Categories
ದಾಸ ಶ್ರೇಷ್ಠರು

ಇಂದಿರೇಶರು

ದಾಸರ ಹೆಸರು : ಇಂದಿರೇಶರು.
ಜನ್ಮ ಸ್ಥಳ : ಶಿಕಾರಿಪುರ (ಶಿವಮೊಗ್ಗ ಜಿಲ್ಲೆ).
ತಂದೆ ಹೆಸರು : ಶ್ರೀನಿವಾಸಾಚಾರ್ಯರು ; ತಾಯಿ ಹೆಸರು : ರುಕ್ಮಿಣೀಬಾಯಿ.
ಕಾಲ : 1895- ; ಅಂಕಿತನಾಮ : ಇಂದಿರೇಶ (ಸ್ವಪ್ರನಾಂಕಿತ).
ಲಭ್ಯ ಕೀರ್ತನೆಗಳ ಸಂಖ್ಯೆ : 86.
ಗುರುವಿನ ಹೆಸರು : ಬಾಬಾಚಾರ್ಯ (ದೊಡ್ಡಪ್ಪ).
ಆಶ್ರಯ : ಕೊಲ್ಹಾಪುರದ ಅಂತಾಜಿಪಂತರು.
ಪೂರ್ವಾಶ್ರಮದ ಹೆಸರು : ಪಾಂಡುರಂಗಿ ಹುಚ್ಚಾಚಾರ್ಯರು (ತಿರುಪತಿ). ವಸಿಷ್ಠಗೋತ್ರ (ಇವರ ಪೂರ್ವಜರು ಅಹಮದ್ ನಗರದ ಪುಣ್ಯಸ್ಥಂಭವೆಂಬ ಪ್ರದೇಶದವರು ಮೂಲ ಪುರುಷ ; ಮಕ್ಕಳು ಅವರ ಹೆಸರು : ಒಬ್ಬ ಮಗ [ಆನಂದ ಭಟ್ಟಾಚಾರ್ಯರೆಂಬುವರಿಂದ 5ನೇ ತಲೆಮಾರಿನವರು]
ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು : ಸರ್ವಮೂಲ ಗ್ರಂಥಗಳಿಗೆ ವಿಮರ್ಶೆ ಸುಧಾಟಿಪ್ಪಣಿ ಉಪಾದಿಖಂಡನ ವ್ಯಾಖ್ಯಾನ ತತ್ವನ್ಯಾಸ ದ್ವಾದಶ ಸ್ತೋತ್ರ ವ್ಯಾಖ್ಯಾನ ಕನ್ನಡದಲ್ಲಿ ದಶಕಮಸ್ಕಂಧ ಭಾಗವತ, ಸುಂದರಕಾಂಡ.
ಪತ್ನಿಯ ಹೆಸರು : ಹುಚ್ಚವ್ವ (ಅಕ್ಕನ ಮಗಳು).
ಒಡಹುಟ್ಟಿದವರು : ಇಬ್ಬರು ಸಹೋದರರು ಒಬ್ಬ ಸೋದರಿ.
ಕಾಲವಾದ ಸ್ಥಳ ಮತ್ತು ದಿನ : 1939ಪ್ರಮಾದಿ ಸಂತ್ಸರದ ಕಾರ್ತೀಕ ಸಹುಳ ಪಂಚಮಿ ಶುಕ್ರವಾರ.
ಕೃತಿಯ ವೈಶಿಷ್ಟ್ಯ : ಮಹಾಲಕ್ಷ್ಮೀ ಹಾಗೂ ಬಾಲಕೃಷ್ಣನ ಬಗೆಗೆ ಕುರಿತ ಹಾಡುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಹೃದ್ಯವಾಗಿದೆ. ಕೊನೆಗಾಲದಲ್ಲಿ ಕಣ್ಣು ಕಾಣದಿದ್ದರೂ ಮಾನಸಿಕವಾಗಿಯೇ ದೈವವನ್ನು ಪೂಜಿಸಿ, ಕೃತಿಗಳನ್ನು ರಚಿಸಿದ್ದಾರೆ. ಇವರು ರಚಿಸಿರುವ ‘ಲಕ್ಷ್ಮೀಶಾಭಾನ ಶತಕ ರೂಪದ ಸಾಂಗತ್ಯ ಧಾಟಿಯಲ್ಲಿದ್ದು ವಾದಿರಜರ ಲಕ್ಷ್ಮೀಶೋಭಾನ ಕ್ಕಿಂತ ಇದು ತುಸು ಭಿನ್ನವಾಗಿದೆ.