Categories
e-ದಿನ

ಏಪ್ರಿಲ್-19

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 65: ಫ್ರೀಡ್ಮನ್ ಮಿಲಿಚಸ್ ಎಂಬಾತ ಪೀಸೋ ಯೋಜಿಸಿದ್ದ ಚಕ್ರವರ್ತಿ ನೀರೋನ ಕೊಲೆಯ ಸಂಚಿನ ಗುಟ್ಟನ್ನು ಬಿಟ್ಟುಕೊಟ್ಟ. ಹೀಗಾಗಿ ಕೊಲೆಯ ಸಂಚನ್ನು ಮಾಡಿದವರೆಲ್ಲಾ ಬಂಧಿತರಾದರು.

1845: ಭಾರತದಲ್ಲಿ ರೈಲ್ವೇ ಆರಂಭಿಸುವ ಬಗ್ಗೆ ಚರ್ಚಿಸುತ್ತಿದ್ದ ಮುಂಬೈಯ ಪ್ರಮುಖ ಗಣ್ಯರು ಇಂಡಿಯನ್ ರೈಲ್ವೇ ಅಸೋಸಿಯೇಷನ್ ಹುಟ್ಟು ಹಾಕಿದರು. ಭಾರತದಲ್ಲಿ ರೈಲ್ವೇ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಲು ಆಗಮಿಸಿದ್ದ ಇಂಗ್ಲೆಂಡಿನ ಎಂಜಿನಿಯರ್ ಜಿ.ಟಿ. ಕ್ಲಾರ್ಕ್ ನೀಡಿದ ಮುಂಬೈ- ಠಾಣೆ ರೈಲುಮಾರ್ಗ ಪ್ರಸ್ತಾವಕ್ಕೆ ಈ ಗಣ್ಯರು ಅನುಮೋದನೆ ನೀಡಿದರು.

1950: ಶ್ಯಾಮ ಪ್ರಸಾದ್ ಮುಖರ್ಜಿ ಅವರು ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದರು.

1951: ಲಂಡನ್ನಿನ ಸ್ಟ್ರ್ಯಾಂಡ್ನ ಲೈಸಿಯಂ ಬಾಲ್ ರೂಮಿನಲ್ಲಿ ಮೊತ್ತ ಮೊದಲ ‘ಮಿಸ್ ವರ್ಲ್ಡ್ಡ್’ ಸ್ಪರ್ಧೆ ಏರ್ಪಟ್ಟಿತು. ಮಿಸ್ ಸ್ವೀಡನ್ ಕಿಕಿ ಹಾಕೋನ್ಸನ್ ಅವರು ಸ್ಪರ್ಧೆಯಲ್ಲಿ ವಿಜೇತರಾದರು.

1954: ಪಾಕಿಸ್ತಾನದ ಪಾರ್ಲಿಮೆಂಟು ಉರ್ದು ಮತ್ತು ಬೆಂಗಾಲಿಗಳನ್ನು ರಾಷ್ಟ್ರಭಾಷೆಗಳನ್ನಾಗಿ ಅಂಗೀಕರಿಸಿತು.

1960: ದಕ್ಷಿಣ ಕೊರಿಯಾದ ವಿದಾರ್ಥಿಗಳು ಪ್ರಜಾಪ್ರಭುತ್ವವನ್ನು ಬಯಸಿ ಅಧ್ಯಕ್ಷ ಸಿಂಗ್ಮ್ಯಾನ್ ರೀ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಿ, ಆತನನ್ನು ರಾಜೀನಾಮೆ ಸಲ್ಲಿಸುವಂತೆ ಮಾಡುವಲ್ಲಿ ಯಶಸ್ವಿಯಾದರು.

2006: ಸಾಮಾಜಿಕ, ಶೈಕ್ಷಣಿಕ ಯೋಜನೆಗಳು ಮತ್ತು ದತ್ತಿ ಕಾರ್ಯಗಳಲ್ಲಿ ಮಹತ್ವದ ಕೊಡುಗೆ ನೀಡಿದ ಪ್ರಸಿದ್ಧ ಉದ್ಯಮಿ ಸ್ವರಾಜ್ ಪಾಲ್ ಅವರಿಗೆ ಬ್ರಿಟನ್ನಿನ ‘ಈಸ್ಟರ್ನ್ ಐ ಕಮ್ಯೂನಿಟಿ ಪ್ರಶಸ್ತಿ’ ಸಂದಿತು. ಬ್ರಿಟನ್ನಿನಲ್ಲಿ ‘ಈಸ್ಟರ್ನ್ ಐ’ ಎಂಬ ಏಷ್ಯಾದ ವೃತ್ತಪತ್ರಿಕೆಯು ಈ ಪ್ರಶಸ್ತಿಯನ್ನು ನೀಡುತ್ತಿದೆ.

2006: ಆಸ್ಟ್ರೇಲಿಯಾದ ಜೆಸನ್ ಗ್ಲಿಲೆಸ್ಪಿ ಅವರು ಬಾಂಗ್ಲಾದೇಶದ ವಿರುದ್ಧ ಚಿತ್ತಗಾಂಗಿನಲ್ಲಿ ನಡೆದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ನೈಟ್ ವಾಚ್ ಮನ್ ಆಗಿ ಬಂದು ಅಜೇಯ 201 ರನ್ ಗಳಿಸಿ, ತಮ್ಮದೇ ದೇಶದ ಟೋನಿಮನ್ ಅವರು 1977ರಲ್ಲಿ ಭಾರತದ ವಿರುದ್ಧ 105 ರನ್ ಗಳಿಸಿ ಸ್ಥಾಪಿಸಿದ್ದ ದಾಖಲೆಯನ್ನು ಅಳಿಸಿ ತಮ್ಮ ಸಾಧನೆಯನ್ನು ಪ್ರತಿಷ್ಟಾಪಿಸಿದರು.
2009: ಟಿಬೆಟ್‌ ಪೂರ್ಣ ಸ್ವಾಯತ್ತತೆಗೆ ಆಗ್ರಹಿಸಿ ದಲೈಲಾಮ ಸಂಬಂಧಿ ಜಿಗ್ಮೆ ನೊಬ್ರು ಅವರು ಅಮೆರಿಕದಲ್ಲಿ 1400 ಕಿ.ಮೀ. ಪಾದಯಾತ್ರೆ ಕೈಗೊಂಡರು.
ಟಿಬೆಟ್‌ಗೆ ಪೂರ್ಣ ಸ್ವಾಯತ್ತತೆಗೆ ಆಗ್ರಹಿಸಿ ದಲೈಲಾಮ ಸಂಬಂಧಿ ಜಿಗ್ಮೆ ನೊಬ್ರು ಅವರು ಅಮೆರಿಕದಲ್ಲಿ 1400 ಕಿ.ಮೀ. ಪಾದಯಾತ್ರೆ ಕೈಗೊಂಡರು.

ಪ್ರಮುಖಜನನ/ಮರಣ:

1832: ಸ್ಪಾನಿಷ್ ಸಾಹಿತಿ ಜೋಸ್ ಎಚೆಗರೈ ಸ್ಪೈನಿನ ಮಾಡ್ರಿಡ್ ಎಂಬಲ್ಲಿ ಜನಿಸಿದರು. ಇವರಿಗೆ 1904 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

1912: ಅಮೆರಿಕದ ರಸಾಯನ ಶಾಸ್ತ್ರಜ್ಞ ಗ್ಲೆನ್ ಟಿ. ಸೀ ಬೋರ್ಗ್ ಅವರು ಮಿಚಿಗನ್ ಬಳಿಯ ಇಸ್ಫೆಮಿಂಗ್ ಎಂಬಲ್ಲಿ ಜನಿಸಿದರು. ‘ಆಕ್ಟಿನೈಡ್’ ಕಾನ್ಸೆಪ್ಟ್ ಕುರಿತಾದ ಸಂಶೋಧನೆಗಾಗಿ ಇವರಿಗೆ 1951 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿತ್ತು.

1944: ಅಮೆರಿಕದ ಅರ್ಥಶಾಸ್ತ್ರಜ್ಞ ಜೇಮ್ಸ್ ಹೆಕ್ಮ್ಯಾನ್ ಅವರು ಚಿಕಾಗೋದಲ್ಲಿ ಜನಿಸಿದರು. ಇವರಿಗೆ 2000ದ ವರ್ಷದಲ್ಲಿ ನೊಬೆಲ್ ಅರ್ಥಶಾಸ್ತ್ರದ ಪುರಸ್ಕಾರ ಸಂದಿತ್ತು.

1957: ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯ ಮುಖ್ಯಸ್ಥರಾದ ಮುಖೇಶ್ ಅಂಬಾನಿ ಅವರು ಯೆಮೆನ್ ದೇಶದ ಏಡೆನ್ ಎಂಬಲ್ಲಿ ಜನಿಸಿದರು.

1968: ಪ್ರಸಿದ್ಧ ಚಲನಚಿತ್ರ ನಟ ಅರ್ಷದ್ ವರ್ಸಿ ಅವರು ಮುಂಬೈನಲ್ಲಿ ಜನಿಸಿದರು.

1973: ಪ್ರಸಿದ್ಧ ಸುಗಮ ಸಂಗೀತ ಗಾಯಕ ಮತ್ತು , ಸ್ವರ ಸಂಯೋಜಕ ರಾಜು ಅನಂತಸ್ವಾಮಿ ಅವರು, ಪ್ರಸಿದ್ಧ ಸುಗಮ ಸಂಗೀತ ಗಾಯಕ ಮತ್ತು ನಿರ್ದೇಶಕರಾದ ಮೈಸೂರು ಅನಂತಸ್ವಾಮಿ ಅವರ ಪುತ್ರರಾಗಿ ಜನಿಸಿದರು. ಕೆಲವೊಂದು ಚಲನಚಿತ್ರಗಳಲ್ಲೂ ನಟಿಸಿದ್ದ ಇವರು ತಮ್ಮ 36ರ ಹರೆಯದಲ್ಲೇ ನಿಧನರಾದರು.

1916: ಶೇ ಲೋಕೋಮೊಟೀವ್ ಸೃಷ್ಟಿಸಿದ ಎಫರೈಮ್ ಶೇ ಅವರು ಓಹಿಯೋ ಬಳಿಯ ಹ್ಯೂರೋನ್ ಕೌಂಟಿ ಎಂಬಲ್ಲಿ ಜನಿಸಿದರು.

1998: ಮೆಕ್ಸಿಕನ್ ಸಾಹಿತಿ ಮತ್ತು ತತ್ವಜ್ಞಾನಿ ಒಕ್ಟಾವಿಯೋ ಪಾಜ್ ಅವರು ಮೆಕ್ಸಿಕೋದಲ್ಲಿ ನಿಧನರಾದರು. ಇವರಿಗೆ 1990 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

2004: ಗಿನ್ನೇಸ್ ವರ್ಲ್ಡ್ ರೆಕಾರ್ಡ್ಸ್ ಸಹ ಸಂಸ್ಥಾಪಕ ನೋರ್ರಿಸ್ ಮೆಕ್’ವಿರ್ಟರ್ ಅವರು ಕಿಂಗ್ಟನ್ ಲ್ಯಾಂಗ್ಲೀ ಎಂಬಲ್ಲಿ ನಿಧನರಾದರು.

2013: ಫ್ರೆಂಚ್ ಜೀವವಿಜ್ಞಾನಿ ಫ್ರಾಂಕೋಯಿಸ್ ಜಾಕಬ್ ಅವರು ಪ್ಯಾರಿಸ್ ನಗರದಲ್ಲಿ ನಿಧನರಾದರು. ಇವರು ಟ್ರಾನ್ಸ್ಕ್ರಿಪ್ಶನ್ ಮೂಲಕ ಕಣಗಳಲ್ಲಿ ಎನ್ಜೈಮ್ ನಿಯಂತ್ರಣದ ಚಿಂತನೆಯನ್ನು ಹುಟ್ಟು ಹಾಕಿದರು. 1965 ವರ್ಷದಲ್ಲಿ ಇವರಿಗೆ ನೊಬೆಲ್ ವೈದ್ಯ ಶಾಸ್ತ್ರದ ಪ್ರಶಸ್ತಿ ಸಂದಿತ್ತು.