Loading Events

« All Events

ದೇಜಗೌ

July 6

೬-೭-೧೯೧೮ ಸದಾ ಕನ್ನಡ ಪರ ಕಾಳಜಿ ತೋರುತ್ತಾ ಬಂದಿರುವ ದೇ.ಜ.ಗೌ.ರವರು ಹುಟ್ಟಿದ್ದು ಚೆನ್ನಪಟ್ಟಣ ತಾಲ್ಲೂಕಿನ ಚಕ್ಕೆರೆ ಗ್ರಾಮದಲ್ಲಿ. ತಂದೆ ದೇವೆಗೌಡ, ತಾಯಿ ಚೆನ್ನಮ್ಮ. ಪ್ರಾರಂಭಿಕ ವಿದ್ಯಾಭ್ಯಾಸ ಚನ್ನಪಟ್ಟಣ. ಕಾಲೇಜು ವಿದ್ಯಾಭ್ಯಾಸ ಬೆಂಗಳೂರು. ಬಿ.ಎ. (ಆನರ್ಸ್) ಪದವಿ. ಕೆಲಕಾಲ ವಿದ್ಯಾ ಇಲಾಖೆಯಲ್ಲಿ ಗುಮಾಸ್ತೆ ಕೆಲಸ. ನಂತರ ಮೈಸೂರಿಗೆ ಹೋಗಿ ಕುವೆಂಪು ಶಿಷ್ಯರಾಗಿ ಎಂ.ಎ. ಪದವಿ. ಮಹಾರಾಜಾ ಕಾಲೇಜು ಅಧ್ಯಾಪಕರಾಗಿ, ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಕಾರಿಯಾಗಿ, ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿ, ಮೈಸೂರು ವಿ.ವಿ.ದಲ್ಲಿ ಕನ್ನಡ ಪ್ರಾಧ್ಯಾಪಕ, ವಿಭಾಗದ ಮುಖ್ಯಸ್ಥ, ಕನ್ನಡ ಅಧ್ಯಯನ ಸಂಸ್ಥೆಯ ಸ್ಥಾಪನೆಗೆ ಕಾರಣರಾಗಿ, ನಿರ್ದೇಶಕರಾಗಿ, ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ-ಹೀಗೆ ವಿವಿಧ ಹುದ್ದೆಗಳಲ್ಲಿ ಸಲ್ಲಿಸಿದ ಸೇವೆ. ಜಾನಪದ, ಭಾಷಾಂತರ, ಭಾಷಾ ವಿಜ್ಞಾನ, ಹರಿದಾಸ ಸಾಹಿತ್ಯ, ಶಾಸನ ಸಂಪಾದನೆ, ವಿಶ್ವ ಕೋಶ ಮೊದಲಾದ ಎಲ್ಲ ಅಧ್ಯಯನ ಕ್ಷೇತ್ರಗಳನ್ನೂ ಒಂದೆಡೆ ತಂದ ಕೀರ್ತಿ. ಕನ್ನಡ ಮಾಧ್ಯಮದ ಪಠ್ಯ-ಸಂದರ್ಭ ಗ್ರಂಥಗಳು ಲಭ್ಯವಾಗುವಂತೆ ಕಾರ‍್ಯ ನಿರ್ವಹಣೆ. ಜಾನಪದ ಸಾಹಿತ್ಯ ಸಂಗ್ರಹಣೆ, ಪ್ರಕಟಣೆ. ಅಧ್ಯಯನ, ಅಧ್ಯಾಪನ, ಸಂಶೋಧನೆಗಳಿಗೆ ನೀಡಿದ ಮಹತ್ವ. ಕನ್ನಡದ ಮಾಧ್ಯಮದ ಪರವಾಗಿ ತೆಗೆದುಕೊಂಡ ದಿಟ್ಟ ನಿಲುವುಗಳು. ಲೋಕಸೇವಾ ಆಯೋಗದಂತಹ ಪರೀಕ್ಷೆಗಳಲ್ಲೂ ಕನ್ನಡಕ್ಕೆ ಸೂಕ್ತ ಸ್ಥಾನಮಾನ ದೊರಕಿಸಿಕೊಡಲು ನಡೆಸಿದ ಹೋರಾಟ. ವಿಶ್ವವಿದ್ಯಾಲಯದ ಗೆಜೆಟ್ಟಿನ ಕನ್ನಡ ಆವೃತ್ತಿ, ಆಡಳಿತದಲ್ಲಿ ಕನ್ನಡದ ವ್ಯಾಪಕ ಬಳಕೆಗೆ ತೋರಿದ ಪರಿಶ್ರಮ. ‘ವಿಶ್ವಕೋಶ’ದಂತಹ ಯೋಜನೆಯ ಕಾರ‍್ಯಗತ. ಶ್ರೀ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ . ಕುವೆಂಪು ವಿದ್ಯಾಪರಿಷತ್ತಿನ ಆಶ್ರಯದಲ್ಲಿ ಶಾಲಾ ಕಾಲೇಜು ಸ್ಥಾಪನೆ. ನಿವೃತ್ತಿಯ ನಂತರವೂ ಕನ್ನಡಕ್ಕೆ ಹೋರಾಟ. ನೂರಾರು ಪುಸ್ತಕಗಳು ಪ್ರಕಟ. ಅನುವಾದ-ನೆನಪು ಕಹಿಯಲ್ಲ, ಪುನರುತ್ಥಾನ, ಯುದ್ಧ ಮತ್ತು ಶಾಂತಿ, ಅನ್ನಕರೆನಿನಾ, ಹಮ್ಮು-ಬಿಮ್ಮು, ಅಕ್ಬರ್. ಸಂಪಾದಿತ-ಸ್ಥಳನಾಮ ವ್ಯಾಸಂಗ, ಪುಣ್ಯಶ್ರವ, ಲೀಲಾವತಿ ಪ್ರಬಂಧಂ, ನಳಚರಿತ್ರೆ. ಜಾನಪದ-ಜಾನಪದವಾಹಿನಿ, ಜನಪದ ಗೀತಾಂಜಲಿ, ಜಾನಪದ ಅಧ್ಯಯನ, ಜಾನಪದ ಸೌಂದರ‍್ಯ, ಕುವೆಂಪುರವರ ಶ್ರೀರಾಮಾಯಣ ದರ್ಶನಂನ ವಚನರೂಪ ಶ್ರೀರಾಮಾಯಣ ವಚನ ಚಂದ್ರಿಕೆ. ಜೀವನಚರಿತ್ರೆ-ತೀನಂಶ್ರೀ, ಕೆ.ವಿ. ಶಂಕರಗೌಡ, ನಿಜಲಿಂಗಪ್ಪ, ಕುವೆಂಪು. ಪ್ರವಾಸಸಾಹಿತ್ಯ-ವಿಸ್ಮಯಗಳ ನಾಡಿನಲ್ಲಿ, ವಿದೇಶದಲ್ಲಿ ನಾಲ್ಕುವಾರ, ಆಫ್ರಿಕಾಯಾತ್ರೆ, ಯೇಸು ವಿಭೀಷಣರ ನಾಡಿನಲ್ಲಿ ಮುಂತಾದುವು. ಆತ್ಮಕಥೆ-ಹೋರಾಟದ ಬದುಕು. ಸಂದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ-ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಪಂಪ ಪ್ರಶಸ್ತಿ, ಕರ್ನಾಟಕ ಅನುವಾದ ಅಕಾಡಮಿ ಪ್ರಶಸ್ತಿ. ಕರ್ನಾಟಕ ವಿ.ವಿ. ಮತ್ತು ಕುವೆಂಪು ವಿ.ವಿ.ದ ಗೌರವ ಡಾಕ್ಟರೇಟ್. ಗೌರವ ಗ್ರಂಥಗಳು-ಅಂತಃಕರಣ, ರಸಷಷ್ಠಿ, ಅಮೃತವರ್ಷ, ದೇಜಗೌ ವ್ಯಕ್ತಿ ಮತ್ತು ಸಾಹಿತ್ಯ, ಎಪ್ಪತ್ತರ ಹೊಸ್ತಿಲಲ್ಲಿ, ನಮ್ಮ ನಾಡೋಜ.   ಇದೇ ದಿನ ಹುಟ್ಟಿದ ಸಾಹಿತಿಗಳು : ಪದ್ಮಾಮೂರ್ತಿ – ೧೯೩೨ ಎಂ.ಬಿ. ಸಾಮಗ – ೧೯೫೪

Details

Date:
July 6
Event Category: