Categories
ಶರಣರು / Sharanaru

ರಾಯಸದ ಮಂಚಣ್ಣಗಳ ಪುಣ್ಯಸ್ತ್ರೀ ರಾಯಮ್ಮ

ಅಂಕಿತ: ಅಮುಗೇಶ್ವರಲಿಂಗ

ಗರುಡಿಯಲ್ಲಿ ಕೋಲಲ್ಲದೆ ಕಾಳಗದಲ್ಲಿ ಕೋಲುಂಟೆ ?
ಭವಿಗೆ ಮೇಲುವ್ರತ ಪುನರ್ದಿಕ್ಷೆಯಲ್ಲದೆ ಭಕ್ತಂಗುಂಟೆ ?
ವ್ರತ ತಪ್ಪಲು ಶರೀರವಿಡಿವ ನರಕಿಗೆ ಮುಕ್ತಿಯಿಲ್ಲ
ಅಮುಗೇಶ್ವರಲಿಂಗದಲ್ಲಿ.

ಈಕೆ ಬಸವಣ್ಣನವರ ಆಪ್ತಕಾರ್ಯದರ್ಶಿಯೂ ವಚನಕಾರನೂ ಆಗಿದ್ದ ‘ರಾಯಸದ ಮಂಚಣ್ಣ’ನ ಪತ್ನಿ, ಕಾಲ-೧೧೬೦. ವ್ರತನಿಷ್ಠೆಯನ್ನು ಬೋಧಿಸುವ ಒಂದು ವಚನ ಈಕೆಯ ಹೆಸರಿನಲ್ಲಿ ದೊರೆತಿದೆ. ಅಂಕಿತ ‘ಅಮುಗೇಶ್ವರಲಿಂಗ’. ಇದು ಅಮುಗೆ ರಾಯಮ್ಮನ ಅಂಕಿತವೂ ಆಗಿರುವುದು ವಿಶೇಷ.