Loading Events

« All Events

ಎಸ್‌. ಚಂದ್ರಶೇಖರ್

July 3

೦೩.೦೭.೧೯೩೭ ೦೧.೧೦.೧೯೯೮ ಪ್ರಖ್ಯಾತ ಪಿಟೀಲು ವಾದಕರಾಗಿದ್ದ ಚಂದ್ರಶೇಖರ್ ರವರು ಹುಟ್ಟಿದ್ದು ಬೆಂಗಳೂರು. ತಂದೆ ಸುಬ್ಬಾಭಟ್ಟರು, ತಾಯಿ ಶೇಷಮ್ಮ. ಓದಿದ್ದು ಎಸ್‌.ಎಸ್‌.ಎಲ್‌.ಸಿ. ವರೆಗೆ ಆದರೂ ಸಂಗೀತದಲ್ಲಿ ಹುಟ್ಟಿದ ಆಸಕ್ತಿಯಿಂದ ಕಲಿತದ್ದು ಪಿಟೀಲುವಾದನ. ಅಯ್ಯನಾರ್ ಕಲಾ ಶಾಲೆಯಲ್ಲಿ ಆನೂರು ರಾಮಕೃಷ್ಣರವರಲ್ಲಿ ಕಲಿತ ಪಿಟೀಲುವಾದನ. ಸೀನಿಯರ್ ಗ್ರೇಡ್‌ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್‌ಗಳಿಸಿ ವಿದ್ವತ್‌ಪರೀಕ್ಷೆಯಲ್ಲಿ ಪಡೆದ ಉನ್ನತ ಶ್ರೇಣಿ. ಹಲಸೂರಿನಲ್ಲಿ ನಡೆದ ತ್ಯಾಗರಾಜ ಸಂಗೀತೋತ್ಸವದಲ್ಲಿ ನಡೆಸಿಕೊಟ್ಟ ಪ್ರಥಮ ಕಚೇರಿ. ಮದರಾಸು ಮ್ಯೂಸಿಕ್‌ಅಕಾಡಮಿ, ಕರ್ನಾಟಕ ಗಾನ ಕಲಾ ಪರಿಷತ್‌, ಬೆಂಗಳೂರಿನ ಗಾಯನ ಸಮಾಜ ಮತ್ತು ಭದ್ರಾವತಿ, ಧರ್ಮಸ್ಥಳ ಮುಂತಾದೆಡೆ ನೀಡಿದ ಪಿಟೀಲು ವಾದನದ ಸೋಲೋ ಕಾರ್ಯಕ್ರಮ ಮತ್ತು ಸಂಗೀತ ವಿದ್ವಾಂಸರಿಗೆ ನೀಡಿದ ಪಿಟೀಲಿನ ಸಹಕಾರ. ಆಕಾಶವಾಣಿಯ ದಕ್ಷಿಣವಲಯ ಸಂಗೀತಕಚೇರಿ, ದೂರದರ್ಶನ ದಲ್ಲೂ ಹಲವಾರು ಬಾರಿ ನಡೆಸಿಕೊಟ್ಟ ಕಾರ್ಯಕ್ರಮಗಳು. ರಮಣಾಂಜಲಿ ತಂಡದೊಡನೆ ಎಂಟು ಬಾರಿ ಕೈಗೊಂಡ ವಿದೇಶ ಪ್ರವಾಸ. ಯೂರೋಪಿನ ಬಹುತೇಕ ಪ್ರಮುಖ ನಗರಗಳು, ಅಮೆರಿಕಾ, ಇಂಗ್ಲೆಂಡ್‌ ಮುಂತಾದೆಡೆ ನೀಡಿದ ಪಿಟೀಲಿನ ಪ್ರಾತ್ಯಕ್ಷಿಕೆ ಹಾಗೂ ಸಂಗೀತ ಕಾರ್ಯಕ್ರಮಗಳು. ಅಯ್ಯನಾರ್ ಪ್ರೌಢ ಸಂಗೀತ ಕಲಾ ಶಾಲೆಯಿಂದ ಗೌರವ ಪ್ರಶಸ್ತಿ, ಮೈಸೂರು ದಸರಾ ಮಹೋತ್ಸವದಲ್ಲಿ ಪ್ರಶಸ್ತಿ, ಗಾಯನ ಸಮಾಜದಿಂದ ವರ್ಷದ ಕಲಾವಿದ ಪ್ರಶಸ್ತಿ ಸೇರಿ ಹಲವಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿ, ಗೌರವ ಪುರಸ್ಕೃತರು.   ಇದೇ ದಿನ ಹುಟ್ಟಿದ ಕಲಾವಿದರು: ಶಿಶುನಾಳ ಶರೀಫ್‌- ೧೮೧೯ ರಮೇಶ್‌. ವಿ.ಎಸ್‌ – ೧೯೫೪.

* * *

Details

Date:
July 3
Event Category: