Categories
ಶರಣರು / Sharanaru

ಗಜೇಶ ಮಸಣಯ್ಯ

ಅಂಕಿತ: ಮಹಾಲಿಂಗ ಗಜೇಶ್ವರ

ಅಕ್ಕಲಕೋಟೆ ಸಂಸ್ಥಾನದ ಕರ್ಜಗಿ ಗ್ರಾಮಕ್ಕೆ ಸೇರಿದ ಈತ, ಶರಣಸತಿ ಲಿಂಗಪತಿ ಭಾವದ ಶ್ರೇಷ್ಠ ವಚನಕಾರ. ಕಲ್ಯಾಣದ ಶರಣರ ಜೊತೆ ಅನುಭಾವ ಗೋಷ್ಠಿಗಳಲ್ಲಿ ಪಾಲ್ಗೊಂಡ ಈತ, ಕೊನೆಗಾಲದಲ್ಲಿ ಗುಲಬರ್ಗಾ ಜಿಲ್ಲೆ ಅಳಂದ ತಾಲೂಕಿನ ಮನಹಳ್ಳಿ ಎಂಬ ಗ್ರಾಮದಲ್ಲಿ ಇದ್ದು, ಅಲ್ಲಿಯೇ ಐಕ್ಯನಾದನೆಂದು ತಿಳಿಯುತ್ತದೆ. ಅಲ್ಲಿ ಈತನ ಹೆಸರಿನ ದೇವಾಲಯವಿರುವುದು ಇದಕ್ಕೆ ನಿದರ್ಶನವಾಗಿದೆ. ಕರಜಿಗೆಯ ಗಜೇಶ್ವರ ಈತನ ಇಷ್ಟದೈವ. ಅದನ್ನು ತನ್ನ ಅಂಕಿತವಾಗಿಸಿಕೊಂಡಿದ್ದಾನೆ. ಮಸಣಮ್ಮ ಈತನ ಮಡದಿ. ಕಾಲ=೧೧೬೦. ‘ಮಹಾಲಿಂಗ ಗಜೇಶ್ವರ’ ಎ೦ಬ ಅಂಕಿತದಲ್ಲಿ ೭೦ ವಚನಗಳು ಲಭ್ಯವಾಗಿವೆ. ಎಲ್ಲವೂ ಸತಿಪತಿ ಭಾವದ ಉತ್ಕಟತೆಯನ್ನು ಪ್ರಕಟಿಸುತ್ತವೆ. ಸರಳ ಭಾಷೆ, ಮಧುರ ಭಾವ, ಕಾವ್ಯಾತ್ಮಕ ಶೈಲಿಯಿಂದಾಗಿ ತುಂಬ ಅಕರ್ಷಕವೆನಿಸಿವೆ.