Categories
e-ದಿನ

ಫೆಬ್ರವರಿ-28

ದಿನಾಚರಣೆ

ರಾಷ್ಟ್ರೀಯ ವಿಜ್ಞಾನ ದಿನ

1928ರ ಫೆಬ್ರುವರಿ 28 ದಿನದಂದು ಮಹಾನ್ ವಿಜ್ಞಾನಿ ಸರ್ ಸಿ ವಿ ರಾಮನ್ ಅವರು ವಿಶ್ವಪ್ರಸಿದ್ಧವಾದ ‘ರಾಮನ್ ಎಫೆಕ್ಟ್’ ಸಂಶೋಧನೆಯ ವಿವರಗಳನ್ನು ಜಗತ್ತಿಗೆ ಬಹಿರಂಗಪಡಿಸಿದರು.
ಮೆಡಿಟರೇನಿಯನ್ ಸಮುದ್ರದಲ್ಲಿ ಪಯಣಿಸುತ್ತಿದ್ದ ಸಿ ವಿ ರಾಮನ್ ಅವರು ಕಡಲಿನ ನೀಲಿ ಬಣ್ಣವನ್ನು ಕಂಡು ಆ ಸೊಬಗಿಗೆ ಪರವಶರಾದದ್ದು ಮಾತ್ರವಲ್ಲ, ಅವರಿಗೆ ನೀರಿನ ಬಣ್ಣ ಅದು ಹೇಗೆ ನೀಲಿಯಾಗಿದೆ ಎಂಬ ಸೋಜಿಗ ಕೂಡಾ ಉಂಟಾಯಿತು. ಆಕಾಶವೂ ನೀಲಿ, ಸಮುದ್ರವೂ ನೀಲಿ. ಹಾಗಾದರೆ ಆಕಾಶದ ಪ್ರತಿಫಲನ ನೀರಿನ ಮೇಲೆ ಕಾಣುತ್ತಿದೆಯೇ ಇಲ್ಲ, ಇದಕ್ಕೆ ಇನ್ನೇನಾದರೂ ಕಾರಣ ಇರಬಹುದೇ ಎಂದು ತೀವ್ರವಾಗಿ ಚಿಂತಿಸಿದ ಅವರಿಗೆ “ಸೂರ್ಯನ ಬೆಳಕು ನೀರಿನ ಕಣ ಕಣದಲ್ಲೂ ಹರಡಿಕೊಳ್ಳುವುದೇ ಸಮುದ್ರವು ನೀಲಿಯಾಗಿ ಕಾಣುವುದಕ್ಕೆ ಕಾರಣ” ಎಂದು ದೃಢಪಟ್ಟಿತು. ಆ ಕ್ಷಣದಿಂದಲೇ ತಮ್ಮ ತೀವ್ರವಾದ ಸಂಶೋಧನೆಗಳನ್ನು ನಡೆಸಿದ ರಾಮನ್ ದ್ರವಗಳಲ್ಲಿ ಬೆಳಕಿನ ಸಂಚಲನೆಯ ಕುರಿತಾದ ಸುದೀರ್ಘ ಅಧ್ಯಯನವನ್ನು ಕೈಗೊಂಡು ಆ ಪ್ರಯೋಗಗಳ ಪರಿಣಾಮವನ್ನು ವೈಜ್ಞಾನಿಕ ಲೋಕದೆದುರು ತೆರೆದಿಟ್ಟರು. ಈ ಸಂಶೋಧನೆಗಾಗಿ ರಾಮನ್ ಅವರಿಗೆ ನೋಬಲ್ ಪಾರಿತೋಷಕ ಸಂದಿತು. ರಾಮನ್ ಅವರ ಈ ಸಂಶೋಧನೆಯ ಗೌರವಾರ್ಥವಾಗಿ ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ.

ವಿಶ್ವ ದರ್ಜಿಗಳ ದಿನ (ವರ್ಲ್ಡ್ ಟೈಲರ್ಸ್ ಡೇ)

ಹಲವಾರು ದೇಶಗಳಲ್ಲಿ ಫೆಬ್ರವರಿ 28ದಿನ ‘ವರ್ಲ್ಡ್ ಟೈಲರ್ಸ್ ಡೇ’ ಎಂದು ಆಚರಿಸಲ್ಪಡುತ್ತಿದೆ. ಹೊಲಿಗೆ ಯಂತ್ರವನ್ನು 1845ರ ವರ್ಷದಲ್ಲಿ ಲಾಕ್ ಸ್ಟಿಚ್ ಲೂಪ್ ವ್ಯವಸ್ಥೆಯಲ್ಲಿ ಉಪಯೋಗಿಸುವ ಹಾಗೆ ಕಂಡು ಹಿಡಿದ ಸರ್ ಎಲಿಯಾಸ್ ಹೋವೆ ಅವರ ಗೌರವಾರ್ಥವಾಗಿ ಆಚರಿಸಲಾಗುತ್ತಿದೆ.

ಪ್ರಮುಖಘಟನಾವಳಿಗಳು:

1827: ಅಮೆರಿಕದ ಪ್ರಥಮ ವಾಣಿಜ್ಯ ಸಾರಿಗೆ ವ್ಯವಸ್ಥೆ ‘ಬಾಲ್ಟಿಮೋರ್ ಅಂಡ್ ಓಹಿಯೋ ರೈಲ್ ರೋಡ್’ ಪ್ರಾರಂಭ : ಅಮೆರಿಕದ ಪ್ರಥಮ ವಾಣಿಜ್ಯ ಸಾರಿಗೆ ವ್ಯವಸ್ಥೆ ‘ಬಾಲ್ಟಿಮೋರ್ ಅಂಡ್ ಓಹಿಯೋ ರೈಲ್ ರೋಡ್’ ಆರಂಭಗೊಂಡಿತು. ಜನ ಮತ್ತು ಸಾಮಗ್ರಿ ಸಾಗಣೆ ವ್ಯವಸ್ಥೆಗಳೆರಡನ್ನೂ ವಾಣಿಜ್ಯರೂಪದಲ್ಲಿ ಈ ಮೂಲಕ ಆರಂಭಿಸಲಾಯಿತು.

1885: ಅಮೆರಿಕನ್ ಟೆಲಿಫೋನ್ ಮತ್ತು ಟೆಲಿಗ್ರಾಫ್ ಸಂಸ್ಥೆ ಆರಂಭ ಅಮೆರಿಕನ್ ಟೆಲಿಫೋನ್ ಮತ್ತು ಟೆಲಿಗ್ರಾಫ್ ಸಂಸ್ಥೆಯು ಅಮೆರಿಕನ್ ಬೆಲ್ ಟೆಲಿಫೋನ್ ಸಂಸ್ಥೆಯ ಅಂಗಸಂಸ್ಥೆ(subsidiary)ಯಾಗಿ ಆರಂಭಗೊಂಡಿತು. ಮುಂದೆ ಅಮೇರಿಕನ್ ಬೆಲ್ ಸಂಸ್ಥೆಯು ತನ್ನ ಈ ಅಂಗಸಂಸ್ಥೆಯೊಂದಿಗೆ ವಿಲೀನಗೊಂಡಿತು.

1922: ಬ್ರಿಟನ್ ಏಕಪಕ್ಷೀಯವಾಗಿ ಈಜಿಪ್ಟಿಗೆ ಸ್ವಾತಂತ್ರ್ಯವನ್ನು ಘೋಷಿಸಿತು. ಬ್ರಿಟನ್ ಏಕಪಕ್ಷೀಯವಾಗಿ ಈಜಿಪ್ಟಿಗೆ ಸ್ವಾತಂತ್ರ್ಯವನ್ನು ಘೋಷಿಸಿತು.

1935: ಡ್ಯುಪಾಂಟ್ ಸಂಸ್ಥೆಯ ವಿಜ್ಞಾನಿ ವಾಲೇಸ್ ಕರೋದರ್ಸ್ ಅವರು ನೈಲಾನ್ ಸಂಶೋಧಿಸಿದರು. ಡ್ಯುಪಾಂಟ್ ಸಂಸ್ಥೆಯ ವಿಜ್ಞಾನಿ ವಾಲೇಸ್ ಕರೋದರ್ಸ್ ಅವರು ನೈಲಾನ್ ಸಂಶೋಧಿಸಿದರು.

1939: ವೆಬ್ಸ್ಟರ್ ನಿಘಂಟಿನಲ್ಲಿ ‘dord’ ಎಂಬ ತಪ್ಪು ಪದದ ನುಸುಳಿಕೆ” open=”no”]ವೆಬ್ಸ್ಟರ್ ಅವರ ನೂತನ ಅಂತರರಾಷ್ಟ್ರೀಯ ನಿಘಂಟಿನ ಎರಡನೇ ಅವತರಣಿಕೆಯಲ್ಲಿ ‘dord’ ಎಂಬ ತಪ್ಪು ಪದವೊಂದು ನುಸುಳಿ, ಆ ಕುರಿತಾದ ತನಿಖೆಗೆ ಮೊದಲಾಯಿತು.

1940: ಮೊಟ್ಟಮೊದಲ ಬಾರಿಗೆ ದೂರದರ್ಶನದಲ್ಲಿ ಬ್ಯಾಸ್ಕೆಟ್ ಬಾಲ್ ಕ್ರೀಡೆಯ ನೇರ ಪ್ರಸಾರ. ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಎಂಬಲ್ಲಿ ಫೋರ್ಧಾಮ್ ವಿಶ್ವವಿದ್ಯಾಲಯ ಮತ್ತು ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯಗಳ ನಡುವೆ ನಡೆದ ಬ್ಯಾಸ್ಕೆಟ್ ಬಾಲ್ ಪಂದ್ಯವು ದೂರದರ್ಶನದಲ್ಲಿ ನೇರ ಪ್ರಸಾರಗೊಂಡಿತು. ಬ್ಯಾಸ್ಕೆಟ್ ಬಾಲ್ ಪಂದ್ಯವೊಂದು ದೂರದರ್ಶನದಲ್ಲಿ ನೇರಪ್ರಸಾರಗೊಂಡಿದ್ದು ಇದೇ ಮೊದಲು.

1947: ಟೈವಾನಿನಲ್ಲಿ ಸಾರ್ವಜನಿಕ ಧಂಗೆ ನಡೆದು ಸುಮಾರು 30,000 ಜನ ಸಾವಿಗೀಡಾದರು. ಟೈವಾನಿನಲ್ಲಿ ಸಾರ್ವಜನಿಕ ಧಂಗೆ ನಡೆದು ಸುಮಾರು 30,000 ಜನ ಸಾವಿಗೀಡಾದರು

1953: ಜೇಮ್ಸ್ ವಾಟ್ಸನ್ ಮತ್ತು ಫ್ರಾನ್ಸಿಸ್ ಕ್ರಿಕ್ ಅವರು, ತಾವು ‘DNA’ ನಲ್ಲಿನ ರಾಸಾಯನಿಕ ಸ್ವರೂಪವನ್ನು ಸ್ಪಷ್ಟವಾಗಿ ನಿಷ್ಕರ್ಶಿಸಿರುವುದಾಗಿ ತಮ್ಮ ಗೆಳೆಯರುಗಳ ಬಳಿ ಘೋಷಿಸಿದರು. ಜೇಮ್ಸ್ ವಾಟ್ಸನ್ ಮತ್ತು ಫ್ರಾನ್ಸಿಸ್ ಕ್ರಿಕ್ ಅವರು, ತಾವು ‘DNA’ ನಲ್ಲಿನ ರಾಸಾಯನಿಕ ಸ್ವರೂಪವನ್ನು ಸ್ಪಷ್ಟವಾಗಿ ನಿಷ್ಕರ್ಶಿಸಿರುವುದಾಗಿ ತಮ್ಮ ಗೆಳೆಯರುಗಳ ಬಳಿ ಘೋಷಿಸಿದರು. ಈ ಕುರಿತ ಅಧಿಕೃತ ಪ್ರಕಟಣೆ ಏಪ್ರಿಲ್ ತಿಂಗಳ ‘ನೇಚರ್’ ಪತ್ರಿಕೆಯಲ್ಲಿ ಮೂಡಿಬಂದ ನಂತರದಲ್ಲಿ ಏಪ್ರಿಲ್ 25ರಂದು ಹೊರಬಂತು.

1954: ಪ್ರಥಮ ಬಣ್ಣದ ಟೆಲಿವಿಷನ್ ಸಾರ್ವಜನಿಕ ಮಾರಾಟಕ್ಕೆ ‘ನ್ಯಾಷನಲ್ ಟೆಲಿವಿಷನ್ ಸಿಸ್ಟಮ್ ಕಮಿಟಿ’ ಸೂಚಿತ ಗುಣಮಟ್ಟವುಳ್ಳ ಪ್ರಥಮ ಬಣ್ಣದ ಟೆಲಿವಿಷನ್ ಯಂತ್ರಗಳನ್ನು ಸಾರ್ವಜನಿಕ ಮಾರಾಟಕ್ಕೆ ಬಿಡುಗಡೆ ಮಾಡಲಾಯಿತು.

1959: ಅಮೆರಿಕದ ಪ್ರಥಮ ಬೇಹುಗಾರಿಕೆ ಉಪಗ್ರಹವಾದ ‘ಡಿಸ್ಕವರರ್ 1’ ಪ್ರಯೋಗ :ಅಮೆರಿಕದ ಪ್ರಥಮ ಬೇಹುಗಾರಿಕೆ ಉಪಗ್ರಹವಾದ ‘ಡಿಸ್ಕವರರ್ 1’ ಪ್ರಯೋಗಿಸಲ್ಪಟ್ಟಿತು. ಆದರೆ ಪೋಲಾರ್ ಕಕ್ಷೆಯನ್ನು ಗುರಿಯಿಟ್ಟುಕೊಂಡು ಹೊರಟ ಈ ಉಪಗ್ರಹವು ತನ್ನ ನಿಗದಿತ ಕಕ್ಷೆಯನ್ನು ಮುಟ್ಟುವಲ್ಲಿ ವಿಫಲಗೊಂಡಿತು.

1983: ‘M*A*S*H’ ಕಾರ್ಯಕ್ರಮದ ಅಂತಿಮ ಕಾರ್ಯಕ್ರಮವು ಪ್ರಸಾರಗೊಂಡು ಅತಿ ಹೆಚ್ಚು 106 ದಶಲಕ್ಷ ವೀಕ್ಷಕರನ್ನು ತಲುಪಿತು. ‘M*A*S*H’ ಕಾರ್ಯಕ್ರಮದ ಅಂತಿಮ ಕಾರ್ಯಕ್ರಮವು ಪ್ರಸಾರಗೊಂಡು ಅತಿ ಹೆಚ್ಚು 106 ದಶಲಕ್ಷ ವೀಕ್ಷಕರನ್ನು ಸೆಳೆಯಿತು.

1986: ಸ್ವೀಡನ್ನಿನ ಪ್ರಧಾನ ಮಂತ್ರಿಗಳಾದ ಉಲುಫ್ ಪಾಮೆ ಹತ್ಯೆ: ಸ್ವೀಡನ್ನಿನ 26ನೇ ಪ್ರಧಾನ ಮಂತ್ರಿಗಳಾದ ಉಲುಫ್ ಪಾಮೆ ಅವರು ಸ್ಟಾಲ್ಕ್ ಹೋಮ್ ನಗರದಲ್ಲಿ ಕೊಲೆಗೀಡಾದರು.

1968: ಶ್ರೀಅರಬಿಂದೋ ಆಶ್ರಮದ ಅಂತಾರಾಷ್ಟ್ರೀಯ ಟೌನ್ ಶಿಪ್ ‘ಅರೋವಿಲ್ಲೆ’ ಉದ್ಘಾಟನೆ” open=”no”]ಶ್ರೀಅರಬಿಂದೋ ಆಶ್ರಮದ ಅಂತಾರಾಷ್ಟ್ರೀಯ ಟೌನ್ ಶಿಪ್ ‘ಅರೋವಿಲ್ಲೆ’ ಪಾಂಡಿಚೇರಿಯಲ್ಲಿ ಉದ್ಘಾಟನೆಗೊಂಡಿತು. ಮನುಕುಲದ ಐಕ್ಯತೆಯ ಸದುದ್ಧೇಶದಿಂದ ಆರಂಭಗೊಂಡ ‘ಅರೋವಿಲ್ಲೆ’ ನಿರ್ಮಾಣಕ್ಕೆ ಯುನೆಸ್ಕೋ ಸಹಾಯ ಹಸ್ತ ಚಾಚಿತು. ಇಂದಿಗೆ ‘ಅರೋವಿಲ್ಲೆ’ ಪ್ರದೇಶದಲ್ಲಿ 35 ರಾಷ್ಟ್ರಗಳ ಸುಮಾರು 1700ಜನರು ನೆಲೆಸಿರುವರು.

1997: ಪ್ರಕಾಶಯುತ ‘ಗಮ್ಮ’ ಕಿರಣಗಳು ಭೂಮಿಯ ಮೇಲೆ 80 ಸೆಕೆಂಡುಗಳ ಕಾಲ ಸಿಡಿದವು: ಪ್ರಕಾಶಯುತ ‘ಗಮ್ಮ’ ಕಿರಣಗಳು ಭೂಮಿಯ ಮೇಲೆ 80 ಸೆಕೆಂಡುಗಳ ಕಾಲ ಸಿಡಿದವು. ಇದು ಗಮ್ಮ-ಕಿರಣಗಳ ಸಿಡಿತವು ಮಿಲ್ಕಿ ವೇ ಪರಿಧಿಯ ಆಚೆಗೆ ಸಹಾ ಸಂಭವಿಸಬಹುದೆಂಬುದನ್ನು ನಿರೂಪಿಸಿತು.

2002: ಗುಜರಾಥಿನಲ್ಲಿ ನಡೆದ ಹಿಂಸಾಚಾರಗಳಲ್ಲಿ ನರೋದ ಪಟಿಯಾ ಗಲಭೆಯಲ್ಲಿ 97 ಜನ ಮತ್ತು ಗುಲ್ಬರ್ಗ್ ಸೊಸೈಟಿ ಗಲಭೆಯಲ್ಲಿ 69 ಜನ ಸಾವಿಗೀಡಾದರು. ಗುಜರಾಥಿನಲ್ಲಿ ನಡೆದ ಹಿಂಸಾಚಾರಗಳಲ್ಲಿ ನರೋದ ಪಟಿಯಾ ಗಲಭೆಯಲ್ಲಿ 97 ಜನ ಮತ್ತು ಗುಲ್ಬರ್ಗ್ ಸೊಸೈಟಿ ಗಲಭೆಯಲ್ಲಿ 69 ಜನ ಸಾವಿಗೀಡಾದರು.

2004: ಟೈವಾನಿನಲ್ಲಿ 1947 ಫೆಬ್ರವರಿ 28ರಂದು ನಡೆದ ಘಟನೆಯ ಸ್ಮರಣಾರ್ಥವಾಗಿ ದಶಲಕ್ಷಕ್ಕೂ ಹೆಚ್ಚು ಜನ ಸುಮಾರು 500 ಕಿಲೋಮೀಟರ್ ಉದ್ದದ ಮಾನವ ಸರಪಳಿಯನ್ನು ನಿರ್ಮಿಸಿದರು. ಟೈವಾನಿನಲ್ಲಿ 1947 ಫೆಬ್ರವರಿ 28ರಂದು ನಡೆದ ಘಟನೆಯ ಸ್ಮರಣಾರ್ಥವಾಗಿ 228 ಕೈ ಕೈ ಜೋಡಿಸುವ ಆಂದೋಲನದಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ಜನ ಸುಮಾರು 500 ಕಿಲೋಮೀಟರ್ ಉದ್ದದ ಮಾನವ ಸರಪಳಿಯನ್ನು ನಿರ್ಮಿಸಿದರು.

2008: ‘ಸರ್ಕಾರಿ ನೌಕರರೊಬ್ಬರು ಮೃತರಾದಾಗ ಅವರ ಹತ್ತಿರದ ಸಂಬಂಧಿಕರು ಮಾನವೀಯತೆಯ ಆಧಾರದಲ್ಲಿ ತಮ್ಮ ಹಕ್ಕೆಂದು ಪರಿಗಣಿಸಿ ಉದ್ಯೋಗ ಯಾಚಿಸುವಂತಿಲ್ಲ’ ಎಂದು ಸುಪ್ರೀಂಕೋರ್ಟ್ ತೀರ್ಪು ‘ಸರ್ಕಾರಿ ನೌಕರರೊಬ್ಬರು ಮೃತರಾದಾಗ ಅವರ ಹತ್ತಿರದ ಸಂಬಂಧಿಕರು ಮಾನವೀಯತೆಯ ಆಧಾರದಲ್ಲಿ ತಮ್ಮ ಹಕ್ಕೆಂದು ಪರಿಗಣಿಸಿ ಉದ್ಯೋಗ ಯಾಚಿಸುವಂತಿಲ್ಲ’ ಎಂದು ಸುಪ್ರೀಂಕೋರ್ಟ್ ತೀರ್ಪುನೀಡಿತು.

2009: “ಮುಕ್ತ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆಯಲು, ಮೂರು ವರ್ಷದ ಪದವಿ ಶಿಕ್ಷಣದ ನಿಯಮಿತ ಅಧ್ಯಯನ ಕಡ್ಡಾಯ” ಮುಕ್ತವಿವಿಗಳಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಮೂರು ವರ್ಷದ ಪದವಿ ಶಿಕ್ಷಣದ ನಿಯಮಿತ ಅಧ್ಯಯನ ಕಡ್ಡಾಯ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು.

2009: ಗುಲ್ಬರ್ಗ ಕೇಂದ್ರೀಯ ವಿಶ್ವ ವಿದ್ಯಾಲಯದ ಕುಲಪತಿಯಾಗಿ ಪ್ರೊ. ಎ. ಎಂ. ಪಠಾಣ್ ಆಯ್ಕೆ: ಗುಲ್ಬರ್ಗದಲ್ಲಿ ಸ್ಥಾಪಿಸಲು ಉದ್ದೇಶಿಸಲಾದ ಕೇಂದ್ರೀಯ ವಿಶ್ವ ವಿದ್ಯಾಲಯದ ಕುಲಪತಿಯಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಹೈದರಾಬಾದಿನ ಮೌಲಾನಾ ಅಜಾದ್ ರಾಷ್ಟ್ರೀಯ ಉರ್ದು ವಿಶ್ವ ವಿದ್ಯಾಲಯದ ಕುಲಪತಿಗಳಾಗಿದ್ದ ಪ್ರೊ. ಎ. ಎಂ. ಪಠಾಣ್ ಅವರನ್ನು ಆಯ್ಕೆ ಮಾಡಲಾಯಿತು.

2009: ಬೃಹತ್ ಪ್ರಮಾಣದ ಯುದ್ಧನೌಕೆಗಳನ್ನು ದೇಶೀಯವಾಗಿ ನಿರ್ಮಾಣ ಮಾಡುವ ಶಕ್ತ ರಾಷ್ಟ್ರಗಳ ಗುಂಪಿಗೆ ಭಾರತ ಸೇರ್ಪಡೆ: ಬೃಹತ್ ಪ್ರಮಾಣದ ಯುದ್ಧನೌಕೆಗಳನ್ನು ದೇಶೀಯವಾಗಿ ನಿರ್ಮಾಣ ಮಾಡುವ ಶಕ್ತ ರಾಷ್ಟ್ರಗಳ ಗುಂಪಿಗೆ ಭಾರತ ಸೇರ್ಪಡೆಯಾಯಿತು. ಕೇಂದ್ರ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು ಕೊಚ್ಚಿ ಹಡಗುಕಟ್ಟೆಯಲ್ಲಿ ಭಾರತದ ಪ್ರಥಮ ದೇಶೀಯ ನಿರ್ಮಿತ ಬೃಹತ್ ಯುದ್ಧನೌಕೆ ಐಎಸಿಯಲ್ಲಿನ (ಇಂಡಿಯನ್ ಏರ್‌ಕ್ರಾಫ್ಟ್ ಕ್ಯಾರಿಯರ್) ರನ್‌ವೇ ನಿರ್ಮಾಣಕ್ಕೆ ಸಾಂಕೇತಿಕ ಚಾಲನೆ ನೀಡಿದರು.[

2009: ಕರ್ನಾಟಕದ ಇಬ್ಬರಿಗೆ ‘ಶ್ರೇಷ್ಠ ಅಂಗನವಾಡಿ ಕಾರ್ಯಕರ್ತ’ ಪ್ರಶಸ್ತಿ ಪ್ರದಾನ: ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯದ ಇಬ್ಬರಿಗೆ ‘ಶ್ರೇಷ್ಠ ಅಂಗನವಾಡಿ ಕಾರ್ಯಕರ್ತ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಾಸನ ಜಿಲ್ಲೆ ಬೇಲೂರಿನ ಕೆಂಪದೇವಮ್ಮ ಮತ್ತು ಮಂಗಳೂರಿನ ಜಯಲಕ್ಷ್ಮಿ ಪ್ರಶಸ್ತಿಗೆ ಪಾತ್ರರಾದವರು. ಮಕ್ಕಳ ಸಮಗ್ರ ಅಭಿವೃದ್ಧಿ ಯೋಜನೆಯನ್ನು ಅನುಷ್ಠಾನಗೊಳಿಸಲು ಹಾಗೂ ಆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮಾಡಿದ ಪ್ರಯತ್ನವನ್ನು ಮೆಚ್ಚಿ ಈ ಪ್ರಶಸ್ತಿ ನೀಡಲಾಯಿತು.

2009: ಬೆಂಗಳೂರಿನ ಹಳೆಯ ಸೆಂಟ್ರಲ್ ಜೈಲ್ ಆವರಣದಲ್ಲಿ ‘ಸ್ವಾತಂತ್ರ್ಯ ಉದ್ಯಾನವನ’ ಉದ್ಘಾಟನೆ :ಬೆಂಗಳೂರಿನ ಹಳೆಯ ಸೆಂಟ್ರಲ್ ಜೈಲ್ ಆವರಣದಲ್ಲಿ ‘ಸ್ವಾತಂತ್ರ್ಯ ಉದ್ಯಾನವನ’ವು ಉದ್ಘಾಟನೆಗೊಂಡಿತು.

2013: ಪೋಪ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಪೋಪ್ ಬೆನೆಡಿಕ್ಟ್ 16 ಪೋಪ್ ಬೆನೆಡಿಕ್ಟ್ 16 ಅವರು ಕ್ಯಾಥೊಲಿಕ್ ಚರ್ಚ್ ಪೋಪ್ ಆಗಿ ತಾವು ಹೊಂದಿದ್ದ ಅಧಿಕಾರಕ್ಕೆ ರಾಜೀನಾಮೆ ಸಲ್ಲಿಸಿದರು. 1415ನೇ ಇಸವಿಯ ನಂತರದಲ್ಲಿ ಚರ್ಚ್ ಇತಿಹಾಸದಲ್ಲಿ ಪೋಪ್ ಒಬ್ಬರು ರಾಜೀನಾಮೆ ಸಲ್ಲಿಸಿರುವುದು ಇದೇ ಮೊದಲಾಗಿದೆ.

ಪ್ರಮುಖಜನನ/ಮರಣ:

1533: ಫ್ರೆಂಚ್ ತತ್ವಜ್ಞಾನಿ ಮತ್ತು ಲೇಖಕ ಮೈಖೇಲ್ ಡಿ. ಮೊಂಟೈನ್ ಅವರು ಫ್ರಾನ್ಸಿನ ಗುಯೆನ್ನೇ ಪ್ರದೇಶದ ಚಾಟಿಯೂ ಡಿ ಮೊಂಟೈಗ್ನೆ ಎಂಬಲ್ಲಿ ಜನಿಸಿದರು.

1552: ಸ್ವಿಸ್ ಗಣಿತಜ್ಞ ಮತ್ತು ಗಡಿಯಾರ ಸೃಷ್ಟಿಕರ್ತ ಜೋಸ್ಟ್ ಬರ್ಗಿ ಅವರು ಟಾಗೆನ್ ಬರ್ಗ್ ಪ್ರಾಂತ್ಯದ ಲಿಚ್ಟೆನ್ ಸ್ತೀಗ್ ಎಂಬಲ್ಲಿ ಜನಿಸಿದರು.

1824: ನಯಾಗರ ಜಲಪಾತವನ್ನು ಹಗ್ಗದ ಮೇಲೆ ನಡೆಯುತ್ತಾ ದಾಟಿದ ಜೀನ್ ಫ್ರಾಂಕೋಯಿಸ್ ಗ್ರಾವೆಲೆಟ್ ಅವರು ಫ್ರಾನ್ಸಿನ ಸೈಂಟ್ ಒಮರ್ ಎಂಬಲ್ಲಿ ಜನಿಸಿದರು. ಇವರಿಗೆ ಚಾರ್ಲ್ಸ್ ಬ್ಲಾಂಡಿನ್ ಎಂಬ ಹೆಸರು ಕೂಡಾ ಇದೆ.

1896: ನೊಬೆಲ್ ಪುರಸ್ಕೃತ ವೈದ್ಯ ವಿಜ್ಞಾನಿ ಫಿಲಿಪ್ ಷೋ ಆಲ್ಟರ್ ಹೆಂಚ್ ಜನನ : ಅಮೆರಿಕದ ವೈದ್ಯ ವಿಜ್ಞಾನಿ ಫಿಲಿಪ್ ಷೋ ಆಲ್ಟರ್ ಹೆಂಚ್ ಅವರು ಪಿಟ್ಸ್ಬರ್ಗ್ ನಗರದಲ್ಲಿ ಜನಿಸಿದರು. ಹಾರ್ಮೋನ್ಸ್ ಆಫ್ ದಿ ಆಡ್ರೆನಾಲ್ ಕಾರ್ಟೆಕ್ಸ್ ಕುರಿತಾದ ಸಂಶೋಧನೆಗೆ ಇವರಿಗೆ 1950 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1901: ನೊಬೆಲ್ ರಸಾಯನ ಶಾಸ್ತ್ರ ಮತ್ತು ನೊಬೆಲ್ ಶಾಂತಿ ಪುರಸ್ಕೃತ ಲೈನಸ್ ಪಾಲಿಂಗ್ ಜನನ :ಅಮೆರಿಕದ ರಸಾಯನ ಶಾಸ್ತ್ರ ವಿಜ್ಞಾನಿ ಮತ್ತು ಶಾಂತಿ ಕಾರ್ಯಕರ್ತ ಲೈನಸ್ ಕಾರ್ಲ್ ಪಾಲಿಂಗ್ ಅವರು ಆರಿಗನ್ ಪ್ರಾಂತ್ಯದ ಪೋರ್ಟ್ಲ್ಯಾಂಡ್ ಎಂಬಲ್ಲಿ ಜನಿಸಿದರು. ಇವರು 1954ರಲ್ಲಿ ನೊಬೆಲ್ ರಸಾಯನ ಶಾಸ್ತ್ರ ಪ್ರಶಸ್ತಿ ಮತ್ತು 1962 ವರ್ಷದಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಪಡೆದಿದ್ದಾರೆ.

1913: ಶಿಲಾ ಕೆತ್ತನೆ, ಲೋಹ, ಜ್ಯೋತಿಷ್ಯ, ಸಂಗೀತ, ಸಂಸ್ಕೃತ ಪಾಂಡಿತ್ಯ ಇವೆಲ್ಲದರ ಸಂಗಮವಾಗಿದ್ದ ನಾಗೇಂದ್ರ ಸ್ಥಪತಿ ಜನನ: ಶಿಲಾ ಕೆತ್ತನೆ, ಲೋಹ, ಜ್ಯೋತಿಷ್ಯ, ಸಂಗೀತ, ಸಂಸ್ಕೃತ ಪಾಂಡಿತ್ಯ ಇವೆಲ್ಲದರ ಸಂಗಮವಾಗಿದ್ದ ನಾಗೇಂದ್ರ ಸ್ಥಪತಿ ಅವರು ಖ್ಯಾತ ಶಿಲ್ಪಿ ಸಿದ್ಧಾಂತಿ ಸಿದ್ದಲಿಂಗ ಸ್ವಾಮಿಗಳ ಪುತ್ರರಾಗಿ ಮೈಸೂರಿನಲ್ಲಿ ಜನಿಸಿದರು. ಅಸಂಖ್ಯಾತ ಕಲಾಕೃತಿಗಳನ್ನು ರಚಿಸಿದ ಇವರಿಗೆ ಮೈಸೂರು ಲಲಿತಕಲಾ ಅಕಾಡೆಮಿಯು 1965-66ರ ಸಾಲಿನ ಪ್ರಶಸ್ತಿ ನೀಡಿ ಗೌರವಿಸಿತ್ತು.

1915: ನೊಬೆಲ್ ಪುರಸ್ಕೃತ ವಿಜ್ಞಾನಿ ಪೀಟರ್ ಮೆಡಾವರ್ ಜನನ: ಬ್ರೆಜಿಲಿಯನ್-ಇಂಗ್ಲಿಷ್ ಜೀವವಿಜ್ಞಾನಿ ಪೀಟರ್ ಮೆಡಾವರ್ ಅವರು ಬ್ರೆಜಿಲ್ ದೇಶದ ರಯೋ ಡಿ ಜೆನೇರೋ ಪ್ರಾಂತ್ಯದ ಪೆಟ್ರೋಪೊಲಿಸ್ ಎಂಬಲ್ಲಿ ಜನಿಸಿದರು. ಟ್ರಾನ್ಸ್ ಪ್ಲಾಂಟೇಶನ್ ಪಿತಾಮಹರೆಂದು ಖ್ಯಾತರಾದ ಇವರಿಗೆ 1960 ವರ್ಷದಲ್ಲಿ ನೊಬೆಲ್ ವೈದ್ಯ ಶಾಸ್ತ್ರ ಪ್ರಶಸ್ತಿ ಸಂದಿತು.

1929: ಕೆನಡಿಯನ್-ಅಮೆರಿಕನ್ ಕಟ್ಟಡ ವಿನ್ಯಾಸಕಾರಾದ ಫ್ರಾಂಕ್ ಗೆಹ್ರಿ ಟೊರಾಂಟೋದಲ್ಲಿ ಜನಿಸಿದರು. ‘8 ಸ್ಪ್ರೂಸ್ ಸ್ಟ್ರೀಟ್’ ಮತ್ತು ‘ವಾಲ್ಟ್ ಡಿಸ್ನಿ ಕನ್ಸರ್ಟ್ ಹಾಲ್’ ಇವರ ಪ್ರಸಿದ್ಧ ವಿನ್ಯಾಸಗಳಲ್ಲಿ ಸೇರಿವೆ.

1930: ನೊಬೆಲ್ ಪುರಸ್ಕೃತ ಅಮೆರಿಕದ ಭೌತವಿಜ್ಞಾನಿ ಲಿಯಾನ್ ಕೂಪರ್ ಅವರು ನ್ಯೂಯಾರ್ಕಿನ ಬ್ರಾಂಕ್ಸ್ ಎಂಬಲ್ಲಿ ಜನಿಸಿದರು. ‘ಬಿಸಿಎಸ್ ಥಿಯರಿ ಆಫ್ ಸುಪರ್ ಕಂಡಕ್ಟಿವಿಟಿ’ ಪ್ರಸ್ತುತ ಪಡಿಸಿದ ಇವರು ಮತ್ತು ಇವರ ಸಹವಿಜ್ನಾನಿಗಳಿಗೆ 1972 ವರ್ಷದಲ್ಲಿ ನೊಬೆಲ್ ಭೌತ ಶಾಸ್ತ್ರ ಪ್ರಶಸ್ತಿ ಸಂದಿತು.

1915: ನೊಬೆಲ್ ಪುರಸ್ಕೃತ ವಿಜ್ಞಾನಿ ಡೇನಿಯಲ್ ಸಿ. ಟಿಸುಯ್ ಜನನ: ಚೀನೀ-ಅಮೇರಿಕನ್ ಭೌತವಿಜ್ಞಾನಿ ಡೇನಿಯಲ್ ಸಿ. ಟಿಸುಯ್ ಅವರು ಚೀನಾದ ಹೆನನ್ ಪ್ರದೇಶದ ಫ್ಯಾನ್ ವಿಲೆಜೆ ಎಂಬಲ್ಲಿ ಜನಿಸಿದರು. ‘ಕ್ವಾಂಟಮ್ ಹಾಲ್ ಎಫೆಕ್ಟ್’ ಕುರಿತಾದ ಸಂಶೋಧನೆ ಇವರಿಗೆ 1998 ವರ್ಷದಲ್ಲಿ ನೊಬೆಲ್ ಭೌತ ಶಾಸ್ತ್ರ ಪ್ರಶಸ್ತಿ ಸಂದಿತು.

1948: ನೊಬೆಲ್ ಪುರಸ್ಕೃತ ವಿಜ್ಞಾನಿ ಮತ್ತು ರಾಜಕಾರಣಿ ಸ್ಟೀವನ್ ಚು ಜನನ: ಅಮೇರಿಕದ ಭೌತವಿಜ್ಞಾನಿ ಮತ್ತು ರಾಜಕಾರಣಿ ಸ್ಟೀವನ್ ಚು ಅವರು ಮಿಸ್ಸೌರಿ ಪ್ರಾಂತ್ಯದ ಸೈಂಟ್ ಲೂಯಿಸ್ ಎಂಬಲ್ಲಿ ಜನಿಸಿದರು. ‘ಕೂಲಿಂಗ್ ಅಂಡ್ ಟ್ರಾಪಿಂಗ್ ಆಫ್ ಆಟಮ್ಸ್ ವಿಥ್ ಲೇಸರ್ ಲೈಟ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1997 ವರ್ಷದಲ್ಲಿ ನೊಬೆಲ್ ಭೌತ ಶಾಸ್ತ್ರ ಪ್ರಶಸ್ತಿ ಸಂದಿತು.

1953: ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಪಾಲ್ ಕ್ರಗ್ ಮ್ಯಾನ್ ಅವರು ನ್ಯೂಯಾರ್ಕ್ ನಗರದ ಆಲ್ಬನಿ ಎಂಬಲ್ಲಿ ಜನಿಸಿದರು. ಇವರಿಗೆ 2008 ವರ್ಷದಲ್ಲಿ ನೊಬೆಲ್ ಅರ್ಥಶಾಸ್ತ್ರದ ಪ್ರಶಸ್ತಿ ಸಂದಿತು.

1959: ಚಲನಚಿತ್ರ ನಟಿ, ನಿರ್ಮಾಪಕಿ ಜಯಮಾಲಾ ಜನನ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷತೆ ಅಲಂಕರಿಸಿದ್ದ ಜಯಮಾಲಾ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿದರು. ವಾಣಿಜ್ಯ ಮತ್ತು ಕಲಾತ್ಮಕ ಚಿತ್ರಗಳೆರಡರಲ್ಲೂ ನಟಿಸಿರುವ ಇವರು ನಿರ್ಮಾಪಕಿಯಾಗಿ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದಲ್ಲಿ ‘ತಾಯಿ ಸಾಹೇಬ’ ಚಿತ್ರ ನಿರ್ಮಿಸಿ ರಾಷ್ಟ್ರೀಯ ಪ್ರಶಸ್ತಿಗಳಿಸಿದರು. ಅದೇ ಚಿತ್ರದ ಮನೋಜ್ಞ ಅಭಿನಯಕ್ಕಾಗಿ ಆಯ್ಕೆಸಮಿತಿ ಪ್ರಕಟಿಸಿದ ವಿಶೇಷ ಜ್ಯೂರಿ ಪುರಸ್ಕಾರವನ್ನು ಸಹಾ ಸ್ವೀಕರಿಸಿದರು. ಅವರ ನಿರ್ಮಾಣದ ‘ತುತ್ತೂರಿ’ ಮಕ್ಕಳ ಚಿತ್ರ ಸಹಾ ರಾಷ್ಟ್ರಪಶಸ್ತಿ ಪಡೆಯಿತು.

1978: ಚಲನಚಿತ್ರ ಹಿನ್ನೆಲೆ ಗಾಯಕಿ ನಂದಿತಾ ಅವರು ಜನಿಸಿದರು. ಪ್ರಮುಖವಾಗಿ ಕನ್ನಡ ಚಿತ್ರಗಳಲ್ಲಿ ಹಿನ್ನೆಲೆ ಗಾಯನ ನೀಡುವ ಇವರು ಹಲವು ಇತರ ಭಾಷಾ ಚಿತ್ರಗಳಲ್ಲೂ ಹಾಡಿದ್ದಾರೆ. ಹಲವಾರು ಚಿತ್ರಗಳ ಗಾಯನಕ್ಕೆ ರಾಜ್ಯ ಚಲನಚಿತ್ರ ಪ್ರಶಸ್ತಿಯೇ ಅಲ್ಲದೆ ಇತರ ಪಶಸ್ತಿಗಳೂ ಇವರಿಗೆ ಸಂದಿವೆ.
ನಿಧನ:

1936: ನೊಬೆಲ್ ಪುರಸ್ಕೃತ ಚಾರ್ಲ್ಸ್ ನಿಕೊಲ್ಲೇ ನಿಧನ ” open=”no”]ಫ್ರೆಂಚ್ ಜೀವವಿಜ್ಞಾನಿ ಚಾರ್ಲ್ಸ್ ನಿಕೊಲ್ಲೇ ಅವರು ಟುನಿಸಿಯಾದಲ್ಲಿ ನಿಧನರಾದರು. ‘ಲೈಸ್ ಅಸ್ ದಿ ಟ್ರಾನ್ಸ್ಮಿಟರ್ ಆಫ್ ಎಪಿಡೆಮಿಕ್ ಟೈಫಸ್’ ಸಂಶೋಧನೆಗಾಗಿ ಇವರಿಗೆ 1928 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.[/fusion_toggle][fusion_toggle title=”1936: ಕಮಲಾ ನೆಹರೂ ನಿಧನ ” open=”no”]ಸ್ವಾತಂತ್ರ್ಯ ಹೋರಾಟಗಾರ್ತಿ, ಸಾಮಾಜಿಕ ಸೇವಕರ್ತೆ ಮತ್ತು ಪಂಡಿತ್ ಜವಾಹರಲಾಲ್ ನೆಹರೂ ಅವರ ಪತ್ನಿ ಕಮಲಾ ನೆಹರೂ ಅವರು ಸ್ವಿಟ್ಜರ್ಲ್ಯಾಂಡಿನ ಲೌಸ್ಸಾನೆ ಎಂಬಲ್ಲಿ ನಿಧನರಾದರು.[/fusion_toggle][fusion_toggle title=”1963: ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ನಿಧನ” open=”no”]ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಪಾಟ್ನಾದಲ್ಲಿ ತಮ್ಮ 78ನೇ ವಯಸ್ಸಿನಲ್ಲಿ ನಿಧನರಾದರು. ಅವರು 1950-62ರ ಅವಧಿಯಲ್ಲಿ ಭಾರತದ ರಾಷ್ಟ್ರಪತಿಗಳಾಗಿದ್ದರು.[/fusion_toggle][fusion_toggle title=”1967: ಟೈಮ್ ಮ್ಯಾಗಜೈನ್ ಸಹ ಸಂಸ್ಥಾಪಕ ಹೆನ್ರಿ ಲ್ಯೂಸ್ ನಿಧನ” open=”no”]ಚೀನೀ-ಅಮೆರಿಕನ್ ಪ್ರಕಾಶಕ ಮತ್ತು ಟೈಮ್ ಮ್ಯಾಗಜೈನ್ ಪತ್ರಿಕೆಯ ಸಹ ಸಂಸ್ಥಾಪಕ ಹೆನ್ರಿ ಲ್ಯೂಸ್ ಅಮೆರಿಕದ ಅರಿಜೋನಾದ ಫೀನಿಕ್ಸ್ ಎಂಬಲ್ಲಿ ನಿಧನರಾದರು.[/fusion_toggle][fusion_toggle title=”1986: ಸ್ಟಾಕ್ ಹೋಮ್ನಲ್ಲಿ ಸ್ವೀಡಿಷ್ ಪ್ರಧಾನಿ ಉಲೋಫ್ ಪಾಮೆ ಹತ್ಯೆ ” open=”no”]ಸ್ಟಾಕ್ ಹೋಮ್ನಲ್ಲಿ ಸ್ವೀಡಿಷ್ ಪ್ರಧಾನಿ ಉಲೋಫ್ ಪಾಮೆ ಅವರ ಹತ್ಯೆ ನಡೆಯಿತು.[/fusion_toggle][fusion_toggle title=”2006: ನೊಬೆಲ್ ಪುರಸ್ಕೃತ ಭೌತವಿಜ್ಞಾನಿ ಓವೆನ್ ಚೇಂಬರ್ಲೈನ್ ನಿಧನ ” open=”no”]ಅಮೆರಿಕದ ಭೌತವಿಜ್ಞಾನಿ ಓವೆನ್ ಚೇಂಬರ್ಲೈನ್ ಕ್ಯಾಲಿಫೋರ್ನಿಯಾದ ಬರ್ಕ್ಲೆ ಎಂಬಲ್ಲಿ ನಿಧನರಾದರು. ‘ಆಂಟಿಪ್ರೊಟಾನ್’ ಕುರಿತಾದ ಸಂಶೋಧನೆಗೆ ಇವರಿಗೆ 1959 ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತ್ತು.[/fusion_toggle][fusion_toggle title=”2006: ನೊಬೆಲ್ ಪುರಸ್ಕೃತ ವಿಜ್ಞಾನಿ ಡೊನಾಲ್ಡ್ ಎ. ಗ್ಲೇಸರ್ ನಿಧನ ” open=”no”]ಅಮೆರಿಕದ ಭೌತವಿಜ್ಞಾನಿ ಮತ್ತು ಜೀವವಿಜ್ಞಾನಿ ಡೊನಾಲ್ಡ್ ಎ. ಗ್ಲೇಸರ್ ಅವರು ಒಹಿಯೋದ ಕ್ಲೀವ್ಲ್ಯಾಂಡ್ ಎಂಬಲ್ಲಿ ನಿಧನರಾದರು. ‘ಬಬ್ಬಲ್ ಚೇಂಬರ್’ ಕುರಿತಾದ ಸಂಶೋಧನೆಗೆ ಇವರಿಗೆ 1960 ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತ್ತು.[/fusion_toggle][/fusion_accordion]