ಅಂಕಿತ: | ಐಘಂಟೇಶ್ವರಲಿಂಗ |
ಕಾಯಕ: | ಸತ್ತಿಗೆ ಕಾಯಕ (ಬಸವಣ್ಣನವರಿಗೆ ಛತ್ರಿ ಹಿಡಿಯುವ ಕಾಯಕ), ಮರ ಕಡಿಯುವ, ಪಂಜು ಹಿಡಿಯುವ ಕಾರ್ಯ |
ಕೊಡೆ (ಸತ್ತಿಗೆ) ಹಿಡಿಯುವ ಕಾಯಕದ ಈತ, ಅದರ ಜೊತೆಗೆ ಮರ ಕಡಿಯುವ, ಪಂಜು ಹಿಡಿಯುವ ಕೆಲಸವನ್ನೂ ಮಾಡುತ್ತಿದ್ದನೆಂದು ತಿಳಿದುಬರುತ್ತದೆ. ಅವನ ವಚನಗಳಲ್ಲಿ ಆಧಾರ ಸಿಕ್ಕುತ್ತವೆ. ಈತನ ಕಾಲ-೧೧೬೦, ‘ಐಘಟೇಶ್ವರ’ ಅಂಕಿತದಲ್ಲಿ ಹತ್ತು ವಚನಗಳು ದೊರೆತಿವೆ. ಅವುಗಳಲ್ಲಿ ಈತನ ಕಾಯಕ ನಿಷ್ಠೆ, ಕಾಯಕ ತಪ್ಪುವವರ ಟೀಕೆ ಪ್ರಮುಖವಾಗಿವೆ.