Categories
ಶರಣರು / Sharanaru

ಗೊಗ್ಗವ್ವೆ

ಅಂಕಿತ: ನಾಸ್ತಿನಾಥ
ಕಾಯಕ: ಭಕ್ತರಿಗೆ ಧೂಪ (ಗಂಧದ ಕಡ್ಡಿ) ಅರ್ಪಿಸುವುದು

ಕೇರಳದ ಅವಲೂರು ಈಕೆಯ ಸ್ಥಳ. ಕಾಲ ೧೧೬೦. ಧೂಪದ ಕಾಯಕದವಳಾದುದರಿಂದ ‘ಧೂಪದ ಗೊಗ್ಗವ್ವೆ’ ಎಂದೂ ಪ್ರಸಿದ್ಧಳಾಗಿದ್ದಾಳೆ. ಶಿವ ಮೋಹಿತಳಾದ ಈಕೆ ಲೌಕಿಕ ಮದುವೆಯನ್ನು ನಿರಾಕರಿಸಿ ವಿರಾಗಿಣಿಯಾಗಿ ಕಲ್ಯಾಣಕ್ಕೆ ಬರುತ್ತಾಳೆ. ‘ನಾಸ್ತಿನಾಥಾ’ ಅಂಕಿತದಲ್ಲಿ ೬ ವಚನಗಳನ್ನು ರಚಿಸಿದ್ದಾಳೆ. ಅವುಗಳಲ್ಲಿ ಲಿಂಗಾಂಗ ಸಾಮರಸ್ಯ, ಸ್ತ್ರೀ ಪುರುಷ ಸಮಾನತೆಯ ಚಿಂತನೆಗೆ ಅದ್ಯತೆ ನೀಡಲಾಗಿದೆ. ಸರಳ ಭಾಷೆ, ವೃತ್ತಿಪರಿಭಾಷೆಯ ಬಳಕೆಯಿಂದ ವಚನಗಳು ವಿಶೇಷವಾಗಿ ಗಮನ ಸೆಳೆಯುತ್ತವೆ.