Categories
ಶರಣರು / Sharanaru

ಕನ್ನಡಿ ಕಾಯಕದ ಅಮ್ಮಿದೇವಯ್ಯ

ಅಂಕಿತ: ಚನ್ನಬಸವಣ್ಣಪ್ರಿಯ ಕಮಳೇಶ್ವರಲಿಂಗ
ಕಾಯಕ: ಕ್ಷೌರಿಕ (ಕನ್ನಡಿ ಕಾಯಕ)

೧೧೬೦ರಲ್ಲಿ ಇದ್ದ ಈತನ ಕಾಯಕ ಕ್ಷೌರಿಕತನ. ‘ಕಮಳೇಶ್ವರ ಲಿಂಗ’ ಅಂಕಿತದಲ್ಲಿ ೧೦ ವಚನಗಳು ಉಪಲಬ್ಧವಾಗಿವೆ. ಹಡಪ, ಕನ್ನಡಿ, ಕತ್ತಿ. ಕತ್ತರಿ, ಚಿಮ್ಮುಟಿ, ಹಣಿಗೆ ಮುಂತಾದ ವೃತ್ತಿ ಸಂಬಂಧಿ ಪದಗಳ ಬಳೆಕೆಯೊಂದಿಗೆ ಅನುಭಾವವನ್ನು ಪ್ರಕಟಿಸುವ ರೀತಿ ಆಪ್ತವೆನಿಸಿದೆ. ‘ವ್ಯಾಧಿಗೆ ನಾನರಸು’ ಎನ್ನುವ ಮಾತು ಈತ ವೈದ್ಯ ವಿಷಯದಲ್ಲಿಯೂ ಬಲ್ಲವನಾಗಿದ್ದನೆಂಬುದನ್ನು ಸೂಚಿಸುತ್ತದೆ. ೧೮ ಕಾಯಕಗಳ ಉಲ್ಲೇಖ ಮಾಡುವುದು, ‘ಆವ ಜಾತಿ ಗೋತ್ರದಲ್ಲಿ ಬಂದಡೂ ತಮ್ಮ ತಮ್ಮ ಕಾಯಕಕ್ಕೆ, ಭಕ್ತಿಗೆ ಸೂತಕವಿಲ್ಲದಿರಬೇಕು’ ಎಂದು ಹೇಳುವುದು. ಈತನ ಸಮತಾಭಾವದ ನಿಲುವಿಗೆ ನಿದರ್ಶನವಾಗಿದೆ. ಜಾನಪದ ವೈದ್ಯವನ್ನು ತನ್ನ ವಚನಗಳಲ್ಲಿ ಹೇಳಿರುವನು. ಕಾಯಕದ ಹಿರಿಮೆಯನ್ನು ಪ್ರಸ್ತಾಪಿಸಿರುವನು.