ಅಂಕಿತ: | ಕುಂಭೇಶ್ವರ |
ಕಾಯಕ: | ಗಡಿಗೆ ಸಿದ್ಧಪಡಿಸುವುದು |
ಈಕೆ ಕುಂಬಾರ ಗುಂಡಯ್ಯನ ಸತಿ. ಕಾಲ – ೧೧೬೦. ಬೀದರ ಜಿಲ್ಲೆಯ ಭಾಲ್ಕಿ (ಭಲ್ಲುಂಕೆ) ಈಕೆಯ ಸ್ಥಳ. ಗಡಿಗೆ ಸಿದ್ಧಪಡಿಸುವುದು ಕಾಯಕ. ಎರಡು ವಚನಗಳು ದೊರೆತಿವೆ. ‘ಕುಂಭೇಶ್ವರ’ ಅ೦ಕಿತ. ವ್ರತಾಚಾರವನ್ನು ಕುರಿತು ವೃತ್ತಿ ಪರಿಭಾಷೆಯಲ್ಲಿ ತುಂಬ ಸೊಗಸಾಗಿ ನಿರೂಪಿಸಿದ್ದಾಳೆ.