Categories
ಶರಣರು / Sharanaru

ಸೊಡ್ಡಳ ಬಾಚರಸ

ಅಂಕಿತ: ಸೊಡ್ಡಳದೇವ, ಸೊಡ್ಡಳ
ಕಾಯಕ: ಬಿಜ್ಜಳನ ಅರಮನೆಯಲ್ಲಿ ಧಾನ್ಯ ಅಳೆದುಕೊಡುವುದರ ಲೆಕ್ಕ ಬರೆಯುವವನು

ಬಸವಣ್ಣನವರಿಗೆ ತುಂಬ ಆಪ್ತನೆನಿಸಿದ್ದ ಈತ ಬಿಜ್ಜಳನ ಅರಮನೆಯ ಕರಣಿಕ(ಲೆಕ್ಕಗುಮಾಸ್ತ)ನಾಗಿದ್ದ. ಈತ ಸೌರಾಷ್ಟ್ರ ಸೋಮೇಶ್ವರನ ಭಕ್ತ. ಬಸವಪುರಾಣ, ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರರತ್ನಾಕರ ಮೊದಲಾದ ಕೃತಿಗಳಲ್ಲಿ ಈತನ ಜೀವನಕ್ಕೆ ಸಂಬಂಧಿಸಿದ ಕೆಲವು ವಿವರಗಳು ಬಂದಿವೆ. ಕಾಲ-೧೧೬೦. ‘ಸೊಡ್ಡಳ’ ಅಂಕಿತದಲ್ಲಿ ೧೦೨ ವಚನಗಳು ಉಪಲಬ್ಧವಾಗಿವೆ. ತತ್ವ ವಿವೇಚನೆ, ನೀತಿಭೋಧೆ, ಅನ್ಯಮತ, ಅನ್ಯದೈವದೂಷಣೆ, ಶಿವಭಕ್ತಿನಿಷ್ಠೆ ಇವುಗಳಲ್ಲಿ ವ್ಯಕ್ತವಾಗಿದೆ. ಭಾಷಾಪ್ರಯೋಗ, ನಿರೂಪಣಾ ಶೈಲಿ ಇತರರಿಗಿಂತ ಭಿನ್ನವಾಗಿದೆ.