Loading Events

« All Events

ವಿ.ಜಿ. ನರೇಂದ್ರ

July 20

೨೦.೭.೧೯೪೮ ವ್ಯಂಗ್ಯ ಚಿತ್ರಕಾರರನ್ನು ಸಂಘಟನೆಯ ಮೂಲಕ ಒಂದೆಡೆ ತಂದು ವ್ಯಂಗ್ಯ ಚಿತ್ರಕಾರರಿಗೊಂದು ಗೌರವ ದೊರಕಿಸಿಕೊಟ್ಟ ನರೇಂದ್ರ ರವರು ಹುಟ್ಟಿದ್ದು ಧಾರವಾಡದಲ್ಲಿ. ತಂದೆ ಗುಂಡೂರಾವ್‌, ತಾಯಿ ಪಾರ್ವತಿ ಬಾಯಿ. ಓದಿದ್ದು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ ಪದವಿ. ಕಲೆಗಾಗಿ ರೂಪಗೊಂಡದ್ದು ವ್ಯಂಗ್ಯ ಚಿತ್ರಕಾರರಾಗಿ, ಹೈಸ್ಕೂಲಿನಲ್ಲಿದ್ದಾಗಲೇ ವ್ಯಂಗ್ಯ ಚಿತ್ರಕಾರ ಶಂಕರ್ ರವರಿಂದ ಪ್ರಭಾವಿತರಾಗಿ ರಚಿಸಿದ ಹಲವಾರು ವ್ಯಂಗ್ಯ ಚಿತ್ರಗಳು. ಅಧ್ಯಾಪಕರಿಂದ ದೊರೆತ ಪ್ರೋತ್ಸಾಹ. ಮೊಟ್ಟ ಮೊದಲ ವ್ಯಂಗ್ಯ ಚಿತ್ರ ಕರ್ಮವೀರದಲ್ಲಿ ಪ್ರಕಟಗೊಂಡಾಗ ಹೇಳತೀರದ ಸಂತೋಷ. ಸಂಯುಕ್ತ ಕರ್ನಾಟಕ ಪತ್ರಿಕೆಗಾಗಿ ರಾಜಕೀಯ ವ್ಯಕ್ತಿಗಳ ವ್ಯಂಗ್ಯ ಚಿತ್ರ ರಚನೆ. ಪದವಿಯ ನಂತರ ಮುಂಬಯಿಗೆ ಪ್ರಯಾಣ. ದೇಶದ ಪ್ರಥಮ ಫೀಚರ್ ಸಿಂಡಿಕೇಟ್‌ ‘ರಂಗರೇಖಾ’ ಫೀಚರ್ಸ್ ನಿಂದ ಪಾಕೆಟ್‌ ಕಾರ್ಟೂನ್‌ ರಚನೆ. ಕನ್ನಡದ ಹಲವಾರು ಪತ್ರಿಕೆಗಳಲ್ಲದೆ ಇಂಗ್ಲಿಷ್‌, ಮರಾಠಿ, ಕೊಂಕಣಿ, ತೆಲುಗು ಪತ್ರಿಕೆಗಳಲ್ಲೂ ವ್ಯಂಗ್ಯಚಿತ್ರ ಪ್ರಕಟಿತ. ೧೯೭೩ ರಲ್ಲಿ ಫ್ರೀಪೆಸ್‌ ಜರ್ನಲ್‌ನಲ್ಲಿ ವ್ಯಂಗ್ಯ ಚಿತ್ರ ರಚನೆ. ಶಂಕರ್ಸ್ ವೀಕ್ಲಿಯಲ್ಲಿ ವ್ಯಂಗ್ಯ ಚಿತ್ರಕಾರರಾಗಿ ಎರಡು ವರ್ಷ ಬರೆದ ಚಿತ್ರಗಳು. ೧೯೭೬ರಲ್ಲಿ ಸಂಯುಕ್ತ ಕರ್ನಾಟಕ, ೧೯೮೭ರಿಂದ ಕನ್ನಡ ಪ್ರಭ ಪತ್ರಿಕೆಯಲ್ಲಿ, ಇದೀಗಲೂ ರಾಜಕೀಯ ವಿಡಂಬನೆಯ ವ್ಯಂಗ್ಯಚಿತ್ರಗಳ ರಚನೆ. ೧೯೭೯ರಲ್ಲಿ ವ್ಯಂಗ್ಯ ಚಿತ್ರಕಾರರ ಸಂಘದ ಸ್ಥಾಪನೆ, ಅಧ್ಯಕ್ಷರ ಜವಾಬ್ದಾರಿ. ೧೯೯೭ ರಿಂದ ಮತ್ತೆ ಅಧ್ಯಕ್ಷರ ಹುದ್ದೆ. ದೇಶದ ವ್ಯಂಗ್ಯ ಚಿತ್ರಕಾರರನ್ನೆಲ್ಲಾ ಒಂದೆಡೆ ಒಗ್ಗೂಡಿಸಲು ಭಾರತೀಯ ವ್ಯಂಗ್ಯ ಚಿತ್ರಕಾರರ ಸಂಘದ ಮ್ಯಾನೇಜಿಂಗ್‌ ಟ್ರಸ್ಟಿಯಾಗಿ ಕಾರ್ಯನಿರ್ವಹಣೆ. ಹಾಸ್ಯ ಬ್ರಹ್ಮ ಟ್ರಸ್ಟ್‌ ದಶಮಾನೋತ್ಸವ ಸಂದರ್ಭ, ಪತ್ರಕರ್ತರ ವೇದಿಕೆಯಿಂದ ಹೂಗಾರ ಪ್ರಶಸ್ತಿ, ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ. ಇದೇ ದಿನ ಹುಟ್ಟಿದ ಕಲಾವಿದರು ಎಂ.ಟಿ.ವಿ. ಆಚಾರ್ಯ – ೧೯೨೦ ಸಂಗಮ್ಮನ ಹುನಗುಂದ – ೧೯೪೨ ಉಮೇಶ ಹುಲಿಕುಂಟೆ – ೧೯೫೭ ಟಿ. ಎಂ. ಚಂದ್ರಶೇಖರ – ೧೯೬೨ ವೀಣಾ. ಎಸ್‌. ಮರಡೂರ – ೧೯೭೩

* * *

Details

Date:
July 20
Event Category: