Categories
ಶರಣರು / Sharanaru

ಎಲೆಗಾರ ಕಾಮಣ್ಣ

ಅಂಕಿತ: ಆತುರೇಶ್ವರಲಿಂಗ
ಕಾಯಕ: ಎಲೆ ಮಾರುವ ಕಾಯಕ

ಎಲೆ ಮಿಗಲು ಆರು ತಿಂಗಳಿರುವುದು.
ವ್ರತ ಹೋಗಲು ಆ ಕ್ಷಣ, ಭ್ರಷ್ಟನೆಂದು ಕೂಡರು.
ಎಲೆ ಹಳದಾದಡೆ ಶಿವಂಗರ್ಪಿತ.
ವ್ರತನಷ್ಟವಾಗಲಾಕ್ಷಣ ಮರಣವಯ್ಯಾ
ಆತುರೇಶ್ವರಲಿಂಗವೆ.

ಎಲೆ ಮಾರುವ ಕಾಯಕ ಕೈಕೊ೦ಡ ಈತನ ಕಾಲ=೧೪೦೦. ‘ಆತುರೇಶ್ವರಲಿಂಗ’ ಎಂಬ ಆಂಕಿತದಲ್ಲಿ “ಒಂದು ವಚನ ಮಾತ್ರ ದೊರೆತಿದೆ. ವೃತ್ತಿಪರಿಭಾಷೆಯನ್ನು ಬಳಸಿಕೊಂಡ ಇದರಲ್ಲಿ ವ್ರತನಿಷ್ಠೆಯನ್ನು ಎತ್ತಿ ಹೇಳಲಾಗಿದೆ. ವ್ರತದ ಬಗೆಗೆ ತುಂಬು ನಿಷ್ಠೆ ಇವನದು. ವ್ರತನಷ್ಟವಾಗಲು ಅ ಕ್ಷಣವೆ ಪ್ರಾಣಬಿಡುವುದೆನ್ನುವನು.