ಕೇಳೂವೆ ಹೇಳೀರಿ ಬಾಲಾನ ಪ್ರಶ್ನವೂ
ಕೇಳೂವೆ ಹೇಳೀರಿ ಬಾಲಾನ ಪ್ರಶ್ನವೂ
ಬಲ್ಲಂತ ಹಿರಿಯಾರೆಲ್ಲಾ || ಪ ||
ಮನವು ಚಿತ್ತವು ಉಭಯ ಘನ ಬ್ರಹ್ಮನ್ಮಯದಿ
ಪ್ರತಿದಿನವಾದ ಮಾಳ್ಪೊರಲ್ಲಾ
ಅನಿತ ಇನ್ನುಂಟೆ ಅಜಾಂಡವೆಲ್ಲವ ನಾಟೆ
ಎನುತ ಪೇಳಲು ಚಿತ್ತ ಮನವಪ್ಪದಿದು ಹ್ಯಾಗೆ || 1 ||
ಅತಿಶುದ್ಧನೆನುತಾಲಿ ಅಧಿಕ ವೇದ ಶೃತಿ
ಅನುದಿನ ಪ್ರಾರ್ಥೀಪವೇ
ಮಿತಿಯಿಲ್ಲದನ್ಯಾಯ ಮಹಯೋಳಾಗುವದೇ
ದುರ್ಗತಿ ನುಡಿ ಎನುತೆ ಸುಮ್ಮತಿ ಆಕ್ಷೇಪಿಸುವೋದು || 2 ||
ಅತಿ ಮೋಹಾ ಸತಿ ತಾನೆ ಪತಿಯಾಗಿರುವ ತಾನೇ
ಸುತ ಸೋಸೆ ಸರ್ವವಾಗಿಹನೇ
ಕ್ಷಿತಿಯೊಳ್ಹಿರಿಯರಲ್ಲಿ ಪ್ರತಿದಿನ ಕೇಳಿಹೆ
ಮತಿ ಕೂಡ ಚಿತ್ತತಾನತಿವಾದ ಮಾಳ್ಪಾದೂ || 3 ||
ವಸುಧೆಯೋಳ್ ಪಶುಗಳು ಸತಿಸುತೆಯನ್ನಾದೆ
ರತಿ ಸಂಕಲ್ಪಿಸಿದ ಹಾಗೇ
ದುರ್ವಿಷ ಭ್ರಾಂತಿ ನಡಿಸಲ್ಕಾ ಪಶುಭಾವ ಧರಿಸಿದ್ಯಾ
ಶಶಿಕಾಂತಿ ಮೀರಿದ ಕುಶಲ ಮಾನವನುತಾದೇ || 4 ||
ಮನವೆ ನಿನ್ನಯ ವಾಕ್ಯ ಮನ್ನಿಸಿದವರಿಗೆ
ಮರ್ಮಯಂದಿಗೆ ದೊರಿಯಾದೆ
ಘನದೈವವೆನುತಿಹೆ ಘನವಲ್ಲೆಂದಾಡುವೆ
ಎನಗೆ ಸಮ್ಮತ ವಿಲ್ಲೆಂದನುತಿರುವದು ಚಿತ್ತ || 5 ||
ಶುನಕಗಳವನೆಂದು ಸುಲಭದಿಂದನ್ನುವೆ
ಶುನಕ ಭ್ರಾಂತುಳ್ಳಾವನೇ
ಅಣುವಿನೊಷ್ಟಾದರೂ ಆಸ್ಪದಿಲ್ಲವೆ ದೋಷ
ಘನಗೇಡಿ ಹೋಗೆಂದು ಮನವನ್ನುತಿರುವಾದೂ || 6 ||
ನಿನ್ನಂತೆ ನಡವರ್ಗೆ ಇನ್ನುಂಟೆ ಪರಸುಖ
ಮಣ್ಣು ತಿನ್ನಿಸಿ ಬಿಡುವೇ
ನಿನ್ನ ನೀಗುವಲ್ಲಿಸಾಹೇಬು ಗುರುಸರಿ
ಇನ್ನುಂಟೆ ಎಂದು ಮನವನ್ನುತ ನಿಂತಾದೆ || 7 ||
ಸಾವುದಾ ಮುಂದ್ಹೊರಡೂವಾ ಉಪಾಯವೂ ತಿಳಿಯಾದೆ
ಸಾವುದಾ ಮುಂದ್ಹೊರಡೂವಾ ಉಪಾಯವೂ ತಿಳಿಯಾದೆ
ಆಯೂಸಾ ಬಡೂವೋರೇ ಅತಿ ಮೂರ್ಖರೇ || ಪ ||
ಸತ್ತವರ ಸಮುದ್ರ ತನ್ನಾ ತಲಿಯ ಮ್ಯಾಲೊರುವೋದಣ್ಣಾ
ಸತ್ತು ನೀ ನಿಂತಾರಿನ್ನಾ ತಾ ನ್ಹೊರುವನೂ
ಯತ್ನವಿಲ್ಲೆಮ ಬಾಧಕರಾ ಎತ್ತಿಹನೂ ಪೂರ್ವಾಕಾರಾ
ಹಸ್ತ ಜೋಡೀಸಿ ನಿಲ್ಲುತಿಹರೇ
ನೀನರಿಯದಿರುವರೇ || 1 ||
ಸಂತೋಷ ಬಂದ ವ್ಯಾಳ್ಯದಾ ಚಿಂತೆ ಸತ್ಹೋದಾ ವಿಧಾ
ಅಂತಿಲ್ಲದಾರ್ಯರ ಬೋಧಾ ಅತಿ ಆನಂದಾ
ವಂತೂ ಬಾರದಾ ಮುಂದೆ ಗುರುಪ್ರಾಂತಾ ಸೇರೆಂದ್ಹೇಳಿದೇ
ಇಂತ ಸುಖಬಿಟ್ಟೂ ಬಾಳುವರೇ ವೃಥಕಾಲ ಕಳಿವರೇ || 2 ||
ಸರ್ವವೂ ಪ್ರತಿ ಶರೀರವೂ ಒಪ್ಪದಿಂಬಿಟ್ಟಾ ವಿಧವೂ
ಗೋಪ್ಯದೋಳ್ ನಿನ್ನಾ ಸಾವೂ ಅತಿ ಸುಲಭವೂ
ಕುಪ್ಪಾಸ ಬಿಡವೊ ವ್ಯಾಳ್ಯದಾ ಕ್ವಚಿತಾದರಿಲ್ಲಾ ಬಾಧಾ
ಕ್ಷಿಪ್ರದಿಂ ಸುಖವೂ ಕೊಡುತಿಹರೇ ಗುರುಹಿರಿಯಾರಿಹರೇ || 3 ||
ಬಾಲರೆಲ್ಲಾರು ಕೂಡೀ ಬಹಿರಂಗಾದಾಟಾ ಹೂಡೀ
ಕಾಲ ಬಾರದೆ ಸತ್ತೀಯನ್ನೂವರೂ
ಕೈ ಹೊಡದು ಕಿಲಿಕಿಲಿ ನಗುತೇ ಕಷ್ಟಿಲ್ಲದ ಮರಣವಾಯಿತೇ
ಈ ಲೀಲ ಹಿರಿಯರು ಮಾಡುವರೇ ನೀ ಸುಮ್ಮನಿರುವರೇ || 4 ||
ಎಲ್ಲಿ ಹುಡುಕಾಲಿ ಬ್ಯಾಡೋ ಅಲ್ಲಿಷಾ ಗುರುವಿಹ ನೋಡೋ
ಸುಳ್ಳಿನಿಂ ಮುಖ ತಿರುಹೀ ನೀ ಕರುಣಾ ಬೇಡೋ
ಕೊಲ್ಲೂವ ಕೊಲೆ ತಪ್ಪಿಸುವಾ ಅಹಲ್ಲಾದವನು ದಿನ ಕೊಡುವಾ
ಜಲ್ಮಸಾಫಲ್ಯ ಮಾಡುತಿಹರೇ ನೀ ತೀವ್ರ ಬಂದರೇ || 5 ||
ಘಟವೆ ನಿನ್ನ ಸಂಗದಿ ಲಂಪಟ ಎನಗಾಯ್ತೇ
ಘಟವೆ ನಿನ್ನ ಸಂಗದಿ ಲಂಪಟ ಎನಗಾಯ್ತೇ
ಎನ್ನ ಭಟತನ ಹೋಯ್ತೇ || ಪ ||
ಮಧುರ ಜೇನು ಮರ್ಮರಿಯದೆ ಉದರ ತೃಪ್ತಿಗೇ
ಬಹು ಮುದದಿ ಹೋದ ನೊಣದ ಬಾಧೆ ಅಧಿಕವಾದ್ಹಾಗೆ
ಆ ವಿಧ ವಾಯ್ತೆನಗೇ || 1 ||
ಜೀವವೆ ನಿನ್ನನುಭದಿಂದೆ ಚಿಂತಿಸುತಿಹೆನೋ
ಇನ್ನೆಂತು ಮಾಳ್ಪೆನೋ ನೀನಿರಲಿಕ್ಕನುದಿನಾನನ್ಯರ ಕಾಯ್ವೇ
ಅವರೇನಾ ಜ್ಞಾಪಿಸಲು ಅದನು ಆ ಕ್ಷಣ ಕೇಳ್ವೇ
ಅತಿ ಕಷ್ಟ ನಾ ಬಡುವೇ || 2 ||
ಸರ್ವ ಮಧುರ ರುಚಿಕರ ನಿನ್ನ ಜಿಹ್ಮ ನೋಳ್ಪದೇ
ಸರ್ವರೀಗೆ ಸಾಕ್ಷಿಯಾಗಿ ತನುವೆ ನಿಂತದೇ
ಎನ್ನ ಸುಮ್ಮನನುತಿದೇ || 3 ||
ನಿನ್ನಿಂದನ್ನುದಕವನ್ನು ತಿನ್ನುತಿರುವೆನೋ
ಈಗನ್ನಘಾತಕ ನುಡಿಗಳು ಎನ್ನಾಡುವರೇನೋ
ಅನ್ಯಾಯ ನಿಂದೇನೋ || 4 ||
ಮೋಹದಿ ಸತಿಸುತರ ಪಿಡಿದು ಮುದ್ದಿಪೆಯಲ್ಲೋ
ಗಹಗಹಿಸಿ ನಗುತಲವರ ಲೋಲ ನೀನಲ್ಲೋ
ಎನ್ನನುಭವೇನಿಲ್ಲೋ || 5 ||
ದಾರಿ ಹಿಡಿದು ನೀ ತೆರಳಲು ಧಾತ್ರಿ ಗೊರಗುವೇ
ಸೇರರು ಸತಿಸುತರು ಎನ್ನಸಾರಿ ಹೇಳುವೇ
ಘೋರ ನಿನ್ನಿಂದಲ್ಲವೇ || 6 ||
ಇರುವ ತನಕ ಪರಿಪರಿ ವಿಧ ಹರುಷ ನಿನ್ನದೇ
ಸ್ಮರೀಶವಾಗಿ ನಿನ್ನ ಸಹಾಯ ನಿರುತ ಮಾಡಿದೇ
ನಾ ಬರಿದೆ ಬಳಲಿದೇ || 7 ||
ಜನನಿ ಜಠರದಲ್ಲಿ ನಾನು ಶೂನ್ಯನಾಗಿದ್ದೇ
ಘನತೆಯಿಂದ ಬಂದು ಎನ್ನ ಘನವ ಕೆಡಿಸಿದೇ
ಮನೆಮನೆ ತಿರುಗಿಸಿದೇ || 8 ||
ಉಭಯ ವ್ಯಾಜ್ಯ ವಿಭಾಗಿಸುವ ಪ್ರಭು ಸ್ವರೂಪನೂ
ಅಭಯ ಪಾಲಿಪನಲ್ಲಿಸಾಹೇಬು
ಗುರುವಿರುತಿಹನೂ ನಡಿತನುವೆ ಹೋಗೊನೂ || 9 ||
ಸತ್ತು ಹೋದಾನೆಂದು ಲೋಕಾ
ಸತ್ತು ಹೋದಾನೆಂದು ಲೋಕಾ
ಸಾರಿಸಾರೀ ಹೇಳುತದೇ
ಅರ್ಥವೇನು ಹೋದ ಸಂಧೀ
ಅನುಭವಿಲ್ಲಾದಾಡುತಿದೇ || ಪ ||
ಪಂಚಭೂತ ಹೋಯಿತೆಂದೂ
ಪ್ರಪಂಚವೆ ಪಾಡುತದೇ
ಕಿಂಚಿತ್ಹೋಗಿ ತಮ್ಮ ಕುಲದ
ವಾಂಚಲ್ಯವೆ ಘನವಾಗ್ಯದೇ || 1 ||
ರೂಪು ಮಾಯಾವಾಯಿತೆಂದೂ
ರೂಢಿಯಲ್ಲ ಆಡುತದೇ
ಗೋಪ್ಯ ಮನಸೀನಲ್ಲಿ ಅದೇ
ರೂಪವು ನಿಜ ಕಾಣುತದೇ || 2 ||
ಶ್ರಮಾಭೂಸ್ಥಾಪ್ಯ ಮಾಡಲು
ಸಮಾಧಿ ಎಂದ್ಹೇಳುವರೂ
ಭ್ರಮಾ ಪುಟ್ಟಿ ಪೂಜಿಸಲ್ಕೆ
ಗಮಾಗಮಿಸಿ ಹೋಗುವರೂ || 3 ||
ಶಾಸ್ತ್ರಸಾಕ್ಷಿ ಗುರುವಿನೋಕ್ಯದಿ
ಸುಖದುಃಖವೆ ತಪ್ಪದಲ್ಲಾ
ಯೋಚಿಸಿ ನೋಡಲ್ಕೆ ಒಂದೂ
ಸಾಸಿವೆಷ್ಟೂ ಹೋಗಲಿಲ್ಲಾ || 4 ||
ಸತ್ತ ಗುರೀ ಗೊತ್ತು ಪೇಳ್ವಾ
ಸಾಯದಂತ ಸ್ಥಿರವು ತೋರ್ವಾ
ಮಸ್ತಿ ಮುರಿವನಲ್ಲಿಸಾಹೇಬು
ಗುರು ಮಾರ್ಗದಿ ಇದರನುಭವಾ || 5 ||
ಸುಳ್ಳುದಾವದ್ಹೇಳಿರಣ್ಣಾ
ಸುಳ್ಳುದಾವದ್ಹೇಳಿರಣ್ಣಾ
ಬಲ್ಲಂತ ಜನರೆಲ್ಲಾ ಭೇದಿಸೀರಣ್ಣಾ
ಸುಳ್ಳು ಕಂಡರೆ ಸುಖಾವಂತೇ
ಕಳ್ಳಮುದ್ರೆಗಳೆಲ್ಲಾ ಕಳಿಯೂವುದಂತೆ
ಎಳ್ಳಿನಷ್ಟೂ ದೋಷಿಲ್ಲಾವಂತೆ
ಅಲ್ಲಮಾ ಪ್ರಭು ಬೆರದಾಡುವೊದಂತೆ || 1 ||
ಲೋಕದೋಳ್ತುಂಬೀಹದಂತೆ
ಬಹುಪಾಕ ವಾದ್ಹಿರಿಯಾರು ಪೇಳೂವರಂತೇ
ಅನೇಕ ಕಾಲದಿ ಇರುವೋದಂತೆ
ಸೋಕಿಸೋಕದ್ಹಾಗೆ ಸುಳಿದಾಡೊದಂತೆ || 2 ||
ಇಲ್ಲ ಇದ್ದಾಂಗಿರುವೊದಂತೆ
ಎಲ್ಲಾರಲ್ಲಿರುವೋದಾ ಇಲ್ಲೆನಿಸ್ಯಾದಂತೆ
ಬಲ್ಲಾ ಶರಣರೆ ಬಲ್ಲಾರಂತೇ
ಕಲ್ಲು ಪೂಜಿಪರಲ್ಲಿ ಘನವಾಗ್ಯಾದಂತೆ || 3 ||
ಅನ್ನ ತೋರಿದರೆ ಹೋಗಾದಂತೆ
ಅರಣ್ಯ ಸೇರಿದಾಡೆಗಧಿಕಾಗೋದಂತೆ
ಬೆನ್ನತ್ತಿ ತಿರುಗೂವೊದಂತೆ
ಪುಣ್ಯ ಪುರುಷರಲ್ಲಿ ಪರಿಪಕ್ವವಂತೆ || 4 ||
ಸುಳ್ಳು ಶೋಧನೆ ಸಿಗುವದಕೇ
ಅಲ್ಲಿಸಾಹೇಬು ಗುರುಹಾನೆ ತಡವ್ಯಾಕೆ
ನಿಲ್ಲಾದೆ ನಡಿ ಕೇಳೂವದಕೆ
ಇಲ್ಲಾದ್ಹೋದರೆ ನಿಜ ನಿಲಕಾದೋ ಮನಕೆ || 5 ||
ಸದುಪಾಯ ಮಾರ್ಗದವರ
ಸದುಪಾಯ ಮಾರ್ಗದವರ
ಒದಗಿ ನಾನು ಕೇಳಿಕೊಂಬೆ
ಎದರಿಲ್ಲದಯೇಕೊನಾಥ ಕೇಳಿದದಕೆ ಹೇಳಿರೆಂಬೆ || ಪ ||
ಪರಸುಖಾ ದುರಾಸೆ ಇಟ್ಟು
ಕೊರತೆಯ ಮನ ಭೀತಿ ತೊಟ್ಟು
ನಿರುತ ಎನಗೆ ಮಾಡಿದಂ
ತ ಚರಿತೆ ದಾವದೆಂದು ಕೇಳ್ವಾ || 1 ||
ಭೂ ಗಗನದ ಮಧ್ಯದಿಂದೆ
ಬ್ಯಾಗ ಹೋಗಿರೆನುತಿಹನೇ
ಹೋಗದೀಗ ನಿಂತಾಗಳೇ
ಯೋಗಿಗಳಲ್ಲೆನುತಿಹನೇ || 2 ||
ಗುರುಮುಖ ಸಾಧನಗಳಿಂದ
ದೊರಿವನೆಂದುಡಿಕಿ ನಿಂದಾ
ಪರ ರಾಜರ ಸಾಧಿಸಿದಾ
ಪರಿಯನ್ನನು ಮಾಳ್ಪರೆಂದು || 3 ||
ನರರು ಮಾಳ್ಪನಡತೆ ಮರದು
ಸುರಾಸುರರ ಹಮ್ಮು ಪಿಡಿದು
ಗುರುಕುಮಾರ ರೆಂದ್ಹೇಳಲು
ಬರಿದೆ ಭ್ರಮೆಗಳನುತಿಹನೇ || 4 ||
ಜಗದಾಧ್ಯನ ನುಡಿ ಕೇಳಲು
ಹಗರಣ ನಮಗಾಯಿತಲ್ಲಾ
ಧಗಧಗಿಪಲ್ಲಿಸಾಹೇಬು ಗುರು
ಸೇವಕ ನಾ ಕೇಳ್ವೆನಲ್ಲಾ || 5 ||
ಕ್ಷೋಣಿ ಜನರೊಂದು ಕೂನ ಕೇಳ್ವರು
ಕ್ಷೋಣಿ ಜನರೊಂದು ಕೂನ ಕೇಳ್ವರು
ಜಾಣ ಸುಜ್ಞಾನಿಗಳೆ ಹೇಳಿರೈ || ಪ ||
ಕಂಡಿರಲ್ಲಾ ಖಂಡ ವಸ್ತುವ
ಇದೇ ಕಣ್ಣಿನಿಂದೆ
ಮಂಡಲದಿ ನೀವು ಕಂಡ ದಿನಸೇ
ಕಂಡೇವು ನಾವು ಕಾಣದಿರುವೊದ್ಹ್ಯಾಗೆ || 1 ||
ನಾಣ್ಯ ವಸ್ತ್ರದಿ ಮನ ರಕ್ಷಣೆ
ಪ್ರಾಣ ಸಮ್ಮತವೇ ಸಹಜವೇ
ಜ್ಞಾನವಿಲ್ಲದ ಹೀನಜನ
ಸಂಧಾನ ನಿಮ ಜ್ಞಾನ್ಹೆಚ್ಚೇನೆನುವರು || 2 ||
ಪಾತ್ರೆ ವಿಧ ಬಹೂಚಿತ್ರದಿಂ
ಈ ಧಾತ್ರಿಯೋಳಿಹವೆ ಸಹಜವೇ
ನೇತ್ರದಿಂ ನೀವು ನೋಡಿ ಕರಿಯುವ
ಗೊತ್ತಾಗ್ಯದೆ ನಿಜವಸ್ತು ಕಂಡದ್ಹ್ಯಾಗೆ || 3 ||
ನೀವು ಕಂಡದೆ ನಾವು ಕಾಣ್ವೆವೂ
ಭಾವ ನಿಮದೆಚ್ಚೇನು ಹೇಳಿರೈ
ಆವವಿಧದನುಭಾವವತಿಶಯ
ತೀವ್ರ ಹೇಳಿರಿ ಕೇಳುವೆವೆಂಬರು || 4 ||
ಕಡು ದುಗುಡವನು ಬಿಡಿಸುವ ಆಧ್ಯನು
ಪೊಡವಿಯೋಳಿಹನೇ ಪುಣ್ಯನೆ
ಜಡಮತಿ ಜನರನು ನುಡಿ ಛೇದಿಸುತಿಹ
ಗುಡಿಕಲ್ಲಲ್ಲಿಸಾಹೇಬು ಗುರುವರನೇ || 5 ||
ಬಲ್ಲಾವರ್ಯಾತಕೊಪ್ಪುವರೂ
ಬಲ್ಲಾವರ್ಯಾತಕೊಪ್ಪುವರೂ
ಬಯಲೇ ಬ್ರಹ್ಮವು ಎಂದೂ ಭಾವಿಸಿ ಪೇಳಾಲೂ || ಪ ||
ಬಯಲೀನೋಳ್ಬಿರುಗಾಳೀ
ಹೊಯಿದಾಡುವದು ಕೇಳಿ
ಉಭಯಾರು ಉಂಟೇನು ಪೇಳಿ
ಒಬ್ಬನಿಹ ನೋಡಿ ಹೇಳಿ || 1 ||
ಮಧ್ಯಾಹ್ನದೊಳು ಸೂರ್ಯ
ಮಹ ಬೆಂಕಿಮಯವಯ್ಯಾ
ರುದ್ರಾನ ರೌದ್ರಾವೆ ಬಯಲಾ
ರಂಜಿಸುವದೂ ಆ ವ್ಯಾಳ್ಯಾ || 2 ||
ಕಾಳಾರಾತ್ರಾಗಲೂ
ಕಾಣಬಾರದು ಬಯಲೂ
ಪೇಳಲ್ಕೆ ಪ್ರತಿನಾಮಗಿರಲೂ
ಬಯಲೇ ಭಾವ ಕೆಟ್ಟಿರಲೂ || 3 ||
ಇತರಿಲ್ಲದಿಹ ವಸ್ತೂ
ಏಕಾಂಗದರ ಶಿಸ್ತೂ
ಪ್ರತಿಯಿಲ್ಲದಿರುವೋದು ಇನಿತೂ
ಪೇಳೆ ಮತಿ ಕೆಟ್ಟೋಯಿತು || 4 ||
ಬಯಲಾಗಿರಲಿ ಬೇಕು
ಪ್ರತಿ ಇಲ್ಲದಿರಬೇಕು
ಮೂಲ ಮೂರ್ತಲ್ಲಿಸಾಹೆಬೂ
ಗುರುಮನ ಒಪ್ಪಾಬೇಕು || 5 ||
ಬೇಡೂವರೇನೋ ಹಿರಿಯರು ಮೋಕ್ಷಾ
ಬೇಡೂವರೇನೋ ಹಿರಿಯರು ಮೋಕ್ಷಾ
ಬೇಡೂವರೇನೋ ಈ ರೂಢಿ ಜನರ ಹಾಗೆ
ಈಡಿಲ್ಲ ಪ್ರಭು ಒಡಗೂಡಿ ಆಡುವೋ ಪ್ರೌಢ ಮನುಜರೂ || ಪ ||
ಸೂರ್ಯ ಪ್ರತಿ ಬೆಳಕಾ ಬಯಸೂವೊದುಂಟೇ
ಧೀರತಾನೇಕಾ ಹಾರ್ಯರಾ ವಿಧವಾಗೀ ಅವನೊಳೈಕ್ಯವಾಗೀ
ಧಾರೂಣಿ ತರಿದು ಹೊರಟ್ಹೋಗುವರು ಬಹು ಧೀರರಾಗಿ || 1 ||
ಮಧುರುಳ್ಳ ಜೇನೂ ಕಬ್ಬಿನ ಸ್ವಾಗೆ ತುದಿ ಕೇಳ್ವದೇನೂ
ಹೃದಯಾಧಿಕನ ಕಂಡೂ ಪದವಿ ತಾವು ಕೈಕೊಂಡು
ಕದನುಳ್ಳ ಕಲಿಯುಗ ಸದೆ ಬಡಿದು ಹದಮಾಳ್ಪ ಅಧಿಕರು || 2 ||
ಜಲಗಂಗನಿಂದೆ ಚಲಿಮೆಯ ಉದಕ ಚಲೊಸವೆನ್ನುವದೇ
ಬಲು ದುರಾಸೆ ಸ್ವರ್ಗಾ ಭಯವುಳ್ಳ ಯಮ ಮಾರ್ಗಾ
ಲಯಮಾಳ್ಪ ಹಿರಿಯರು ಭಯವು ಭಯವು ಬಯಸುತಿಹರೇ || 3 ||
ಧನಪತಿ ತಾನೇ ದಾರಿದ್ರನ ಧರ್ಮಾ ಬೇಡುವನೇ
ಘನಕೃಪ ರಸಗುರೂ ಧಣಿಯಾಗಿ ನಿಂತೀರೆ
ತನಸೋಂಕಿದವರೆಲ್ಲ ಕನಸೆಂದು ಸ್ವರ್ಗನುವೊರಲ್ಲಾ || 4 ||
ಸಾಧು ಸಭರತ್ನಾ ಅಲ್ಲಿಸಾಹೆಬು ಗುರು ಸಂಜೀವನಾ
ಬೊಧಾದಿಪ್ರಭು ಬೆರಿವೋ ಭೇದಾ ದಯಾ ಮಾಳ್ಪನು
ಗಾಧೆ ಇಹ ಸ್ವರ್ಗ ಬೋಧ ಬದಿಯಲಿ ಓದೋದುಂಟೆ || 5 ||
ಬೆಳವದಣ್ಣ ಕರ್ಮಾ ಇಳಿಯೊಳು
ಬೆಳವದಣ್ಣ ಕರ್ಮಾ ಇಳಿಯೊಳು
ತಿಳಿಯದಿರುವೆ ಮರ್ಮಾ
ಒಳ ಹೊರಗೇ ನೀ ಉತ್ತುಮನಾಗದೆ
ಪ್ರಳಯಕ್ಕೆ ಸಿಕ್ಕು ಪ್ರಳಾಪಿಸವೆ ಕೇಳ್ || ಪ ||
ಮಡದಿಯಿಂದ ಘಟವೂ
ಕಡುಸುಖ ಬಡುತಿಹದೆನುತಿಹೆವೂ
ನಡಿವೆ ಬಂದಿಹದು ಹುಡುಗಾಟಿಕೆಯೊಳು
ನಡತಿ ತಪ್ಪಿ ನೀನುವೊದಕ್ಕೆ ಕೇಳ್ || 1 ||
ಕ್ಷೀರಘ್ರತ ಸಹಾಯಾ ದೇಹ
ತೋರುತಿಹದು ಕಳೆಯಾ
ಆರ ಭಯವಿಲ್ಲದಾಡುತಿರುವೆ ನೀ ಧಾರುಣಿ ಧಣಿ
ಪ್ರಭು ಮೀರಿ ಮರತದಕೆ || 2 ||
ದ್ರವ್ಯಧಾನ್ಯದಿಂದೇ ಶುಭ ಸುಖ
ಅವ್ಯಕವ್ಯವೆಂದೇ ಸಾಯ್ವ ಕಾಲದೊಳು
ಸಹಾಯವಿಲ್ಲದೆ ಕೈ ಒಳಗಿದ್ದರು
ಕಾಣಬಾರದೈ || 3 ||
ಶುನಕನ ಮೈಮ್ಯಾಲಾ ಪಾಷಾಣ
ಸುಲಭದೊಗಿವ ಬಾಲಾ
ಎನಮ್ಯಾಲಿದು ಯಾವುಪರಿ ಬಂತೆಂಬದು
ಶುನಕಗೆ ತಿಳಿಯದು ನಿನಗಾವಿಧ ಕೇಳ್ || 4 ||
ದೇವರ ಸ್ನೇಹಿತನೋ ಅಲ್ಲಿಸಾಹೆಬು
ಗುರುದೇವರು ತಾನೋ
ಕೇವಲ ಸೇವಕ ಜನ ಸಂಜೀವನ
ಕೈಯೋಳು ಶಿಶುವಾದರೆ ಕರ್ಮಿಲ್ಲವು || 5 ||
ಸಾಯದ ಮುಂದೇ ಸತ್ತ ಸಾಂಗತ್ಯ ಸಾಧನೆ ಅಲ್ಲಣ್ಣಾ
ಸತ್ತು ಹೋದವರ ಗೊತ್ತು ಹೇಳಿದವ ಸತ್ತಿರುತಿಹನಣ್ಣಾ || ಪ ||
ಮುದ್ರೆಯಿಂದ ಈ ಮೂಲದೊರಿಯದೂ
ಮೋಸವಾದಿತಣ್ಣಾ
ಭದ್ರವಾದ ಪ್ರಭು ಮಾರ್ಗದವರಿಗೆ
ಬಯಲಾಗಿಹುದಣ್ಣಾ || 1 ||
ಯೋಗ ಸಾಧಿಪರು ವ್ಯರ್ಥವಾಗುವರು
ಯೋಗಿಗಳಲ್ಲಣ್ಣಾ
ಮೂಗು ಪಿಡಿದು ಸಂಧ್ಯಾಗಮ ಜಪತಪ
ಬಹು ಮತ್ಸರವಣ್ಣಾ || 2 ||
ನಾಶಿಕ ಶ್ವಾಸವು ಈಸಾಯ್ತೆಂಬದು
ಕಾಸಿನ ಕಾರ್ಯಣ್ಣ
ಆಶೆಯಿಂದ ಆಯುಷ್ಯ ಹೆಚ್ಚಿಪರು
ಮೋಸಗಾರರಣ್ಣಾ || 3 ||
ನೇತ್ರ ಲಕ್ಷ್ಯದಿಂ ನಿತ್ಯ ಕಂಡಿತೆಂಬ
ನೀಚರು ನೋಡಣ್ಣಾ
ಧಾತ್ರಿ ಪಶುವಿಗೀ ನೇತ್ರವುಂಟು
ಆ ಸೂತ್ರವಾಯಿತಣ್ಣಾ || 4 ||
ನಿನ್ನ ತಿಳಿಪದಲ್ಲನ್ಯ ಮಾರ್ಗವಿದು
ಧನ್ಯರೊಪ್ಪರಣ್ಣಾ
ಚಿನ್ನ ರಸಿಕ ಅಲ್ಲಿಸಾಹೆಬು ಗುರುವಿನ
ಸೇರಿರುತಿಹುದಣ್ಣಾ || 5 ||
ಕಿರಿತನಕೇ ಸರಿ ಇಲ್ಲೆಂಬುವದೂ
ಕಿರಿತನಕೇ ಸರಿ ಇಲ್ಲೆಂಬುವದೂ
ಅರಿತವಗೆ ಇದರ ಅನುಭವಾ
ಧರೆಪಾಲಿಪ ದೊರೆ ನೋಡಣ್ಣಾ
ತರುಳರ ತಪ್ಪಿಡಿಯದೆ ಇರುವಾ || ಪ ||
ಮನೆ ಹಿರಿಯ ಚಿಕ್ಕ ತರುಳ ನಾ
ಮ್ಯಾಲತಿ ದಯ ಮರಿಯದೆ ಇಡುವಾ
ನೀನೆ ಕಿರಿಯ ನಿಜವಾಗಾದರೇ
ತಾನೆ ನೋಡಿ ದಯ ಪಾಲಿಸುವಾ || 1 ||
ಜ್ಞಾನ ಮುಖದ ಶೋಧನೆಯಿಂದೆ
ನೀನೇ ಚಿಕ್ಕವನಾದರೆ ಮುಂದೆ
ಏನು ಜಡರಿಗೊಪ್ಪಿಸಿ ಕೊಡದೇ
ಪೂರ್ಣಪುಣ್ಯ ಪೊರಿವನಲ್ಲದೇ ||2 ||
ಮಕ್ಕಳ ಮುದ್ದಿಕ್ಕುತ ಮೋಹದಿ
ಅಪ್ಪಿಕೊಂಡು ಆಡಿಸುತಿಹರೂ
ತಪ್ಪು ಅವರ ಕಡೆಯಿಂದಾಗಲೂ
ಅಪ್ಪ ಬಾ ಎಂದ್ಹರುಷ ತಾಳ್ವರೂ || 3 ||
ಕ್ಷಿಪ್ರತಂದು ಕ್ಷೀರಸಕ್ಕರೆ
ಚಿಪ್ಪಿಲಿಯರಿಯುತ್ತ ಇರುವರೂ
ನೆಪ್ಪಿನಿಂದ ಚಿಕ್ಕವನಾಗಿರೂ
ತಪ್ಪನದೆ ರಕ್ಷಿಪ ದೇವರೂ || 4 ||
ಛೇದಿಸಿ ನೋಡಣ್ಣಾ ಕ್ಯಾದಿಗೇ
ಚೆಲೋ ಪರಿಮಳಿಹದದರೊಳಗೇ
ಶೋಧಿಸೆ ಸಣ್ಣಿರುತಿಹ ಸ್ವಾಗೇ
ಶ್ರೇಷ್ಟಾಗ್ಯದೆ ತಿಳಿ ಜಗದೊಳಗೇ || 5 ||
ತಾ ಧರಿಪರು ಶಿರದತಿ ಬ್ಯಾಗೇ
ತಮ್ಮ ಗರ್ಭ ಶಿಸು ಮಕ್ಕಳಿಗೇ
ಬೋಧದಲ್ಲಿ ಕಿರಿತನ ನಿನಗೇ
ಆ ಧರಿಪರ ಹುಡುಕತಿ ಬ್ಯಾಗೆ || 6 ||
ಕಿರಿತನದ ಗುಲಾಮ ನೀಡೂ
ಸರಿಬಾರನು ಶೂರನು ನೋಡೂ
ದೊರೆ ಅರಮನೆ ಅರುತಿಹ ಜಾಡೂ
ಇರುತಿಹ ರಾಣಿಯರನು ಕಂಡೂ || 7 ||
ವರಹ ಹತ್ತು ಸಾವಿರ ತಿಂಬಾ
ಪರಾಕ್ರಮರ ಹೊರಗಿರು ಎಂಬಾ
ಶಿರಬಾಗಿ ನೋಡದಿರೆಂಬಾ
ಕಿರು ಮನುಜನ ಒಳಗೋಗೆಂಬಾ || 8 ||
ವಿಸ್ಮಯ ಬಡುದಿರು ನೀ ನಿಜದಿ
ಈ ವಿಚಾರ ತಿಳಿದರೆ ಗೆದ್ದೀ
ವಿಶ್ವತುಂಬಿ ತುಳುಕುವೊ ಹಾದಿ
ಅಲ್ಲೀಸಾಹೇಬು ಗುರುವೆ ಗುಣನಿದಿ || 9 ||
ಮಸ್ತಕಿಡೋ ಆತನ ಪಾದದಿ
ಅಸಹ್ಯ ಕಿರಿತನ ಬೇಕಂದೀ
ಸುಸ್ತಾದರೆ ನೀ ಬಹುಬೆಂದೀ
ಶಿಸ್ತು ಬೇಡ್ವರಿಲ್ಲೀ ಜಗದೀ || 10 ||
ಎಚ್ಚರ ಮರತಿರಲಿ ಬ್ಯಾಡಿರಿದೂ
ಎಚ್ಚರ ಮರತಿರಲಿ ಬ್ಯಾಡಿರಿದೂ
ಸಮಯ ನೋಡಿರೀ
ಮತ್ಸರದಿಂ ಹೊತ್ತು ಕಳದರೇ
ವ್ಯರ್ಥವಾದಿರೀ || ಪ ||
ಮರಣ ಬಾರದ ಮುಂದೆ ಹೊರಡುವಾ
ಮಾರ್ಗ ಕಾಣಿರೀ
ಕರುಣುಳ್ಳಾ ಗುರುವಿನ ಪಾದಾ
ಬೆರದು ನೋಡಿರೀ
ಶರೀರಿಡಿದು ಸಾಧೀಪ ದಾರೀ
ಬೆರಿಯ ಬ್ಯಾಡಿರೀ
ನರನ ನಾಮಕೆ ಗುರುತೇನುಂಟೋ
ತ್ವರಿತ ಕಾಣಿರೀ || 1 ||
ಸುಖವು ದುಃಖ ಮಿಕ್ಕ ಸುಲೀಲಾ
ಸಾಕ್ಷಿ ನೋಡಿರೀ
ಸಕಲ ಸಂಶಯ ಜಯಿಸುವೊ ಜ್ಞಾನಾ
ಶರಧಿ ಕಾಣಿರೀ
ಪ್ರಕೃತ ಶ್ರಮದೊಳು ಸಮಾಧಿ ನಿಂತದೆ
ನಿಕರ ನೋಡಿರೀ
ಮುಕುತಿ ಬೇಡುವ ಮಾರ್ಗವಿದಲ್ಲಾ
ಮರಿಯಬ್ಯಾಡಿರೀ || 2 ||
ಆಶೆ ಭಯಕೇ ಅಧಿಕ ದಾರಿದೂ
ಸೂಸಿ ನೋಡಿರೀ
ಮೀಸೆಯುಳ್ಳ ಪುರುಷರ ಬಿರಿದೂ
ಕಾಶಿ ಧರಿಸರೀ
ಆಶೆ ಸ್ವರ್ಗ ಯಮನ ಭಯಕೇ
ಅಯ್ಯೋ ಎಂದಿರೀ
ಗೀಚಿ ಬಿಡುವ ಪ್ರಭು ಲೆಕ್ಕದೊಳೂ
ಸ್ತ್ರೀಯರೇ ಸರೀ || 3 ||
ಇಂದಿನವರ ನುಡಿ ಎಲ್ಲೆಂದು
ಎಂದಿಗನದಿರೀ
ಕುಂದಿಲ್ಲದ ಪ್ರಭು ಇಲ್ಲಹನೇ
ಮುಂದೆ ಕಾಣಿರೀ
ಸಿಂಧು ಸಿಗಲು ಸಣ್ಣ ಹಳ್ಳವು
ಚಿಕ್ಕದೆನ್ನಿರೀ
ಹೊಂದಿದರೇ ಇದರನ್ಮಯವೂ
ಅಂದ ಕಂಡಿರೀ || 4 ||
ಅವನಿಯೋಳೇಳಲ್ಕೆ ಬಾರದಿದೂ
ಅಹುದು ಎನ್ನಿರೀ
ಕವಿಜನರಿಗೆ ಕಲಹವಾಗ್ಯದೇ
ಕಂಡು ನೋಡಿರೀ
ಅವಿರಳದೊಳು ಅಡಗಿ ಇದ್ದಿರಿ
ಮರತುಬಿಟ್ಟಿರೀ
ಭುವಿರತ್ನಲ್ಲಿಸಾಹೆಬು ಗುರುವಿನಾ
ಬ್ಯಾಗೆ ಕೇಳಿರೀ || 5 ||
ಎಂತ ಭಕ್ತರೋ ಇವರೂ
ಎಂತ ಭಕ್ತರೋ ಇವರೂ
ಎಂತ ದೇವರೋ ಅವರೂ || ಪ ||
ಧೂಳಿ ಹೋಗಿ ರವಿ ತಾಕದು ಎಂದು
ಮೈಲಿಗೆಂಬದೊ ಮೊದಲಿಲ್ಲೆಂದು
ಕೇಳಿ ಕಂಡು ಇದು ಕಷ್ಟಿಲ್ಲೆಂದು
ಕೀಲಿ ಹಿಡಿದು ದೇವರ ಸ್ತುತಿಸೋದೂ || 1 ||
ಸ್ವಲ್ಪ ಕಾರದಿಂದಿಕ್ಷುಸಾಗರಾ
ಸಾರ ಕೆಡದು ಎಂದೆಂದಿಗೆ ಮಧುರಾ
ಕಲ್ಪಿತ ನಿಜ ಕಂಡಿರುವರು ಪೂರಾ
ಮೂಲ್ಪಿಡಿದೆಮ್ಮನು ರಕ್ಷಿಪು ಎಂಬರಾ || 2 ||
ವಜ್ರಾಯುಧದಿಂ ಹುಲ್ಲು ಹೋಗುವದು
ನಿರ್ಧತಮ್ಮೊಳು ನಿಜವೇ ತಿಳಿದೂ
ಭದ್ರವಾಗಿತಾವದು ಭಾವಿಸಿ ನಿಜವಿದ್ದರೆ
ಎಮ್ಮನು ನೀ ಪೊರಿ ಎಂಬದೂ || 3 ||
ಅಹಾಲ್ಯ ಅಡವಿಯೊಳು ಬಿದ್ದದು ಕೇಳಿ
ಬಾಲೆ ಎದ್ದು ಬಹು ದೈರ್ಯವು ತಾಳಿ
ವ್ಯಾಳ್ಯ ಇದೆ ಎಂದೊಚನವು ಹೇಳೀ
ಮೂಲದಿಂದ ಮೂಗಿಡುವರು ಕೇಳೀ || 4 ||
ದ್ರೌಪತಿ ಮನವು ತೀವ್ರದಿ ಪೊರತೀ
ಈ ಪೃಥವಿಯೊಳಹುದೆನಿಸಿ ಕೊಂಬುತೀ
ಈ ಕಥೆ ನಿಜವರೆ ಎಮ್ಮ ಪೊರಿಯುತೀ
ರೀತಿ ಕೇಳ್ಬಹುದೆ ಭಕ್ತರ ವೃತ್ತೀ || 5 ||
ವಿಭೀಷಣಗೆ ಲಂಕಾದ್ರಿಯ ಕೊಟ್ಟೀ
ಅಭಯವಲ್ಲದಿರೆ ಎಮ್ಮನು ಬಿಟ್ಟೀ
ಕುಭಾವ ಕೇಳದೆ ಬಿರಿದನೆ ತೊಟ್ಟೀ
ಸ್ವಭಾವ ಕೇಳ್ತಿಹ ಭಕ್ತರ ಮೇಟೀ || 6 ||
ಶೌರ್ಯಯಿಟ್ಟು ಬಹು ಸಿಕಂಚಿದೊಳಗೆ
ಸೇರಿಸಿ ನೋಳ್ಪರು ಸರಿಯೇ ತಮಗೆ
ಆರ್ಯ ಅಲ್ಲಿಸಾಹೇಬು ಗುರು ಸ್ವರೂಪಗೆ
ಕ್ರೂರರು ಕಾಂಬರು ಕುಟಿಲದಿ ಹೀಗೆ || 7 |
ಗುರುಪುತ್ರರಿಗೆ ನಾನು ಶಿರಬಾಗಿ ಕೇಳ್ವೆನೂ
ಗುರುಪುತ್ರರಿಗೆ ನಾನು ಶಿರ ಬಾಗಿ ಕೇಳ್ವೆನೂ
ಸರೆ ತಪ್ಪೊ ಪರಿಯನ್ನೂ ಕರುಣೀಪದೂ || ಪ ||
ದೇಹ ತಪ್ಪಾದವೂ ದಿಕ್ಕೇ ತಪ್ಪಿದ್ದೆವು
ಧನ್ಯಾರೆ ಸರೆ ನೀವೂ ದಯಮಾಡಿರೀ
ದೈವಾ ಕಾಯುವನೆಂದೊ ದೈನೋಕ್ತಿಯಲಿ ನಿಂದೂ
ಬಾಯಿಲೊಪ್ಪಿದ ಮ್ಯಾಲೆ ಬಹುಭಾರ ಎಮಮ್ಯಾಲೇ || 1 ||
ಪೃಥ್ವೀ ಆಳುವ ರಾಜಾ ತಪ್ಪೇ ತಿಳಿದರೆ ಸಹಜ
ಮುಪ್ಪೂರ ಪೇಳಾಲೂ ಬಿಡನೂ ನಿಜಾ
ಅಪ್ಪೀ ಬಂದುಜಾಲ ಅಯ್ಯೋಂದರಾಕಾಲಾ
ಒಪ್ಪೀಹ ನೆನ್ನೂತ ಅಪ್ಪಳಿಸೂವ ದಾತಾ || 2 ||
ಅನ್ಯಾರ ನೋಯಿಸೂತಾ ಎನ್ನಾ ಕಾಯನ್ನೂತಾ
ಮುನ್ನಾ ನಾ ಪೇಳಲೂ ಮೆಚ್ಚಾದಾತಾ
ಎನ್ನಿಮದ ನೊಂದಾವ ಮುನ್ನೆ ತಾ ಸ್ತುತಿಸುವಾ
ಎನ್ನಾ ಕೈ ಯೊಳಗಾ ನನ್ನೇ ಬಂಧಿಸಿತಾಗಾ || 3 ||
ದಾತ ನೋಳ್ಬೆರದಾರೂ ದುರಿತ ಬಿಡದೆಂದಾರೂ
ಧಾತ್ರೀಯೋಳ್ ಹಿರಿಯಾರೂ ಪೇಳಿಹರೂ
ಈ ಮಾತ ಕೇಳಿ ನಿಮ್ಮಯ ಮೊರೆ ಹೊಕ್ಕು ಬೇಡೂವೇ
ಪ್ರೀತಿಯಿಂದಲಿ ಎನ್ನಾ ಭೀತಿ ಬಿಡಿಸಬೇಕೂ || 4 ||
ಆದಿ ಅಂತರ್ಯಾವನಾದೀ ಬಹಿರಂಗಾವೂ
ವಿನೋದವೊಂದುವ ವಿವರಾ ಹೇಳುವದೂ
ಅಧಾರವಾಗಿರುವಾ ಅಲ್ಲಿಸಾಹೆಬು ಗುರುವಾ
ಅಹುದೆಂದೊಪ್ಪಿರಬೇಕೂ ವತಿಧೈರ್ಯವಿರಬೇಕು || 5 ||
ಮಿತ್ರರಾಗಿಹರೆಂದು ಈ ಮಹೀಜನರ
ಮಿತ್ರರಾಗಿಹರೆಂದು ಈ ಮಹೀಜನರ
ನೀ ನನತ್ಯಾಂತ ಸ್ನೇಹದಿಂದಾಡದಿರು ಮನುಜಾ
ಪ್ರತ್ಯಕ್ಷವ ಪ್ರಮಾಣದ ಪ್ರಪಂಚದ ನಡತಿ
ದೃಷ್ಟಾಂತ ತೋರುವೆನು ದಾರಿ ಹಿಡಿ ಸಹಜಾ || ಪ ||
ಅರ್ಧಾಂಗಿನಿಯಳಾಗಿ ಅನುದಿನವು ನಿನ ರುಚಿಯು
ಪೀರ್ದು ಬಹು ಕಾಲದಿಂದ ತನಪ್ರೀಯವಾ
ವೃದ್ಧಾ ನೀನಾಗೆ ನೀನಿದ್ದ ಠಾವಿಗೆ ಬರದೆ
ಶ್ರಾದ್ಧ ಹೋಗದಿದೆಂದು ನಿನ್ನ ಶಪಿಸುವಳೂ || 1 ||
ಜಗದಾಂಬಕನ ಕಂಡು ಜಾಗ್ರದಿಂ ಕಮಲಗಳು
ನಗಿ ಮುಖದಿ ಸೊಗಸಾಗಿ ಮೊಗವು ಮ್ಯಾಕೆತ್ತೇ
ಹಗೆಯಿಂದಲಾ ನೀರು ಅಣುವಿಲ್ಲದಲೆ ಮಾಡಿ
ಧಗಧಗಿಪ ಕಿರಣದಿಂದಗ್ಧ ಮಾಡುವನೂ || 2 ||
ನಿನ್ನೊಳತಿ ದ್ರವ್ಯವಿರೆ ನಿನ್ನಿಂದೆ ತಿರುಗುವರು
ನಿನ್ನಿಂದ ಕೆಲವು ದ್ರವ್ಯವು ಧರಿಸುತಿಹರೂ
ನಿನ್ನ ದ್ರವ್ಯವು ಸರಿಯೆ ನಿನ್ನೊಳತಿ ಶತ್ರುತನ
ಗನ್ನಘಾತಕ ತನವು ಘನ ಮಾಡುತಿಹರೂ || 3 ||
ಹುಲಿ ತನ್ನ ನೇತ್ರ ವೇದನೆ ತಾಳಲಾರದೆ
ಬಲಿಸುವದು ತನ್ನ ಬಾಲಕರನ್ನದೇ
ಕಲಿಜನರ ಶತೃತ್ವ ಕುಟಿಲ ಬಹು ಹುಲಿಗಿಂತ
ಹೊಲಬನರಿದಿವರ ಹೊಂದಿರಬ್ಯಾಡೋ ಮನುಜಾ || 4 ||
ಹರಿ ಅಜಾದಿಗಳಿಗಧಿಕನ ಕಂಡು ನೀನಿರೂ
ನರರು ಮುನಿದರೆ ಏನು ಮಾಡದಿರುತಿಹರೂ
ಗುರಿ ತಿಳಿಯಲಿಕ್ಕೆ ಗುಡಿಕಲ್ಲು ಅಲ್ಲಿಸಾಹೇಬು
ಗುರುಚರಣದಲ್ಲಿ ಸಾಯದೆ ಸತ್ತಿರೂ || 5 ||
ಒಂದು ನಡತಿ ನಡಿಯದೆ ಇರುತೀರಲ್ಲಾ
ಒಂದು ನಡತಿ ನಡಿಯದೆ ಇರುತೀರಲ್ಲಾ
ಕಡಿಮೇ ನಡತೀಗಳೆಲ್ಲಾವು ನಡಿಯೂವಿರಲ್ಲಾ || ಪ ||
ದಾಹವಾಗದ ಬಾವಿ ನೀರೂ
ದಣಿದು ಮುಂದೆ ತಂದಿಡುವಿರೀ
ಭಾವವೆಲ್ಲಾ ನ್ಯಾಯವೇ ಸೈ
ಸಾಯದಾ ಮುಂದೆ ಸಾಯುವಂತಾ || 1 ||
ಹತ್ತು ವರುಷದ ಭತ್ಯವಿರುತಿರೆ
ಮತ್ತೆ ಮುಂದಿನ ಯತ್ನ ಯೋಚನೆ
ಮತ್ರ್ಯವೆಲ್ಲಾ ಮಾಳ್ಪೊದಲ್ಲಾ
ಸತ್ತು ನಿಲ್ಲುವೊ ಯತ್ನವಿಲ್ಲಾ || 2 ||
ಛಳೀ ಮಳಿಗೆ ಸಿಗದಂತೆ ದೇಹವು
ಒಳ ಹೊರಗೆ ವಸ್ತ್ರಂಗಳೊದಿಸುವೇ
ಪ್ರಳಯ ಕೈ ಸಿಗದಂತಾನುಭವ
ಘಳಿಲನೇ ನೀ ತಿಳಿಯಲಿಲ್ಲಾ || 3 ||
ಒಬ್ಬರೊಡವಿನ್ನೊಬ್ಬ ಕೇಳಲು
ಎಬ್ಬಿಸಿಲ್ಲಿಂದೆನುವಿಯಲ್ಲೋ
ತದ್ವಿಧದಿ ನಿನ್ನೊಡಿವೆ ಗುರುವಿನ
ಹದ್ದಿನೋಳ್ಪರಿಸೊ ವಿಧಾನ || 4 ||
ಮಂಡಲವ ತುಂಡಾಗಿ ಹೋಗುವ
ಚಂಡ ಮಾರುತ ಪ್ರಳಯಕ್ಕೆ
ಎದುರ್ಗೊಂಡು ನಿಲ್ಲುವ ಅಲ್ಲಿಸಾಹೆಬು
ಗುರುಮಂಡಲದಿ ಸುಗುಣನಾಗುವ || 5 ||
ಜಾಣರಾದವರುಗಳು ಗಾಣದಂತಿರುವ
ಜಾಣರಾದವರುಗಳು ಗಾಣದಂತಿರುವ
ಘಟ ಜಾಣತನದಲಿ ಇದರ ಕ್ಷೀಣಿಸಲಿಬೇಕೂ || ಪ ||
ಕರಡಿ ಅಜ್ಞಾನ ಧರಿಸಿ ತನ್ನ ಪೊರತ
ವನ ಶಿರವ ಛೇದಿಸಿದಂತೆ ಈ ಘಟವನೂ
ಅರಿವಿನಿಂತರಿತರಿದು ಅತಿ ಮೋಹ ತೊರಿದು
ದುರ್ಮರಣಕ್ಕೆ ಸಿಗದಂತ ದಾರಿ ನೋಡುವದೂ || 1 ||
ಗಿಳಿತನ್ನ ಘನ ಉಪಾಯದಿ ಸಾಯಿದೆ ಸತ್ತು ಬಿದ್ದಿರೇ
ಒಳಗಿಂದ್ಹೊರಗಾಕಲಾರಿ ಹೋದಂತೇ
ಪ್ರಳಯ ಬಾರದ ಮುಂದೆ ಘಟ ಬಿಟ್ಹೊರಡುವಾ
ಹೊಲಬ ನರಿದಿದರ ಒಡದ್ಹೋಗುವದೇ ವಿಹಿತಾ || 2 ||
ತಾಯಿಗಬಲತ್ವವಿರೆ ಕೂಸಿಗತಿ ಲಘುವೂ
ತಾಯಿ ಬಲವಿರೆ ಕೂಸಿಗಬಲತ್ವವೂ
ನ್ಯಾಯ ತಿಳಿದೀ ಘಟವು ನಶಿಸಿದಾಗಲಾ ಪ್ರಾಣ
ಮಾಯ ವಿರಹಿತವಾಗಿ ಮೆರವುತ್ತಲಿಹುದು || 3 ||
ತರುಣುದಯವಾದಾಗ ತಮನಸಿದು ಹೋದಂತೆ
ಗರುವಿಕೆಯ ತೋಳಘಟ ಹುಲಿ ಹೊಡದ ರೀತೇ
ನರಿಯು ನಗುತಾಗ ಶನ್ನಾನಂದ ಬಟ್ಟಂತೆ
ಪರಿಪೂರ್ಣ ಪ್ರಾಣಕಳೆ ಘಟವು ನಶಿಯಲ್ಕೆ || 4 ||
ಹಳೆ ಅಂಗಿನೀ ತೋರಿದಂತಿದರ ಮರಿಯೂದಿ
ಗಳಿಲನೇ ತೋರ್ವ ಅಲ್ಲಿಸಾಹೆಬು ಗುರುವಾ
ಒಳಗಾಗದಿರೆ ಕೇಳು ಪ್ರಳಯ ಕಾಲದಿ ನಿನಗೆ
ತಳಮಳವು ಚಿಳಿ ಚಿಟಲು ಮಳೆಯು ಸುರಿದಂತೇ || 5 ||
ಹೀನಮತಿ ಇಹ ಜನರೆ ಜ್ಞಾನಿಗಳ ಸಂಗದನ್ಯೊನ್ಯ
ಹೀನಮತಿ ಇಹ ಜನರೆ ಜ್ಞಾನಿಗಳ ಸಂಗದನ್ಯೊನ್ಯ
ವಿಲ್ಲದತಿ ವಾದ ಮಾಡುವರೇ
ಪ್ರಾಣ ಪರಮಾತ್ಮನೋಳ್ ಬೀಳ್ಕೆಡಹಿ ಪ್ರಳಯವನು
ತಾನುಂಡು ಜೀರ್ಣಿಪರು ತ್ರಾಣವುಳ್ಳವರೂ || ಪ ||
ಪರವಸ್ತು ಕಂಡದಕೆ ಧರೆ ಜನರ ಸಂಪತ್ತು
ಅರಿಯದೇ ಕರಕರಿಯೊಳೊರಳುವದಿದ್ಯಾಕೆ
ಸರಿತನಯ ಸತಿ ಸಹಿತ ಮರಣ ವ್ಯಾಕೆಂದೆನುತ
ಪರಿಹಾಸ್ಯ ಮಾಳ್ಪರಿಗೆ ಪೇಳುವೆನು ಕೇಳೀ || 1 ||
ದುರ್ವಿಭೀಷಣ ಊರ್ವಿ ಸುಖವು ಬೇಕಾದದಕೆ
ಪರ್ವತಕೆ ಮೀರಿದಣ್ಣನ ಬಲಿಸಿದಾ
ಸರ್ವ ಜೀವರ ದೈವಾ ಸಾಕ್ಷಿಯಾಗುವದಕ್ಕೆ
ಸತಿಯೇನು ಸುತನೇನು ಹತವಾಗಬಹುದೂ || 2 ||
ಅತಿ ಶೂರ ಫಲ್ಗುಣನ್ನೊಂದು ಕ್ಷೋಣಿಯ ಬಲಿಸಿ
ಶತ ಸಹೋದರನ ಭೀಮ ಚಂಡಾಡಿದಾ
ಕ್ಷಿತಿ ಸುಖಕೆ ಇಷ್ಟಾಯಿತು ಮಿತಿ ಮಿಕ್ಕ ಪ್ರಭು ಸುಖಕೆ
ರತನೇನು ರಾಜ್ಯೇನು ಹತವಾಗಬಹುದೂ || 3 ||
ಅತಿ ದ್ರವ್ಯ ತರುತಿರಲು ಅಶುವಾಯ್ತೆನಲು ಒಬ್ಬ
ಅತಿ ತೂರ್ಯ ಅನ್ನನಾ ತರುವೆ ಹೋಗೆನಲು
ಮತಿಗೇಡಿ ಅನ್ನದೊಳು ವಿಷಹಾಕಿ ತಂದಿಡಲು
ಹತವಾದರಿದರ ಸ್ನೇಹಿತವ್ಯಾಕೋ ಮರುಳೇ || 4 ||
ದಿಟ್ಟ ಗುರುವಲ್ಲಿಸಾಹೇಬು ಗುರು ಮಾರ್ಗದೊಳಗೆ
ಅಡಿಯಿಟ್ಟು ಹಿಂದಕೆ ತೆಗೆದವ ಪುರುಷನಲ್ಲಾ
ಘಟ್ಟವೂ ಶಿರದಮ್ಯಾಲ್ತಟ್ಟನೇ ಬೀಳ್ವದನು
ಪಾದಾಂಗುಷ್ಟದಿಂದ ಪಾರು ಮಾಡುವನೂ || 5 ||
ಹಿರಿಯರೊಂದಿದವ ವಿಚಾರದೋಳಿರಬೇಕು
ಹಿರಿಯರೊಂದಿದವ ವಿಚಾರದೊಳಿರಬೇಕು
ಭರಿತ ಅಭರಿತ ಉಭಯ ಭೇದಿಸಲಿಬೇಕು
ಸಿರಿನೆಚ್ಚಿ ಚಿದ್ಘನದ ಸುವಿಚಾರವರಿಯದಿಲೆ
ಪುರುಷಿಲ್ಲದ ಬಲೆ ಮರಿಯಾದಿಲ್ಲದಂತೇ || ಪ ||
ಅಲ್ಲೆಲ್ಲಿಗಹುದೆನಿಸಿ ಆತ್ಮದನುಭವದ
ಪರಿಉಲ್ಲಾಸದೋಳ್ಮನವು ಹೊಯ್ದಾಡಬೇಕು
ಇಲ್ಲದಿರೆ ಸೊಲ್ಲು ಕೇಳುತ ರಾಜ
ಮುಖಮೀಸೆ ಎಲ್ಲವನು ತೆಗಿಸೆ ನಲ್ಲಳು ನಕ್ಕರೀತೇ || 1 ||
ನವರತ್ನ ವ್ಯವಹಾರ ವೈಶ್ಯ ನಡಿಸುವ ವ್ಯಾಳ್ಯ
ತವಕ ಪಟಾಣಿಗ ವಜ್ರವು ತಗೋ ಎನಲು
ಅವಿವೇಕವಹುದಾಗಿ ವಿವರದೊಳು ಶಿರ ಬಾಗಿ
ಅವಮಾನೆ ತ್ಯಾಗಿ ಅವನಿಯೊಳಿದ್ದ ರೀತೇ || 2 ||
ದಶಕಂಠ ಹೇಮಾದ್ರಿ ಅಸಮ ಸಾಹಸದಿ ತರೆ
ವಶತಪ್ಪಿ ತಾವಳಿಯಕೆ ಬೀಳಲು
ಕುಸುಮ ಸ್ವೀಕರಿಪ ಭೃಂಗನ ರೀತೆ
ಕೆಲಕಾಲ ಹಸೆಗೆಡುತಾ ಅಳುತೆ ಅಧಮನು ಆದರಿತೇ || 3 ||
ಒಮದ ಮುರಿವ ಮಹಂಧಾತ ಹೃದಯ ದಿಟವರಿಯದೇ
ವಿಧಿ ಹೋಗಿ ತಾಕಿತಾ ಬರಿದಾಗುತೇ
ವಿಧಿ ಗಂಡನೆಂದು ಹೆದರದೆ ಪೆಂಡೆತಾ ಧರಿಶೆ
ಬದಿಯಲ್ಲಿ ಇರದೆ ಬ್ಯಾಗದಿ ಹೋದರೀತೆ || 4 ||
ಅಪರಿಮಿತ ಪುಣ್ಯಶಾಲಿಯ ಕೈಗೆ ಕುಪಿತಸಿಗೆ
ಅಪಹಾರ ಪ್ರಾಣ ಮಾಡುವ ವ್ಯಾಳ್ಯದಿ
ಚಪಲ ಚಿತ್ತದಿ ಉಗುಳೆ ಶಾಂತ ತಾನಾದ ಪರಿ
ವಿಪಿನದೀ ನಡತೆ ಅಲ್ಲಿಸಾಹೇಬು ಗುರುಚರಿತೆ || 5 ||
ದಾವ ವಿಧದಿ ನಾನು ದೈವಾ ಪೂಜಿಸುವೆನು
ದಾವ ವಿಧದಿ ನಾನು ದೈವಾ ಪೂಜಿಸುವೆನು
ಭಾವಾವೆ ಕೆಟ್ಟಿಹವೂ ಲೋಕದಿ || ಪ ||
ಹಾಲು ತಂದು ಜಗಪಾಲಾನ
ಪಾದಾನಾ ಮೇಲಾಗಿ ಪೂಜಿಸಲ್ಕೆ
ಮೂಲ ಭೇದಿಸಲು ರಕ್ತಾಲಯವನೆ ಕೆಟ್ಟು
ಶೀಲಿಲ್ಲದಾ ಮಾಂಸಾ ಸೇರಿ ಬಂದಿರುವವೂ || 1 ||
ಗಂಗೋದಕದಿ ಎನ್ನಾ ಅಂಗ
ದಣಿಯೋ ಹಾಗೇ ಹಿಂಗಾದೆ ಪೂಜಿಸಲ್ಕೆ
ಮಂಗಳಿಲ್ಲದ ಮಶ್ಚ್ಯಾ ಕೂರ್ಮ ಮಂಡೂಕವೂ
ಸಂಗಾದಿ ಹೇಂಜಾಲು ಸತತ ತುಂಬಿರುವಾವೂ || 2 ||
ಮಧುರ ಪ್ರಸಾದಾದಿಂ ಮೆಚ್ಚಿ
ಪೂಜಿಪದಕ್ಕೆ ಅದರಲ್ಲಿ ದೋಷಿಹದೂ
ವಿದವಿಧ ನೊಣ ಇರುವೆಯು ಮೊದಲಾಗಿ
ಬಾಯಿತುದಿ ಕಚ್ಚಿರುವೊವಲ್ಲ ವದರಲ್ಲತಿಶಯವಿಲ್ಲ || 3 ||
ಅನ್ನದಿಂದನಾ ನಾ ಧನ್ಯನಾ ಪ
ಪಾದ ಬಹು ಚನ್ನಾಗಿ ಪೂಜಿಸಲ್ಕೆ
ಮಣ್ಣೂ ಮತ್ತೊಂದರೋಳ್ ಮಹಿಯೊಳುಂಟಾಗ್ಯಾದೆ
ಕಣ್ಣೀಲಿ ನೋಡಿ ಪೂಜಿಸುವೋದಿದನ್ಯಯಾ || 4 ||
ಅತಿ ಸಂದೇಹದಿ ಅಲ್ಲಿಸಾಹೇಬು ಗುರುವಿನ
ಸ್ತುತಿ ಮಾಡಿ ಕೆಳಿದೆನೂ
ಕ್ಷಿತಿಯೋಳಿಲ್ಲಾ ಮಾತಾಪಿತರೀಗೆ ಜನಿಸಿಲ್ಲಾ
ಮತಿಗೆ ನಿಶ್ಚಯವಾದ್ದಿದರ್ಪಿಸೆಂದನಲ್ಲಾ || 5 ||
ಇಹಪರರಿಗೆ ಇಷ್ಟೇ ಭೇದಾವೂ ಇನ್ನೇನು ಇಲ್ಲಾ
ಇಹಪರರಿಗೆ ಇಷ್ಟೇ ಭೇದಾವೂ ಇನ್ನೇನು ಇಲ್ಲಾ
ವಿವರಾವಿಲ್ಲದೆ ಹೀನವಾದಾವೂ ಲೋಕವೂ || ಪ ||
ಕಾರಣ ಪರ ವಸ್ತೂ ಎನ್ನೂತೇ
ಕೈ ಜೋಡಿಸುತ್ತೇ ಕಲ್ಲುಕಳದು ಖಚಿತವಾಯಿತೇ
ಧಾರುಣಿ ದಣಿ ಕಂಡೂ ತಮ್ಮಾ
ಧಾತ್ರಿ ನಡತೆಯಂತೇ ನಡದಾ
ವಿಚಾರವಾದ ಹಿರಿಯಾರ
ಕೈಸೇರಿ ಸಾರಾ ಸ್ವೀಕರಿಸಾದೇ || 1 ||
ಕನ್ನಡಿಯನೂ ಕೈಲೀ ಹಿಡಿಯೂತೇ
ಪ್ರತಿಬಿಂಬ ನೋಡಿ
ಕನ್ನಡಿಯನೂ ಮಧ್ಯ ಕಳಿಯೂತೇ
ಚನ್ನಾಗಿಹದಯ್ಯಾ ಭಾವಾ
ಸೇರದಿಹರೂ ಗುರು ಪಾದಾವಾ
ಉನ್ನಾತಿಷ್ಟೆ ಇದರನುಭಾವ
ನಿನ್ನಾ ನೀಗೀ ನಿಲ್ಲೀಸಿರುವಾ || 2 ||
ಅಪರಾಮಿತಾಪತ್ತು ಬರಾಲು
ಅರ್ಥವನೂ ಎಲ್ಲಾ
ಚಪಲಾವಿಲ್ಲದೆ ಸೂರೆ ಮಾಡಲೂ
ಕುಪಿತಾ ತಾಪ ತಾವೂ ತೊಡದೇ
ಕೊಟ್ಟಿರುವೋದೂ ಗೊತ್ತು ಬಿಡದೇ
ಸುಫಲಾ ನಿಮ್ಮಾ ನಾಮಾಕುರುಹು
ವಿಪಿನಾದೊಳಗೇ ಇಲ್ಲಾದಿಹದೇ || 3 ||
ಡೊಂಬತಿ ನಾಟಾಕಾದಾ
ಕಾಲಾ ನೋಡುವ ಮನುಜಾ
ಗಂಬಾಲಿಲ್ಲಾ ಡಿಂಬಾದಾ ಮ್ಯಾಲಾ
ಸಂಭ್ರಾಮಿಹದೂ ಡಿಂಬಾದಿಂದೆ
ಸೊಗಸಿಹದಾ ವಾಳಾಟಾದಿಂದೇ
ಕುಂಭಿನೀ ಜನದೈವಾ ಗೊಪ್ಪಾ
ಕಾಣಾದೇ ಕಂಗೆಟ್ಟಿರುತಿಹುದೇ || 4 ||
ದೈವಾವೆಂಬಾ ನಿಶ್ಚಯದಾ ಕುರುಹೂ
ನಿಜ ಕಂಡಮ್ಯಾಲಾ ಜಗದೈವಾವು, ಜಾಗ್ರ ಸತ್ತಾವೂ
ನಿಗಮಾಭಾವಾ ನಿಜವೇಯಲ್ಲಾ
ನಿಜವೂ ಕಾಣದೇ ಸಾಯ್ವೋದಲ್ಲಾ
ಅದನೂ ಕಂಡಲ್ಲೀಷಾ ಗುರೂ
ನಗುತಾಲಿಹುದು ನೋಡಿರೆಲ್ಲಾ || 5 ||
ಸರ್ವ ನಾಟಕ ಸ್ವಾಮೆಂದೆನುವಾ
ಸರ್ವ ನಾಟಕ ಸ್ವಾಮೆಂದೆನುವಾ
ನರರೀಗ್ಯಾಕಿನ್ನು ಗುರುವಾ || ಪ ||
ನಿಜ ನಾಟಕನು ದೈವಾ ತ್ರಿಜಗಾ ಕೊಂಡಾಡುವಾ
ಅಜಹಾರಾ ನೀಗಾದಾನುಭವ ಬಲ್ಲಾನಿಗೆ ಬೇಕು ಗುರುವಾ || 1 ||
ಹಮ್ಮಿನಿಂ ಬ್ರಹ್ಮನಾಡಿದಾಕೋಯ್ತವನ ಗರ್ವಾ
ರಮ್ಯತಿಳಿಸುವೋದಕ್ಕೆ ಗುರುವಾ ದೈವಾ ಬ್ಯಾರೇ ತೋರಿಸುವಾ || 2 ||
ಬ್ರಹ್ಮತ್ಯದಿಂದ ಪಾರ್ವತಿಪತಿ ಬಹು ಕಾಲ
ಗಮ್ಮಾನೆ ಪಿಡಿದ ಕಪಾಲ ಮೂಲ ಸಿಗಲಿಲ್ಲೊ ಬಾಲ || 3 ||
ಕರದಿ ಕಪಾಲ ಕಾಣುತಲೆ ಆ ಗೋಪಾಲಾ
ಭರದಿಂದಾಹುತಿಯಿತ್ತಾ ಕಾಲಾ ಎನ್ನೂವದೂ ಶಾಸ್ತ್ರಾಮೂಲಾ || 4 ||
ಕಡೆ ಮೊದಲವರ ಕಾದ್ಯಾಟವೆ ಘನವಾಯ್ತೆ
ಒಡಿಯನಾಟೊಂದಿಲ್ಲದಾಯ್ತೆ ಒಳಗೆ ಸಂದೇಹ ಬಿತ್ತೇ || 5 ||
ಅಣುಮಾತ್ರ ದೋಷವಿಲ್ಲದಲಾಡಿಪನು ಲೋಕಾ
ಮನ ನುಡಿವದು ಪ್ರಥಮ ವಾಕ್ಯ ಪಾಟಿಪರಿಗುಂಟೇ ಸುಖಾ || 6 ||
ಹರಿ ಅಜ ಅಸುರಾ ಹರನು ಇನ್ನಾರಾದಾರೂ
ಸ್ಥಿರದೊಳ ಸ್ಥಿರ ತಿಳಿಯುವಗೇ ಅಲ್ಲಿಸಾಹೇಬು ಗುರುವೇ ಬೇಕವಗೆ || 7 ||
ಸಾರೂವೆ ಸಾಧು ಸಭೆಯ ಕಂಡು
ಸಾರೂವೆ ಸಾಧು ಸಭೆಯ ಕಂಡು
ಪ್ರಭು ಯಾರ್ಯಾರಿಲ್ಲದೇ ಕಾಣ್ವದು
ಧಾರುಣಿಯೊಳಿರುವೋ ವಿಚಾರವು
ತೋರಿ ಕೊಡುವೇ ಸಾಕ್ಷಿನಾ || ಪ ||
ಆಕಾರ ಒಂದೆ ಅಜಾಂಡಗಲ
ತುಂಬಿ ತೋರುವ ಬಗೆಯನಾ
ಆರಿಲ್ಲ ನಾವಿರುವ ಸ್ಥಲಕಾ
ಪಾರಾವಾರ ಪ್ರಭು ಕಾಣ್ವ ಬಗೆ || 1 ||
ಉದಯಾದ್ರಿಯೋಳ್ಸೂರ್ಯ
ಉದಿಸಿದಾಗಳೆ ಊರ್ವಿ ಸದನಂಗೋಳ್ಸೇರಿದಾ
ವಿಧದಿ ಹೃದಯೇಶಾಧ್ಯಾಂತ ತಾ
ಒಪ್ಪೀದಂತಾ ನಿಜ ಭಾವವೂ || 2 ||
ವದನ ಬಾಗಿಸಿ ನಿಶ್ಯೂನ್ಯನ
ಕಾಣದಿರೆನಮಗತಿ ಕಷ್ಟವೂ
ಒದಗಿ ಮರಣವು ಮುಂದೆ ಹೊಂದಿದ
ಪದವಿ ಕೈ ಕೊಂಡಾ ಪಾರಮಾರ್ಥ || 3 ||
ದ್ವಿತಿದೀನ ಶಶಿಯು ಬಹಳತಿ ಸೂಕ್ಷ್ಮೇಯಿಂದ
ಈ ಕ್ಷಿತಿಗೆಲ್ಲಾ ತಾ ಕಂಡಂತೆ
ಪತೀ ಸಕಲಾಧಾರಿ ನಮ್ಮಯ
ಮತಿಯೋಳ್ಬೆರದಾಡುವ || 4 ||
ಲಯಗತಿಯಹುದಾದಂಥ
ಸಾಧುಸ್ಥಿತಿ ಗಾಯಿತಿದರನುಭವ
ಅತಿಶಯ ಕಾಣ್ವದಕೆ ತಮ್ಮಯ ಗತೀ
ಮರಿಯದ ಮತೀಮಂತರ್ಗೆ || 5 ||
ದೇಶಾಂತ್ರ ಹೋದ ಪುರುಷನ
ನೆನಸಿ ಸತಿ ತಾ ಸಂತೋಷಾ ದೋಳ್ಸೇರಿದಂತೆ
ಧ್ಯಾಸ ಮಾತ್ರ ರಹಸ್ಯ ರುಚಿಕರ
ತಾ ಸವಿದು ಸಮೀಪದಿ || 6 ||
ಆಶೆ ಭಯ ಎರಡಕ್ಕೆ
ಮೀರಿದನುಭವಾಯ್ತಾ ಸಮಯದಿ
ಈಸು ವಿಚಾರವೆ ನಿಜ ಗುರುಪದೇಶದಿಂ
ಜಗದೀಶ ಕಾಣ್ವದೂ || 7 ||
ಅಂಜಾನವಾಕಿ ಬಹುರಂಜಾನ ಧನವು
ಯಾರಂಜಿಕಿಲ್ಲದೆ ಕಂಡಂತೆ
ಜ್ಞಾನಾಂಜನ ದಾರಿಯಿಂದಾ
ನಿರಂಜನ ನಾ ಕಾಣುತೇ || 8 ||
ತಾನಂಜಿ ತನ್ನಂದ ಚಂದವು
ತಾತ್ಸಾರಿಸದೆ ಧರಿಸುತೆ
ಜೇನು ಶತ ಭಾಗದೊಳುವುಳಿ
ಸಂಧಾನ ಸಮರ ಸಾಕ್ಷಿ ಯಾದಂತೆ || 9 ||
ಇದ್ದಾದೊಂದು ಇಲ್ಲದೆ ಒಂದು ಕಾಣ್ವೋದು
ಇಹವೆಲ್ಲದರೋಳಿರುವದೂ
ಆಧ್ಯಾವಲ್ಲಿಸಾಹೇಬು ಗುರುವಿನ
ಅನುಸರಿಸಿದರೆ ತಿಳಿಪದೂ || 10 ||
ಗೆದ್ದಿಹನು ನೋಡೆಂಬೊ ಗುರುವಿನ
ಹದ್ದಿನೊಳಗೆ ಕಾಣ್ವದು
ಇದ್ದು ಇಲ್ಲದು ಇಲ್ಲದಿರುವದು
ಎದ್ದು ಮಲಗಿದರೆಮಗೆ ಬಿಡದೂ || 11 ||
ಆಡಬಹುದೇ ಇಂಥಾ ನಿಂದ್ಯಾ ಎಲ್ಲಾ
ಆಡಬಹುದೇ ಇಂಥಾ ನಿಂದ್ಯಾ ಎಲ್ಲಾ
ಮಾಡೂವ ದೈವಾ ತಾನಂದ್ಯಾ
ಬ್ಯಾಡ ಕೇಳಿ ತಿಳಿದೂ ಕಂಡು ಕಲಿಯದೆ ನುಡಿದ್ಯಾ
ಮಾಡೂವೊನಲ್ಲೊ ಅನ್ಯಾಯ ಮಹ ದಯಶಾಲೀ || ಪ ||
ಹಿರಿಯಾರಾಡಿದ ವಾಕ್ಯ ವಿವರಾ
ಮಾಡಿ ಪರಿಕೀಸಿ ನೋಡುವಂತವರಾ
ಅರಿಯಾದೆ ನಿಂದ್ಯ ಮಾಡುವೊರೆಂದು
ಈ ಭೂವಿ ನರರಾಡುವದು ಕೇಳಿ ನಗಿ ಬಂತೇ
ಆ ಮಹಾ ನಿರವಯನು ಅಖಿಲಾದ ಜನರ
ನಿರ್ಮಾಣ ಸರಿ ಮಾಡುವಾ
ತಾತ್ಸಾರಿದೇ ನಾಟಕವ ನಡಿಸುವ
ನ್ಯಾಯ ತಿಳಿಯದೆ ನುಡಿಯುವ
ಶರಧಿ ಘನತೆಯು ಕಾಣದೇ
ಈ ಚಲಿಮೆ ಹಿಡಿದಾಚರಿಸೋ ಜನರೂ || 1 ||
ನಿಂದಿಸಿ ನುಡಿಯಾದಿರೆಂದೂ
ನ್ಯಾಯಾ ದಂದೂಗ ಹಿರಿಯಾರೆ ತಂದೂ
ಇಂದೂಧರನ ಚಾಳೀವಂದೂಳಿಯದೆ ಪೇಳೀ
ದಂದಾವು ನಾವಾಡಿದರೆ ನಿಮಗತಿ ಕೋಪೆ
ಕುಂದು ಕುಟಿಲವು ಇಲ್ಲದಂಥ
ಕ್ವಚಿತ ಘನಕೆ ಮಿಕ್ಕಿಹ
ನಿರವಂದ್ಯನನು ನಿರ್ಭೀತಿಯಿಂದ
ನೀನೆ ಸಕಲವು ಎನುತಿಹ
ಮಾಂದ್ಯ ಘಟದವರ ಮರಿಯಾದಿ
ಮಹಸ್ವಾಮಿಗೆ ಇಲ್ಲದ್ಹೋಯಿತೇ || 2 ||
ಕ್ರೂರಾವು ಮನ ತೊಡರಿದರೂ
ಪ್ರೀತಿ ಪೂರೈಸಿ ನೀನಡಿಯದಿರೂ
ಆರ್ಯರ್ಹೇಳಿದ ನ್ಯಾಯಾ
ಆಗದೆಮ್ಮಗೆ ಪಾಯ ತೋರುವೆ
ನಿದಕೆ ದೃಷ್ಟಾಂತ ಈ ಧಾರುಣಿ
ನೀರಲ್ಹಣ್ಣಿನ ವಿಷಯವಾಗಿ ನೀರೆ ದ್ರೌಪತಿ ಹೀನತೀ
ಮನದೋರಿದದಕೇ ತೊಡರಿತಯ್ಯೊ
ಎಂದಿಗ್ಹೋಗದ ಪಕ್ಷಿತೀ
ಈ ದಾರಿ ಶೋಧಿಸಿ ಆಡುತಿರುವರ
ಸೇರದಿಹರೆಮನರಿಕೆ ಕುರಿಗಳೂ || 3 ||
ಮನವೇ ಕಾರಣವೆಂದು ನುಡಿವಾ
ವೇದಾದನುಭಾವ ದೈವಾ ಒಪ್ಪಿರುವಾ
ಮನಕೆಟ್ಟು ತನುವು ಮಾನವು ಪಡಿಯುವದುಂಟೆ
ದಿನಕಾರ ಕಾಣದ ದಿವ್ಯ ಕ್ಷೇತ್ರಗಳಾವು
ತನಸತಿಯ ಮನದಿಟ್ಟ ತಿಳಿದರೆ
ತನುವು ತಾನೆಲ್ಲಿದ್ದರೇನೂ
ಮನವು ಚಂಚಲಯಿದ್ದ ಸತಿ
ಒಳ ಮನಿಯೊಳಿಹೆ ಪತಿ ಒಪ್ಪನೂ
ಚಿನು ಮಹೇಶನು ಮನವು ನೋಡುವ
ಶ್ರೇಷ್ಟ ಸಂಪದ ಸ್ಥಿರವು ಕೊಡುವಾ || 4 ||
ಉದಕಾದಿಂ ವೃಕ್ಷ ಸಂತತಿಯೂ
ಊರ್ವಿಯೋಳ್ ಉದಿಸಿ
ತೋರುವದು ಬಹು ಕಳೆಯೂ
ಅದರಲ್ಲಿ ವಿಷಜ್ವಾಲೆ ಉದಕಾದೊಳಿಲ್ಲಾವು
ಅದರಂತೆ ಪಾಪವಿಲ್ಲದ ಪರಮಾತ್ಮನ ಸದನ
ಅಲ್ಲಿಸಾಹೇಬು ಗುರುವಿನ ಚರಣ ಸೇವಕ ಪೇಳುವಾ
ಕದನಳಿದು ಬಹು ನ್ಯಾಯ ಪದ್ದತಿ
ಕೈಲಿಡಿದು ತಾ ಸಾರುವಾ
ವದನ ಬಾಗಿಸಿ ದೈವಾ ನಿಜ
ಕುರುಹೃದಯದೊಳು ತಾವು ಕಾಣದ್ಹೀಗೇ || 5 ||
ಸರಿದು ಹೋದ ಹಿರಿಯರಾ ಗೊಡಿವ್ಯಾಕೋ
ಸರಿದು ಹೋದ ಹಿರಿಯರಾ ಗೊಡಿವ್ಯಾಕೋ
ಮರ್ಮಾಸಿಯು ಪರಮಾತ್ಮನಿಂಬೆರಿವ ಬಗೆ ಭೇದಿಸದೇ || ಪ ||
ಪ್ರತಿದಿನ ನೀನು ಏಕೋಮತಿಯಿಂದ ಧ್ಯಾನಿಸೆ
ಸ್ಥಿತಿಯೊಳಾರ್ಧಯ ದಯ ಪಾಲಿಪಾರೇ || 1 ||
ಸಮಾಧಿ ಸನ್ನಿಧಿಯಲ್ಲಿ ಘಮಾಘಮಿಪ ಗಂಧ ಕಸ್ತೂರಿ
ಕ್ರಮಾ ನಮಗನುಭಾವನು ಕೂಲಿಪುದೇ || 2 ||
ವಂಶದೊಳಾಗೆ ಒಬ್ಬಾಹಂಶ ಪುರುಷಳಿದೂ ಹೋಗೇ
ಪ್ರಶಾಂಶನೀ ಪೇಳೇ ಫಲಿಸಾಲಿಲ್ಲಾ || 3 ||
ಧನಿಕರು ಧಾತ್ರಿಯಲ್ಲೀ ದಿನಾ ಸುಖದ ಲೀಲೆ ಸಂಪದ
ಮನುಜ ಪೇಳುವಗೀದನುಭವುಂಟೇ || 4 ||
ದಾಂಟಿ ಹೋದ ಹಿರಿಯರಾಗಲೀ ಧಾತ್ರಿಯಲ್ಲಿ ಶಿಲೆಗಳಾಗಲೀ
ಜಂಟೆ ಬಿಡಿಪ ಅಲ್ಲಿಸಾಹೆಬು ಗುರುವಿರಲು || 5 ||
ಕಾಣುತಿಹದೈ ಆಶ್ಚರ್ಯಾವು ಎನಗೇ
ಕಾಣುತಿಹದೈ ಆಶ್ಚರ್ಯಾವು ಎನಗೇ
ಪ್ರಾಣ ಘಟ ಬಿಟ್ಹೊರಡಿಸುವ ಭೀತಿಗೆ || ಪ ||
ನಾಸಿಕದಿ ನಟಿಸುವವು ಶ್ವಾಸವನೂ
ಈಸು ಶತ ಸಹಸ್ರಾದಗಣಿತವನೂ
ಧ್ಯಾಸದಿಂ ಪೇಳ್ವೊನಂತೆ ಕಿಂಕರನೂ
ತಾಸು ಬಿಡದೆ ಧಟ್ಟಿಪನಂತೆ ಯಮನೂ || 1 ||
ಧಟ್ಟಿಸಲು ಧೈರ್ಯ ಕೆಟ್ಟು ಹಾಕಲಾ
ಕೆಟ್ಟ ಭೀತಿ ಘನವಾಗೆ ದಿಕ್ಕಿಲ್ಲಾ
ಹೊಟ್ಟೆ ಶಾಂತಿಲ್ಲದಕೆ ಅನ್ನಂತೆನಲಾ
ಮುಟ್ಟಿಹದು ಎಂದೇಳುವೂರಂತೆ ಬಾಲಾ || 2 ||
ಉದಕವೆಂದು ವೈದಾಟ ಘನವಾಗೆ
ಅದಕೆ ದೂತ ಹೇಳುವನಂತೆ ಇವಗೇ
ಎದಕೆ ಬಯಸೂವೆ ಈ ಭೂಮಿಯೊಳಗೆ
ಬದುಕಲರಿಯಂದೇಳುವರಂತೆ ಹ್ಯಾಗೆ || 3 ||
ಪೈತ್ಯ ಕಫ ವಾತ ವಿಷಜ್ವರದಿಂದೇ
ಸಹಿತ ಮರಣಾವು ಮ್ಯಾಲೆ ಬಂದಿಹದೇ
ಹೋಯ್ತೆ ಸುಖ ಹೊಯ್ದಾಟದಿ ಬಿದ್ದು ಬೆಂದೇ
ಕೈ ಕಾಲು ಮ್ಯಾಲೆ ಕೆಳಗಾಗುತಿಹುದೇ || 4 ||
ಯರದ ಬೇಲಿಯ ಮ್ಯಾಲೆ ಬೆರದಾಡಿದಂತೇ
ಉರಿ ನೇತ್ರ ಹಸ್ತ ಅಂಗದಿ ಇಡುವೋನಂತೇ
ಗಿರಿ ಮಹಾ ಮೇರು ಮೈಮ್ಯಾಲೊರಿಸಿದಂತೇ
ಬಿರಿಸಿನಿಂಬಿಕ್ಕು ಬಾಯಿಂದ್ಹೊರಡೋದಂತೇ || 5 ||
ಜಡ ತನುವಿದನೂ ಗಡಿಗೆಯಂತೆ ಮಾಡೀ
ಪಿಡಿಕೊಂಡಿರುವ ಆಸೆ ಕಡೆಗೋಲೆ ಹೂಡೀ
ಬಿಡದಿರುವೊವು ಶ್ವಾಸ ಬಿಗಿ ಹಗ್ಗ ಕೂಡೀ
ಝಡಿದು ಪ್ರಾಣವಯ್ಯೋರಂತೆ ವೈದಾಡೀ || 6 ||
ಅಯ್ಯೋ ಇಂತಿಪ ದುಃಖಾ ಎಂತು ತಪ್ಪುವದೋ
ಸಯ್ಯೋ ಸಾಧು ಶಿಖಾ ಸಾಕ್ಷಿ ಕಾಂಬುವದೋ
ಜೀಯಾ ಅಲ್ಲಿ ಸಾಹೇಬು ಗುರುವೇ ರಕ್ಷಿಪದೋ
ಕೈಯೋಳು ಶಿಶುವಾಗದಿರೆ ಕಷ್ಟ ಬಿಡದೋ || 7 ||
ಎಂತದೀ ಜಗವೂ ಬಂತೇ ಮರಣವೂ
ಎಂತದೀ ಜಗವೂ ಬಂತೇ ಮರಣವೂ
ಚಿಂತೆಯು ಇಲ್ಲಾವೂ || ಪ ||
ಶಶಿಧರನೊಶವಾಗೀ ಋಷಿ ಮಾರ್ಕಾಂಡೇಯ
ಬಹು ವ್ಯಸನುಳ್ಳ ಮರಣಗೆದ್ದಾ
ರಸಿಕ ತಿಳಿದು ಗುರು ವಶವಾಗಿ ಮರಣಕ್ಕೆ ವಶ ಮಾಡಿಕೊಂಡು
ಬಹಳಸನಾಗಿ ನಿಲ್ಲಾದೆಂತದೀ || 1 ||
ರಘುರಾಮ ದಶಕಂಠ ನಗಿಯಿಂದ ರಣದೊಳೂ
ಜಿಗಿದಾಕುವದು ತಾ ಕಂಡೂ
ಮುಗಿದು ಕೈ ಸಾಗಿ ಮರಣ ಗೆದ್ವಿಭೀಷಣ
ಬಗಿಯಂತೆ ಬರುವ ಮುಂದಿನ ಮಾರ್ಗ ತಿಳಿಯಾದೆಂತದೀ || 2 ||
ಗಯನೆಂಬಾ ಗಂಧರ್ವ ಗರುಡಾ ವಾಹನ ಗಂಜೀ
ಗಾಂಢೀವೀ ಕೈ ಸೇರಿದಾ
ಭಯವೆಂಬುತ್ಪಾತ ಮರಣ ಕೈ ತಾ ಸಿಗದಂತೇ
ದಯಗುರು ಸೇರಿಧನ್ಯರ ಬಿರಿದು ಧರಿಸಾದೆಂತದಿ || 3 ||
ಅತಿ ಭೀತಿ ಮರಣಾವು ಅತಿಪ್ರೀತಿ ಕಾಣ್ವಾ ಸಂಗತಿ
ಆರ್ಯರರುಪೂವರೂ
ಸತತ ಸಾಕ್ಷಿಕನಾಗಿ ಸಲಹೋ ಸುಜ್ಞಾನ
ಸಮ್ಮತಿ ಅಲಿಸಾಹೇಬು ಗುರು ಸ್ಥಿತಿ ಇರುತೀದೆಂತದೀ || 5 ||
ಇರಬಹುದಿರಾಬಹುದೈ
ಇರಬಹುದಿರಾಬಹುದೈ
ನಿರವಯನು ನರನೂ ಇರಬಹುದಿರಾಬಹುದೈ
ಇರದಿರೇ ಪರಸುಖವು ಯಾರಿಗೆ || ಪ ||
ಸೂರ್ಯ ಸಮ್ಮುಖದಲ್ಲಿ ಜ್ಯೋತಿ ತಾ ನಿದ್ದತೇ
ತೋರಿ ಪರಮಾತ್ಮನೋಳ್ ಸೇರಿತಾ ಬ್ಯಾರ್ಯಾಗಿ
ಯಾರ್ಯಾರು ಇಚ್ಛಾನುಸಾರದಿ
ತಾ ಸೇರಿ ತನ್ನಂತೆ ಅವರನು
ಸಾರಾಂಶ ಸುಜ್ಞಾನ ಕೊಡುತಲಿ
ಪಾರು ಮಾಡುವೊ ಪಾರಮಾರ್ಥದಿ || 1 ||
ಸೊನ್ನೆ ಒಂದರ ಹೊಂದೀ ಶೂನ್ಯನಾಗಿದ್ದಂತೆ
ಭಿನ್ನಾಭೇದಿಲ್ಲಾದೆ ಬೆರದಿರ್ಪದೂ
ಎನ್ನ ಸ್ನೇಹಿತರನ್ಯಾಯವಿದು
ಇನ್ನು ಯಾ ವಿಧ ತಿಳಿಯದ್ಹೋದರೆ
ಉನ್ನತಿರುವದು ಒಳಹೊಕ್ಕು ಬಹು
ಧನ್ಯರಾಗ್ಯಾ ಚಿನ್ಮಯಾತ್ಮನೋಳಿರ || 2 ||
ಧಗಿಪ ಚಂದ್ರನ ಕೂಡಿ ಗಗನದೋಳಿಹ ತಾರೆ
ಹಗೆಯಿಲ್ಲದೊಂದಿ ತಾ ವಡಿಗಿರುವೊವೈ
ಹಗಲಿರುಳು ಆಧಾರ ನಾಟಕನಗಣಿತವು
ನರ ನೋಡಿ ನೀಗುತ
ಬಗಿಯ ಬೆರದಿಹ ಭಾಗ್ಯವಂತರ
ಬೆರದು ಕಲಿಯುಗ ಸೊಗಸಿನೊಳಗೇ || 3 ||
ಮೊರಿಯಾಗಿರುವೊಹಾರ್ಮ್ಯ ಮನಸಿನೊಳಿದ್ದಂತೇ
ಇರೆನಿ ನೀ ಪರಿದೋಷಾ ಎಂದಿಗಿಲ್ಲೈ
ಪರಮಸಂಪದ ಪೂರೈಸಿ ಸ್ವೀಕರಿಪ
ಪುರುಷರ ಪುಣ್ಯ ಮಾರ್ಗಿದು
ಅರಿಯುತೆ ಅಣುಪಾಪವಿಲ್ಲದೆ
ಸರಿದು ಹೋಗುವ ಸಾಕ್ಷಿ ಕಾಣುತ || 4 ||
ನಂಬೀಗೆ ವಿವರ ನಾಚಿಕೆ ಧೈರ್ಯ ನಾಲ್ದೆಸೇ
ತುಂಬಿ ತೋರುವದಿದೂ ಧರ್ಮವಾಗೀ
ಜಂಭಾಟ ನಿನ್ಕಡಿಯ ಬಿಡಿಪನು
ನಿರಾಲಂಬನೋಳ್ಳಿನ್ನ ತೋರ್ಪನು
ಅಂಬಲಿರುವರಿಗೆ ಆಧಾರ
ಅಲ್ಲಿಸಾಹೆಬು ಅಧಿಕ ಗುರುವರಾ || 5 ||
ಮೂರ್ಖ ಮಾತಾಡಬಹುದೇ
ಮೂರ್ಖ ಮಾತಾಡಬಹುದೇ
ಅರ್ಕ ಕಳೆಗಧಿಕ ಸುಜ್ಞಾನ ತೊರಿದು || ಪ ||
ನವಖಾಂಡ ಪೃಥಿವಿಯಲ್ಲಾ
ನಿಜಸಾಧು ಅವಸಾಯ ಕಾಲ ಮಾಡೀ ಅಧಿಕಾ
ಅವಿರಳ ವಿನೋದ ನೋಡಿ ಅನುದಿನವು
ಸವಿಯದಾ ಸುಖ ಬಂದಿರೇ || 1 ||
ಶತ ಕುರಿಯ ಶೋಧಿಸುತ್ತಾ ಚಿಕ್ಕಮರಿ
ಮಥಿಸುತ್ತ ಹಾಲು ಕುಡಿಯೇ ಅದಕೇ
ವೃಥ ಸುಖವು ಆಗೋದುಂಟೇ
ಜಗಪತಿಯ ಜತೆ ಜನಕ್ಕಿಲ್ಲೆ ಸುಖವೂ || 2 ||
ಜಾಜಿ ಮಲ್ಲಿಗೆ ಸಂಪಿಗೆ ಜಾಣ ಬಹು
ಜತನದಿಂ ತಾ ಕಾಯಲೂ ಕಡಿಗೇ
ಸಹಜ ಪರಿಮಳ ಹೋದಿತೇ
ಅದರಂತೆ ಸಾಧು ಸುಖ ಸೇರಿರುವನೂ || 3 ||
ಕ್ಷೀರಘೃತ ಮಧುರ ಸಾರಾ ಉಂಡವಗೇ
ಸೇರದಿರುವದೆ ರುಚಿಕರಾ ಮನುಜ
ಮೀರಿದಾ ಪರವಸ್ತುವಾ ಬೆರದು
ಲಯಸೇರಿ ಸುಖ ತೂಗ್ಯಾಡುವಾ || 4 ||
ಚೀನೀ ಚೀನಾಂಬರೊಸ್ತ್ರಾ ಕಸ್ತೂರಿ ಸೇರಿ
ಬರಿದಾಗೊದುಂಟೇ ಮನುಜಾ
ಕಾನನದಿ ಬಿದ್ದು ದಾರಿ ಕಾಣದೆ ಕಷ್ಟಕ್ಕೆ
ಒಳಗಾಗುವೇ ಮನುಜಾ || 5 ||
ಮೈಮರದು ಮ್ಯಾರೆದಪ್ಪೀ ತಿರುಗುವನ
ಮಹನೀಯನೆನ್ನ ಬಹುದೇ ಮನುಜಾ
ಕೈಯೊಳೊಯ್ಯಿ ಕುಂಠತೋರೆ ನಂಬದಿರು
ನಿನ್ನಲೈ ಸುಳಿಪರಾರೋ ತಿಳಿಯೋ || 6 ||
ಅಮನಸ್ಕದೋಳ್ ನಾಂಖ್ಯವು ಅಹುದೆನಿಸಿ
ಅತ್ಯಧಿಕ ತನ್ನ ತಾನೇ ಬೆರಸಿ
ತಮ ತೆಗದು ನಿನ್ನ ತೋರ್ಪಾ ಅಲ್ಲಿಸಾಬು
ಗುರು ಸುಮನ ಸುಖ ಕೊಡುವನೋ ಮನುಜಾ || 7 ||
ಸಾಧು ಸಜ್ಜನನ ಮನಸಿನ ಶೌರ್ಯ ಸರಿಯುಂಟೇ
ಸಾಧು ಸಜ್ಜನನ ಮನಸಿನ ಶೌರ್ಯ ಸರಿಯುಂಟೇ
ಸರ್ವೇಶನನು ಹಿಡಿದೂ ಬಿಡದ್ಹೋಯಿತೇ || ಪ ||
ಪಾಷಾಣ ಮಣಿಸೂಜೀ ಬಯಸಿ ಬಾಯೋಳ್ಪಿಡೀ
ದಾ ಸಾಕ್ಷಿ ಸರಿಯಾಗೀ ಸಾಧೂ ಮನಾ
ಪಾಪಾ ನಿರ್ಲೇಪವಾಗಿಹ ಪರಾತ್ಪರ ದೈವಾ ತಾ
ಪರಿಕಿಸಿ ಕಂಡೂ ತನ್ನಾ ತಾ ತಿಳದಿಹ || 1 ||
ಕಾಗಿ ಸಮೋಹ ಕೋಗಿಲಿ ಸುತ್ತಿ ಬಾಧಿಸೇ
ರಾಗಾ ಬಿಡದೆ ಮತ್ತಾ ಕೂಗಿದಂತೇ
ಭೋಗಾಯಿಹ ಜನರು ಬಾಯಿಗೆ ಬಂದ ಬಿಡಿನುಡೀ
ಕೂಗಿ ಕಚ್ಚಲು ಯೋಗೀ ಕಾಗೀಳಿವರೆಂಬಾ || 2 ||
ಸೀತಧ್ಯಾಸ ರಾಮಾನಾಥಾನು ಬಂದಾಗಾ
ಮಾತಾನಾಡಿಸೊ ತನಕಾ ಮನವಿಡಿದಂತೇ
ಧಾತಾ ಶ್ರೀಗುರುಕಾರಾಜಾತಾನು ನಿರ್ಮಾಣ ದೇಶಾದೋಳ್
ಮನ ಒಪ್ಪಿದಾ ಪುಣ್ಯಶಾಲಿಯಾ || 3 ||
ಪ್ರಹ್ಲಾದನೋಳ್ ಹೃದಯಾ ಅಹಲ್ಲಾದ ವಿಡಿದಂತೆ
ಕಾಲಾಂತಕನ ಬಾಧೆ ಘನವಾದರೂ
ಶೀಲಾವಿಶಾಲ ಜ್ಞಾನದ ಲೋಲ ಲೌಕಿಕಾ
ಜಾಲಾ ಲಂಪಟ ಬರಲೂ ಜೆರಿಯಾದೆ ದಿಟವಾದಾ || 4 ||
ಪ್ರಾಣಾದ ಮ್ಯಾಲೆ ಪರಮಾತ್ಮ ನಾಮವುಂಟೂ
ನಾಮಾದ ಮ್ಯಾಲ್ವಿವರಾ ಅತ್ತಲರುವೂ
ಅರುವೀನ ಮ್ಯಾಲತ್ತಲರುಪೀದ ಏಕಾಂಗಾ
ಗುರುವಲ್ಲಿಸಾಹೇಬೂ ಬಿರುದಿಂತ ವೈರಾಗ್ಯಾ || 5 ||
ನನ್ನದೆಂದು ನೀ ನಟಿಸುವೆ ನಿನ್ನದೇನದ್ಹೇಳು ಮಾನವ
ನನ್ನದೆಂದು ನೀ ನಟಿಸುವೆ ನಿನ್ನದೇನದ್ಹೇಳು ಮಾನವ
ನಿಂದಾದ್ದು ತಿಳಿದು ಪೋದರೇ ನಿಜಾನಂದ ನಿನಗದನುಭವಾ || ಪ ||
ಜನನಿ ಜಠರ ನಿನ್ನದಲ್ಲದೂ ಜಾಣ
ತೊರಿದು ಬಂದೆ ನೋಡದೂ
ಮನನವಾಗಲಿಲ್ಲ ತಿಳಿವದೂ
ಮಹಾನಿಯರ ಕೇಳಿಕೊಂಬದು || 1 ||
ಬಾಲ ಯೌವ್ವನಾ ವೃದ್ಧತ್ವಾ
ಬಂದು ನಿಂತದೀ ಘಟತತ್ವಾ
ಮೂಲ ನೋಡು ಇದರ ಬಲತ್ವಾ
ಕಾಲ ಕಳಿಯಲಿದು ಬಿನ್ನತ್ವಾ || 2 ||
ಪ್ರಾಣ ಹೃದಯ ನಿನ್ನದಲ್ಲದೂ
ತ್ರಾಣ ನಿರಾಮಯದ ಮಹಿಮದೂ
ಕಾಣದೆ ನಂದಿದೆಂದ್ಹೇಳ್ವದೂ
ಜಾಣರು ನಿನ್ನ ಕಂಡು ನಗುವದೂ || 3 ||
ಅರುವು ಮರವು ನಿನ್ನದಲ್ಲದೂ
ಬರಿದೆ ಅರಿತೆ ಮರಿತೆನೆಂಬದೂ
ಕೊರತೆ ಕೈಗೆ ಸಿಗುವೊ ಭಾವಿದೂ
ಮರತು ಇದ್ದರೆ ಮುಂದೆ ಘಾತಿದೂ || 4 ||
ಸತೀ ಸುತರು ನನ್ನದೆಂಬದೂ
ಶೃತೀ ವೇದಿದಲ್ಲವೆಂಬುದೂ
ಜತೇ ಮುಂದಿಂದೆಲ್ಲೆ ಕಾಣ್ವದೂ
ವ್ಯಥೆ ವೃಥಾದಂತ ಭಾವಿದೂ || 5 ||
ಷಡುಚಕ್ರ ನಿನ್ನದಲ್ಲ, ದೂ
ಸರ್ವಕಾಲ ಎಣಿಕೆ ಯಾಕದೂ
ಹುಡುಗರಲ್ಲಿ ಸಹಾಯಿರುವದೂ
ಬಿಡೂ ನನ್ನದೆಂಬದ್ಹೇಳ್ವದೂ || 6 ||
ಅರಿಷಡ್ವರ್ಗಲ್ಲ ನಿನ್ನದೂ
ಅವನಿಯೊಳಾ ಪಶುವಿಗಿರುವದೂ
ಸಿರಿಧಾನ್ಯ ಷಣ್ಮತಲ್ಲದೂ
ಸಕಲರಲ್ಲಿ ಸಾಕ್ಷಿ ಕಾಂಬದೂ || 7 ||
ನಾಡಿ ರೋಮವಲ್ಲ ದೈವದೂ
ನಾಡೆಲ್ಲ ಅದೇ ಇರುವದೂ
ನೋಡು ನೋಡು ನಿನ್ನದಲ್ಲದು
ಗಾಢ ತಿಳೀ ಬಿಡಲಿ ಬಾರದೂ || 8 ||
ನಾದು ಬಿಂದು ನಿನ್ನದಲ್ಲದೂ
ವಾದ ಭೇದ ಮಾತಿದಲ್ಲಿದೂ
ಸಾಧು ಜನರ ಕೇಳಿ ಕೊಂಬದೂ
ಹೋದ ಸ್ಥಲದಿ ಹೊಂದಿಕಾಗ್ವದೂ || 9 ||
ಸಕಲರಲ್ಲಿ ಇರುವೊದಲ್ಲದೂ
ಶೋಧಿಸಿ ತಿಳಿ ನಿನ್ನದೆಂಬದೂ
ಸುಖಾಪಡದು ಸ್ಥಿರದಿ ನಿಲ್ವದೂ
ಅಕಾಳಂಕನಲ್ಲಿ ಇರುವದೂ || 10 ||
ಅಪರೂಪ ನಿನ್ನದೆಂಬದೂ
ಅಲ್ಲಿಸಾಹೇಬು ಗುರುವಿಗರುವದೂ
ಕುಪಿತ ತೊರಿದು ಕೇಳಿಕೊಂಬದೂ
ವಿಪಿನ ಜನಾವಳಿಗಸಾಧ್ಯದೂ || 11 ||
ಹೆಂಗಾದೀತು ಸಂಗಾ ಪರಸುಖಾ
ಹೆಂಗಾದೀತು ಸಂಗಾ ಪರಸುಖಾ
ಪ್ರಾಣಾನಂದಾ || ಪ ||
ಪಂಚಿಂಶತಿ ಘಟಭಾವವಲ್ಲದ
ಚಂಚಲವಿಲ್ಲದ ಶೂನ್ಯ ಸಿಗದಿರೇ || 1 ||
ದ್ವಿತಿದಿನ ಚಂದ್ರನ ಸ್ಥಿತಿ ಇರುವಪರಿ
ಮತಿಯೊಳು ತನ್ನಯ ಮೂಲ ತಿಳಿಯದಿರೇ || 2 ||
ಚಿತ್ರಿಕನೊಳಗೆ ಚಿತ್ರದಾವಪರಿ
ಪ್ರತ್ಯಕ್ಷ ತನ್ನ ಭಾವ ತಿಳಿಯದವ || 3 ||
ಹೋಗಿರುವೊ ಬಗಿಯ ಹೊಲಬನರಿಯದೇ
ಯೋಗಭ್ಯಾಸದಿ ವ್ಯಥೆಬಟ್ಟ ಮನುಜಗೆ || 4 ||
ದಾನ ಕೊಟ್ಟ ಪರಿ ಮಾನ ಹಿಡಿದಂತೆ
ಜ್ಞಾನಿ ತನ್ನ ತಾ ಕೂನ ತಿಳಿಯದಿರೇ || 5 ||
ಬತ್ತಿ ಜ್ಯೋತಿಯೊಳು ಬೆರವದು ದಿನದಿನ
ಕತ್ತಲಿಲ್ಲದಂತೆ ಕಾಣದ ಮನುಜಗೇ || 6 ||
ಗುರುವಿನ ಸ್ಮರಿಸದಿ ಗುರುವಾದಾಪರಿ
ಅರುವು ನಡತಿಯೊಳು ಕಿರಿಯ ನಾಗದಿರೇ || 7 ||
ಬಸವ ಗುಲಾಮನ ಭಾವ ಧರಿಸಿದಾ
ರಶಿಕ ತಿಳಿಯದಿರೇ ವಸುಧೆ ಜನರಿಗೆ || 8 ||
ಪರಮ ನಿರಾಮಯ ಅರಿತೆ ವೆಂಬುವರು
ಬರಿದೆ ಅಲ್ಲಿಸಾಹೇಬು ಗುರುವೆ ಸಿಗದೆ ತಮಗ್ಹೆಂಗಾದೀತು || 9 ||
ಚಪಲಾತ್ಮರು ಅಪಹಾಸ್ಯದಿ ಕುಟಿಲದಿ
ಚಪಲಾತ್ಮರು ಅಪಹಾಸ್ಯದಿ ಕುಟಿಲದಿ
ಕೂಡ್ಯಾಡಿ ಬಂದು ಕಲಹದಿ ನುಡಿಯೇ
ಅಪರಮಿತ ಪ್ರಾಣಾನಂದವು
ಉಪಯೋಗವು ಹೊಂದಿದದಕ್ಕೆ ಅವರೇ ನಮ್ಮವರೂ
ಭವಕಳಿಯಲ್ಕೆ ವಿವರ ಪುಟ್ಟಿಪರೂ
ಭುವಿಯೋಳಿಂದಾಳಿದಾ ಭೂ ಭುಜರಿಗೆ
ಇಂಥಾ ಅವಿವೇಕರೆಡೆ ಬಿಡಾದಾಡಿ ಕಾಡಿದದಕ್ಕೆ
ಅವರಿಗುಂಟಾಯಿತೇ ಕೀರ್ತಿವಾರ್ತಿರವಿಗೆ ಮಿಕ್ಹೋಯಿತೇ || 1 ||
ಕಲಿಯಂಬುವ ಕಳನೊಬ್ಬವ ನಳನನು
ನಟ್ಟಡವಿಯಲ್ಲಿ ನಾರಿಯ ಬಿಡಿಸೇ
ಇಳಿಯೊಳು ಕೀರ್ತಿಷ್ಟಾಯಿತೇ
ತಿಳಿದವರಾಭಾವ ಧರಿಸೇ
ಧೀರಾರಾಗುವರೂ
ನಿಂದಿಸಿ ನುಡಿಯೇ ಕ್ರೂರಾರೆಂದನರೂ
ಶ್ರೀಗುರು ಧ್ಯಾನ ಸೇರಿದ
ಸಾಧೂ ಸುಗುಣಾನಾ ಜಾಗಾರವಿರಲಿಕ್ಕೆ
ಸಾಗಿಸಿದೊಚನಾವೂ ಅವರೇ ನಮ್ಮವರೂ || 2 ||
ಸತ್ಯಾತ್ಮನು ಹರಿಶ್ಚಂದ್ರನು ಮೃತ್ತಿಕಿವಿಧಿ ಬಂದು
ತಾಕಿ ಹೊಲೆ ಮನೆಯ ಮಾರೇ
ಸತ್ತನು ಸುತನೂ ಎನ್ನದೆ ಗೊತ್ತಿಲಿತಾ
ತೂಗಿದದಕ್ಕೆ ಗುಣವಂತಾನಾದಾ
ಗಾಂಭೀರತ್ವಾ ಘನ ಪುಣ್ಯನಾದಾ
ಜನರು ಸದ್ಗುಣರಾಗೀ ಘನ ನಿರಂಜನ
ಸಾಂಗತ್ಯನು ದಿನ ನುಡಿದೆಮ್ಮಾ
ನನುವರೆಲ್ಲರು ಈಗ ಅವರೆ ನಮ್ಮವರೂ || 3 ||
ಪಾಂಡವರ ಬೆಂಬಿಡದೇ ಪುಂಡರು ದುರಿಯೋಧನಾದಿ
ಶತ ತಮ್ಮಂದರು ಕಂಡಂತೆ ಕಾಡಿದದಕೇ
ಪಂಡಿತರಾ ವಾರ್ತಿ ಕೀರ್ತಿ ಪೇಳೂವೊರಲ್ಲಾ
ಸದ್ವಾರ್ತೆಯು ಸ್ಥಿರದಾಯಿತಲ್ಲಾ
ಪಿಂಡ ಮಾಂಸ ಜನವೂ ಬಿಡಿ ನುಡಿಗಢಣಾವೂ
ಕಂಡಿತೆನ್ನಯ ಮನ ಘನರಮ್ಯ ಹೆಚ್ಚಿತೈ
ಅವರೇ ನಮ್ಮವರೂ || 4 ||
ಮಲಹರನ ಭಕ್ತರಾದವ ರೆಳಹೂಟಿಯ ಕಟ್ಟಿಸೆಳಿಯೇ
ಕಲ್ಯಾಣದೊಳೂ ಘಳಿಲನೆಪರ ಕೈದಿದರೇ
ಬೆಳದ್ಹೋಯಿತೆ ಪರಂಪರಕೆ
ಬಲ್ಲಿದರಾ ಕೀರ್ತಿ ಬಿಜ್ಜಳನಿಂದೇ ಬೆಳದೀ ತಾವಾರ್ತೀ
ಕಲಿಜನರೆಮ್ಮಾ ಕಾರಣ ಬ್ರಹ್ಮದೆಡೆಯೊಳೂ
ಕಲತಿರಬೇಕೆಂದೂ ಕಾಂಕ್ಷಿಯಿಂನುಡಿವರೂ
ಅವರೇ ನಮ್ಮವರೂ || 5 ||
ರಾಜಾಹಂಸನ ಬಳಿಯೊಳು
ಬಾಜಾರದಿ ಬಿದ್ದ ಪತ್ರಾವಳಿಯೊಳು ಅನ್ನಂ
ಭೋಜನ ಮಾಡುವ ಕಾಗಿಯು
ಮಾಜದೆ ಮಂಡೂಕ ಕೇಳೇ ಮಾಣಿಕ್ಯವದಕೇ
ಅರುವಾಯಿತೇವತಿ ನಾಣ್ಯಾಮನಕೇ
ಈ ಜನದೇಹಾ ಸಂಗತಿ ಕೇಳಿನಿರ್ಹೇ ಹಾ
ಆದಿ ಸ್ವರೂಪ ಅಖಂಡಾ ವೆನಪಾಯಿತೇ
ಅವರೇ ನಮ್ಮವರೂ || 6 ||
ಕರುಣವ ಪೊರಿಯುವ ಗುರುವಿನ
ನರನನುತಿಹ ಜನದ ನುಡಿಗೆ
ನಾಯಕ ನರಕೆಂಧರುಪಿದ ಹಿರಿಯರ ವಾಕ್ಯವು
ಪರಿಪರಿಯನುಭವಕೆ ಬಂತೇ
ಆ ಪುಣ್ಯನಿಂದೇ ಗುರುವಿನ ನಾನೂ ಪರವಸ್ತೂವೆಂದೇ
ನಿರಮಯ ನಿಜಸ್ವರೂಪರುಪಿದಲ್ಲಿಸಾಹೇಬೂ
ಗುರುರೂಪು ನಿಂತಾ ಮಾಡಿದ ಕೋಟಿ ಜನರೆಲ್ಲಾ
ಅವರೇ ನಮ್ಮವರೂ || 7 ||
ಎಂದೆಂದಿಗ್ಹೋಗಾದಲ್ಲಾ ಎನ್ನಯ ಸ್ಥಿತಿ
ಎಂದೆಂದಿಗ್ಹೋಗಾದಲ್ಲಾ ಎನ್ನಯ ಸ್ಥಿತಿ
ಅಂದಾದಿ ನಿಂತೀತಲ್ಲಾ
ಒಂದೇ ದೇವರೊಳೂ ಒಳಗ್ಹೋಗಿ ಉಳಿತಲ್ಲಾ
ಮುಂದೆ ಸದಾನಂದ ಹೊಂದಿಕಾಯಿತಲ್ಲಾ || ಪ ||
ಇಂದುವಿನ ಕಳೆ ಸವಿದು ಮುಂದಿನ
ಅಂದ ಹೋಗಾದಂದದೀ
ಸಿಂಧುತೆರ ನೊರೆ ಇಲ್ಲದಿರೆ
ನರನಂದವಾಯಿತಾ ನ್ಯಾಯದೀ
ಒಂದೆ ಎನ್ನುವ ದ್ವಂದ್ವ ಕಾಣುವ
ಮಂದಿ ಅರಿಯರು ಸಂಧಿಯನುಭವಾ || 1 ||
ಮಲ ಮಯದ ಭಾಂಡದಲಿ ಹುಣ್ಣಿನ
ಕಲಿಯ ಹೋಗಾದಾ ಪರೀ
ಜಲಮಯದಿ ಲವಣುಳಿದು
ಅಹುದಲ್ಲೆನುವ ಹೊಲಬಾಯಿತೆನ ಪರಿ
ಕಲಿತು ಕಲಿಯದೆ ಕಡಿಗೆ ಕಾಣ್ವನು
ನಿಲಯ ನಿಜಗುರು ಮಧ್ಯ ನಿಂತನೂ || 2 ||
ಮದನ ಕದನದಿ ಚೆದುರೆ ನಯನುಡಿ
ವಿಟ ವಿಲಾಸಗೆ ನಿಂತಿತೇ
ಹೃದಯ ಬ್ಯಾಸರ ಒದಗಿ ದಾಗಳೆ
ಮೊದಲು ಸ್ಥಿತಿ ನೆನಪಾಯಿತೇ
ಸದನ ಶೂನ್ಯದ ವದನ ಚರಿತೆ ಸೇರಿ
ಅರಿವಿಲಿ ತೋರಿ ನಿಂತಿತೇ || 3 ||
ಗಾನ ಪ್ರಭುಡನ ಮನದಿ ಸುತಿಸ್ವರ
ಧ್ಯಾನದೋಳ್ ನಿಂದಂದದಿ
ನಾನೆಂಬೊ ಗುರಿ ಪರಾತ್ಪರದೊಳು
ಕೂನ ನಿಂತಿತೆ ಜ್ಞಾನದೀ
ಪ್ರಧಾನಿ ನಿರ್ಮಲ ಧ್ಯಾನಿ ಪಟ್ಟದ
ಧಣಿಯೆಂದರು ಪಾತ್ರ ನಂದದೀ || 4 ||
ಇಲ್ಲದಿರುವದು ಸದಾ ಇರುವುದು
ಉಭಯ ಮೂಲಾ ಕಾಣ್ವದೂ
ಅಲ್ಲಿಸಾಹೇಬು ಗುರು ಕರುಣನಿಧಿ
ಅಹುದು ಮಾಡಿದ ಮರ್ಮಿದು
ಇಲ್ಲದಿರುತಿಹ ಇತರವೇ ಲಯ
ಮೂಲ ಕಂಡಿಹ ಮೂರ್ತಿ ಸ್ಥಿತಿಯಾ || 5 ||
ಮಾನಸ ಈ ಪರಿಯಮೆವುದೈ
ಮಾನಸ ಈ ಪರಿಯಮೆವುದೈ
ಮಹನೀಯ ಮಹಮೂರ್ತಿ || ಪ ||
ಹೆತ್ತಪಿತನ ಕಂಡುತ್ತುಮ ಸುತ
ನತ್ಯಾಂತರುಷ ತಾಳೀ
ಚಿತ್ತ ಚದರದೇ ಮತ್ಯಾರನ್ನಾದತ್ಯಾಡುವ ಕೇಳೀ
ನಿತ್ಯ ನಿರಾಳನ ನಿಜ ಕಂಡನುದಿನ
ಸತ್ಯಪಾಲರ ಸಾರ ಶರಧಿಯೊಳು || 1 ||
ಕಾಮಿನಿ ಪುರುಷನ ಕಾಣುತ
ಬ್ಯಾರೆ ಕಾರಣೆನ್ನದಿಹಳೂ
ಸ್ವಾಮಿ ಸಮರಸ ಪ್ರೇಮಿ
ಸಕಲಂತರ್ಯಾಮಿಯಾಗಿಹನು ಕೇಳುವ
ಭೂಮ ಚತುರ್ದಶ ಚೆರಿಸಲಣು ಪರಿ
ಆ ಮಹ ಧನ್ಯಂಗರಮರಿಕಿಲ್ಲದೆ || 2 ||
ಯಾದವ ಕುಲ ಧಣಿ ಮಾಧವ
ಕಾಣುತಾಧಾರನ್ನುವ ವಿದುರಾ
ಬೋಧ ನಿಜ ಮಾರ್ಗ ಸಾಧು ಕಾಣುತಿಹ
ವೇದಾಂತಾಗಮಸಾರಾ
ಆದಿ ಬೆರದು ತಾ ನಧಮನಾದ
ಸುವಾದ ಉಳ್ಳ ಬಹು ಸುಖನಿಧಿ ಅಂತರ || 3 ||
ಜಲಜ ವಿಕಸಿತವು ಜಗದಾಂಬಕನಿಹ
ಜಾಜ್ವಲವೆ ತಾ ಕಂಡೂ
ಸುಲಭ ಪರಾತ್ಪರದರ್ಯನ ಸುಜನನು
ಇರುವ ವಿವರ ಸುಖವುಂಡೂ
ಮಲಿನ ವಿಲ್ಲದೇ ಪ್ರಾಣಘಟವು ಚಿತ್ತ
ಮರಿಯದೆ ಸಿದ್ಧಿಯ ಮಾಡಿದ ಪುಣ್ಯನ || 4 ||
ಸಮರದಿ ಹಿತಪರ ಸವ್ಯಸಾಚಿ ಮನ
ಸಾರ್ವಕಾಲ ಹ್ಯಾಗಿಹದೂ
ಸುಮನ ಅಲ್ಲಿಸಾಹೇಬು ಗುರು ಗಮನ ಕರುಣ
ನರಾಧಮನ ಮ್ಯಾಲಿಹುದು
ಯಮನ ಭಯಂಕರ ಎಳ್ಳಿನಿತಿಲ್ಲದೆ
ವಿಮಲ ಏಕಾಂಗ ವಿಚಾರ ಪರನಿಗೆ || 5 ||
ಯಾತರ ಬಾಳೋ ಈ ಧರಿತ್ರಿಯೊಳೂ
ಯಾತರ ಬಾಳೋ ಈ ಧರಿತ್ರಿಯೊಳೂ
ಜಗಧಾತನರಿಯದಿರೆ || ಪ ||
ಶಿರಾವರಿಸಿಕೊಂಬ ಕುರಿಮರಿಯು ತನ್ನ
ತಾಯಿಯ ಬಿಡದಣ್ಣಾ
ಪರಿಶೋಧನೆಯಿಂ ಬೆರಿಯುತಿಹುದಣ್ಣಾ
ಅರುವುಳ್ಳ ನರನಾಗಿ ನಿಜದೀ
ಕುರಿಮರಿಗೆ ಕಿರಿದಾದೆ ಜಗದಿ
ಸೆರೆಸೂರೆ ಐಶ್ವರ್ಯ ನಿಮುಷದಿ
ಬರೇ ಬತ್ತಲೆ ಹೋಗುವೆ ದಿಟದೀ || 1 ||
ಶುನಕನ ಮನವೇ ಘನತೆ ಕಾಂಬದೂ
ಹೇಳುವೆ ಕೇಳುವದೂ
ಧಣಿಯು ಬಂದರೆ ಘನತೆ ಭಾವಿಪದೂ
ಜನನಿ ಜಠರದಿ ಜನಿಸಿ ನೀ ಬಂದೆ
ಚಿನುಮಯಾತ್ಮನ ಕಾಣದೆ ನಿಂದೇ
ಋಣಬಾಧ್ಯದಾ ಹೆಣದಂತಾದೆ
ಗುಣವಂತರ ಘನತೆಯು ನೀ ತಿಳಿಯದೆ || 2 ||
ತರುಣನ ಕಿರಣವು ಶರಧಿಯಾ ಮ್ಯಾಲಾ
ಬೀಳುತಲೇ ಕೇಳಾ
ತ್ವರಿತದಿ ವಿಕಸಿತದೀ ಬಿರಿವವೋ ಕಮಲಾ
ಪರಮ ಸಖನೂ ಬಂದಾನೆನುತೇ
ಹರುಷತಾಳೀ ತಾವು ಅರಳುತೇ
ಪರವಸ್ತು ನಾವು ಕಂಡದರಂತೆ
ತಿರಗದೆ ತಿಂಡಿಗೆ ಬಿದ್ದು ಹೊರಳುತೇ || 3 ||
ಪರಮ ಪತಿವ್ರತೆ ಪುರುಷನ
ಬಿರಿದಿನೊಳೂತನು ಸೂರೆ ಮಾಳ್ಪಳು
ಮರಿಯದೆ ಆಜ್ಞೆಯ ಮೀರಿ ನಡಿಯದಿಹಳೂ
ತರುಳೆ ನಡಿವ ವಿಚಾರದಂತೆ
ಧರಿಗಧಿಕನನು ಕಾಣದೆ ನಿಂತೇ
ಬರಿದೆ ಒರಗುವದೊಳಿತಲ್ಲಂತೆ
ನರೀ ಶುನಕ ಪರಿಸರಿಯಾಯ್ತಂತೆ || 4 ||
ಸೊಲ್ಲು ಕೇಳುತಲೆ ನಿಲ್ಲದೆ ನಡಿಯೇಳೊ
ಉಲ್ಲಾಸವು ತಾಳೊ
ಅಲ್ಲಿಸಾಹೆಬು ಗುರುವಿನ ಮೊರೆ ಬೀಳೋ
ಕೊಲ್ಲುವ ಕೊಲೆ ತಪ್ಪಿಸುತಿಹನೇ
ಜಲ್ಮವೆಂಬದು ಜಾಗ್ರ ತಿಳಿಪನೇ
ಕುಲ್ಲ ಮನುಜ ಹೋಗದೇ ನಿಂತನೇ
ಹಲ್ಲು ಮುರಿವ ಯಮನಲ್ಲಿ ಸಿಗುವನೇ || 5 ||
ಕಾಣಬಾರದೋ ಕಲಿಜನಕೇ
ಕಾಣಬಾರದೋ ಕಲಿ ಜನಕೇ
ಜ್ಞಾನಿ ಕಂಡದೂ
ಜಾಣಗುರು ಸಂಧಾನ ದೊರಿಯದೆ
ಪ್ರಮಾಣ ಶತವರುಷ ಏನು ಬಾಳಿದರು || ಪ ||
ನಾಮ ಬಲ್ಲದೋ
ನಾಮದನೂಮಾನ ಹೋಗದೋ
ಆ ಮಹಾ ನಿಜಮಾರ್ಗ ನಿಲಕದಿರೆ
ನಾಮ ನಿಜ ಕುರುಹು ಈ ಮಹಿಯೊಳಗೆ || 1 ||
ಮರ್ಮ ಸುಜನನೂ ಕಂಡದೂ
ಕರ್ಮ ಮನುಜನೂ
ಚರ್ಮ ಬಲದಿ ಕಂಡೇನಂದರೇ
ಪಾರ್ಮಾಡೋ ಅಪರ ವಸ್ತುವ || 2 ||
ದೇವರೊಂದಲ್ಲೈ ಜಗದೊಳಗೇ
ದಾವದಾಗಲೈ
ಕೇವಲನುಭ ಆತ್ಮಪರೀಕ್ಷೆ
ಆವಭಾವಾ ಅವ ಕಂಡೇಳುವ || 3 ||
ಕುಕ್ಷಿ ಮಾರ್ಗಲ್ಲೋ ಈ
ಕ್ಷಿತಲಕ್ಷೆಗೊಳಿಸಿತಲ್ಲೋ
ಮೋಕ್ಷಪೇಕ್ಷ ದುರಾಶೆ ಸಂಗದಿಂ
ಲಕ್ಷ ಶತವರುಷ ಕಷ್ಟ ಬಟ್ಟರು || 4 ||
ಪುಣ್ಯ ಪುರುಷನೂ
ಅಲ್ಲಿಸಾಹೇಬು ಗುರುವೆ ಧನ್ಯನೂ
ನಾಣ್ಯ ನಿಜ ಬೋಧಾಮೃತದೊಳಗೆ
ಸಣ್ಣವನಾದರೆ ಕಣ್ಣಾರ ಕಾಂಬೆ || 5 ||
ಸರ್ವ ವ್ಯಾಪಕನಾ ಸಾಕ್ಷಿಯ ಮಾಡೀ ಕೆಡುವದೂ
ಸರ್ವ ವ್ಯಾಪಕನಾ ಸಾಕ್ಷಿಯ ಮಾಡೀ ಕೆಡುವದೂ
ಸಾಧು ಜನರಿಗಿದೂ ಸರಿಯಲ್ಲೈ || ಪ ||
ಚುಕ್ಕೆಯಂತೆನುವದೂ ಲೆಕ್ಕ ಗಣಿತವೈ
ಮಿಕ್ಕಿರುವನೆ ಸಾಕ್ಷಿ ಮಾಡುವರೇ
ದುಃಖ ಸಾಗರದೊಳು ಕಕ್ಕಸ ಬಟ್ಟಿರೀ
ಯುಕ್ತವಲ್ಲಿದು ಬಹು ಎಚ್ಚರಿರಲೈ || 1 ||
ಚಂದ್ರನಂತೇ ಕೆಲರೂ ಮಂದಮತಿಗಳೆ
ಆನಂದದೀದಾಡುವದೀದತಿ ಮೂರ್ಖತೇ
ಕುಂದು ಬಂದಿರುವನಾ ವಂದಿಸಬಹುದೇನೊ
ಎಂದಿಗಾದರಿ ಪಾಪಾ ಬೆಂದಿಪದೋ || 2 ||
ಜ್ಯೋತಿಯಂತೆನುವ ಹೀನತಿಜನ ನುಡಿಯು
ಸುಜಾತಿ ಮನಕೆ ಇದು ಸಮ್ಮಾತುಂಟೇ
ಈ ತೆರನಕಲೇ ಪ್ರಭೂ ಧಾತನ ಮಾಡುವದೂ
ಭೂತಳದೊಳು ನಿಮಗೆ ಪಾತಕುಂಟೈ || 3 ||
ಮ್ಯಾಣದೊಳಗೆ ಮೃದು ಕಾಣದಂತಿರುವಂತೆ
ಹೀನರು ಸಾಕ್ಷಿ ಮಾಡಿ ಸಾರೂವರೂ
ಏನು ಅನ್ಯಾಯ ಖೈದೀ ಕಾನಿನೊಳು ಕೆಡಿಪದೂ
ಪ್ರಾಣಘಾತಕ ನಿಮ್ಮ ಬಿಡುವೊದುಂಟೇ || 4 ||
ಅಂತಿಲ್ಲದವನ ಜಗದಂತಿನೋಳ್ ತರುವದೂ
ಶಾಂತ ಗುರುಮೂರ್ತಲ್ಲಿಸಾಹೇಬು ಗುರುವಾ
ಎಂತು ಒಪ್ಪುವನೊ ಪಾದಾ ಪ್ರಾಂತ ಸೇರುವೊ ತನಕಾ
ನಂತ ಕರ್ಮಾವು ಹೆಚ್ಚೆ ಕಾಣುವೊದೈ || 5 ||
ಅಣುವಾಗದೇ ನಿಮ್ಮಾ ಕಾರ್ಯಾ ಅಣುವಾಗದೇ
ಅಣುವಾಗದೇ ನಿಮ್ಮಾ ಕಾರ್ಯಾ ಅಣುವಾಗದೇ
ಅನುಚಿತಾ ಬಹು ಘನವಾಗ್ಯದೆ ಹ್ಯಾಗೆ || ಪ ||
ಕೀರ್ತಿವಾರ್ತಿ ಬಹು ಮೂರ್ತೆನಿಸುವದೆ
ಪೂರ್ತಿ ನಿಮಗಿರಪಕೀರ್ತಿ ಬರುವೊದಿದು ಹ್ಯಾಗೆ || 1 ||
ಸತಿ ಸುತರ ಸೌಖ್ಯ ಸತತಿರುವದು ನಿಮ್ಮ ಮತಿ ಬೇಡಲು
ಭೂಗತವಾಗುತಿರುವೊರ್ಯಾಗೆ || 2 ||
ಅಂಗರೋಗ ಕೈ ಸಂಗತವಾಗದ
ಸಂಗರ ಮಾಡಲು ಭಂಗ ಬಡುವೊದಿದು ಹ್ಯಾಗೆ || 3 ||
ಶತವರುಷಾದರು ಗತವಾಗದ ಸಮ್ಮತ ನಿಮಗಿರೆ
ಹತಕಾಲ ಅನುಕೂಲಿಪುದ್ಯಾಗೆ || 4 ||
ಕನಕಮಯದ ಬಹು ಘನ ಸೌಧಂಗಳು ಕನಸಿನಂತೆ
ಒಂದು ನಿಮುಷದಿ ಕಾಣುವೊಧ್ಯಾಗೆ || 5 ||
ಮೃಣ್ಮಯದೊಳು ಮಲಗುವ ದಿನವಾಯಿದೆ
ತಣ್ಣಗೆ ಮನೆಯೊಳು ತಾಸು ಶೈನ ಇಲ್ಲ್ಯಾಗೆ || 6 ||
ಇಂತಿಹ ಜಗಸುಖ ಭ್ರಾಂತವೆ ಒಳಿದತಿ
ಶಾಂತಲ್ಲಿಸಾಹೇಬು ಗುರು ಚಿಂತನಾಗೋ ಬಗೆ || 7 ||
ಅನುಭವಿಲ್ಲಾ ದಾಡುತಿರುವರೇ
ಅನುಭವಿಲ್ಲಾ ದಾಡುತಿರುವರೇ
ಘನದೈವ ನಿಜವಿದನುಭವಿಲ್ಲಾ ದಾಡುತಿರುವರೇ
ಅನುಭವಿಲ್ಲಾ ದಾಡುತಿಹರೂ ಮನುಜರೆಲ್ಲರೂ
ಮನದ ತುದಿಯ ಬದಿಯ ತುಂಬಿ
ಮಹಾಮಹಿಮ ಮೆರವ ಪ್ರಭುವಾ || ಪ ||
ಪಂಡಿತಾಧ್ಯರೆಲ್ಲರವನ ಕಂಡು ಕಲಿಯದೇ
ಕಂಡ ಹಾಗೆ ಬಹಿರಂಗ ಬಹಳ ಪರಿಯ ಪೇಳ್ವೊರಲ್ಲಾ || 1 ||
ಸತಿಯ ಪತಿಯ ಸುತ್ತಿಸೆ ಮತಿಯ ವ್ಯಥೆಯ ತೀರಿತೇ
ಗತಿಯ ಮುಕುತಿ ಬೇಡ್ವ ಮಂದುಮತಿಯ ಮಾರ್ಗ ಮಾತಿದೆಲ್ಲಾ || 2 ||
ನಾಟಕಾಡ್ವ ಸ್ಥಲದಿ ಕುರುಡ ನಕ್ಕ ರೀತಿಯಾ
ಜಗದಾಟ ಜನರು ಭಜಿಪುದೆಲ್ಲ ಬ್ಯಾರೆನಲ್ಲ ಭೇದವಿಲ್ಲಾ || 3 ||
ಶುನಕರೆಲ್ಲ ಕೂಗುತಿರಲು ಶ್ಯಾಣೆ ನದರೊಳೂ
ದಣೀದಿರ್ಯಾ ಕೇಳೆನಲು ವ್ಯಾಘ್ರ ನರಿಯ ಪರಿಯ ಚೆರಿಯ ಜನರೂ || 4 ||
ಕುದಿರೆ ಸೇವೆ ಮಾಡುತಿರುವ ಚೆದುರನ ಭಾವಾ
ಮದ ಮದಾಂಧರಾದ ಜನರ ಮರವಿಯಲ್ಲಿ ಇರುವೊಪರಿಯಾ || 5 ||
ಕಳ್ಳನೊಬ್ಬ ರಾಜನಿಂದೆ ಉಳ್ಳವನಾಗಿ
ಕಳ್ಳ ರಾಜನರಿಯದಂತೆ ಕಾಣರೀ ಕಲಿ ಜನರೂ || 6 ||
ಕಳದುಳಿದವ ಜಾಣನೆಂದು ಇಳಿಯೊಳನುವರೇ
ಕಳಿಪ ಉಳಿಪ ಅಲ್ಲಿಸಾಹೇಬು ಗುರು ಪ್ರತಾಪ ಗುರಿ ಕಾಣದೇ || 7 ||
ಲಯಕಾಲಾ ಜಯಲೀಲಾ
ಲಯಕಾಲಾ ಜಯಲೀಲಾ
ಕಾಣದ ಇಹ ವಿದ್ಯವದು ಯಾಕೇ || ಪ ||
ಫಲವಿಲ್ಲದ ತರುವೂ ಬಹುವಿಧ
ಬೆಳದರದನುಚಿತವೂ
ಚಲದಿ ಮರಣ ಮಾರ್ಮಲತು ನಿಂತಿಹುದು
ಕುಲಚೆಲ ಚೆಲುವಿಕೆ ಬಲಿಯಗೊಳಿಪ || 1 ||
ಧನ ಮಂತ್ರಿಯು ಮರಣಾ
ಸಮಯದೊಳು ದಣಿದನರ್ಥ ಹರಣಾ
ತೃಣದೊಳು ವಿಧಿತಾ ತೆಗಿಯುತಿರುವಾಗ
ತನಗಿಹ ಸಹಾಯ ದೂರಾಯಿತೇ || 2 ||
ಸಮಯಕಿಲ್ಲದ ಪುರುಷಾಭರಣಗಳು
ಧರಿಸಲುಂಟೇ ಹರುಷಾ
ಭ್ರಮಪುಟ್ಟಿದಾಗ ಬಾರದ ವಚನದ
ಸಮಯಾಯಿತಯ್ಯ ಶುಭವಿಲ್ಲವು || 3 ||
ಗಜರಾಜನು ತಿಂದಾ ಹಣ್ಣಿನೊಳು
ಘನವಿಲ್ಲದ ಚಂದಾ
ತ್ರಿಜಗದಿ ನರವಿಧ ತೆರನಾಗುವದೇ
ನಿಜ ವೆಂದ್ಹಿಡಿಯಲು ನಿಷ್ಫಲವದೂ || 4 ||
ಜಯವಾಗುವೊ ಲಯವೂ ಬೋಧಿಸುವಾ
ಅಲ್ಲಿಸಾಹೇಬು ಗುರುವೂ
ಭಯಭಕ್ತಿಯಿಂದ ಬ್ಯಾಗಪೋಗಿ ನಿಜ
ವಿದ್ಯದು ನೀ ಕಲಿಯದೇ
ತಿಳೀ ನಿನ್ನಾ ಜಾತಕಾ
ತಿಳೀ ನಿನ್ನಾ ಜಾತಕಾ
ಕಳೀ ಪೂರ್ವದ ಸೂತಕಾ
ಹೇಳಿ ತನುವಿನ ಪಾತಕಾ
ಭಳಿರಾಯಿತು ಸಾರ್ಥಕಾ || ಪ ||
ಮೂತ್ರ ತನುವಿನೊಳಿಲ್ಲದೂ
ನೇತ್ರ ಮನದೊಳಗಿರುವದೂ
ಕ್ಷೇತ್ರಕೆಲ್ಲಾ ಘನವದೂ
ಚಿತ್ರ ನಿರ್ಮಲ ಶೂನ್ಯದು || 1 ||
ಮುನ್ನ ಸೂತಕ ಪಾಪದೂ
ಹೊನ್ನಿನಿಂದಾ ಹೋಗದೂ
ತನ್ನ ತಿಳಿಯಲು ಪೋಪದೂ
ತನ್ನ ಮರಿಯಲು ಹೋಗದೂ || 2 ||
ಉರಗ ತೊರಿದೂ ಹುತ್ತನೂ
ಎರಗಲ್ಯಾಗೇ ಸಾಯ್ವನೂ
ಮರುಳು ಡಂಭಕ ಮನುಜನೂ
ಶರೀರಿಡಿದಾ ಚರಿಪನೂ || 3 ||
ಜಾತಸ್ಯ ಮರಣಂ ಧೃವಂ
ಶಾಸ್ತ್ರ ಸಮ್ಮತವದು ನಿಜಂ
ಗಾತ್ರ ತನು ಪಿಡಿದ್ಯಾಕಿದಂ
ಸೂತ್ರ ಜಾತಕಾ ಬ್ಯಾರದಂ || 4 ||
ಜಾತಕಾ ತಿಳಿದಾತನೇ
ಜಾತಿಗೆ ಹೆಚ್ಚಾತನೇ
ಜಾತಕಾ ಮರದಾತನೇ
ಜಾತಿಗೆಲ್ಲಾ ಹೀನನೇ || 5 ||
ನಿಷ್ಟ ಜಾತಕ ಸಿಕ್ಕಿತೇ
ಅಷ್ಟ ಮದವೇ ಹೋಯಿತೇ
ಕಷ್ಟವೇ ಕಡೆ ಮಾಡಿತೇ
ಇಷ್ಟು ಫಲ ಬಗೆ ಬಂದಿತೇ || 6 ||
ಪೂರ್ವ ಫಲದನುಭಾವವಂ
ದೈವ ಬಲದ ಸಹಾಯವಂ
ತೋರ್ವ ಅಲ್ಲಿಷಾ ಗುರುಪದಂ
ಸರ್ವ ಪಾಪ ನಿವಾರಣಂ || 7 ||
ಭಕ್ತರು ದೇವಾರ ಬೆರದೂ
ಭಕ್ತರು ದೇವಾರ ಬೆರದೂ
ಮತ್ತು ತಾ ಬ್ಯಾರಾದ ಬಗೆ
ಶಕ್ತನು ಗುರುಕರುಣ ಪಡದಾ ಸುಜನರ್ಹೇಳಿರೈ || ಪ ||
ಭಾವ ಹೇಳಿರನುಭವ ಬ್ಯಾಡಾ
ಜೀವ ಗುಣವು ಜೆರಿಯುವಂತೇ
ದೇವರ ಬೆರದಿಹದು ನರನೇ
ಜೀವನೇ ಹೇಳಿರೈ || 1 ||
ಉಭಯದೊಳೊಬ್ಬ ಬೆರತ ಮ್ಯಾಲೇ
ಶುಭ ಸುಖ ಸಂಧಾನಾರಿಗೇ
ಸೊಬಗು ತಿಳಿದೂ ಹೇಳಿರೆನಗೇ
ಸಾಧುಪ್ರಿಯರೇ || 2 ||
ಗುರು ಬೆರಿಯದ ಗುಣ ಹೀನರಿಗೇ
ಘೋರ ಕೊಲೆಯೂ ಕಾಣದಂತೇ
ಬೆರತ ಜನಕೆ ಸಿರಿ ಇಲ್ಲೆನಲು
ಹರುಷವಾದಿತೇ || 3 ||
ಚಕ್ರಬಿಂಬದನುಭ ಪರೀ
ಚಕ್ರಧರ ಸಹೋದರಿಗೇ
ವಿಕ್ರಮರಾರ್ಯಾಡೊ ಆವಿಧ
ಹೇಳಿಕೊಟ್ಟಾಗೇ || 4 ||
ಇಲ್ಲ ಸುಖವು ದುಃಖವೆಂದೂ
ಹೇಳುವದದು ಹುಚ್ಚುಭಾವ
ಅಲ್ಲಿಸಾಹೇಬು ನಿಜಗುರು
ತಾ ನನ್ನುತಿರುವಾ || 5 ||
ಪ್ರಾಣ ಪರಮಾತ್ಮನೋಳ್
ಪ್ರಾಣ ಪರಮಾತ್ಮನೋಳ್
ಬೆರದಾದೆಂಬುವರಿಗೆ
ಪರಸುಖ ಎಂದಿಗಿಲ್ಲೈ ಬೆರಿಯಾದೆ
ನರನು ಬ್ಯಾರಿರುವೊದು
ಬೆರಿಪೊಂತ ದರಿಯಾದಾಡುವೊರಿಗೆ
ತ್ವರಿತ ತೋರುವೆ ಸಾಕ್ಷಿ || ಪ ||
ಜ್ಯೋತಿ ಪ್ರಕಾಶಕ್ಕೆ ಜಾತಿ ಭೇದವುಂಟೆ
ಆತುಕೊಂಡಿಹ ಬತ್ತಿ ಬಿಟ್ಟಾದೀತೆ
ಆ ಮಾತಿನಂತೆ ನರನೂ ಆತುಕೊಂಡಿರುವ
ಸುಜಾತಿ ತನ್ನಯ ಸ್ಥಿತಿ ಸೊಗಸರಿಯದೆ ಬರೇ || 1 ||
ಗಂಧ ಪರಿಮಳಗಾಳೋಳ್ ದ್ವಂದವಾಗುವೊದುಂಟೆ
ಹೊಂದೀದ ಕೊರಡೀನ ಹೊರತಾದೀತೆ
ಗಂಧಾದಿ ಕೊರಡೋಗಿ ಹೊಂದೀ ಕೊಂಡಹಾಗೆ
ಅಂದ ತನ್ನಯ ಚಂದ ಅಹುದೆನಿಸದೆ ಬರೇ || 2 ||
ಮೇಲಾದ ಮಧುರ ತಾ ಹಾಲುಬಿಟ್ಟಿರುವೋದೆ
ಹಾಲು ಮಧುರ ಅನುಭಾವಾದಾ ಪರಿ
ಮೂಲಾಕಬ್ಬಾಗ್ಯದೇ ಲಯಕಾಲ ಹೊಂದ್ಯಾದೆ
ಕೀಲರಿಯದೆ ತನ್ನ ತಿಳಿಯದಾಡುವರಿಗೆ || 3 ||
ತುಪ್ಪಾ ಸುಸ್ವಾದಾವೂ ಅಪ್ಪಿ ಕೊಂಡಿರುವಾವೂ
ನೆಪ್ಪಿನಿಂ ನೋಡಾಲೂ ಬಿಟ್ಟಾದೀತೆ
ಗುಪ್ತದೋಳ್ ತನ್ನಯಾ ಗುರಿ ಹಾಗೇ ಕಾಣಾದೆ
ಅಪ್ತಾನ ಕಳೆದು ಕೊಂಡಂತ್ಯಾಕುಡಿಕಿದರಿಲ್ಲಾ || 4 ||
ನಾವೆಂತೊ ನಮ್ಮ ಪ್ರಕಾಶೆಂತೊ ಸುಖದುಃಖಾ
ನಮ್ಮ ಬಿಡದೆ ರಾಜೀ ಬಿಡಿಪೋದೆಂತೊ
ಜಾವ ನಿಲ್ಲಾದೆ ಸಂಜೀವಲ್ಲಿಷಾ ಗುರೂ
ಭಾವಿಸಿ ಕೇಳಿ ಬೆರಿವನ ಬ್ಯಾಗ ತಿಳಿಯಾದೆ || 5 ||
ಪ್ರಾಣಾನಂದ ಹೆಚ್ಚಿತೇ ಆಹಾ
ಪ್ರಾಣಾನಂದ ಹೆಚ್ಚಿತೇ ಆಹಾ
ಈಗಾ ಪ್ರಾಣಾನಂದ ಹೆಚ್ಚಿತೆ
ಕ್ಷೋಣಿದುರ್ದೋಷ ಸೋಕದ
ದೇವರಹುದಾಗೆ || ಪ ||
ಭಾನುವಿನ ಕಳೆ ಭೂ ಸರ್ವರೊಳು
ಭರಿತವಾದಾ ಭಾವವೆ
ಹೀನ ಮಲಮಯ ಕೂನ
ತನ ಸಂಧಾನ ಆಗದನ್ಯಾಯವೆ
ಮಾನಭೂಷಣ ಮಹಿಜನರಿಗೆ
ಮ್ಯಾಗಿರುವೊ ಬಗೆ ತಿಳಿದಮಹನ್ಯಗೆ || 1 ||
ಉದಕ ಒಂದೆ ವೃಕ್ಷ ಸಂತತಿ
ಒಳ ಹೊರಗೆ
ತಾ ತುಂಬಿತ್ತೆ ಅದರಲ್ಲಿ
ವಿಷಕಾರ ಲವಣ ಅಣುವಿಲ್ಲೆ ತೋರಿತೆ
ಅದರಂತೆ ಆಧ್ಯಾಂತ ದೈವಾ
ಅಗಣಿತಹುದಾದಂತ ಆಧ್ಯಗೆ || 2 ||
ಚೀನಿ ಚೀನಾಂಬರ ಸುವಸ್ತ್ರವು
ಸೇರಿದಂತೆ ಕಸ್ತೂರಿ
ಮಾನವರು ತಾ ತೂಗಿ ನೋಡಲೂ
ತೂಕ ಸರಿಯಾದಾ ಪರಿ
ಜಾಣ ಸುಜನಗೆ ತ್ರಾಣಿ ದೇವರು
ಜಗದಮ್ಯಾಗೆ ಝಗಿಸುವದಕೆ || 3 ||
ಘೃತವೆ ಸಕಲ ಪದಾರ್ಥ ಬೆರದು
ಸತತ ಸಾಕ್ಷೀ ತೋರಿತೆ
ಅಪರಮಿತ ಪರವಸ್ತು ಹಾಗೆ ಬೆರದು
ಬೆರಿಯದೆ ನಿಂತಿತೆ
ಮಿತವಸ್ತು ನರನ್ಹತವಾಗಿ ಆ ಸ್ಥಿತಿ
ಮತಿಯೊಳು ತಿಳಿದ ಪುಣ್ಯಗೆ || 4 ||
ಕೇಳಿ ತಿಳಿದೂ ಕಂಡು ಕಲಿತ
ದಯಾಳು ಧನ್ಯರ ವಾಕ್ಯವೂ
ಪೇಳಲ್ಕೆ ಪನ್ನಂಗನಣೆ ಮ್ಯಾಲಾದ
ಪರಿಯಾ ಜೀವವೂ
ಸುಲೀಲಲ್ಲಿಸಾಹೇಬು ಗುರು
ಸಾಕೀಲ ತೆರಹುದಾದದಕೆ || 5 ||
ಹೋಗಿರುವಾ ನರನಾ ಭಾವಾ ಸಾಗೀಸೀತೆನ್ನ ಗುರುವಾ
ಹೋಗಿರುವಾ ನರನಾ ಭಾವಾ ಸಾಗೀಸೀತೆನ್ನ ಗುರುವಾ
ತೂಗಿತಾನಂದ ತೊಟ್ಲ ತೂರ್ಯವಾ || ಪ ||
ಹಸ್ತ ಅಕ್ಷರಮಧ್ಯಾ ಹತವಾಗಿರುವೊ ಘಂಟಾ
ಶಿಸ್ತೆ ಮಾಡಿದ ನರನಾ ಚೇತನ್ಯವಾ
ಉತ್ತುಮದೋನ್ಮತ್ತಾ ಅತ್ತಿತನುಭಾವ ಬಿಡದೇ
ಗೊತ್ತೀಲಿ ತೂಗಿತು ಸಂತೋಷವಾ || 1 ||
ಧ್ಯಾಸ ಪ್ರತಿಬಿಂಬದೋಳೂ ತಾಸು ಕುಂತಿರೆ
ಕೇಳೂ ನಾಶೊಂದಿ ಕನ್ನಡಿಹದು ಕೈಯೊಳೂ
ಸೂಸಿ ನೋಡಲ್ಕೆ ನಿಜ ವಿಲಾಸಾದಿ ನರನಂತಿರುವಾ
ಆಶೆಭಯ ಇಲ್ಲದಾಯಿತಾನಂದವಾ || 2 ||
ದಾರಿ ಹಿಡಿದು ಹೋದಾ ಮನುಜಾ ಸೇರಿದಂತೆ ಮನದಿ ಸಹಜಾ
ತೋರಿ ಅಡಗಿ ಇರುವ ನರನು ಕೂಡಿದಾ ನಿಜಾ
ಘೋರ ಕರ್ಮದ ಕೊಲೆ ಪಾತಕದ ಸೇರದಂತಾಡೂವೊ ವಿಧಾ
ಯಾರಿಗಾದರು ಬೇಕಾಗಿಹುದೆ ನಿಜ ನಿರ್ವೀವಾದಾ || 3 ||
ಬಾಲ್ಯದಾಟಾ ಹೋಗಿ ಇರುವಾ ಭಾವವೆ ಸುಜ್ಞಾನದರುವಾ
ಕಾಲ ಬಂದ ಸಮಯಾದಿ ಕಲತೋಗುವಾ
ಜಾಲ ವಿಷಯ ಲೋಲನಾಗಿ ಈ ಲೀಲೆ ತಿಳಿಯಾದೆ ಹೋದರೆ
ಕೀಲು ಮುರಿದ ಗಾಲಿಯಂತೆ ಕಾಣುವಾ || 4 ||
ಇಲ್ಲದಿರುವನ ಈ ಭಾವವೂ ಎಲ್ಲವಾಗಿಹ ನಿಜ ಸಂಧಾನವೂ
ಅಲ್ಲಿಸಾಹೇಬು ಗುರುವಿಗರುವಿ ಅಂಗೈಕ್ಯವೂ
ನಿಲ್ಲದೆ ಕೇಳಿದ ಸುಜನ ಎಲ್ಲಿ ಹೋದರಿಲ್ಲನುಮಾನಾ
ಉಲ್ಲಾಸ ಉಕ್ಕೇರುವದು ನಿಜಗುರು ಕಾರುಣ್ಯಾ || 5 ||
ಕನಸೀನ ಗಂಟಿನಂತೋ
ಕನಸೀನ ಗಂಟಿನಂತೋ
ಕಲಿಯೀದು ಕಾಣದೆ ನೀ ಮರತೊ
ಮಾನವ ಕಾಣಾದೆ ನೀ ಮರತೊ || ಪ ||
ಕಂಡಾರಿಂದೀನ ದಿನ ಕಂಡೀತನ್ನಯ ಘನ
ಕಂಡೂ ಹೇಳುವೊ ಜನ ಕೈ ಸೇರಿ ಕನಸೀನ
ಮಂಡಾಲ ತೆರನಾ ಮಾಡೊ
ಮಾನವಾ ಮಾರ್ಗ ನಿಜಾಗ್ರಾ ನೋಡೊ || 1 ||
ನೀರೂ ಗುಳ್ಳಿನ ಭಾವ ತೋರೂವದಿ ತನುವಾ
ಸೇರಿ ನಿರಾಮಯವ ಸೇರಾದಕೂಭಾವ
ದಾರಿ ಬಹುದಣಿಸೂವದೊ
ಮಾನವ ಧೈರ್ಯಾದಿ ನೀ ಬಾಳ್ವದೊ || 2 ||
ಭಾಂಡಾತ ಕೈಜಾರಿ ಬಂಡೆಮ್ಯಾಲಾದ ಪರಿ
ಕಂಡೂ ನೀವು ಕೇಳಿರಿ ಪಿಂಡಾಂಡವದೇ ಪರಿ
ಭಂಡಾಟ ಘನವಾದಿತೊ ಮಾನವಾ
ಬಾಳಿದ್ದು ವ್ಯರ್ಥಾದಿತೊ || 3 ||
ಬಾಳೆ ಹಣ್ಣಿನ ಮರ ಫಲಭೋಗ ಸುಖ ಸಾರ
ಬಾಳೂವೊ ಈ ನರರ ಬಾವಾವೆ ಸಹಿಪೂರ
ಬೇಲಿಗುಪಚಾರಾವಾಯಿತೋ ಮಾನವಾ
ಬಹು ಕೇಡು ಬಂದೊದಗಿತೊ || 4 ||
ಜಿಹ್ವಾ ಚಾಪಲ್ಯಾ ಬಹುರಮ್ಯಾ ಅರ ನಿಮಿಷಾವೂ
ಗಮ್ಮಾನೆ ತಾತೋರಿ ಕಾಣಾದ್ಹೋದ ಪರಿ
ಇಮ್ಮಾಹಿ ಅಹುದೆನ್ನಿರೋ ಮಾನವಾ
ನಿಂ ಮನಸಿನೋಳಿಡದಿರೊ || 5 ||
ಕಣ್ಣೂ ಕಟ್ಟಿನ ವಿದ್ಯ ಕಾಣ ತೋರಿದ
ತನ್ನೊಳ್ತಿಳಿದ ಬದ್ದ ತಾ ಕಾಸು ಕೇಳಿದ
ಉನ್ನಾತಿ ಊರ್ವಿ ಸುಖಾ ತಿಳಿಯದಿರಿ
ದನ್ಯಾಯವನ್ನೋದಕಾ ತಿನ್ನುವದಿದನ್ಯಾಯ ವನ್ನೋದಕಾ || 6 ||
ಹಾದಿ ತಪ್ಪಿ ತಿರಗಾದೆ ಗಾದೆಮಾತಿಗ್ಹೋಗಾದೇ
ಸಾಧೂ ಮಣಿ ಅಲ್ಲಿಸಾಹೇಬು ಗುರುವಿನ ಬಿಡದೇ
ಬೋಧಾದಿ ಜಗಲೈಸುವಾ ಕನಸಿನಂತಹುದಾಗಲೀ
ಮಾನವಾ ಅನುಭವಾ ಅಹುದಾಗಲಿ ಮಾನವಾ || 7 ||
ತಿಳಿಯಾದು ನಾಟಕಾ ನಾಟವೂ
ತಿಳಿಯಾದು ನಾಟಕಾ ನಾಟವೂ
ಇಳಿಜನರಿಗೆ ಬ್ಯಾಗಾ ಈಗ ತಿಳಿಯಾದು ನಾಟಾಕ || ಪ ||
ನಿಖಿಲ ಜಗ ನಿರಂಜನನೊಳು
ನಿಜದಿಂದ ಇದ್ದ ರೀತಿಯಾ
ಸುಖನಿಧಿ ನಿಜಗುರು ಸೇರಿ ತನ್ನ
ಈ ಪ್ರಕೃತಾಡಿಪ ಪರಿಪರಿಶೋಧನಿಲ್ಲದಿರೆ || 1 ||
ಮೊದಲು ರಾಮಾಯಣಾಗಮಾ
ಮೋಹದಿಂ ಕೇಳ್ದ ಮನುಜಗೆ
ಚದುರ ರಾಮ ರಾವಣನ ಚರ್ಮದಿಂದದ
ಮಾಡಾಡಿ ಪೂದಹುದ್ಯಾಗಾಗುವೊದೈ || 2 ||
ಪಂಚಮುಖ ಪಾರ್ವತೀಶಗೆ
ಮುಂಚೀತ ಕೇಳ್ದ ಮನುಜಗೆ
ಪೊಂಪಾಕ್ಷೇತ್ರವು ಪೊಕ್ಕರು ಪ್ರತಿದಿನ
ಪಂಚಬಾಣನ ದಹಿಸಿದ ಶಿವವೆನ್ನುವ ಬಗೆ || 3 ||
ಮೋಹಿನಿ ಮದನ ಪಿತನಾದನೂ
ಮದ ಮುರಿದು ಭಸ್ಮಾಸುರನನೂ
ತಾಹೀನ ಶಿವನು ತೆರನಾದನುಭವ
ಮಾನಸದೊಳು ಮೊದಲಹುದಾಗದವನಿಗೆ || 4 ||
ಪ್ರಥಮ ಕಥೆ ಕೇಳ್ದ ಮನುಜಗೆ
ವೃಥ ನಾಟಕ ಕಂಡಿತೋ ಹಾಗೆ
ಮತಸಾದಲ್ಲಿಸಾಹೇಬು ಗುರು ಸಿಗದೆ
ಕಥೆ ಪೂರ್ವದ ತನ್ನ ಸ್ಥಿತಿ ಎಂದಿಗಾದರೂ || 5 ||
ಸಾಯದಿರೊಡಂಬಡನೂ ಸರ್ವೇಶಾ
ಸಾಯದಿರೊಡಂಬಡನೂ ಸರ್ವೇಶಾ
ಸತ್ತವರ್ಹತ್ತರಿಹನೂ ಸರ್ವೇಶಾ || ಪ ||
ಸಾಯದೆ ಸೌಮಿತ್ರೀ ಸತ್ತನು ಸುಮ್ಮತಿ
ನ್ಯಾಯವು ನೋಡಿ ರಾಮನಪ್ಪಿಕೊಂಡರೀತೆ || 1 ||
ಇಕ್ಕದ ಮಾರನೂ ಗಕ್ಕನೆ ಸತ್ತನೂ
ಮುಕ್ಕಣ್ಣ ಮೋಹದಿ ದಕ್ಕರ ಬಟ್ಟರೀತೆ || 2 ||
ಬಾಲನು ಬಾಲಿಗೆ ಬಲಿಯಾಗಿ ಹೋದನೂ
ಶೀಲನು ಕಾಲವಾಗೆ ಬಾಲೆಯು ಒಪ್ಪಿದಂತೇ || 3 ||
ಚಂದ್ರ ವದನೆಗಾಗಿ ಸಂದು ಹೋಗಲು ಒಬ್ಬಾ
ಆನಂದ ಬಟ್ಟು ತಾನಪ್ಪಿ ಕೊಂಡಂತೆ ಸರ್ವೇಶಾ || 4 ||
ನಿಜಗುರುವಲ್ಲಿಸಾಹೇಬು ಬಿಟ್ಟು ತ್ರಿಜಗವೂ
ಭಜನೆಯಂ ಸಿದ್ಧಿ ಎಂದಿಗೆ ಬೆರಿಯದಂತೆ ಸರ್ವೇಶಾ || 5 ||
ಯಾಕೇ ಗುರುವ್ಯಾಕೆ ಹೀನ ಜನರಿಗ್ಯಾಕೇ ಗುರುವ್ಯಾಕೇ
ಯಾಕೇ ಗುರುವ್ಯಾಕೆ ಹೀನ ಜನರಿಗ್ಯಾಕೇ ಗುರುವ್ಯಾಕೇ
ಏಕೋ ದೈವವು ಬೆರದೇಕಾಂತರಿಯದವಗ್ಯಾಕೆ ಗುರುವ್ಯಾಕೇ || 1 ||
ಕತ್ತೆಯ ಹಿಡಿತಂದು ಒತ್ತಾಲು ಮುದ್ರೆಯ
ಕತ್ತೆಯಲ್ಲದೆ ಬಸವಾ ನುತ್ತುಮವದಕೆಲ್ಲಿ || 1 ||
ನರಿಗ್ಯಾಕೆ ಸುರಲೋಕ ಸಿರಿದೇವಿ ಸತಿಯಾಕೆ
ನಿರುತ ನಪುಂಸಕ ನಾಗಿರುತಿಹನಿಗೆ ಯಾಕೇ || 2 ||
ಎತ್ತು ತೆಂಗಿನಕಾಯಿ ಎತ್ತ ತಿನ್ನುವುದಯ್ಯಾ
ಕತ್ತೆ ಕಸ್ತೂರಿ ಸಾರಾ ಕಂಡು ಬಾಳುವೊದುಂಟೆ ಯಾಕೇ || 3 ||
ಕಾಣದಂಧಕಗ್ಯಾಕೆ ಕನ್ನಡೀ ಕೈಯೊಳು
ಗಾಣದೆತ್ತಿಗೆ ಗೆಜ್ಜೆ ಘನ ರಮ್ಯವಾದೀತು ಯಾಕೇ || 4 ||
ಕಳ್ಳಗೆ ಘನವಾದ ಕಲಸಾನ್ನ ಬುತ್ಯಾಕೆ
ಜೊಲ್ಲು ಸುರಿವಗೆ ವೀಳ್ಯ ಸೊಗಸು ಶೋಭಿಸುವದೆ ಯಾಕೇ || 5 ||
ಕೊಳತಿರ್ದ ಹೆಣಮಾಂಸ ಕುಳಿತು ತಿನ್ನುವ ನರಿ
ಕಳಸ ಶುಭ ಶೋಭಾನ ಘೃತ ಭಕ್ಷ ಭೋಜಾನ ಯಾಕೇ || 6 ||
ಹರಿಕೆ ಕುರಿಯು ತನ್ನ ಮರಣರಿಯದೆ ಬ್ಯಾಗ
ತರುಗೆಲೆಯ ತಿನುವಂತೆ ಮರವೆ ನರಜನರಿಗೆ ಯಾಕೇ || 7 ||
ಉಣ್ಣೆ ಕೆಚ್ಚಲೊಳಿದ್ದು ಉಣ್ಣಲೊಲ್ಲದು ಕ್ಷೀರ
ಅಣ್ಣರಾಗಿರುತಿರೀಗಲ್ಲೀಸಾಹೇಬು ಗುರುವ್ಯಾಕೆ
ನರರಿಗ್ಯಾಕೆ ಹೀನ ಜನರಿಗ್ಯಾಕೇ ಗುರುವ್ಯಾಕೇ || 8 ||