Categories
ರಚನೆಗಳು

ಬೋಳಾರಾ ವಾಸುದೇವಯ್ಯ

ನಂಬಿದೆ ನಾ ತವಪದವ| ಯೆನ |
ಗಿಂಬನು ಪಾಲಿಸು ದೇವ ಪ
ಅಂಬುಧಿಶಯನ ಚಿದಂಬರ ಮುರಹರ
ಬೆಂಬಿಡದೆನ್ನ ವಿಶ್ವಂಭರ ಸಲಹೈ ೧
ಬಳಲಿದೆನೈ ಭವದಿಂದ | ಮಿಗೆ ತೊಳಲಿದೇ
ಬೇಸರದಿಂದ ಕಳವಳಿಸುವೆನೀ ಕೊಳಕು ಸಂಸಾರದಿ
ನಳಿನಾಕ್ಷನೆ ಸುಖಗೊಳಿಸಿ ಪೊರೆವುದೈ ೨
ದುಷ್ಟರ ಸಂಗದಿ ಕೂಡಿ ಸಂ | ಕಷ್ಟ ವಿದೈ ದಯಮಾಡಿ
ಸೃಷ್ಟಿಗೊಡೆಯನೆನ್ನಿಷ್ಟವ ನೀಯುತ
ಶಿಷ್ಟನ ಕಾಯೋ ವಸಿಷ್ಠವಿನುತ ಪದ ೩
ದಣಿದೆನು ದಾರಿದ್ರ್ಯದಿಂದ | ನೆರ | ವಣಿಗೆಯ
ಗೈವರಿಲ್ಲ ಗುಣನಿಧಿ ತವ ದಯವೊಣಗಿದ ಮಾತ್ರಕೆ
ತೃಣ ಸಮವೆನ್ನನಾರೆಣಿಕೆಯ ಗೈವರು ೪
ದೇವನೆ ನಿನ್ನಡಿಯುಗದ ಸ | ದ್ಭಾವನೆಯ –
ನೀಯೊ ಸದಾ | ಕಾವವ ನೀನೆಂದೋವಿನು –
ತಿನುವೆನು ಶ್ರೀವಾಸುದೇವ ದಾಮೋದರ ವಿಠಲ ೫

 

ನಂಬಿದೆ ನಾ ನಿನ್ನ ಪದವ
ನಂಬಿದೆ ನಾ ತವಪದವ| ಯೆನ |
ಗಿಂಬನು ಪಾಲಿಸು ದೇವ ಪ
ಅಂಬುಧಿಶಯನ ಚಿದಂಬರ ಮುರಹರ
ಬೆಂಬಿಡದೆನ್ನ ವಿಶ್ವಂಭರ ಸಲಹೈ ೧
ಬಳಲಿದೆನೈ ಭವದಿಂದ | ಮಿಗೆ ತೊಳಲಿದೇ
ಬೇಸರದಿಂದ ಕಳವಳಿಸುವೆನೀ ಕೊಳಕು ಸಂಸಾರದಿ
ನಳಿನಾಕ್ಷನೆ ಸುಖಗೊಳಿಸಿ ಪೊರೆವುದೈ ೨
ದುಷ್ಟರ ಸಂಗದಿ ಕೂಡಿ ಸಂ | ಕಷ್ಟ ವಿದೈ ದಯಮಾಡಿ
ಸೃಷ್ಟಿಗೊಡೆಯನೆನ್ನಿಷ್ಟವ ನೀಯುತ
ಶಿಷ್ಟನ ಕಾಯೋ ವಸಿಷ್ಠವಿನುತ ಪದ ೩
ದಣಿದೆನು ದಾರಿದ್ರ್ಯದಿಂದ | ನೆರ | ವಣಿಗೆಯ
ಗೈವರಿಲ್ಲ ಗುಣನಿಧಿ ತವ ದಯವೊಣಗಿದ ಮಾತ್ರಕೆ
ತೃಣ ಸಮವೆನ್ನನಾರೆಣಿಕೆಯ ಗೈವರು ೪
ದೇವನೆ ನಿನ್ನಡಿಯುಗದ ಸ | ದ್ಭಾವನೆಯ –
ನೀಯೊ ಸದಾ | ಕಾವವ ನೀನೆಂದೋವಿನು –
ತಿನುವೆನು ಶ್ರೀವಾಸುದೇವ ದಾಮೋದರ ವಿಠಲ ೫

 

ಹಾಡಿನ ಹೆಸರು :ನಂಬಿದೆ ನಾ ನಿನ್ನ ಪದವ
ಹಾಡಿದವರ ಹೆಸರು :ಸಂಗೀತಾಕಟ್ಟಿ
ರಾಗ :ಹಿಂಡೋಲ್
ತಾಳ :ಭಜನ್‍ಠೇಕಾ
ಸಂಗೀತ ನಿರ್ದೇಶಕರು :ವೆಂಕಟೇಶ ಗೋಡ್ಖಿಂಡಿ
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *