Loading Events

« All Events

ಡಾ. ಎಚ್‌. ಎ. ಪಾರ್ಶ್ವನಾಥ್‌

July 7

೦೭.೦೭.೧೯೪೭ ವೃತ್ತಿಯಲ್ಲಿ ವೈದ್ಯರು, ಪ್ರವೃತ್ತಿಯಲ್ಲಿ ಸಾಹಿತಿ, ರಂಗನಟ, ಹವ್ಯಾಸಿ ಪತ್ರಕರ್ತರಾದ ಪಾರ್ಶ್ವನಾಥರು ಹುಟ್ಟಿದ್ದು ಹಾಸನ, ತಂದೆ ಎಚ್‌. ಡಿ ಅನಂತರಾಮಯ್ಯ, ತಾಯಿ ಪ್ರಭಾವತಮ್ಮ. ಇದೀಗ ಧಾರವಾಡದ ಎಸ್‌.ಡಿ. ಎಂ. ಮೆಡಿಕಲ್‌ ಕಾಲೇಜಿನಲ್ಲಿ ಪೆಥಾಲಜಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ನಿರ್ವಹಿಸುತ್ತಿರುವ ಹುದ್ದೆ. ಕಾಲೇಜಿನಲ್ಲಿದ್ದಾಗಲೇ ನಾಟಕಗಳ ರಚನೆ, ಅಭಿನಯಗಳತ್ತ ಒಲಿದ ಮನಸ್ಸು. ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಡಿಪ್ಲೊಮ ಇನ್‌ಡ್ರಮಾಟಿಕ್ಸ್‌. ನಿನಾಸಂ ರಸಗ್ರಹಣ ಶಿಬಿರ, ಪೂನಾಫಿಲಂ ಇನ್‌ಸ್ಟಿಟ್ಯೂಟ್‌, ಕರ್ನಾಟಕ ನಾಟಕ ಅಕಾಡಮಿ ನಾಟಕ ಸಾಹಿತ್ಯ ಶಿಬಿರ, ಹುಬ್ಬಳ್ಳಿಯ ಅಭಿನಯ ಭಾರತಿ ಮತ್ತು ಸಮುದಾಯ ರಂಗಮೇಳ, ಪಲ್ಲವಿ, ರಂಗಾಯಣ ಮುಂತಾದ ಶಿಬಿರಗಳಲ್ಲಿ ಪಡೆದ ತರಬೇತಿ. ರಂಗನಟನಾಗಿ ನೂರಕ್ಕೂ ಹೆಚ್ಚು ನಾಟಕಗಳಲ್ಲಿ ಪ್ರಮುಖ ಪಾತ್ರ, ವಿಷಜ್ವಾಲೆ, ಅಳಿಯ ದೇವರು, ಸಮಯಕ್ಕೊಂದು ಸುಳ್ಳು, ಜಾತ್ರೆ, ಗಂಡಸ್ಕತ್ರಿ, ಅನುಕೂಲಕ್ಕೊಬ್ಬಣ್ಣ, ಕವಿಭಿಕ್ಷೆ, ಬಿರುತುಂದೆಂಬರಗಂಡ, ತಾಮ್ರಪತ್ರ, ನಾನೇ ಬಿಜ್ಜಳ, ಬೇಲಿ ಮತ್ತು ಹೊಲ, ಪೋಲೀಸರಿದ್ದಾರೆ ಎಚ್ಚರಿಕೆ ಮುಂತಾದ ನಾಟಕಗಳ ಅಭಿನಯದಿಂದ ಬಂದ ಖ್ಯಾತಿ. ಆಕಾಶವಾಣಿಯ ವಿಗಡವಿಕ್ರಮರಾಯ, ಭಗವದಜ್ಜುಕೀಯ, ಅವಾಂತರ ಮುಂತಾದ ನಾಟಕಗಳಲ್ಲಿ ಭಾಗಿ. ಸಂತ ಶಿಶುನಾಳ ಷರೀಫ, ಖಂಡವಿದೆಕೋ ಮಾಂಸವಿದೇಕೋ, ಜನುಮದ ಜೋಡಿ, ಹೃದಯವಂತ, ಮಂಜುಮುಸುಕಿದ ಹಾದಿ ಮುಂತಾದ ಚಲನಚಿತ್ರಗಳಲ್ಲಿ ಮತ್ತು ಹಲವಾರು ದೂರದರ್ಶನ ಧಾರಾವಾಹಿಗಳಲ್ಲಿನ ನಟ. ಕೈಲಾಸಂ ಶತಮಾನೋತ್ಸವ, ರಂಗ ಸಂಗೀತ, ಬಳ್ಳಾರಿ ಜಿಲ್ಲಾ ರಂಗಭೂಮಿ, ಮುಂತಾದುವುಗಳಲ್ಲಿ ಪ್ರಬಂಧ ಮಂಡನೆ. ಹಲವಾರು ರಂಗಸಂಸ್ಥೆಗಳೊಡನೆ ಒಡನಾಟ. ಹದಿನೈದಕ್ಕೂ ಹೆಚ್ಚು ರಂಗ ಕೃತಿಗಳ ಪ್ರಕಟಣೆ. ಮೈಸೂರಿನ ರಂಗಜ್ಯೋತಿ, ಹೊಯ್ಸಳ ಪ್ರಶಸ್ತಿ, ಬೆಂಗಳೂರಿನ ಚೇತನ ಪ್ರಶಸ್ತಿ, ಜ್ಞಾನ ಸಾಗರ ಪ್ರಶಸ್ತಿ, ಕೊಪ್ಪಳದ ಸಿದ್ಧಯ್ಯ ಪುರಾಣಿಕ ಪ್ರಶಸ್ತಿ, ಧಾರವಾಡದ ಬಸವರಾಜ ಮನಸೂರ ಪ್ರಶಸ್ತಿ ಮುಖ್ಯವಾದವುಗಳು.   ಇದೇ ದಿನ ಹುಟ್ಟಿದ ಕಲಾವಿದರು ಗುರು ಎಂ. ಈ. – ೧೯೨೩ ಕೃಷ್ಣಮೂರ್ತಿ ಸಿ. – ೧೯೩೫ ಗಣೇಶ್‌. ಬಿ.ಎ. – ೧೯೬೪ ಸರ್ವೇಶ್‌ – ೧೯೭೦.

* * *

Details

Date:
July 7
Event Category: