Categories
ಶರಣರು / Sharanaru

ಕಿನ್ನರಿ ಬೃಹ್ಮಯ್ಯ

ಅಂಕಿತ: ತ್ರಿಪುರಾಂತಕ ಲಿಂಗ
ಕಾಯಕ: ಮೊದಲಿಗೆ ಅಕ್ಕಸಾಲಿಯಾಗಿದ್ದನು. ಕಲ್ಯಾಣಕ್ಕೆ ಬಂದ ಮೇಲೆ ತ್ರಿಪುರಾಂತಕೇಶ್ವರನ ಮುಂದೆ ಕಿನ್ನರಿ ನುಡಿಸುವ ಕಾಯಕ

ಆಂಧ್ರಪ್ರದೇಶದ ಪೂದೂರ (ಊಡೂರು) ಗ್ರಾಮಕ್ಕೆ ಸೇರಿದ ಈತ ಅಲ್ಲಿ ಅಕ್ಕಸಾಲಿಗನಾಗಿದ್ದು, ಅನಂತರ ಕಲ್ಯಾಣಕ್ಕೆ ಬಂದು ತ್ರಿಪುರಾಂತಕೇಶ್ವರನ ಮುಂದೆ ಕಿನ್ನರಿ ನುಡಿಸುವ ಕಾಯಕವನ್ನು “ಕೈಕೊಳ್ಳುತ್ತಾನೆ. ಕಲ್ಯಾಣಕ್ಕೆ ಬಂದ ಅಕ್ಕಮಹಾದೇವಿಯ ವೈರಾಗ್ಯವನ್ನು ಒರೆಗೆ ಹಚ್ಚಿ ನೋಡುತ್ತಾನೆ. ಕಲ್ಯಾಣದ ಕ್ರಾಂತಿಯ ಸಂದರ್ಭದಲ್ಲಿ ಚೆನ್ನಬಸವಣ್ಣನ ಜೊತೆಗಿದ್ದು, ದ೦ಡಿನ ಮುಂದಾಳತ್ವ ವಹಿಸಿದ ಈತ, ಉಳವಿಯಲ್ಲಿ ಲಿಂಗೈಕ್ಯನಾಗುತ್ತಾನೆ.

‘ಮಹಾಲಿಂಗ ತ್ರಿಪುರಾಂತಕ’ ಅಂಕಿತದಲ್ಲಿ ವಚನಗಳನ್ನು ರಚಿಸಿದ್ದು, ಸದ್ಯ ೧೮ ದೊರೆತಿವೆ. ಅವುಗಳಲ್ಲಿ ಮಹಾದೇವಿಯಕ್ಕನ ಜೊತೆಗೆ ನಡೆಸಿದ ಸಂವಾದ, ಶಿವನ ಮಹಿಮೆ, ಬಸವಾದಿ ಶರಣರ ವರ್ಣನೆ ಕಂಡುಬರುತ್ತದೆ. ಮಹಾದೇವಿಯಕ್ಕನ ವೈರಾಗ್ಯವನ್ನು ಒರೆಹಚ್ಚಿ ನೋಡಿದವನು. ಪ್ರಣವಮಂತ್ರವನ್ನು ಬಸವಣ್ಣನಿಗೆ ಅನ್ವಯಿಸಿರುವನು.