Categories
ಶರಣರು / Sharanaru

ಸತ್ತಿಗೆ ಕಾಯಕದ ಮಾರಯ್ಯ

ಅಂಕಿತ: ಐಘಂಟೇಶ್ವರಲಿಂಗ
ಕಾಯಕ: ಸತ್ತಿಗೆ ಕಾಯಕ (ಬಸವಣ್ಣನವರಿಗೆ ಛತ್ರಿ ಹಿಡಿಯುವ ಕಾಯಕ), ಮರ ಕಡಿಯುವ, ಪಂಜು ಹಿಡಿಯುವ ಕಾರ್ಯ

ಕೊಡೆ (ಸತ್ತಿಗೆ) ಹಿಡಿಯುವ ಕಾಯಕದ ಈತ, ಅದರ ಜೊತೆಗೆ ಮರ ಕಡಿಯುವ, ಪಂಜು ಹಿಡಿಯುವ ಕೆಲಸವನ್ನೂ ಮಾಡುತ್ತಿದ್ದನೆಂದು ತಿಳಿದುಬರುತ್ತದೆ. ಅವನ ವಚನಗಳಲ್ಲಿ ಆಧಾರ ಸಿಕ್ಕುತ್ತವೆ. ಈತನ ಕಾಲ-೧೧೬೦, ‘ಐಘಟೇಶ್ವರ’ ಅಂಕಿತದಲ್ಲಿ ಹತ್ತು ವಚನಗಳು ದೊರೆತಿವೆ. ಅವುಗಳಲ್ಲಿ ಈತನ ಕಾಯಕ ನಿಷ್ಠೆ, ಕಾಯಕ ತಪ್ಪುವವರ ಟೀಕೆ ಪ್ರಮುಖವಾಗಿವೆ.