Categories
ಶರಣರು / Sharanaru

ಮಧುವಯ್ಯ

ಅಂಕಿತ: ಅರ್ಕೇಶ್ವರಲಿಂಗ

ಮೂಲತ: ಬ್ರಾಹ್ಮಣನಾದ ಈ ಶರಣ ತನ್ನ ಮಗಳನ್ನು ಅಂತ್ಯಜನಾದ ಹರಳಯ್ಯನ ಮಗನಿಗೆ ಕೊಟ್ಟು ಮದುವೆ ಮಾಡಿದ. ಆ ಕಾರಣದಿಂದ ಮರಣ ದಂಡನೆಗೆ ಗುರಿಯಾದ. ಕಾಲ-೧೧೬೦. ಅಂಕಿತ-ಅರ್ಕೇಶ್ವರಲಿಂಗ. ೧೦೨ ವಚನಗಳು ದೊರೆತಿದ್ದು, ಹಚ್ಚಾಗಿ ಬೆಡಗಿನ ಪರಿಭಾಷೆಯಲ್ಲಿವೆ. ಲಿಂಗಾನುಸಂಧಾನ, ಶಿವಾನುಭವ ಸಾಧನೆ, ಧರ್ಮ ಬಾಹಿರರ ನಿಂದೆ, ಕುಲಜಾತಿಗಳ ಚರ್ಚೆ, ವೈಯುಕ್ತಿಕ ಬದುಕಿನ ಹೊಳಹುಗಳು ಅವುಗಳಲ್ಲಿ ಎಡೆಪಡೆದಿವೆ.

ಬೆಡಗಿನ ವಚನಗಳು ವಿಶೇಷವಾಗಿವೆ. ಗುರುಕೃಪೆ ಲಿಂಗಾನುಸಂಧಾನ ಶಿವಾನುಭವ ಸಾಧನೆ ಇಂತಹ ಸಾತ್ತ್ವಿಕ ಧರ್ಮ ವಿಚಾರಗಳನ್ನು ಇವನ ವಚನಗಳು ವಿವರಿಸುತ್ತವೆ. ಅಂತ್ಯಜ ಹರಳಯ್ಯನ ಮಗನಿಗೆ ಬ್ರಾಹ್ಮಣನಾದ ಮಧುವಯ್ಯ ತನ್ನ ಮಗಳನ್ನು ಕೊಡುವ ಮೂಲಕ ಒಂದು ಕ್ರಾಂತಿಯನ್ನೇ ಮಾಡಿ ಮಧುವಯ್ಯ ಮರಣದಂಡನೆಗೆ ಒಳಗಾದ.