ಭಾಗ-6: ಬಸವಣ್ಣ ಸ್ವಾಮಿಯವರ ತತ್ವಪದಗಳು
1
ಪಾಲಿಸಯ್ಯ
ನೀ ಕೈಯ ಬಿಟ್ಟರಿನ್ಯಾತಕೆನಗೆ ಸುಖಾ |
ಗೋಕುಲ ಗಣನಾಥ…|| ಸಾಕು ಸರ್ವ
ದುರಾಧಿ ಸ್ನೇಹವು ನೂಕಿ ನಿಮ್ಮ ಶ್ರಮವ ಮಾಡಯ್ಯಾ |
ಯಾಕುಲಾಂತ ಪರಮಾತ್ಮ ಸತ್ಯಸಲೋಕ ಸರ್ವರು
ಏಕ ಭೀಮ ||ಪ||
ಸಮಜಾನ ಭೀತಿಯಿಂದಮಿತ ದುಃಖವನ್ನುಂಡೆ |
ಭ್ರಮಿಸಿದೆನು ಶ್ರೀ ಹರಿಯೇ | ಸಮನ ಸತ್ಯ ಸಮಾಜ
ಬಹುಮನೆ ಭ್ರಮರ ಕೀಟ ನ್ಯಾಯ ಸಮಚನೇ |
ಅಮರ ಗುಣಕಟ ಕಾಮಿನಿಯ ಸದ್ ವಿಮಲ
ಚಂತ ವಿಶಾಲ ಭೂಪ ||1||ಅಷ್ಟಾ ಪ್ರಣವಂಗಳ ಪ್ರತಿಷ್ಠಿಸಿ ಪರತತ್ವ
ಸೃಷ್ಠಿಗೋಡೆಯನು ನೀನು | ಕಷ್ಟವಳಿದು ಕಪಟಾಂ
ತಕನೆ ಶ್ರೀಭ್ರಷ್ಟ ಸಂಗವ ಬಿಡಿಸಿ ಪಾಲಿಸಯ್ಯ |
ಅಷ್ಟದೈವವೆ ಕೃಷ್ಣನಾಮ ಸೃಷ್ಟಿ ಶ್ರೀಗುರು
ತೊಲಸಿ ರಾಮ ||2||
2
ನಾನಾ ದೇವರ ತಿರುಗಿ
ಓಂ ಶ್ರೀ ಗುರುವೇ ನಮಃ | ನಿರಾಕಾರ ವಸ್ತುವೇ ನಮಃ |
ಪರಮಾತ್ಮನೇ ….ಏ….ಏ ||
ಎಲೆಯ ಮೇಲಿದ್ದ ಅನ್ನವನು ಬಿಟ್ಟು || ಇಂಟೆಯ
ಕಟ್ಟಿದಾತು ನಾಯಿಯಾಗಿ ತಿರುಗಿದೆನಲ್ಲಿ ಪರಮಾತ್ಮ |
ಎನ್ನೊಳಗೆ ಇದ್ದಂತ ಪರಮಾತ್ಮನನು ನಾ ತಿಳಿಯದೆ
ನಾನಾ ದೇವರ ತಿರುಗಿ ಬಳಲಿ ಭ್ರಷ್ಠನಾದೆನಲ್ಲ ಪರಮಾತ್ಮ |
ಎನ್ನೊಳಗೆ ಇದ್ದಂತ ಪರಮಾತ್ಮ ಬಾರಪ್ಪಾ ಕಂದಾ
ಎಂದು ಕರೆದೆನ್ನ ಕರ್ಣಕ್ಕೆ ಬೊದಿಸಿದ ಸದ್ಗುರುವು
ಪರಶಿವನು ಪರಬ್ರಹ್ಮ ಅಖಂಡ ಮೂರುತಿ ನೀನಲ್ಲದೆ
ನಿನ್ನ ವಿೂರಿಸಿದವರು ಯಾರಿಲ್ಲ ಪರಮಾತ್ಮಾ…||
ಅನೇಕ ಪಾಪಿಷ್ಟನು ನಾನು ದೇವ | ಪಾಪ
ರಹಿತನು ನೀನು | ನನ್ನ ತಪ್ಪನು ಮನ್ನಣೆ ಮಾಡಿ
ಸೇರಿಸಪ್ಪ ನಿನ್ನ ದಾಸ ದಾಸರ ಬಳಿಗೆ |
ಓಂ ನೀ ಗುರುವೇ ನಮಃ | ನಿರಾಕಾರ ವಸ್ತುವೇ
ನಮಃ ಪರಮಾತ್ಮನೆ…. ಏ …….
3
ಸಿದ್ಧಲಿಂಗನೊಳಗೆ ಬೆರೆತು
ಮರೆಯಬಾರದು ಶಿವನಾ ಮರೆಯಬಾರದೂ
ಮರೆತುಹೋದ ಮೇಲೆ ಮುಂದೆ ದೊರೆಯಲಾರದು
ಶಿವನ ಪಾದ ||ಪ||
ಎತ್ತಿ ಬಂದ ಬಳಿಕ ಜನ್ಮ | ವ್ಯರ್ಥವಾಗಿ ಹೋಗದಂತೆ |
ನಿತ್ಯಕಾಲ ಶಿವನ ಪೂಜೆ ಭಕ್ತಿಯಿಂದ ಮಾಡು ಬೇಗ ||1||
ಹಿಂದೆ ಘೋರಾರಣ್ಯ ಗಿಡವು | ಮರವು ಪಕ್ಷಿ
ಜೀವರಾಶಿ | ಹೊಂದಿ ಬಂದೆನೆಂದು ಪುಣ್ಯ ಜನ್ಮದಲ್ಲಿ
ತಿಳಿದ ಮೆಲೆ ||2||
ಆಗ ಈಗ ಎಂಬುದೆಲ್ಲ ಹಗಲು ಇರುಳು
ಕಳೆಯುತ್ತಲ್ಲಾ | ಹೋಗ್ವಕಾಲ ಎಂದ ಮೇಲೆ
ಅರಗಳಿಗೆ ತಾಳೆಂದರೆ ಬಿಡುವರೆ ಭಟರು ||3||
ಬಿದ್ದು ಹೋಗುವಾ ಗಟವು ಮುಂದೆ ಹದ್ದು ಕಾಗೆ
ಗೆದ್ದಲು ತಿಂದೂ | ನಿರ್ಧಾರವಾ ಮಾಡಿ ನಿನ್ನ
ಬುದ್ಧಿಯಿಂದ ತಿಳಿದ ಮೇಲೆ ||4||
ಹೋದ ಮೇಲೆ ಎಂದಿ ತಿನ್ನು ಹೋದ ರೂಪ
ಧರಿಸಿಕೊಂಡು ನಾದ ಬಂಧು ಕಳೆಯನುಳ್ಳ ಆದಿ
ಮೂರ್ತಿ ಧ್ಯಾನವನ್ನು ||5||
ಉದರ ಪೋಷಣೆಯನ್ನು ಬಿಟ್ಟು ಪದಮ್ಮಲಾಂತ್ಮ
ಬ್ರಹ್ಮನಿರುವಾ | ಮುದದಿ ನಡುಕೆರೆ
ಈಶಾ ಸಿದ್ಧಲಿಂಗನೊಳಗೆ ಬೆರೆತು ||6||
4
ನಂಬಿರುವೆನು
ಬೋಧಿಸೆನ್ನನು ಗುರುವೇ ನಿಮ್ಮೆಯ ದಿವ್ಯ
ಪಾದವ ನಂಬಿರುವೇ | ವೇದಾಂತದೊಳು ಗೋಪ್ಯ
ವಾದ ತತ್ವವನು ಸಂಪಾದಿಸಿ ಮನದಿವ್ಯ ವಿನೋದಿಸಿ
ಸುಖಿಸೆಂದು ||ಪ||
ಮೂಲ ಕುಂಡಲಿಯನೊತ್ತಿ | ಆಜ್ಞೆಯಾದ
ನಿರಿಜನ ಮನೆಗೆ ಹತ್ತಿ | ಸಾಲಿಟ್ಟು ಸುರಿತಿರ್ಪ
ಹಾಲನ್ನು ಸವಿದುಂಡು ಲೀಲ ಜ್ಯೋತಿಯೊಳ್ ದಿವ್ಯ ಜ್ವಾಲೆಯ
ಬೆಳಗೆಂದು ||1||
ರವಿ ಶಶಿಗಳ ತಡೆದು ಸುಸುಮಾದ
ನಮನದೊಳು ನಡೆದು ಜವದಿ ಪಶ್ಚಿಮ ದಿಕ್ಕು
ನವನಾದದೊಳಿರು ತೀರ್ಪ ತವ ಮೋಕ್ಷ ಸತಿಯನ್ನು
ಜವದಿ ಮೈ ಮರೆಗೊಂಡು ||2||
ತಳವಾಗಿ ಬೆಳೆದಿರುವ ಆಜ್ಞೆಯಾದ ದಳದೀ
ತಿರುಗುತ್ತಿರುವ ಕಳೆ ಅಂಶನೊಳುವಿನ ಸುಳುವನ್ನು
ತಿಳಿದು ನೀ ಸಿಳಿವ ಕಣಿವೆಯೊಳು ನಿಂತು ನೀ
ನಲಿಯೆಂದು ||3|| ಆದಿ ಅಂತ್ಯವ ಬೇಡಿಸಿ ||4||
ಪರಿಪೂರ್ಣ, ನಂದ ಭಾವ ತಾರಕ ರೂಪ
ಗುರುಸಿದ್ದ ದೇವ ದೇವಾ | ಅರಿತು ನಂಬಿರುವೆನು
ಮರೆವಿಯೊಳ್ ಬಿಡಿಸೆನ್ನ ಗುರು ಎಲ್ಲಾ ತೋರಿದ
ಬೆರೆನೇಕವಾಗಿ ||5||
5
ಅಖಂಡ ಬೆಳಗುತಿದೆ
ಗುರುವಿನ ಕರುಣಯೊಳ್ ಅರುವಿನೊಳ್ಗರು
ವಾಯ್ತು ಚಂದಮಾಮ ಲೋಕ ಚಂದಮಾಮ
ಅರವಿನ ಮರವೆ ಒಂದಿರುವೆ ನುಂಗೀತು ಲೋಕ
ಚಂದಮಾಮ-ಲೋಕ ಚಂದಮಾ ||ಪ||
ಕುಂಡಲಿ ಸರ್ಪವೂ ಭೂಮಂಡಲಕ್ಕಿಳಿದಿತು
ಚಂದಮಾಮ ಲೋಕ ಚಂದಮಾಮ | ಅದರ ಮಂಡೆ
ಯೊಳಗೆ ಅಮೃತಾ ಅಂಡರೀಸನೇ ಬಲ್ಲ ಚಂದಮಾಮ ||1||
324 / ತತ್ವಪದ ಸಂಪುಟ-1
ಬರುವದೊಳಗಿದೆ ಪೂರ್ಣ ಚಂದ್ರನ ಕಳೆ
ಚಂದಮಾಮ ಲೋಕ ಚಂದಮಾಮ ಗುರುವು
ಆರೂಢ ಕೊಂಡಾಡ ಸದ್ಗುರುವೇ ಇಲ್ಲ ಚಂದಮಾಮ….
ಗಂಗೆ ತೀರದಿ ವಾದ್ಯ ಅಂಗಾನ
ಬೆಳಕಿನೊಳ್ ಅಖಂಡ ಬೆಳಗುತಿದೆ ||3||
6
ಆಜ್ಞಾನವನಳಿದು
ಪರಮಾ ದಯಾ ನಿಧಿಯೇ | ಶ್ರೀ ಗುರು ನಿತ್ಯ
ಪರಮ ಪಾವನ ಮೂರ್ತಿಯೇ ||ಪ||
ದುರಿತ ಆಜ್ಞಾನವನಳಿದು ಸುಜ್ಞಾನದ ವರದೆ
ನಿನ್ನಂಥ ದಯಾಳುವಂತ ಜಗದೊಳ್ || ಅನು ಪಲ್ಲವಿ ||
ಇಳೆಯ ಭೋಗರಗಳೆಂಬ | ಆಶಿಯು
ಮೋಹ | ಬಲುರಾಗ ದ್ವೇಷವೆಂಬ | ಸುಳಿದು
ಸಂಸಾರ ಸಾಗರದಿ ಕಡೆಗಾಣದೆ | ಮುಳುಗಿ
ಹೋಗುತಲಿರೆ ಕರವಿಡಿದೆತ್ತಿದೆ ||1||
ವರಪುಣ್ಯವನುಗಳಿಸಿ | ಸ್ವರ್ಗವ ಸೇರಿ
ಉರುಭೋಗವನ್ನನುಭವಿಸಿ | ತಿರುಗಿ ಮತ್ರ್ಯಕೆ
ಬಂದು ಬಳಲಿ ಬಾಯಾರಿದೆ ಸ್ಥಿರ ಮುಕ್ತನಾಗೆಂದು
ಕರೆದು ಭೋಧಿಸಿದಂಥ ||2||
ಹಟಯೋಗಾದಿಗಳಿಂದಲೇ | ಲೋಕಕೆ ಮೆಚ್ಚು
ಚಟುಲ ಸಿದ್ಧಿಗಳಿಂದಲೇ | ಸಟೆಯು ಜೀವನ್ಮುಕ್ತಿ
ಯದರಿಂದಲೆನ್ನುತ್ತಾ | ಘಟಿತವಾಗಿಹ ರಾಗ ಯೋಗ
ಬೋಧಿಸಿದಂಥ
ಚಲುವ ಆಭರಣವಾಗಿ | ತೋರುವ ಪರಿಯುನ್ನತ
ಜಗವಿದಾಗಿ | ಸನ್ನೆಯಿಂ ಪರಮಾತ್ಮನೊಬ್ಬ
ತೋರುವನೆಂಬ | ಸನ್ನುತ ಸುಜ್ಞಾನವನ್ನು ಭೋದಿಸಿದಂಥ ||4||
ಸರ್ವ ತತ್ವಂಗಳನ್ನು | ವೇದಾಂತದ
ಸರ್ವ ರಹಸ್ಯವನ್ನು | ಸರ್ವಕ್ಕಧಿಕವಾದ ಅಪರೋಷ
ಜ್ಞಾನವಾ | ಸರ್ವ ಶ್ರೀ ಗುರು
ರಂಗನಾಗಿ ಭೋದಿಸಿದಂಥ ||5||
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 325
7
ಪೊರೆಯುವ ಗುರು
ಭಜನೆ ಮಾಡುವ ಬನ್ನಿರೋ | ಸದಾಶಿವನ
ಭಜನೆ ಮಾಡುವ ಬನ್ನಿರೋ ||ಪ||
ಭಜನೆ ಮಾಡುವ ನಿತ್ಯ ಸುಜನರೆಲ್ಲರೂ ಕೂಡಿ
ಕುಜನ ಸಂಗವ ದೂರ ಮಾಡಿ ಸದ್ಭಕ್ತಿಯಿಂದ ||ಅ, ಪ||
ಶತಕೋಟಿ ಪಾಪವನ್ನು ಮಾಡಿದ ಮಹಾಪತಿತರು
ನಾವು ನೀವು | ಪತಿತ ಪಾವನನೆಂಬ
ಬಿರುದುಳ್ಳ ದೇವನು | ಕ್ಷಿತಿಯೋಳತ್ತಮ ಗತಿ
ತೋರೆಂದು ಶಿವನ ||1||
ಘುಡಿ-ಘುಡಿಸುತ ಬರುವಾ ಯಮನಾಳ್ಗಳಂ
ಕಡಿದು ಮಾಡುತ ಕೋಪವ |
ಝಡಿದು ಶೂಲದಿ ಭಕ್ತರನು ಕೈಪಿಡಿದು |
ಕಡುಗರೂಣದಿ ಪೊರೆಯುವ ಮೃತ್ಯುಂಜಯನಾ ||2||
ಪಂಚವಿಂಸತಿ ತತ್ವದಿ ತಾನಿರ್ದು
ಪ್ರಪಂಚದೊಳಾನಂದದಿ | ಪಂಚವಿಂಸತಿ ಲೀಲೆ
ತೋರಿತನ ಭಕ್ತರ |ಸಂಚಿತ ಕರ್ಮವನುರುರಿಂದ
ಶಿವನ ||3||
ಕಷ್ಟ ಕರ್ಮಗಳ ನೋಡಿ ನಿಮಿಶಾರ್ಧದಿ
ಸುಟ್ಟು ನಿರ್ಮಲವ ಮಾಡಿ | ಇಷ್ಟಾರ್ಥಗಳ ನಿತ್ತು
ಕರುಣಾದಿ ಪಾಲಿಪ | ಅಷ್ಟದಳದ ಪದ್ಮದಲ್ಲಿರುವ
ಶಿವನ ||4||
ಕರುಣ ರಸವನ್ನೆ ಬೀರಿ | ಯೋಗವು
ತತ್ವ ನೆರೆ ಶಾಂತಿ ವಿರತಿ ತೋರಿ | ಧರೆಯೊಳಾಧಿತ
ಬೋಧಿಸಿ ಪೊರೆಯುವ ಗುರು ಮಹಾ ಲಿಂಗನೆ
ನೀನೆಂದು ಶಿವನ ||5||
8
ಪೊರೆಯೆನ್ನ ಪ್ರಭುವೆ
ಪೊರೆಯೆನ್ನ ಪ್ರಭುವೆ ಶ್ರೀ ಗುರುವೆಂಬ |
ವರಕಲ್ಪ ತರುವೆ || ಕರುಣ ಕಟಾಕ್ಷ ವೀಕ್ಷಣದಿಂದಲೆನ್ನಯ್ಯ |
ಧುರಿತಾ ದುಗಣವೆಣಿಸದೆ ಕೃಪೆಯಿಂದಲಿ ||ಪ||
326 / ತತ್ವಪದ ಸಂಪುಟ – 1
ಗುರು ಬಂಧು ಮಿತ್ರ | ಗೋತ್ರವು ಸೂತ್ರ
ಗುರುವೆ ಪವಿತ್ರ | ಗುರು ಬ್ರಹ್ಮ ಗುರು ವಿಷ್ಣು
ಗುರು ಪರಾಶಿವನೆಂದು | ವರುಲವ ಶೃತಿ ನಂಬಿ
ನಿಮ್ಮಡಿ ನಂಬಿದೆ ||1||
ತಂದೆ-ತಾಯಿಗಳು ನಂಬಿದೆ ಮಿತ್ರ
ಬಂಧು ವರ್ಗಗಳು | ಎಂದಿದ್ದರೆನ್ನನ್ನು ಬಿಟ್ಟೋ
ಗುವರು ನೀವು | ಎಂದೆಂದು ಬಿಡುವನಲ್ಲೆನುತ್ತ
ನಂಬಿದೆನಯ್ಯ ||2||
ನಾರಿ ಮಕ್ಕಳನು | ತನು ಮನ ಧನವನ್ನು
ಭೂರಿ ಭಾಗ್ಯವನು | ಮೀರಿದ ಮಾನ ಅಭಿಮಾನ
ಒಪ್ಪಿಸಿಕೊಟ್ಟ ದೇಶನೊಪ್ಪಿಸಿದವನಿಗೆ ಸುಂಕ ಇನ್ನುಂಟೆ ||3||
ಸುಗುಣ ನಿರ್ಗುಣನೆ | ನಿರ್ಮಲನೆ
ನಿಗಮ ವಂದಿತನ | ಅಗಣಿತ ಕಿಲ್ಪಿಷವಳಿದು
ಪಾಲಿಸವನೆ | ಸುಗುಣಿ ಮುಕ್ತಿಯ ಕಾಣಿವರ
ಚಿಂತಾಮಣಿಯೇ ||4||
ಕಿರಿ ಸೊಬಗೆಂಬ | ಮೋಹವು ದುಃಖ
ದುರಿತವೆಂತೆಂಬ | ಶರಧಿಯ ದಾಂಟಿಸಿ ಮುಕ್ತಿ
ದುರಿತವೆಂತೆಂಬ ಬಿರುದು ಪೊತ್ತಿಹ ಗುರು
ಮಹಾಲಿಂಗ ರಂಗನೆ ||3||
9
ಸರ್ವ ಸಾಕ್ಷಿಕ ಗುರು
ಸರ್ವಜ್ಞ ಮೂರ್ತಿ ನೀನು | ಈ ಜಗದೊಳು
ಸರ್ವ ಪಾತಕಿಯ ನಾನು ||ಪ||
ಸರ್ವಜ್ಞ ಮೂರ್ತಿ ನಿಮ್ಮಡಿದಾವರೆಗಳನ್ನು | ಸರ್ವಕಾಲದಿಂ
ನಂಬಿದೆನು ಪಾಲಿಸೆನ್ನನು || ಅ. ಪ||
ನಿನ್ನ ವಿಲಾಸವಿದು | ಸೃಷ್ಟಿಸಿ ಜಗವನ್ನು
ಆಡಿಸುತಿಹುದು | ಉನ್ನಾಂತ ಊರ್ಣಾಭಿಯಾ ಪರಿಯಂತಕ್ಕೆ
ನಿನ್ನೊಳೆಲ್ಲವ ನುಂಗಿ ನೀನೊಬ್ಬನುಳಿಯುವೆ ||1||
ಸರ್ವ ಶಿರನಯನಂಗಳು | ಪಾದವು ಹಸ್ತ |
ಸರ್ವ ಕಿವಿ ತೋಳುಗಳು | ಸರ್ವ ಭೋಗವು
ಸರ್ವ ರೂಪು ನೀನೆನಿಸುತ್ತ ಸರ್ವ ಸಾಕ್ಷಿಕನಾದ
ವಿಶ್ವಕುಟುಂಬಿಯೆ ||2||
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 327
ಜನನದಾರಭ್ಯದಿಂದ | ಸದ್ಗುಣಕ್ರಿಯೆ
ಮನದೊಳಗೆಣಿಸಿನೊಂದ | ವಿನಯ ಜ್ಞಾನವು
ಯಮ್ಮನಾಡಿನೊಳ್ ಕಾಣಿನು | ಅನಾಚಾರ ಚೇಷ್ಟೆಯ
ಅಜ್ಞಾನಿ ಜೀವನು ನಾನು ||3||
ಸರ್ವ ಪಾತಕಿ ನೀಚನು | ಕೃತಘ್ನನು |
ಸರ್ವ ದುರ್ಗುಣ ಜಾತನು | ಸರ್ವ ಪಾತಕಿ
ಕಾಳಿಕಾರರ ಒಡೆಯನು | ಸರ್ವ ದ್ರೋಹಿಗಳೊಳಗ್ರಗಣ್ಯನು
ನಾನು ||4||
ಸರ್ವ ದುರ್ಗುಣಗಳನ್ನು ನೋಡದೆಯೆನ್ನ
ಸರ್ವತ್ರ ಪೊರೆಯುವನು | ಸರ್ವ ಕಲ್ಯಾಣ
ಗುಣಗಳಿಂದೊಪ್ಪುವ ಸರ್ವ ಸಾಕ್ಷಿಕ ಗುರು
ಮಹಾಲಿಂಗ ದೇವನೆ ||5||
10
ನಿನ್ನೊಳು ನೀನೆ ಛೇದಿಸಿ
ಕೊಬ್ಬಿ ನೀ ಕೆಡಬ್ಯಾಡವೋ | ಮತ್ತೊಬ್ಬರ
ನುಬ್ಬಿ ಆಡಲಿ ಬ್ಯಾಡವೊ ||ಪ||
ಮಬ್ಬು ಕಣ್ಣಿಗೆ ಮುಚ್ಚಿ ಮರೆತಿರೆ ಶಿವಧ್ಯಾನ
ಹೆಬ್ಬುಲಿಯಂತೆ ನುಂಗುವ ಯಮನವನ ||ಅ. ಪ||
ಕಾಸುವಿರಿಸಂಗಳನು | ಕೂಡಿಸಿ ಧನದ ರಾಶಿಯ
ಮಾಡಿ ಮಾಡಿ | ಆಸೆಯಿಂದಲಿ ಈಶ ಧ್ಯಾನ
ಮಾಡದೆ ಕಾಲ ಪಾಶಕ್ಕೆ ಗುರಿಯಾಗಿ ಕೆಟ್ಟೆಲ್ಲೊ
ಪ್ರಾಣಿ ||1||
ಎಂಟು ಮಂದಿಗಳ್ ಕಟ್ಟಿ | ಎಚ್ಚರದಿಂದ
ತುಂಟರೈವರನು ಕಟ್ಟಿ | ನೆಂಟರಿಷ್ಟಾರಾಭಿಮಾನವ
ದೂರಿಟ್ಟು | ಭಂಟನಾಗದೆ ಶಿವ ಶರಣರ
ಪಾದದಿ ||2||
ನಿನ್ನೊಳಡಗಿರುವ | ಗರ್ವವು ಕ್ರೋಧವಿನ್ನು
ಮತ್ಸರವ ನೀಗಿ | ಉನ್ನತ ಶಾಂತಿಯ ಪಡೆಯದೆ
ಮನದೊಳಗನ್ಯರ | ಗುಣದೋಷವೆಣಿಸಿ ನೀ ಸುಮ್ಮನೆ ||3||
ಸಾಧಿಸುತೀ ಪರಿಯ ನಿನ್ನೊಳು ನೀನೆ ಛೇದಿಸಿ
328 / ತತ್ವಪದ ಸಂಪುಟ-1
ಮದಗರ್ವದ || ವೇದ ಪುರುಷ ಗುರುಮಹಾಲಿಂಗ
ರಂಗನಪಾದ ಪಲ್ಲವ ಪಿಡಿ ಸುಖವಪ್ಪುದೇವೋ
ವೇದ ಪುರಷಗುರು ಮಹಾಲಿಂಗ ದೇವನೆ ||4||
11
ಮೋಹವಡಗದೆ
ಕೇಳಿದಾಗಲೇ ಹೇಳಬಾರದು | ಪರಬ್ರಹ್ಮ ವಿದ್ಯವ
ಕೇಳಿದಾಗಲೆ ಹೇಳಬಾರದು | ಕೇಳಿದಾಗಲೇ ಹೇಳಬಾರದು |
ಪೇಳಿದಪರಿಯಿರದೆ ಗುರುವಿಗೆ
ಹೇಳುವೇನು ತಿರುಮಂತ್ರವೆಂಬುವ | ಕೂಳ ನರಧಿಕ
ಪ್ರಸಂಗಿಗೆ ||ಪ||
ಗುರುವರನ ಭಕ್ತಿಯಲಿ ಪೂಜಿಸದೆ | ತನುಮನ
ಧನವನ್ನು | ಗುರುವಿನದಿ ಕಮಲಕ್ಕೆ ಒಪ್ಪಿಸದೆ |
ನಿರಂತ ಶಾಸ್ತ್ರಾಗಮಗಳೋದಿ | ಹಿರಿಯರನು
ನಿಂದಿಸುತ ಗುಣ ಗರ್ವದಿ | ಉರಿಯ
ಮಾತಿನ ಬಣವೆವೊಟ್ಟುವ | ಅರಿತು ಅರಿಯದ
ನರಕದ್ಪುಳುವಿಗೆ ||1||
ಆರು ವರ್ಗ ದುಃಖದಿದು ಸಾಯುತ್ತ | ಹಗಲಿರುಳ
ಬಳಲುತ | ಮೂರು ತಾಪದಿ ಮುಳುಗಿ ತೇಲುತ್ತ
ನಾರಿ ಮಕ್ಕಳ ಮೋಹವಡಗದೆ | ಸೇರುವೆನು
ನಿಜಮುಕ್ತಿಯೆನುತಲಿ | ದೂರು ತನ್ನ ಗುಣ
ವಿಸ್ತಾರದಿಂದಲಿ ಹೊಗಳಿ ಕೊಂಬಗೆ ||2||
ಈಶನನಡಿಯಲಿ ಭಕ್ತಿಯಿಲ್ಲದೆರೆ |
ದುರ್ಮಾರ್ಗ ತನದಲಿ | ರೊಷ ಹೆಚ್ಚುವ ಶಾಂತಿಯಿಲ್ಲದೆಲೆ |
ದೂಷಿಸುತ ಮಹ ಸಾಧು ನಡೆಗಳ |
ಮೋಸ ಹಾದರ ಕಳವು ಪರಧನರಾಶಿಯಲಿ |
ಮನ ಮುಳುಗಿ ಜ್ಞಾನವ ದೇಶವರಿಯದೆ ಹೇಸಿ ಮೂಳಗೆ ||3||
ಜ್ಞಾನ ಗುರುವೆಂತೆಂದು ನಂಬುತ್ತ ಹನ್ನೆರಡು
ವರುಷವು | ನ್ಯೂನವಿಲ್ಲದೆ ಸೇವೆಗೈಯುತ್ತ ||
ಏನ ಹೇಳಲು ನಂಬಿಕಿಲ್ಲದೆ | ಹೀನ ವಿಷಯದಿ ಶಿಲ್ಕಿ
ಯನುದಿನ | ಗಾಣದೆತ್ತಿನ ಪರಿಯ ತಿರುಗುತ
ಜ್ಞಾನ ಹೊಂದದ ಮೂರ್ಖ ಮನುಜಗೆ ||4||
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 329
ಧರೆಯ ಭೋಗವು ರೋಗವೆಂದೆನುತ
ತನ್ನೊಳಗೆ ಅರಿತು ಸ್ಥಿರದ ಮುಕ್ತಿಯ ಹೊಂದಬೆಕೆನುತ |
ಸದೆ ಬಡಿಯಲಿ ಬೇಕು ವಾಸನೆ ಮೂರ |
ಪರಮ ಪಾತಕರಿಂಗೆ ಬ್ರಹ್ಮನ |
ನಿರುತ ಬೋಧಿಸಿ ಹಬ್ಬದಂತೆ ||5||
12
ಕರ್ಪೂರವಾಗಿರು
ಕೇಳಿದಾಗಲೆ ಹೇಳ್ವ ಸದ್ಗುರುವು | ಸುಜ್ಞಾನ
ಮಾರ್ಗವ ಕೇಳಿದಾಗಲೆ ಹೇಳ್ವ ಸದ್ಗುರುವು ||ಪ||
ಕೇಳಿದಾಗಲೆ ಹೇಳ್ವ ಶಿಷ್ಯಗೆ | ಲೀಲೆಯಂಧದಿಕಾರವರಿತು |
ಕೇಳಿದವರಿಗೆ ಹೇಳ್ವದಲ್ಲದೆ ಪೇಳ್ವುದಿ
ನ್ಯಾರಿಗೆ ಜಗದೊಳು || ಅ. ಪ||
ತನುವು ಧನ ಮನವಿತ್ತು ಗುರುವರಗೆ
ಆಧ್ಯಾತ್ಮ ಶ್ರವಣದಿ ಜನಿಸಿ ಬ್ರಹ್ಮ ಜ್ಞಾನ ಮನದೊಳಗೆ |
ಯನಿತು ಅಭಿಮಾನಿ ನೀಡದೆ ರಾಜ್ಯವತೃಣ
ಸಮಾನದಿ ಕಂಡು ಧರಣಿಯ | ಘನದಿ
ಆಳಿದ ಜನಕನಂದದಿ | ಮನವು ನಿಲಿಸುವ
ಪ್ರೌಢನಾದರೆ ||1||
ಬಾಲತನದಲಿ ಬ್ರಹ್ಮ ಬೋಧಿಸಿದ |
ಪ್ರಣವಾಕ್ಷರಕ್ಕೆ ವಿಶಾಲ ಅರ್ಥವ ತಾನೆ ಬೋಧಿಸಿದ
ಬಾಲಕ ಜ್ಞಾನಕೆ ಹರ್ಷವ ತಾಳಿ ಪರಶಿವ
ನಿಜವನರುಪಲು | ಕೇಳಿ ಮುಕ್ತಿಯ ಪಡೆವ
ಗುಹನಂತೇಳಿ ಕೇಳ್ವಧಿಕಾರಿಯಾದೊಡೆ ||2||
ಧರೆಯೊಳುತ್ತಮ ವ್ಯಾಸಮುನಿವರನ ಪ್ರಿಯ
ಪುತ್ರನೆನ್ನಿಸಿ | ಪರಮ ಶಾಂತಿಯೊಳುಂ ಪರಿಶಿವನ |
ತರುಣಿ ಮೋಹದ ಬಲಿಗೆ ಶಿಲ್ಕದೆ ಉರು
ತಪ ತಾಗೈದು ಜ್ಞಾನವ | ಧರಿಸಿ ಮುಕ್ತಿಯ ಪಡೆದ
ಶುಕಮುನಿ | ಪರಿಯ ವಿರತಿಯೊಳಿರುವನಾದರೆ ||5||
ತೊರೆದು ತನಮಗನೆಂಬ ಬ್ರಾಂತಿಯನು
ಕಪಿಲ ಮುನಿಯಲಿ | ಇರಿಸಿ ತನ ಗುರುವೆಂಬ
ಭಾವವನು | ಅರಿತು ಯೋಗವು ಪರಮ ಜ್ಞಾನವ
330 / ತತ್ವಪದ ಸಂಪುಟ – 1
ನಿರುತ ಸರ್ವವು | ಬ್ರಹ್ಮವೆಂಬುವ ಅರಿವು ಮರೆಯದಿ
ದೇವ ಹೂತಿಯ | ಪರಿಯ ನಿಶ್ಚಲ ನಾಗ್ವನಾದಡೆ |
ಧರೆಯೊಳಾರಾದೊಡೆಯು ಮುಕ್ತಿಯನು |
ಹೊಂದುವನು ಯೆನ್ನುತ | ತರಿದು ಮುದ ಗುಣ
ಮೋಹವ್ಯಸನವನು | ಪರಮ ಗುರು ಮಹಾಲಿಂಗ
ರಂಗನ | ಚರಣ ಸೇವೆಯೊಳಿರಲು ಕರ್ಮವು
ಹರಿದು ನಿರ್ಮಲವಾದ ಮನವನು ಪರೀಕ್ಷಿಸಲು
ಕರ್ಪೂರವಾಗಿರು ||5||
13
ಜಾತಿ ಕಲ್ಪನೆಯಳಿದು
ಜಾತಿ ಸೂಚಕವೆಂಬ ಮಾತಿಲ್ಲ | ಸುಜ್ಞಾನ
ಮಾರ್ಗದಿ ಜಾತಿ ಕರ್ಮಾಧಿಗಳೇ ಮೊದಲಿಲ್ಲ ||
ಜಾತಿ ಗೋತ್ರಕೆ ಬದ್ದರಾಗುತ | ಆತ್ಮನರಿಯದ
ಕರ್ಮಿಗಲ್ಲದೆ | ಜಾತಿ ಕಲ್ಪನೆಯಳಿದು ಆತ್ಮ ಜ್ಯೊತಿಯಲಿ
ಮುಳುಗಿದ ಮಹಾತ್ಮಗೆ ||ಪ||
ಬ್ರಹ್ಮ ಬೀಜವೇ ಸರ್ವಯೋನಿಯೊಳು |
ಪುಟ್ಟಿರುವುದೆಂಬುವ | ಮರ್ಮವರಿಯದ ಮೂಢ
ಜನರುಗಳು | ನಮ್ಮ ಕುಲ ಮೇಲೆನುತ ವಂದಿಸಿ
ನಿಮ್ಮ ಕುಲ ಕೀಳೆನುತ ನಿಂದಿಸಿ | ಹಮ್ಮುಮದ
ಮತ್ಸರದಿ ಸಾಯುತ | ಒಮ್ಮೆ ನರಕಕ್ಕೆಳಿವರಲ್ಲದೆ ||1||
ಇಲ್ಲ ಜಾತಿಯು ಸ್ವರ್ಗ ನರಕದೊಳು
ತ್ರೈ ಮೂರ್ತಿಗಳೂ ಇಲ್ಲ ಜಾತಿಯು ತೀರ್ಥ
ಕ್ಷೇತ್ರದೊಳು | ಎಲ್ಲ ಬ್ರಹ್ಮಂ ಬರುಹು ಅಲ್ಲದೆ
ಇಲ್ಲದುಂಟೆಂತೆಂಬ ಕಂಗಳು | ನಿಲ್ಲದಿಹ ಘಾತಕಗಳ
ನಡೆಯೊಂದಲ್ಲದೆಲೆ ಸುಜ್ಞಾನ ಪಥದೊಳು ||2||
ಅನ್ನಮಯದ ಕಾಯವೆಂಬುದು ಸರ್ವರಿಗೂ
ಒಂದೇ | ಭಿನ್ನವಿಲ್ಲದೇ
ತೋರಿಯಡಗುವುದು ಮುನ್ನಲೆ ಅಂಡಜವು ಸೇರಿದ |
ಉನ್ನತುದ್ವಿಜ ಜವರ ಜರಾಯುಜ
ಸೃಜಿಸಲು ||3||
ಜಾತಿ ವರ್ಣವು ಗೋತ್ರ ಷಣ್ಮತವು | ಅಜಸೃಷ್ಠಿಯೆಲ್ಲವು |
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 331
ಖ್ಯಾತಿ ಜೀವಿಗಳಿಂದ ನಿರ್ಮಿತವು
ಜಾತಿ ಅಜ ನಿರ್ಮಿತವಾದೊಡೆ | ಮಾತಿನಿಂದಲಿ
ಕಡೆದು ಪಗ ಪ್ರಖ್ಯಾತಿಯಾಗಿ ಯಮನುಜ
ಕರದಿ ಕುಂಭವು ಕುಂಭದೊಳು ಕ್ಷೀರ |
ಪ್ರತ್ಯೇಕವಾಗಿ ಇರುವ ಪರಿಯಾತ್ಮನಿಗೆ ಬೇರಾಗಿ |
ಶರೀರ ಕುಲ ವರ್ಣಾಶ್ರಮಂಗಳು | ಬರಿದೆ ತೋರಡಗು
ವುದು ಅಲ್ಲದೆ | ಪರಮ ಗುರು ಮಹಲಿಂಗ
ರಂಗನೊಳ್ಪರಿಕಿಸಲು ಲವ ಮಾತ್ರವಿಲ್ಲವು ||5||
14
ಬ್ರಹ್ಮದಿ ಮುಳುಗದೆ
ತೋರದು ಸುಖ ಮಾನಸೇಂದ್ರ | ನೀನು
ತಾರಕ ಬ್ರಹ್ಮದಿ ಮುಳುಗದೆ ಸುಮ್ಮನೆ ||ಪ||
ಹರಿದಾಡುವಿಂದ್ರಿಯ ಕರಣಗಳನು ಕಟ್ಟಿ |
ಅರಿಗಳಾರ್ವರ ನೆಂಟು ಮದಗಳ ಶಿರಮೆಟ್ಟಿ | ಸ್ಥಿರ ಕಾಯನಾಗಿ
ಚಿತ್ರಾಸನದಲಿ ಕುಳಿತು | ಅರವಿಂದ ದೃಷ್ಟಿಯ ನಿಲ್ಲಿಸಿ
ನೋಡದೆ ||1||
ವರಗಂಗೆ ಯಮುನ ಸಂಗಮದೊಳಗಿಳಿದು
ಈ ಪರಿಭವ ಕೋಟಿ ದುಷ್ಕರ್ಮವಂ ತೊಳೆದು |
ವರ ನೀಲಗಿರಿ ಮಧ್ಯದಶನಾದ ತಿಳಿದು |
ವರಬಿಂದು ರುಚಿಯೊಳುನಲಿದು ನೀ ಮುಳುಗದೆ ||2||
ವರಚಂದ್ರ ಸೂರ್ಯ ಬೀದಿಗಳಲ್ಲಿ ತೂರಿ |
ಶಿರದೊಳಗಿರುವಾ ಜರಂದ್ರವನೇರಿ |
ಭರದಿ ಪಶ್ಚಿಮ ದಿಕ್ಕಿನೊಳು ರಾಜಿಸುತಲಿಪ್ಪ |
ವರ ಮೋಕ್ಷಾಂಗನೆ ಕೂಡಿ ಆನಂದ ಪಡಿಯದೆ ||3||
ಅನುದಿನವೂ ಮೋಕ್ಷಕಾಂತೆಯ | ಕೂಡುತ್ತ
ಕ್ಷಣ ಕವೀ ಸಂಸಾರವೆಂದನುಭವಿಸುತ್ತಾ | ಜನನ
ಮರಣವೆಂಬೆರಡನ್ನು ತೊಳೆಯುತ್ತ | ಅನುಪಮಾದ್ವಯ
ಬ್ರಹ್ಮ ಚಿಂತನೆ ಗೈಯದೆ ||4||
ದೇಹವಾನೆಂಬುವ ಬ್ರಾಂತಿಯ ನೀಗಿ | ಸೋಹಂಭಾವದಿ
ಚಿತ್ತ ನಿಶ್ಚಲವಾಗಿ |
ಮೋಹ ಮತ್ಸರ ಪಾಶಗಳು
332 / ತತ್ವಪದ ಸಂಪುಟ – 1
ಉರಿದೋಗಿ ಮೋಹ ರಹಿತ ಗುರು ರಂಗ
ನೋಳ್ಪೆರೆಯದೆ ||5||
15
ಕಾಗೆಯಂದದಿ
ಭಜನೆ ಬ್ರಹ್ಮಾನಂದ ರಸವೋ | ಸೋಹಂ
ಭಜನೆ ಸದಾನಂದ ಸುಖವೋ ||ಪ||
ರಜನಿ ಚೇತೋ ರಜನಿ ನಿಹರಣ | ಸುಜನ
ಹೃದಯಾಂ ಗಣಪರಾಯನಾ…| ಅಜ ಸುರೇಂದ್ರ
ಮುನೀಂದ್ರ ಶೈವನ | ಭುಜಗ ಭೂಷಣ
ಭವ್ಯ ಶಿವನ || ಅ.ಪ||
ಮೂರೈದು ಗೇಣಿನ ಗುಡಿಯ | ಪದಿನಾರು
ಸ್ಥಂಭವು ಸಪ್ತ ಪ್ರಕಾರದೊಳು | ದ್ವಾರ ಒಂಭತ್ತೈದು
ಕಲಶಗಳಾರು | ಮೆಟ್ಲುಗಳೈದು ವರ್ಣದ |
ತೋರಣಂಗಳು ಕಾದು ಇರುತಿಹ ದ್ವಾರಪಾಲಕರೀರ್ವರೊಪ್ಪುವ ||1||
ನವರತ್ನ ಖಚಿತ ಮಂಟಪದ | ದ್ವಾರ
ಜವದೀಕ್ಷದಂಗುಳಿಯಿಂದಲಿ ತೆರಿಯೋ | ಪ್ರವಿಮಲಾತ್ಮೇಶ್ವರನು
ತೋರುವ ತವಕದಿಂದ್ರಿಯ ಕರಣವೆಂಬುವ
ವಿವಿಧ ಪುರಜನರಲ್ಲ ಬಂದು | ಶಿವನ ಸೇವೆಯೊಳಿಹರು
ಇಂದು ||2||
ಪರಬ್ರಹ್ಮದಂಡಿ ವೀಣೆಯನ್ನು ….| ಮಾಡಿ
ಮೆರೆವೇಳು ಚಕ್ರಗಳ್ ಮೆಟ್ಲುಗಳ್ಮಾಡಿ | ಇರಿಸಿ
ಪ್ರಾಣಗಳೆಂಬ ತಂತಿಯ ತಿರುವಿ ವಿಷಯಗಳೆಂಬ
ಬಿರುಡೆಯಾ | ಸ್ಮರಣೆಯಂಬಂಗುಳಿಯ ಮೀಟುತ
ವರಸರಸ್ವತಿಯಂತೆ ಪಾಡುವಾ ||3||
ಮೂರು ಮೂರ್ತಿಯ ಸಭೆಯಲ್ಲಿ | ಚಂದ್ರ
ತಾರೆಯಾ ಬೆಳಕಿನೊಳಾನಂದದಲ್ಲಿ | ಸಾರ ಸಂಗೀತಗಳು
ಢಣ ಢಣ | ಭೇರಿ ಗಂಟೆಯಾ ತಾಳ ಝಣ ಝಣ
ಚಾರು ಘೋಷಕೆ ಬೆದರಿ ಪಾತಕ ಊರ
ಬಿಟ್ಟೋಡುವುದು ಆಕ್ಷಣಾ ||4||
ಶ್ರೀಗುರು ಮಹಲಿಂಗ ರಂಗನಾ ಕೃಪೆಯಾಗಲು
ಭಕ್ತರ ಭವ ನಾಶನ | ಭೋಗ ಸುಖವಂ
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 333
ಬಯಸಿ | ಜಗದೊಳು ಕಾಗೆಯಂದದಿ
ಮುಳುಗಲೊಲ್ಲದೇ | ಯೋಗ ನಿದ್ರೆಯೊಳ್
ಮುಳುಗಿ ಉರಭವ | ರೋಗನಳಿದಿಹ ಬ್ರಹ್ಮ ನಿಷ್ಟರ
16
ಅನಘ ಗುರು
ನೋಡು ನೋಡೆಲೆ ಮಾನಸೇಂದ್ರನೆ |
ನೋಡು ಮುನಿಕುಲ ಚಂದ್ರನೆ | ನಾಡು ನಾಡುಗಳಿರದು
ಬಳಲದೆ ನೋಡು ನಿನ್ನೋಳು ಬ್ರಹ್ಮವಾ |
ನಿರುಪ ಮದ್ವಯ ನಿರಘ ನಿಷ್ಕ್ರಿಯ |
ಭರಿತ ಸರ್ವ ಜಗಾಶ್ರಯ | ನಿರುತ ನಿಷ್ಕಳ ನಿತ್ಯ
ನಿರುಪದ | ಪರಮ ನಿಗುಣ ಬ್ರಹ್ಮವಾ ||1||
ಶಶಿಯು ರವಿ ಹವಿ ಮಿಂಚು ಗ್ರಹಗಳ
ಎಸೆವ ತಾರಾ ಗಣಗಳ | ಬಸುರಿನೋಳ್
ಹೊರಗೆಸೆದು ಬೆಳಗುವ | ಅಸಮ ಜ್ಯೋತಿ ಪ್ರಕಾಶವಾ ||2
ತ್ರಿಗುಣವಲ್ಲದ ತ್ರಿಮಲವಲ್ಲದ ಸ್ವಗತ
ಬೇಧಗಳೊಗೆಯುವ | ಅಗಣಿತನುಪಮ ಅಪ್ರತಕಟ್ಟಾದ
ನಿಗಮ ವಂದಿತ ಬ್ರಹ್ಮವಾ ||3||
ಕರಣ ಇಂದ್ರಿಯಗಳಿಗೆ ಪ್ರಭುವು | ಕರಣ
ದೋಷಗಳೆಲ್ಲವೂ | ಅರಿವು ಮರವೆಯ ಮೇಲಣರಿವು |
ಪರಮ ಸಚ್ಚಿದ್ರೂಪವಾ ||4||
ಜನನ ಮರಣದ ಜಡರು ಸೋಂಕದ
ಪ್ರಣವ ಪರತರವೆನಿಸದಾ | ಅನಘ ಗುರು ಮಹಲಿಂಗರಂಗನು |
ಎನಿಸಿ ರಾಜಪ ಬ್ರಹ್ಮವಾ ||5||
17
ಸುಂಕವಿಲ್ಲದ ಪುರವುಂಟು
ತೆರೆದ ಬಾಗಿಲ ಸುಂಕವಿಲ್ಲದ ಪುರವುಂಟು
ಬಂದು ನೋಡಿ ಹರಿಹರ ಬ್ರಹ್ಮಾದಿಗಳ ಕಾವಲ
ಕುಂಟು ಬಂದು ನೋಡಿ ||ಪ||
334 / ತತ್ವಪದ ಸಂಪುಟ – 1
ಪುರಕ್ಕರಸರು ಮುವ್ವರೊಂಭತ್ತು ಬಾಗಿಲು |
ಬಂದು | ವರಚೌಕ ಮಧ್ಯದೊಳಿದ | ಓಂಕಾರೇಶ್ವರ |
ಬಂದು | ಕರಣೀಕರೈವರು ಕರ ಜೋಡಿಸಿದರಲ್ಲಿ
ಬಂದು ನೋಡಿ ||1||
ಏಳು ಸುತ್ತಿನ ಕೋಟೆ ಮೇಲೊಂದು ಗವಿಯುಂಟು |
ಬಂದು | ಏಳು ಲೋಕಂಗಳ | ನೊಳಕೊಂಡಿಹುದಿಲ್ಲಿ |
ಬಂದು | ಏಳೆಡೆ ಸರ್ಪವು ಬೋರುಗುಟ್ಟುತಲಿದೆ |
ಬಂದು | ಏಳೆಡೆ ಸರ್ಪವು ತಲೆಯೊಳು
ರತ್ವವುಂಟು ಒಂದು ನೋಡಿ ||2||
ಎರಡು ಪಕ್ಷದೊಳೊಂದೆ ಪಕ್ಷಿಯಾಡು ತಂದೆ |
ಬಂದು | ಎರಡು ರೆಕ್ಕೆಯು ಪುಕ್ಕ ಪಕ್ಷಿಗೆಲ್ಲವು |
ಬಂದು | ಧರಣಿ ಜೀವರ್ಕಳಿಗಾದಾರವಾಗಿದೆ |
ಬಂದು | ಕರಸ್ಥಲದೊಳಗಿದೆ ಕರಕೆ ಸಿಕ್ಕುವುದಿಲ್ಲ |
ಬಂದು ನೋಡಿ ||3||
ಗರುಡ ಸರ್ಪಗೆ ಅತಿ ಸ್ನೇಹವುಂಟಾಗಿದೆ | ಬಂದು |
ಸುರಸುರರು ಮಿತ್ರ ಭಾವದೊಳಿರ್ಪರು | ಬಂದು |
ಇರಿವೆ ಸಿಂಹವು ನುಂಗಿ ತಾನೊಂದೆ ಕುಳಿತಿದೆ | ಬಂದು |
ಉರು ವಿಷವಮೃತವು ಆಯಿತೇನೆಂಬೆನು | ಬಂದು | ||4||
ಚಾರು ಬೋಜವ ಶಸ್ತ್ರಾತಿ ತೆರೆದಿದೆ ಎದುರಿಗೆ |
ಬಂದು | ಊರ ಜನರು ಉಂಡು ಧಣಿವರಾನಂದದಿ|
ಬಂದು | ದೂರದೊಳಿಲ್ಲವು ಜ್ಞಾನ ಭಂಡಾರವು |
ಬಂದು | ಧೀರ ಶ್ರೀ ಗುರು ಮಹಲಿಂಗನೊಳಗಿದೆ
ಬಂದು ನೋಡಿ ||5||
18
ನಿಜ ದೇವನೆ
ಗುರುದೇವ ನೀನೊರ್ವ ನಿಜದೇವನೆ
ನಿಮ್ಮ ಚರಣಾದೊಳ್ ಬೆರೆಯಾದ ನರನೇ
ಪಾಮರನೊ ||ಪ||
ತಿರುಕಾನಂದದಿ ಪುರ ಪುರಾಗಳ ತಿರುಗುತಾ
ನರಳುವಾ ತರಳಾಗೆ ನರನ ತೋರಿಸಿದೆ ||ಗುರು||
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 335
ಕರುಣಾವ ಕರಗಿಸಿ ಮುರುಗಿದ ಮುನಿಗಳಿಗೆ
ನಿಮ್ಮೊಳರಸಿ | ತಾವರೆಯಾದ ಸಿರಿಯಾ ತೋರಿಸಿದೆ
ಸದ್ಗುರುವೇ ತೋರಿಸಿದೆ ||ಗುರು||
ಸುತ್ತಿದ್ದ ಭವಮಾಲ್ಯೆ ಕಿತ್ತಿಟ್ಟೆ ಹೃದಯಾದೊಳ್
ಎತ್ತಿದ್ದ ಜ್ಯೋತಿಯಾ ಗೊತ್ತು ತೋರಿಸಿದೆ
ಸದ್ಗುರುವೇ ತೋರಿಸಿದೆ ||ಗುರು||
ಗುರು ಶಂಕರಾರ್ಯನೇ ಕರುಣಾ ತೋರಲು
ತಾನೇ ಗುರುವೆಂಬೋ ನಾಮಾವ ಧರಿಸಿ
ಬಂದಿದನಯ್ಯ | ಉದ್ಧರಿಸಿ ಬಂದಿದನಯ್ಯ ||ಗುರು||
19
ಎನ್ನಯ ಮೇಲೆ ದಯವುಟ್ಟಿ
ಗುರುದೇವ ನೀ ಮಾಡಿದುಪಕಾರವನು
ನಾನು ಮರೆಯುವುದೆಂದೆಂಗಿದರೊಳ್ ||ಪ||
ಪೊಡವಿಯೊಳ್ ಅರೆಳ ವೇದಾಗಮ ಶಾಸ್ತ್ರವಾಬಿಡದೆ
ಸಾದಿಸಿದ ವಾದಿಗಳೆಲ್ಲಾ | ಕಂದ ಮೂಲಗಳ
ಸೇವಿಸಿ ವಾಯುಗಳನ್ನೊತ್ತಿ | ಬಂಧಿಸಿ ಪಂಚಾಗ್ನಿ
ಮಧ್ಯದಿ ನಿಂದು ಯೋಗಿಗಳು ನೋಡುವ
ಪರಬ್ರಹ್ಮವಾ | ತಂದೆನ್ನ ಕಣ್ಗೆ ತೋರ್ಪದರಿಂದ ||1||
ಒಡನಾಡಿ ಕಾಣದ ಪರ ತತ್ವವನು ನೀನು
ಹಿಡಿದೆನ್ನ ಕರಕ್ಕೆ ಕೊಟ್ಟಿದ್ದರಿಂದ | ಗುರು ರೂಪಿನಿಂದೆನ್ನ
ಬೋಧಿಸಿ ತನ್ನೊಳು | ಬೆರೆಸುತ್ತಾ
ಮೋಕ್ಷವಿತ್ತದರಿಂದ ||2||
ತರಳ ಎನ್ನಯ ಮೇಲೆ ದಯವುಟ್ಟಿ ಶಿವನೆ
ಶ್ರೀ ಗುರುಸಿದ್ದನೆಂಬೋ ನಾಮವನಾಂತು | ಗುರು
ರೂಪಿನಿಂದೆನಗ ಬೋಧಿಸಿ ತನ್ನೋಳು |
ಬೆರೆಸುತ ಮೋಕ್ಷವಿತ್ತದರಿಂದ ||3||
20
ತಾನೆ ತಾ ಬಲ್ಲ
ಶೀಲವಾ ಮಾಡಬೇಡಣ್ಣ | ನೀನು ಮೇಲೆ
ಮಾಡುವುದೆಲ್ಲಾ ಸೂಳೆಯ ಬಣ್ಣ ||ಪ||
336 / ತತ್ವಪದ ಸಂಪುಟ – 1
ಹುಟ್ಟಿದ ತಳ ಕೂಳ ನೋಡು | ನೀನು
ಬ್ರಷ್ಟಾಗ ಬೇಡಣ್ಣ ಬರಿದೆ ನೀ ನೋಡಿ ||ಅ.ಪ||
ಒಂಭತ್ತು ಹೆಚ್ಚಾದಿ ರಸವು | ಅದು ತುಂಬಿ
ಸೂಸುತಲಿದೆ ಏಳಲೆ ನಿನ್ನಸವು | ಕುಂಬಾಣಿ ನರಕಾದ
ಕಸವು | ಅದ ನೀವಾಗಿ ನೋಡಣ್ಣ |
ಶಂಭು ನಿನ್ನ ವಶವು ||1||
ಸತ್ಯ ಸತ್ಯಾ ಎಂದು ನೋಡು | ಪರಾವಸ್ತು
ಬೇಕಾದರೆ ಇದು ಪಾಠ ಮಾಡು | ಕಳಿಯಬಾರದ
ಕರ್ಮ ಬಂಧ | ಇದನ್ನಳಿಯ ಬೇಕಾದರೆ ಗುರು
ಕೀಲಿನಿಂದ | ತಿಳಿಯಬಲ್ಲವರ ಸೈಗ್ಣೆಯಿಂದ ||2||
ಬರಿಯ ಶಾಸ್ತ್ರಗಳಿಂದಿಲ್ಲಿಲ್ಲ | ಪೂರ್ಣ
ಪರತತ್ವದನುಭಾವ ಬಾಯಿ ಮಾತಲ್ಲ | ಗುರು
ಪುತ್ರರಿಗೆ ದೂರವಿಲ್ಲ ಇದನೋರ್ವನೇ ಗುರುಸಿದ್ಧ
ತಾನೆ ತಾ ಬಲ್ಲ ||ಶೀಲವಾ||
21
ಆ ಗುರುತನರಿತು
ನುಡಿ ನುಡಿ ನೀ ನುಡಿ ನುಡಿಯಣ್ಣ | ಹರ
ಹರ ಎನ್ನುತ ನಡಿಯಣ್ಣ ||ಪ||
ಹುಟ್ಟಿದ ಠಾವಣಿ ತಿಳಿಯಣ್ಣ | ಇದು ಮುಟ್ಟಿನ
ದೇಹವು ಕಾಣಣ್ಣ | ಮುಟ್ಟು ಹುಟ್ಟಿದ ಮೂಲವ
ತಿಳಿದರೆ ಇದರುಟ್ಟುಗಡುತಲಿದೆ ಆವಾಗಣ್ಣ | ಖಂಡಿತ
ಮಾಡುವ ಜಾಗವ ತಿಳಿದರೆ ಅಖಂಡ ಮೂರ್ತಿಯೇ
ನೀನಣ್ಣ ||1||
ತಿರುಪತಿ ಯಾತ್ರೆಯೊಳ್ ಇಲ್ಲಣ್ಣ | ತಿರುಗಿ
ತಿರುಗಿ ನೀ ಬಂದೆಣ್ಣ | ಕಾಶಿಗೆ ಹೋದರೆ ಇಲ್ಲಣ್ಣ
ಈ ದೇಶವ ತಿರುಗಿದರಿಲ್ಲಣ್ಣ | ಪರ್ವತಕೊರಿದರೆ
ಇಲ್ಲಣ್ಣ | ಪಾತಾಳ ಗಂಗೆಯೊಳ್ ಮುಳುಗಿದರಿಲ್ಲ
ಧರೆಯೊಳು ಪುರವಾಶ ಯಡಿಯೂರು ಗುರು
ಸಿದ್ದೇಶ್ವರನ ಭಜಿಸಲು ಪಾರ್ವತಿ ಪತಿಯೇ ನೀನಣ್ಣ ||2||
ಗುರುವಿನ ಪಾದ ಇಡಿಯಣ್ಣ | ಆ ಗುರುತನರಿತು
ನೀ ನುಡಿಯಣ್ಣ | ವರ ಗುರು ಮೂರುತಿ
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 337
ತೀರ್ಥ ಪ್ರಸಾದವ ಸವಿದರೆ ತಿರುಗ ಜನ್ಮಕೆ
ಬರುವುದಿಲ್ಲಣ್ಣ ||3||
22
ಬಸುರಾಗದೆ ಮಗನಡೆದವ್ವ
ಬಸುರಾಗದೆ ಮಗನಡೆದವ್ವ | ಮಗನೆಸರೇ
ನಿಡಬೇಕೆತ್ತವ್ವ ||ಪ||
ಹಸಿ ಬಿಸಿ ಎನ್ನದೆ ಅಡೆದವ್ವ| ಹಸಿ
ಕೆಸರಿಗೆ ಬೆಂಕಿ ಹಚ್ಚಿ ನಡೆದವ್ವ | ಏನು
ಕಿಂಚಿತು ಪುಣ್ಯ ನಿನ್ನದವ್ವ ಇಂಥ ಮಾನವ
ಜನ್ಮಕೆ ಬಂದೆವ್ವ ||1||
ಸೋದರ ಮಾವನಿಗುಟ್ಟುವನೆ | ಅವ ಮಾದಗಿತ್ತಿಗೆ
ಮನಸ್ಸಿಟ್ಟವನೇ | ಹಾದರವಾಡಿ
ಕುಲಗೆಟ್ಟವನೆ | ಅಮ ಬಾಮರ ಮಡಿವಾಳ
ಗುಟ್ಟುವನೆ ||3||
23
ಎಂಥಾ ಕನಸು ಕಂಡೇನೆ
ಎಂಥಾ ಕನಸು ಕಂಡೇನೆ ಕೇಳಮ್ಮ ಜಾಣೆ |
ಎಂಥಾ ಕನಸು ಕಂಡೇನೆ || ಕುಂತಾಣ ದೇಶದ
ಕುರುಕ್ಷೇತ್ರದೊಳಗೊಬ್ಬ | ಕುಂತೂ ನಿಂತಗಾಯಿತೆ |
ಕೇಳಮ್ಮ ಜಾಣೆ ಕುಂತುನಿಂತಂಗಾಯಿತೆ ||ಪ||
ಕಪ್ಪೆಯು ಚರಿಸಲಾಗಿ ಆ ಧ್ವನಿ ಕೇಳಿ ಘಟ ಸರ್ಪ
ಹೆಡೆ ಎತ್ತಿದೆ | ಮುಪ್ಪುರವನೆಗೆಲಿದು ಮೂರು ರತ್ನವ
ನುಂಗಿ ಮಣಿಯಲಾರದ ಹಣ ಕಟ್ಟಿತೆ | ಕೇಳಮ್ಮ
ಜಾಣೆ | ಮಿಣಿಯಲಾರದ ಹಣ ಕಚ್ಚಿತೆ ||1||
ಮುಪ್ಪಿನ ಮೂಲೆಯೊಳು | ಭಸ್ಮದಾ ಉದುಕಾದನು
ಕಂಡೇನೊ | ಮುಪ್ಪುಳಿ ಕಮಲವ ಪತಿತೆಯೊಳ್
ಬಿಗಿದೊತ್ತಿ | ಓಡಿಲುಂಬುದ ಕಂಡೆನೋ ಕೇಳಮ್ಮ
ಜಾಣೆ | ಓಡಿಲುಂಬುದ ಕಂಡೆನೋ ||2||
ಹಸವಲ್ಲದಾನೆ ಸೊಕ್ಕಿ ಮೇಲ್ಮದವೇರಿ ಓಣಿಯೊಳ್
ಬದುಕಿರಲು | ಕುಶಲದಿಂದಲೇ ಪೋಗಿ ಸೊಂಡಿಲ
330 / ತತ್ವಪದ ಸಂಪುಟ – 1
ಪಿಡಿದರೆ | ಗಜಮರೆತು ನಿಂತಿತಲ್ಲೆ ಕೇಳಮ್ಮ ಜಾಣೆ |
ಗಜ ಮರೆತು ನಿಂತಿತಲ್ಲೆ ||3||
ಉನ್ನಾತ ಕವಿ ಲಿಂಗನು ಹೇಳಿದ ಪಾಠ ಜನರೆಲ್ಲ
ಒಪ್ಪರಂತೆ ಸಪ್ತೇಳು ಸಮುದ್ರವು ಮಡೆ ಉಕ್ಕಿ
ಬರುತಿರೆ ಗಿರಿ ಗೋಪುರವ ಕಂಡೇನೋ
ಕೇಳಮ್ಮ ಜಾಣೆ | ಗಿರಿ ಗೋಪುರವ ಕಂಡೆನೊ ||4||
24
ಶ್ರೀ ಗುರು ಮಧ್ಯದಲಿ
ಯಾಗೆ ಮುಕ್ತನಾಗಬೇಕಣ್ಣ | ಈಗಾದ ಮೇಲೆ
ಸುಳ್ಳಲ್ಲ ಕೇಳು ಜೀವ ಮುಕ್ತನಾಗಬೇಕಣ್ಣ ||
ಯಾಗೆ ಮುಕ್ತನಾಗಬೇಕು ಈಗ ತಾಮಸದೊಳಗೆ
ಬಿದ್ದು | ಹೋಗುವ ಕಾಲಕ್ಕೆ ಮತ್ತಿನ್ಯಾಗ
ನೋಡಿದರೇನು ಕಾಣೆ | ಬೇಗ ಮಾಡು
ಗುರು ಸೇವೆಯ ||1||
ಹಿಂದೆ ಭವ್-ಭವ್ ಕೊಲೆಗೆ ಬಿದ್ದೆಲ್ಲೊ |
ಕತ್ತಲಗೆ ಸಿಲುಕಿ ಮುಂದೆ ಕೋಳಕಾ ಬೀಳುತೀಯಲ್ಲೊ ||
ಹಿಂದೆ ಛಿ ಛಿ ನಾಚಿಕಿಲ್ಲದೆ ನೋಡು ಕಣ್ಣೀರಾಕಿದಂತೆ |
ಹಿಂದೆ ಏಳು ಸಮುದ್ರದೊಳಗೆ ಮಂದ
ಮತಿಗಳ್ಯಾಕೊ ನಿನಗೆ ಇನ್ಯಾಗ ಮುಕ್ತನಾಗಬೇಡಣ್ಣ ||2||
ಮುತ್ತಿನಂಥ ಜನ್ಮ ಕಾಣಣ್ಣ | ಇಲ್ಲೀಗೆ
ಬಂದು ಮರೆತರೆ | ಮತ್ತೆ ಹಿಂದಕೆ ಹೋಗಬೇಕಣ್ಣ |
ಅತ್ತೆ ಮಾವನ ಮಗಳಿಗಿನ್ನು ಕತ್ತೆಯಂತೆ ನುಡಿದು
ದುಡಿದು | ಮತ್ತೆ ನಾನಾ ಜನ್ಮಗಳಿಂದ ಮೃತ್ಯುವಿನ
ಬಾಯಿಗಿನ್ನು ತುತ್ತುವಾಗಿ ಹೋಗಬೇಡಣ್ಣ | ಇಲ್ಲಿಗೆ
ಬಂದು ವ್ಯರ್ಥ ಹೋಗಬೇಡಣ್ಣ ||3||
ಹೆಡ್ಡತನಗಳ ಮಾಡಬೇಡಣ್ಣ | ಬಲ್ಲವರ ಕೇಳಿ
ದೊಡ್ಡ ಗುರುಗಳ ಸೇರಬೇಕಣ್ಣ | ಅಡ್ಡ ಬರುವ
ದುರ್ಗುಣಗಳ ಗೊಡ್ಡು ಗುರಿಯ ಮೂಡಿ
ಕಡಿದು | ಅಡ್ಡ ಬೆಟ್ಟದ ನಟ್ಟ ನಡುವೆ
ದೊಡ್ಡ ಗವಿಯ ಸೇರಬೇಕು ||4||
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 339
ಮೀರು ಬೇಡಿ ಮಾತ ಕೇಳಣ್ಣ ಸುಳ್ಳಲ್ಲವೆಲ್ಲ
ಘೋರ ಪಾತಕ ಬೀಳುತೀಯಲ್ಲ | ಆರು ಚಕ್ರದ
ಹಂಸನ ಸೇರಿ ಶ್ರೀ ಗುರು ಮಧ್ಯದಲ್ಲಿ | ಧೀರ
ಗಂಗಾಧರನ ಬೆಳಕು ತೋರುತೈತೆ ನೋಡಿರಣ್ಣ ||
ಯಾಗೆ ಮುಕ್ತನಾಗಬೇಕಣ್ಣ ||5||
25
ಶಿವಮಂತ್ರ ನೆಲೆಯಾಗಿ
ಆವಾಗ ಶಿವಮಂತ್ರ ನೆಲೆಯಾಗಿ | ಗುರುದೇವ
ತೋರಿದ ಗೊತ್ತು ಗುರಿಯಾಗಿ ||ಪ||
ಆಸಾನ ಬಲಿದು ಊರ್ಮುಕವಾಗಿ | ತುದಿನಾಶಿಕ
ಕೊನೆಯಲ್ಲಿ ಸ್ಥಿರವಾಗಿ | ಸೂಸದೆ ಮನವು
ಅಂಪುಳಿಯಾಗಿ | ಗನ ಗೋಷದೊಳಗೆ
ಮನ ಸ್ಥಿರವಾಗಿ ||1||
ಚಂದ್ರ ಸೂರ್ಯರಿಬ್ಬರೊಂದಾಗಿ | ಅಲ್ಲಿ ರಂಧ್ರ
ಮಾಣಿಕ ಮುತ್ತು ಬೆಲೆಯಾಗಿ | ನಾಗೇಂದ್ರನು
ಮೇಲೆತ್ತಿ ಹೆಡೆಯಾಗಿ | ದೇವೇಂದ್ರನ ಸಭೆಯಲ್ಲಿ
ಬೆಳಕಾಗಿ ||2||
ಬ್ರಹ್ಮನೊಳಗೆ ವಿಷ್ಣು ರೂಪಾಗಿ ಪರಾಬ್ರಹ್ಮವೆ
……. | ಅಲ್ಲಿ ನಿರ್ಮಲ ನಿಜ
ಸುಖ ಘನವಾಗಿ | ಕರಸ್ಥಳದಾನಗೋ ಲಿಂಗು
ದಯವಾಗಿ ||3||
26
ಇಂಥ ಜನ್ಮವ ಕಳೆದುಕೊಂಡರೆ
ಇಂಥ ಜನ್ಮವ ಕಳೆದುಕೊಂಡರೆ ಇನ್ನೆಂಥ ಜನ್ಮವು
ಬರುವುದು | ಅಂತರಂಗವಾಗಿ ಚಿಂತಿಸಿ ನೋಡಿ ಇಂಥ
ಜನ್ಮವು ಬಾರದು ||ಪ||
ಮಡದಿ ಇದ್ದರು ಮಕ್ಕಳಿದ್ದರು ಮತ್ತೆ ಪುತ್ರರಿದ್ದರೂ
ಒಡೆಯ ಬಂದ ಕಾಲದಲ್ಲಿ ಬಿಡಿಸುವವರಾಗಿಲ್ಲವೂ ||1||
ನಾರಿ ಮಕ್ಕಳು ಸೇರಿಕೊಂಡು ಭಾರಿ ಮನೆಯ
ಕಟ್ಟಿದ್ದರ ಪಾರಿ ಚೌಕಿ ದಾರದಿಂದ ಮಂಚವೇರಿದ್ದರು ||2||
340 / ತತ್ವಪದ ಸಂಪುಟ – 1
ತೀರಿದರೆ ಋಣ ಬೀರಿ ಪಾಶಿಮನಾಳುಗಳು ಬಂದೆ
ಎಳೆದರು ನಾರಿ ಮಕ್ಕಳು ಸೇರಿಕೊಂಡು ಗಂಟೆಂದೆ ಕೇಳ್ಪರು ||3||
ನಾರಿ ಮಕ್ಕಳು ಮೋಹವಡಗದೆ ತೋರದೈ
ವೈರಾಗ್ಯ ತೋರಿದರು ವೈರಾಗ್ಯ ಭಾಗ್ಯವ ಸೇರದೈ
ಗುರುಪಾದವಾ ||4||
27
ಕ್ಲೇಶಂಗಳೈದು
ಪಾಲಿಸಯ್ಯ ಪಾರ್ವತೀಶ್ವರ | ನೀ ಎನ್ನ
ನೊಲಿದು ಪಾಲಿಸಯ್ಯ ಪಾರ್ವತೀಶ್ವರ ||ಪ||
ಪಾಲಿಸಯ್ಯ ಭಜಕ ಜನರ ದಯಾಳು
ಎನ್ನ …. ಭವಗುಣಗಳಾ | ಜಾಲವನ್ನು ತಪ್ಪಿಸಿ
ನಿಮ್ಮ ಬಾಲನೆಂದು ಕರುಣವಿಟ್ಟು ||ಅ.ಪ||
1. ಮರೆತೂ ನಿನ್ನ ಧರೆಗೆ ಬಂದೆನೋ |
ಸಂಸಾರವೆಂಬೋ ಉರಿವ ಕಿಚ್ಚಿನೊಳಗೆ ಬೆಂದೆನೋ
ಅಜ್ಞಾನವೆಂಬೋ ಹಿರಿಯ ಭೂತದಿಂದ ನೊಂದೆನೊ
ಪಂಚೇಂದ್ರಿಯಗಳ ಉರುಳಿನೊಳಗೆ ಸಿಲುಕಿ ಮುನ್ನ
ಅರಿಯದದಮನಾಗಿ ನಿನ್ನ ಚರಣ ಯುಗವ
ಪೂಜಿಸುವುದ ಮರೆತು ನಾನು ಕೆಟ್ಟೆನಕಟ ||1||
2. ಕಾಮಿನಿಯರ ರೂಪ ನೋಡುತ | ಮಾನಸಾ
ದೊಳೆಣಿಸಿ ಕಾಮ ಸೆರದ ಅತಿಗೆ ಬೀಳುತಾ
ವಾಯುಗಳನುಳಿದು ಕಾಮ ಕೇಳಿ ಒಳಗೆ ಕೂಡುತ
ಹೇಮ ಭೂಮಿಗಳನು ಬಯಸಿ ಪ್ರೇಮದಪ್ಪಿ
ತೊಳಲಿ ಬಳಲಿ | ಸೋಮದರನೇ ನಿನ್ನ ಮರೆತು
ತಾಮಸದೊಳು ಮುಳುಗಿ ಹೋದೆ ||2||
3. ಪರರ ಗುಣವಾನೆಣಿಸಿ ಜರಿಯುತ್ತಾ ಕಣ್ಣಲ್ಲಿ
ಕಂಡ ಸರ್ವ ವಿಷಯಗಳಿಗೆ ಅರಿಯುತ್ತಾ |
ದರ್ಮವದು ಸೊಕ್ಕಿ ಗುರುವು ಹಿರಿಯರನ್ನು
ಜರಿಯುತ್ತಾ ತರುಣಿ ಸುತರೂ ನಿತ್ಯವೆಂದು
ಕರಡಿಯಂತೆ ತಬ್ಬಿಕೊಂಡು | ಬರಿದೆ ಕೆಡುವೆನಯ್ಯ
ನಿಮಗೆ ಮರುಕವೆನಿತು ಬಾರದಲ್ಲ ||3||
4. ಕೆಡುವ ತನುವನಿದನು ನೆಚ್ಚುತ್ತಾ | ಲೌಕೀಕವಿದನು
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 341
ತೊಡರು ಮೋಹದೊಳಗೆ ಮೆಚ್ಚುತ್ತಾ ನಿರ್ಭಾಗ್ಯ
ನಡೆಯೊಳ್ ಎಡಹಿ ನಿಧಿಯ ಕಾಣದಂತೆ ಮೃತನೆ
ನಿತ್ಯ ಮುಕ್ತಿ ಸುಖವಾ | ಕೊಡುವ ನಿನ್ನ ಮರೆತು
ನಾನು ಕಡು ದುರಾತ್ಮನಾದೆನಲ್ಲ ||4||
5. ಆರು ಭ್ರಮೆಗಳನ್ನು ತಿನ್ನುತ್ತಿವೆ | ಆವರಿಸಿಕೊಂಡು
ಮೂರು ತಾಪ ಎನ್ನ ಸುಡುತ್ತಿದೆ | ಸಡ್ವರ್ಗ
ಎನ್ನಗಾರು ಮಾಡಿ ಹಿಡಿದು ಕೊಲ್ಲುತ್ತಿದೆ | ಕ್ಲೇಶಂಗಳೈದು
ವೈರಿಯಂತೆ ವಸಗಿ ಮಸಗಿ ಓರುತ್ತಿಹುದು ಭವ
ನೊಯ್ಯೊ | ಲಾರೆ ಶ್ರೀ ಗುರು ಸಿದ್ದರೂಪ
ಸಾರ ಮೋಕ್ಷ ಸುಖವನ್ನಿತ್ತು ||5||
28
ಅರಿತದನು ಮರೆತರೆ
ಓದಬೇಕಕ್ಷರವಾ ಕಾಣಣ್ಣ | ಸಾಧಿಸಿ ಗುರುವಿನೊಳ್
ಓದಬೇಕಕ್ಷರವಾ ಕಾಣಣ್ಣ ||ಪ||
ವೇದ ಗೋಚರನಾದ ಗುರುವಿನ ಪಾದಕ್ಕೆರಗುವುದೆ
ಪ್ರಥಮ ಅಕ್ಷರ | ಭೇದವನು ತಾ ತಿಳಿದು
ಮೋಕ್ಷದ ಹಾದಿಯೊಳು ನಡೆಯುವ ಮಹಾತ್ಮರು ||ಪ||
ಒಂದೇ ಅಕ್ಷರ ಮೊದಲು ಕಾಣಣ್ಣ | ಚೆಂದಾಗಿ
ನೋಡಿದರಿಂದ ಐದಕ್ಷರವ ಓದಣ್ಣ | ಮುಂದೆ
ಮೂರಕ್ಷರವು ಗೂಡಿ ಒಂದೆ ಆರುವ ಸಂದಿನೊಳಗೆ
ಇಂದು ಶೇಖರ ಚಂದ್ರ ತಾರೆಗಳು ಅಂದದಿಂದಲೆ
ಬಂದು ನಿಲ್ಲುವ ||1||
ಎಷ್ಟು ಭಾಗ್ಯವಿದ್ದೇನು ಫಲವಣ್ಣ |
ಇದನರಿಯದಿರ್ದಡೆ ಕಷ್ಟವೆಂದೂ ತಪ್ಪುದಿಲ್ಲಣ್ಣ |
ಅಷ್ಟ ಅಕ್ಷರಗಳನು ಅರಿತು ದೃಷ್ಟಿಯಿಂದ
ಓದಿಕೊಂಡರೆ | ಸೃಷ್ಠಿಪತಿ ಶ್ರೀ ಹರಿಯುಪರಮ
ಇಷ್ಟ ಭಾಗ್ಯವ ಪಾಲಿಸುವನು ||2||
ಅರಿತು ಕೊಂಡರೆ ಚಂದ ಕಾಣಣ್ಣ |
ಅರಿತದನು ಮರೆತರೆ ಧುರಿತ ದುಃಖವು ತಪ್ಪುದಿ
ಲ್ಲಣ್ಣ ಸರಸವಲ್ಲಿ ಮೂಲ ವಿದ್ಯೆಯು
ದೊರಕದೆಂದಿಗೂ ಕರ್ಮಿಗಳಿಗೆ
ದೊರೆತರವನಿಗೆ ಇಹಪರದೊಳು ಪರಮ ಭಾಗ್ಯವು
342 / ತತ್ವಪದ ಸಂಪುಟ – 1
ತಪ್ಪುದಿಲ್ಲವು ||3||
ಗುರುವುನಿಂದಲೇ ತಿಳಿಯಬೇಕಣ್ಣ | ಪಂಚಾಕ್ಷರಗಳ
ಅರಿವು ಬಂದರೆ ಪರಮ ಕಾಣಣ್ಣ | ಪರಮತತ್ವಕ್ಷರಗಳೆರಡನು
ಮರೆಯದಿರು ಮಗನೆಂದು ರಂಗನು
ಹರಸಿ ಶಿರದೊಳು ಕರವನಿರಿಸಿದ ಪರಮ ಗುರು
ರಾಜೇಂದ್ರ ಕರುಣದಿ ||4||
29
ಎರಡನರಿತು
ನಾನು ಎಂಬುವನಾರು ತಿಳಿಯಣ್ಣ | ನೀ
ನಿನ್ನೊಳರಿತು ನಾನು ಎಂಬುವನಾರು ತಿಳಿಯಣ್ಣ ||
ನಾನು ಎಂಬೆರಡಕ್ಷರಾದೊಳು ತಾನೆ ತಾನಾಗಿರುವ
ಸರ್ವ ಜ್ಞಾನ ತ್ರೀಣೆ ಓಂಕಾರ ಪರಮನು ಬಾನು
ಕಳೆಯಂ ತೊಳೆಯುತಿರ್ಪನು | ಗಾನ ನಾದ ವಿನೋದ
ಕಾಣಣ್ಣ | ನಾನಾ ವಿಚಿತ್ರದ ತಾರೆ ಮಧ್ಯದಿ ಕುಳಿತು
ನೋಡಣ್ಣ | ಜ್ಞಾನಾನುಭವ ಸಮಾಧಿಯೊಳು ಕಾಣುವನು
ಮುಕ್ಕಣ್ಣ | ಹೀನ ಗುಣಗಳ ನೂಕಿ ಚರಿಸುವ
ಶ್ವಾನನು ಕಾಲ್ಮುರಿದು ಭಕ್ತ | ದೀನನೊಳು
ಬೆರೆದೇಕವಾಗಲು ಜ್ಞಾನ ಗುಟ್ಟಿನ ಮೂಲದನುಭವ ||1||
ಸಾಧು ಜನರನುಭವದ ಕೀಲಣ್ಣ | ಶೋದಿಸಿ
ನೋಡುವ ಸಾಧು ಜನರನುಭವದ ಕೀಲಣ್ಣ |
ಶೋಧಿಸಿ ನೋಡುವ ಸಾಧು ಜನರನುಭವದ ಕೀಲಣ್ಣ
ವೇದಶಾಸ್ತ್ರ ಪುರಾಣ ಆಗಮಕಾದಿ ತತ್ವಗ್
ಮೂಲ ಪ್ರಣಮನು | ಸಾಧಿಸಿದ ಬ್ರಹ್ಮಾಂಡದೊಳು
ಪರಹಾದಿಯನು ತಾ ಕಲಿತು ನಡೆಯಲು | ವಾಡಿ
ಭೀಕರನಿರುವ ನೋಡಣ್ಣ | ಸಾದಾನು ಚಿತ್ತ ಪರಂ
ತರಂಗದೊಳೇಕವಾಗಣ್ಣ | ಕಾದಿದ್ದು ಪರಮ ಶಬಾರಿ
ಹೊರಡುವ ರೀಕು ನೋಡಣ್ಣ | ಕ್ರೋಧ ಕಪಟವ
ಸುಟ್ಟು ನಾನಾ ಭೇದ ಶೀಲಗಳಳಿದ ಶ್ರೀ ಗುರು
ಪಾದವನು ನೆರ ನಂಬಿ ಆ ನಿಜ ಭೋಧೆಯೊಳು
ಸುಖಿಸಪ್ತಲನುದಿನ ||2||
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 342
ಸಣ್ಣ ಸೂಜಿಯ ಬಣ್ಣ ನೋಡಣ್ಣ | ಇನ್ನೀಯೊಳಿಕ್ಕಿ
ಸಣ್ಣ ಸೂಜಿಯ ಬಣ್ಣ ನೋಡಣ್ಣ | ತನ್ನ ತಾನೆ
ಅರಿತು ನೋಡಲು | ಚೆನ್ನಕೇಶವ ತಾನೆ ತಾ ಪ್ರಸನ್ನನಾಗುವ
ನಿತ್ಯ ನಿನ್ನೊಳು ಕಣ್ಣನೂರಿನೊಳಿಕ್ಕಿ ನೋಡಲು
ಚಿನ್ಮಯಾತ್ಮನ ಕಳೆಯು ಬೆಳಕಣ್ಣ | ಉನ್ನಂತ ಹಂಸನಂದ
ಪರಮ ದೇಕ್ಷ ಕಾಣಣ್ಣ | ಹೊನ್ನು ಭಾಗ್ಯದ
ಆಶೆಯಳಿದು ಕುನ್ನಿಗುಣಗಳ ನೂಕಿ ತುಳಿದು ಮುನ್ನ
ಪರಮಾನಂದ ದಾರಿಯ ತನ್ನೊಳರಿಯಲು ತಾನೆ
ಪರಮನು ||3||
ಲಿಂಗ ಕಾಣುತ್ತಿದ್ದಿಕ ನೋಡಣ್ಣ | ಬಂಗಾರ
ದೋಲ್ ಶಿವಲಿಂಗ ಕಾಣುತ್ತಿದ್ದಿಕ ನೋಡಣ್ಣ|
ಅಂಗ ಎಂಬ ನಗರ ಇದರೊಳು ತುಂಗೆ
ಯಮುನ ಎರಡು ಕೂಡ ಸಂಗಮದ ನಡುಗುಡಿಯ
ಒಳಗೆ ಲಿಂಗ ತಳ ತಳಿಸುತ್ತಿರುವನು | ಮಂಗಳಾರತಿ
ಬೆಳಕುಮಯವಣ್ಣ | ಮುಂಗಾರು ಮಿಂಚಿನ
ಗಡುಗಿನಾರ್ಭಟ ರಭಸು ಕಾಣಣ್ಣ | ತಂಗಾಳಿ
ರಂದ್ರದೊಳು ಏರಿ ಮೇಲಕ್ಕೆ ದಾರಿ ಮುಚ್ಚಣ್ಣ |
ಅಂಗಳದ ಒಳನೋಟ ಬಹುತರ ರಂಗು ಮಾಟದ
ಚಿತ್ರಕೆತ್ತಿವ ಶುಂಗಾರ ಮಣಿ ಪೀಠದೊಳು ನಿಜ
ಲಿಂಗ ತಳತಳಿಸುತ್ತಿರುವನು ||4||
ಎರಡನರಿತು ಒಂದಾಗಿ ಕೂಡಣ್ಣ | ಬೆರೆದು
ಕೀಲಿನನುಭವ | ಎರಡನರಿತು ಒಂದಾಗಿ ಕೂಡಣ್ಣ |
ಬೆರೆದು ಎರಡೊಂದಾಗಲು ಶ್ರೀ ಪುರುಷನಂತಾನಂದ
ಅದರೊಳು | ಅರಿತು ಧ್ಯಾನಿಸಿ ಕುರಿತು ನೋಡಲು
ಉರಿವ ಜ್ಯೋತಿಯಂತಿರುವ ಪರಮನೊಳು ವರವ
ಬೇಡಲು ಪರಮ ಸುಖವಣ್ಣ | ಕರದೊಳಗೆ ಉರುಗನ
ಧರಿಸಿ ಕೊಂಡೀತು ನೋಡಣ್ಣ | ಗುರು ಮಕ್ಕಳಿಗೆ ಇದು
ದೂರದಲ್ಲಿ ದಾರಿ ಸುಖವಣ್ಣ | ದುರಿತ ಮಾಯ
ಶರಧಿ ನಾಸನ ಪರಮ ಪಾವನರಾವ ಶ್ರೀಮದ್
ಗುರುರಾಜನ ಸ್ಮರಣೆಯೊಳ್ ಮನ ಇರಿಸಿ ಪೂಜಿಪ
ಗುರುತಿನನುಭವ ||5||
344 / ತತ್ವಪದ ಸಂಪುಟ – 1
30
ಶರಣು ಸೇವೆಯ ಮಾಡುಬೇಗ
ಶರಣು ಸೇವೆಯ ಮಾಡುಬೇಗ | ಗುರು ಕರುಣಾವ
ಪಡೆದು ನೀ ನಿತ್ಯನಾಗು ||ಪ||
ಮೂರು ಮೊಗೆಯದೊಂದು ಬೆಟ್ಟಿ | ಅದನ್ನಾರು
ಕಂಡವರಿಲ್ಲ ಅದೇ ಬಲು ಕಷ್ಟ | ಏರಿ ಓದವನೊಬ್ಬ
ದಿಟ್ಟ ಅಲ್ಲಿ ಸೂರ್ಯಗೊಂಡವನೋಗಿ ಮೂರೂರ
ಸುಟ್ಟ ||1||
ಹಲವು ಬಾಂಡದೊಂದು ಹೆಜ್ಜಾ | ಅಲ್ಲಿ ಕೆಲವು
ದಿವಸದಿಂದ ಸಾಧಿಸಿ ಕಂಡ | ಬಲಿದ ಬಾಗಿಲಿಗೊಂದು
ಗುಂಡ | ಅಲ್ಲಿ ನೆಲನೆವೊರ್ವಳೆ ಒಕ್ಕಿ ಕೈಸೇರಿ ಕಂಡ ||2||
ಮುಂದೆ ತಿಳಿಗೊಳ ಉಂಟಲ್ಲಿ | ಮುಳ-ಮುಳಗಾಡೋ |
ಮುಂದೆ ನೆಲಮಾಳಿಗೆಯೋಳ್ ಅಮೃತ ತಕ್ಕೊಂಡ |
ಚರಣೆಯಿಲ್ಲದೆ ಸವಿದುಂಡ ಶಿವ-ಶರಣರ
ಒಡಗೂಡಿ ಕೈ ಸೇರೆ ಕಂಡ ||3||
31
ದಾರಿಯನು ಕಂಡು
ಯಾಕೆ ಸುಮ್ಮನೆ ದುಃಖಿಸುವಿರಿ | ಲೋಕ
ಸ್ಥಿರವಿನ್ಯಾರಿಗೆ | ನೂಕಿ ಲೋಹದ ಆಶೆಯನು
ಜಗದೇಕನಾಥನ ಭಜಿಸಿರೋ ||ಪ||
ಹಿಂದೆ ಮಹರಾಜಾಧಿರಾಜರು ಸಂದು ಹೋದರು
ಮೃತ್ಯುವಿಗೆ | ಮುಂದೆ ಹೀಗೆಯೇ ಆತ್ಮ ಜೀವಿಗಳು
ಬಂದ ದಾರಿಯನಿಡದರೊ ||1||
ಬಂದವನು ಅನುಭವಿಸಲಾರದೆ ನಿಂದೆ ನುಡಿ ಮೊರೆ
ಯಾರಿಗೆ | ತಂದೆ ಶ್ರೀ ಗುರು ಪಾದಸ್ಥಾನವ
ಹೊಂದಿ ಸುಖಿಸುವುದರಿಯದೆ ||2||
ಎರಡು ದಿನದೈಶ್ವರ್ಯದಾಂಭವ ಮರವೆ
ಮಾಯಾದಿ ಮರೆಯಲು | ದುರುಳಿನೊಳ್ ಸಿಕ್ಕಿ
ಉರುಳಲ್ಯಾತಕೋ ಅರಿತು ಸ್ತುತಿಸಿರೊ ಪರಮನ ||3||
ಸ್ಥಿರವು ಇಲ್ಲವು ಧರೆಯ ಭಾಗ್ಯವು ಮರವೆ
ಮಾಯದಿ ಬಂದಾನ ಇರಂಗ್ ಬಾಯ್ದೆಡೆ| ಬೇಟಿ
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 345
ಗೋದರು ಗಿಲಿಯೊಳೊಕ್ಕರು ಬಿಡುವರೆ ||4||
ನಾನು ಯಾರಿಂ ಬಂದ ಕಾರಣ ಏನು
ಎಂಬುದನರಿಯದೆ | ಹೀನಲೋಕದ ನಾನಾ
ವ್ಯಸನದಿ ಶ್ವಾನಗಿಂತ ಕಡೆ ಆಗ್ವಿರಿ ||5||
ಕೊಲ್ಲುವರು ನಮ್ಮೆಲ್ಲರನು ನಾವೆಲ್ಲಿ ಸೇರುವ
ಎನ್ನುವ | ಸೊಲ್ಲು ಸುಳ್ಳದು ನೂಕಿ ಲಕ್ಷ್ಮಿಯ
ವಲ್ಲಭನ ಮೊರೆ ಬೇಡಿರೋ ||6||
ಜಾತಿ ಕುಲ ಕೀಳ್ ಮೇಲ್ ಎಂಬುವ ಮಾತೆ
ನರಕದ ಬಂಧಾನ | ಕೋತಿ ಚೇಷ್ಟೆಯ ಬಿಟ್ಟು
ಪರಮಜ್ಯೋತಿ ಲಿಂಗವ ನೋಡಿರೋ ||7||
ಈಗಲೋ ಯಾವಾಗಲೋ ನಾವ್ ಹೋಗುವುದು
ನಮ್ಮೂರಿಗೆ | ಭೋಗ ಭಾಗ್ಯವ ಬಿಟ್ಟು ಹೋಗುವುದ್ಯಾಗ
ಎಂದರೆ ಬಿಡುವರೆ ||8||
ಸತ್ತು ಹುಟ್ಟುವ ಎಂಬ ವ್ಯಸನದಿ ಅತ್ತು
ಬದುಕು ಮಾರಿರಯ್ಯೊ | ಸತ್ತು ಹುಟ್ಟುವ ತೊಡಕು
ಬಂಧವ ಕಿತ್ತು ಬಿಡಿ ನೀವಿಲ್ಲಿಯೇ ||9||
ನಾರಿ ಮಕ್ಕಳು ಭೂರಿ ಭಾಗ್ಯವು ಬಾರದು
ನಮ್ಮೊಂದಿಗೆ | ಸೇರಿ ಶ್ರೀ ಗುರು ರಾಜೇಂದ್ರನರು
ವಿನೊಳ್ ದಾರಿಯನು ಕಂಡು ನಡಿಯಿರೋ ||10||
32
ಐವತ್ತು ದಳ ವರ್ಣ
ಬ್ರಹ್ಮಾಂಡದೊಳಗೊಂದು | ಹಮ್ಮೀನ ಮರವುಟ್ಟಿ
ಶಂಭುಲಿಂಗ | ಶಂಭುಲಿಂಗ || ಆಗಮ್ಯವಾಗಿದೆ
ಯಾರಿಗೂ ತಿಳಿಯದು ಶಂಭುಲಿಂಗ | ಶಂಭುಲಿಂಗ ||ಪ||
ನಾದು ಬಿಂಧು ಕಳೆ ಮೂರು ವರ್ಣದ
ಬೀಜ | ಶಂಭುಲಿಂಗ || ಅದು ಮೇದಿನಿಯೊಳು
ಬಿದ್ದು ಮೊಳೆತುಕೊಂಡಿದೆ ಶಂಭುಲಿಂಗ || ಪೀಳೆ
ಪಿಂಗಾಳೆಂಬ ಗಾಳಿ ನೀರೊಳು ಬೆಳೆದು | ಶಂಭುಲಿಂಗ ||
ಅದು ರೂಡಿಯೊಳಗೆ ಎಂದು ಪ್ರಜ್ವಲಿಸುತಲಿದೆ
ಶಂಭುಲಿಂಗ ಶಂಭುಲಿಂಗ |1||
ಎಪ್ಪತ್ತೆರಡು ಸಾವಿರದ ಎಲೆಗಳುಂಟು | ಶಂಭುಲಿಂಗ ||
346 / ತತ್ವಪದ ಸಂಪುಟ – 1
ಇದಕ್ಕೆ ತಪ್ಪದೆ ಇನ್ನೂರ ಹದಿನಾರು ಕೊಂಬೆಗಳುಂಟು |
ಶಂಭುಲಿಂಗ | ಒಪ್ಪದಿಂದಲೇ ಕೊಳ್ಳಿ ವಾರಿಜ ಕಮಲಕ್ಕೆ |
ಶಂಭುಲಿಂಗ || ಇದಕ್ಕೆ ತಪ್ಪಾದೆ ಐವತ್ತು ದಳ ವರ್ಣ
ಎಸಳುಂಟು ಶಂಭುಲಿಂಗ | ಶಂಭುಲಿಂಗ ||2||
ಪೂರ್ವ ದಿಕ್ಕಿನಲ್ಲಿ ಮೋರುಗಾಯಾಗಿದೆ | ಶಂಭುಲಿಂಗ ||
ಅದು ಏರಿ ಪಶ್ಚಿಮದಲ್ಲಿ ಹಣ್ಣಾಗಿ ನಿಂತಿದೆ |
ಶಂಭುಲಿಂಗ || ಸಾರಿ ದಕ್ಷಿಣದಲ್ಲಿ ತೊಟ್ಟು ಕಳಚಿ
ಬಿದ್ದಿದೆ | ಶಂಭುಲಿಂಗ||
ಅಷ್ಟಾಂಗ ಯೋಗಿಗಳ ಅರಸಿ ಕಾಣರಲ್ಲ | ಶಂಭುಲಿಂಗ || 3||
ತೊಟ್ಟು ಇಲ್ಲದ ಹಣ ಕೊಟ್ಟ ಶಿವಲಿಂಗಸ್ವಾಮಿ|
ಶಂಭುಲಿಂಗ || ಇದ ಮನಮುಟ್ಟ ಸವಿದಣ್ಣನಿಗೆ
ಹುಟ್ಟೇ ನಾಶವಯ್ಯ ಶಂಭುಲಿಂಗ | ಶಂಭುಲಿಂಗ ||
ಬ್ರಹ್ಮಾಂಡದೊಳಗೊಂಡು ||
33
ಸತ್ಯ ಮಾರ್ಗದೊಳಗಾಡು
ಭವ ಭವಾದಿಗಳ ಮದ್ದು | ನಮ್ಮ ಗುರು
ತಂದರು ತಾವಿದ್ದು | ಫಲವೇನು ನಾವಿದ್ದು | ನಮ್ಮ
ಜನ್ಮವೇ ಇಲ್ಲಿಗೆ ರದ್ದು ||ಪ||
ಪತ್ಯವನ್ನಿಟ್ಟು ನೋಡು | ನೀ
ಸತ್ಯಮಾರ್ಗ ದೊಳಗಾಡು | ಹತ್ತವತಾರದ ಗೂಡು ನೀ
ಪಿತ್ಯದ ಲೋಗವೀಡಾಡು ||1||
ಮಾದ್ರಿಕೊಟ್ಟನು ವೈದ್ಯ | ಸತ್ಪಾತ್ರರಿಗೆ
ಇದು ಸಾಧ್ಯ | ದೊರಕಿತು ಮನಸಿನ ಭಾಗ್ಯ |
ಗುರು ತೊಲಸಿರಾಮರ ಚೋದ್ಯ ||2||
34
ಕಿಂಚಿತು ಪುಣ್ಯ
ಇಡಿ ಇಡಿ ಗುರುಪಾದವ್ವ ತಂಗೀ | ಹುಡುಗತನದ
ಬುದ್ಧಿ ಸಾಕವ್ವ | ಬಿಡದೆ ಪುರಾತ್ರಗಂಜಿ ನಡೆಯವ್ವ
ಮುಕ್ತಿ ಪಡೆದು ಪಾವನಳಾಗಬೇಕವ್ವ ||ಪ||
ಕೆಟ್ಟ ಮಾತುಗಳಿಂದೇನವ್ವ ನಿಜ ನಿಷ್ಠವಂತರ
ಸಂಗ ಕಲಿಯವ್ವ | ಆಡಿಕೊಂಡದು ಎಲ್ಲಾ ಬರಿದೆವ್ವ ಅವ್ವ ನೀ
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 347
ತಿಳಿದುಕೊಂಡರೆ ನಿನ್ನಲ್ಲಿಹುದವ್ವ ||1||
ಏನುಕಿಂಚಿತು ಪುಣ್ಯ ನಿನ್ನದಪ್ಪುದು
ಇಂತ ಮಾನವ ಜನ್ಮಕೆ ಬಂದೆವ್ವ | ಆಶೆ ಪ್ರಾಶನಲ್ಲ
ಅಳಿಯವ್ವ | ಕೈ ಹೊಡೆದು ನಗೆ ನಕ್ಕರೆ
ನಿನ್ನಲ್ಲಿಹುದವ್ವ ||2||
ಬಿಡದೆ ಭಜಿಸು ಮಡಿವಾಳವ್ವ | ಮುಕ್ತಿ
ಪಡೆದು ಪಾವನಳಾಗಬೇಕವ್ವ ||ಇಡಿ ಇಡಿ ||
35
ಬಂದವರಿಗನ್ನಾವ ನೀಡು
ನೀತೀಲಿ ನಡೆಯಬೇಕಣ್ಣ | ನೀನು ಅನೀತೀಲಿ
ನಡೆದರೆ ಮೆಚ್ಚ ಮುಕ್ಕಣ್ಣ ||ಪ||
ವೇದಾಂತ ಶಾಸ್ತ್ರಂಗಳೋದಿ ಇದರ ಬೇಧವಾ
ತಿಳಿಯದೆ ಅರ್ಥ ಕೆಟ್ಟೋಗಿ | ತಕ್ಕ ಬೇರವರನ್ನ
ಕೂಡಿ | ಅವಳಿಗೆ ಅಕ್ಕ ತಮ್ಮಿಂದರೊಳು
ಸವಿ ಮಾತನಾಡಿ | ಅಕ್ಕರೆಯಿಂದೊಡಗೂಡಿ ಇವರ
ಪಕ್ಕಕ್ಕೆ ಬಿದ್ದು ನೀ ಕೆಟ್ಟೆಲ್ಲೊ ಕೂಡಿ ||1||
ತಂದೆ ತಾಯ್ಗಳ ಪೂಜೆ ಮಾಡು | ಅವರು
ನೊಂದುಕೊಂಡರೆ ನಿನಗೆ ಬಂದೀತು ಕೇಡು |
ಬಂದವರಿಗನ್ನಾವ ನೀಡು | ನೀನು ನಂದೀಶನ
ವರವನ್ನ ಬೇಡು ||2||
36
ಅಂಗದೊಳಗಣ ಅರಿವು
ಆಗಮದೊಳು ತತ್ವಾಗಮ ತಿಳಿದರೆ | ಯೋಗವ
ಸಾಧನೆ ಇನ್ಯಾಕೆ | ಶ್ರೀ ಗುರುವಿನ ನಿಜ
ಸೇವಕರಿಗೆ ಭವ ರೋಗದ ಭಯಗಳಿನ್ಯಾಕೆ ||ಪ||
ಆಸೆಯು ಮೂರು ಅಗ್ಗಾದ ಮೇಲೆ ಜಗದಾಸೆಯ
ಬಯಸುವುದಿನ್ಯಾಕೆ | ಈಶನ ತನ್ನೊಳಗೆ ವಾಸವಾಗಿರಲು
ಕೈಲಾಸವ ಬಯಸುವುದಿನ್ಯಾಕೆ ||1||
ಅಂಗದೊಳಗಣ ಅರಿವು ತಿಳಿದರೆ | ಅಂಗನೆಯರ
340 / ತತ್ವಪದ ಸಂಪುಟ – 1
ಸಂಗ ಇನ್ಯಾಕೆ | ಮಂಗಳಾತ್ಮ ಗುರು ಚಿದಾನಂದನ
ಸಂಗಡ ಬಯಸುವುದಿನ್ಯಾಕೆ ||2||
37
ನಿಜವೆಂದು ತಿಳಿದು ಪೂಜಿಸು
ನಿಜವೆಂದು ತಿಳಿದು ಪೂಜಿಸು | ಗುರು ಚರಣಾ
ತ್ಯಜಿಸು ನಿರ್ಮಾಯ ಪ್ರಪಂಚಾದ ಸ್ಮರಣಾ ||ಪ||
ಎಂದಿಗೂ ಮರಣ ತಪ್ಪದು ಕೇಳು ಮರಳೇ
ಚಂದ್ರಶೇಖರನ ಭಜಿಸು ಹಗಲಿರುಳೇ |
ಸತ್ತು ಹುಟ್ಟುವ ದೇಹ ಸಾಧನೆ ಮಾಡು |
ನಿತ್ಯ ನಿರ್ಮಲವಾಗಿ ಧ್ಯಾನಿಸು ಹಗಲಿರುಳೇ ||1||
ಸಾಧಿಸು ಸದಾಕಾಲ ಬೋಧದಮೃತವನ್ನು
ಪರರಾಮರೊಟ್ಟೆಯ ಹೊರೆಯುವುದರಿಯೇ | ನಾನು
ನಾನೆಂಬೆನು ನಾನೇ ನನ್ನರಿಯೇ ಪರಮಾತ್ಮ
ತೊಲಗುವ ಪರಿಯ ನಾನರಿಯೇ ||2||
ಅನುಕೂಲ ದಿನವು ಎಂಬುದು ದೊಡ್ಡ ಶರಧಿ |
ಅನುಕಾಲ ನಿನೆ ಮಾಡಿ ದಾಂಟಿ ನೀ ಬರದೇ ||3||
38
ತತ್ವವನುಭವ ಬಾಯಿ ಮಾತಲ್ಲ
ತನ್ನ ತಾನರಿದೊಡೆ ಮುಕ್ತ | ತಾನೆ ತನ್ನ ತಾನರಿಯದೆ
ಹೇಗೆ ವಿರಕ್ತ ||ಪ||
ಮೂರು ಮಲಂಗಳ ತೊಳೆದು | ಮುವತ್ತಾರು ತತ್ವಂಗಳ
ಮರ್ಮಾವ ತಿಳಿದು | ಮೂರೈದು ಮದಗಳ
ತುಳಿದು ಪೂರ್ಣ ತಾರಕ ಬ್ರಹ್ಮನ ಪ್ರಭೆಯೊಳು ಸುಳಿದು ||1||
ಒಂದನ್ನು ಎರಡೊಂದು ಮಾಡಿ ಅಲ್ಲೆ ಒಂದನ್ನು
ಒಂಭತ್ತು ತೆರದಿಂದ ನೋಡಿ | ಮುಂದಾರು ಮೂರೊಂದು
ಗೂಡಿ| ಸಂಧು ನಿಂದೊಂದರಿವ ತಾನಿಲ್ಲದೆ ನೋಡಿ ||2||
ಆರು ಬಾಗಿಲ ಮುಚ್ಚಿ ನಡೆದು ಮುಂದೆ ಮೂರು
ನದಿಯ ದಾಟಿ ದಾರಿಯ ಹಿಡಿದು | ಬೋರೆಂಬೋ
ಸರ್ಪನ ತಡೆದು | ಮೇಲಕ್ಕೇರಿ ಸುಸುಮ್ನಯ ಸುಧೆಯನ್ನೆ ಕುಡಿದು ||3||
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 349
ಕರದಿಷ್ಟವಾಗುವುದೆಂದರಿತು | ಅದು ಶರೀರದೊಳಿರುವ
ಸ್ಥಾನದ ಹೊಕ್ಕಿ ಮರೆದು | ಉರಿವ ಕರ್ಪೂರದಂತೆ
ಬೆರೆದು ತಾನು ಬೆರೆದೇಕವಾದೆನೆಂಬರಿವನ್ನ ಮರೆತು ||4||
ಬರಿಯ ಶಾಸ್ತ್ರಂಗಳಿಂದಿಲ್ಲ | ಪೂರ್ಣ ಪರ ತತ್ವವನುಭವ
ಬಾಯಿ ಮಾತಲ್ಲ | ಗುರು ಪುತ್ರರಿಗೆ ದೂರವಿಲ್ಲ
ಇದರಿರವನ್ನು ಗುರುಸಿದ್ದನೋರ್ವನೆ ಬಲ್ಲ ||5||
39
ಶಂಕರಿಯೇ
ಹರಿ ದಾಸರ ಕಂಡು ನಿಂದಿನಿದಾತನು ಮರೆಮಾಡು
ಶಂಕರಿಯೇ | ನಿನ್ನ ವರವುಳ್ಳ ಪಾದಕ್ಕೆ ಕವಿ ಪಾಶ
ಬೀರುವೇ ಹರಗುಟ್ಟು ಉರುಕಾತಿಯೇ ||ಪ||
ಧರಣಿಯೊಳಗೆ ದೊಡ್ಡ ಪಟ್ಟಣ ಗ್ರಾಮದ ದೊರೆತಾನ ನಿನ್ನದಮ್ಮ |
ಮಾರಮ್ಮ ದೊರೆತಾನ ನಿನ್ನದಮ್ಮ ಬರೆದ ಲಿಖಿತವನ್ನು ಅತ್ತಿಸಿದಾತನ ಕೊರೆದು
ಬೀಸಾಡಿರಮ್ಮ ||1||
ಉತ್ತಾರ ದಿಕ್ಕಿಗೆ ಹೊತ್ತಿ ನೋಡವಳೆ ಸತ್ತೀಗೆ ನೆರಳವಳೆ | ಮಾರಮ್ಮ ಸತ್ತೀಗೆ ನೆರಳವಳೆ ಮುತ್ತೀನ ಮೂಗುತಿ ದುತ್ತಾಗಿ ಸೀರೆವಾ ಕತ್ತಿಯ ಕೈಯವಳೆ ||2||
ಗುಡುವಿನ ರೋಗಕ್ಕೆ ಕಿಡುಗಣ್ಣಿ ನೀನೆಂದು ಒಡಕೇಡು ಘನ ತಲೆಯ |
ಬಿಡದೆ ಖಡ್ಗವನ್ನೆತ್ತಿ ಕಡಿಯದಿರ್ದೊಡೆ ಜಗದೊಡತಿ ನಿನ್ನಾಣೆಯಮ್ಮ ||3||
ಕರುಣೀಸು ಸರ್ಪಾದ್ರಿ ಗುರುಭಕ್ತಿಯೋಗಿಯು | ಬರೆದÀವನೆಸರ
ಮಾರಮ್ಮಾ | ಬರೆದವ ನೆಸರರಿಯ ಕರೆದು ಕಾಲುಲಿಂಗ ನಡುನೆತ್ತಿ ನಡು
ಕೆರಿ ಇಡಿ ಗುರಿ ಒಡೆ ಮಾರಿಯ ||4||
40
ಇನ್ಯಾಕೋ ಯಮನ ಬಾಧೆಗಳೋ
ಇನ್ಯಾಕೋ ಯಮನ ಬಾಧೆಗಳೋ ಬಾಧೆಗಳೋ
ಎನ್ನ ಜಿಹ್ವೆಯೊಳಗೆ ಹರಿಧ್ಯಾನವಂದಿರಲು ||ಪ||
ಪತಿತ ಪಾವನನೆಂಬ ನಾಮ ಹರಿನಾಮ |
ಸತತವೂ ಯತಿಗಳು ಸ್ತುತಿಸುವ ನಾಮ | ಚತಿತ
ವಂದಿದ್ದರೆ ನಾನು | ಹರಿನಾಮ | ಸದ್ಗತಿಯ
350 / ತತ್ವಪದ ಸಂಪುಟ – 1
ಪಾಲಿಸುವಂತ ಅತಿಶಯ ನಾಮ ||1||
ಇದಕ್ಕೆ ಪ್ರಹ್ಲಾದನು ಸಾಕ್ಷಿ ಅದು ಸಾಕ್ಷಿ |
ಕನ್ನೆ ಶಿರೋಮಣಿ ದ್ರೌಪತಿ ಸಾಕ್ಷಿ ಚಿನ್ನದೊಂದ |
ಜಮೀಶ ಸಾಕ್ಷಿ ಅವ ಸಾಕ್ಷಿ | ನಮ್ಮ ಪುಣ್ಯ ಲೋಕವನಾಳುವ
ಧ್ರುವನೊಬ್ಬ ಸಾಕ್ಷಿ ಅವಸಾಕ್ಷಿ ||2||
ಹದಿನಾಲ್ಕು ಲೋಕವನಾಳ್ವ | ನಮ್ಮ ಮದನ ಜನಕನಾಗಿ
ಮುದದಿಂದ ಬಾಳ್ವೆ | ಪದುಭನಾಭನಾಗಿ ನಿಲ್ವ ಅವ ನಿಲ್ವ |
ನಮ್ಮ ಗುರುವಾದ ಪುರಂದರ ವಿಠಲನೇ ಕಾಯ್ವ ಅವಕಾಯ್ವ ||3||
41
ಗುಡಿ ಗುಡಿಯನ್ನು ಸೇದಿ ನೋಡಿ
ಗುಡಿ ಗುಡಿಯನ್ನು ಸೇದಿ ನೋಡಿ | ನಿಮ್ಮ ಒಡಲೊಳಗಿರುವ
ಒಳ ರೋಗಗಳನ್ನೀಡಾಡಿ ||ಪ||
ಬುರುಡೆ ಎಂಬುವುದು ಈ ಶರೀರ | ಕಾದಿರುವ ಸುಕೃತವೆಂಬ
ಕೊಳವೆ ಆಕಾರ | ಗುರು ಶೃತಿ ಎಂಬುವ ನೀರಾ | ಅದರಳತೆಯಿಂದಲೇ
ತುಂಬಿತೆಗೆ ಮುಜುಗಾರ ||1||
ನಿನ್ನ ದಿನ ಪಾತಕ ಎಂಬ ಭಂಗಿಯ ಕೊಟ್ಟ | ಅದನ್ನರಿತು
ಚಿಲ್ಮಿಯೊಳಚ್ಚಿ | ಸದಾ ಶಿವನ ಉರಿತೆಂಬ ಕೆಂಡವ ತಂದಚ್ಚಿ ||2||
ಹರನೆಂಬುವ ಅಮಲು ತೋರುವ | ಗುರು ಬುದ್ದಿಯನ್ನು
ನೆನಸುವುದು | ಸಚ್ಚಿದಾನಂದನೆಂತೆಂಬೋ ಪದವು ಕಾಂಬುವುದು ||3||
42
ಯಾತ್ರೆ ಮಾಡಿ ಬಂದೆ
ಶ್ರೀ ಗಿರಿಯ ಸುಕ್ಷೇತ್ರಕ್ಕಿಂದು | ಹೋಗಿ ಯಾತ್ರೆ
ಮಾಡಿ ಬಂದೆ | ಶ್ರೀ ಗಿರಿಯ ಶರೀರದೊಳ
ಗುಂಟು ಓಂ ಶ್ರೀ ಗುರುಸಿದ್ದಾ | ಯೋಗಿ ಜನರಿಗೆ
ವರ್ಮ ಬೇರುಂಟು ||ಪ||
ಆರು ಬೆಟ್ಟವಾ ದಾಂಟಿ ನಡೆವೆ ಮೂರುಕೊಳದ
ಮೂಲಕ್ಕಿಳಿದೆ | ಏರಿ ನೋಡದ ಕೈಲಾಸದ್ವಾರವಾ |
ಓಂ ಶ್ರೀ ಗುರು ಸಿದ್ದಾ ಸಾರಿ ಬರಗಾಲ |
ಗಡಿಯ ಕಂಡೇನೋ |
ಏಳು ಸುತ್ತಿನ ಕೋಟೆಯೊಳಗೆ | ನೀಲ
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 351
ಮುಪ್ಪರಿಕೆಗಳ ನಡುವೆ | ತಾಳೆ ಮದ್ದಾಳೆ ಭೇರಿ
ಗಂಟೆಗಳೂ | ಓಂ ಶ್ರೀ ಗುರು ಸಿದ್ದ ವಾಳ್ಯ ವಾಳ್ಯಕೆ
ತಾವೇ ನುಡಿದಾವು |
ಬರುವ ಕೋಣಗಳೆಂಟಾ ಬಡಿದೆ | ಗಿರಿಯ
ಹುಲಿಗಳಾರ ತಡೆದೆ | ಮೊರೆವ ಸರ್ಪನ ಹೆಡೆಯ
ಮೆಟ್ಟಿದೆನೋ | ಓಂ ಶ್ರೀ ಗುರು ಸಿದ್ದಾ ಚರಿಪ
ಕಪಿಯನ್ನಿಡಿದು ಕಟ್ಟಿದೆನೋ |
ಒಂಭತ್ತು ಬಾಗಿಲದರೊಳ್ ಇಂಬವಾದ
ಬೀದಿಗಳ್ ನಾಲ್ಕು | ತುಂಬಿ ಸೂಸುವ ಕೊಳಗಳೇಳುಂಟು
ಓಂ ಶ್ರೀ ಗುರು ಸಿದ್ದಾ ಸ್ತಂಭ ಎರಡು
ಶಿಶಿರ ಒಂದುಂಟು|
ಪಾತಾಳ ಗಂಗೆಯೊಳ್ ಮಿಂದು ಜ್ಯೋತಿ
ಶಿಖರೇಶ್ವರನಿಗೆರಗಿ | ಜ್ಯೋತಿ ಲಿಂಗಕ್ಕೆ ದೃಷ್ಟಿ ಇಟ್ಟೆನೋ
ಓಂ ಶ್ರೀ ಗುರು ಸಿದ್ದಾ ಜ್ಯೋತಿ ಲಿಂಗವು
ಕಾಣಿಸಿತು ||
ಇಂದ್ರ ದಿಕ್ಕೀನೊಳ್ ಎದ್ದ ಸೂರ್ಯ ಚಂದ್ರಗುಪ್ತ
ಪುರದೊಳ್ ಮುಳುಗಿ ಅಂದ ಚೆಂದಾದ ಬೆಳಕೇ
ಕಾಂಬುವುದು | ಓಂ ಶ್ರೀ ಗುರು ಸಿದ್ದಾ ನಿಂದು
ನೋಡಲು ಬಯಲಿಗೆ ಬಯಲಾಯಿತು |
ಸಪ್ತ ನದಿಯ ಸಂಗಮ ದಾಂಟಿ | ಗುಪ್ತಕದಳಿ
ಮನದೊಳ್ ಸುಳಿದು | ಅಲ್ಲಿರ್ಪ ಗುಹೆ
ಯೊಳಗೊಬ್ಬಾಳೇ ಒಕ್ಕೇನೋ | ಓಂ ಶ್ರೀ ಗುರು
ಸಿದ್ದಾ ಸಪ್ತ ವರ್ಣದ ಲಿಂಗಾವ ಕಂಡೇನೊ |
ಅಂತಪ್ಪ ಶ್ರೀ ಗುರುಸಿದ್ದಾ ಅಂತರಂಗದ
ಗುಡಿಯ ಕಂಡೇನೊ ||
ಗುಡಿಯ ಶಿಖರಕಗ್ನಿ ಮುಖದೊಳ್ ಅಲ್ಲಿರುವ
ಅರಕೇಶ್ವರನ ಹಿಂದೆ ಸುರಿಯಧಮೃತ ಪಂಚಧಾರೆಗಳೋ
ಓಂ ಶ್ರೀ ಗುರು ಸಿದ್ದಾ ಅರಿತು ಸೇವಿಸು
ಮರಣ ಇಲ್ಲಿಂದ ||
ಶ್ರೀ ಗಿರಿಯ ಸುಕ್ಷೇತ್ರಕ್ಕಿಂದು | ಹೋಗಿ
ಯಾತ್ರೆ ಮಾಡಿ ಬಂದೆ ||
352 / ತತ್ವಪದ ಸಂಪುಟ – 1
43
ನಗು ಬಂದಿತಿಲ್ಲಿ
ಜಾಜಿ ಮಲ್ಲಿಗೆ ಸಂಪಿಗೆ ಕುಯ್ಯೂತಿದ್ದೆನವ್ವ
ನಾ ಕುಯ್ಯುತಿದ್ದೇನವ್ವ | ಅವ್ವಾ ಎನಗೊಂದು ನಗು
ಬಂದಿತಿಲ್ಲಿ ||ಪ||
ಅಂಡಂಡದೊಳಗಗ್ನಿ ರೂಪಾಯ್ತೆ | ಭೂ ಮಂಡಲದೊಳಗೆ
ಲೇಪ್ಸಿಕೊಂಡಾಯ್ತೆ | ಕಂಡರಂಜಿಕೆ ಬರುತಾಯ್ತೆ|
ಈ ಎಂಡಾರು ಮಕ್ಕಳು | ಹಗಲು ಸುತ್ತಾಯ್ತೆ |
|| ಅವ್ವಾ ಎನದೊಂದು ||
ಬಟ್ಟ ಬಯಲೊಳು ಸುತ್ತುತೈತೆ | ಸುಟ್ಟ
ಹಣದ ಭಸ್ಮಂಗಳ ಮೈಯೆಲ್ಲ ಧರಿಸಿಕೊಂಡೈತೇ |
ಹುಟ್ಟು ಮಾರ್ಗದಲಿ ನಿಂತೈತೆ | ಅದ ಕೆಟ್ಟಗಣ್ಣಲ್ಲಿ
ನೋಡಲಳವಲ್ಲ ಐತೆ || ಅವ್ವಾ ಎನಗೊಂದು ||
ಯಂತ್ರ ಮಂತ್ರಕೆ ಸಿಕ್ಕುವುದಲ್ಲ | ಈ ಯಂತ್ರ ಮೊದಲಿಲ್ಲ |
ಇದರರ್ಥ ಪರರ್ಥ ನಮ್ಮ ಓಂಕಾರ ಗುರುವೇ
ತಾಬಲ್ಲ || ಅವ್ವಾ ಎನಗೊಂದು ನಗು ಬಂದಿತಿಲ್ಲಿ ||
44
ಭವದಿಂದ ಪೊರೆವ ತಂದೆ
ಸಾಕು ಮಾಡು ಜನ್ಮವಾ ಸಾಕು ಮಾಡು
ಸಾಕು ಮಾಡಯ್ಯ ಜನ್ಮ | ಸ್ವಾಮಿ ನಿಮ್ಮ
ಚರಣ ಕಮಲ ಬೇಕು ಎಂದು ನಂಬಿ ಇರುವೆ
ಯಾಕೆ ಗುರುವೆ ಮರೆತು ಇರುವೆ ||ಪ||
ನಾನು ನೀನು ಎಂಬ ಕೆಟ್ಟ | ಹೀನ ತರವ
ಆಂಕಾರದಲ್ಲಿ ಜ್ಞಾನ ಕೆಟ್ಟು ತಿರುಗುವಂತ ಶ್ವಾನ
ತರದ ತನುವನಿದನು ||1||
ಹಸಿವು ತೃಷೆಗಳೆಂಬ ದೊಡ್ಡ | ವ್ಯಸನದಿಂದ
ಬೆಂದು ಬೆಂದು ಕುಸಿದು ಕೊನೆಗೆ ನಸಿದು ಪೋಪ
ತೃಷ ಸಮಾನ ಕಾಯವಿದನು ||2||
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 353
ಜನನ ಮರಣ ಎಂಬುವಂತ | ರೂಢಿಯೊಳಗೆ
ತಿರುಗಿ-ತಿರುಗಿ | ಕನಸಿನಂತೆ ಕೆಟ್ಟು ಪೋಪ | ಮನದ
ರಾಜ್ಯ ಇದರ ಆಸೆ ||3||
ಕಾಗಿ ನೆಲೆಯಾದೀಶ ನಿನ್ನ ಕಾಣದಂಥ ಕಣ್ಣು ಮನವು |
ಗೂಡಿನಂತೆ ಇರಲು ಬೇಕೇ ಬೇಗ ಸಲಹು ಕನಕನೊಡೆಯ ||4||
ವಿಷಂಗಳೊಳಗೆ ಸಿಲುಕಿ ಮುನ್ನ | ದೋಷಕಾರಿಯಾದೆನಯ್ಯ |
ವಾಸುದೇವ ನಿಮ್ಮ ದಯದಿ ಭವದಿಂದ ಪೊರೆವ ತಂದೆ ||5||
45
ವಿಭೂತಿ
ಹರ-ಹರ ಎನುತಲಿ ವಿಭೂತಿ ಧರಿಸಲು
ಭವಗಳ ಅರಿಯುವ ವಿಭೂತಿ | ಭವನದ
ಜನರೆಲ್ಲ ಭಕ್ತೀಲಿ ಧರಿಸಲು ಶಿವ-ಪೊರೆ ಕೈವಲ್ಯ
ವಿಭೂತಿ ||ಪ||
ಭೂತ ಪ್ರೇತ ಪಿಶಾಚಿ ನವಗ್ರಹಗಳ್ ಭೀತಿಯ
ಬಿಡಿಸುವ ವಿಭೂತಿ | ಶೀತವು ಚಳಿ ಸಂಖ್ಯೆ ಜರ
ಜಾಢ್ಯಗಳ ಭೀತಿಯ ಬಿಡಿಸುವ ವಿಭೂತಿ ||1||
ಸಾಸಿರ ಮುನಿಗಳು ಹರಿಹರ ಇಂದ್ರರು
ಕುಶಲದಿ ಧರಿಸುವಾ ವಿಭೂತಿ | ವಾಸು ದೇವಕರೆ
ಮುರಹರಿ ಬಸವಣ್ಣ ವಿಷಧರ ಇಡುವಂಥ
ವಿಭೂತಿ ||2||
46
ಐದು ಅಂಗವಾಗಿದೆ
ಶೃಂಗಾರದರಮನೆಯ ನೋಡಿ | ಐದು ಅಂಗವಾಗಿದೆ
ಆತ್ಮ ಲಿಂಗಾನ ಮಾಡಿ ||ಪ||
ಅಂಗಾಲು ಅಧಿಯನ್ನೆ ತೋಡಿ | ಇದಕ್ಕೆ
ಮುಂಗಾಲು ತೊಡೆ ಕೀಲು ಮಂಡೀಗೆ ಕೂಡಿ
ಅಂಗ ಕುಂಡಿಯ ಸಿಂಬಿಯ ಕೂಡಿ | ಮೇಲಿನ
ಅಂಗವೆಂಬ ದೊಳ್ಳು ಮಾಲವನ್ನೇ ಮಾಡಿ ||1||
ಕೂಡಿದೇಗಳು ವಸ್ತು ಬುಡಕ್ಕೆ ಬೆನ್ನು ನಾಡಿಯ
354 / ತತ್ವಪದ ಸಂಪುಟ – 1
ನರಭೀಮು ತೊಗಲೀನ ಹೊದಿಕೆ ಬಾಗಿಲುಗಳು
ಒಂಭತ್ತು ಮಾಡಿ | ಇದಕ್ಕೆ ಬೀಗವಿಲ್ಲದ ವಾಯುಯಂತ್ರ
ವನ್ನೆ ಮಾಡಿ | ತೂರುವುದು ಎಪ್ಪತ್ತೇಳು ನಾಡಿ |
ಇದಕ್ಕೆ ಬಾಗುವುದು ಅರವತ್ತೆಂಟು ನಾಡಿ | ರೋಮ
ಕೋಪಗಳೆಂಬ ಕೋಟಿ | ಅಲ್ಲಿ ನೇಮವರ್ಣ ಸಿಂಗವನ್ನೆ
ನಂಬಿ ||2||
ಮೇಲೆ ಶಿರಕಳಸವನ್ನು ಮಡಗಿ | ಅಲ್ಲಿ ನೀಲಿ
ಹರಳೆರಡು ತುಳುಕುತ್ತಾ ಅಡಗಿ ಸುಲಾಡುವುವು ಮೂರು
ಕಿಟಕಿ | ಶಬ್ದ ಕೇಳುವುದು ಎರಡು ರಂಧ್ರಗಳ ಮಡಗಿ ||3||
ಈ ಮನೆಯ ಯಜಮಾನ ಕಾಯಾ | ಇವನ
ನೇಮಕ್ಕತೀತನು ಬಹಳ ಎಳಸಿನ ಪ್ರಾಯ |
ಇವ ಶ್ಯಾಮ ಸುಂದರನಿಗೆ ಬಹುಪ್ರಿಯ ||4||
47
ಪಾಪಗಳ ಪರಿಹರಿಸು
ಏನು ಬರೆದೆಯೋ ಬ್ರಹ್ಮನೇ | ಎನ್ನಿರಿಸಲಾರದೆ
ಸುಮ್ಮನೇ ಮಾನವನು ಹೊಗಲಾಡಿ ಜನರೊಳು
ಹೀನನಾಗುವ ಹಾಗೆ ಹಣೆಯೊಳಗೆ ||ಪ||
ಹಿಂದೆ ಮಾಡಿದ ಕರ್ಮವು ಇದಕ್ಕೊಂದು
ಪಾಯದ ಮರ್ಮವು | ತಂದೆ ನಿನ್ನನು ಇಂದು
ಬೇಡುವ | ಮಂದರೋದ್ದರನೆಂದು ಬಂದೆನು ||1||
ಪಾಪಿಗಳ ಹರ ಇವನಾರೆಲ್ಲೋ ಅಯ್ಯ ಭೂಪದಶವ
ತಾರನೇ | ಕೋಪ ಮಾಡದೆ ದಾನ ಮಾಡಿದ
ಪಾಪಗಳ ಪರಿಹರಿಸು ಬೇಗನೆ ||2||
ಗುರುವು ತೊಲಸೀ ರಾಮನೇ | ಅಯ್ಯ ಪರಮ
ಪವಿತ್ರಾ ಪ್ರೇಮನೆ | ಧರೆಯೊಳಧಿಕ ಚನ್ನಪುರಿಯ
ದೊರೆಯ ಲಕ್ಷ್ಮೀ ನಾರಾಯಣ ||3||
48
ಗುರು ದೊರಕೀದ
ದೊರಕೀದ ಗುರು ದೊರಕೀದ | ಮಾರಿ
ಪರಮನಂದದಿ ಬೋಧೆ ಅರಿವಿನೊಳಗೆ ಬಂದು ||ಪ||
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 355
ಕರಪತ್ರ ಪಿಡಿದು ಈ ನರರ ಶರೀರದೊಳು
ತನ್ನರುವು ತನಗೆ ತೋಗಿ ಪರಮದಂಬಕದಿಂದ ||1||
ಇಂದಿನ ದಿನವು ಸ್ಥಾವೊಂದುಳಿಯದೇ ಬಿಂದು
ವಸ್ತುವಿನೊಳಾನಂದದಿಂದಲೇ ಬಿಂದು ||2||
ಶಿಸು ನಾಳೀಸ್ಯ ಪ್ರಕಾಶ ಗೋವಿಂದನ|
ಶರಣದೊಳಗೆ ಬಂದು ||3||
49
ಕಲ್ಯಾಣ ಪುರದಲಿ ಹಗರಣವಾಗಿದೆ
ಬನ್ನೀರಿ ಗಣವರರೇ…. ಸನ್ನುತ ಗುಣವಿತರೇ |
ಚನ್ನ ಶೈವ ಬಸವೇಶನ ಪರತರ ಉನ್ನತ
ಮದುವೆಯ ಸಂಭ್ರಮಬಿಂದು ||ಪ||
ಪಂಚಭಕ್ಷ ಪರಮಾನ್ನ ಭೋಜನೆ ವಂಚನೆ
ಇಲ್ಲದೆ ಸವಿಯುವ ಭರದಿ| ಪಂಚಮುಖನು ಅವತಾರೆ
ಬಸವಣ್ಣನ ಮದುವೆಯ ಸಂಭ್ರಮವಿಂದು ||1||
ಹರಳಯ್ಯ ಮದುವಯ್ಯನವರಿಗೊಂದೆಳೆ ಊಟ
ಶಂಬೋ ಮಹಾದೇವಾ | ಹರ-ಹರ ಶಂಬೋ
ಮಹಾದೇವಾ | ದುರುಳ ಬಿಜ್ಜಳನಿಗೆ ಕಡೆಗೊಂಡಿತೀದಿನ
ಶಂಭೋ-ಮಹಾದೇವಾ ಹರ-ಹರ ಶಂಭೋ
ಮಹಾದೇವಾ ||2||
ಕಲ್ಯಾಣ ಪುರದಲಿ ಹಗರಣವಾಗಿದೆ ಶಂಭೊ
ಮಹಾದೇವ | ಹರ ಹರ ಶಂಭೋ ಮಹಾದೇವ |
ಕಲ್ಯಾಣದಾಟವು ಕಡೆಗೊಂಡಿತೀದಿನ ಶಂಬೊ
ಮಹಾದೇವ ಹರ-ಹರ ಶಂಬೋ ಮಹಾದೇವ ||3||
ಅಲ್ಲಿದ್ದ ಶರಣರು ಇಲ್ಲಿಯೂ ಇರುವರು
ಶಂಭೊ ಮಹಾದೇವ | ಹರ-ಹರ ಶಂಬೋ
ಮಹಾದೇವ ಇಲ್ಲಿದ್ದ ಶರಣರು ಅಲ್ಲಿಯೂ ಇರುವರು
ಶಂಬೋ ಮಹಾದೇವ | ಹರ-ಹರ ಶಂಬೋ
ಮಹಾದೇವಾ ||4||
ಕೂಡಲ ಸಂಗಮನಲ್ಲಿಗೆ ಬಸವನು ಶಂಬೊ
ಮಹಾದೇವಾ ಹರ-ಹರ ಶಂಬೋ ಮಹಾದೇವಾ |
356 / ತತ್ವಪದ ಸಂಪುಟ – 1
ಕೂಡಿದೆ ಹರುಷದಿ ಪೋಗುವುದೆಲ್ಲಿಗೆ ಶಂಬೋ
ಮಹಾದೇವಾ ಹರ-ಹರ ಶಂಬೋ ಮಹಾದೇವ
ಶರಣೆ ನೀಲಮ್ಮನು ಲಿಂಗದೊಳೈಕ್ಯವು ಶಂಬೋ
ಮಹಾದೇವಾ ಹರ-ಹರ ಶಂಬೋ ಮಹಾದೇವಾ ||5||
50
ತೇರು ಸಾಗಿ
ತೇರು ಸಾಗಿತಮ್ಮ ನೋಡಿರೆ | ಈ ದೇಹವೆಂಬೋ
ತೇರು ಸಾಗಿತಮ್ಮ ನೋಡಿರಿ | ತೇರು ಸಾಗಿತಮ್ಮ ನೋಡಿ |
ಸಾರ ಮುಕ್ತಿ ಸತಿಯರೆಲ್ಲಾ ಪಾರಮಾರ್ಥ ತತ್ವದೊಳು ವಿಚಾರ
ವೆಂಬೋ ಆದಿಯೊಳಗೆ ||ಪ||
ಕಾಲೇ ಎರಡು ಗಾಲಿಯಾಗಿವೆ | ಜಗಂಗಳವಕ್ಕ
ಕೀಲಿನಚ್ಚಿನಂತೆ ತೋರಿದೆ | ಈ ತೊಡೆಗಳೆರಡು
ಮೇಲು ಮುಖದ ಕಂಭವಾಗಿದೆ |
ಆಧಾರ ಮುಖ್ಯ ಏಳು ಚಕ್ರವೇ ಸವತನೊಳೇಳು
ಏಳು ನೆಲೆಗಳಾಗಲದರ | ಮೇಲೆ ತೋರ್ಪ ಮಸ್ತಕವೆ
ಈಲೋಲ ರತ್ನ ಕಳಸವೆಣಿಸಿ ||1||
ಕರಗಳೆರಡು ಮದನ ತೋಳ್ಗಳೂ | ಮೇಲಿರುವ
ಭುಜದ ಶಿರಗಳೆರಡು ಹೊಳೆವಾ ಧ್ವಜಾಗಳೋ |
ನೇತ್ರಂಗಳೆರಡು ಮೆರೆವಾ ನೀಲ ದರ್ಪಣಂಗಳು
ಉಜ್ವಲಿಸುತಲಿರ್ಪ ಶರೀರ ಕಾಂತಿ ಇದಕ್ಕೆ ಸುತ್ತ
ಇರುವ ಪಟಗಳಾಗಿ ತೋರೆ | ನೆರೆ ಸುಸುಮ್ನನಾಡಿ
ಎಂಬ ಬಿರಿಯ ಬಲದ ಬಿರುಹುನಿಂದ ||2||
ತುನು ಗುಣುಗಳೆಲ್ಲಾ ಪ್ರಜೆಗಳೊ | ಮುಂಬರೆವ
ಬುದ್ದಿ ಮನಗಳೆಂಬೋ ಎರಡು ವಾಳಿಗಳು ||
ವೈಖರಿಯ ನುಡಿಗಾಲೆ ನೀತಿವೆಲ್ಲ ವಾದ್ಯರವಗಳೂ
ಸಂಭ್ರಮದಿ ಬಂಧು | ಮಿಸುಪ ಹೃದಯ
ಕಮಲವೆಂಬ ಕನಕ ಪೀಠಜೆಗ್ರದಲ್ಲಿ | ಚಿನುಮಯಾತ್ಮೆ
ಶ್ರೀ ಗುರುಸಿದ್ದಾ ನೆನುವಿನಿಂದ ಮೂರ್ತಿಗೊಳಲು ||3||
51
ಕಡೆ ಹಾಯಿಸು
ಗುರುರಾಯ | ಸದ್ಗುರುರಾಯ | ತವಚರಣದ
ಕರುಣವಾ ತೋರಯ್ಯ … ||ಪ||
ಮರೆತು ಬಂದೆನು ನರಜನ್ಮಕ್ಕೆ | ಗುರಿಯಾದೆನು
ಜನನ ಮರಣಕ್ಕೆ | ಅರಿಯಿತು ಪೊರೆಭವ ತರುವುದಕೆ …|
ಗುರು ರೇಣುಕಾ ನಿನ್ನ ಮೊರೆ ಹೊಕ್ಕೆ ||1||
ಪಿಡಿದಿಹುದೆನ್ನನು ಭವಶರಧಿ ಕಡೆಗಾಲಿಕೆ
ಬಂದು ನೀ ದೊರೆದೆ | ಬಿಡಿಸುತಾ ಭವವನು
ನೀ ದಯದಿ ಕಡೆ ಹಾಯಿಸು ಕರುಣಾ ಆ ಶರಧಿ ||2||
ಬಲ್ಲಿದನೆಂಬರ ನೋಡಿದೆನು | ಅವರಲ್ಲೆ
ವಿಚಾರವಾ ಮಾಡಿದೆನು | ಸಲ್ಲದವರ ಬಿಟ್ಟೊರಸಿದನು |
ಘನ ನಲ್ಲಾ ನಿನ್ನಯ ಪಾದ ಸೇರಿದೆನು ||3||
ಕ್ಷಿತಿಯೊಳು ರಂಭಾಪುರವಾಸ | ಅಲ್ಲಿ ಯತಿಗಳ
ಕೂಟವೇ… ಕೈಲಾಸ | ಪತಿ ಫೇರ್ ಸಿಂಗೇಶ್ವರ
ಕೊಡು ಲೇಸಾ ನಾಮತಿಯೊಳು ಮಾಡುವೆ
ನವದ್ಯಾಸ ||4||
52
ದೊರೆಗಳ ಭೀತಿಲ್ಲ
ನಾರಾಯಣ ಎನ್ನಿರೊ ನರಹರಿಯ ಪಾರಾಯಣ
ಮಾಡಿರೋ | ನಾರಾಯಣನೆಂದು ಅಜಮೀಳ ಕೈವಲ್ಯ
ಸೇರಿದನೆಂಬೊ ಸುದ್ದಿಯ ಕೇಳರುಹಿರೊ ||ಪ||
ಚೋರರ ಭಯವಿಲ್ಲವೋ ಇದಕ್ಕಿನ್ನು ಯಾರ
ಅಂಜಿಕೆ ಇಲ್ಲವೋ ಪುರವನ್ನಾಳುವ ದೊರೆಗಳ ಭೀತಿಲ್ಲ |
ಮೋಹ ಪಾಪಗಳೆಲ್ಲ ಹಾರಿ ಹೋಗುವುದಯ್ಯ ||1||
ಕಾಶಿಗೆ ಪೋಗಲ್ಯಾಕೆ ಕಾವಿಯ ಹೊತ್ತು
ದೇಶಿದ್ದು ತಿರುಗಲ್ಯಾಕೆ | ವಾಸುದೇವನ ದಿವ್ಯನಾಮಾದ
ನೆನೆದರೆ ಕ್ಲೇಶಗಳೆಲ್ಲವೂ ಲೇಶಮಾತ್ರವೂ ಇಲ್ಲ ||2||
ಸ್ನಾನವ ಮಾಡಲ್ಯಾಕೆ ಮಾನವರಿಗೆ
ಮೌನ ಮುದ್ರೆಗಳ್ಯಾತಕೊ | ರಂಗಶಯನ ಶ್ರೀ
ಪುರಂದರ ವಿಠಲನ ಧ್ಯಾನಕ್ಕೆ ಸರಿಯುಂಟೆ
ಕೇಳಿ ಸಜ್ಜನರೆಲ್ಲ ||3||
53
ಕುಣಿಸುತ್ತಿರುವುದಲ್ಲಣ್ಣ
ಶಿವನಲ್ಲಿ ಶರಣಾಗಿರಣ್ಣ ನಿನ್ನ ಭವದ
ಕೋಟಲೆಯನ್ನು ಪರಿಹರಿಪನಣ್ಣ || ಶಿವನಲ್ಲಿ ||
ಹುಟ್ಟುತ್ತ ಹೊತ್ತು ತರಲಿಲ್ಲಿ ತರಲಿಲ್ಲಿ ಮತೆ ಸತ್ತಾಗಕೊಂಡು
ಹೋಗೊಲ್ಲ | ಎತ್ತಿಂದಲೋ ಬಂದ ಹೆಣ್ಣು
ಮಣ್ಣಿಗಾಗಿ ಹುಚ್ಚಾಗಿ ಒದ್ದಾಡಿ ಸಾಯುವೆಯಲ್ಲೊ ||2||
ಮನವೆಂಬೊ ಮರ್ಕಟವು ನಿನ್ನ ಹಿಡಿದು
ಕುಣಿಸುತ್ತಿರುವುದಲ್ಲಣ್ಣ | ಅದನು ನೆನೆವೆಂಬ ಹಗ್ಗದಲಿ
ಕಟ್ಟಿ ಶಿವನಿಗೊಪ್ಪಿಸಿ ಅನುಪಮಾನಂದಕ್ಕೆ ದೊರೆಯಾಗಿರಣ್ಣ ||3||
54
ಗುರುವೀನ ಅರುವಿನೊಳ್
ಗುರುವೀನ ಅರುವಿನೊಳ್ ಇರಬೇಕು ಪರದೇಶಿಯಾಗಲು
ಗುರುವಿನ ಅರುವಿನೊಳ್ ಇರಬೇಕು ||ಪ||
ತನ್ನನು ತಾನೆ ತಿಳಿದಿರಬೇಕು ಕುನ್ನಿಯ
ಗುಣಗಳ ನೂಕಿರಬೇಕು | ಪನ್ನಂಗಧರ ಪರಮಾತ್ಮನ ಆ
ನಿಜಗಣ್ಣಿನಿಂದ ತಾ ಕಂಡಿರಬೇಕು ||1||
ವೇದಗಳೊಡಲನು ತಿಳಿದಿರಬೇಕು | ಭೇದವನ್ನೆಲ್ಲವ
ಬಿಟ್ಟಿರಬೇಕು | ಸಾಧಿಸಿನಾದ ಬಿಂದು ಕಳೆಯ
ಸಾಮಾಧಿಯೊಳಗೆ ತಾ ಮಲಗಿರಬೇಕು ||2||
ಸತಿ ಸುತರಾಶಿಯ ಬಿಟ್ಟಿರಬೇಕು | ಸ್ಥಿತಿ ಕುಲ
ಭಾಗ್ಯವ ದಾಂಟಿರಬೇಕು | ಮತ ಕುಲ ಸೂತಕವಳಿದಾ
ರೂಢನ ಪತವ ನಂಬಿ ತಾ ಸುಖಿಸಿರಬೇಕು ||3||
ಹರಿಹಜರೀರ್ವರ ಕೂಡಿಸಬೇಕು | ಹರನೊಳು ಮನಗುರಿ
ಇಟ್ಟಿರಬೇಕು | ಉರಿಯುವ ಜ್ಯೋತಿಯ ಬೆಳಕಿನೊಳಗೆ ತಾನೂ
ಬೆರೆದೇಕವಾಗಿ ಮನ ನಿಲ್ಲಿಸಬೇಕು ||4||
ಗಾನ ವಿನೋದವ ಕೇಳಿರಬೇಕು | ಭಾನು
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 359
ಪ್ರಕಾಶನ ನೋಡಿರಬೇಕು | ಜ್ಞಾನಿಯಾದ ಗುರು ರಾಜೇಂದ್ರನ
ಪಾದ ಧ್ಯಾನದೊಳಗೆ ಮನ ನಿಲ್ಲಿಸಬೇಕು ||5||
55
ಮೂರು ಬಾರಿಗೂ ಸಾರಿದೆ
ತತ್ವಚಿಂತೆಯ ಮಾಡು ಮನುಜ ವ್ಯರ್ಥ ಕಾಲವ
ಕಳೆಯದೆ | ವ್ಯರ್ಥಕಾಲವ ಕಳೆಯದೆ ಮೃತ್ಯು ಬರುವುದು
ಮುಂದೆ ಕೇಳಿರಿ ಮೂರು ಬಾರಿಗೂ ಸಾರಿದೆ ||ಪ||
ಮನೆಯು ಹತ್ತಿ ಉರಿಯುವಾಗ ಬಾವಿ ತೆಗೆಯುವ
ನರನ ತೆರದಿ ಕೊನೆಗೆ ಯಮನರು ಬಂದು ಎಳೆವಾಗ
ಕೋರಿದರೆ ಸುಖಬಾರದು ||1||
ನಾನು ನನ್ನದು ಎಂಬ ಉದರಭಿಮಾನವು ನಿನಗ್ಯಾಕೆಲೋ |
ಅಭಿಮಾನವು ನಿನಗ್ಯಾಕೆಲೋ ಸೊಹಂಭಾವಕೆ ಹಾನಿ
ಬರುವುದು ನೀನೆ ನಿನ್ನೊಳು ನೋಡೆಲೊ ||2||
ಮೂರು ಮೂಲೆಯ ಕೂಟದಲ್ಲಿ ಎತ್ತಿ ನಿಲ್ಲಿಸಿ
ಮನವನು || ಚಿತ್ತಸುದ್ದಿಯ ಮಾಡಿ ಗುರುವಿನ
ಒತ್ತಿನೊಳು ಸುಳಿದಾಡೆಲೊ ||3||
ಎಲ್ಲಿ ನೋಡಿದರಲ್ಲಿ ಶಿವನ ಸೊಲ್ಲು ಸುಲ್ಲಿಗು
ಭಜಿಸುತಾ || ಬಲ್ಲ ಹಿರಿಯರ ಕೇಳಿ ಸಂಶಯ ಎಲ್ಲ
ಕಳೆದೃಡ ಮಾಡೆಲೊ ||4||
ಕಾಮ ನಾಟಕೆ ಮನವ ಚಲಿಸದೆ ನೇಮಗಳನ
ಚಲಿಸಲೊ || ಸ್ವಾಮಿ ಶ್ರೀಗುರು ಫೇರ್
ಸಿಂಗೇಶನ ಪಾದ ಕಮಲವ ಭಜಿಸೆಲೊ ||5||
56
ದಾನಿ ನಿನ್ನನು ಬೇಡುವೇ
ಹೇಗೆ ಮಾಡಲು ಬೇಕೂ ವಿಠಲ ತಂದೆ
ಹೀಗೆ ಮಾಡಬೇಕು | ಯಾವಾಗಲೂ ಎನ್ನದುರಿತಗಳ್
ಕಾಣದ ಹಾಗೆ ಮೂಡಬೇಕೈ ||ಪ||
ಹಿಂದಿನ ನರಜನ್ಮವು ನಿಮ್ಮೆಯ ಕೃಪೆಯಿಂದ
ಬಂದಿತಲ್ಲವೇ | ಮುಂದೆನ್ನ ಜನನಿಯ ಗರ್ವದೊಳ್
ಜನಿಸಾದ ಹಾಗೆ ಮಾಡಬೇಕೈ ||1||
360 / ತತ್ವಪದ ಸಂಪುಟ – 1
ದಾನಿ ನಿನ್ನನು ಬೇಡುವೇ ನಿಷ್ಕರ್ಮದ
ಯೋನಿಯೊಳಗೆ ಸಲ್ಲದಾ || ನಾನು ಜನರಲ್ಲಿ ನಾನು
ಕೈ ಇಡದ ಹಾಗೆ ಮಾಡಬೇಕೈ ||2||
ವರದ ಶ್ರೀ ಪುರಂದರ ವಿಠಲ ತಂದೆ
ಮೊರೆಯ ಹೊಕ್ಕಿದೆ ನಾನಿಮ್ಮ | ಮುಂದೆನ್ನ
ಧರೆಯೊಳ್ ಜನಿಸದ ಹಾಗೆ ಮಾಡಬೇಕೈ ||3||
57
ಯಾರಿಂದಲೇನಹುದು
ಯಾರಿದ್ದರೇನಯ್ಯ ಲಿಂಗಾವೇ | ಮತ್ತೆ ಯಾರಿಂದಲೇನಹುದು
ಲಿಂಗಾವೇ || ಮಾರದರನೇ ನಿನ್ನ ಕರುಣೆ ತಪ್ಪಿದ ಮೇಲೆ
ದೂರ ನಾನಾರುವೆ ಲಿಂಗಾವೆ ||ಪ||
ತಂದೆ-ತಾಯಿಯ ನೀನೆ ಲಿಂಗಾವೇ | ಎನ್ನ ಬಂಧು
ಬಳಗವು ನೀನೆ ಲಿಂಗಾವೆ | ಬಂದುತ
ಕಂಟಕ ಪರಿಹಾರ ಮಾಡಯ್ಯ ಶಂಭು ಶಂಕರ
ಸಿದ್ದ ಲಿಂಗಾವೆ ||1||
ಅಡವಿ ಅರಣ್ಯದಲ್ಲಿ ಲಿಂಗಾವೇ ಮೇಲೆ
ಇಡಿಯಾರೆ ಕೊಂಬಿಲ್ಲಿ ಲಿಂಗಾವೆ | ನಡು ನೀರಿನೊಳು
ಹಡಗು ಮುಳುಗುದಾಗೆ ಕಡೆಯ ಸೇರಿಸಯ್ಯ ಲಿಂಗಾವೆ ||2||
ಹಕ್ಕಿ ಹಾರಕು ಮುನ್ನ ಲಿಂಗಾವೆ ನಾಳೆ ಪಕ್ಷಿ
ಕೂಗಾಕು ಮುನ್ನ ಲಿಂಗಾವೆ | ಹತ್ತೆಂಟು ಶರಣರೂ
ಶಿವಪೂಜೆ ಮಾಡುವಾಗ ಅದರೊತ್ತಲಿಂಗಯ್ಯ ಲಿಂಗಾವೆ ||3||
ಮನವೆ ಮಜ್ಜನ ಶಾಲೆ ಲಿಂಗಾವೆ | ಎನ್ನ ತನುವೇ
ದೂಪ ದೀಪ ಲಿಂಗಾವೆ | ಮನಯೊಳಗಿರುವಂತ ಎಳೆಯ
ಹೊಂಬಾಳೆ ತಂದು ನಿನಗೆ ಅರ್ಪಿಸುವ ಲಿಂಗಾವೆ ||4||
58
ಭಕ್ತನಾದೊಡೆ
ಭಕ್ತನಾದೊಡೆ ಭಯಭಕ್ತಿ ತುಂಬಿರಬೇಕು
ಭಕ್ತನಾದೊಡೆ ನಡೆ-ನುಡಿ ಶುದ್ಧವಾಗಿರಬೇಕು ||
ಭಕ್ತನಾದೊಡೆ ವಿವಿಧ ಭಕ್ತಿಯನರಿತಿರಬೇಕು
ಭಕ್ತನಾದೊಡೆ ಸದಾಚಾರ ಸಂಪನ್ನನಾಗಿರಬೇಕು
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 361
ಭಕ್ತನಾದೊಡೆ ಸದ್ವೀಕಾರ ಪರಿಪೂರ್ಣನಾಗಿರಬೇಕು
ಭಕ್ತನಾದೊಡೆ ಗುರುಲಿಂಗ ಜಂಗಮ ಪ್ರೇಮಿಯಾಗಿರಬೇಕು
ಭಕ್ತನಾದೊಡೆ ಶರಣರ ಸ್ನೇಹದಲ್ಲಿರಬೇಕು
ಭಕ್ತನಾದೊಡೆ ಲಿಂಗಪತಿ ಶರಣಸತಿ ತಾನಾಗಬೇಕು
59
ಬಂದೆನಪ್ಪಯ್ಯ
ಇಂತಮಾನ್ಸ್ ಜನ್ಮವೇನ್ ಕೆಡ್ಸಿ ಬಿಡ್ಸಿತೇನಪ್ಪ |
ಇಂತಮಾನ್ಸ್ ಜನ್ಮ ಮುಂದೆ ದೊರಕಿತೇನ್ರೋ ||ಪ||
ಸಾದು ಸಜ್ಜನರ ಸಂಗವಿಲ್ಲದೆ ಕಂತು ಹರನ
ಧ್ಯಾನವಿಲ್ಲದೆ | ಇಂತ ಬ್ರಾಂತಿನ್ ಸಂಸಾರಕ್ಕೆ ಸಿಕ್ಕಿಬಿದ್ದು
ಕೆಡ್ತಿರಪ್ಪಯ್ಯ ||1||
ವರವು ಎಂಭತ್ತು ಕೋಟಿ ಜೀವರಾಶಿಗಳಲ್ಲಿ ತಿರ್ಗಿ
ತಿರ್ಗಿ ಇಂತ ಅರವುಳ್ ನರಜನ್ಮಕ್ಕೆ ನೀವು ಬಂದೆನಪ್ಪಯ್ಯ ||2||
ಕಣ್ಣು ಮೂಗು ಕಾಲು ಕಿವಿ ಬಾಯಿ
ಇರಲಿಕ್ಕೆ ಕಾಲ ಹರನ ಧ್ಯಾನ ಮತ್ತು ಕೆಡ್ತಿರಪ್ಪಯ್ಯ ||3||
ಹಣವಿದ್ದಾಗಲೇ ಭಕ್ತಿ ಗುಣವಿದ್ದಾಗಲೇ ಮುಕ್ತಿ |
ಹಣ ಕೆಟ್ಟು ಹೋದ ಮೇಲೆ ನಿನ್ನ ಗುಣ ಕೆಟ್ಟು
ಹೋಗುವುದು | ಮುಂದೆ ಕಾಲ ಯಮನ
ಬಾಧೆಗೆ ಸಿಲ್ಕಿ ಕೆಡ್ತಿರಪ್ಪಯ್ಯ ||4||
60
ಶಿವ ಜೀವ ಇಬ್ಬರಿಗೂ ಭೇದವಿಲ್ಲ
ಮನಸಿನ ಬ್ರಾಂತು ಕಳಿಯಲಿಲ್ಲ ಕರ್ಮ
ತೊಳೆಯಲಿಲ್ಲ | ದೇಹ ಉಳಿಯಲಿಲ್ಲ | ಗನ ಸುಖ
ಬ್ರಹ್ಮ ಕಾಣರಲ್ಲಿ ಪಾಪಿ ಏನು ಬಲ್ಲ ||ಪ||
ಒಂದರಿಂದಲೇ ಮೂರು | ಹಿಂದಕೈದು
ಅಲ್ಲಿ ಐದಕೈದು ಅಲ್ಲಿಪ್ಪತ್ತೈದು | ಬೇದಿಸಿ
ನೋಡಲು ಐದೇ ಮೂರು ಅಲ್ಲಿ ಮೂರೇ ಬಂದು ||1||
ಶಾಂತಿ ಸಿಂಹಾಸನದ ಮೇಲೆ ಕುಳಿತು
ಅಲ್ಲಿ ಪ್ರಣವು ಬಲಿತು | ಅಪಾರ ಬ್ರಹ್ಮ ರೂಪ
ವಳಿದ ಅದ್ವಯಿತ ತಿಳಿದ ||2||
362 / ತತ್ವಪದ ಸಂಪುಟ – 1
ಶಿವ ಜೀವ ಇಬ್ಬರಿಗೂ ಭೇದವಿಲ್ಲ | ಮುಂದೆ
ಬಾದಿ ಇಲ್ಲ| ತಿಳಿ ತಿಳಿದಂತ ಜ್ಞಾನಿ ದೂರವಿಲ್ಲ ಇದ ಶಿವನೇಬಲ್ಲ
ತಾನು ತನ್ನ ಅರಿತ ಮೇಲೆ ಇದ್ದರೇನು |
ದೇಹ ಬಿದ್ದರೇನು | ಬವದ ಪಾಶ ಕಳಿದ
ಮೇಲೆ ಮರಣವಿಲ್ಲ ಮುಂದೆ ಜನನವಿಲ್ಲ ||4||
ಈ ಪರಿಯಿಂದ ಇವ ಚಿಂತನಾದ ನಿಷ್ಕಳಂಕವಾದ |
ಅಪಾರಬ್ರಹ್ಮವುಳ್ಳ ಯೋಗಿಯಾಳ ಚಿದಾನಂದನಾದ ||5||
61
ಕಳಕಮಲನು ನೀನೆಲಾ
ಕಳಕಮಲನು ನೀನೆಲಾ | ನಿನ್ನೊಳಗೆ ನೀ
ತಿಳಿಕೋ ಶ್ರೀ ಗುರು ಮುಖದೀ ||ಪ||
ಕಳಂಕ ಬಾವಗಳನು ಅರಿತು ತಿಳಿಕೊ ಶಂಭು
ಲಿಂಗ ನೀನೆ ||ಅ.ಪ||
ಆಧಾರ ಮೊದಲಾಗಿರು ಪಶ್ಚಿಮ ಕಡೆಗೆ
ಸಾಧಿಸಿಧಳಲಿಂಗವ | ನಾದ ಬಿಂದು ಕಳನ ಮುದ್ರೆಯ
ಸಾಧಿಸಲು ಆನಂದ ಕಾಂಬುದ | ಗಾದಿ ಮಾತಿದಲ್ಲ
ವೇದದ ಬೋಧೆಯೊಂದೆ ನಿನ್ನೊಳಗೆ ||1||
ಪರಬ್ರಹ್ಮ ಕಾಣಿಲಾ | ನಿನಗೆಷ್ಟು ಗುರು ನಾಮ
ಗುರುತೇನೆಲಾ ನರವದಲಿ ಕಡೆಯಿಲ್ಲ ಜೀವವು
ಪರಮನಲಿ ತಾ ಬೇರೆಯಾಗಿದೆ |ನಿನ್ನ ಗುರುವ
ಬಿಟ್ಟು ಅರಿವು ಕಾಂಬುದೆ ಗುರುವು ಲಿಂಗ
ಜಂಗಮರ ಸುಖವು ||2||
ನಂಬು ಶ್ರೀ ಓಂಕಾರವ ಒಂದೇ ಮನದಿ ಶಾಂಭ
ನೀನಾಗು ಎಲಾ ಹಿಂಬವಾಗಿದೆಯೆಲ್ಲಾ ಶಿವಮಯ |
ನಂಬಿಕಿಲ್ಲದೆ ಭೇದವಾಗಿದೆ | ಕುರಿಬಿಳಿದು ಆಕಾಶ
ಕಡೆಯು ಶಂಭು ಒಂದೇ ಶಟೆ ಇದಲ್ಲಿ ||3||
62
ಬೇಸರಗೊಳ್ಳದಿರು
ಧರೆ ಸುಖ ಮುಖ ಭಾಗ್ಯವು ಸ್ಥಿರವಿಲ್ಲವು ತಿಳಿ
ಪರಮನ ಧ್ಯಾನದೊಳಿರು ಮನವೆ | ಮೊರೆಯುವ
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 363
ನಾನಾ ತರತರ ವಾದ್ಯದೊಳ್ ಪರವಶವಾಗಿ ನೀನಿರು ಮನವೆ ||ಪ||
ಪತಿ ಸುತರಾಶಿಯು ಮತಕುಲ ಸೂತಕ
ಮತವ ನಂಬುಲು ಯಮಗತಿ ಮನವೆ | ಕ್ಷಿತಿಯೊಳು
ಗುರುನಿಜ ಮತವನು ನಂಬಲು ಔತಣಮಾಳ್ಪರಹಿತ
ಮನವೆ ||1||
ಎಂಟು ಜನರು ನಿನ್ನ ಗಂಟನ್ನು ಕದಿಯಲು
ಅಂಟಿಕೊಂಡಿರುವರು ಉಂಟು ಮನವೆ ತುಂಟರಿಬ್ಬರು
ನಿನ್ನ ತಂಟೆಗೆ ಬಂದರೆ ಸೊಂಟೆಯ ಮುರಿದು
ಕಾಯೋದುಂಟು ಮನವೆ ||2||
ನಿತ್ಯ ಆನಂದದ ಬುತ್ತಿಯ ಕಟ್ಟು ನೀ
ಪತ್ಯವಾಗಿರುವುದು | ಸತ್ಯ ಮನವೆ | ಮುಕ್ತಿಯ
ಪಾಲಿಗೆ ನಿತ್ಯವು ಮಂಗಳ ಎತ್ತಿ ನೋಡಲು ವಿಚಿತ್ರ
ಮನವೆ ||3||
ಲೋಕದ ಆಟವು ಬೇಕಿಲ್ಲವೊ ಬಿಡು |
ಮೂಕನಾಗಿರುವುದು ಜೋಕು ಮನವೆ | ಲೋಕಾದೀಶ
ನೊಳ್ ಏಕವಾಗಲು ಬಹು ನೀ ತಿಳಿ ಸುಖ
ಜೋಕು ಮನವೆ ||4||
ದೂಷಣೆ ಮಾಳ್ಪರು ದೇಶದೊಳಗೆ ನಿನ್ನನ್ನು
ಬೇಸರಗೊಳ್ಳದಿರು ಲೇಸು ಮನವೆ | ನಾಸಿಕ ಪುರದೊಳು
ಸೂಸುವ ರವಿ ಪ್ರಕಾಶನೊಳಗೆ ಬೆರೆ ನಿತ್ಯ ಮನವೆ ||5||
ಕವಿಯನು ಬರೆಯುತ ಗವಿಯನು ಸೇರಲು
ಕಿವಿ ಸುಡದಳಿಯದು ಭವ ಮನವೆ ಭುವನದೊಳಗೆ
ನಿಜ ವರವ ತಿಳಿದುಕೊಂಡು ಜೀವಾಮೃತವನು
ಸವಿ ಮನವೆ ||6||
ಸಾಧು ಜನರ ನಿಜ ಪಾದ ಸೇವೆಯೇ ಪರಹಾದಿಗೆ
ಸುಖ ಸಾಧನ ಮನವೆ | ಬೋಧಿಸಿ ತತ್ವದ ವಿನೋದಿಸಿ
ಸಮಾಧಿಯೊಳಗೆ ಸುಖಿಯಾಗು ಮನವೆ ||7||
ಕರುಣದಿ ನಿನ್ನೊಳು ಅರುಹಿದ ಪರಮ ಗುರುವಿನ
ಧ್ಯಾನದೊಳ್ ಇರು ಮನವೆ | ಶಿರವನು ಬಾಗಿಸಿ
ಗುರು ರಾಜೇಂದ್ರನ ಚರಣ ಸ್ಮರಣಿಯೊಳಗಿರು
ಮನವೆ || ಧರೆ ಸುಖ ಭಾಗ್ಯವು ಸ್ಥಿರವಿಲ್ಲವೂ ತಿಳಿ ||8||
374 / ತತ್ವಪದ ಸಂಪುಟ – 1
63
ತಾನೆ ತಾ ಕಾಣಿಸುವದು
ಕೆಂಪು ಮೂಗಿನ ಪಕ್ಷಿ ಸಂಪಿನೊಳಗಿರುವುದು
ನಿಂಪು ಬಲ್ಲವರು ನೀವು ಹೇಳಿ || ಹರ ಹರ ||ಪ||
ನಮ್ಮ ಹಂಪೆಯೊಳಗಿರುವಂತ ವಿರುಪಾಕ್ಷ ಲಿಂಗನ
ಸಂಪಿನೊಳಾಡುತಿದೆ ||ಅ.ಪ||
ಆರು ತಲೆ ಹದಿನಾರು ಕಣಿಗಳುಂಟು ಮೂರೇ
ಮೂರು ನಾಲಿಗೆ ಹರ-ಹರ ಮೂರೇ ಮೂರು ನಾಲಿಗೆ ||
ಅಯ್ಯ ಬೇರೆ ಹನ್ನೆರಡು ಕಣ್ಣು ಕಿವಿಗಳುಂಟು ಸೇರಿತು
ತೆಂಗಲಾಗಿ ||1||
ಸಕಲ ಕಲಿಯುಗದೊಳು ಸೀತ ಮಲ್ಲಿಗೆ ಬೇರೆ
ಬೇರೆನ್ನಬಹುದು || ಅಯ್ಯ ಬಾರ ಹನ್ನೆರಡು ಬೇರಿ
ಗಂಟೆಗಳುಂಟು ಹಾರಿತು ಗಗನದಲ್ಲಿ ||2||
ಜ್ಞಾನಕ್ಕೆ ಸಿಲುಕದ ಕೋಣೆಯೊಳಿರುವುದು
ಕಾಣಿಸದು ಆ ಮೃಗ | ಜ್ಞಾನದೊಳು ನೋಡಲು
ತಾನೆ ತಾ ಕಾಣಿಸುವದು ಅಜ್ಞಾನಿಗೆ ಸಿಲುಕುವುದಿಲ್ಲ ||3||
ಪಟ್ಟ ಮಂಚದ ಮೇಲೆ ತಟ್ಟಾನೆ ಮಲಗುವುದು
ಗುಟ್ಟಾಗಿ ಇರುವುದಿಲ್ಲ | ಅಲ್ಲಿ ಕಟ್ಟು ಕಾಂಬುವುದು |
ಅಲ್ಲಿ ಘಂಟೆಯ ನಾದವೇ ನುಡಿಯುವುದು ||4||
ನೇತ್ರದೊಳಗೆ ಮನೆ ಮಾಡಾಯ್ತೆ | ಅಲ್ಲಿ ಸೂತ್ರದ
ಬೊಂಬೆ ತಾ ನಿಂತಾಯ್ತೆ ಈ ದಾತ್ರಿಯಲ್ಲವಾ
ಅಡಗಾಯ್ತೆ | ಅದು ತಾನೇ ತನ್ಮಯವಾಗಿರುವುದಣ್ಣ ||5||
ಸಾಲು ಮಂಟಪವೇ ಹಾಗಾಯ್ತೆ | ಅಲ್ಲಿಲೀಲದುಷ್ಪರಿಗೆ
ಮೇಲಾಯ್ತೆ | ಸಾಲು ದೀವಿಗೆ ಬೆಳಗುತ್ತಲಾಯ್ತೆ |
ಅಲ್ಲಿ ತಾನೇ ತನ್ಮಯವಾಗಿದದಣ್ಣ ||6||
ಮೂರು ಕಾಲಿನ ಪಕ್ಷಿ ಅದು ನಡು ನೀರಿನ
ಮದ್ಯದಿ ನಿಂತಿಹುದು | ಧೀರ ಪುರುಷರ ವಶವಾಯ್ತೆ
ದುರಂಕಾರಿಯ ಕಣ್ಣಿಗೆ ದೂರಾಯ್ತೆ ||7||
ಅಂಗದೊಳಗೆ ಶಿವಲಿಂಗವಿದೆ | ಅದು ಕಂಗಳಮದ್ಯದಿ
ಕಾಣುತ್ತಿದೆ | ಮಂಗಳ ಕರವಾಗಿ ಬೆಳಗುತ್ತಿದೆ | ನಮ್ಮ
ರಂಗಯ್ಯ ಗುರುವೇ ತಾನೆ ಆದ ||8||
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 365
64
ಎಲ್ಲಾ ರೂಪವು ತಾನಂತೆ
ಎಲ್ಲಾ ರೂಪವು ತಾನಂತೆ ಶಿವನೆಲ್ಲೆಲ್ಲಿಯು
ತುಂಬಿದನಂತೆ ಅಲ್ಲಲ್ಲಿ ಅರಸುತ ಗುಡಿಗಳ ತಿರುಗುವ
ಕಳ್ಳರ ಕಣ್ಣಿಗೆ ಕಲ್ಲಂತೆ ||ಪ||
ದುಶ್ವವಿವಾದವ ತಾನಂತೆ ದುಶ್ವಯನರಿಯದ
ತಾನಂತೆ ದುಶ್ವಿ-ದುಶ್ವಿಗಳ ಎರಡರ ನಡುವೆ
ಶಾಸ್ವಿತವಾಗಿ ಇಹನಂತೆ ||1||
ಕಳವಳಗಳು ತನಗಿಲ್ಲಂತ ಮೊಳೆಯುವುದೊಂದಿಲ್ಲಂತೆ
ಬಳ ಬರ ಉದಿಸುವ ಕಲ್ಪಿತ ರೂಪಿನು
ಬೆಳಗಿಸುತ ಬೆಳಗಿಹನಂತೆ ||2||
ಕುಂದೆಂಬುದು ತನಗಿಲ್ಲಂತೆ ಮುಂದೊಂದಾ ವದತಾನಂತೆ |
ಮುಂದೊಂದಾದವರೊಳಕಿನೊಳ್ ಕೊಡುವ
ಸಂಧಿನೊಳಗೆ ಸೇರಿಹನಂತೆ ||3||
ಕಣ್ಣಿಂಬುದು ತನಗಿಲ್ಲಂತೆ ಕಣ್ಣಿಗೆ ಕಣ್ಣಗಿಹನಂತೆ |
ಕಣ್ಣ ತೆರೆದು ತನ್ನಂತರದವರಿಗೆ ಬಣ್ಣ
ಬಣ್ಣವಾಗಿಹನಂತೆ ||4||
ಕಳಿದುಳಿಯುವುದೊಂದಿಲ್ಲಂತೆ | ಕಳೆಯುವುದುಳಿಯವು
ದೊಂದಿಲ್ಲಂತೆ | ಕುಲ ಶೀಲಗಳೆಂಬ ಕೊಳೆಯು ಇಲ್ಲದಿದೆ
ನಿರ್ಮಲವಾಗಿ ಇಹನಂತೆ ||5||
ಕಿಂಕರನಾದವ ತಾನಂತೆ ಗುರುಶಂಕರನಾದವ ತಾನಂತೆ ಮಂಕನು
ಬಿಡಿಸುವ ಕಿಂಕರರಿಗೆ ಗುರು ಶಂಕರನಾದಮೌನಂದ ||6||
65
ಪರಮ ಪಾವನನೆ
ಗುರುವಿನ ಮಹಿಮೆಯ ಅರುಹಿದ ಪರಶಿವ
ತರುಣಿ ಪಾರ್ವತಿಯ ಕೇಳೆಂದ ಶರಣನ ಮಹಿಮೆಯು
ಎನಗಿಂತಧಿಕವು | ಮರೆಯಬೇಡ ಕೇಳ್
ಅವನೆಂದು ||ಪ||
ಧರಣಿಗೆ ಅದು ತಲಾರ್ಥದಿರೆ ನೀ ತಿಳಿ
ಪರಮ ಪಾವನನೆ ಅವನೆಂದ ನಿರುತವು ಅಂತರ
366 / ತತ್ವಪದ ಸಂಪುಟ – 1
ಭಾವವ ತೊಳೆಯಲು ಭರವಸೆ ಇಡದೆ ತಾಬಂದ ||1||
ಲಲಿತಾಂಗಿಯೇ ಕೇಳ್ ಶರಣನ ನಾಮಕೆ ಉರಿ
ಅಗ್ನಿಯು ಶಿತಳವಹುದು | ಕರೆಗೊಂಡವನಿಗೆ
ನಮಾಮಿ ಎನ್ನಲು ಗುರಿ ತೋರುವನು ತಾ ಬಂದು ||2||
ಸೃಷ್ಟಿಗೆ ಬ್ರಹ್ಮ ಸಂತೃಷ್ಟಿಗೆ ವಾಸು ಸ್ಪಷ್ಟಿ
ಪ್ರಳಯ ನಾನೇಳುವೆನು | ಶ್ರೇಷ್ಠನೆಂದು ತಿಳಿ
ಎರಡಕ್ಷರದೊಳು ಗೊರಷ್ಟಿ ತಿದಿಕೇಳ್ ಪಾಮರನು ||3||
ಪರಮಾನಂದದಿ ಪರಿದು ಕೇಳ್ಪೊಡೆ ಶರಣೆಂದಳು |
ಶಂಕರನಡಿಗೆ ಗುರುವು ರೂಢ ರಂಗಯ್ಯನೆ
ಅನುದಿನ ತರಳಿರ ಪೋಷಿಪ ತಾ ಬಂದು ||4||
66
ಯಾರೇನ ಮಾಡುವರು
ಯಾರೇನ ಮಾಡುವರು | ಯಾರಿಂದಲೇನಹುದು |
ಪೂರ್ವ ಜನ್ಮದ ಕರ್ಮ ಇದು ಬೆನ್ನ ಬಿಡದು ||
ಕುಲದೊಳಗೆ ಅತಿ ಶ್ರೇಷ್ಠ ಬಲವಂತ ರಘುರಾಮ
ಕಾಡಿನೊಳ್ ಅಪರಿಮಿತ ಸೌರ್ಯ ಲಕ್ಷ್ಮಣ
ದೇವರು | ಚಪಲಾಕ್ಷಿ ಸಿತೆಯನು ಕಳನು
ಕದ್ದೊಯ್ಯುವಾಗ ವಿಪರೀತರಿರ್ವರಿದ್ದೇನು ಮಾಡಿದರು
ಕೃಷ್ಣಾ ||
ಪಾಪಿ ದುಶ್ಯಾಸನನು ದ್ರೌಪದಿಯ ಸೀರೆಯನು
ಕೋಪದಿಂ ಸೆಳೆಸೆಳೆದು ಮಾನಭಂಗವನು ಮಾಡಿ
ಆಪತ್ತು ಎಡಬಿಡದೆ ಕಾಡುವ ಸಮಯದಲ್ಲಿ
ಭೂಪತಿಗಳೈವರಿದ್ದೇನು ಮಾಡಿದರು ಕೃಷ್ಣಾ ||
ರಣದೊಳಗೆ ಅಭಿಮನ್ಯು ಬಹು ಉಕ್ಕುತಿರಲಾಗ
ಪಾರ್ಥನಿದ್ದೇನು ಮಾಡಿದನು
ಕೃಷ್ಣಾ||
67
ಹೊಲನ ಹಸನು ಮಾಡಿ
ಶರೀರವೆಂತ್ತೆಂಬ ಹೊಲನ ಹಸನು ಮಾಡಿ
ಪರ ತತ್ವ ಬೆಳೆಯನ್ನೆ ಬೆಳೆದುಣ್ಣಿರೋ ||ಪ||
ಸಮೆದಮೆ ಎಂತೆಂಬ ಎರಡೆತ್ತುಗಳ ಮಾಡಿ
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 367
ವಿಮಲ ಮಾನವ ನೇಗಿಲನೆ ಮಾಡಿ ಮಮಕಾರವೆಂತ್ತೆಂಬ
ಗರಿಕೆಯ ಕಳೆದಿಟ್ಟು ಸಮತೆ ಎತ್ತೆಂಬ
ಗೊಬ್ಬರವ ಚೆಲ್ಲಿ ||1||
ಗುರುವರನುಪದೇಶ ಎಂಬ ಬೀಜವ ಬಿತ್ತಿ
ಮೆರೆವ ಸಂಸ್ಕಾರ ಸೃಷ್ಟಿಯ ಬಲದಿ| ಅರುವೆಂಬ
ಪೈರನ್ನೆ ಬೆಳೆಸುತ್ತ ಮುಸುಕಿರ್ದ ದುರಿತ ದುರ್ಗುಣ
ವೆಂಬ ಕಳೆಯ ಕಿತ್ತು ||2||
ಸ್ಥಿರಮುಕ್ತಿ ಎತ್ತೆಂಬ ಧಾನ್ಯವ ಬೆಳೆದುಂಡು
ಪರಮಾನಂದದೊಳು ದಣ್ಣನೆ ದಣಿದು ಗುರುಸಿದ್ದ
ನಡೆಗಳಿಗೆರಗುತ್ತ ಬರವೆಂಬ ಬರವನ್ನೆ ತಮ್ಮ
ಸೀಮೆಗೆ ಕಳುಹಿ ||3||
68
ರೂಪು ನಾಮ ಇಲ್ಲದವನ
ರೂಪು ನಾಮ ಇಲ್ಲದವನ ಕೂಡಿ ನಡೆಯಮ್ಮ
ನಿನ ಪಾಪಶೇಷ ಎಲ್ಲಾ ಕಳೆದು ಉಳಿವನನಮ್ಮ
ತಂಗಿ ಅವನೇ ಗುರುವಮ್ಮ ||ಪ||
ಹುಟ್ಟು ಬಂಜೆಗೆ ಹುಟ್ಟಿದ ಮಗನ ಹೆಸರು ಹೇಳಮ್ಮ |
ಅವ ಹುಟ್ಟಿ ಮೂರು ಪುರವ ಸುಟ್ಟು ಯಾವುದೇಳಮ್ಮ ||ಅ.ಪ.||
ಸುಟ್ಟು ಬೀಜ ಧರೆಗೆ ಒಳಗೆ ಹಾಕಿ ನೋಡಮ್ಮ |
ಅದು ಸುಟ್ಟ ಬೀಜ ಹುಟ್ಟಿ ದೊಡ್ಡ ಮರವು
ಆಯ್ತಮ್ಮ | ತಂಗಿ ||1||
ಒಣಗಿದ್ದ ಮರದೊಳಗೆ ಹೂ ಕಾಯಿ ಹಣ್ಣು ನೋಡಮ್ಮ |
ಅಲ್ಲಿ ಗಿಳಿಯು ಬಂದು ಮರದನಿಯಂತೆ
ಮೆದ್ದಿತಲ್ಲಮ್ಮ | ತಂಗಿ ||2||
ಆದಿಬೀದಿ ಕಾಡು ಸುದ್ದಿವಾದ ಏಕಮ್ಮ ಇಂತ
ವೇದ ತತ್ವ ಬೋಧಿಸಿದ ಗುರುಪಾದ ಇಡಿಯಮ್ಮ |
ತಂಗಿ ||3||
ಬ್ರಹ್ಮ ಹಮ್ಮು ಎಂದು ನೀನು ತಿಳಿಯಬೇಡಮ್ಮ
ಅದು ಬ್ರಹ್ಮ ಕುಣಿಕೆ ಬಹುದೂರ ಇರುವುದಿಲ್ಲಮ್ಮ ||4||
ಯಾವ ಜನ್ಮದ ಪುಣ್ಯಫಲವೂ ಫಲಿಸಿ ಬಂತಮ್ಮ |
378 / ತತ್ವಪದ ಸಂಪುಟ – 1
ಇದರ ಗುಟ್ಟು ತೋರಿದ ಬಸಪ್ಪ ಸ್ವಾಮಿಯ
ಮರೆಯಬೇಡಮ್ಮ | ತಂಗಿ ||5||
69
ಗುರುವನ್ನು ಕೂಡಿದನು
ಗುರುವನ್ನು ಕೂಡಿದನು ಒಂದು ಅರುವಿನ
ಮನೆಯೊಳಗೆ | ಇಂತ ನೂರೆಂಟು ನಾಯ್ಗಳು
ಬೋಗಳೆದರೇನು| ಗುರುಪಾದ ಸೇರಿದನು ||ಪ||
ನಿಂದನೆ ಮಾಡಿದರೆ ನಾನು ಹಿಂದಕೆ ಬರುವಳು
ಹಂದಿಯ ಜನ್ಮವು ಅವರಿಗೆ ಗೆಳತಿ ಗುರುಪಾದ
ಸೇರಿದೆನು ||1||
ಒಂಭತ್ತು ತೂತಿನ ಅವ್ವ ಕುಂಬಾರ ಗಡಿಗೆವ್ವ
ಅಂಬಲಿ ಕಾಯಿಸಿ ಅದಮಾಡು ಗೆಳತಿ ಗುರುಪಾದ
ಸೇರಿದನು ||2||
ಒಂದೇ ಮರದ ಹಣ್ಣು ಅದಕ್ಕೆ ಒಂಭತ್ತು ವರ್ಣಗಳು
ನೀ ಉಂಡುಟ್ಟು ಗಡಿಗೆಯ ತೊಳೆಕಾಳ ಗೆಳತಿ ಗುರುಪಾದ
ಸೇರಿದೆನು |3||
ಉತ್ತದ ಒಳಗೆ ಒಂದು ಮುತ್ತನ್ನೆ ಕಳಕೊಂಡ |
ಕಳಕೊಂಡ ಮುತ್ತು ದೊರಕೀತು ಗೆಳತಿ ಗುರುಪಾದ
ಸೇರಿದೆನು ||4||
ಗುರುಕೊಟ್ಟ ಬೀಜವ ಬತ್ತಿತು ಧರೆಯೊಳಗೆ |
ನೀ ಏಳು ಗಂಜಾರಿ ತೊಳಕಾಳೆ ಗೆಳತಿ ಗುರುಪಾದ
ಸೇರೆದೆನೊ ||5||
ಮರದ ಮೇಗನ ಪಕ್ಷಿ ಅದು ಹಾರೀತು ಗಗನಕ್ಕೆ
ಈ ಕಾಯ ಬಿಟ್ಟು ಆ ಕಾಯಕ್ಕೋಗುವಾಗ
ಗುರು ಪಾದ ಸೇರಿದೆನು ||6||
ತಂದೆ ತಾಯಿಯು ನೀನೆ ಫೇರ್ಸಿಂಗಪ್ಪ
ಬಂಧು ಬಳಗ ನೀನೆ ನಿತ್ಯ ನಿನ್ನ ಪಾದವ
ನೆನೆದು ಕೈಲಾಸ ಸೇರುವನು ||7||
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 379
70
ಮಂಟೇದು ಸ್ವಾಮಿ ಬಂದರಲ್ಲಾ
ಹುಲಿಯ ವಾಹನನೇರಿ ಬರುವಾ ಮಂಟೇದು
ಸ್ವಾಮಿ ಬಂದರಲ್ಲಾ ನವರಾತ್ರಿಯಲೀ ||
ಶನಿವಾರ ಸಣ್ಣ ನಮಗಾಯಿತು ಕೇಳೆಂದು
ಶಿವರಾತ್ರಿಯ ಜಾಗುರುಣೆಯಲಿ ||ಹುಲಿಯ||
ಜಗದಗಲ ಜಾಗಟೆ ಮೊಗಲುದ್ದ ಕಂಡಾಯ |
ಗುರುವೆ || ಬೀದಿ ಬೀದಿಯಲ್ಲಿ ಮೆರೆಯುತ್ತಾ ||
ನಲಿಯುತ | ಸಾಧು ಸಜ್ಜನರೇಕ್ಷಮವ ವೀಚಾರಿಸುತಾ
||ಹುಲಿಯ||
ಮದ್ದುಕಾರರ ಗಂಡ ದುರ್ಗಿ ಚೌಡರ ಮಿಂಡ
ಇಂಥ ಸಿದ್ದು ವಿದ್ಯೆಕ್ಕೆಲ್ಲಾ ತಾ ಗಂಡ ||ಹುಲಿಯ||
ಮಾಳ್ವದ ಮಾಯಾವ ಬಲ್ಲೆ ಹೂಡಿರುವ
ಜಾಡ್ಯ ಬಲ್ಲೆ || ಗುರುವೇ || ಹೂತಿರುವ ಗೊಂಬೆಯಾ
ಕೀಳುಬಲ್ಲೆ || ಬೇಡಿದವರ್ಗೆ ನಿಮ್ಮ ವರವಾ ಕೊಡ
ಬಲ್ಲೆ ಧರಿಸಿದರೋ ಬಲದಲ್ಲಿ ಚಿನ್ನದ ರೇಖೆ
ಧರಿಸಿದರೋ ಹಣೆ ತುಂಬ
ಭಾರಿಯ ತಂಬೂರ ಬಲದಲಿರಿಕೊಂಡು
ಬಲದ ಕೈನಿಂದ ಮಿಡಿಯುತಾ ರಾಗವ ಹಾಡು ವೇದವಾ
ಓದುತಾ | ಬೀದಿ ಬೀದಿಯಲ್ಲಿ ಮೆರೆಯುತ
ನಲಿಯುತಾ
ರಾಚಪ್ಪಯ್ಯ ಗುರು ನಿಮಗೆ ನಮೋ ಜಯ
ರಾಜ್ಯಕೆ ದೊಡ್ಡವರು ನಿಮಗೆ ನಮೋ ||
ಸಿದ್ದಪ್ಪಯ್ಯ ಗುರು ನಿಮಗೆ ನಮೋ ಜಯ
ಇಂಥ ಸಿದ್ದು ಸಿದ್ದರಿಗೆಲ್ಲಾ ತಾ ಗಂಡ ||ಹುಲಿ||
71
ಯಮ ಭಯವಿಲ್ಲ
ಜಡದೃಶ್ಯನೆ ಎನಗೆದರಿಲ್ಲೇನುತಲಿ ಕೆಡ ಬ್ಯಾಡೆಲೊ
ಎಲೊ ಮಾನವ || ಎಡಬಿಡದಿರು ಪಂಚಾಕ್ಷರಿ ಮಂತ್ರವ |
ತಡ ಮಾಡದೆ ನಿನಗೊಲಿವ ಶಿವಾ ||ಪ||
370 / ತತ್ವಪದ ಸಂಪುಟ – 1
ಎತ್ತೆತ್ತಲು ಬಲು ಕತ್ತಲೆ ಮುಸುಕಿದೆ
ಚಿತ್ತದ ನೆಲೆ ಸಿಲ್ಕುವುದಿಲ್ಲ || ಮತ್ತೆ ಮತ್ತೆ
ವಿಭೂತಿಯ ಧರಿಸಲು ಉತ್ತಮರೊಳಗಿರು ಭಯವಿಲ್ಲ ||1||
ಎಲ್ಲವೂ ನಿನ್ನೊಳಗಿರುವವು ಅವುಗಳ ಬಲ್ಲ
ವಿವೇಕವು ನಿನಗಿಲ್ಲ || ಸಲ್ಲಲಿತದ ರುದ್ರಾಕ್ಷಿಯ
ಧರಿಸಲು ಎಲ್ಲೆಲ್ಲಿರು ಯಮ ಭಯವಿಲ್ಲ ||2||
ಗುರುಕುಲ ಜಾತರು ದುರಿತವಿದೂರರು ನೆಗೆ
ಪೊಗುಳುವ ಶಾಸ್ತ್ರವಿದೆಲ್ಲಾ | ಅರಿಯದ ಪಾಮರ
ಗೊಲಿಯುವುದಿಲ್ಲ | ಬರಿ ಪುಸಿ ಸ್ಥಿರವಿಲ್ಲಾ ಮನುಜಾ ||3||
ಕಳವಳವಿಲ್ಲದೆ ಶ್ರೀ ಗುರುಪಾದವ ತೊಳೆದುದಕವ ||3||
ಕುಡಿಯೋ ಮನುಜಾ | ನಿರುತವರಿತ್ತ ಪ್ರಸಾದವ
ಭಂಜಿಸಿ ನಿರ್ಮಲದೊಳಗಿರು ಭಯವಿಲ್ಲಾ ||4||
72
ನಿನ್ನ ನಾನೇನ ಬೇಡಲಿ ದೇವಾ
ನಿನ್ನ ನಾನೇನ ಬೇಡಲಿ ದೇವಾ |
ಕೊಡಲೆನಗೆ ನಿನ್ನೊಳೇನುಂಟು ಅದನ್ನೆಲ್ಲವಾ
ನಾನೆ ತಿಳಿದೂ ||ಪ||
ಅನ್ನವ ಬೇಡುವೆನೆ ಕಾಳಕೂಟವೂ |
ಹೂದಿಕೆಯ ಬೆಡುವೆನೆ ಎಡೆದಾನೆಯ ತೊಗಲು ||
ಪರಿಚಾರಕರ ಬೇಡುವೆನೆ ಭೂತಗಳು |
ಅರಮನೆಯ ಬೇಡುವೆನೆ ಪಿತೃಪನ ಭೂಮಿ ||
ಗಂಧವ ಬೇಡುವೆನೆ ಹೆಣದ ಬೂದಿಯು |
ಆಭರಣ ಬೇಡುವೆನೆ ರಾಕ್ಷಸ ತಲೆಮಾಲೆ ||
ತುರುಗುವ ಬೇಡುವೆನೆ ಬಹುದಿನದ ಮುದಿ ಎತ್ತು |
ಗಂಧವ ಬೇಡುವೆನೆ ಹೆಣದ ಬೂದಿಯು ||
ನಿನ್ನಯ ಸುಗುಣದ ಸಿರಿಯು ತುಂಬಾಭಿಕ್ಷಾವೃದ್ಧಿಯು
ನಿನ್ನಯ ನಿರ್ಗುಣದ ಸುಖವ ನೋಡೆ ಕೇವಲವು
ಇನ್ನೊಂದು ಬೇಡೆನಗೆ ನಿನ್ನಯ ಭಕ್ತಿಯನ ಕರುಣಿಸಿ
ಸಲಹು ಸಿದ್ಧರೂಪ || ನಿನ್ನ ನಾನೇನ ||
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 371
73
ತನ್ನ ಮಾರ್ಗವಾ ತೋರಿಕೊಟ್ಟವರು
ನಮ್ಮ ಗುರುವು ಎಂಥ ದೊಡ್ಡವರು
ಹರಿಹರನೆ ಶಂಭೋ | ತನ್ನ ಮಾರ್ಗವಾ
ತೋರಿಕೊಟ್ಟವರು ||ಪ||
ಆಸೆ ಪಟ್ಟು ದೇಶ ತಿರುಗಿ | ಜೀವವೆಂಬೊ
ಗಿಳಿಯ ತಂದು | ಮುತ್ತೀನ ಪಂಜರಾದೊಳಗೆ
ಕೂಸಿನಿಂದ ಸಾಕಿ ಸಲರಿಂದೆನೊ | ಮೋಸವಾಗಿ
ಹೋಗುತೈತಲ್ಲೋ | ಈ ಊರಿಗೆ ಬಂದು
ವ್ಯರ್ಥವಾಗಿ ಹೋಗುತೈತಲ್ಲೋ ||1||
ಅಂಡಪಿಂಡದ ಮದ್ಯದೊಳಗೆ ಕುಂಡಲೆಂಬೊ
ಹಣ್ಣ ಇರಿಸಿದ್ದೆ | ಆ ಮಾರ್ಗದಲ್ಲಿ ಚಂದ್ರ
ಸೂರ್ಯರ ಕಾವಲಿರಿಸಿದ್ದೆ | ಕಾಯ ಸವಿದು
ಹಣ್ಣ ಸವಿದು ಭೂಮಂಡಲಕ್ಕೇ ಹೋಗುವಾಗ
ಮರಣವೆಂಬೊ ಕಳ್ಳ ಬೆಕ್ಕು ಕಾದು ಕುಂತೈತಲ್ಲೊ
ತಮ್ಮಾ | ಕಾದು ಕುಂತೈತಲ್ಲೊ ||2||
ಆರು ವಿಕ್ರಮ ಏರಿನಿಂತವರೆ ಆ ಮಾರ್ಗದಲ್ಲಿ
ಕಾದುಕುಂತಿರುವ ಮೃತ್ಯುಕೊಂದವರೆ
ಮೃತ್ಯುಕೊಂದು ದಾರಿ ಮಾಡಿ |
ಗುರುಪೇರ್ಸಿಂಗೇಶನ ಪಾದ ಸೇರಿದೇನೋ
ತಮ್ಮಾ || ಸೇರಿದೇನೋ ||3||
74
ಗುರುಪಾದವ ಹಿಡಿದರೆ
ಬದ್ದವಾಗಿ ಗುರುಪಾದವ ಹಿಡಿದರೆ ಸಿದ್ದವಾಗುತ್ತೈತೇ |
ಇದು ಮುದ್ದುವಾದ ಕೈಲಾಸಕ್ಕೆ ಇದು ಘನ, ಬದ್ದಾ ವದಿಕೆಯಂತೆ ||ಬದ್ದ||
ಎಷ್ಟು ಶಾಸ್ತ್ರವ ಓದಿದರೇನು ಸಿದ್ದಿಗೆ ಗುರುಬೇಕು
ಅವಾ ಇಟ್ಟಾರೇ ತನ್ನ ಕರ ದೃಷ್ಟಿ ಕಂಡಿತು ಪಟ್ಟಾಣರೊಗ
ಬಹುದು ||ಬದ್ದ||
ಆರು ಚಕ್ರದಲ್ಲಿ ಅಂಶ ನೆಲೆಯನು ಭೇದಿಸಿ ನೀ ನೋಡು |
ಅವರಾದಿ || ಅನಾದಿಗೆ ಸೋದರರಿರುವರು ಸೋದಿಸಿ
ನೀ ನೋಡ || ಬದ್ದ||
372 / ತತ್ವಪದ ಸಂಪುಟ – 1
ಲಕ್ಷದ ಮೇಲೆ ತ್ತೊಂಬತ್ತಾರು ಸಾವಿರ ಉತ್ತಮರಿರುವರು
ಈ ನಿಷ್ಠೆಯಿಂದಲಿ ನಿಂತು ನೋಡಲು ಮುಂದೆ ಕಾಣುವವರು ||ಬದ್ದ||
ಅಷ್ಟವರ್ಣದ ಲಿಂಗನ ಬೆಳಕಿನಲಿ ಬೆತ್ತಲೆ ನೀ ನಿಲ್ಲು |
ನೀ ಪಶ್ಚಿಮ ದಿಕ್ಕಿನಲ್ಲಿ ಗುರುರಾಚಪ್ಪನೊಳ್ ಅಂಜಿ ಅಂಜಿ
ಬಾಳು ||ಬದ್ದ||
75
ಸಾರಿ ಚಲ್ಲಿದೆ ಮುಕುತಿ
ಸಾರಿ ಚಲ್ಲಿದೆ ಮುಕುತಿ ಗುರು ತೋರಿಸೈಯ
ಗುರುತೋರಿಸಲರಿಯದೆ
ಕಾಣಿಸದೂ ಸಾರಿ ಚಲ್ಲಿದೆ ಮುಕುತಿ ||
ಹಿಂದೆ ನೋಡಿದರೆ ಬಂದಿಹುದು ಇದು ಮುಂದೆ
ನೋಡಿದರೆ ನಿಂದಿಹುದು
ಸಂದು ಸಂದಿಗೂ ಜಡದಿಹುದು ಆನಂದ ಗುಹೇಲಿಂಗೇಶ್ವ
ಕಾಣಯ್ಯ ||ಸಾರಿ||
ವೇದದ ಮೊದಲಿನ ಮೂಲವಿದು ಇದು ಮೇದಿನಿಯೊಳ್
ತಾ ಬಂದಿಹುದು
ಆದಿ ಅನಾದಿಯು ಚಲ್ಲಿಯಿಹುದು ಗುರುಸಾದ್ಯರಿಗಲ್ಲದೆ
ಕಾಣಿಸದೂ ||ಸಾರಿ||
ಎತ್ತಾ ನೋಡಲು ಪರಬ್ರಹ್ಮವಿದು ಇದು ಸುತ್ತಮುತ್ತಲು
ಸುರಿದಿಹುದು
ಮೊತ್ತ-ಮೊತ್ತವಾಗಿ ಕಾಣಿಪುದು ಗುರುಪುತ್ರರಿಗಲ್ಲದೆ
ಕಾಣಿಸದಣ್ಣ ||ಸಾ||
76
ನಿನಗಿನ್ನು ದಯಾಬಾರದೇ
ಪುರಹಾರ ನಿನಗಿನ್ನು ದಯಾಬಾರದೇ
ಪರಿ ಪರಿ ಬವದೊಳ್ ಬಳಲ್ದೆನಲ್ಲಾ ||
ಬರಬಾರ ಅತಿಹಿನ ಯೋನಿಯೊಳ್ ಬಂದು
ಧರಿಸಬಾರದ ದೇಹಗಳನ್ನು ತೊಟ್ಟ
ಸ್ವರಿಸಲು ಉಚಿತವಲ್ಲದ ಆಹಾರಗಳುಂಡು
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 373
ತಿರುಗಿ ತ್ರೈಪುದ ನೀನೆ ಕಂಡು ಕಂಡು ||ಪುರಹಾರ||
ಮಾಡಬಾರದ ಪಾಪಗಳನೇ ಮೊಹಿಸಿಮಾಡಿ
ಕೂಡಬಾರದ ಕಾಮಿನಿಯರ ಕೂಡಿ
ಆಡಬಾರದ ಪರದೋಷನ್ನೆಗಳಾನ್ನಾಡಿ
ಕೂಡಿ ಬಪ್ಪುದ ನೀನೆ ಕಂಡು-ಕಂಡು ||ಪುರಹಾರ||
ಎನ್ನಿತ್ತಿವನ ಗಣವ್ಯಾಸಗಿರಿದರು ಎನ್ನನು ಬಿಟ್ಟ
ಹೊನ್ನು ಕನ್ಯೆ ಗತಿ ಇಲ್ಲದ್ದು ನಾನೆ ||
ಎನ್ನಿತು ನೋಲಿಸಿ ಮುಕ್ತಿ ಕೋಡಬೇಕೆಂಬುವ ನಿನ್ನ
ಮನದಆಸೆಯ ನೀನೆ ಕಂಡು-ಕಂಡು || ಪುರಹಾರ||
ಪರಿಪೂರ್ಣ ಗುರುಸಿದ್ದನಾದ ನೀನು
ಈತನ ಮೋರೆಯ ಲಾಲಿಸಿ ಸಿಸ್ಕರಣದೊಳ್
ಮರೆದಿರೆ ಭಕ್ತ ವತ್ಸಲನೆಂಬ ಬೀರುದನ್ನಾ
ಮೆರೆಯುತ್ರ್ತಿಪುದ ನೀನೆ ಕಂಡು ಕಂಡು ||ಪುರಹಾರ||
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 375
ಅಕಾರಾದಿ ಪದ್ಯ ಶೀರ್ಷಿಕೆ
ಅಂಕೆಯಿಲ್ಲದೆ ಮೆರೆದು 315
ಅಂಗದೊಳಗಣ ಅರಿವು 347
ಅಂತರಾತ್ಮನ ಸೆರಗು 154
ಅಕ್ಕ ನೋಡಕ್ಕ 313
ಅಖಂಡ ಬೆಳಗುತಿದೆ 323
ಅಜ್ಞಾನಿಯಲ್ಲವೆ ನೀನು ಜೀವನೆ 116
ಅನಘ ಗುರು 333
ಅನುಭಾವದಡಿಗೆಯ ಮಾಡಿ 250
ಅಲಕ್ ನಿರಂಜನ್ 318
ಅಲ್ಲಿದೆ ನಮ್ಮ ಮನೆಯು ಹರ ಹರ 277
ಅಲಲಲೇನಾಶ್ಚರಿ 320
ಅರಗಿಬಿತ್ತಲಿಲ್ಲಾ 300
ಅರಿತದನು ಮರೆತರೆ 341
ಅರಿವಂತೆ ದೇಹಾದಿಗಳು ಬೇರಿಡದಂತೆ 99
ಅರಿವು ನೀನೆಂದು ಸದ್ಗುರು ಪೇಳೆ 86
ಅರಿವುದೇ ಚಂದ 295
ಅರಿವೆ ಬರಿಯರಿವೆ ನೀನು 85
ಅರಿವೆ ತಾನೆಂದು ನಂಬಿ 87
ಅವ ಪುಣ್ಯದ ಫಲವಿದೆಂದು 135
ಅರಿವೆಯೆಲೆ ಅರಿವೆ 135
ಅವ್ವನಿಗೆ ಹೂವುಗಳಾದೆ 174
ಅಷ್ಟದಳದ ಕಮಲದಲ್ಲಿ 160
ಅಳಿವುದಲ್ಲ ಜಗವು ತಾನೆ 238
ಆಜ್ಞಾನವನಳಿದು 324
ಆನಂದವಾಘನದೊಳಾಡುವನ್ಯಾರೆ 205
ಆಡುತೈದಾಳೆ ಮಾಯೆಯೆಂಬ ಕಾಮಿನಿ 124
ಆರು ಅರಿಯರು ನಮ್ಮೂರು 184
ಆರು ಕಾಣರು ಪುಣ್ಯಕ್ಷೇತ್ರವನು 25
376 / ತತ್ವಪದ ಸಂಪುಟ – 1
ಆರು ನಾನೆಂದು ವಿಚಾರಿಸಿ ತಿಳಿಯೆ 137
ಆರು ಬಲ್ಲರು ನಿಜಾನಂದ ಭೋಧಾಂಬುಧಿ 92
ಆವ ಪರಿಯ ಸುಖವ ಭಾವಿಸಿ 139
ಆಸೆಗಾಗಿ ದೇಶ ತಿರುಗಿ 170
ಆ ಗುರುತನರಿತು 336
ಇಂಥ ಜನ್ಮವ ಕಳೆದುಕೊಂಡರೆ 339
ಇಂಬುಕಾಣದೆ 241
ಇದೇ ನೋಡು ಇದೇ ರಾಮ 272
ಇದ್ದ ಮಾತೇಳಿದನಮ್ಮ 175
ಇದರ ತೆರನ ಕರುಣಿಸು 39
ಇನ್ಯಾರಿಗೇಳಣ್ಣಾ 306
ಇನ್ಯಾಕೋ ಯಮನ ಬಾಧೆಗಳೋ 349
ಇನ್ನೆನಗೆ ಭಯವುಂಟೆ 8
ಇಲ್ಲ ಮುಕ್ತಿ 191
ಇವನೆಂತ ಕಲಿಗಾರ 163
ಇವನ್ಯಾರಮ್ಮಯ್ಯ 218
ಇಷ್ಠ ಲಿಂಗಯ್ಯ ನಿ ಶ್ರೇಷ್ಠ ಲಿಂಗಯ್ಯಾ 278
ಈ ಮಂತ್ರ 267
ಈತನ್ಯಾರು ತಿಳಿದು ಪೇಳೆ 182
ಉದ್ದಾರ ಮಾಡುತ ಬರುತಲಿದೆ 249
ಉಳುಹಿರಯ್ಯ 10
ಎಂತ ಕನಸ ಕಂಡೆ! 45
ಎಂತ ಕುದುರೆ 319
ಎಂತೊಲಿವನೊ ತನಗೆಂತೊಲಿವನೊ 57
ಎಂಥ ರುಚಿ ನೋಡು 218
ಎಂಥಾ ಕನಸು ಕಂಡೇನೆ 337
ಎಂಥಾದ್ದೀ ಕಲಿಕಾಲವು 189
ಎಂದಿನಂತೆ ಜೀವ ಭಾವವಿರಲು 96
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 377
ಎಂದಿರ್ಪೆನೋ ನಿಜಸುಖದಲ್ಲಿ 101
ಎತ್ತ ಹೋಗುತ್ತೀಯೆ ತಂಗಿ 293
ಎತ್ತಿ ಕೊಡಮ್ಮ ವಚನವ 279
ಎತ್ತು ತೊತ್ತು ತೊಂಡನಾಗಿ ಇರಿಸು 34
ಎನಗೆ ಭೋಗಭಾಗ್ಯ ಬೇಡ 20
ಎನ್ನನೊಲವಿಂದೆ ಪಾಲಿಸು ಪಾರ್ವತೀಶ 110
ಎನ್ನ ಆಳ್ದ ಇಷ್ಟಲಿಂಗ 29
ಎನ್ನ ಏಕೆ ಕಾಯಲೊಲ್ಲೆ ? 32
ಎನ್ನ ಕರೆಯ ಬನ್ನಿ 2
ಎನ್ನಯ ಚನ್ನಯ 254
ಎನ್ನ ತನುಗುಣಗಳ ಭ್ರಾಂತುಗೆಡಿಸು 31
ಎನ್ನೊಳಗೆ ನಾ ತಿಳಕೊಂಡೆ 248
ಎನ್ನ ಬರಿಸದಿರು 5
ಎನ್ನಯ ಮೇಲೆ ದಯವುಟ್ಟಿ 335
ಎರಡನರಿತು 342
ಎರಡಕ್ಷಗರಳೇ ಸಾಕು 191
ಎಲ್ಲಿಂದ ನೀ ಬಂದೆ 311
ಎಲ್ಲರಂತವನಲ್ಲೆ ಎನ ಗುರುವು 298
ಎಲ್ಲರೊಡನೆ ವೈರವಿಲ್ಲದೆ 61
ಎಲ್ಲರವ ನಮ್ಮಣ್ಣ 301
ಎಲ್ಲವು ತಾನು 47
ಎಲ್ಲಾ ರೂಪವು ತಾನಂತೆ 365
ಎಲೆ ಆತ್ಮನೆ 4
ಎಷ್ಟು ಮಾತ್ರ ಭವದ ಕಡಲು 316
ಏನನೋದಿ ಏನು ಫಲ 18
ಏನ ಗಳಿಸಿನ್ನೇನ ತಿಳಿದು 294
ಏನು ಹೇಳಲಿ ಗುರುಲಿಂಗ 242
ಐದು ಅಂಗವಾಗಿದೆ 353
ಐವತ್ತು ದಳ ವರ್ಣ 345
378 / ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು
ಒಂದು ತಾನಾದ ಶಂಭುಲಿಂಗ 56
ಒಂದೈದಕ್ಷರ ಹೊಳಪಿಂದ ತಿಳಿಮನವೆ 271
ಒಡೆಯ ವೆಂಕಟನನಿಗೆ 234
ಒಮ್ಮೆ ಹೊಳೆಯ ದಾಂಟಿಸೋ 179
ಒಳ್ಳೆ ಸ್ಥಾನವ ಪಡೆದುಕೋ 149
ಓಂಕಾರ ನಾದದೊಳಾಡು ಮನ 181
ಕಂಡು ಕೇಳಿ ಮತ್ತೆ ಮೋಹಿಪರೆ 117
ಕಂಡೆನು ನಾನೊಂದು ಪಕ್ಷಿಯ 223
ಕಂಬದ ಜ್ಯೋತಿಗೆ 236
ಕಡುಚೆಲುವೆಸೆವ ಜವ್ವನವನು 53
ಕಡೆ ಹಾಯಿಸು 357
ಕಣ್ಣಿನ ಮುಂದಿನ ಕಸವನು ತೆಗೆದು 275
ಕಣ್ಣೆತ್ತಿ ನೋಡಲು ಬೇಡ 227
ಕತ್ತಲೆ ಹರಿಸಿದೆಯಾ 176
ಕರ್ಪೂರವಾಗಿರು 329
ಕಬ್ಬುನದ ಮೇಲೆರೆದ ನೀರಂತಹುದು 140
ಕರ ಕಂಜದೊಳು ಕಾಣಿಸಿತು 78
ಕರವೆತ್ತಿ ಬೆಳಗುವೆನು 235
ಕರಹೃದಯದ ಹವಣೆನಿಸದೆ 79
ಕರುಣರಸವಾವುದರ ಕಡೆಯಿಂದಲಹುದು 75
ಕರುಣಿಸು ಕಾಡದೆನ್ನುವನು 111
ಕರುಣವಿರಲಿ ಜೀವರೊಳು 49
ಕರುಣಕುಲ ಚಕೋರ 50
ಕರುಣ ವಿನಯ ತಪೋ ವಿರತಿ 58
ಕರುಣೆಯ ತೋರಯ್ಯ 240
ಕಲ್ಲಾಬಿಡೆ 260
ಕಲ್ಯಾಣ ಪುರದಲಿ ಹಗರಣವಾಗಿದೆ 355
ಕಲ್ಲುಮೆತ್ತಗೆ ಮಾಡಬೇಕಣ್ಣ 297
ಕಳಕಮಲನು ನೀನೆಲಾ 362
ಕಾಗದ ಬಂದಿದೆ 226
ಕಾಗೆಯಂದದಿ 332
ಕಾಡಲಿನ್ನೇನಭವ ನಿನ್ನ ಕೃಪೆಯಿಂದೆ 98
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 379
ಕಾಮವಿದನು ಕಂಡ ಯೋಗಿ 121
ಕಾಯವೆ ನೀನಾರು ನಾನಾರು 97
ಕಾಯಮೋಹವನ್ನು ಮರೆ 19
ಕಾಯೈ ಕಾಯೈ 25
ಕಾರಣ ಗುರುವಿನ 305
ಕಿಂಚಿತು ಪುಣ್ಯ 346
ಕುಂದದೆ ಮನವಿರಲು ಕಾಣಿಸದು 141
ಕುಣಿಸುತ್ತಿರುವುದಲ್ಲಣ್ಣ 358
ಕುಲವೆಂಬ ತಿರಪುಗಂಭದೊಳು 66
ಕೂಡಿದೆ ಗುರುಪದವ 155
ಕೂಡೆ ನೇಮಿಸಿದೆ ಹಿತವಹಿತವೆಂಬೆರಡನು 112
ಕೆಡದಿರೆಲವೊ ಶಂಭುಲಿಂಗವನುಳಿದು 118
ಕೇಡುನುಳ್ಳದೆಂದು ವಿಶ್ವವಿಷಯದೊಳು 125
ಕೇಳಕ್ಕ 6
ಕೇಳು ಕೇಳಲೋ ತಮ್ಮ 296
ಕ್ಲೇಶಂಗಳೈದು 340
ಕೈಬಿಡ ಬೇಡಾ 311
ಕೋಗಿಲೆ 65
ಕೋಗಿಲೆ ಚೆಲ್ವ ಕೋಗಿಲೆ 54
ಕೊಟ್ಟು ಹುಟ್ಟಿ ಪಡೆಯಲಿಲ್ಲ 37
ಕೋಪವಂಟದ ತಪವನು 63
ಕೋಲು ಕೋಲೆನ್ನಿರೆ 300
ಗಗನದಂತಿರೆ ನಿರವಯವನಾಗಿ 133
ಗುಡಿ ಗುಡಿಯನ್ನು ಸೇದಿ ನೋಡಿ 350
ಗುಡಿಗಳ ತಿರುಗತ 199
ಗುರುಕುಲದಿರವನು ಪೇಳುವೆನಿಂತೊಲಿದು 82
ಗುರುದೇವ ನೀನೇ 213
ಗುರುದೇವರ ಕೇಳಿ ತಿಳಿಕೊಂಡೆ 182
ಗುರುಪಾದದೊಳು ಮನಹಿಂಗಿ 229
ಗುರುಪಾದವ ಹಿಡಿದರೆ 372
ಗುರುರಾಯನೊಲಿದ 295
380 / ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು
ಗುರುವನ್ನು ಕೂಡಿದನು 368
ಗುರುವಾದ ದೇಹಕ್ಕೆ 223
ಗುರುವಿನ ಆಜ್ಞೆಯ ಮೀರದೆ 274
ಗುರುವಿನ ಕೃಪೆಗೆ ಗುರಿ ತಾನಾದರೆ 159
ಗುರುವಿನ ಮುಖದಿಂದ 316
ಗುರುವಿನ ಮಹಿಮೆ ತಿಳಿಯಲಾಗದು 166
ಗುರುವೀನ ಅರುವಿನೊಳ್ 358
ಗುರುವೆ ನಿಮ್ಮಯ್ಯ 287
ಗುರುವೇ ನೀನಲ್ಲವೆ 244
ಗುರುವೇ ಮಂಗಳ 236
ಗುರುಬಂದ ಹರಬಂದ 302
ಗುರುಶಂಕರನ ಕೂಡಿ 187
ಗುರುಸ್ವಾಮಿ ತೂಗಿದರೆ 245
ಗುರು ದೊರಕೀದ 354
ಗುರು ಬೇಕ ತಂಗಿ 247
ಗುರು ಭೋದಿಸಿದವುಗಳ ತಿಳಿದು ನೋಡು 275
ಘಟವೆ ಪುಸಿ ಘಟವೆ ನೀನು 91
ಘಠವು ಎಂಬ ಮಠದಿ 197
ಘನತೇಜದೊಡನಾಡಿ 104
ಘನಮಹಿಮಲಿಂಗವೆ 9
ಘನಯೋಗ ಸಾಧನೆಯನು ಮಾಡಿರೋ 257
ಚತುರಂಗುಲದ ಮಿತಿಯೊ 71
ಚಾರು ಚಿತ್ಕಲಾಪ್ರಪೂರ್ಣ ಶಂಭುಲಿಂಗವೆ 78
ಚಿಂತ್ಯಾಕೋ ಮಾಡುತ್ತಿದ್ದಿ 258
ಚಿತ್ತನಿರ್ಮಲವದರಿಂದೆ ಸಂಸೃತಿ 131
ಚಿತ್ತವಿದು ಪರಿಶುದ್ಧವಾಯಿತು 188
ಚಿತ್ರವಿಚಿತ್ರವ ನಾ ಕಂಡೆನೇ 176
ಚಿನ್ನ ರನ್ನದ ಜೋಳಿಗೆ ಜಂಗಮ 224
ಜಪಿಸು ಪಂಚಾಕ್ಷರಿಯ 161
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 381
ಜನ್ಮ ಹರಿಯಲಿಲ್ಲ 203
ಜಾಗರದಲಿ ಜಾಗರನಾಗಿ 165
ಜಾತಿ ಕಲ್ಪನೆಯಳಿದು 330
ಜಾತಿ ಸೂತಕ ಭ್ರಾಂತಿ 221
ಜಾತಿ ಸೂತಕವೆಂಬ ಮಾತಿಲ್ಲ 195
ಜ್ಞಾನವಿರಬೇಕು 304
ಜ್ಞಾನ ರೂಪ ಪ್ರಾಣಲಿಂಗ 230
ಜ್ಞಾನಿ ಮೋಹಿಪುದಂದವೆ ಪರಮತತ್ತ್ವ 140
ಜ್ಞಾನಿಯ ಲಕ್ಷಣವಿಂತಿರಬೇಕು 302
ಜೋಪಾನವಮ್ಮ 183
ಜೋರ್ತಿಲಿಂಗವ ಕಂಡು 243
ಜ್ಯೋತಿ ಬೆಳಗುತಿದೆ 147
ಡಿಂಭದೊಳಗೆ ಒಂದು ಪ್ರಾಣ * 21
ತಂದು ತೋರೆ 27
ತಡೆಯದಿದನು ನೋಡಿ ತಿಳಿವುದು 68
ತತ್ವ ಚಿಂತನೆ 290
ತತ್ವದಿರವನರಿದು ನಿತ್ಯ ಸುಖಿಯಾದೆ 102
ತತ್ವದ ಲಾವಣೆ 307
ತತ್ವನುಭವ ಬಾಯಿ ಮಾತಲ್ಲ 348
ತನ್ನ ನಾವು ಏನು ಬೇಡಿದೆವು 22
ತನ್ನ ನಿಜವನು ಪರೀಕ್ಷಿಸದೆ 136
ತನ್ನನೆ ಪರವೆಂದು ತಿಳಿವುದಲ್ಲದೆ 90
ತನ್ನ ಮಾರ್ಗವಾ ತೋರಿಕೊಟ್ಟವರು 371
ತನುವನಂಟದ ರುಜೆಯು 52
ತನುವಿನೊಳಗೆ ಅನುವಿನವಿದ್ದೂ 277
ತನುವು ತಲ್ಲಣಿಸುವುದು 219
ತನ್ನಿರವಿಲ್ಲೆನಿಸಿದಭಾವವು 139
ತಪನಿಷ್ಟೆಯೊಳಗಿರ್ದ 258
ತಪ್ಪಿದಡಿಂತು ತಪ್ಪುವವಿವು 126
ತಾನಾರೆಂಬುದೆ ಸೂಚನೆ 93
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 381
ತಾನೆಂಬ ನಿಜವನರಿದ ಮೇಲೆ 103
ತಾನೆ ತನ್ನೊಳು ತನ್ನ ನಿಜವ ನೋಡಲು 91
ತಾನೆ ತಾ ಕಾಣಿಸುವದು 364
ತಾನೆ ತಾ ಬಲ್ಲ 335
ತಾವರೆಯಲರಿ ತಾವರೆ ಮುಟ್ಟಿ 114
ತಾಳಲಾರೆನು ತನುವನು 114
ತಿಳಿ ಮಂಗಳಾಗಿ 171
ತಿಳಿದು ಭಕ್ತಿ ಮಾಡು ಗುರುಪಾದದಲ್ಲಿ 196
ತಿಳಿಯದೆ ಜ್ಞಾನವ 242
ತಿಳಿವುದೀ ಪರಿಯೊಳು 132
ತಿಳಿಯಲಹುದೊಲಿದು ಬಿಡಲಹುದು 145
ತೇರನೋಡೋಣ 281
ತೇರು ಸಾಗಿ 356
ತೂಗು ಮಂಚದ ಮೇಲೆ 182
ತೂಗು ಮಂಚದ ಮೇಲೆ 288
ತೊಟ್ಟಿಲ್ಲದೀ ಹಣ್ಣು 173
ತೊಲಗಿಸಿ ತನ್ನೊಡನಾಡಿಗಳನು 127
ತೋರದಯ್ಯಾ ಸುಖ ತೋರದಯ್ಯಾ 88
ದಯಮಾಡು ಅಂತಃಕರಣಾ 249
ದಯವೆಂಬ ವಜ್ರಾಂಗಿ ತೊಡಿಸಲು 193
ದಾನಿ ನಿನ್ನನು ಬೇಡುವೇ 359
ದಾರಿಯ ನೀ ತೋರಬೇಕಣ್ಣ 278
ದಾರಿಯನು ಕಂಡು 344
ದಾರುಣಿಯ ಸುಖಕಾಗಿ 202
ದುಗ್ಗಾಣಿ ಬಹುಕೆಟ್ಟದಣ್ಣಾ 256
ದೇವತ್ವವಾವುದು 22
ದೇವರು ತನ್ನೊಳಗಿರಬೇಕಾದರೆ 304
ದೇವರೆಲೆ ದೇವರೆ 50
ದೇಶವುಂಟು ಶಂಭುಲಿಂಗವೆಂಬ 64
ದೇಶದೇಶವನ್ನೆಲ್ಲಾ | 251
ದೊಡ್ಡ ಊರು ನಮ್ಮದು ಶಿವಪುರ 246
ದೊರೆಗಳ ಭೀತಿಲ್ಲ 357
384 / ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು
ನಂಬು ನೀನೆ ನಿತ್ಯಬೋಧನೆಂಬ 96
ನಂಬು ಜ್ಞಾನವನೆ 131
ನಂಬಿರುವೆನು 323
ನಗು ಬಂದಿತಿಲ್ಲಿ 352
ನಡುವಣ ನಾದವನು ಕೇಳಿ 70
ನದಿಗಳನೇಕದ ಜನನಿಯೊಂದರೊಳು 74
ನಮಗೆ ಸರಿಯದಾರು 15
ನಮ್ಮ ಗುರು ಪಾದ ಸೇರಿದೆನು 273
ನಮ್ಮ ದೇಶಕೆ ಹೋಹ ದಿನ ಬಂತು 26
ನಮ್ಮೂರು 262
ನರನೆಂಬೋ ನಾಮ 286
ನರಿಯ ಮೇಲೆ ಕೋಳಿ 167
ನಾಡಿನ ಸಿರಿಗಳ ಬೇಡುತ 210
ನಾನಾ ದಾರಿ ತಪ್ಪಿದನಲ್ಲೋ 237
ನಾನಾ ದೇವರ ತಿರುಗಿ 321
ನಾನು ನೀನದಿದೆಂಬುದೇನು ತೋರದೆ 77
ನಾನಿತ್ತಗೆಳೆದರೆ 309
ನಾನೆಂಬುದಡಗಿದಾನಂದ ನಿಜವೊ 87
ನಾನೇನ ಬೇಡಲಿ ಶಂಭುಲಿಂಗಾ 172
ನಾವು ಜಂಗಮರೆಂದು 292
ನಿಂದಿಸುವರು ನಮ್ಮ ಬಂಧು ಕುಲ 228
ನಿಜ ಕೈವಲ್ಯಹುದು ಗುರುವಿಡಿದು 94
ನಿಜಪದವೆ ತಾನೆಂಬ 72
ನಿಜವನರಿದ ಯೋಗಿಗಾವ ಕರ್ಮದ ಕಾಟ 93
ನಿಜವೆಂದು ತಿಳಿದು ಪೂಜಿಸು 348
ನಿಜ ದೇವನೆ 334
ನಿತ್ಯ ಜಂಗಮಕ್ಕಿದವಗೆ 234
ನಿದ್ರೆಯ ಮಾಡಿದೆನೇ 263
ನಿನಗಿನ್ನು ದಯಾಬಾರದೇ 373
ನಿನ್ನನಾನೇನಂತ 312
ನಿನ್ನ ನಾನೇನ ಬೇಡಲಿ ದೇವಾ 370
384 / ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು
ನಿನ್ನ ನಾನೇನಂತ ಜೋಪಾನ ಮಾಡಲಿ 271
ನಿನ್ನ ನಿಜವಿದನೆ ತಿಳಿ 84
ನಿನ್ನ ನೀನರಿಯದೆ 244
ನಿನ್ನೊಳಾವ ಸುಗುಣವಿಹುದು 53
ನಿನ್ನೊಳಿಹುದು ನಿತ್ಯಪದವದನುಭವ 134
ನಿನ್ನೊಳೆನ್ನ ಬೆರೆಸೋ ತಂದೆ 162
ನಿನ್ನೊಳು ನೀನೆ ಛೇದಿಸಿ 327
ನಿಮ್ಮ ಮರೆಸಬೇಡ 33
ನಿಮ್ಮ ದರುಶನಕೆ 231
ನಿಸ್ಸೀಮ ನಿತ್ಯಾನಂದ 126
ನೀನೆ ಅಕಳಂಕಗುರು 1
ನೀನೊಲಿಯದ ನಿಮಿಷವೆ 113
ನೀರಿಗೆ ಬಾರವ್ವ ತಂಗಿ 171
ನೀರೆ ನೀ ತೋರೆ 206
ನೀ ಯನ್ನ ತಾಯೇ 269
ನುಡಿದಂತೆ ನಡೆಯಬೇಕಮ್ಮ 177
ನುಡಿಯಬಾರದ ಲಜ್ಜೆಗುಡುವ 115
ನೂರಾರು ಪೇಟೆಯ ಪೇಟೆ 239
ನೆನೆವುದು ಮೊದಲು ಹೃದಯನಳಿನವನಲ್ಲಿ 127
ನೆರೆದಿಹನು ಗುರುಶಂಭುಲಿಂಗವೇ 147
ನೆರೆಶಾಂತಿ ವಿರತಿ ತೋರಿ 194
ನೆಲಸಿರಬೇಕೊಂದು ತನುವಿನೊಳು 95
ನೋಡಬಾರದೇ ಬ್ರಹ್ಮವ 213
ನೋಡಿ ಮಿಗೆ ಮನ್ನಿಸೆನ್ನನು 142
ನೋಡಿ ಸಲಹಯ್ಯ 109
ನೋಡು ನೋಡು ನೀನೆ ಪರವೆಂದು 84
ನೋಡು ನೋಡು ಲಿಂಗವೆ 318
ನೋಡು ದಯದೊಳೆನ್ನನೆಂದು 108
ಪಗಡೆ ಆಟಕ್ಕೆ ಪೋದೇ 274
ಪಡೆವುದುಗಮ ನಿಜ ಸುಖವ 99
ಪದವಿಯ ಕರುಣಿಸಿದ 253
384 / ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು
ಪದಿನಾಲ್ಕು ಜಗವಂತದರೊಳು 117
ಪರಂಜ್ಯೋತಿ ಬೆಳಗುತಿದೆ 233
ಪರಂಜ್ಯೋತಿ ಸ್ವರೂಪ ನೀನಾಗುತಿಂತು 85
ಪರನ ಸಂಗದ ಸೊಗಸನು ಮರೆಯದೆ 62
ಪರಮ ಪಾವನನೆ 366
ಪರಮಸುಖದ ಮೂಲ 205
ಪರಮಪಾವನ ಪಂಚಮುಖ ದಯಾಸಿಂಧುವೆ 108
ಪರಮಾರ್ಥದೊಳಿಟ್ಟು 156
ಪರಮೇಶನ ಭಜಿಸದೆ 266
ಪರತರ ಮುದ್ರೆಯ ನೋಡಿದನೆ 190
ಪರರನ್ನು ದೂಷಿಸಿ 161
ಪರಿಣಯವು ಯನಗಾಯ್ತು 163
ಪಾದ್ರಾಕ್ಷಿ 200
ಪಾಪಗಳ ಪರಿಹರಿಸು 354
ಪಾಪಿವಿಧಿಯೇ 255
ಪಾಲಿಸಯ್ಯ 321
ಪಾಲಿಸೆನ್ನ ಕರುಣದಿಂದ 237
ಪಾಶವನ್ನು ಹರಿಸೋ 201
ಪಾಳು ಪರದೇಶಿ ಬಂದವನೇ 217
ಪುಣ್ಯ ಫಲದಿಂದೆ ಪಡೆದು 124
ಪೊರೆಯುವ ಗುರು 325
ಪೊರೆಯುವ ಚಿಂತೆ ಪಿರಿದು 121
ಪೊರೆಯೆನ್ನ ಪ್ರಭುವೆ 325
ಬಂದನು ಮತ್ರ್ಯಕೆ 24
ಬಂದವರಿಗನ್ನಾವ ನೀಡು 347
ಬಂದಂತ ನೆಂಟರು 259
ಬಂದಿದೆ ಪಕ್ಷಿ 261
ಬಂದು ನೋಡಿ 157
ಬಂದೆನಪ್ಪಯ್ಯ 361
ಬರುವಾಗ ತರಲಿಲ್ಲ 201
ಬಲ್ಲವರ ನೀ ಸೇರು 160
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 386
ಬಲ್ಲಡುಸುರಿರಿ ಭಾವಕರು ನೀವೆಲ 146
ಬಹು ಮಂಗಳಕರ ಶಿವ 153
ಬಸುರಾಗದೆ ಮಗನಡೆದವ್ವ 337
ಬಾಗಿಲು ತೆರೆದಿದೆ ನೋಡಣ್ಣಾ 177
ಬಾರಮ್ಮ ಗುರುಸೇವೆ ಮಾಡುವ 251
ಬ್ಯಾಡವೋ ಯಂದೆಂದಿಗೂ 208
ಬಿಚ್ಚಿ ಪೇಳಿ 156
ಬಿಡು ರಾಜನ ಪೂಜೆಯನು 207
ಬಿನ್ನಾಣದ ಮಾತಿಗೆ ಕೊನೆಯಿಲ್ಲ 200
ಬುದ್ಧಿಮಾತು 228
ಬೆಕ್ಕು ಕೊಂಡು ಹೋಯಿತಯ್ಯೋ 225
ಬೆಣ್ಣೆ ತಾನೆ ತಾ ಕರಗಿತು 199
ಬೆರೆದೇಕನಾಗದೆ 186
ಬೆಳಗುತಿರ್ಪುದನು ಭಾವಿಸುವೆಡೆ ತಾನೆ 73
ಬೆಳಗುವ ತೇಜದಲ್ಲಿ 184
ಬೇಡ ಬೇಡ ಭೋಗದೊಡನಾಟ 123
ಬೇಡ ಬೇಡೆಲೆ ಮನವೆ ವಿಷಯದಾಸೆ 122
ಬೇಸರಗೊಳ್ಳದಿರು 362
ಬೋಧಿಸೆನ್ನಯ ಗುರುವೇ 178
ಬೊಮ್ಮವನರಿವೆವೆಂದು ಬಳಲುವರು 83
ಬ್ರಹ್ಮದಿ ಮುಳುಗದೆ 331
ಭಂಗ ಯಾಕೆ ಪಡುವೆ 185
ಭಕ್ತನಾದೊಡೆ 360
ಭವಗಳ ಹರಿವುದು ವಿಭೂತಿ 270
ಭವದಿಂದ ಪೊರೆವ ತಂದೆ 352
ಭಾವನೆಯ ಬಲಿಯುವ ತನಕ 309
ಭಾವಿಸುವುದರಿವಿಂಗೆ ನಿಜವೆಂದು 130
ಭ್ರಾಂತನಾಗಬೇಡ 179
ಭ್ರಾಂತಿಯ ಜಗವಳಿದು 185
ಭೋಗಿಯೆನಿಸದೆ ಜಗದೊಳು 69
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 387
ಮಂಗಳವಾಗಿ ಇದೆ 235
ಮಂಟೇದು ಸ್ವಾಮಿ ಬಂದರಲ್ಲಾ 369
ಮಂಡಲತ್ರಯದ ಮಧ್ಯದೊಳು 72
ಮಗಳೆ ಎನ್ನಯ ಮಾತು ಕೇಳು 13
ಮತಿಗೆ ಮಂಗಳವೀವುದಾವುದು 60
ಮತಿಯ ಹಂಗಿಲ್ಲದೆಲ್ಲವನರಿವಾತನೆ ಜಾಣರ ದೇವ 107
ಮನವ ನಿಲ್ಲುವಪಾಷಧಿ ಕೊಡು ಗುರುವೇ 297
ಮನವು ಮರೆತು 216
ಮನುಜರೊಳೈವರು ಸುಕೃತಿಗಳುಂಟು 143
ಮರಣಕಾಲದಲ್ಲಿ ಹೊಲನ ಹರಗಣೆನುತ 59
ಮರಿಯಬಾರದೊ 263
ಮರುಗಮಣಿಯೆಂಬ ರತ್ನ 198
ಮರೆಯಬಾರದೋ ಶಿವನಾ 245
ಮರೆಯಬೇಡ | 231
ಮಲ್ಲಿಗೆ ಹೂವಿನ ನೆಲ್ಮೆಯದಾರತಿ 248
ಮಹಾದೇವಾ ನಿಮಪೂಜೆ 290
ಮಾಡಲಿಲ್ಲವೆ ತಪವ ಮಾಡಲಿಲ್ಲವೆ 64
ಮಾಡಲಿಲ್ಲವೇ ತಪವ 260
ಮಾಡಲುಚಿತವೆ ಮನುಜ 55
ಮಾಡು ಶಿವಲಿಂಗಪೂಜೆಯನಂತರಂಗದೊಳು 128
ಮಾತು ಮಾತಿಗೆ 158
ಮಾನವ ಜನ್ಮ ದೊಡ್ಡದು 227
ಮಾನವ ಜನ್ಮಕೆ ಬಂದೀರಿ 233
ಮಾಯೆಕರ್ಮದ ಬಾಧೆ 51
ಮಾಯೆಯನು ಮೀರಿ ಕರ್ಮವನು ಸೋಂಕದೆ 80
ಮುಂದೆ ಏನಪ್ಪುದೋ* 11
ಮುಕ್ತನಿರವ ನೋಡು ರಮಣಿ 76
ಮುಕ್ತಿಯ ರಾಜ್ಯವ ಪಡೆಯೆಂದಾ 219
ಮುಳ್ಳ ಕೊನೆಯ ಮೇಲೆ 168
ಮೂರು ಬಾರಿಗೂ ಸಾರಿದೆ 359
ಮೂರು ಮೂರ್ತಿಯ ಕೂಡಿ 308
ಮೆರೆವಾತ್ಮನೊಳು ಪ್ರೀತಿಮಾತ್ರವೆ 103
388 / ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು
ಮೇಲು ಮಂಟಪ 282
ಮೊಲನ ತಲೆಯೊಳು ಕೋಡನು 58
ಮೋಹದಿಂದೆ ನೊಂದು ಬಳಿಕ 89
ಮೋಹವಡಗದೆ 328
ಮೋಹವಿಲ್ಲದೊಂದರೊಳಿಂತು 112
ಮೋಹವಿಲ್ಲದ ಪೂಜೆ 23
ಮೋಕ್ಷವ ಕೊಡುವುದು ರುದ್ರಾಕ್ಷಿ 270
ಯಂತಾ ಕಲಿಗಾರ ಪುರುಷ 266
ಯಂಥಾದೀ ಕಲಿಕಾಲವು 154
ಯಮ ಭಯವಿಲ್ಲ 369
ಯಲ್ಲಿ ನೋಡಿದರಿಲ್ಲ ಶಿವನು 268
ಯಾಕೆ ಬಂದಿಹನೆಂಬುವುದು 240
ಯಾತ್ರೆ ಮಾಡಿ ಬಂದೆ 350
ಯಾರಿಂದಲೇನಹುದು 360
ಯಾರಿಗೆ ಯಾರಿಲ್ಲ 303
ಯಾರೇನ ಮಾಡುವರು 366
ಯುಕುತಿವಂತನ ಬಗೆಯನು ನೋಡು 89
ಯೆಂತ ಕನಸು ಕಂಡೆನೇ 173
ಯೋಗ ಸೂತ್ರ ಸಾಧಿಸಿ 193
ಯೋಗಾನುಸಂಧಾನ 144
ಯೋಗಿಗೆ ಪಂಚಾವಸ್ಥೆಗಳುಂಟು 129
ರಂಜಿಸುವದಿದು ನಿಜವೆಂಬುದ 75
ರತ್ನ ಬಂದಿದೆ ನೋಡಿರೋ 192
ರಾಗಾದಿಗಳು ಪೋಗಲಿಲ್ಲ 150
ರಾಗಿಯ ತಂದಿರಾ 167
ರೂಪು ನಾಮ ಇಲ್ಲದವನ 367
ಲಗ್ನ ತೀರಿದ ಮೇಲೆ 180
ಲಾಂಛನವರಿದೊಡೆ 239
ಲಿಂಗದ ಬೆಳಕಿನೊಳು ನಿಜಗುಣ ನೋಡದೆ 276
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 389
ಲಿಂಗಪೂಜೊಂದಾಗುತೈದಣ್ಣ 310
ವಂದನಂ ಗುರುವೀರನೆ 189
ವಚನವ ಕೇಳು 197
ವಜ್ರ ಕಂಬವಲ್ಲ 253
ವರಗುಣದೊಳಗಾಡಿ ಮೆರೆಯದೆ 62
ವಿಭೂತಿ 353
ವ್ಯಾಕುಲಾ ನಿನಗ್ಯಾತಕೆ 269
ವೊರು ಚಂದಾಗಿಸಬೇಕಂಣಾ | 264
ಶಂಕರಿಯೇ 349
ಶಂಕೆಯಿಲ್ಲದೆ ಬಾಳಿರೆಂದು 186
ಶರಣು ಸೇವೆಯ ಮಾಡುಬೇಗ 344
ಶರೀರವ ನೋಡಿ ಹಿಗ್ಗುವೆಯಲ್ಲ 211
ಶಿರವೆ ಬಾಗಿಸಿ 250
ಶಿವಜೀವರು ಎಂದೆರಡಿಲ್ಲ 204
ಶಿವಜೀವರೆಂದೆರಡಿಲ್ಲ 289
ಶಿವನ ಪೂಜೆ ಮಾಡು ಮನವೆ 47
ಶಿವನ ಪೂಜೆಯನ್ನು ಮಾಡು 35
ಶಿವನ ಭಜನೆ ಮಾಡೋ 285
ಶಿವನಾಮ ಸ್ಮರಣೆ 314
ಶಿವನು ಭಿಕ್ಷಕ್ಕೆ ಬಂದ 276
ಶಿವಮಂತ್ರ ನೆಲೆಯಾಗಿ 339
ಶಿವಲೋಕದಿಂದ ಒಬ್ಬ ಸಾಧು 247
ಶಿವಶರಣರೇ ಬನ್ನೀರೆ ಪೋಗುವಾ 175
ಶಿವ ಜೀವ ಇಬ್ಬರಿಗೂ ಭೇದವಿಲ್ಲ 361
ಶ್ರೀಕರವಾಗಿ ಬೆಳಗುವನು 232
ಶ್ರೀಗಿರಿಯ ಸುಕ್ಷೇತ್ರಕ್ಕಿಂದು 283
ಶ್ರೀ ಗುರು ಮಧ್ಯದಲಿ 338
ಶ್ರೀ ಗುರು ಚರಣದಿ | 170
ಶ್ರೀ ಗುರುವಿನ ಪಾದ 317
ಶ್ರೀ ಗುರುವೆ ಶರಣು 145
ಶ್ರೀ ಗಿರಿಯ ಶರೀರದೊಳು 164
390 / ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು
ಶುದ್ಧ ಚೈತನ್ಯವಾನೆಂಬುದೆ ಧ್ಯಾನ 67
ಶ್ರುತಿಯ ಸುವಿಚಾರವನು ಮರೆದು 122
ಸಚ್ಚಿದಾನಂದದೊಳ್ 252
ಸದ್ಗುರು ಶಂಕರಾರ್ಯ ಬಲ್ಲ 190
ಸತ್ಯವಂತರ ಸಂಘದೊಳು ಬೆರೆದರೆ 272
ಸತ್ಯ ಶಾಂತಿ ಲಿಂಗವೇ 220
ಸತ್ಯ ಮಾರ್ಗದೊಳಗಾಡು 346
ಸನ್ನುತಿ ತನಗೆ ಸಂಪನ್ನವಾದರಿವಿದು 133
ಸಪ್ತರೂಪವಸು ನಿರೋಧನ 67
ಸರ್ವ ಸಾಕ್ಷಿಕ ಗುರು 326
ಸಲೆ ಸುಮ್ಮನಿಹುದೆ ನಿಜಯೋಗ 100
ಸಾರಿ ಚಲ್ಲಿದೆ ಮುಕುತಿ 372
ಸಾರಿ ಚೆಲ್ಲಿದೆ 293
ಸಾರುತೀದೆ ಶ್ರುತಿ 215
ಸಿದ್ಧಲಿಂಗನೊಳಗೆ ಬೆರೆತು 322
ಸಿರಿಯ ತೋರಿಸಿದೆ 149
ಸ್ಥಿರವಿಲ್ಲದ ಮನಸು 241
ಸ್ಥಿರಮುಕ್ತಿ ಸುಖವಿದು 244
ಸುಂಕವಿಲ್ಲದ ಪುರವುಂಟು 333
ಸುಖವೆ ನಿಜ ಸುಖವೆ ನೀನು 138
ಸುಗುಣಸಂಪನ್ನೆ ಶರ್ವಾಣಿ 106
ಸುಮ್ಮನಾಗದು ವಿಧಿಯೊಳೊಂದದೆ ಮುಕ್ತಿ 82
ಸುಮ್ಮನಿರು ಕಂಡ್ಯಾ 310
ಸುಮ್ಮನೆ ಕಾಲವನು ಕಳೆದು 55
ಸುರಸವಾದಂತೆ ಪತಿಶಂಭುಲಿಂಗ 81
ಸುವಿವೇಕವನು ಮಾಡೆ ಮನುಜ 115
ಸುಳಿಗಾಳಿ ಸುರಚಾಪ ಕನಸು 119
ಸೆರಗನೊಡ್ಡಿ ಬೇಡಿಕೊಂಬೆನು 26
ಸೆರೆಮನೆ ದೊರೆಗಳಿಲ್ಲ 150
ಸೇರಿದರೆ ಶರಣರ ಸಂಗ 313
ಸೊಲ್ಲಿಡಲದು ವೇದ್ಯವಲ್ಲ 209
ಸೋಲದಾತನೆ ವಿರತನು ಮನದೊಳಗೆ 120
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 391
ಹತ್ತಿ ನೋಡಿ ಬೆಟ್ಟ 284
ಹಮ್ಮಿನ ಮೂಲವ ಸುಟ್ಟು | 215
ಹಾರು ಕಂಡ್ಯಾ ಹಂಸ 29
ಹಾವು ಕಚ್ಚಿತಲ್ಲೊ ತಮ್ಮ 279
ಹಿಡಿ ಗುರುಪಾದವ 259
ಹುಂಜ ಬಂದಾಯ್ತೆ ತಂಗಿ 315
ಹೃದಯ ತಾಣದೊಳಗಿಟ್ಟು 69
ಹೇವವನಿಕ್ಕಲಾರೆ 28
ಹೊಲನ ಹಸನು ಮಾಡಿ 366
ಹೊಸದಾಗಿ ಒಂದು ಮೀನು 299