Loading Events

« All Events

ಪ್ರೊ. ಎಂ.ಎಸ್‌. ನಂಜುಂಡರಾವ್‌

July 5

..೧೯೩೨ ೨..೨೦೦೩ ಚಿತ್ರಕಲಾ ಪರಿಷತ್ತನ್ನು ಕಟ್ಟಿ ಬೆಳೆಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ನಂಜುಂಡರಾವ್‌ ರವರು ಹುಟ್ಟಿದ್ದು ಮಧುಗಿರಿ ತಾಲ್ಲೂಕಿನ ಸುದ್ದೇಗುಂಟೆಪಾಳ್ಯದಲ್ಲಿ. ತಂದೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಎಂ.ಎಸ್‌. ದಾಸಪ್ಪ, ತಾಯಿ ಗೌರಮ್ಮ. ಚಾಮರಾಜೇಂದ್ರ ವೃತ್ತ ಶಿಕ್ಷಣ ಕಲಾ ಶಾಲೆಯಲ್ಲಿ ಶಿಕ್ಷಣ. ಶಿಕ್ಷಕರಾದ ಎಸ್‌.ಎನ್‌. ಸ್ವಾಮಿ, ಎಂ. ವೀರಪ್ಪ, ವೈ. ಸುಬ್ರಹ್ಮಣ್ಯ ರಾಜು ರವರ ಮಾರ್ಗದರ್ಶನ. ಹಲವಾರು ಕೃತಿಗಳ ರಚನೆ, ಮಹಾತ್ಮಗಾಂಧಿ, ವಲ್ಲಭಾಯ್‌ ಪಟೇಲ್‌ ವ್ಯಕ್ತಿಚಿತ್ರಗಳು, ತಲಕಾವೇರಿ, ಶೃಂಗೇರಿ, ನಂದಿಬೆಟ್ಟ ನಿಸರ್ಗ ಚಿತ್ರಗಳನ್ನು ಬಿಡಿಸಿ ಗಳಿಸಿದ ಪ್ರಖ್ಯಾತಿ. ಕರ್ನಾಟಕ ಚಿತ್ರಕಲಾ ಪರಿಷತ್ತನ್ನು ಕಟ್ಟಿ ಬೆಳೆಸಿ ಅದರ ಸ್ಥಾಪಕ ಕಾರ್ಯದರ್ಶಿ, ಪ್ರಾಧ್ಯಾಪಕರಾಗಿ,  ಪ್ರಾಚಾರ್ಯರಾಗಿ, ಹಲವಾರು ಚಿತ್ರಸಂಸ್ಥೆ, ಲಲಿತಕಲಾ ಅಕಾಡೆಮಿ ಕೋಲ್ಕತ್ತಾದ ರವೀಂದ್ರಭಾರತಿ ವಿಶ್ವವಿದ್ಯಾಲಯದ ಪರಿಶೀಲನಾ ಮಂಡಲಿ ಸದಸ್ಯರಾಗಿ ಸಲ್ಲಿಸಿದ ಸೇವೆ. ಹಲವಾರು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ. ಕಲೆಯ ಬಗ್ಗೆ ಲಲಿತಕಲಾ ಅಕಾಡಮಿಗಾಗಿ ನಿಕೊಲಾಯ್‌ ರೋರಿಕ್‌, ಸ್ವೆತಾಸ್ಲಾಯ್‌ ರೋರಿಕ್‌ ಕುರಿತ ಪುಸ್ತಕ, ತೊಗಲು ಬೊಂಬೆಯ ಬಗ್ಗೆ ಬರೆದ ಸಂಶೋಧನಾಗ್ರಂಥ, ಸನ್ಮಾನಿಸಿದ ಸಂದರ್ಭದಲ್ಲಿ ಇವರ ಬಗ್ಗೆ ನಂಜುಂಡಸಿರಿ, ಚಿತ್ರಕಲೆ ಪುಸ್ತಕಗಳ ಪ್ರಕಟಣೆ. ದೆಹಲಿಯ ಕೆಂಪುಕೋಟೆ, ಲಲಿತಕಲಾ ಅಕಾಡೆಮಿ, ಖಾದಿಮಂಡಲಿ, ವಿಧಾನಸೌಧ, ಅಮೆರಿಕಾದ ನಟರಾಜ ಆರ್ಟ್‌ಗ್ಯಾಲರಿಯಲ್ಲಿ ಇವರ ಚಿತ್ರಗಳು ಸಂಗ್ರಹೀತ. ಹಲವಾರು ಬಾರಿ ವಿದೇಶ ಪ್ರವಾಸ. ಡೆನ್ಮಾರ್ಕ್‌, ಜರ್ಮನಿ, ಮಾಸ್ಕೊದ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡನೆ. ರಾಜ್ಯ ಲಲಿತ ಕಲಾ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಮಾಸ್ಕೋದ ರೋರಿಕ್‌ ಅಂತಾರಾಷ್ಟ್ರೀಯ ಪುರಸ್ಕಾರ ಮುಖ್ಯವಾದವುಗಳು.   ಇದೇ ದಿನ ಹುಟ್ಟಿದ ಕಲಾವಿದರು ಬಸವರಾಜ್‌ ಎಂ. ಟಿ. – ೧೯೨೮ ಮಧುರಾನಾಥ್‌. ಸಿ. ಎಂ – ೧೯೩೪ ಹಿರೇಮಠ್‌. ಬಿ.ಕೆ. – ೧೯೪೧ ವೆಂಕಟರಾಂ ಎಚ್‌. ಕೆ. – ೧೯೬೫

* * *

Details

Date:
July 5
Event Category: