Categories
ಶರಣರು / Sharanaru

ಕನ್ನದ ಮಾರಿತಂದೆ

ಅಂಕಿತ: ಮಾರನವೈರಿ ಮಾರೇಶ್ವರಾ
ಕಾಯಕ: ಶರಣನಾಗುವುದಕ್ಕಿಂತ ಮುಂಚೆ ಕನ್ನ ಹಾಕುವುದು

ಮೂಲತಃ ಚೋರವೃತ್ತಿಯವನಾದ ಈತ ಅನಂತರ ಶರಣನಾಗಿ ಪರಿವರ್ತನೆ ಹೊಂದಿ, ಸಾತ್ವಿಕ ಬದುಕು ನಡೆಸುತ್ತಾನೆ. ಕಾಲ=೧೧೬೦. ನಾಲ್ಕು ವಚನ ದೊರೆತಿದ್ದು. ‘ಮಾರನ ವೈರಿ ಮಾರೇಶ್ವರಾ’ ಎಂಬ ಅಂಕಿತವನ್ನು ಹೊಂದಿವೆ. ಎಲ್ಲವೂ ಈತನ ಕನ್ನ ಹಾಕುವ ವೃತ್ತಿಪರಿಭಾಷೆಯನ್ನು ಬಳಸಿಕೊಂಡು, ಆಧ್ಯಾತ್ಮವನ್ನು ಹೇಳುತ್ತವೆ.