Categories
ಶರಣರು / Sharanaru

ನಿರ್ಧನಪ್ರಿಯ ರಾಮೇಶ್ವರ ??

ಸು. 1650ರಲ್ಲಿ ಇದ್ದಿರಬಹುದಾದ ಈ ಅಂಕಿತದ ವಚನದ ಕರ್ತೃವಿನ ಹೆಸರು ದೊರೆತಿಲ್ಲ. ಉಪಲಬ್ಧವಾದ ಒಂದೇ ವಚನ ತೀವ್ರವೈರಾಗ್ಯವನ್ನು ನಿರೂಪಿಸುತ್ತಿದ್ದು, ಮಹಾದೇವಿಯಕ್ಕನ ವಚನವನ್ನು ನೆನಪಿಸುತ್ತದೆ.

ನಡಸು ದೇವಾ ಭಿಕ್ಷಾಯೆಂಬ ಶಬ್ದಕ್ಕೆ.
ಅಲ್ಲಿ ಹೋಗಿ ಭಿಕ್ಷಾ ಭಿಕ್ಷಾಯೆಂದಡೆ
ಆರೂ ನೀಡದಂತೆ ಮಾಡು.
ತಥಾಪಿಸಿ ನೀಡಿದಡೆ,
ಆ ನೀಡುವ ಹಂಚು ಎಡಹಿ ಒಡೆವಂತೆ ಮಾಡು,
ನಿರ್ಧನಪ್ರಿಯ ರಾಮೇಶ್ವರಾ. /೧೩೪೧

-??: ಈ ಪ್ರಶ್ನೆ ಚಿಹ್ನೆಯು ವಚನಕಾರನ ಹೆಸರು ಅಜ್ಞಾತವೆಂಬುದನ್ನು ಸೂಚಿಸುತ್ತದೆ.