ್ಟ ಮುಂಡಿಗಿ ಯತ್ತುವರ ಕಾಣೆನು
ನಿಷ್ಠೆಯಿಂದಲಿ ತನ್ನಾ ಮುಟ್ಟಿ ಭಜಿಸುವಗೆ
ಕೊಟ್ಟು ನಡೆಸುವ ತಾ ಬೇಡಿದುದಾ ||1||
ಗುರು ಲಿಂಗ ಜಂಗಮ ಪರ ಮಂತ್ರ ವಿಭೂತಿ
ವರ ರುದ್ರಾಕ್ಷಿ ತೀರ್ಥ ಪ್ರಸಾದವು
ಅರಿಯರು ಅಷ್ಟಾವರಣವೇ ಅಂಗವಾದಂಥಾ
ಗುರು ಸಾಕ್ಷಾತ್ಕಾರ ಸಾಕ್ಷೀ ರೂಪಾ ||2||
ಹೊನ್ನು ಮೊದಲು ಹೆಣ್ಣು ಕಡಿಯಾಗಿ ಸಕಲವು
ಚನ್ನಾಗಿ ಕೊಡುತಿಹ ಹೊಂದಿದರೇ
ಪನ್ನಗಭೂಷಣ ಪರಮಾತ್ಮಯಿವನೆಂದು
ಎನ್ನುತ ಡಂಗುರ ಸಾರಿದೆನೆ ||3||
ಕುಲ ಹದಿನೆಂಟು ಜಾತಿಯು ಬರುವದು
ಮಲಹರ ಮಹದೇವ ಮಹದಾದಿಯಾ
ಲಲಿತ ಲೀಲೆಯನ್ನು ಹಾಡುವ ಕಲಿಯುಗ
ಭಲರೆ ಭಲರೆಯಂದು ಕೊಂಡಾಡ್ವರೂ ||4||
ಛಪ್ಪನ್ನ ದೇಶದಿ ಈತನ ಪ್ರಭೆ ತಾನು
ತಪ್ಪದೆ ನುಡಿವರು ಕಂಡು ಕೇಳೀ
ವಪ್ಪವಿಚ್ಚೆನು ತೊತ್ತು ನಿರುಪಾಧಿ ಅಡವೀಶ
ಅಪ್ಪ ಜೀವಿಗಳನು ರಕ್ಷಿಸುವಾ ||5||
ಬೇಗ ಬನ್ನಿ
ಬೇಗ ಬನ್ನಿ ಕಾಯಿಯಂದು ಬೇಡುವ ಬಯಕೇ
ಯೋಗಿ ಯನ್ನಯ ದೋಷ ಹೀರಿಕಾಯಿ ||ಪ||
ನಿತ್ಯ ನಿರ್ಗುಣ ನೀನೆ ಮೌಕ್ತಿ ಕಡಲೆಕಾಯಿ
ಸತ್ಯ ಸದ್ಗುಣದಾ ಕಾರೆಕಾಯೀ
ಯತ್ತ ಹೋದರೆ ಬೀಡದೇ ಯನ್ನ ಹೆಸರಕಾಯಿ
ತೊತ್ತು ಯನುತಿಹನು ನಾ ನಿಂಬೆಕಾಯಿ ||1||
ಭೂ ಲೋಕದೊಳು ಇಲ್ಲ ನಿನ್ನ ಸವತೆಕಾಯಿ
ಕಾಲ ಕಾಲದಿ ಬಿಂದು ಪಡುವಲಕಾಯಿ
ಲೀಲದಾಟವ ತೋರಿ ಯನ್ನ ಹತ್ತಿಕಾಯಿ
ಕೀಲ ನಿನ್ನದು ಸಕಲ ಬಾಳೆಕಾಯಿ ||2||
ನಿನ್ನ ನಂಬಲು ಕರ್ಮವಡದು ವಿಸರಿಕಾಯಿ
ಮನ್ನಿಸೋ ಅಡವೀಶ್ಯಾ ತಾ ಪೋಸ್ತಕಾಯಿ
ಚನ್ನ ನಿರುಪಾಧಿ ಯನ್ನಲ್ಲಿ ನೀರಲಕಾಯಿ
ಕುನ್ನಿ ನಾನೈಯ್ಯಾ ಸದಾ ನೇಮಿಕಾಯಿ ||3||
ಭವ ರೋಗ ವೈದ್ಯ
ಭವರೋಗ ವೈದನೀ ಮಂತ್ರ ತಂತ್ರಕೆ ಆದಿ
ವಿವರಿಸಲು ತನುಭಾರ ತನ್ನದಲ್ಲೇ ||ಪ||
ಏನಾದಡೇನೆನಗೆ ಹೀನ ಜಡ ದೇಹವು
ಮೌನ ಅಭಿಮಾನವು ಕೂಡಿತೆಂಬೇ
ಜ್ಞಾನಿಯಾದ ಮೇಲೆ ಶರೀರದಾಸೆ ಯಾಕೆ
ಖೂನ ತಿಳಿದಾ ಬಳಿಕ ಹೇಗಾದರೇನು ||1||
ಬಂದದ್ದುಣ್ಣುವನು ಸುಖದಿ ಬಾರದ್ದು ಬಯಸದೇ
ಒಂದೆಯಾದ ನಿಜದಿ ತೂಗ್ಯಾಡುತಿಹನು
ತಂದೆ ತಾಯಿ ಬಂಧು ಬಳಗ ಇಂದ್ರೀಹಂಗು
ಒಂದು ಇಲ್ಲವು ಅವಗೆ ತನುವ ಮರೆತಿಹನೂ ||2||
ನಗುವು ಬಂದರೆ ನಗುವ ದುಃಖ ಬಂದರೆ ಅಳುವ
ಬಗೆಯೊಳಗೆ ತಾಬೆರಿತಾ ಚೈತನ್ಯ ರೂಪಾ
ನಿಗಮ ವೇದ್ಯನು ನಿರುಪಾಧಿ ಅಡವಿಯ ಸಿದ್ಧಾ
ಬಗಿ ಬಗಿಯ ಕಲ್ಪನೆಯು ನೀನೆ ಆಗಿದ್ದೀ ||3||
ಮಹದೇವ ಲಿಂಗ ಅಡವೀಶ್ಯಾ
ಮಹದೇವ ಲಿಂಗ ಅಡವೀಶ್ಯಾ| ಪಾದವನು ತೋರೋ ಕೃಪದಿ
ಸಹಜ್ಯಾನಂದ ಸರ್ವೇಶ್ಯಾ ಭಕ್ತರನು ರಕ್ಷಿಸೂ ||ಪ||
ನಿನ್ನಾಟ ತಿಳಯದೈ ದೇವಾ| ನಾನೇನು ಬಲ್ಲೆ ಲೀಲಾ|
ಅನ್ಯಾಯವಲ್ಲೆ ಈ ಮಾತು ದರುಶನವ ಕೊಡದ ಮೂಲಾ
ಮನ್ನಿಸಲಿಬೇಕ ಶ್ರೀಸಾಂಬಾ ನೀ ನೋಡಿ ಕಾಲ ಕಾಲಾ|
ಯನ್ನಾತ್ಮದೊಡೆಯ ನೀ ಬೇಗ ಬಾರಯ್ಯ ಸದ್ಗುರೂ ||1||
ಜನ ನಿನ್ನ ಧ್ಯಾನದಲ್ಲಿಹರು ಶಂಕರನೆ ಶಂಭುಶಿವನೇ|
ನಗಿ ಮುಖವ ತೋರು ಸಂತೋಷಾ| ಯೆನೇನು ಬೇಡೋ ಹರನೇ|
ಭುಗಿಲಾಗಿ ಕಾಯ ವಾಚ್ಯ ಮನಸು ನಡುಗುವದು| ಥರಥರನೇ|
ಮಿಗಿಲಾದ ಮಹತ್ತು ಇದುಯೇನು| ಸಾಕ್ಷಾತ್ ಶ್ರೀಗುರೂ ||2||
ಹದಿಮೂರು ದಿನಕೆ ಹದಿಮೂರು ಯುಗವಾಗಿ ಕಾಂಬುದೈಯ್ಯ|
ನದಿ ಮೇರೆದಪ್ಪಿ ಬಂದಂತೆ ಮೈಮರೆದು ನಿಂತೆನಯ್ಯಾ|
ಮುದದಿಂದ ಬಂದು ನಿನ್ನಾ ರೂಪ ನೀ ತೋರಬೇಕು ಜೀಯ್ಯ|
ಯದೆ ವಡೆದು ತಾಯ ಅಗಲೀದ ಕರುವಿನ ಪರಿಯಲಾ ||3||
ನಿರುಪಾಧಿ ನೀನೆ ಗುರುದೇವಾ| ಧೈರ್ಯವನು ಕೊಟ್ಟು ನೋಡು|
ವರಶ್ರೇಷ್ಠವಾದ ಆನಂದಾ ಕರುಣದಲಿ ದೃಷ್ಟಿಯಿಡು|
ಪರತರನೇ ಅಂಕಲಗಿನಾಥ ದಯಮಾಡಿ ಬಂದು ಕೊಡು
ಗುರು ಸಿದ್ಧಲಿಂಗ ಅಡವೀಶ್ಯಾ ನಾನೇನು ಬೇಡಲಿ| ಮಹದೇವಲಿಂಗ
ಅಡವೇಶಾ ಪಾದವನು ತೋರು ಕೃಪದಿ ||4||
ಆರಾರು ಅರಿಯದ ಮೂರ್ತಿ ನಾನೇನು ಬಲ್ಲೇ ನಿನ್ನಾ|
ಪರಾಕು ಸೂಕ್ಷ್ಮದ ಸೌಜ್ಞೆ ತಿಳಿಸೈಯ್ಯಾ ಆರ್ಥಿಚಿನ್ನಾ|
ಕಾರಣ ಕಾರ್ಯಕೆ ನೀನೆ| ನಿಜವಾದ ಗುಣದಿರಂನ್ನಾ
ತೋರೈಯ್ಯಾ ಬೇಗಾ ನಮ್ಮಲ್ಲಿ ದುರ್ಗುಣವ ನೋಡದೆ ||5||
ಮರಿಯಬೇಡೋ
ಮರಿಯಬೇಡೋ ಮಹಾ ಕರುಣಾದಿ ನೋಡೋ|
ಪರಿಪರಿ ತಿರುಗುವ ಮನವ ಯೇಕ ಮಾಡೋ ||ಪ||
ಬಂಧು ಬಳಗದೊಳು ಬಹು ಸುಖವ ನಡಿಸೋ|
ಹಿಂದೆ ಮುಂದೆ ಕಾದು ಸಂಶಯ ಬಿಡಿಸೋ ||1||
ತನುವ ಯಿಹಪರಿ ನಿನ್ನ ನಾಮವ ನೆನಸಿ
ಚಿನುಮಯನಾಗುವ ಗುಣವನು ಸರಿಸೀ ||2||
ನಿರುಪಾಧಿ ಅಡವೀಶ್ಯಾನೆಂದಂತವರಿಗೇ
ತರುಬ್ಯಾಡಾ ಯಂದೆಂದು ಈ ಕೆಟ್ಟ ಗಳಿಗೇ ||3||
ಮಂದಮತಿಯು ಅರಿಯನಯ್ಯಾ
ಮಂದಮತಿಯು ಅರಿಯನಯ್ಯಾ ಕಂದುಗೊರಳನ ಭಕ್ತ ಮಹಿಮಾ
ನಿಂದೈ ಪ್ರಾಣಿಗೆ ನಿಜವು ನಿಲ್ಲುವದೇ ಹೋ ಅಡವಿಯಾ ಸಿದ್ಧಾ
ವಂದೆ ಭಾವದಲ್ಲಿ ವಲಿವನು ||ಪ||
ನೀತಿ ಗುಣವ ಹೋಗದೆ ನಿನ್ನ ಮಾತು ಅರಿಯಲಿಕ್ಕೆ ಅರಿದು
ಕೋತಿ ಮನುಜರರಿವರೈ ನಿಮ್ಮಾ ಹೋ ಅಡವಿಯ ಸಿದ್ಧಾ
ಜೋತಿ ರೂಪಾ ನೀನೆ ಮತ್ತೆಲ್ಲಾ ||1||
ಜ್ಞಾನದೊಳಗೆ ಮನ ನಿಲ್ಲಲಾಗಿ ಮೌನಿ ನಿನ್ನ ಮಹತ್ಮೆಯನ್ನು
ತಾನೆ ತನ್ನ ತಿಳಿದವ ಬಲ್ಲ ಹೋ ಅಡವಿಯ ಸಿದ್ಧಾ
ಹೀನ ನರರೆ(ರ) ವಸ್ತು ತಿಳಿವನೆ ||2||
ಗುರುವು ಲಿಂಗ ಜಂಗಮದಾ ನಿರುತ ಭಕ್ತಿ ಬೆಳಗಿನೊಳಗೆ
ಬೆಳೆದು ಬ್ರಹ್ಮವಾಗಿ ನಿಂತಿಹಾ ಹೋ ಅಡವಿಯಾ ಸಿದ್ಧಾ
ಅರಿತ ದೂರನಾದಿ ಬ್ರಹ್ಮನು ||3||
ಕಾನ ರಹಿತ ಕರುಣೌ ಕರನು ಸೀಮೆ ರಹಿತ ಶ್ರೇಷ್ಠ ಗುರುವು
ಸೋಮ ಸೂರ್ಯಕೋಟಿ ತೇಜನು ಹೋ ಅಡವಿಯಾ ಸಿದ್ಧಾ
ನೇಮ ದೂರನಾದಿ ಬ್ರಹ್ಮನು ||4||
ವೇದ ನಿರುಪಾಧಿಯು ಯೆನಿಸಿ ಅವಕಾಲದಲ್ಲಿ ಮೆರೆವ
ಸೋವೆ ಅರಿದರವನೆ ಶ್ರೇಷ್ಠನು ಹೋ ಅಡವಿಯಾ ಸಿದ್ಧಾ
ಭಾವನೆಗೆ ನಿಲ್ಕದಸದಳ ||5||
ಮಾತಿನಿಂದಲಿ ಯೋಗಿ ಎನಿಪನು
ಮಾತಿನೊಳು ಮಂತ್ರವು| ಸುಖದುಃಖ| ಮಾತೆ ಮಂಗಳಕಾರವು
ಮಾತಿನಿಂದಲಿ ಯೋಗಿ ಎನಿಪನು| ಮಾತಿನಿಂದಲಿ ಭೋಗಿಯೆನಿಸುವಾ|
ಮಾತುಗಳು ಮಾಣಿಕವು ತಿಳಿದರೆ| ಮಾತೆ ಶ್ರೀ ಗುರು
ಬೋಧ ಹೇಳ್ವದು ||ಪ||
ಮಾತೆ ಆರೈದಕ್ಷರಾ ಬಾವನ್ನ ಸಹಾ| ಮಾತಿನಿಂದಲಿ ಅರಿವರು
ಮಾತೆ ಅಘೋರಾದಿ ಮಂತ್ರಗಳೆಲ್ಲ| ಮಾತಿನೊಳಗೆ ಜನನಾ
ಮಾತು ಐದು ಮೂರಕ್ಕೆ ಐದವು| ಮಾತು ಎಪ್ಪತೈದು ಆದವು
ಮಾತು ಮೂರು ಆರು ಎಂಬೋದು| ಮಾತು ಇನ್ನ ಹದಿನಾರಾದುದು ||1||
ಮಾತು ಪ್ರೀತೀಲೆ ಹುಟ್ಟೋದು| ವಿವಾಹ ಲಗ್ನ ಮಾತಿನಿಂದಲಿ ಶೋಭನ|
ಮಾತಿನಿಂದಲಿ ಶಿಪಾಯಿ ಸುಭೆದಾರ| ಮಾತಿನಿಂದಲಿ ಸರದಾರ|
ಮಾತಿನಿಂದಲಿ ಜಗಳ ಬೀಳ್ವದು| ಮಾತಿನಿಂದಲಿ ಪೆಟ್ಟು ದಕ್ಕೆಯು|
ಮಾತಿನಿಂದಲಿ ಸತ್ತು ಹುಟ್ಟುವ| ಮಾತೆ ಬಹುತರವಿಹುದು ಜಗದಲೀ ||2||
ಮಾತೆ ಖೇತರಿ ಭೂಚರಿ| ಸಾಚರಿ ಷಣ್ಮುಖಿ| ಮಾತೆ ಶಾಂಭವಿ ಮೌನಿಯು
ಮಾತೆ ಧ್ಯಾನ ಧಾರಣೌ| ಸಮಾಧಿಯು| ಮಾತಿನಿಂದಲಿ ತಿಳಿವು|
ಮಾತು ಚಕ್ರ ದೈವ ಶಕ್ತಿಯು| ಮಾತು ನವವಿಧ ಭಕ್ತಿ ಹೇಳ್ವುದು|
ಮಾತು ಶ್ಯಾಂತಿ ಶಮದಮಿರುತಿದೆ| ಮಾತು ಕೇಳುತ ಯೋಗಿಯೆನಿಪರು ||3||
ಮಾತಿನಿಂದಲೆ ವುದ್ಯೋಗ| ಜಾಣ ಧಡ್ಡ| ಮಾತಿನಿಂದಲೆ ಲಾಭ ನಷ್ಟ
ಮಾತಿನಿಂದಲಿ ಮನೆ ಬಂಧು ಹಿರಿ ಕಿರಿಯರೊಳು| ಮಾತಿನಿಂದಲೆ ಮಾನ ಅಭಿಮಾನ
ಮಾತು ನಯ ನುಡಿಯಾಗಿ ನುಡಿದರೆ| ಮಾತು ಅನ್ನುವರು ಭೋಗಿ ವಳ್ಳೆವ| ಮಾತಿ ನೋಳು
ಸುಗುಣವು ಸೂಕ್ಷ್ಮವು| ಮಾತು ನಾಜೂಕಣ್ಣಾ ಲೋಕದಿ ||4||
ಮಾತಿನಿಂದಲಿ ಅಡಿವೀಶ್ಯಾ| ಸುತ್ತದೇಶ್ಯಾ| ಮಾತಿನಿಂದಲಿ ಪ್ರಭುವು
ಮಾತು ನಿರುಪಾಧಿ ತಾನೇಯಲ್ಲಾ ದಿನಸು| ಮಾತೆ ಪದ ದಂಡಕ ಮಂಗಳಾರ್ತಿ
ಮಾತು ಕನ್ನಡ ಅರೆ ಪಾರಶಿ| ಮಾತು ಇಂಗ್ರೇಜಿ ತೆಲುಗು ದ್ರಾವಿಡ ಮಾತು ಪ್ರಥ್ವಿಯ
ನರರೊಳಗೆ| ಬಹು ಮಾತಿನೊಳು ಗುರುಶಬ್ದವಂದೇ ||5||
ಮಾತು ಕೇಳೆ
ಮಾತು ಕೇಳೆ ಮಮತೆಯುಳ್ಳ ನಾರೀ ಶೃಂಗಾರೀ
ಮಾತು ಕೇಳೆ ಮಮತೆಯುಳ್ಳ ನಾರೀ
ನೀತಿವಂತಳಾಗಿ ನಿಜದ ಭೀತಿಯಿದ್ದರೊಳ್ಳೆದೆಂಬ ||ಪ||
ಪರ ಪುರುಷನ ಕೂಟದೊಳಗೇ ಬೆರೆದು ಬೇರೆ ಆಗದೆ
ದುರುಳ ಗುಣಗಳೆಲ್ಲ ಹೋಗಿ ಧರೆದೊಳಹುದು ಯನ್ನವಂತಾ ||1||
ಅಸ್ತಿರವು ಯವ್ವನ ಪ್ರಾಣ ಆಸ್ತಿರವು ಪುತ್ರದ್ರವ್ಯ
ಅಸ್ತಿರೆಂದು ದುರ್ಗುಣಗಳ ಶಿಸ್ತು ಹರಿದು ಬಿಡುವ ರೀತಿ ||2||
ಸಿದ್ಧ ನಿರುಪಾಧಿ ಹೊಂದಿ ಬುದ್ಧಿವಂತೆಯಾಗು ಕಾಂತೆ
ನಿದ್ದೆ ಸ್ವಪ್ನ ಜಾಗ್ರದಲ್ಲಿ ಮುದ್ದು ಅಡವಿ ಈಶೆನ್ನೊ ||3||
ಮುತ್ತು ವಡದ ಲಿಂಗಾ
ಮುತ್ತು ವಡದ ಲಿಂಗಾ ಮತ್ತು ಅಡವೀಶನ
ತೊತ್ತು ಯನ್ನಲಿ ಬಹುದು ಆನಂದದಿಂದಾ ||ಪ||
ಯೇಕ ನಿಷ್ಠೆಯಲಿಂದಾ ಜೋಕೆಲಿ ಪಾದ ಸೇವೆ
ಸಕಾರವಾಗಿ ಮಾಡುವ ಕೇವಲ ಭಕ್ತಿ
ಪಾಕವಾದಂತ ನಿಜದೀ ಸಾಕು ಯನದೇ
ಕಾಯ ವಾಕ್ಕು ಮನ ಶುದ್ಧವಾಗಿ ಆನಂದದಿಂದಾ ||1||
ಅಲ್ಲಮಪ್ರಭು ಯಂದ ಬಲ್ಲ ಬಸವಣ್ಣನಂತೆ
ಉಲ್ಲಾಸದಿಂದ ಮೆರೆವನೂ
ಕೇವಲ ಭಕ್ತಿಯಲ್ಲಿ ಎಲ್ಲ ದೇಶದಿ ಬಂದಾರೆಲ್ಲ ದೇವ ಭಕ್ತರಾ
ಸೊಲ್ಲಿನೊಳು ಸುಖಿಯೆನಿಪಾ ಆನಂದದಿಂದಾ ||2||
ಒಬ್ಬನೆ ಕುಲದೀಪಾ ಮೊಬ್ಬು ಗುಣವ ಸುಟ್ಟು
ಕಬ್ಬಿನ ಸ್ವಾದದಂದದೀ ಕೇವಲ ಭಕ್ತಿ
ಹಬ್ಬಿದಾ ಮೋಹದಿ ದೊಬ್ಬಿ ಸಂಶಯವನ್ನು
ತಬ್ಬಿ ಪಾದವ ಬಿಡದೇ ಆನಂದದಿಂದಾ ||3||
ಹೆಂಡತಿಯನ್ನು ಕಾಂಬಾ ಯರವಿನ ಆಭರಣದಂತೆ
ದಂಡನಾಯಕ ನೆನಬಹುದು ಕೇವಲ ಭಕ್ತಿ
ಉಂಡು ಉಪವಾಸಿಯು ಬಳಸಿ ಬ್ರಹ್ಮಚಾರಿ
ಹಿಂಡು ಗುಣ ಬಂದು ಮಾಡೀ ಆನಂದಿಂದಾ ||4||
ಅಂಕಲಗಿ ಕಲ್ಯಾಣ ಶಂಕರನು ಅಡವಿ ಸಿದ್ಧಾ
ಕಿಂಕರನು ನಂದಿ ಈತನೂ ಕೇವಲ ಭಕ್ತಿ
ಮೊಂಕಾಗಿ ನಿರುಪಾಧಿ ಮೋಕ್ಷದೊಳಾಡುವಾ|
ಡಂಕಾ ಹೊಡೆದಂತೆ ತಾನು ಆನಂದಿಂದಾ ||5||
ಮುಕ್ತ ಅಡವಿಯಸಿದ್ಧಾ
ಮುಕ್ತಿ ಕಾಂತಿಯ ಹಿಡಿದು ಮುಕ್ತ ಅಡವಿಯಸಿದ್ಧಾ
ತಃಕ್ತೇರ ಬಂದಾ ಸಾಕ್ಷಾತಾಃ ಶೋಭಾನವೆ
ತಃಕ್ತೇರ ಬಂದಾ ಸಾಕ್ಷಾತನ ಸಂಮುಖಕೆ
ಭಕ್ತಿ ನಾರಿಯರು ಕೂಡಿದರೂ ||ಶೋ|| ||ಪ||
ಗುರು ಸದಾಶಿವ ಬಂದ ಚರಣ ಪಿಡಿಯಿರೆ
ಹರುಷ ಆನಂದ ತುಳಕುತ ||ಶೋ||
ಹರುಷ ಆನಂದ ತುಳಕುತ ಸಾಂಬನ ಮುಂದೆ
ಪೊರಿಯೆಂದು ಸ್ತೋತ್ರ ಹಾಡಿರೇ ||ಶೋ|| ||1||
ಈಶ್ವರ ಮಾರುತಿ ಈತಾ
ಶಾಶ್ವತಯನ್ನಿರಿ ಜನರು ||ಶೋ||
ಆಶರಹಿತ ಪರಬ್ರಹ್ಮನ ಮುಂದೆ
ದೋಷ ಕಳಿಯೆಂದು ಹಾಡಿರೇ ||ಶೋ|| ||2||
ರುದ್ರಮಾರುತಿ ತಾನು ಕ್ಷುದ್ರದೈವದ ಗಂಡಾ
ನಿರ್ಧಾರವೆಂದು ನಂಬೂತಾ ||ಶೋ||
ನಿರ್ಧಾರವೆಂದು ನಂಬೂತಾ ದೇವರ ಮುಂದೆ
ಅದೇ ನೀನೆಂದು ಹಾಡೀರೇ ||ಶೋ|| ||3||
ವಿಷ್ಣು ಸ್ವರೂಪವನ ಶ್ರೇಷ್ಠ ಸಂರಕ್ಷಣಕೆ
ಅಷ್ಠ ದಿಕ್ಕಿನ ಅಧಿಪತಿ ||ಶೋ||
ಅಷ್ಠ ದಿಕ್ಕಿನ ಅಧಿಪತಿ ಯಾದಂಥವನ
ಕಷ್ಠ ಕಳಿಯಂದು ಹಾಡಿರೇ||ಶೋ|| ||4||
ಬ್ರಹ್ಮ ಸ್ವರೂಪನು ನಮ್ಮ ಹುಟ್ಟಿಶಿದಾತಾ
ಅಮ್ಮ ಅನಾದಿ ಪ್ರಭು ಈತಾ ||ಶೋ||
ಅಮ್ಮ ಅನಾದಿ ಪ್ರಭು ಈತ ಯೆಂತೆಂದು
ವಮ್ಮನದಿಂದ ಹಾಡಿರೇ ||ಶೋ|| ||5||
ನಾದ ಸ್ವರೂಪನು ವಾದ ತೀತಾನಂದ
ಶೋಧಿಸಿ ನೋಡೀ ಸಖಿಯರು ||ಶೋ||
ಶೋಧಿಸಿ ನೋಡೀ ಸಖಿಯರು ಸಂತೋಷಾ
ಮೋದ ನೀಡೆಂದು ಹಾಡಿರೇ ||ಶೋ|| ||6||
ಬಿಂದು ಲೋಕೇಶನ ಚಂದಾದಿ ಕಾಣಿರೀ
ಕಂದುಗೊರಳ ಶಿವ ಈತಾ ||ಶೋ||
ಕಂದುಗೊರಳ ಶಿವ ಈತನ ಮುಂದೆ
ತಂದೆ ನೀನೆಂದು ಹಾಡಿರೇ ||ಶೋ|| ||7||
ಶಿವಕಳೆ ಮೂರುತಿಯು ಭವ ರೋಗಹರನೆಂದು
ವಿವರಿಸಿ ನೋಡಿ ಸುಖದಿಂದಾ ||ಶೋ||
ವಿವರಿಸಿ ನೋಡಿ ಸುಖದಿಂದ ಶಂಕರನ
ಸುವಿವೇಕದಿಂದ ಹಾಡಿರೇ ||ಶೋ|| ||8||
ಗುರುವಾದ ಮಹಿಮನೀತಾ ಶರಣರರಿತುಕೊಳ್ಳಿ
ನರಕಾಯ ಧರಿಸಿ ಮರ್ತ್ಯುಕೆ ||ಶೋ||
ನರಕಾಯ ಧರಿಸಿ ಮತ್ಯುಕೆ ಬಂದಂತಾ
ಕರುಹಿನ ಮೂರ್ತಿ ಹಾಡಿರೇ ||ಶೋ|| ||9||
ಲಿಂಗ ಯೀತನುಯಂದುಅಂಗನೆಯೆರರಿವುತ
ಸಂಗಮ ಬಂದಾ ಸಭೆಯಲ್ಲಿ ||ಶೋ||
ಸಂಗಮ ಬಂದಾ ಸಭೆಯಲ್ಲಿಯೆಂತೆಂದು
ಮಂಗಳ ಕೀರ್ತಿ ಹೊಗಳಿರೇ ||ಶೋ|| ||10||
ಜಂಗಮನಾಗಿ ಸರ್ವಾಂಗ ರಕ್ಷಿಸ ಬಂದಾ
ಶೃಂಗಾರವಾದ ಶುಭ ಕೀರ್ತಿ ||ಶೋ||
ಶೃಂಗಾರವಾದ ಶುಭಕೀರ್ತಿ ಸುಖದಿಂದಾ
ಸಂಗವಾಗೆಂದು ಹಾಡೀರೆ ||ಶೋ|| ||11||
ಮಂತ್ರ ದೈವತ ನಾನು ಕಂತು ಮರ್ದನದೇವ
ಶಾಂತಾ ಮಹದೇವ ದಯವಾಗೋ ||ಶೋ||
ಶಾಂತಾ ಮಹಾದೇವ ದಯವಾಗೋ ಆಗೆಂದು
ಚಿಂತೆ ಕಳಿಯಂದು ಹಾಡಿರೇ ||ಶೋ|| ||12||
ವಿಭೂತಿ ಸ್ವರೂಪಾ ವಿಭವ ನಡಿಸಲಿ ಬಂದಾ
ಕೋಪ ರಹಿತ ಕಲಿಯಲ್ಲಿ ||ಶೋ||
ಕೋಪಾರಹಿತಾ ಕಲಿಯಲ್ಲಿ ಬಂದಂತಾ
ವ್ಯಾಪಾರ ಅರಿತೂ ನಡಿಯಿರೇ ||ಶೋ|| ||13||
ತಾನೇ ರುದ್ರಾಕ್ಷಿಯೂ ಯೇನು ಅನುಮಾನಿಲ್ಲಾ
ತಾನಾದ ನಿಜದೀ ನಲಿವುತಾ ||ಶೋ||
ತಾನಾದ ನಿಜದೀ ನಲಿವುತ ಬಂದಂತಾ
ವ್ಯಾಪಾರ ಅರಿತು ಹಾಡಿರೇ ||ಶೋ|| ||14||
ತೀರ್ಥ ಈತನುಯೆಂದು ಅರ್ಥಿಯಿಂದಿರುತಾ
ಸಾರ್ಥ ಮಾಡೆನ್ನ ತನುವನು ||ಶೋ||
ಸಾರ್ಥ ಮಾಡೆನ್ನ ತನುವನು ಯೆಂತೆಂದು
ಕೀರ್ತಿ ಪ್ರಬಲನ ಹಾಡಿರೇ ||ಶೋ|| ||15||
ಮಹ ಪ್ರಸಾದವು ತಾನೇ ಸಹಜ ಸದ್ಗುರು ಹರಾ
ವಹಿಸಿಹುದಿಲ್ಲಿ ಗುರುಲೀಲ ||ಶೋ||
ವಹಿಸಿಹುದಿಲ್ಲಿ ಗುರುಲೀಲ ಯೆಂತೆಂದು
ಮಹದೇವನಿದಿರು ಹಾಡಿರೇ ||ಶೋ|| ||16||
ಆಧಾರ ಸ್ವಾಧಿಷ್ಟಾ ಮಣಿಪೂರಕನಾಹತಾ
ಭೇದದ ಮೂರ್ತಿ ದಯವಾಗೋ ||ಶೋ||
ಭೇದದ ಮೂರ್ತಿ ದಯವಾಗುಯನ್ನುತಾ
ವಿನೋದದಿಂದ್ಹಾಡಿ ಹರಿಸಿದೇ ||ಶೋ|| ||17||
ವಿಶುದ್ಧಿ ಆಗ್ನೇಯಲೀ ಸಾಸಿರದಳ ಪಶ್ಚಿಮದಿ
ಸೋಸಿದರೀತಾನಿಹನೆಂದು ||ಶೋ||
ಸೋಸಿದರೀತಾನಿಹನೆಂದು ತಿಳಕೊಂಡು
ಕೂಸಾಗಿ ನಿತ್ಯ ಹಾಡಿರೇ ||ಶೋ|| ||18||
ನಾಲ್ಕಾರ್ಹತ್ತು ಹನ್ನೆರಡು ಹದಿನಾರೆರಡುಗುಪ್ತ
ನಿಲ್ಕದವೆರಡು ಕೂಡಲ್ಕೆ ||ಶೋ||
ನಿಲ್ಕದವೆರಡು ಕೂಡಲ್ಕಭವನಾ
ಮಾಲ್ಕೀನಕ್ಷರ ಕೂಡಿರೇ ||ಶೋ|| ||19||
ಕರ್ಮಿ ಮುಮುಕ್ಷನು ನಿರ್ಮಳಭ್ಯಾಸಿಯು
ಅನುಭವಾರುಷ ಆರೂಢ ||ಶೋ||
ಅನುಭವಾರುಷ ಆರೂಢನಾದಂಥ
ಮರ್ಮ ನಿನ್ನದೂ ಹಾಡಿರೇ ||ಶೋ|| ||20||
ನಿರುಪಾದಿ ಅಡವೀಶ ಗುರು ಅಂಕಲಗಿವಾಸ
ಹರುಷ ಆನಂದ ಕೊಡುಯಂದು ||ಶೋ||
ಹರುಷ ಆನಂದ ಕೊಡುಯಂದು ತ್ರಿಕರಣ
ಪರಿಶುದ್ಧವಾಗಿ ಹಾಡಿರೇ ||ಶೋ|| ||21||
ಮೂರ್ತಿ ಪ್ರದಕ್ಷಣವು ಚಂದ
ಮೂರ್ತಿ ಪ್ರದಕ್ಷಣವು ಚಂದಾ
ತೂರ್ಯಾತೀತ ಆನಂದ ಮಂಗಳವಾರ ||ಪ||
ಮಹದೇವನ ಬಲ ಮಾಡಿ
ಹಿಂದು ಮುಂದು ಜಂಗಮ ಭಕ್ತ ಸರ್ವರು ಕೂಡೀ
ಸಹಜ್ಯಾನಂದದಿ ನೋಡಿ
ಹರ ಹರ ಶಂಭು ಶಂಕರ ಭಜನೀ ಮಾಡೀ ||1||
ನಾನಾ ದಿನಸಿನ ವಾದ್ಯಯೀತ
ಆರಿಗೆ ನಿಲುಕನು ವೇದಕೆ ವೇದ್ಯ
ಕೂನದ ಶಿಶುವಿಗೆ ಸಾಧ್ಯಾ
ನಿಜವಾದ ಗುರುಲಿಂಗ ಜಂಗಮನೀತಾ ಆರಾಧ್ಯ ||2||
ನಿರುಪಾಧಿ ಅಂಕಲಗಿವಾಸ
ಐವತ್ತಾರು ದೇಶದೊಳು ಯೀತನೆ ಯೀಶ್ಯಾ
ಪರತರ ಅಡವೀಸಿದ್ಧೇಶ್ಯಾ
ಪೃಥ್ವಿಯೊಳಗೆ ನೋಡಲಿಕೆಯಿದೇ ಕೈಲಾಸ ||3||
ಮೊಲೆಯೊಳಿಹ ವಸ್ತು ಮೂಲವೋ ಮೋಕ್ಷಕೆ
ಮೊಲೆಯೊಳಿಹ ವಸ್ತು ಮೂಲವೋ ಮೋಕ್ಷಕೆ
ಕೀಲುಯಿಹುದು ತನ್ನೊಳು
ಕಾಲ ಕಾಲದ ದೇವನೆನುತಲಿ
ಬಾಲ ಹೊಗಳಿದೆ ವೇದ ವಚನದೀ
ಶೂಲಿ ಶಾಖವು ಸಾಧುಯನುತಲಿ
ಅಲಿಯದಿ ನಾ ಹಾಡಿ ಹರಶಿದೇ ||ಪ||
ಭಕ್ತಿ ಜ್ಞಾನ ವೈರಾಗ್ಯ ಯುಕ್ತಿಯ ಕಾಣುತಾ
ಮುಕ್ತಿಗೊಡೆಯನೆಂದೆನೋ ||ಅ.ಪ||
ಸುಖದ ರೂಪನು ಸೂಕ್ಷ್ಮ ಅವತಾರ
ವಿಕಳ ಮತಿಗಳು ತಿಳಿಯಲರಿಯರು
ಅಖಿಳ ವಸ್ತು ತನ್ನ ಕಾರಣ
ಅಕಳಂಕಾತ್ಮ ವಿಚಾರ ಬಲ್ಲಗೆ ||1||
ಮೂರಾರು ನವ ಮುವತ್ತಾರು
ಬಾವನ್ನ ಯಿನ್ನೂರ್ಹದಿನಾರಾದುದೂ
ಕಾರಣವು ತಾನೆಂದು ಶೃತಿಯಿರೆ
ಪೂರಣಾನಂದಾಗಿ ನುತಿಶಿರೆ
ಸೇರುವೆಯ ಅರಿದಂತ
ಬಲ್ಲಗಾರಗೀನುಡಿ ಅಮೃತ ಹನಿಯಾ ||2||
ಅಮನಸ್ಕತೂರ್ಯದ ಮನೆಯೊಳು ಮಾಲಿಯು
ಸುಮನಿಸಲು ಈ ದೇಹ ಗೃಹದೊಳು
ವುಮಾಪತಿಯು ತ್ರಿಕೋಣ ತಾರಕಾ
ಅಮಮ ಸಾಂಖ್ಯದಿ ಲೋಕವರಿಯಲು
ರಮಣ ನಿರುಪಾಧಿ ಅಡವೀಶಿರುವದು ||3||
ಯಚ್ಚರಿಕೆಚ್ಚರಿಕೆ
ಯಚ್ಚರ ಹೇಳಿ ವಿಭಕ್ತಿಯ ತಾಳಿದಾ ಎಚ್ಚರಿಕೆಚ್ಚರಿಕೆ|
ನಿಶ್ಚಯ ಈ ಮಾತು ನಿಜ ನಿಜವೆನ್ನಿರಿ ಎಚ್ಚರಿಕೆಚ್ಚರಿಕೆ ||ಪ||
ನಂಬಿದ ಭಕ್ತರಿಗೆ ಭಯವು ನಡಿಸ್ಯಾನು ಎಚ್ಚರಿಕೆಚ್ಚರಿಕೆ|
ನಂಬಿದ ಜನಗಳ ನಷ್ಟ ಮಾಡಲೇ ಬಂದ ಎಚ್ಚರಿಕೆಚ್ಚರಿಕೆ|
ಯಿಂಬು ಮಾಡಲಿಕ್ಕೆ ಇದೇ ಸಮಯವು ತಿಳಿಯದೆಚ್ಚರಿಕೆಚ್ಚರಿಕೆ|
ಶ್ರೀಸಾಂಬನ ಮರೆತರೆ ನರಕವ ಶೃತಿ ಶಿದ್ಧಾ ಎಚ್ಚರಿಕೆಚ್ಚರಿಕೆ ||1||
ಗುರು ಲಿಂಗ ಜಂಗಮ ಅರಿವಿಲಿ ತಿಳಕೊಳ್ಳಿ ಎಚ್ಚರಿಕೆಚ್ಚರಿಕೆ|
ಸ್ಥಿರವಲ್ಲ ಈ ಕಾಯಾ ಈಗಲೋ ಆಗಲೋ ಎಚ್ಚರಿಕೆಚ್ಚರಿಕೆ|
ನರ ಜನ್ಮವೇ ಮುಕ್ತಿ ಅಧಿಕಾರಿಯಾಗ್ವದು ಎಚ್ಚರಿಕೆಚ್ಚರಿಕೆ ||2||
ಶ್ರೀ ನಿರುಪಾಧಿಯು ಅಂಕಲಿನಾಥನು ಎಚ್ಚರಿಕೆಚ್ಚರಿಕೆ|
ಕಾನನದೊಳು ಮೂಡಿದ ಅಡವೀಶನು ಎಚ್ಚರಿಕೆಚ್ಚರಿಕೆ|
ಸ್ವಾನುಭಾವದ ಸುಖ ನೀಡಲಿ ಬಂದಾನೆ ಎಚ್ಚರಿಕೆಚ್ಚರಿಕೆ|
ಯೇನೇನು ಸಂಶಯವಿಲ್ಲ ಶ್ರೀಗುರು ಸಿದ್ಧಾ ಎಚ್ಚರಿಕೆಚ್ಚರಿಕೆ ||3||
ಯಂತಾ ಕರುಣಿ ನೋಡೇ
ಯಂತಾ ಕರುಣಿ ನೋಡೇ ಅಡವಿಸಿದ್ಧಾ
ಯಂತಾ ಕರುಣಿ ನೋಡೇ
ಯಂತಾ ಕರುಣಿಯು ಚಿಂತೆ ದೂರ ಮಾಡಿ
ಪ್ರಾಂತಿನ ಪ್ರಭೆಮೂರ್ತಿ ಹಂತೇಲೇ ಯಳಕೊಂಡಾ ||ಪ||
ಐವತ್ತಾರು ದೇಶದೀ ನಾಮದ ಕೀರ್ತಿ
ಸ್ವಯಮೂರ್ತಿ ಯನಿಸುವದೂ
ಕೈವಲ್ಯ ಕೈಲಾಸ ಸ್ವರ್ಗ ಮೂರು ತನ್ನ
ವಿವರಿಸಿದರೆ ಕೆಟ್ಟ ಭವದ ಕಳಿಯಲಿಕ್ಕೆ ||1||
ಬಂದ ಜಂಗಮ ಭಕ್ತರಾ
ಊಟ ಉಡಗಿ ಚಂದ ನೋಡುತಲಿ
ಕಂದಗೆ ಹಾಲ್ತುಪ್ಪ ಹಣ್ಣು ಕೊಟ್ಟಂತೆ
ಬಂದವರ ಇದ್ದವರ ಒಂದೆಂದು ಕಾಣುವಾ ||2||
ನಿರುಪಾಧಿ ನಿಶ್ಚಯವೂ
ಮೂರು ಸಲ ಅರುವಿಲಿ ಜೈಸಿದನೂ
ಗುರುಲಿಂಗ ಜಂಗಮ ಅನುಭವಿಯೀತಾ
ಪರಿ ಪರಿ ವಿಧದಿಂದ ಪೊರೆವ ಜೀವಿಗಳಾ ||3||
ಯಾಕೆ ಧೈರ್ಯವ ಬಿಡುವೆ
ಯಾಕೆ ಧೈರ್ಯವ ಬಿಡುವೆ ಜೀವನೇ
ಲೋಕ ವಂದ್ಯನು ಅಡವಿ ವಿಪಾಶ್ಚನು
ಬೇಕೆನುಸುತಿಹ ಸುಖವ ನಡಸುವಾ
ಯೇಕೊ ದೇವನೆ ನಂಬಲಾರದೇ ||ಪ||
ನಿನ್ನ ಪುಣ್ಯದ ಪರಿಯು ನಡವದೂ
ಯೆನ್ನುತಿಹ ವಾಕ್ಯ ಬಿಡದಲೆ
ನಿನ್ನ ವಳಗೆಯೂ ನೀನೆ ಅರಿದರೆ
ಮನ್ನಿಸುವ ತನ್ನ ಮನಸಿನಂತೆಯು ||1||
ಮೂರ್ತಿ ಧ್ಯಾನವ ಬಿಡದಿ ನಿತ್ಯದಲೀ
ಕೀರ್ತಿ ಹೊಗಳ್ಳೆ ಮೂರು ಕಾಲದಿ
ಅರ್ಥಿ ಮಾಡುವ ಹರುಷ ಮಾಡುವ
ಕರ್ತು ಈತನೆ ಕಲ್ಪವೃಕ್ಷನೇ ||2||
ನಿರುಪಾಧಿಯ ಮೊದಲು ತಿಳಿದರೇ
ಗುರುವು ಲಿಂಗ ಜಂಗಮಾದುದೂ
ಅರಿಯ ನೀನಾಧಾರ ಅದೇನೀ
ಗುರುತಿನೊಳು ಮೈ ಮರತು ಮತ್ತೆ ||3||
ಯಾಕೆ ಅಪ್ಪಣೆಯಿಲ್ಲ
ಯಾಕೆ ಅಪ್ಪಣೆಯಿಲ್ಲ ಎಲೆ ದೇವನೇ
ನೀ ಕರುಣಿ ಕೃಪೆ ಮಾಡು ಸೇವಕನು ನಾನು ||ಪ||
ಜಾತಿಗಾರನು ಒಬ್ಬ ಬಗೆಬಗೆಯ ವೇಷದಲಿ
ಆತುರದಿ ತಿರುಗುವನು ನಿತ್ಯನಿತ್ಯ
ಪ್ರೀತಿಯಿಂದಲಿ ಅವಗೆ ಮಾನ ಮನ್ನಣೆ ಕೊಟ್ಟು
ಪ್ರೀತಿವಂತರು ನೋಡಿ ರಕ್ಷಿಸುವರಯ್ಯಾ ||1||
ಗಿಡ ಮರಾ ಕ್ರಿಮಿ ಕೀಟ ಪತಂಗಾ ಪಕ್ಷಿ ಕುಲ
ಬೆಡಗಿನ ಮೃಗ ಪಶುವು ನರದೇಹ ತಾಳೀ
ವಡಿಯ ನಿನ್ನ ಧ್ಯಾನ ಮರತು ತಿರತಿರಿಗ್ಹುಟ್ಟಿ
ಕಡಿಗೆ ನಿನ್ನನು ಸುಖವ ಬೇಡ ಬಂದೇ ||2||
ವೇಷಧಾರಿಗೆ ತ್ಯಾಗಿ ಹರುಷ ಮಾಡಿದ ಹಾಂಗೆ
ಯೀಶ ನೀಯನ್ನ ಆನಂದ ಮಾಡಿದರೇ
ಏಸು ಕಾಲದ ಸಂಶಯ ಹರಿದು ನಿರುಪಾದ್ಯಾಗಿ
ದೋಷ ಹೋಯಿತೆಂಬೆ ಅಡವೀಶ ದಯನಿಧಿಯೇ ||3||
ಯೇನೆ ಪಾರ್ವತಿ
ಯೇನೆ ಪಾರ್ವತಿ ನಿನ್ನಾ| ಹೀನ ಭಾವನೆ ನಿನಗೆ
ಮಾನವೇನೆಲೆ ಶಾಂಭವಿಯೇ| ಗ್ನಾನಿಗಳ ನೋವು ||ಪ||
ಸಾಧು ಸಂಗಳೆ ನೀನು ಸಕಲ ಆಧಾರಿಯು
ಭೇದವೇತಕೆ ನಿನಗೆ ಯನ್ನೊಳು ತಿಳಿಸೌ
ಭೇದವಾಗದೆ ಮಹಾ ಕೇವಲ ಮುದವಾಗು
ಹಾದಿಯೊಳರ್ಥಿ ಮಾಡು ಹರಣವೇ ನೀನು ||1||
ಮುಕುತಿ ಕಾಂತಿಯೆ ನೀನು ಮೂಢೆಯಾದರೆ ನಿನ್ನಾ
ಶಕುತಿ ನಾಮಕೆ ಒಟ್ಟಾವೇ ನಿಂನೊಳು ತಿಳಿ
ಭಕುತಿ ಜ್ಞಾನ ವೈರಾಗ್ಯ ಭಾಪುರೆ ವೀರರ
ಸುಖ ದುಃಖ ನಿನ್ನದಲ್ಲವೇ ಹರಣವೇ ನೀನೂ ||2||
ನಿರುಪಾಧಿ ಅಡವೀಶಾ ನಿಜರೂಪನಹುದೆಂದು
ಮರೆಯ ಹೊಕ್ಕೆನು ಮೋಕ್ಷಕೆ ನಿನ್ನೊಳು ತಿಳಿ
ಚರಣ ಬಿಡು ಬಿಡು ನಿನ್ನಾ ಚೇಷ್ಟಿಗಂಜದ ಸಿದ್ಧಾ
ಕರುಣೆಯಾಗುವದೊಳ್ಳಿತೆ ಹರಣವೆ ನೀನು ||3||
ಯೋಗಿ ನಿನ್ನ ದಿವ್ಯ ಪಾದವ
ಯೋಗಿ ನಿನ್ನ ದಿವ್ಯ ಪಾದವ ರಾಗದಿಂದಲಿ ಭಜಿಪಗೇ
ಭೋಗ ವೀಯ್ಯಲಿ ಕರುಣ ಸಾಗರ ಶ್ರೀಗುರುವೆ ಲಿಂಗ ಜಂಗಮಾ ||ಪ||
ಸ್ಥೂಲ ಸೂಕ್ಷ್ಮವು ಕಾರಣಾಂಗದ ಮೂಲವರಿದಂತೆ ಮಾರುತೀ
ಆಲಯದಿ ಶಿಶು ನಿತ್ಯ ಲೀಲ ಹೊಗಳಿದೆ ಕರ್ತುವೇ
ಜ್ಯಾಲ ನಿನ್ನದು ಲೋಕ ಮುಚ್ಚದೆ ಕೀಲು ಅರಿದಂತೆ ಕುಶಲಿಗೇ
ಪಾಲಿಸೆನ್ನನು ಪಾವನಾತ್ಮನೆ ಕಾಲಕಾಲದ ಮಹಿಮನೇ ||1||
ಶಕ್ತನಾಗಲು ನಿನ್ನ ವಚನಕೆ ಭಕ್ತ ವಸ್ತ್ರಲಂಕಾರವೂ
ಮುಕ್ತಿ ಮಾರ್ಗಕೆ ಹೋಗುವಂಥಾ ಯುಕ್ತಿಗಲಿಸುವೆ ನೀನೆಲ್ಲಾ
ವ್ಯಕ್ತ ಮಾರುತಿ ವಿರತಿ ವಜ್ರದ ತಕ್ತಿನಲ್ಲಿ ಸೆಳೆದುಕೋ
ಯುಕ್ತಿ ಕಳವುತ ವೀರಶೈವದ ಶಕ್ತಿ ಧೈರ್ಯವ ನೀಡುವೇ ||2||
ನಂಬಿ ಭಜಿಸಲು ತಿಳಿದ ಪುರುಷಗೆ ಶಂಭು ನೀನೇ ಶಂಕರಾ
ಅಂಬಪತಿ ಅರಣ್ಯವಾಸದಿ ಯಿಂಬು ಮಾಡಿಹ ಲೀಲವೂ
ಕುಂಬಿನಿಯರ ಸಲಹಲೋಸುಗ ಅಂಬರದಿ ಧರೆಗಿಳಿದು ತಾ
ಶುಂಭು ಮನುಜರು ಕೆಟ್ಟು ಹೋದರು ಯಂಬುತಲಿ ಬಂದ ಮಹಿಮನೇ ||3||
ನಿನ್ನ ಆಟದ ಗುರುತು ತಿಳಿಯಲು ನಿನ್ನ ವಂಶಕ್ಕದೇ
ಭಿನ್ನ ಭಾವಿಯು ಯೇನು ಬಲ್ಲನು ಚನ್ನ ಶ್ರೀಗುರುವಾದನಾ
ತನ್ನ ತಾನೇ ನೋಡಿ ಚಿನ್ಮಯದೇ
ಘನ ಪರಂಜ್ಯೋತಿಯು ಯೆನ್ನುತಿಹ ತ್ರಿಕಾಲದೀ ||4||
ಜ್ಯೋತಿ ರೂಪನು ನೀನು ಆಡುವ ಮಾತುಗಳು ಮಾಣಿಕವು
ಕೋತಿ ಬಲ್ಲದೆ ರತ್ನದ್ಹಾರವಾ ಪ್ರೀತಿಯಿಂದಲಿ ಹಾಕಲಿ
ಆ ತೆರದಿ ನಿನ್ನ ನಿಜವರಿಯಲೀ ಆತುರವೆ ಕೆಟ್ಟ ಭವಿಗೇ
ಸೋತೆ ನಿನ್ನಯ ವಾಕ್ಕು ಹಸನ್ಮುಖ ನೂತನದ ನುಡಿ ನಂಬಿದೇ ||5||
ಕರುಣಿ ನಿನ್ನಯ ಅಂತರಾತ್ಮನ ಬಿರಿದು ಸ್ತುತಿಪ ಜ್ಯಾಣನು
ಬರನು ಯಂದಿಗೆ ನರಕ ದರುಶನ ಮರಿಯಾ ಕೈವಲ್ಲಾಹುದು
ಸ್ಥಿರವು ಸ್ಥಿರವು ಸ್ಥಿರವುಯಂದು ವರಲುವವು ವೇದಾಗಮ
ಪೊರಿಯೆ ಯೆನ್ನನು ಶರಣ ಸಾಧುವಾ ಮೊರೆ ಹೊಕ್ಕೆನು ಸೇವಕಾ ||6||
ಒಡಿಯ ನಿನ್ನಯ ದಿವ್ಯ ಪಾದದ ಸಡಗರೆಲ್ಲಿಯೂ ಕಾಣೆನು
ಯಿಡು ಕರುಣ ಆನಂದ ದೃಷ್ಟಿಯ ಮೃಢನು ನೀನೇ ಎಂದೆನು
ಪೊಡವಿಯೊಳಗೆಯು ದೇಹ ವಿಹಪರಿ ಬಿಡನು ನಿನ್ನಯ ಸ್ಮರಣೆಯು
ಖಡಕು ಬೇಡುವೆ ಬಂಧು ಬಳಗದಿ ಕಡಿಗೆ ನಿನ್ನೊಳು ಐಕ್ಯವಾ ||7||
ಪಿಡಿ ಸಂಸಾರ ಶರಧಿ ದಾಂಚಲಿ ಬೇಡಿದಾ ಶ್ರೀಪಾದ ಕಾಯನು
ನೋಡಿ ಕಟ್ಟದೆ ಅಂಜಿ ಅಳುಕದೆ ಆಡುತಲಿ ನಾ ದಾಟುವೇ
ಕೂಡಿ ಕೂಡದ ಹಾಂಗೆ ಸರ್ವದಿ ಮಾಡಿ ಮಾಡಿದ ರೀತಿಯೂ
ಕಾಡಿದೆನು ನಾ ನಿನ್ನ ಸ್ತೋತ್ರದಿ ಗಾಡಿಕಾರ ಶಂಭುವೇ ||8||
ಈಶ ಅಂಕಲಗಿ ಬೆಳ್ಳಾರಿಯ ಮಠವಾಸ ಅಡವಿಯ ಸಿದ್ಧನೇ
ಆಸೆ ಇಲ್ಲದಾನಂದ ಮಾರುತಿ ದೇಶದೋಳ್ ನೀ ನಿರುಪಾಧಿಯು
ದೋಷ ಹರಿಯಂದು ನಿನ್ನ ಹೊಗಳಿದೇ ಯೇಸು ಕಾಲದ ತೊತ್ತುನಾ
ವಾಸವಾಗೆನ್ನ ಮನದ ಕೊನೆಯೊಳು ರಾಶಿದೈವವ ವಲ್ಲೆನೂ ||9||
ರಾಜ ಗುರು ಹುಷಾರ ಹೋಕೋ
ರಾಜ ಗುರೂ ರಾಜ ಗುರೂ
ಶರಣ ಪಕಡೊ ತುಂ ಪೂರ್ಣ ಗುರೂ ||ಪ||
ರಾಜ ಗುರು ಹುಷಾರ ಹೋಕೋ ಧ್ಯಾನ ಕರೋ ಘನ
ಖುಷಿ ಅಮಲ್ಮೇ ಬೈಠೇ ತು ಮಹಾ ||1||
ಅಂಗ ವಾಚ ಮನ ತಿನೋ ವುನ್ಕಾ
ಲಿಂಗ ಏಕ ತುಂ ಸಂಗ ಹರಾಮಹಾ ||2||
ನಿರುಪಾಧಿ ಅಡವಿ ಪಾಶ್ಚಕು ಕರಾರು ಹೋಕೋ
ಧ್ಯಾನ ಕರೋ ಮಹಾರಾಜ ಗುರು ||3||
ಶಿವಯೋಗಿ ಈತನು
ಶ್ರೀಗುರು ಅಡವೀಶ ಯೋಗಿ ಸಾಕ್ಷಾತನು ಹೊಯ್ಯೊಲೊ ಡಂಗುರವ|
ರಾಗ ರಹಿತ ನಿಸ್ಸೀಮ ಈತನೆಂದು ಹೊಯ್ಯೊಲೊ ಡಂಗುರವ ||ಪ||
ಕಾಮ ಸಂಹರ ಕರುಣಿ ಕಲ್ಪವೃಕ್ಷನು ಹೊಯ್ಯೊಲೊ ಡಂಗುರವ|
ಸೋಮಕೋಟೆ ಪ್ರಭೆ ಪರಬ್ರಹ್ಮನೀತನು ಹೊಯ್ಯೊಲೊ ಡಂಗುರವ ||1||
ನೀತಿ ಪುರುಷನೀತಾ ನಿಜವಾದ ಸಾಧುವಾ ಹೊಯ್ಯೊಲೊ ಡಂಗುರವ|
ನಾಥ ನಿಶ್ಚಯ ನರಗೆ ಮುಕ್ತಿಯ ತಿಳಿಸುವ ಹೊಯ್ಯೊಲೊ ಡಂಗುರವ ||2||
ಪಾತಕರರಿಯರು ಪರಮ ಯೋಗೀಶನ ಹೊಯ್ಯೊಲೊ ಡಂಗುರವ|
ಜ್ಯೋತಿ ರೂಪವಾಗಿ ಹೊಳೆವ ಮೂರ್ತಿಯೀತಾ ಹೊಯ್ಯೊಲೊ ಡಂಗುರವ ||3||
ಶಂಕರನಾಗಿ ಕಿಂಕರ ನುಡಿಯಿಂದಿಹ ಹೊಯ್ಯೊಲೊ ಡಂಗುರವ|
ಜ್ಯೋತಿ ರೂಪವಾಗಿ ಹೊಳೆವ ಮೂರ್ತಿಯೀತಾ ಹೊಯ್ಯೊಲೊ ಡಂಗುರವ ||4||
ಗುರುವಿನ ಬಿಟ್ಟರೆ ಗತಿಯಿಲ್ಲ ನಂಬೋ ಹೊಯ್ಯೊಲೊ ಡಂಗುರವ|
ಅರುವಿಲೆ ತಿಳಿದರೆ ಆನಂದವಾಗ್ವದು ಹೊಯ್ಯೊಲೊ ಡಂಗುರವ ||5||
ಶಿವಯೋಗಿ ಈತನು ಭವರೋಗ ವೈದ್ಯನು ಹೊಯ್ಯೊಲೊ ಡಂಗುರವ|
ಸುವಿವೇಕದಿಂದಲಿ ಸಾಕ್ಷಾತ ಬಂದಾನೆ ಹೊಯ್ಯೊಲೊ ಡಂಗುರವ ||6||
ನಿರುಪಾಧಿ ಗುರು ಈತನು ಪರಿಪರಿ ಲೀಲನು ಹೊಯ್ಯೊಲೊ ಡಂಗುರವ|
ವರ ಅಂಕಲಿನಾಥ ಅಡವೀಶ್ಯಾಯೆನಿಸಿದ ಹೊಯ್ಯೊಲೊ ಡಂಗುರವ ||7||
ಶಿವನೆ ನೀನೋ ನೀನೋ ಶಿವನೂ
ಶಿವನೆ ನೀನೋ ನೀನೋ ಶಿವನೇ ವಿವರ ತಿಳಿದವಗೆ ಗುರುವೇ
ಭವವ ಕಳಿಯೆ ನರ ಶರೀರ ತಾಳಿ ಬಂದಿಹೇ ||ಪ||
ನಡೆಯು ನುಡಿಯು ವಂದೆಯಾದ ಸಡಗರೆಲ್ಲಿಯೂ ಕಾಣೆ
ವಡಿಯ ಇಲ್ಲಿ ಕಂಡು ಸುಖದಿ ಹಾಡಿ ಹರಸಿದೇ
ಬಿಡದೇ ನಿನ್ನ ಸ್ತೋತ್ರ ಘಟವು ಪೋಡವಿಲೀಹ ಪರಿಯಾಯೇಕ
ದೃಢವಾ ಕೊಟ್ಟು ನಡಿಸು ಯೆಂಬೊ ಬಯಕೆ ಯನ್ನದೂ ||1||
ಯೇಸು ದೇಶ ತಿರುಗಿದವರ ಸೋಸಿ ನೋಡುತಲೀತ
ಯೋಗೀಶ್ಯಾನೆಂದು ಪ್ರಥಮರೆಲ್ಲ ನುಡಿವ ನುಡಿಗೇಳಿ
ಪೋಷಿಸೆಂದು ಬೇಡಿಕೊಂಬೆ ಕೂಸು ನಿನ್ನವ ನಾನು
ಯೇಸು ಕಾಲದಿಂದ ತೊತ್ತು ನುತಿಸ ಬಂದಿಹನೇ ||2||
ಪಿಡಿ ಸಂಸಾರದೊಳು ಯೆನ್ನ ಕೂಡಿ ಕೂಡದ ಹಾಗೆ
ನೋಡಿ ರಕ್ಷಿಸೈಯ್ಯಾ ನಿನ್ನ ಸೇವಕನು ನಾನು
ಆಡಲೇಕೆ ಬಾಯಿ ತೆರೆದು ನಾಡೊಳಧಿಕನೇ ನಿನಗೆ
ಬೇಡಿದಂತಾ ವರವ ನಡಸಲಿಕ್ಕೆ ಅಧಿಕಾರೀ ||3||
ಬಾಳ ಬಲ್ಲವರ ತೊತ್ತು ಆಳಿನಾಳಯ್ಯಾ ಅಣುವೂ
ಕೇಳುಯೆನ್ನಾ ಬಿನ್ನಪವನು ಹೇಳಲಾರಿಗೇ
ಆಳಿದನೆ ಆರ್ಥಿಮಾಡು ಬಾಳ ಲೋಚನಾ ತಾನೇ
ಹೇಳಲೇನ ತಿಳಿದು ನೀನು ರಕ್ಷಿಸೈದೇವಾ ||4||
ವಂದೆ ಕಾಂಕ್ಷೆಯಿಹದು ಜಗದಿ ಬಂದೆ ಅರುವೆಂದೂ ಯಿಲ್ಲೀ
ಚಂದದಿಂದ ನೋಡಿ ಹೊಗಳೇ ಮುಕ್ತನಾದೆನೋ
ತಂದೆ ತಾಯಿ ಬಂಧು ಬಳಗಾಯಂದು ಮರೆ ಹೊಕ್ಕೆದಯದಾ
ಸಿಂಧು ಅಡವಿಸಿದ್ಧ ತಾನೆ ನಿರುಪಾಧಿ ||5||
ಶಿವಲಿಂಗ ನಿರುಪಾಧಿ ಅಡವೀಶ್ವರ
ಶಿವಲಿಂಗಾ ಸ್ತ್ರೀಲಿಂಗಾ ಮೂರು ಮಾಲಾ ಗುರುಲಿಂಗ ಜಂಗ್ಮಾದನೇ
ಭವ ರೋಗಹರ ತಂದಿ ತಾಯಿ ತಾನೂ ಸ್ತ್ರೀಯಾಗಿ ಪುತ್ರಾದನು
ವಿವರ ತಿಳಿಯಲಿ ಪುತ್ರಿ ಅಜ್ಜ ಆಯಿ ನಿರುಪಾಧಿ ಅಡವೀಶ್ವರ ||1||
ಪರಮ ಗುರುವರ ನಂದಿ ನಾಥ ಪ್ರಭುವೇ ಮೋಕ್ಷಕ್ಕೆ ಅಧಿಕಾರನೇ
ವರಣ ತಿಳಿಯಲು ಮೂರು ಮೂರ್ತಿಗರಿದೂ ಜಂಗಮಕೆ ಭಕ್ತಾಗಿಯೇ
ಯಿರವು ತಿಳಿಯಲ್ಕರಿದು ರೂಪ ಧರನೇ ನಿರುಪಾದಿ ಅಡವೀಶ್ವರ ||2||
ಕಾಂತಾ ಕಾಂತಿಯು ಕಾಂತಿಯಲ್ಲಿಯಿಡಲೂ ಸದ್ಗುರುವು ತಾನಾದನೇ
ಶಾಂತಾ ಶಾಂತಿಯೇ ಶಾಂತದಿಂದ ಬೋಧ ನಿನಾದ ನಿಜವಾದನೇ
ಅಂತ್ಯ ಆದಿ ಮದ್ಯ ರಹಿತ ಗುರುವೇ ನಿರುಪಾಧಿ ಅಡವೀಶ್ವರ ||3||
ಅತೀತ ಆನಂದೈಕ್ಯ ಪದದ ನೆರವೇ ಕರ್ಮಿ ಮುಮುಕ್ಷಾದನೇ
ಹಿತದಿ ಅರಿಯಲು ಸಾಧಕನು ಭವಿಯಾಗಿ ಆರೂಢ ಮಹಿಮಾದನೇ
ಗತಿಯಿಂ ನೋಡಲು ಎಂಟು ಮೂರ್ತಿ ಕೀರ್ತಿ ನಿರುಪಾಧಿ ಅಡವೀಶ್ವರ ||4||
ನಾಥನಾಥರ ಸಲಹಲಿಕ್ಕೆ ಖ್ಯಾತಾ ಅರವು ಅಹಲ್ಲಾದನೇ
ನೀತಾ ನೀತದಿ ಹೋಗದ ಜ್ಯಾತಿ ರಹಿತಾ ಅಹುದಲ್ಲದೊಳು ಭೇದ್ಯನೇ
ಮಾತು ಮಾತ್ರದಿ ಜಗದ ರಚನೆ ಮಾಡೀ ನಿರುಪಾಧಿ ಅಡವೀಶ್ವರ ||5||
ವಾ ಆದಿ ಸಾ ಅಂತ್ಯ ಪ್ರಣಮದೊಳಗೇ ಆಚಾರ ಲಿಂಗಾದನೇ
ಬಾ ಆದಿ ಲಾ ಅಂತ್ಯ ಮನುಗಳಲ್ಲಿ ಗುರುಲಿಂಗ ತಾನಾದನೇ
ಡಾ ಆದಿ ಪಾ ಅಂತ್ಯ ದಳದ ಶಿವಲಿಂಗ ನಿರುಪಾಧಿ ಅಡವೀಶ್ವರ ||6||
ಕಾ ಆದಿ ಟಾ ಅಂತ್ಯ ಬೀಜದೊಳಗೇ ಜಂಗಮ ಲಿಂಗಾದನೇ
ಆ ಆದಿ ಅಃಕಡೆಯು ಮೂಲದೊಳಗೇ ಪ್ರಸಾದ ಲಿಂಗಾದನೇ
ಹಂ ಆದಿ ಕ್ಷಂ ಕಡೆಯು ಎರಡರಲ್ಲಿ ಮಹ ಲಿಂಗ ನಿರುಪಾಧಿ ಅಡವೀಶ್ವರ ||7||
ಸಡಗರಾನಂದ ಚಿಂತೆ ನಿನಗೆ ಹತ್ತಿದೆ
ಸಕಲ ತಾಪತ್ರಯದ ಭಾರ ನಿನ್ನಗ್ಹತ್ತಿದೆ
ಸುಖದಿ ನಿನ್ನ ಧ್ಯಾನ ಮಾಡೋದೆನಗೆ ಹತ್ತಿದೆ ||ಪ||
ಮಡದಿ ಮನೆಯು ಪಶುವು ಚಿಂತೆ ನಿನಗೆ ಹತ್ತಿದೆ
ಷಡು ಚಕ್ರಂಗಳ ಸುಳುವು ಕಾಣೋದೆನಗೆ ಹತ್ತಿದೆ
ಸಡಗರಾನಂದ ಚಿಂತೆ ನಿನಗೆ ಹತ್ತಿದೆ
ಅಡಿಯ ಧ್ಯಾನ ಮಾಡ ಲಹರಿ ಯನಗೆ ಹತ್ತಿದೆ ||1||
ಪುತ್ರ ಪೌತ್ರನ ಮದುವೆ ಚಿಂತೆ ನಿನ್ನಗ್ಹತ್ತಿದೆ
ನಿತ್ಯ ನಿನ್ನ ನಾಮ ಸ್ತುತಿಪದು ಯನಗೆ ಹತ್ತಿದೆ
ಅತ್ಯೆ ಮಾವ ಅಳಿಯನೆಂಬೊದು ನಿನಗೆ ಹತ್ತಿದೆ
ಚಿತ್ತ ನಿನ್ನೊಳಗಾಗಿ ನಿಲ್ಲೊದೆನಗೆ ಹತ್ತಿದೆ ||2||
ಮುತ್ತು ಭಂಗಾರ ಬೆಳ್ಳಿ ಅರವಿ ನಿನ್ನಗ್ಹತ್ತೆದೆ
ಕರ್ತು ಮುಕ್ತಿ ಪಾಲಿಶಂಬುದೆನಗೆ ಹತ್ತಿದೆ
ಮಿಥ್ಯದಾಟ ಮಾಡಿ ತೋರೊದು ನಿನಗೆ ಹತ್ತಿದೆ
ಸತ್ಯವಾದ ವಸ್ತು ಬೆರೆವದು ಯನಗೆ ಹತ್ತೆದೆ ||3||
ಕಾಲ ಕಾಲದಲ್ಲಿ ಕಾವದು ನಿನಗೆ ಹತ್ತಿದೆ
ಲೋಲ ಮೂರ್ತಿಯಾಗಿ ಚರಿಪೊದೆನೆಗೆ ಹತ್ತಿದೆ
ಮಾಲಿ ಹಾಕಿ ಮೆರೆಸುವದು ನಿನಗೆ ಹತ್ತಿದೆ
ಕೀಲನರಿದು ಕೊಂಡಾಡೋದು ಯನಗೆ ಹತ್ತಿದೆ ||4||
ಚರಣ ಧೂಳೀ ನನ್ನವೆಂಬೊದು ನಿನಗೆ ಹತ್ತಿದೆ
ಗುರುವು ಅಂಕಲಗೀಶನೆಂಬೊದು ಯನಗೆ ಹತ್ತಿದೆ
ಪರಿ ಪರಿಯು ಕಾಯ್ದು ಬರುವದು ನಿನಗೆ ಹತ್ತಿದೆ
ಅರಮರಿಲ್ಲಾ ನಿರುಪಾಧಿ ಯನಗೆ ಹತ್ತಿದೆ ||5||
ಸಂತೋಷದಿಂದ ಗುರು ಭಕ್ತರ್ಹಾಡಿ
ಸ್ವರ್ಗ ಕೈಲಾಸ ಕೈವಲ್ಯಯಿದೆ ನಿಶ್ಚಯವೂ
ಭಾರ್ಗೋದೇವೀಶ್ವರಿ ಸದಾ ಶಿವ ಅಡವೀಶ್ಯಾ ||ಪ||
ಮೇಲೆಂಬ ಬಗೆ ನಾನು ಕಂಡಿಲ್ಲಾ ಕೇಳಿದುದೂ
ಲೋಲ ಮಾರುತಿ ನೋಡಿ ಸಾಕ್ಷಾತನೆಂದೇ|
ಕೀಲಿಹುದು ಯಿಲ್ಲಿ ಶೃತಿಯೊಳಗೆ ಪೇಳಿದ ಹಾಂಗೇ
ಮೂಲ ಪ್ರಮಥರ ವಾಕ್ಯದಂತೆ ಅಹುದಹುದು ||1||
ನಿಂತುದೇ ಕ್ಷೇತ್ರ ನುಡಿದುದೇ ಮಂತ್ರವೆಂತೆಂದೂ
ಸಂತೋಷದಿಂದ ಗುರುಭಕ್ತರ್ಹಾಡಿಹರ
ಕಾಂತಿ ತ್ರೈಲೋಕದೊಳು ಬೆಳಗಿಹುದು ಅದು ಕಂಡು
ಅಂತ್ಯ ಮಧ್ಯ ಆದಿ ರಹಿತನಃ ಪ್ರತಿಮಾ ||2||
ನಿರುಪಾಧಿ ಗುರು ಬ್ರಹ್ಮದೊಳು ನಾದಬಿಂದು ಕಳೆ
ಗುರುಲಿಂಗ ಜಂಗಮ ಹರಿಹರ ವೇದ ಮುಖನೂ
ಪರಿಪರಿಯ ತ್ರಿಪುಟಿಗಳು ಪರಮ ಸೂತ್ರಗಳೆಂದು
ವರದ ವಚನವ ನೋಡಿ ನಿಜ ನಿಜವುಯೆಂದೇ ||3||
ಸದಮಲಾನಂದ ಸಾಕ್ಷತ ಅಡವೀಶ್ಯಾ
ಸದ್ಗುರುವು ಆದಂತ ವಿಧ ಮೂಢ ಮತಿ ಅರಿಯಾ
ಸದಮಲಾನಂದ ಸಾಕ್ಷಾತ ಅಡವೀಶ್ಯಾ ||ಪ||
ಭವಿ ಭಕ್ತರೇಕಾದ ಸುದ್ದಿಯನು ಕೇಳುತಲಿ
ಸುವಿವೇಕದಿಂ ಪತ್ರಿ ವೃಕ್ಷದಡಿಯಿರುವಾ
ಭುವಿಯ ಮೃತ್ತಿಕೆ ಲಿಂಗ ಮಾಡಿ ಕರದೊಳಗಿರಿಸಿ
ವಿರಿಸಲು ಸಕಲ ಅದ್ವೈತ ವೀರಶೈವಾ ||1||
ಕಾಲಜ್ಞಾನದ ಸೂಚನೆಯ ನೋಡಲಿಕೆ ಇಲ್ಲಿ
ಕೀಲು ಕಾಣುವದು ಸುಜ್ಞಾನ ಪುರುಷರಿಗೇ
ಕಾಲಕಾಲದ ವಸ್ತು ಲೀಲವಾಡಲಿ ಬಂದು
ಮೇಲು ಮಹತ್ತಿಲಿ ಮೆರೆವ ಮಹದಾದಿ ವಡಿಯಾ ||2||
ನಿರುಪಾಧಿ ತಾನಾದ ಗುರುತಿನೊಳು ಮೈಮರೆದು
ಶರೀರ ಸುಖ ದುಃಖಕೆ ನೀ ಸಾಕ್ಷಾತನಾಗೀ
ಪರಮ ಯತಿ ಕುಲ ಚಂದ್ರ ಅಂಕಲಗಿವಾಸ
ಹರುಷ ಆನಂದರುವು ತಾನೆ ತಾನಾಗೀ ||3||
ಸಿದ್ಧ ಶ್ರೀಗುರು
ಸಿದ್ಧ ಶ್ರೀಗುರು ಪ್ರಸಿದ್ಧ ಮಹಿಮ ತಾನೇಯಲ್ಲಾ ||ಪ||
ಜಗದವಳಗೆ ನಾಮ ಶ್ರೇಷ್ಠ
ನಿಗಮ ಕೂಗುತಿಹದು ಅರಿದು
ಅಗಲದಾಲೆ ಬ್ರಹ್ಮವನ್ನು
ಸೊಗಸು ಮಾಡಿ ಅರಿದ ಪುರುಷಾ ||1||
ತಾನೆ ತಾನೆಯಾದ ಸುಖವ
ಮೌನ ಮುದ್ರೆಯಿಂದ ಅರಿದು
ಖೂನದೊಳಗೆ ಆಡುವಂಥಾ
ಜ್ಞಾನಿಗರಿಕಿ ನಿನ್ನ ಗುರುತು ||2||
ಅರ್ಥದ್ಹಮ್ಮಿನೊಳಗೆ ನನ್ನ
ಗುರುತು ಅರಿಯಲಿಕ್ಕೆ ಅರಿದು
ಕರ್ತು ನಿನ್ನ ಕರುಣವಲ್ಲದೇ
ಮತ್ರ್ಯ ವಸ್ತು ಸಿಗುವದುಂಟೇ ||3||
ಗೂಢ ಗುಪ್ತ ಲೀಲದಾಟವ
ಮೂಢ ಮತಿಗಳೇನು ಬಲ್ಲರು
ಮಾಡಿದಂಥಾ ಕರ್ಮವೇಕೆ
ಆಡುವದು (ನು) ಸದಾನಂದಾ ||4||
ನಿರುಪಾಧಿ ಅಡವಿಪಾಶ್ಚನು
ಸ್ಮರಣೆ ಮಾತ್ರ ಮುಕ್ತಿಯಾಗ್ವ
ಕುರುಹು ತಿಳಿಯಬಲ್ಲಡವನೇ
ಗುರು ಲಿಂಗ ಜಂಗಮದಾ ||5||
ಸುಮ್ಮನಾಗದು
ಸುಮ್ಮನಾಗದು ಕರುಣಾ ಕರ್ಮವರಿಯದನಕಾ|
ವಮ್ಮನವಾದರೆ ಬೇಗ ವಲಿವ ಅಡವೀಶ್ಯಾ ||ಪ||
ಬಾಯಿ ಬಿಟ್ಟರೆ ಇಲ್ಲ. ಬಳಲಿ ಅತ್ತರೆ ಇಲ್ಲ|
ಸಾಹಸದಿ ಯೇನೇನು ಮಾಡಿದರೆ ಇಲ್ಲ|
ಕಾಯಾ ವಾಚಾ ಮನ ಮೂರು ಸುದ್ದಾದರೆ|
ಆಯಾಸ ಕಳೆದು ಆನಂದದಲಿಡುವಾ ||1||
ಯಾಗ ಮಾಡಿದರಿಲ್ಲ ದಾನ ಮಾಡಿದರಿಲ್ಲ|
ಸೋಗೀಲಿ ಜಪ ನೀತಿ ಹಿಡಿದಿರಿಲ್ಲ|
ಯೋಗ ಪೂಜಿಗಳಿಂದ ಮುಕ್ತಿವಡೆಯನು ಶಿಗನು|
ಆಗ ಬೇಗದಿ ವಲಿವ ಪುಣ್ಯ ವದಗಲಿಕ್ಕೆ ||2||
ನಿರುಪಾಧಿ ತಿಳಿದಾತನೀತ ಅಂಕಲಿವಾಸ|
ಪರಮ ಗುರುಲಿಂಗ ಸದಾಶಿವನು|
ಪರತರಾನಂದೈಕ್ಯ ಪದಕೆ ಸಂಶಯ ನಾಸ್ತಿ|
ಇರಬೇಕು ಸುಕೃತ ತಾನೆ ತಾನೆ ಆಗ್ವ ||3||
ಸುಮ್ಮನಿರಬೇಕು
ಸುಮ್ಮನಿರಬೇಕು ಶಿವನಾದ ಮ್ಯಾಲೆ ಸುಮ್ಮನಿರಬೇಕು
ನಿಮ್ಮ ನಿಜಾನಂದ ವಮ್ಮನದಿಂದಲಿ ||ಪ||
ಕಂಮ್ಮು (ಕಮ್ಮು) ಹೆಚ್ಚು ಯೆಂಬೊ
ಹಮ್ಮಳಿದ್ಹರುಷದಿ ಸುಮ್ಮನಿರಬೇಕು ||1||
ನೂತನ ವಸ್ತುವಾ ಪ್ರೀತಿಯಿಂದಲೇ ತಿಳಿ
ದಾತುಮ ಸುಖದೊಳು ಅತೀತ ಎನ್ನದೆ ಸುಮ್ಮನಿರಬೇಕು ||2||
ಸ್ಥೂಲದೊಳಗೆ ಸೂಕ್ಷ್ಮ ಕೀಲು ದೋರಿದ ಮೇಲೆ
ಕಾಲ ಕರ್ಮ ಹರಿದಾಲಯವಾದವಾ ಸುಮ್ಮನಿರಬೇಕು ||3||
ಗೂಢದ ಭಕ್ತಿಯ ಗೂಡು ಸೇರಿದ ಮೇಲೆ
ಕೂಡಿ ಕೂಡದಂತೆ ಇರ್ದು ನಿರ್ಲಿಪ್ತದಿ ಸುಮ್ಮನಿರಬೇಕು ||4||
ನಿರುಪಾಧಿಯಾದವ ಕರಕರೆ ಹೋಗದಲೆ
ವರ ಬೈಲಾಟವು ಗುರುಲೀಲಯೆಂದವಾ ಸುಮ್ಮನಿರಬೇಕು ||5||
ಸುವ್ವಿ ಸುವ್ವೆಯ್ಯ
ಸುವ್ವಿ ಸುವ್ವೆಯ್ಯ ಜ್ಯಾಣೇ| ಸುವ್ವಿ ಸುವ್ವೆಯ್ಯ ಜ್ಯಾಣೇ
ಸುವ್ವಿ ಸುಕ್ಷೇಮವೆ ಪ್ರವೀಣೇ| ಸುವೈಯ್ಯ ಜ್ಯಾಣೇ ||ಪ||
ಸುಖದ ಯಿಚ್ಛೆಯೆಂಬೊ ವಳ್ಳೊಳು
ಅಖಿಳ ವಿರತಿಯಂಬವ ಜೋಳ
ಅಕ್ಕರದಿ ಒಬ್ಬೋಳೇ ಕುಟ್ಟುವೇನೇ ||ಸುವ್ವಿ|| ||1||
ಆತ್ಮವಿಚಾರ ವಿಚಾರ ಯಂಬೊ ನೀರು
ಸ್ವಾತ್ಮೆ ತಿಳಿಯದು ವ್ಯಾಳ್ಯವ್ಯಾಳ್ಯಕೆ
ಪ್ರೀತಿಯಿಂದ ಒಬ್ಬಳೇ ಮಾಡುವೆನು ||ಸುವ್ವಿ|| ||2||
ನಿಸ್ಸಂಗೆಂಬೊ ವಬ್ಬೆಯ ದೊಬ್ಬಿ
ಪಸು ಸರ್ವ ಪ್ರಪಂಚೆಂಬೊ
ಯಶಸ್ಸೀನ ಗುರುವಿನ ಹಾಡುವೇನು ||ಸುವ್ವಿ|| ||3||
ವಾಸನ ಕ್ಷಯವೆಂಬೊ ವನಿಕೆ
ದೋಷ ರಹಿತನಂದ ಕರದಿ
ಈಶ ತನೆಂದ್ಹಾಡಿ ಕುಟ್ಟುವೆನೇ ||ಸುವ್ವಿ|| ||4||
ತೂರ್ಯದಿಂದೆ ಹೊಟ್ಟು ಹಾರಿಸಿದೇ
ತೂರ್ಯಾತೀತದ ಅಕ್ಕಿಯ ಮಾಡಿ
ಕಾರ್ಯ ಕಾರಣ ಮೀರಿ ಕುಳಿತನೇ ||ಸುವ್ವಿ|| ||5||
ಶಿದ್ಧ ಹಸಿದನೆಂದು ಮನದಿ
ಬುದ್ಧಿ ಹುಟ್ಟಲಿಕ್ಕೆ ಯದ್ದು
ಶುದ್ಧ ಪುರುಷರ ಸಂಗ ಹುಡುಕಿದೆನೆ ||ಸುವ್ವಿ|| ||6||
ಶ್ರವಣವೆಂಬೊ ಗಡಗಿಯ ಒಳಗೆ
ವಿವರ ನೀರು ಮನನ ಅಕ್ಕಿ
ಜವದಿ ನಿಧಿ ಧ್ಯಾಸವೆಂಬೊ ಅಗ್ನಿಯ ಹಚ್ಚಿದೆನು ||ಸುವ್ವಿ|| ||7||
ಧೈರ್ಯಯೆಂಬೊ ಕುದಿಯ ಬರಲು
ಸೈರಣಿಯಂಬೊ ಕಿಚ್ಚಿಗೆ ಯಿಳುಹಿ
ಕಾರ್ಯ ಕಾರಣ ಮೀರರ್ದಾ ಮುಖ ತೊಳಿದೇ ||ಸುವ್ವಿ|| ||8||
ನಿರುಪಾಧಿ ಅಡವೀಶನಿಗೆ
ಪರಿಪೂರ್ಣ ನವವಿಧ ಭಕ್ತಿಯಲಿ
ವರಣ ಮೀರಿದವನಿಗುಣಿಸಿದೆನೇ ||ಸುವ್ವಿ|| ||9||
ಸೇವಕನು ನಾ ನಿನಗೆ
ಸೇವಕನು ನಾ ನಿನಗೆ ಕರುಣ ಮಾಡೊ
ಕೇವಲಾನಂದಾಗೊ ಹರುಷದಿಂ ನೋಡು ||ಪ||
ಆದಿಯಲಿ ಪ್ರಭು ನೀನು| ಅನಾದಿ ಭಕ್ತನು ನಾನು
ಶೋಧಿಶಿದರದ ಕಾರಣವೆ ನಿನ್ನ ಧ್ಯಾನ
ಮೋದದಿಂದಲಿ ಮಾಳ್ವೆ| ನಿಜದಲ್ಲಿ ನೋಡಿ ವಿನೋದವಾಗಿಹ
ಮುಕ್ತಿ ಮಹವುಖವ ಮಾಡು ||1||
ಬಹು ಜನ್ಮ ಬರಲಾರದಲೆ ನಿನ್ನ ಮರೆ ಹೊಕ್ಕೆ
ವಹಿತ ಕೃಪದಿಂ ನೋಡು ನಿನ್ನ ಶ್ಯಾಕಾ
ವಹಿಸಿಕೊಡು ನಿಜ ನುಡಿಯ ವಸ್ತುವಿಹಪರಿಯಂತ
ಸಹಿಸಲಾರೆನು ತಾಪ ಸಾಕ್ಷಾತನೇ ||2||
ಶರಿರಿರುವ ಪರಿಯಂತ ನಿನ್ನ ಧ್ಯಾನವ ನುಡಿಸಿ
ಪರಮ ಕಡಿಯಲಿ ನಿನ್ನ ಚರಣದೊಳಗೈಕ್ಯ
ನಿರುಪಾಧಿ ಅಡವೀಶ ನೀನಲ್ಲದಿನ್ನುಂಟೆ
ಬಿರದಿಗಾಗಿಯೆ ಬಿಡದೆ ಕರುಣಾಕರ ತನ್ನ ||3||
ಹರ ಸಾಂಬ ಸದಾಶಿವ
ಹರ ಹರ ಹರ ಹರ| ಸಾಂಬ ಸದಾಶಿವ
ಶಿವ ಶಿವ ಶಿವ ಶಿವ ಶಂಭು ಶಿವಾ ||ಪ||
ಅಡವೀಶನ ಲೀಲಾಮೃತ ನಿತ್ಯದಿ
ನುಡಿವದು ಮಹಘನ| ಸಾಂಭಶಿವಾ
ನುಡಿಯಲು ಕರ್ಮವು ಹರಿವದು ನಿಶ್ಚಯಾ
ಸಡಗರ ಸುಖಮಯ ಸಾಂಭಶಿವಾ ||1||
ಪರಮನು ಗುರುವರ ವುರತರ ಸ್ಥಿರಕರ
ಹರುಷಾನಂದದಿ ಸಾಂಭಶಿವಾ
ಮರಿಯದೆ ನೆನೆದರೆ ಚರನ ತೋರಿಸುವ
ಖರಿಯ ನಂಬಿ ನಿಜ ಸಾಂಭಶಿವಾ ||2||
ಪಾಪವು ಹರಿವದು ಭೂಪನ ಕರುಣದಿ
ಕಾಪಟ್ಯವು ಕಳಿ ಸಾಂಭಶಿವಾ
ಯೀ ಪರಿಯಲಿ ತ್ರಿಕಾಲದಿ ನೆನೆದರೆ
ಮಾಫ ಅಪರಾಧವು ಸಾಂಭಶಿವ ||3||
ಕರ್ಮವು ಹರಿವದು ನಿರ್ಮಳವಾಗೋದು
ಧರ್ಮವು ತಿಳಿದರೆ ಸಾಂಭಶಿವ
ಮರ್ಮವು ತಿಳಿವದು ವಸ್ತು ತಾನಾಗುವ
ನರ್ಮ ದೋಷಗಳು ಸಾಂಭಶಿವ ||4||
ನಿರುತಿದಿ ಧ್ಯಾನಿಸು ಬರಿಯಾ ಬಯಲಾಗುವೆ
ಖರಿ ಖರಿಯ ನಿಜ ಸಾಂಭಶಿವ
ಗುರು ನಿರುಪಾಧಿ ಅಂಕಲಿನಾಥನ
ಚರಣ ಬಿಡಲಿರು ಸಾಂಭಶಿವ ||5||
ಹಣ್ಣು ಸಿಕ್ಕರೆ ಹಬ್ಬೊ
ಹಣ್ಣು ಸಿಕ್ಕರೆ ಹಬ್ಬೊ ನಮ್ಮಣ್ಣ| ಹಣ್ಣು ಸಿಕ್ಕರೆ ||ಪ||
ಬಯಲ ವೃಕ್ಷದೊಳಗೆ ಹುಟ್ಟಿತೇ ಹಣ್ಣು
ನಯನ ಮಾನಸಕೆ ಗೋಚರವು ಈ ಹಣ್ಣು
ಸ್ವಯ ಪರ ಎರಡಕ್ಕೆ ನಿಲ್ಕದ ಹಣ್ಣು
ಕೈಲಾಸ ಸ್ವರ್ಗಕ್ಕೆ ಮೀರಿದ ಹಣ್ಣು ||1||
ಮೂರು ಮೂರ್ತಿಗಳಿಗೇ ಸೂತ್ರ ಈ ಹಣ್ಣು
ಆರು ಮುದ್ರಿಗಳಿಗತ್ತತ್ತ ಹಣ್ಣು
ತೋರೋದು ತೋರದ್ದಕ್ಕಾಗಿ ಈ ಹಣ್ಣು
ಪೂರಣ ವಸ್ತುತಾ ಪರಿಪೂರ್ಣ ಹಣ್ಣು ||2||
ನಿರುಪಾದಿ ನಾಮದ ಗುರುತಿನ ಹಣ್ಣು
ಗುರುಲಿಂಗ ಜಂಗಮ ನಾದಂಥ ಹಣ್ಣು
ವರದ ಅಂಕಲಿನಾಥ ಅಡವಿಸಿದ್ದನೆಂದು
ಪರಮ ಸಂತೋಷದಿ ಕೂಗುವ ಹಣ್ಣು ||3||
ಹೇಳಬೇಕೀ ನಾರಿಗೆ
ಹೇಳಬೇಕೀ ನಾರಿಗೆ ತಾನೆ ತಾ ಬಾಳ ಲೋಚನವಾದವಾ| ನೋವು ||ಪ||
ಸಂಚಿತದಿಂದ ಪ್ರಾರಬ್ಧಾ ಮಿಂಚುವದು ಮೂರು ದಿವಸ ಎಂದೂ
ಹಂಚಿಕೆಯನರಿತ ಮಹಿಮಾ ನಿಜ ಸುಖವು ಕಿಂಚಿತಿಲ್ಲ ದುಃಖವೂ| ನೋವು ||1||
ತನ್ನ ತನು ಸುಳ್ಳುಯಂದು ಅರಿದಂತ ಅನುವಿನೊಳು ಬಾಧೆಯುಂಟೇ ಅವಗೆ
ಮುಂದೆ ದೇಹ ದೋಷವಿಲ್ಲಾ ಘಟಕಾಗೋ
ಘಟಕಾಗೋ ಘನತೆ ಅಭಿಮಾನವಿಲ್ಲಾ| ನೋವು ||2||
ನಿರುಪಾಧಿಯಾದ ಮೇಲೆ ಅಡವೀಶ ಅರುಹು ಕುರುಹುಗಳಿಲ್ಲವೋ
ಅಲ್ಲಿ ಶರೀರ ತಾನೆಂಬೊದಿಲ್ಲಾ ತಿಳಿದವಗೆ
ಬರೆ ಬೈಲ ರೂಪವಾದವರಿಗೆ ನೋವು ಶ್ರೀಕ್ಷೇತ್ರ ||3||
ಹೊಕ್ಕನಯ್ಯ ಗವಿಯ ಹೊಕ್ಕನಯ್ಯ
ಹೊಕ್ಕನಯ್ಯ ಗವಿಯ ಹೊಕ್ಕನಯ್ಯ|
ಮುಕ್ಕಣ್ಣ ಮುಕ್ಕಣ್ಣ ಹರಿನೀತ ಮಹಾದೇವ ಅಡವಿಯ ಶಿದ್ಧಾ ಹೊಕ್ಕನಯ್ಯ ||ಪ||
ತನ್ನಶ್ಯಾಕದ ಮೂರ್ತಿ ಚನ್ನಾಗಿ ದರುಶನಕೆ
ವುನ್ನತೋನ್ನತವೆಂಬೋ ವಾದ್ಯ ಭಜನಿಗಳಿಂದಾ ||1||
ನಾನಾ ದೇಶದ ರೂಪ| ಕೂನದೊಳಿರುತಲೀ
ಕಾನನದೊಳು ಬೈಯಲು| ಸ್ವಾನುಭಾವದ ಸುಖ|| ||2||
ನಿರುಪಾಧಿ ಗುರು ಈತಾ| ಪರಿ ಪರಿ ಲೀಲದಿಂದಾ|
ಗುರುಲಿಂಗ ಜಂಗಮದ ಪರಿಯನರಿದ ಪೂರ್ಣ|| ||3||
ಹೋಗತೀನಿ ನಾನು ಹೋಗತೀನಿ
ಹೋಗತೀನಿ ನಾನು ಹೋಗತೀನಿ
ನಾನು ಹೋಗತೀನಿ ಯೋಗಿ ಅಡವೀಶನಾ ಕಂಡು ಮುಕ್ತಿಗೆ ||ಪ||
ಹಿಂದೇಳು ಜನ್ಮದ ಪಾಪ ಹರಿದು ಸಂಶಯ ಹುರಿದು
ಸಂದೇಹ ಗುಣಗಳೆಲ್ಲ ಮರದು ನಿಜದೊಳು ಬೆರದು
ಕುಂದು ಕೊರತಿ ಎಲ್ಲಾ ನೀಗಿ ತೂಗಿ ಬ್ರಹ್ಮ ತಾನಾಗಿ
ಅಂದು ಇಂದು ಯೇನು ಇಲ್ಲ ನೀನಾಗಿ ಸುಗುಣದ ಭೋಗಿ ||1||
ಯೇನು ಹೇಳಿ ಅಲ್ಲಿ ಇರುವಂತ ಸೂಯೇಕಾಂತ
ಸ್ವಾನು ಭಾವದ ಸುಖ ನಿಶ್ಚಂತ ಹೋಯಿತು ಪಂಥಾ
ಕೂನದೊಳಗೆ ಚಿಂತೆಯೇನು ಇಲ್ಲ ಶಿವ ಜಗವೆಲ್ಲಾ
ತಾನಾದ ಬ್ರಹ್ಮವು ಸೀಬೆಲ್ಲಾ ಹೇಳುದಕಿಲ್ಲಾ ||2||
ಅಲ್ಲಿ ಬೀರು ಸುಖ ನಿರುಪಾಧಿ ಎಲ್ಲವುಪಾಧಿ
ಬಲ್ಲಿದ ಭವ ಜೈಸುವ ಹಾದೀ ಯೇನಿಲ್ಲವಾದೀ
ಸೊಲ್ಲು ಸೊಲ್ಲಿಗೆ ಗುರುನಾಮ ವಳಗೆ ನುಡಿಯುತ ಬೆಳಗೇ
ಯಳ್ಳಷ್ಟು ಬಾರ ಇಳಿಗೆ ಆನಂದ ವಳಗೆ ||3||