Loading Events

« All Events

ತ್ರಿವಿಕ್ರಮ

July 19

೧೯-೭-೧೯೨೦ ೯-೧-೧೯೯೮ ಪ್ರಸಿದ್ಧ ಕಾದಂಬರಿಕಾರ, ಕಥೆ, ನಾಟಕಕಾರರಾದ ತ್ರಿವಿಕ್ರಮರು ಹುಟ್ಟಿದ್ದು ತುಮಕೂರಿನಲ್ಲಿ. ತಂದೆ ಕೆ.ಎಸ್. ಕೃಷ್ಣಮೂರ್ತಿಯವರು, ತಾಯಿ ಜಯಲಕ್ಷ್ಮಮ್ಮ. ಪ್ರಾಥಮಿಕದಿಂದ ಪ್ರೌಢಶಾಲೆಯವರೆಗೆ ಬೆಂಗಳೂರು. ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ. ಉದ್ಯೋಗಕ್ಕೆ ಸೇರಿದ್ದು ಕರ್ನಾಟಕ ಸರ್ಕಾರದ ಕಂಟ್ರೋಲರ್ ಕಚೇರಿಯಲ್ಲಿ. ನಂತರ ಕೇಂದ್ರ ಸರ್ಕಾರದ ಹುದ್ದೆಗೆ ವರ್ಗಾವಣೆ. ೧೯೭೮ರಲ್ಲಿ ನಿವೃತ್ತಿ. ಪ್ರೌಢಶಾಲೆಯಲ್ಲಿದ್ದಾಗಲೇ ಬರೆದ ಕಥೆಗಳು ಸರಸ್ವತಿ, ಸುಬೋಧ, ರಂಗಭೂಮಿ, ಜಯಕರ್ನಾಟಕ, ವಿಶ್ವಬಂಧು ಪತ್ರಿಕೆಗಳಲ್ಲಿ ಪ್ರಕಟಿತ. ಭಾವಗೀತೆಗಳನ್ನು ರಚಿಸಿ ಸ್ವರ ಸಂಯೋಜಿಸಿ ಹಾಡಿಸುವುದು ಪ್ರಿಯ ಹವ್ಯಾಸ. ಕರ್ನಾಟಕ ಸಂಗೀತ, ಲಲಿತಕಲೆಗಳ ಬಗ್ಗೆ ಅಪಾರ ವ್ಯಾಮೋಹ, ಸಂಗೀತದಿಂದ ಪಡೆದ ಪ್ರೌಢಜ್ಞಾನದಿಂದ ಸಂಗೀತ ಕೃತಿ ರಚನೆ. ಕಲೆ, ಸಾಹಿತ್ಯ, ಸಂಗೀತ, ನೃತ್ಯ ಈ ಎಲ್ಲಾ ಪ್ರಕಾರಗಳಲ್ಲೂ ಪತ್ರಿಕೆಗಳಿಗೆ ಬರೆದ ವಿಮರ್ಶೆ, ‘ಉದಯವಾಣಿ’ ಪತ್ರಿಕೆಗೆ ೧೦ ವರ್ಷ ಸಾಂಸ್ಕೃತಿಕ ವರದಿಗಾರ. ಗಮಕವಾಚನದಲ್ಲಿ ಪರಿಣತಿ. ರಾಜ್ಯ ಸಂಸ್ಕೃತಿ ಮತ್ತು ಪ್ರಚಾರ ಶಾಖೆಯ ಮೂಲಕ ನಾಡಿನಾದ್ಯಂತ ಗಮಕವಾಚನ. ಕಥೆ, ಕಾದಂಬರಿ, ನಾಟಕ, ಮಕ್ಕಳ ಸಾಹಿತ್ಯ, ಕವನ ಸಂಕಲನ ರಚನೆ. ಕಥಾಸಂಕಲನ- ಬೃಂದಾವನ, ಕಾಮನಬಿಲ್ಲು. ಕಾದಂಬರಿ-ಸ್ವಪ್ನಜೀವಿ, ಒಲಿದು ಬಂದ ಹೆಣ್ಣು, ವಂಶೋದ್ಧಾರಕ, ದೇವತಾಸ್ತ್ರೀ, ನಾಟ್ಯಕಸ್ತೂರಿ, ಬೆಳೆಯುವ ಪೈರು, ಇಬ್ಬರು ಸವತಿಯರು, ಮನೆ ಬೆಳಗಿತು, ಹೂವು-ದುಂಬಿ, ಮುಳ್ಳಿನ ಹಾಸಿಗೆ, ಮೊದಲಾದ ೨೫ ಕಾದಂಬರಿಗಳು. ಕಾವ್ಯ-ರಸಗಂಗೆ, ಚೈತ್ರದ ಕೋಗಿಲೆ. ರೇಡಿಯೋ ನಾಟಕ-ಉಲ್ಲಾಳದ ರಾಣಿ ಅಬ್ಬಕ್ಕ, ಹಾರಾಡಲಿ ನಮ್ಮ ರಾಷ್ಟ್ರಧ್ವಜ, ಬೆಂಗಳೂರಿನ ರೋಮಾಂಚಕಾರಿ ಕಥೆ. ಮಕ್ಕಳಿಗಾಗಿ-ಈಶ್ವರಚಂದ್ರ ವಿದ್ಯಾಸಾಗರ್, ಸ್ವಾತಂತ್ರ ವೀರವೇಲು ತಂಬಿ, ಜೀವನಚರಿತ್ರೆ-ಕರ್ನಾಟಕ ರಾಜ್ಯ ರಮಾರಮಣ ಶ್ರೀಕೃಷ್ಣದೇವರಾಯ, ಹೊಯ್ಸಳೇಶ್ವರ ವಿಷ್ಣುವರ್ಧನ, ಶಕಪುರುಷ ಚಾಲುಕ್ಯ ವಿಕ್ರಮಾದಿತ್ಯ, ಏಕಲವ್ಯನ ಗುರುದಕ್ಷಿಣೆ, ವಿಜಯನಗರದ ಅರವೀಡು ಮನೆತನ, ದೈವಭಕ್ತ ಚಂದ್ರಹಾಸ ಮೊದಲಾದುವು. ವ್ಯಕ್ತಿಚಿತ್ರ-ವೈಣಿಕ ಆರ್.ಕೆ. ಸೂರ‍್ಯನಾರಾಯಣ. ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಸಾಹಿತಿಗಳು. ಪ್ರವಾಸ ಸಾಹಿತ್ಯ-ಭಾರತ ತೀರ್ಥ. ಲಲಿತ ಕಲೆ-ಸಂಗೀತಸುಧಾ. ವೈಚಾರಿಕ ಲೇಖನಗಳು-ಸಾಹಿತ್ಯ-ಸಂಸ್ಕೃತಿ. ಸಾಹಿತ್ಯಲೋಕದಿಂದ ಕಣ್ಮರೆಯಾದದ್ದು ೯.೧.೯೮. ಅರ್ಪಿಸಿದ ಗೌರವ ಗ್ರಂಥ ‘ಸಾಹಿತ್ಯೋಪಾಸಕ.’   ಇದೇ ದಿನ ಹುಟ್ಟಿದ ಸಾಹಿತಿಗಳು : ರೂಪ ಕುಲಕರ್ಣಿ – ೧೯೪೫ ಕೆ.ಎಂ. ವಿಜಯಲಕ್ಷ್ಮಿ – ೧೯೫೪ ಜ್ಯೋತಿ ಗುರುಪ್ರಸಾದ – ೧೯೬೫

Details

Date:
July 19
Event Category: