Categories
ಶರಣರು / Sharanaru

ಜೋದರ ಮಾಯಣ್ಣ

ಅಂಕಿತ: ಸೋಮನಾಥಲಿಂಗ
ಕಾಯಕ: ಬಿಜ್ಜಳನ ಆನೆಪಡೆಯ ಮೇಲಧಿಕಾರಿ

ಈತ ಬಿಜ್ಜಳನ ಆಸ್ಥಾನದಲ್ಲಿ ಆನೆಯ ಪಡೆಯ ಮೇಲಾಧಿಕಾರಿಯಾಗಿದ್ದನೆಂದು ತಿಳಿದುಬರುತ್ತದೆ. ಕಾಲ-೧೧೬೦. ಐದು ವಚನಗಳು ದೊರಿತಿವೆ. ಅಂಕಿತ- ಸೋಮನಾಥಲಿಂಗ. ಭೃತ್ಯಭಾವ, ಪುರಾತನರ ಸ್ಮರಣೆ, ನಡೆ-ನುಡಿ ನಿಷ್ಠೆ, ಗುರುವಚನದ ಮಹತ್ವ ಅವುಗಳಲ್ಲಿ ವ್ಯಕ್ತವಾಗಿದೆ.

ಪರಸ್ತ್ರೀಯರನ್ನು ಪಾರ್ವತಿ , ಗುರುಸತಿಯರೆಂದು ಭಾವಿಸಿದ್ದನು. ಬಲ್ಲಾಳನನ್ನು ನೆನೆದರೆ ಕಾಮವು ಮನಸ್ಸನ್ನು ಆವರಿಸದು, ಪುರಾತನರನ್ನು ನೆನೆದರೆ ಕ್ರೋಧ ಮನಸ್ಸನ್ನು ಆವರಿಸದು ಎಂದು ಹೇಳಿರುವನು.