Categories
ಶರಣರು / Sharanaru

ಕೊಂಡೆ ಮಂಚಣ್ಣನಗಳ ಪುಣ್ಯಸ್ತ್ರೀ ಲಕ್ಷ್ಮಮ್ಮ

ಅಂಕಿತ: ಅಗಜೇಶ್ವರಲಿಂಗ

೭೫೧
ಆಯುಷ್ಯತೀರಲು ಮರಣ
ವ್ರತ ತಪ್ಪಲು ಶರೀರ ಕಡೆ.
ಮೇಲುವ್ರತವೆಂಬ ತೂತರ ಮೆಚ್ಚ
ನಮ್ಮ ಅಗಜೇಶ್ವರಲಿಂಗವು.

ಕಲ್ಯಾಣದ ಬಿಜ್ಜಳನ ಮಂತ್ರಿಯಾಗಿದ್ದ ಕೊಂಡೆ ಮಂಚಣ್ಣನ ಸತಿ. ಕಾಲ-೧೧೬೦. ‘ಅಗಜೇಶ್ವರಲಿಂಗ’ ಅಂಕಿತದಲ್ಲಿ ಒಂದು ವಚನವನ್ನು ಮಾತ್ರ ಬರೆದಿದ್ದಾಳೆ. ವ್ರತಹೀನ ಡಾಂಭಿಕರ ತೀಕ್ಷ್ಣವಾದ ನಿಂದೆ ಇಲ್ಲಿದೆ.