Loading Events

« All Events

ಫ.ಗು. ಹಳಕಟ್ಟಿ

July 2

೨-೭-೧೮೮೦ ೨೯-೬-೧೯೬೪ ಸಂಶೋಧಕ, ಸಾಹಿತ್ಯ ಪ್ರಚಾರಕ, ಸಂಪಾದಕ ಹಳಕಟ್ಟಿಯವರು ಹುಟ್ಟಿದ್ದು ಧಾರವಾಡದಲ್ಲಿ. ತಂದೆ ಗುರುಬಸಪ್ಪ, ತಾಯಿ ದಾನಮ್ಮ. ಬಾಸೆಲ್ ಮಿಷನ್ ಸ್ಕೂಲ್, ಆಂಗ್ಲೋವರ್ನಾಕ್ಯುಲರ್ ಸ್ಕೂಲ್ ಪ್ರಾಥಮಿಕ ವಿದ್ಯಾಭ್ಯಾಸ. ಮುಂಬಯಿಯ ಸೇಂಟ್ ಝೇವಿಯರ್ ಕಾಲೇಜಿನಿಂದ ಬಿ.ಎ. ಮತ್ತು ಎಲ್.ಎಲ್.ಬಿ. ಪದವಿ. ಪದವಿ ಗಳಿಸಿದ ನಂತರ ವಿಜಾಪುರದಲ್ಲಿ ವಕೀಲಿವೃತ್ತಿ ಪ್ರಾರಂಭ. ಹಲವಾರು ಶಿಕ್ಷಣ ಸಂಸ್ಥೆ, ಸಾಮಾಜಿಕ ಸೇವೆ, ಸಾಹಿತ್ಯ ಸೇವೆಗಾಗಿ ಮುಡುಪಾಗಿಟ್ಟು ದುಡಿದರು. ಬಿಜಾಪುರದ ವೀರಶೈವ ಶಿಕ್ಷಣ ಫಂಡ್, ಸಿದ್ಧೇಶ್ವರ ಧರ್ಮರಾಯ ಫಂಡ್, ಜಿಲ್ಲಾ ವೀರಶೈವ ವಿದ್ಯಾವರ್ಧಕ ಸಂಘ, ಸಿದ್ಧೇಶ್ವರ ಮಾಧ್ಯಮಿಕ ಶಾಲೆ, ಸಿದ್ಧೇಶ್ವರ ಬ್ಯಾಂಕ್ ಮುಂತಾದುವುಗಳ ಸ್ಥಾಪನೆಗ ಕಾರಣರು. ಬಿಜಾಪುರ ನಗರದ ಸ್ಕೂಲ್ ಬೋರ್ಡಿನ ಅಧ್ಯಕ್ಷರಾಗಿ, ಮುಂಬಯಿ ಸರಕಾರದ ಪ್ರಾಥಮಿಕ ಶಿಕ್ಷಣ ಸಮಿತಿ, ಕನ್ನಡ ಪಠ್ಯಪುಸ್ತಕ ಸಮಿತಿ, ಮುಂಬಯಿ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ, ಮುಂಬಯಿ ರಾಜ್ಯದ ಸಭಾಸದಸ್ಯರಾಗಿ, ಧಾರವಾಡದ ಕನ್ನಡ ಸಂಶೋಧನಾ ಸಂಸ್ಥೆ, ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆ ಮುಂತಾದುವುಗಳಲ್ಲಿ ಪ್ರಮುಖ ಪಾತ್ರ. ತಾಳೆಗರಿ, ಪ್ರಾಚೀನ ಗ್ರಂಥಗಳ ಸಂಗ್ರಹ, ಸಂಪಾದನೆ. ೧೯೨೦ರ ಸುಮಾರಿಗೆ ಸಾವಿರಾರು ಗ್ರಂಥಗಳ ಸಂಪಾದನೆ. ವಚನಗಳ ಸಂಗ್ರಹ, ಪ್ರತಿಮಾಡುವ, ಸಂಕಲನ, ಸಂಪಾದನೆ, ವ್ಯಾಖ್ಯಾನ ಮುಂತಾದ ಕಾರ‍್ಯಗಳಲ್ಲಿ ಏಕವ್ಯಕ್ತಿಯ ಸಾಧನೆ. ಸರಕಾರ, ಯು.ಜಿ.ಸಿ. ಸಾರ್ವಜನಿಕ ಸಂಸ್ಥೆಗಳ ನೆರವಿಲ್ಲದೆ ಹಲವಾರು ವಚನಕಾರರನ್ನು ಬೆಳಕಿಗೆ ತರುವಲ್ಲಿ ಮಾಡಿದ ಮಹತ್ಕಾರ‍್ಯ. ಕ್ರಿಶ್ಚಿಯನ್ ಮಿಷಿನರಿಯವರು ಇವರ ಗ್ರಂಥವನ್ನು ಮುದ್ರಿಸಲು ನಿರಾಕರಿಸಿದಾಗ ಮನೆಯನ್ನೇ ಮಾರಿ ಮುದ್ರಣಾಲಯವನ್ನು ೧೯೨೬ರಲ್ಲಿ ಸ್ಥಾಪಿಸಿ, ‘ಹಿತಚಿಂತಕ ಮುದ್ರಣಾಲಯ’ ಎಂದು ಕರೆದು ಮುದ್ರಣಕಾರ‍್ಯ ಆರಂಭ. ಶಿವಾನುಭವ ಪತ್ರಿಕೆ ಆರಂಭ. ಪತ್ರಿಕೆ ವಿದ್ವತ್ ವಲಯದಲ್ಲಿ ಗಳಿಸಿದ ಶ್ರೇಷ್ಠ ಸ್ಥಾನ. ಮೂಲಗ್ರಂಥ, ಟೀಕಾಗ್ರಂಥ, ಸ್ವತಂತ್ರಗ್ರಂಥ, ಪಠ್ಯಪುಸ್ತಕ, ಗದ್ಯಗ್ರಂಥ, ಐತಿಹಾಸಿಕ ಗ್ರಂಥ, ಪದ್ಯಗ್ರಂಥ, ಧಾರ್ಮಿಕ ಪುರುಷರ ಚರಿತ್ರೆ-ಹೀಗೆ ಸುಮಾರು ೧೬೫ ಗ್ರಂಥಗಳ ಪ್ರಕಟಣೆ ಮಾಡಿ ಗಳಿಸಿದ ಕೀರ್ತಿ. ಷಟ್‌ಸ್ಥಳ ಸಿದ್ಧಾಂತ ಸೂತ್ರ, ಶಿವಾನುಭವ ಶಬ್ದಕೋಶಗಳಂತಹ ಉದ್ಗ್ರಂಥಗಳ ಪ್ರಕಟಣೆ. ೧೯೨೬ರಲ್ಲಿ ಬಳ್ಳಾರಿಯಲ್ಲಿ ನಡೆದ ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ೧೯೨೮ರ ಜೂನ್‌ನಲ್ಲಿ ನಡೆದ ಕರ್ನಾಟಕ ಏಕೀಕರಣ ಪರಿಷತ್ತಿನ ೩ನೇ ಅಧ್ಯಕ್ಷ ಪದವಿ ಗೌರವ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಬ್ರಿಟಿಷ್ ಸರಕಾರದಿಂದ ರಾವ್ ಬಹದ್ದೂರ್ ಮತ್ತು ರಾವ್ ಸಾಹೇಬ ಪ್ರಶಸ್ತಿ, ವಚನ ಶಾಸ್ತ್ರ ಪ್ರವೀಣ, ವಚನ ಶಾಸ್ತ್ರ ಪಿತಾಮಹ ಮುಂತಾದ ಗೌರವಗಳಿಗೆ ಪಾತ್ರರಾದ ಇವರಿಗೆ ೧೯೮೨ರಲ್ಲಿ ಅರ್ಪಿಸಿದ ಗ್ರಂಥ ‘ಮಣಿಹ.’   ಇದೇ ದಿನ ಹುಟ್ಟಿದ ಸಾಹಿತಿಗಳು : ಭಾರತೀರಮಣಾಚಾರ‍್ಯ – ೧೯೨೧ ಶಾರದಾ ಜಡೆ – ೧೯೨೩ ಎನ್.ಆರ್. ಗೀತಾ – ೧೯೫೭ ವಸಂತಕುಮಾರ ಪೆರ್ಲ – ೧೯೫೮ ಈರಣ್ಣ ಇಟಗಿ – ೧೯೫೦ ಎಸ್. ದೇವೇಂದ್ರ ಪೆಜತ್ತಾಯ – ೧೯೩೧

Details

Date:
July 2
Event Category: