ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರು |
---|---|
ಸಾಹಿತ್ಯ ಶಾಲ್ಮಲಾ | ಡಾ. ಪದ್ಮರಾಜ ದಂಡಾವತಿ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಸಾಹಿತ್ಯ ಪರಿಷತ್ತು |
ಪುಟಗಳ ಸಂಖ್ಯೆ | 576 |
ಕೃತಿಯ ಹೆಸರು | ಸಂಪಾದಕರು |
---|---|
ದಲಿತ ಸಾಹಿತ್ಯ ಸಂಪುಟ – ಸಂಶೋಧನೆ | ನಾಡೋಜ ಡಾ. ಮನು ಬಳಿಗಾರ್, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಸಾಹಿತ್ಯ ಪರಿಷತ್ತು |
ಪುಟಗಳ ಸಂಖ್ಯೆ | 300 |
ಕ್ರಿ.ಶ. 1971 ಜನಗಣತಿಯ ಅಂಕಿ-ಅಂಶಗಳಂತೆ ಕರ್ನಾಟಕದ ಬೇಡ ಜನಾಂಗದ ಸಂಖ್ಯೆ ಸುಮಾರು ಹದಿನೈದೂ ಕಾಲು ಲಕ್ಷವೆಂದು ತಿಳಿದುಬರುತ್ತದೆ. ಎಂದರೆ ಇದು ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಪ್ರತಿಶತ ಸುಮಾರು ಏಳರಷ್ಟು ಆಗುತ್ತದೆ. ವೀರಶೈವರು, ಒಕ್ಕಲಿಗರು, ಕುರುಬರು, ಮುಸಲ್ಮಾನರು – ಇವರ ತರುವಾಯದ ಸ್ಥಾನ ಬೇಡ ಜನಾಂಗಕ್ಕೆ ಸಲ್ಲುತ್ತದೆ. ಕರ್ನಾಟಕದ ಮೂಲ ನಿವಾಸಿಗಳೆನ್ನಬಹುದಾದ ಜನಾಂಗಗಳ ಪೈಕಿ ಬೇಡ ಜನಾಂಗವೂ ಒಂದು. |
ಕೃತಿಯ ಹೆಸರು | ಸಂಪಾದಕರು |
---|---|
ದಲಿತ ಸಾಹಿತ್ಯ ಸಂಪುಟ – ಜಾನಪದ | ನಾಡೋಜ ಡಾ. ಮನು ಬಳಿಗಾರ್, ಪ್ರೊ. ಹೆಚ್. ಟಿ. ಪೋತೆ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಸಾಹಿತ್ಯ ಪರಿಷತ್ತು |
ಪುಟಗಳ ಸಂಖ್ಯೆ | 365 |
ಆರಾಧನೆಗಳು ಮತ್ತು ಆಚರಣೆಗಳನ್ನು ಕುರಿತಂತೆ ಖಚಿತವಾದ ವಿವರಣೆ ಕೊಡುವುದು ಕಷ್ಟವಾಗಿದೆ. ಕನ್ನಡ ಜಾನಪದ ಸಂದರ್ಭದಲ್ಲಿ ಬಹಳಷ್ಟು ಪದಗಳು ತೀರಾ ಸರಳವಾದ ಅರ್ಥದಲ್ಲಿ ಬಳಸಲ್ಪಡುತ್ತಿವೆ. ಸಂಪ್ರದಾಯ, ಪದ್ಧತಿ, ಸಂಸ್ಕಾರ, ಆಚರಣೆ, ಆರಾಧನೆ ಇಂಥ ಪದಗಳ ನಡುವೆ ಅಪಾರವಾದ ವ್ಯತ್ಯಾಸವನ್ನು ಗುರುತಿಸಿವುದು ಸಾಧ್ಯವಿಲ್ಲವಾದರೂ ಸರಳವಾದ ಗೆರೆ ಎಳೆಯುವ ಪ್ರಯತ್ನ ಮಾಡಬಹುದು. |
ಕೃತಿಯ ಹೆಸರು | ಸಂಪಾದಕರು |
---|---|
ದಲಿತ ಸಾಹಿತ್ಯ ಸಂಪುಟ – ಸಣ್ಣಕಥೆ | ನಾಡೋಜ ಡಾ. ಮನು ಬಳಿಗಾರ್, ಡಾ. ಸಣ್ಣರಾಮ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಸಾಹಿತ್ಯ ಪರಿಷತ್ತು |
ಪುಟಗಳ ಸಂಖ್ಯೆ | 276 |
ಅಮಾಸ ಎಂಬುದು ಅಮಾಸನ ಹೆಸರು. ಅವನು ಕಪ್ಪುಗಿದ್ದುದಕ್ಕೊ ಅಮಾವಾಸೆ ದಿನ ಹುಟ್ಟಿದ್ದಕ್ಕೊ ಅವನಿಗೆ ಅಮಾಸ ಹೆಸರು ನಿಂತಿದೆ. ಅಮಾಸ ಹೆಸರು ಯಾಕೆ ಬಂತು ಎಂದು ಅವನ ಅಪ್ಪ, ಅವ್ವ ಬದುಕಿದ್ದರೆ ಕೇಳಬಹುದಿತ್ತು. ಆದರೆ ಅವನು ಹುಟ್ಟಿದ ಮೇಲೆ ನಡೆದಾಡೊ ವೇಳೆಗೆ ಅವನನ್ನು ಹೆತ್ತವಳು ಹುಟ್ಟಿಸಿದವನು ನಾನಾ ನಿಮಿತ್ತವಾಗಿ ದೈವಾಧೀನರಾದರು. ಅಗಲೀಗ ಆಮಾಸನಿಗೆ ಮಾರಿಗುಡಿ ಅಂದರೆ ಅಮಾಸ. ಅಮಾಸ ಅಂದರೆ ಮಾರಿಗುಡಿ ಎಂಬಂತಾಯ್ತು. |
ಕೃತಿಯ ಹೆಸರು | ಸಂಪಾದಕರು |
---|---|
ದಲಿತ ಸಾಹಿತ್ಯ ಸಂಪುಟ – ಕಾವ್ಯ | ನಾಡೋಜ ಡಾ. ಮನು ಬಳಿಗಾರ್, ಡಾ. ಮೂಡ್ನಾಕೂಡು ಚಿನ್ನಸ್ವಾಮಿ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಸಾಹಿತ್ಯ ಪರಿಷತ್ತು |
ಪುಟಗಳ ಸಂಖ್ಯೆ | 213 |
ಎಷ್ಟು ಶತಮಾನಗಳಿಂದ ಇವರು ನನ್ನ ಹೆಗಲ ಮೇಲೆ ಕುಳಿತಿದ್ದಾರೆ ಎಂಬ ಅರಿವು ನನಗಿರಲಿಲ್ಲ. ಆಗ ನಾನು ನಿರಕ್ಷರ ಕುಕ್ಷಿಯಾಗಿದ್ದೆ. ಅಜ್ಞಾನಿಯಾಗಿದ್ದೆ. ಈಗ ಇತ್ತೀಚೆಗೆ ನಾನು ಅ ಆ ಇ ಈ ಕಲಿಯಲು ಆರಂಭಿಸಿದ ನಂತರ ನನಗೆ ಅರ್ಥವಾಗತೊಡಗಿದೆ, ನನ್ನ ಹೆಗಲ ಮೇಲೆ ನಾಲ್ಕಾರು ಜನ ಕುಳಿತಿದ್ದಾರೆ ಎಂದು. |
ಕೃತಿಯ ಹೆಸರು | ಸಂಪಾದಕರು |
---|---|
ದಲಿತ ಸಾಹಿತ್ಯ ಸಂಪುಟ – ಮಾನವಿಕ | ನಾಡೋಜ ಡಾ. ಮನು ಬಳಿಗಾರ್, ಡಾ. ಅರ್ಜುನ ಗೊಳಸಂಗಿ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಸಾಹಿತ್ಯ ಪರಿಷತ್ತು |
ಪುಟಗಳ ಸಂಖ್ಯೆ | 260 |
ಮನಃಶಾಸ್ತ್ರಜ್ಞರ ಪ್ರಕಾರ ಮನುಷ್ಯನಿಗೆ ಹುಟ್ಟಿನಿಂದಲೇ ಬರುವ ಮತ್ತು ಸದಾಕಾಲ ಇರುವ ಪ್ರಮುಖ ಹಾಗೂ ಆಧಿಕ್ಯ ಪ್ರಜ್ಞೆ ಎಂದರೆ “ನಾನು” ಎನ್ನುವುದು. ಪ್ರತಿಯೊಬ್ಬ ಮನುಷ್ಯನಲ್ಲಿಯೂ ಈ “ನಾನು” ಎಂಬುದು ಜಾಗೃತವಾಗಿರುತ್ತದೆ. ಅದನ್ನೇ “ಅಹಂ” ಎಂದು ಸಂಸ್ಕೃತದಲ್ಲಿ ಕರೆಯುತ್ತಾರೆ. ಈ ಅಹಮ್ಮಿಗೆ ಸ್ವಲ್ಪ ಪೆಟ್ಟಾದರೂ ಸರಿ ಮನುಷ್ಯ ವಿಚಲಿತಗೊಳ್ಳುತ್ತಾನೆ. ಇದನ್ನೇ ಸ್ವಾಭಿಮಾನ, ಆತ್ಮಗೌರವ ಎಂದು ಹೇಳುವುದು. ಹಿಂದೂ ಧರ್ಮದಲ್ಲಿ ಮನುಷ್ಯರಿಗೆ ಆತ್ಮಗೌರವವನ್ನು ಶ್ರೇಣೀಕರಣಗೊಳಿಸಲಾಗಿದೆ. |
ಕೃತಿಯ ಹೆಸರು | ಸಂಪಾದಕರು |
---|---|
ದಲಿತ ಸಾಹಿತ್ಯ ಸಂಪುಟ – ಅಂಕಣ ಬರಹ | ನಾಡೋಜ ಡಾ. ಮನು ಬಳಿಗಾರ್, ಡಾ. ಅಣ್ಣಮ್ಮ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಸಾಹಿತ್ಯ ಪರಿಷತ್ತು |
ಪುಟಗಳ ಸಂಖ್ಯೆ | 286 |
ಪ್ರಾಚೀನ ಭಾರತದಲ್ಲಿ ʼನೀತಿʼಗೆ ಪ್ರಾಮುಖ್ಯವಾದ ಸ್ಥಾನವಿತ್ತು. ಅದು ಜನಜೀವನಕ್ಕೂ ರಾಜ್ಯಧರ್ಮಕ್ಕೂ ಕೊಂಡಿಯಂತೆ ಕೆಲಸ ಮಾಡುತ್ತಿತ್ತು. ನೀತಿಯು ಹೇರುವ ಕ್ರಮವಾಗಿರಲಿಲ್ಲ. ಅದು ಸಹಜ ಪ್ರಕ್ರಿಯೆಯಾಗಿತ್ತು. ಜನರ ಬದುಕಿನಲ್ಲಿ ನೀತಿಗೊಂದು ಪ್ರಾಧಾನ್ಯವಿತ್ತು. ಇದಕ್ಕೆ ಮತವಾಗಲಿ, ಜಾತಿಯಾಗಲಿ, ಕುಲವಾಗಲಿ ಹೊರತಾಗಿರಲಿಲ್ಲ. ಇದಕ್ಕೆ ಹೆಣ್ಣು, ಗಂಡು ಎಂಬ ಭೇದವೂ ಇರಲಿಲ್ಲ. ಇಷ್ಟು ಮಾತ್ರವಲ್ಲ ಬಡವ – ಶ್ರೀಮಂತ ಎಂಬ ಭಿನ್ನತೆಗೂ ಅವಕಾಶ ಇರಲಿಲ್ಲ. |
ಕೃತಿಯ ಹೆಸರು | ಸಂಪಾದಕರು |
---|---|
ಉಜ್ಜನಿ ಚೌಡಮ್ಮ – ಗ್ರಾಮದೇವತೆ ಅಧ್ಯಯನ | ಹಿ. ಚಿ. ಬೋರಲಿಂಗಯ್ಯ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 171 |
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದಿಂದ ನಾಲ್ಕು ಮೈಲಿ ದೂರದಲ್ಲಿ ಇರುವ ಉಜ್ಜನಿ ಸುತ್ತಲೂ ಸಣ್ಣಪುಟ್ಟ ಗುಡ್ಡಗಳಿಂದ ಆವೃತವಾದ ಒಂದು ದೊಡ್ಡ ಊರು. ಉಜ್ಜನಿಯಿಂದ ಸುಮಾರು ಒಂದೆರಡು ಮೈಲಿಗಳ ದೂರದಲ್ಲಿ ಕಂಬದ ಗುಡ್ಡೆ, ಮಲ್ಲಪ್ಪನ ಗುಡ್ಡೆ, ಅಯ್ಯನ ಗುಡ್ಡೆ, ಬಾಳನ ಗುಡ್ಡೆ, ಅಕ್ಕಮ್ಮನ ಗುಡ್ಡೆ ಹಾಗೂ ಹೇಮಗಿರಿ ಬೆಟ್ಟಗಳಿವೆ. |
ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರು |
ಸ್ತ್ರೀ ಸ್ವಗತ | ಶ್ರೀ ಕುಮಾರ ಶಂಕರನಾರಾಯಣ |
ಕೃತಿಯ ಹಕ್ಕುಸ್ವಾಮ್ಯ | ಕರ್ನಾಟಕ ಯಕ್ಷಗಾನ ಅಕಾಡೆಮಿ |
ಪುಟಗಳ ಸಂಖ್ಯೆ | 42 |
ಏನಿದು ವಿಚಿತ್ರ. ಅತ್ಯಂತ ಎತ್ತರವೂ ಸುಂದರವೂ ಆದ ಪ್ರದೇಶ. ಇದನ್ನೇ ಕೈಲಾಸ ಪರ್ವತವೆಂದು, ಬೆಳ್ಳಿಯ ಬೆಟ್ಟವೆಂದು, ರಜತ ಗಿರಿಯೆಂದೇ ಕರೆಯುತ್ತಿದ್ದಾರೆ. ಇಲ್ಲಿ ಸರ್ವಾತ್ಮಕನು, ಸರ್ವವ್ಯಾಪಕನು, ಸರ್ವೇಶ್ವರನೂ ಆದ ಭಗವಂತನು ಪ್ರಮಥಾದಿ ಗಣಗಳೊಂದಿಗೆ ನೆಲೆಸಿದ್ದಾನೆ. ಆದ್ದರಿಂದಲೇ ಈ ಕ್ಷೇತ್ರಕ್ಕೊಂದು ಪಾವಿತ್ರ್ಯ ಉಂಟಾಯಿತು. ದೂರದಿಂದಲೇ ಕಂಡರೂ ಕಂಡವರ ಪಾಪ ಪರಿಹಾರವಾಗುವುದೆನ್ನುವ ಪ್ರಬಲವಾದ ನಂಬುಗೆ ಭಕ್ತರ ಮನದಲ್ಲಿ.