Categories
ಶರಣರು / Sharanaru

ಹಡಪದ ರೇಚಣ್ಣ

ಅಂಕಿತ: ನಿಃಕಳಂಕ ಕೂಡಲ ಚೆನ್ನ ಸಂಗಮದೇವ
ಕಾಯಕ: ಹಡಪದ (ಸಂಚಿ) ಕಾಯಕ (ತಾಂಬೂಲಕರಂಡ)

ತಾಂಬೂಲ ಹಡಪದ ಕಾಯಕವನ್ನು ಕೈಗೊಂಡಿದ್ದ ಈತ ಕಲ್ಯಾಣಕ್ರಾಂತಿಯ ಸಂದರ್ಭದಲ್ಲಿ ಶರಣರ ದಂಡಿನೊಂದಿಗೆ ಉಳುಮೆಯವರೆಗೆ ಹೋಗಿದ್ದನೆಂದು ತಿಳಿಯುತ್ತದೆ. ಕಾಲ-೧೧೬೦. ‘ನಿ:ಕಳಂಕ ಕೂಡಲಸಂಗಮದೇವ’ ಅಂಕಿತದಲ್ಲಿ ೯ ವಚನಗಳು ದೊರೆತಿವೆ. ಶಿವಭಕ್ತರ ಗುಣಲಕ್ಷಣ, ವ್ರತನಿಷ್ಠೆ, ಭಕ್ತರ ಗುಣ ಲಕ್ಷಣ, ಶರಣನ ಇರುವು ಅಪ್ರಾಮಾಣಿಕರ ದೂಷಣೆ, ಶರಣಸ್ತುತಿ ಅವುಗಳ ವಸ್ತು.