Loading Events

« All Events

ಗೊರೂರು ರಾಮಸ್ವಾಮಿ ಅಯ್ಯಂಗಾರ್

July 4

೪-೭-೧೯೦೪ ೨೮-೯-೧೯೯೧ ಹಳ್ಳಿಯ ಬದುಕಿನ ಯಥಾವತ್ ಚಿತ್ರಣದ ಪ್ರಬಂಧಕಾರರೆಂದೇ ಪ್ರಸಿದ್ಧರಾಗಿದ್ದ ರಾಮಸ್ವಾಮಿ ಅಯ್ಯಂಗಾರ‍್ಯರು ಹುಟ್ಟಿದ್ದು ಹಾಸನ ಜಿಲ್ಲೆಯ ಗೊರೂರಿನಲ್ಲಿ. ತಂದೆ ಶ್ರೀನಿವಾಸ ಅಯ್ಯಂಗಾರ್, ತಾಯಿ ಲಕ್ಷ್ಮಮ್ಮ. ಹುಟ್ಟಿದೂರಿನಲ್ಲಿ ಪ್ರಾರಂಭಿಕ, ಹಾಸನದಲ್ಲಿ ಹೈಸ್ಕೂಲು ವಿದ್ಯಾಭ್ಯಾಸ. ಗಾಂವಾದದಿಂದ ಪ್ರೇರಿತರಾಗಿ ನಡೆದದ್ದು ಗುಜರಾತಿನ ಸಬರಮತಿ ಆಶ್ರಮದತ್ತ. ೧೯೩೦ರಲ್ಲಿ ಹಳ್ಳಿಯ ಚಿತ್ರಗಳು, ೧೯೩೨ರಲ್ಲಿ ನಮ್ಮ ಊರಿನ ರಸಿಕರು ಪ್ರಕಟ. ಹಳ್ಳಿಗೆ ಹಿಂದಿರುಗಿ ‘ಮೈಸೂರು ಗ್ರಾಮ ಸೇವಾ ಸಂಘ’ ಸ್ಥಾಪನೆ. ಹರಿಜನೋದ್ಧಾರ ವಯಸ್ಕರ ಶಿಕ್ಷಣ. ಗ್ರಾಮ ಕೈಗಾರಿಕೆಗಳು ಮುಂತಾದ ರಚನಾತ್ಮಕ ಕಾರ‍್ಯಕ್ರಮಗಳಲ್ಲಿ ಭಾಗಿ. ಗೊರೂರರ ಸಾಹಿತ್ಯ ರಚನೆಯ ಹರವು ಬಹು ದೊಡ್ಡದು. ಪ್ರಬಂಧ ಸಂಕಲನಗಳು-ಸಾಹಿತ್ಯ ರಶ್ಮಿ, ಹೇಮಾವತಿ ತೀರದಲ್ಲಿ ಮತ್ತು ಇತರ ಪ್ರಬಂಧಗಳು, ಹಳ್ಳಿ ಚಿತ್ರಗಳು, ಬೆಟ್ಟದ ಮನೆಯಲ್ಲಿ ಮತ್ತು ಇತರ ಪ್ರಬಂಧಗಳು, ಗರುಡಗಂಬದ ದಾಸಯ್ಯ, ಕಥೆಗಳು ಮತ್ತು ವಿನೋದ ಚಿತ್ರಗಳು. ಕಾದಂಬರಿ-ಪುನರ್ಜನ್ಮ, ಭಗವಾನ್ ಕೌಟಿಲ್ಯ, ಮಲೆನಾಡವರು, ಮೆರವಣಿಗೆ, ಕ್ರೌಂಚವಧೆ, ರಾಜನರ್ತಕಿ, ಊರ್ವಶಿ, ಹೇಮಾವತಿ ಮೊದಲಾದುವು. ಅನುವಾದ-ಆತ್ಮಕಥೆ, ಕೊನೆಷ್ಟೈ ಕಥೆಗಳು, ಜಗತ್ತಿನ ಮಹದ್ವ್ಯಕ್ತಿಗಳು, ಮಹಾದೇವ ದೇಸಾಯಿಯವರ ಕೃತಿಗಳು, ಸತ್ಯ ಮತ್ತು ಅಹಿಂಸೆ, ಸಾಹಿತ್ಯ ಜೀವಾಳ. ಸಣ್ಣ ಕಥಾಸಂಕಲನ-ಉಸುಬು, ಕನ್ಯಾಕುಮಾರಿ ಮತ್ತು ಇತರ ಕಥೆಗಳು, ಕಮ್ಮಾರ ವೀರಭದ್ರಾಚಾರಿ, ಗೋಪುರದ ಬಾಗಿಲು, ಬೆಸ್ತರ ಕರಿಯ, ವೈಯ್ಯಾರಿ, ಶಿವರಾತ್ರಿ ಮುಂತಾದುವುಗಳೊಡನೆ ಅಮೆರಿಕಾ ಯಾತ್ರೆಯ ‘ಅಮೆರಿಕಾದಲ್ಲಿ ಗೊರೂರು’ ಸೇರಿ ೬೦ಕ್ಕೂ ಹೆಚ್ಚು ಕೃತಿ ರಚನೆ. ಕೆಲವು ಕಥೆ, ಕಾದಂಬರಿಗಳು ಚಲನಚಿತ್ರಗಳಾಗಿವೆ. ಸಂದ ಗೌರವ ಪ್ರಶಸ್ತಿಗಳು-ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆ, ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದೇವರಾಜ ಬಹದ್ದೂರ್ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಅಭಿಮಾನಿಗಳು ಅರ್ಪಿಸಿದ ಗ್ರಂಥ ‘ಗೊರೂರು ಗೌರವಗ್ರಂಥ’ ಸಂಸ್ಮರಣ ಗ್ರಂಥ ‘ಹೇಮಾವತಿಯ ಚೇತನ.’   ಇದೇ ದಿನ ಹುಟ್ಟಿದ ಸಾಹಿತಿಗಳು : ಸಿದ್ಧವನಹಳ್ಳಿ ಕೃಷ್ಣಶರ್ಮ – ೧೯೦೪-೧೪.೧೦.೭೩ ಗೀತಾ ಕುಲಕರ್ಣಿ – ೧೯೨೭-೨೫.೫.೮೬ ಸರೋಜಿನಿ ಶಿಂತ್ರಿ – ೧೯೩೦ ಎಂ.ಸಿ. ಅಂಟಿನ – ೧೯೩೬ ಸುಶೀಲಾ ದೇವಿ ಆರ್. ರಾವ್ – ೧೯೫೨ ಶ್ರೀನಿವಾಸ ಜೋಕಟ್ಟೆ – ೧೯೬೪

Details

Date:
July 4
Event Category: