Categories
e-ದಿನ

ಫೆಬ್ರವರಿ-18

ಪ್ರಮುಖಘಟನಾವಳಿಗಳು:

3102: ಕೃಷ್ಣಾವತಾರವು ಅಂತ್ಯಗೊಂಡು ಕಲಿಯುಗದ ಪ್ರಾರಂಭ

1861: ಇಟಲಿಯ ಏಕೀಕರಣವು ಬಹುತೇಕ ಸಂಪೂರ್ಣಗೊಂಡು, ಪೀಡ್ಮಾಂಟಿನ ಎರಡನೇ ವಿಕ್ಟರ್ ಎಮ್ಮಾನ್ಯುಯೆಲ್ ಅವರು ಇಟಲಿಯ ರಾಜರಾದರು.

1885: ಅಮೆರಿಕದಲ್ಲಿ ಮಾರ್ಕ್ ಟ್ವೈನ್ ಅವರ ‘ಅಡ್ವೆಂಚರ್ಸ್ ಆಫ್ ಹಕ್ಕಲ್ ಬೆರ್ರಿ ಫಿನ್’ ಪ್ರಕಟಣೆಗೊಂಡಿತು.

1911: ಹೆನ್ರಿ ಪೆಕ್ವೆಟ್ ಎಂಬ 23 ವರ್ಷದ ವಿಮಾನ ಚಾಲಕರು, ಸುಮಾರು 6,500 ಅಂಚೆ ಪತ್ರಗಳನ್ನು ಅಲಹಾಬಾದಿನಿಂದ ಹತ್ತು ಕಿಲೋಮೀಟರ್ ದೂರವಿರುವ ನೈನಿ ಎಂಬಲ್ಲಿಗೆ ವಿಮಾನದಲ್ಲಿ ಕೊಂಡೊಯ್ದರು. ಇದು ಪ್ರಪ್ರಥಮ ವಿಮಾನ ಅಂಚೆ (airmail) ಎಂಬ ಘಟನೆಯಾಗಿ ದಾಖಲಾಗಿದೆ.

1930: ಅಮೆರಿಕದ ಖಗೋಳ ಶಾಸ್ತ್ರಜ್ಞ ಕ್ಲೈಡ್ ಡಬ್ಲ್ಯೂ ಟೊಂಬಾಗ್ ಎಂಬಾತ ಜನವರಿಯಲ್ಲಿ ತೆಗೆದ ಚಿತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ‘ಪ್ಲೂಟೋ’ವನ್ನು ಅನ್ವೇಷಿಸಿದ.

1930: ಎಲ್ಮ್ ಫಾರ್ಮ್ ಒಲ್ಲಿಯೇ ಎಂಬ ಹಸು ಮೊದಲ ಬಾರಿಗೆ ವಿಮಾನವೊಂದರಲ್ಲಿ ಪ್ರಯಾಣಿಸಿದ ಕೀರ್ತಿಗೆ ಪಾತ್ರವಾಯಿತಲ್ಲದೆ, ಮೊದಲಬಾರಿಗೆ ವಿಮಾನದಲ್ಲಿ ಹಾಲು ಕರೆಯಲ್ಪಟ್ಟ ಹಸುವೆಂದು ಸಹಾ ಹೆಸರಾಯಿತು.

1946: ಮುಂಬೈ ಬಂದರಿನಲ್ಲಿ ಬ್ರಿಟಿಷ್ ಆಡಳಿತದಲ್ಲಿದ್ದ ರಾಯಲ್ ಇಂಡಿಯನ್ ನೇವಿಗೆ ಸೇರಿದ ನಾವಿಕರು ದಂಗೆ ಎದ್ದರು. ಇದು ಇಡೀ ಎಲ್ಲ ಬ್ರಿಟಿಷ್ ಪ್ರಾಂತ್ಯಗಳಿಗೆ ಹಬ್ಬಿ 78 ಹಡಗುಗಳು ಮತ್ತು ಇಪ್ಪತ್ತು ಬಂದರುಗಳಲ್ಲಿನ ಸಂಸ್ಥೆಗಳಲ್ಲಿದ್ದ 20,000 ಮಂದಿ ನಾವಿಕರು ಪಾಲ್ಗೊಳ್ಳುವಂತಾಯಿತು.

1977: ಸ್ಪೇಸ್ ಷಟಲ್ ಎಂಟರ್ ಪ್ರೈಸ್ ಪ್ರಯೋಗಾತ್ಮಕ ಬಾಹ್ಯಾಕಾಶ ವಾಹನವನ್ನು ಬೋಯಿಂಗ್ 747 ವಿಮಾನದ ಮೇಲೆ ಪರೀಕ್ಷಣಾ ನೆಲೆಗೆ ಕೊಂಡೊಯ್ಯಲಾಯಿತು.

2006: ತಮಿಳುನಾಡು ಸರ್ಕಾರ ತಮಿಳು ಕಲಿಕೆಯನ್ನು ಖಡ್ಡಾಯಗೊಳಿಸಿರುವ ವಿಚಾರದಲ್ಲಿ ಮದ್ರಾಸಿನ ಹೈಕೋರ್ಟು ಮಧ್ಯೆ ಪ್ರವೇಶಿಸಲು ನಿರಾಕರಿಸಿತು. ತಮಿಳುನಾಡಿನಲ್ಲಿ ತಮಿಳು ಕಡ್ಡಾಯಗೊಳಿಸುವ ನಿರ್ಧಾರವನ್ನು ಪ್ರಶ್ನಿಸಿ ಕನ್ಯಾಕುಮಾರಿ ಜಿಲ್ಲೆಯ ‘ಮಲಯಾಳ ಸಮಾಜ’ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನೂ ಕೋರ್ಟ್ ಇದೇ ವೇಳೆ ವಜಾ ಮಾಡಿತು. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಮಾತೃಭಾಷೆ ಕಡ್ಡಾಯಗೊಳಿಸಿರುವುದನ್ನು ಕೋರ್ಟ್ ಈ ಸಂದರ್ಭದಲ್ಲಿ ಉಲ್ಲೇಖಿಸಿತು. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ತಮ್ಮ ಮಾತೃಭಾಷೆಯಲ್ಲಿಯೇ ಕಲಿಸುವ ಹಕ್ಕಿಗೆ ಈ ಕಾಯ್ದೆ ತೊಡಕಾಗುವುದಿಲ್ಲ ಎಂದೂ ಈ ಸಂದರ್ಭದಲ್ಲಿ ಕೋರ್ಟ್ ಸ್ಪಷ್ಟಪಡಿಸಿತು.

2007: ಸಂಜೋತಾ ಎಕ್ಸ್ಪ್ರೆಸ್ ರೈಲಿನಲ್ಲಿ ಉಗ್ರಗಾಮಿಗಳು ಇಟ್ಟಿದ್ದ ಬಾಂಬು ಹರ್ಯಾಣಾದ ಪಾಣಿಪತ್ ಎಂಬಲ್ಲಿ ಸ್ಪೋಟಗೊಂಡು 68 ಮಂದಿ ಸಾವಿಗೀಡಾದರು.

2007: ಹಂಪಿ ಕನ್ನಡ ವಿಶ್ವವಿದ್ಯಾಲಯವು ಸಿದ್ಧಪಡಿಸಿರುವ ‘ಕುವೆಂಪು ಕನ್ನಡ ತಂತ್ರಾಂಶ’ವನ್ನು ಸಾಹಿತಿ ಚಂದ್ರಶೇಖರ ಕಂಬಾರ ಅವರು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.

2007: ಬಾಂಗ್ಲಾದೇಶದಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಯೂನಸ್ ಅವರು ಹೊಸ ರಾಜಕೀಯ ಪಕ್ಷದ ಸ್ಥಾಪನೆಯನ್ನು ಘೋಷಿಸಿದರು. ತಿಂಗಳ ಕೊನೆಯಲ್ಲಿ ಈ ಪಕ್ಷಕ್ಕೆ ‘ನಾಗರಿಕ ಶಕ್ತಿ’ ಎಂಬುದಾಗಿ ನಾಮಕರಣ ಮಾಡಲಾಗುವುದು ಎಂದು ಅವರು ಪ್ರಕಟಿಸಿದರು.

2007: ಭಾರತದ ಅಂಚೆ ಕಚೇರಿಯ ಪ್ರಪ್ರಥಮ ಅಂಚೆ ಚೀಟಿ ‘ಸಿಂಧೆ ಡಾಕ್ಸ್’ ನವದೆಹಲಿಯಲ್ಲಿ ಐದು ಸಾವಿರ ಡಾಲರುಗಳಿಗೆ ಮಾರಾಟಗೊಂಡಿತು. ಬ್ರಿಟಿಷ್ ಆಡಳಿತವಿದ್ದ ಭಾರತದ ಸಿಂಧ್ ಪ್ರಾಂತ್ಯದಲ್ಲಿ, ಅಂಚೆ ಸೇವೆ ಆರಂಭವಾಗುವುದರೊಂದಿಗೆ ಏಷ್ಯಾ ಖಂಡದಲ್ಲೇ ಪ್ರಥಮ ಬಾರಿಗೆ ಅಂಚೆ ವ್ಯವಸ್ಥೆ ಜಾರಿಗೆ ಬಂತು. 1854ರಲ್ಲಿ ಸಿಂಧೆ ಡಾಕ್ಸ್ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು. ಬ್ರಿಟಿಷರು ಸಿಂಧ್ ಪ್ರಾಂತ್ಯವನ್ನು ಸಿಂಧೆ ಎಂದು, ಡಾಕ್ (ಅಂಚೆ) ಅನ್ನು ಡಾಕ್ಸ್ ಎಂದೂ ಉಚ್ಚರಿಸುತ್ತಿದ್ದುದರಿಂದ ಅಂಚೆ ಚೀಟಿಯನ್ನು ‘ಸಿಂಧೆ ಡಾಕ್ಸ್’ ಎಂದು ಕರೆಯುವುದು ರೂಢಿಯಲ್ಲಿ ಬಂತು. ವಿಶ್ವದಲ್ಲಿ 1840ರಲ್ಲಿ ಪ್ರಥಮ ಬಾರಿಗೆ ಅಂಚೆ ವ್ಯವಸ್ಥೆ ಜಾರಿಗೆ ಬಂದ 14 ವರ್ಷಗಳ ನಂತರ ಅಂದರೆ 1854ರಲ್ಲಿ ಪ್ರಥಮ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿ ಸಿಂಧ್, ಕರಾಚಿ ಮತ್ತು ಮುಂಬೈ ಮಾರ್ಗವಾಗಿ ರವಾನೆಯಾಗುತ್ತಿದ್ದ ಪತ್ರಗಳ ಮೇಲೆ ಅಂಟಿಸಲಾಗುತ್ತಿತ್ತು.

2008: ಮಾತೃಭಾಷೆ ಬೋಧನೆಗೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯವನ್ನು ಉಲ್ಲೇಖಿಸಿದ ಸುಪ್ರೀಂಕೋರ್ಟ್, ತಮಿಳುನಾಡಿನ ಶಾಲೆಗಳಲ್ಲಿ ತಮಿಳು ಭಾಷೆ ಕಡ್ಡಾಯಗೊಳಿಸುವುದರಿಂದ ಏನೂ ತೊಂದರೆಯಾಗದು ಎಂದು ಹೇಳಿತು. ಶಾಲೆಗಳಲ್ಲಿ ಸ್ಥಳೀಯ ಭಾಷೆ ಕಡ್ಡಾಯಗೊಳಿಸಬಾರದು ಎಂದು ಕೆಲವರು ವಿರೋಧ ವ್ಯಕ್ತಪಡಿಸುತ್ತ ಬಂದಿದ್ದು, ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟಿನ ಆದೇಶ ಹೆಚ್ಚು ಮಹತ್ವ ಪಡೆಯಿತು.

2009: ಗುಲ್ಬರ್ಗ ವಿಭಾಗದ ಐದು ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಡು ಬಡವರಿಗೆ ಉಚಿತ ಆರೋಗ್ಯ ವಿಮಾ ಸೌಕರ್ಯ ಒದಗಿಸುವ ‘ಸುವರ್ಣ ಆರೋಗ್ಯ ಸುರಕ್ಷಾ ಯೋಜನೆ’ಗೆ ಕರ್ನಾಟಕ ಸರ್ಕಾರದ ಸಚಿವ ಸಂಪುಟದ ಸಭೆ ಅನುಮೋದನೆ ನೀಡಿತು. ಗುಲ್ಬರ್ಗ, ಬೀದರ್, ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ 16 ಲಕ್ಷ ಮಂದಿ ಫಲಾನುಭವಿಗಳಿಗೆ ಸುಮಾರು 300 ವಿವಿಧ ರೀತಿಯ ರೋಗಗಳಿಗೆ ಉಚಿತ ಚಿಕಿತ್ಸೆ ನೀಡುವ ಯೋಜನೆ ಇದಾಗಿದ್ದು, ಇದರ ಪೂರ್ಣ ವಿಮಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲು ನಿರ್ಧರಿಸಿತು.

2013: ಶಸ್ತ್ರ ಸಜ್ಜಿತ ದರೋಡೆಕೋರರು ಬೆಲ್ಜಿಯಮ್ಮಿನ ಬ್ರಸೆಲ್ಸ್ ವಿಮಾನ ನಿಲ್ದಾಣದಲ್ಲಿ 50 ಮಿಲಿಯನ್ ಡಾಲರ್ ಮೌಲ್ಯದ ವಜ್ರಗಳ ಲೂಟಿ ಮಾಡಿದರು.

ಪ್ರಮುಖಜನನ/ಮರಣ:

1486: ಭಾರತದಲ್ಲಿ ಚೈತನ್ಯ ಮಹಾಪ್ರಭುಗಳು ಜನಿಸಿದರು. ಇವರು ಗೌಡೀಯ ವೈಷ್ಣವ ಪದ್ಧತಿಯ ಸ್ಥಾಪಕರೆನಿಸಿದ್ದಾರೆ. ಭಾಗವತ ಪುರಾಣ ಮತ್ತು ಭಗವದ್ಗೀತೆಯಲ್ಲಿನ ಭಕ್ತಿಯೋಗವನ್ನು ಇವರು ಹೆಚ್ಚು ಬೋಧಿಸಿದರು. ಇವರ ಅನುಯಾಯಿಗಳಿಗೆ ಇವರು ಅತ್ಯಂತ ಕರುಣಾಪೂರಿತ ಕೃಷ್ಣನ ಸ್ವರೂಪ ಎಂಬ ಭಾವ ಹುಟ್ಟಿಸಿದ್ದರು ಎಂದು ಹೇಳಲಾಗಿದೆ.

1745: ಇಟಲಿಯ ಭೌತತಜ್ಞ ಅಲೆಸ್ಸಾಂಡ್ರೊ ವೋಲ್ಟಾ ಅವರು ಡಚ್ಚಿ ಆಫ್ ಮಿಲನ್ ಬಳಿಯ ಕೊಮೋ ಎಂಬಲ್ಲಿ ಜನಿಸಿದರು.ಇವರು ಸಂಶೋಧಿಸಿದ ಎಲೆಕ್ಟ್ರಿಕ್ ಬ್ಯಾಟರಿ ನಿರಂತರ ವಿದ್ಯುತ್ತಿನ ಮೊದಲ ಮೂಲವಾಯಿತು.

1836:  ಶ್ರ್ಹೀ ರಾಮಕೃಷ್ಣ ಪರಮಹಂಸರು ಪಶ್ಚಿಮ ಬಂಗಾಳದ ಕಾಮಾಪುಕುರ ಎಂಬಲ್ಲಿ ಜನಿಸಿದರು. ಈ ಜಗತ್ತಿನಲ್ಲಿ ನಾನು ದೇವರನ್ನು ಕಂಡಿದ್ದೇನೆ ಎಂದು ಆತ್ಮವಿಶ್ವಾಸದಿಂದ ಹೇಳಿದ ಅಪೂರ್ವವ್ಯಕ್ತಿಯಾದ ಪರಮಹಂಸರನ್ನು ನಾಸ್ತಿಕ ಮತ್ತು ಆಸ್ತಿಕರೆಂಬ ಭೇದವಿಲ್ಲದೆ ಪ್ರಾಜ್ಞರೆಲ್ಲರೂ ಶ್ರೇಷ್ಠರೆಂಬ ಗೌರವಭಾವ ಹೊಂದಿದ್ದಾರೆ. ಇವರ ಬದುಕಿನ ರೀತಿ ಮತ್ತು ಬೋಧನೆಗಳು ಅವರ ಶಿಷ್ಯರಾದ ಮಹೇಂದ್ರನಾಥ ಗುಪ್ತ ಅವರು ರಚಿಸಿದ ‘ಶ್ರೀ ರಾಮಕೃಷ್ಣ ವಚನ ವೇದ’ ಗ್ರಂಥದಲ್ಲಿದೆ. ಇವರ ಬೋಧನೆಗಳನ್ನು ಇವರ ಆಪ್ತ ಶಿಷ್ಯರಾಗಿದ್ದ ಸ್ವಾಮಿ ವಿವೇಕಾನಂದರು ವಿಶ್ವದಲ್ಲಿ ಪ್ರಸಿದ್ಧಿ ಪಡಿಸಿದರು.

1848: ಸ್ಟೈನ್ಡ್ ಗ್ಲಾಸ್ ಆರ್ಟಿಸ್ಟ್ ಅಥವಾ ಗಾಜಿನ ಕಲಾಕೃತಿ ರಚನೆಗೆ ಪ್ರಸಿದ್ಧರಾದ ಕಲಾಕಾರ ಲೂಯಿಸ್ ಕಂಫರ್ಟ್ ಟಿಫಾನಿ ಅವರು ನ್ಯೂಯಾರ್ಕ್ ನಗರದಲ್ಲಿ ಜನಿಸಿದರು.

1889: ಹರ್ಡೇಕರ್ ಮಂಜಪ್ಪನವರು ಬನವಾಸಿಯಲ್ಲಿ ಜನಿಸಿದರು. ಅವರು ಗಾಂಧಿಜಿಯಂತೆ ಬದುಕಿ, ಭುಜಿಸಿ, ಬೋಧಿಸಿ, ಬರೆದು, ಸಂಪೂರ್ಣ ಬ್ರಹ್ಮಚರ್ಯೆ ಮತ್ತು ತಪಸ್ವೀ ಜೀವನ ನಡೆಸಿದರು. ತಮ್ಮ ಆತ್ಮಚರಿತ್ರೆಯನ್ನೂ ಒಳಗೊಂಡಂತೆ ಹರ್ಡೇಕರ್ ಮಂಜಪ್ಪನವರು ಇಪ್ಪತ್ತು ಕೃತಿಗಳನ್ನು ರಚಿಸಿದ್ದಾರೆ. ತಮ್ಮ ಜೀವನಪರ್ಯಂತವಾಗಿ ನಮ್ಮ ದೇಶ ಸ್ವಾತಂತ್ರಗೊಳ್ಳಲು ಹಲವಾರು ಶಕ್ತಿಯುತ ಹೋರಾಟಗಳನ್ನು ನಡೆಸಿದ ಹರ್ಡೇಕರ್ ಮಂಜಪ್ಪನವರು ದೇಶ ಸ್ವಾತಂತ್ರ ಪಡೆಯಲು ಕೆಲವೇ ತಿಂಗಳುಗಳ ಮುಂಚೆ, 3ನೆ ಜನವರಿ 1947ರಂದು ನಿಧನರಾದರು.

1898: ಇಟಲಿಯ ವ್ಯಾಪಾರಿ ಮತ್ತು ರೇಸ್ ಕಾರ್ ಚಾಲಕ ಎಂಜೋ ಫೆರ್ರಾರಿ ಅವರು ಮೊಡೆನಾ ಎಂಬಲ್ಲಿ ಜನಿಸಿದರು. ಅವರು ಪ್ರಸಿದ್ಧ ಕಾರ್ ನಿರ್ಮಾಣ ಸಂಸ್ಥೆ ಫೆರ್ರಾರಿ ಸ್ಥಾಪಿಸಿದರು.

1918: ಡಾ. ಎಂ. ಗೋಪಾಲಕೃಷ್ಣ ಅಡಿಗರು ದಕ್ಷಿಣ ಕನ್ನಡ ಜಿಲ್ಲೆಯ ಮೊಗೇರಿ ಎಂಬ ಹಳ್ಳಿಯಲ್ಲಿ ಜನಿಸಿದರು. ಐವತ್ತೊಂದನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವಿಸಲ್ಪಟ್ಟ ಅಡಿಗರು ರಾಜ್ಯ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕೇರಳದ ಕುಮಾರ್ ಆಸಾನ್, ಕಬೀರ್ ಸಂಮಾನ್ ಮುಂತಾದ ಅನೇಕ ಪ್ರಶಸ್ತಿಗಳನ್ನು ಪಡೆದರು. ‘ಸಾಕ್ಷಿ’ ಪತ್ರಿಕೆಯ ಸಂಪಾದಕರಾಗಿ ಹೊಸ ಸಂವೇದನೆ ಹಾಗೂ ಹೊಸ ಅಭಿವ್ಯಕ್ತಿ ವಿಧಾನಗಳಿಗೆ ಮಾರ್ಗದರ್ಶಕರಾದ ಅಡಿಗರು ತಮ್ಮ ಕಿರಿಯ ತಲೆಮಾರಿನವರ ಮೇಲೆ ಬೀರಿದ ಪ್ರಭಾವ, ಅವರ ಓರಗೆಯ ಮತ್ತು ಹಿರಿಯ ತಲೆಮಾರಿನವರಿಗೆ ಒಡ್ಡಿದ ಸವಾಲುಗಳು ಕನ್ನಡ ಆಧುನಿಕ ಸಾಹಿತ್ಯ ಚರಿತ್ರೆಯಲ್ಲಿ ಮಹತ್ವದ ಸಂಗತಿಯಾಗಿದೆ.

1931: ಅಮೆರಿಕದ ಪ್ರಸಿದ್ಧ ವ್ಯಂಗ್ಯಚಿತ್ರಕಾರ ಮತ್ತು ‘ದಿ ವಿಜರ್ಡ್ ಆಫ್ ಐಡಿ’ ಸ್ಥಾಪಕ ಜಾನಿ ಹಾರ್ಟ್ ಅವರು ಅಮೆರಿಕದ ಎಂಡಿಕಾಟ್ ಎಂಬಲ್ಲಿ ಜನಿಸಿದರು.

1931: ಅಮೆರಿಕದ ಮಹಿಳಾ ಕಾದಂಬರಿಗಾರ್ತಿ, ನಾಟಕಗಾರ್ತಿ ಮತ್ತು ಚಿಂತಕಿ ಟೋನಿ ಮಾರಿಸನ್ ಲೋಹಿಯೋ ಬಳಿಯ ಲೊರಾಯನ್ ಎಂಬಲ್ಲಿ ಜನಿಸಿದರು. ಅವರಿಗೆ 1993ರ ವರ್ಷದಲ್ಲಿ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತು.

1931: ಪ್ರಸಿದ್ಧ ಬ್ರಿಟಿಷ್ ಉದ್ಯಮಿ ಮತ್ತು ಕೊಡುಗೈ ಕೊಡುಗೆದಾರ ಸ್ವರಾಜ್ ಪಾಲ್ ಅವರು ಪಂಜಾಬಿನ ಜಲಂಧರ್ ಪಟ್ಟಣದಲ್ಲಿ ಜನಿಸಿದರು. ಬ್ರಿಟಿಷ್ ಸರ್ಕಾರವು ಇವರಿಗೆ ಅನೇಕ ಗೌರವಯುತವಾದ ಸ್ಥಾನಗಳನ್ನು ನೀಡಿತ್ತು. ಭಾರತ ಸರ್ಕಾರದ ಪದ್ಮಭೂಷಣ ಗೌರವದ ಜೊತೆಗೆ ಅನೇಕ ರಾಷ್ಟ್ರಗಳ ಗೌರವಯುತ ಪ್ರಶಸ್ತಿಗಳೂ ಇವರಿಗೆ ಸಂದವು.

1934: ಕನ್ನಡ ಚಲನಚಿತ್ರರಂಗದ ಪ್ರಸಿದ್ಧ ಸಾಹಿತಿ ಮತ್ತು ಗೀತರಚನೆಕಾರ ಚಿ. ಉದಯಶಂಕರ್ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಚಿಟ್ನಹಳ್ಳಿ ಎಂಬಲ್ಲಿ ಜನಿಸಿದರು. ಹಲವು ಸಹಸ್ರ ಗೀತೆಗಳನ್ನು ರಚಿಸಿರುವ ಅವರ ಅನೇಕ ಗೀತೆಗಳು ಇಂದಿಗೂ ಪ್ರಸಿದ್ಧವಾಗಿವೆ. ಇವರು ಕೆಲವೊಂದು ಚಿತ್ರಗಳಲ್ಲಿ ಪಾತ್ರ ನಿರ್ವಹಣೆಯನ್ನೂ ಮಾಡಿದ್ದರು.

1957: ಜರ್ಮನಿಯ ಅಪ್ರತಿಮ ಅಥ್ಲೆಟ್ ಮರಿಟಾ ಕೋಚ್ ಪೂರ್ವ ಜರ್ಮನಿಯ ವಿಸ್ಮರ್ ಎಂಬಲ್ಲಿ ಜನಿಸಿದರು. ಈಕೆ ಹೊರಾಂಗಣ ಆಟಗಳಲ್ಲಿ 16 ಜಾಗತಿಕ ದಾಖಲೆಗಳನ್ನು ಹಾಗೂ ಒಳಾಂಗಣ ಕ್ರೀಡೆಗಳಲ್ಲಿ 14 ಜಾಗತಿಕ ದಾಖಲೆಗಳನ್ನು ನಿರ್ಮಿಸಿದರು.

1546: ಜರ್ಮನಿಯ ಪ್ರೊಟೆಸ್ಟೆಂಟ್ ಸುಧಾರಣಾವಾದಿ ನಾಯಕ ಮಾರ್ಟಿನ್ ಲೂಥರ್ ತಮ್ಮ 62ನೇ ವಯಸ್ಸಿನಲ್ಲಿ ಜರ್ಮನಿಯ ಐಸೆಲ್ ಬೆನ್ ಎಂಬಲ್ಲಿ ನಿಧನರಾದರು

1564: ಅಮರ ಕಲಾಕಾರರಾದ ಮೈಕೆಲೇಂಜೆಲೋ ಇಟಲಿಯ ರೋಮ್ ನಗರದಲ್ಲಿ ಜನಿಸಿದರು. ಮಹಾನ್ ಚಿತ್ರಕಾರ, ಶಿಲ್ಪಿ, ವಿನ್ಯಾಸಕಾರ ಹಾಗೂ ಕವಿಯೆನಿಸಿರುವ ಮೈಕೆಲೇಂಜೆಲೋ ಇಟಲಿಯ ಭವ್ಯ ಪುನರುತ್ಥಾನ ಕಾಲದ ಮೇರುಸದೃಶ ಕಲಾವಿದರೆಂದು ಪ್ರಸಿದ್ಧರಾಗಿದ್ದಾರೆ.