ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರು / ಅನುವಾದಕರು |
ಪ್ರೊ. ಎಂ.ಎ. ಹೆಗಡೆ ಯಕ್ಷಗಾನ ಪ್ರಸಂಗ ಮಾಲಿಕ | ಪ್ರೊ. ಎಂ.ಎ. ಹೆಗಡೆ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಯಕ್ಷಗಾನ ಅಕಾಡೆಮಿ |
ಪುಟಗಳ ಸಂಖ್ಯೆ | 186 |
ಯಕ್ಷಗಾನ ಪ್ರಸಂಗ ಪಂಚಮಿ
ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಯಕ್ಷಗಾನ ಪ್ರಸಂಗ ಪಂಚಮಿ | ಶ್ರೀ ಕಂದಾವರ ರಘುರಾಮ ಶೆಟ್ಟಿ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಯಕ್ಷಗಾನ ಅಕಾಡೆಮಿ |
ಪುಟಗಳ ಸಂಖ್ಯೆ | 118 |
ಶ್ರೀ ವಿನಾಯಕಗೆರಗಿ ಶಾರದ | ದೇವಿಯನುಧ್ಯಾನಿಸುತ ಭಕ್ತಿಯ || ಭಾವದಲಿ ಜಗಜನನಿ ಅಂಬಿಕೆಯನ್ನು ಬಲಬಂದು || ಭಾವಜಾರಿ ವಿರಂಚಿ ಶ್ರೀಹರಿ | ದೇವರನು ಸಂಸ್ತುತಿಸಿ ಕಲಿಯ ಪ್ರ | ಭಾವದರ್ಶನ ನಳಚರಿತೆಯನು ಪೇಳ್ವೆನಲವಿನಲಿ ||೧|| |
ಮಹಾನ್ ಕಲಾವಿದ ಅಳಿಕೆ ರಾಮಯ್ಯ ರೈ ಶತಕ ಸ್ಮೃತಿ
ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಮಹಾನ್ ಕಲಾವಿದ ಅಳಿಕೆ ರಾಮಯ್ಯ ರೈ ಶತಕ ಸ್ಮೃತಿ | ಭಾಸ್ಕರ ರೈ ಕುಕ್ಕುವಳ್ಳಿ, ಪಿ. ಕಿಶನ್ ಹೆಗ್ಡೆ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಯಕ್ಷಗಾನ ಅಕಾಡೆಮಿ |
ಪುಟಗಳ ಸಂಖ್ಯೆ | 83 |
ನಾನು ಬಹುವಾಗಿ ಮೆಚ್ಚಿ ಗೌರವಿಸುತ್ತಿದ್ದ ಹಿರಿಯ ಯಕ್ಷಗಾನ ಕಲಾವಿದರಲ್ಲಿ ಅಳಿಕೆ ರಾಮಯ್ಯ ರೈ ಅವರೂ ಒಬ್ಬರು. ಚಿಕ್ಕಂದಿನಿಂದಲೂ ಅವರ ವಿಧ ವಿಧದ ಪಾತ್ರಗಳನ್ನು ನೋಡುತ್ತಾ ಬಂದಿದ್ದೆ. ಅವರ ರಂಗ ಪ್ರವೇಶವಾಗುತ್ತಲೇ ರಂಗಸ್ಥಳಕ್ಕೊಂದು ಹೊಸ ಜೀವ ಸಂಚಾರವಾಗಿ ಬಿಡುತ್ತಿತ್ತು. ಬಣ್ಣದ ವೇಷಗಳ ಹೊರತಾಗಿ ಯಕ್ಷಗಾನದ ಎಲ್ಲ ಪ್ರಕಾರದ ವೇಷಗಳನ್ನು ಅವರು ಸಮರ್ಥವಾಗಿ ನಿರ್ವಹಿಸಿದ್ದಾರೆ. |
ಮಂಜಯ್ಯ ಗಣಪತಿ ಶೇಣ್ವಿಯವರ ಎರಡು ಪ್ರಸಂಗಗಳು
ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಮಂಜಯ್ಯ ಗಣಪತಿ ಶೇಣ್ವಿಯವರ ಎರಡು ಪ್ರಸಂಗಗಳು | ಶಾ ಮಂ ಕೃಷ್ಣರಾಯ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಯಕ್ಷಗಾನ ಅಕಾಡೆಮಿ |
ಪುಟಗಳ ಸಂಖ್ಯೆ | 90 |
ಮಂಡೆಯೊಳು ಶರವಿಹನ ಗೃಹದೊಳ | ಹಿಂಡು ಗೊಂಡಿರುವವನ ವೈರಿಯೊಳ್ | ಖಂಡಮನವಿರುವವಳ ಸುತನಿಂ | ಬಂಧಿಸಿಹನಿಂದಾ | ಭಂಡತನದಲಿ ಜೀವಗಳೆದ ಪ್ರಚಂಡನಗ್ರಜೆ ಬಸುರಜಾತಳ | ಗಂಡನಯ್ಯನ ಸಖನಸಖಸುತಗೆರಗಿ ಕೈಮುಗಿವೇ || |
ಪುರುಷವೇಷದ ಪೊಗರು
ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಪುರುಷವೇಷದ ಪೊಗರು | ಹಾರಾಡಿ ಕುಷ್ಟ ಗಾಣಿಗ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಯಕ್ಷಗಾನ ಅಕಾಡೆಮಿ |
ಪುಟಗಳ ಸಂಖ್ಯೆ | 56 |
ಕರಾವಳಿ ಕರ್ನಾಟಕದ ರಮ್ಯಾದ್ಭುತ ಕಲೆ ಯಕ್ಷಗಾನ. ಒಮ್ಮೆ ಪಾಮರಕಲೆಯೆಂದು ವಿದ್ವದ್ವಲಯದಲ್ಲಿ ಕರೆಯಲ್ಪಡುತ್ತಿದ್ದ ಯಕ್ಷಗಾನ ಇಂದು ಪಂಡಿತ ಪಾಮರರಿಬ್ಬರಿಗೂ ಪ್ರಿಯವಾದ ಕಲೆಯಾಗಿ ರಾಜ ಮನ್ನಣೆಗೆ ಪಾತ್ರವಾಗಿದೆ. ಕಡಲಕರೆಯ ಈ ಯಕ್ಷಗಾನ ಸಹ್ಯಾದ್ರಿಯನ್ನು ಉತ್ತರಿಸಿ ಸಮಗ್ರ ಕರ್ನಾಟಕದ ದೇಸಿ ಕಲೆಯಾಗಿ ಮೆರೆದಿದೆ. ಹಿಮಾಲಯದಿಂದ ಕನ್ಯಾಕುಮಾರಿವರೆಗೆ ಯಕ್ಷಗಾನದ ಚಂಡೆ ಮದ್ದಳೆಗಳು ಅನುರಣಿಸಿ ಕಲಾಸಕ್ತರ ಮನಸ್ಸನ್ನು ಸೂರೆಗೊಂಡಿದೆ. |
ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರು |
---|---|
ಪಂಚಭೂತ ಪ್ರಪಂಚ | ಅಂಬಾತನಯ ಮುದ್ರಾಡಿ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಯಕ್ಷಗಾನ ಅಕಾಡೆಮಿ |
ಪುಟಗಳ ಸಂಖ್ಯೆ | 35 |
ಹೌದು, ನಾನು ಪೃಥ್ವಿ. ಇತ್ತೀಚೆಗಿನ ದಿನಗಳಲ್ಲಿ ಪರಿಸರ ಮಾಲಿನ್ಯದ ಕೂಗನ್ನು ಎಲ್ಲೆಡೆಯಿಂದ ಕೇಳುತ್ತಿದ್ದೇನೆ. ನನ್ನನ್ನು ಹೊರತಾಗಿ ಪರಿಸರ ಉಂಟೆ? ಪರಿಸರವೆಂದರೆ ಜನ ಸುತ್ತನೋಡುವ ನೆಲ – ನೆಲದ ಮೇಲೆ ಗಿಡಮರ ಸಸ್ಯರಾಶಿ, ಇವುಗಳ ಬದುಕಿಗೆ ಪೋಷಕವಾದ ಜಲ, ಉಸಿರಾಡುವುದಕ್ಕೆ ಗಾಳಿ, ಮೈ ಬೆಚ್ಚನೆಗೆ ಅಗ್ನಿ ಅಥವಾ ಶಾಖ. ಇದರೊಂದಿಗೆ ಕಣ್ಣಿಗೆ ಕಾಣದ, ಅನುಭವಕ್ಕೆ ಮಾತ್ರ ಗೊತ್ತಾಗುವ ವಾಯು ಮತ್ತು ಆಕಾಶ. ಪರಿಸರ ಮಾಲಿನ್ಯವೆಂದರೆ ಪಂಚಭೂತಗಳಾದ ನಮ್ಮ ಮೇಲಾಗುವ ಮಲಿನತೆ. |
ಪಂಚದ್ರುಮ
ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ಪಂಚದ್ರುಮ | ಜಿ ಎಂ ಭಟ್ಟ, ಕೆ. ವಿ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಯಕ್ಷಗಾನ ಅಕಾಡೆಮಿ |
ಪುಟಗಳ ಸಂಖ್ಯೆ | 70 |
ದಕ್ಷಿಣಾ ಮೂರುತಿಯ ಕುವರನ | ಇಕ್ಷುಚಾಪನ ಪಿತನ ಗುರುವರ | ದಕ್ಷ ವೈರಿಯ ಗಿರಿಜೆ ಶಾರದೆ ಲಕ್ಷ್ಮಿಯರ ಭಜಿಸಿ || ಒಂದು ದಿನ ಮಹ ಧರ್ಮನೆಂದೆಂಬ ಮುನಿ ಮೌಳಿ | ಬಂದು ಕುಶದಾಸನದಿ ಮುದದಿ || ಮಂಡಿಸಿರೆ ಶುದ್ಧಾತ್ಮರಾದವನ ಸುತರಿಬ್ಬ | ರೊಂದಿಸಿದರವನೆರಡು ಪದದಿ ||೧|| ಜನಕನೆ ನಿನ್ನಲಿ ಅಭಯವ ಕೊಳ್ಳುತ | ವನಕತಿ ಹರುಷದೊಳು || ದಿನಮಣಿಯುದಯದಿ ತೆರಳಲು ತಪಸಿಗೆ | ಮಣಿದಿಹೆವೈ ಕೇಳು ||೨|| |
ದೀಕ್ಷಾ ಕಂಕಣ (ಯಕ್ಷಗಾನ ಪ್ರಸಂಗ)
ಪುಸ್ತಕ ವಿವರ
ಕೃತಿಯ ಹೆಸರು | ಅನುವಾದಕರು |
---|---|
ದೀಕ್ಷಾ ಕಂಕಣ (ಯಕ್ಷಗಾನ ಪ್ರಸಂಗ) | ಡಾ ಎನ್. ನಾರಾಯಣ ಶೆಟ್ಟಿ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಯಕ್ಷಗಾನ ಅಕಾಡೆಮಿ |
ಪುಟಗಳ ಸಂಖ್ಯೆ | 110 |
ಸುರಪಾಲನಾದ ದೇವೇಂದ್ರ ಶಿವನ ಅರ್ಚನೆಗೆಂದು ಕೈಲಾಸಕ್ಕೆ ಹೋಗುತ್ತಾನೆ. ಅಲ್ಲಿ ದೂತನೋರ್ವನು ಅವನನ್ನು ತಡೆಯಲು ದೇವೇಂದ್ರನು ಕೋಪದಿಂದ ವಜ್ರಾಯುಧವನ್ನೆತ್ತುತ್ತಾನೆ. ಅದನ್ನು ಕಂಡ ಶಿವ ಕೋಪದಿಂದ ನೋಡಿದಾಗ ಇಂದ್ರ ಸ್ತಂಭಿತನಾಗಿ ಕಪ್ಪೇರುತ್ತಾನೆ. ಆಗ ಗುರುವು ಶಿವನನ್ನು ಸ್ತುತಿಸಿ ಮೆಚ್ಚಿಸಿ ಶಿವನನ್ನು ಬದುಕಿಸಲು ಬೇಡುತ್ತಾನೆ. ಶಿವನು ಇಂದ್ರನನ್ನು ಬದುಕಿಸಿ ಕೋಪಜ್ವಾಲೆಯನ್ನು ಸಮುದ್ರಕ್ಕೆಸೆಯುತ್ತಾನೆ. ಅದು ಶಿಶುರೂಪವನ್ನು ತಾಳುತ್ತದೆ. |