Loading Events

« All Events

ಜೋಳದರಾಶಿ ದೊಡ್ಡನಗೌಡರು

July 27

೨೭..೧೯೧೦ ೧೦..೧೯೯೪ ನಾಟಕಕಾರ, ಕವಿ, ಗಮಕಿ ದೊಡ್ಡನಗೌಡರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಜೋಳದರಾಶಿ ಗ್ರಾಮದಲ್ಲಿ. ತಂದೆ ಪಂಪನಗೌಡರು, ತಾಯಿ ರುದ್ರಮ್ಮ. ಹುಟ್ಟಿದೂರಿನಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ. ‘ಜೈಮಿನಿ ಭಾರತ, ಹರಿಶ್ಚಂದ್ರ ಕಾವ್ಯ, ಪ್ರಭುಲಿಂಗಲೀಲೆ ಮುಂತಾದ ಕಾವ್ಯಗಳ ಅಭ್ಯಾಸ. ಬಯಲಾಟದಲ್ಲಿ ವೇಶಕಟ್ಟುವುದು ಅನುವಂಶಿಕವಾಗಿ ಬಂದ ಗುಣ. ಬಾಲ್ಯದಲ್ಲಿಯೇ ನಟರಾಗಿ ನಾಟಕ ಕಂಪನಿ ಕಟ್ಟಿ ಕೈಸುಟ್ಟುಕೊಂಡ ನಂತರ ಬಳ್ಳಾರಿ ರಾಘವರಿಂದ ನಟಿಸಲು ಬಂದ ಆಹ್ವಾನ. ತಂದೆಯವರ ಒಪ್ಪಿಗೆ ಪಡೆದು ಪುನಃ ಸೇರಿದ್ದು ರಂಗಭೂಮಿ. ತೆಲುಗು, ಕನ್ನಡ ನಾಟಕಗಳಲ್ಲಿ ಅಭಿನಯ. ಕನಕದಾಸರ ಪಾತ್ರವನ್ನು ನೋಡಿದ ಜನತೆಯಿಂದ ದೊರೆತ ಅಭೂತಪೂರ್ವ ಸನ್ಮಾನ, ಬಸವೇಶ್ವರ, ಕನಕದಾಸ, ಕಬೀರದಾಸ, ನಾರದ, ಕೃಷ್ಣ ಇತ್ಯಾದಿ ಪಾತ್ರಗಳಲ್ಲಿ ಉಭಯ ಭಾಷೆಗಳ ರಂಗಭೂಮಿಯ ನಟರಾಗಿ ಪ್ರೇಕ್ಷಕರಿಗೆ ನೀಡಿದ ರಂಜನೆ. ಕಂಚಿನ ಕಂಠದ ದೊಡ್ಡನಗೌಡರಿಗೆ ಒಲಿದು ಬಂದ ಹಾಡುಗಾರಿಕೆ. ಕವಿ ಪುಟ್ಟಪ್ಪನವರ ಮನೆಯಲ್ಲಿ ದ.ರಾ. ಬೇಂದ್ರೆ, ಕೋ. ಚನ್ನಬಸಪ್ಪ, ವೀರಭದ್ರಪ್ಪನವರ ಸಮ್ಮುಖದಲ್ಲಿ ರಾಮಾಯಣದರ್ಶನಂನ ಶಬರಿ ಕಥಾ ಪ್ರಸಂಗ ವಾಚಿಸಿ ಪಡೆದ ಮೆಚ್ಚುಗೆ. ಕನ್ನಡ ಮತ್ತು ತೆಲುಗಿನಲ್ಲಿ ಸುಮಾರು ನಲವತ್ತಕ್ಕೂ ಹೆಚ್ಚು ಕೃತಿ ರಚನೆ. ರಸವರ್ಷ, ಯಾತ್ರಿಕ, ನಮ್ಮ ಹಂಪೆ, ಗೌಡತಿ ಬರಲ್ಲಿಲ್ಲ, ರಾಮೇಶನ ವಚನಗಳು ಪ್ರಮುಖ ಕೃತಿಗಳು. ನೋಡ್ರವ್ವ ನಾಟಕ, ಅಭಯ, ಸಾಯದವನ ಸಮಾಧಿ, ಕ್ರಾಂತಿ ಪುರುಷ, ಕನಕದಾಸ ಪ್ರಖ್ಯಾತ ನಾಟಕಗಳು. ನಂದೇ ನಾನೋದಿದೆ ಆತ್ಮಕಥನ. ಗಮಕ ಕಲಾನಿಧಿ ಅರ್ಪಿತ ಸಂಭಾವನ ಗ್ರಂಥ. ಸಂಘಟಕರಾಗಿ, ಬಳ್ಳಾರಿ ಜಿಲ್ಲಾ ಕನ್ನಡ ಕಲಾ ಪರಿಷತ್ತು ಸ್ಥಾಪಿಸಿ ನಡೆಸಿದ ನಾಟಕ ಸಮ್ಮೇಳನಗಳು ಮೂರುಬಾರಿ, ಜೋಳದರಾಶಿ, ಬಳ್ಳಾರಿ ಮತ್ತು ಕಣೇಕಲ್ಲಿನಲ್ಲಿ. ಗರೂಡ ಸದಾಶಿವರಾಯರು, ಆರ್. ನಾಗೇಂದ್ರರಾಯರು, ಅ.ನ.ಕೃ ರವರ ಅಧ್ಯಕ್ಷತೆ. ನಾಟಕ ಕಲೆಯ ಬಗ್ಗೆ ಹಮ್ಮಿಕೊಂಡ ಹಲವಾರು ಕಾರ್ಯಕ್ರಮಗಳು. ಕರ್ನಾಟಕ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ೧೯೮೧ ರಲ್ಲಿ ಬಳ್ಳಾರಿಜಿಲ್ಲಾ ೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕಲಬುರ್ಗಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಮುಂತಾದ ಗೌರವಗಳು.   ಇದೇ ದಿನ ಹುಟ್ಟಿದ ಕಲಾವಿದರು ಶಕುಂತಳಾ ಶ್ರೀನಿವಾಸನ್‌ – ೧೯೨೬ ವೆಂಕಟೇಶ್‌. ಟಿ.ಎಂ – ೧೯೪೯ ಲಕ್ಷ್ಮಣ, ಸಿ – ೧೯೫೬ ಕುಂದಣ ನಾಗೇಂದ್ರ – ೧೯೬೩

* * *

Details

Date:
July 27
Event Category: