Categories
ಶರಣರು / Sharanaru

ಸತ್ಯಕ್ಕ

ಅಂಕಿತ: ಶಂಭು ಜಕ್ಕೇಶ್ವರಾ
ಕಾಯಕ: ಶರಣರ ಮನೆಯ ಅಂಗಳದ ಕಸಗುಡಿಸುವುದು

ಈಕೆಯ ಸ್ಥಳ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಸಮೀಪದ ಹಿರೇಜಂಬೂರು. ಶಿವಭಕ್ತರ ಮನೆಯ ಅಂಗಳ ಕಸಗುಡಿಸುವುದು ಈಕೆಯ ಕಾಯಕ. ‘ಶಂಭುಜಕ್ಕೇಶ್ವರ’ ಅಂಕಿತದಲ್ಲಿ ೨೭ ವಚನಗಳು ಲಭಿಸಿವೆ. ಶಿವಪಾರಮ್ಯ, ಜೊತೆಗೆ ಸದ್ಭಕ್ತರ ಮಹಿಮೆ, ಸತಿ-ಪತಿ ಭಾವ, ಸದಾಚಾರದಲ್ಲಿ ನಡೆಯುವ ಗುರು-ಶಿಷ್ಯ-ಜಂಗಮರ ಗುಣಲಕ್ಷಣ, ಡಾಂಭಿಕ ಭಕ್ತರ ಟೀಕೆ, ಸ್ತ್ರೀಪುರುಷ ಸಮಾನತೆಯ ಸಂದೇಶ ಇಲ್ಲಿ ವ್ಯಕ್ತವಾಗಿದೆ.

ಶಿವಪಾರಮ್ಯ ಹಾಗೂ ಏಕದೇವೋಪಾಸನಾನಿಷ್ಠೆ. ಸತಿ – ಪತಿ ಭಾವದ ನಿರೂಪಣೆ ಅವಳ ವಚನಗಳಲ್ಲಿದೆ. ಲಿಂಗ ಭೇದವನ್ನು ಅಲ್ಲಗಳೆಯುವ ಈಕೆ, ಪುರುಷಸಮಾನತೆಯನ್ನು ಎತ್ತಿ ಹಿಡಿದಿರುವಳು.