ಅಂಕಿತ: | ಕಾಲಾಂತಕ ಭಿಮೇಶ್ವರಲಿಂಗ |
ಕಾಯಕ: | ಡೊಳ್ಳು ಬಾರಿಸುತ್ತ, ಉಡಿಯಲ್ಲಿ ತಡಿಯಲ್ಲಿ ಬೇವಿನ ಸೊಪ್ಪನ್ನು ಕಟ್ಟಿಕೊಂಡು, ಬಾಳು ಬಟ್ಟಲನ್ನು ಕೈಯಲ್ಲಿ ಹಿಡಿದುಕೊಂಡು, ಬಳೆಯನ್ನು ಕೈಗೆ ತೊಟ್ಟುಕೊಂಡು, ಮಾರಿಯನ್ನು ಮೊರದಲ್ಲಿ ಹಾಕಿಕೊಂಡು ಭಕ್ತರ ಮನೆಮನೆಯ ಮುಂದೆ ನಿಂತು ಬೇಡುವುದು ಇವನ ಕಾಯಕವಾಗಿದ್ದಿರಬಹುದು. |
ಈತನಿಗೆ ಡಕ್ಕೆಯ ಮಾರಯ್ಯ ಎಂದೂ ಕರೆಯಲಾಗುತ್ತದೆ. ಈತ ಒಬ್ಬ ಜಾನಪದ ಕಲಾವಿದ. ಶರಣನಾಗುವ ಮೊದಲು ಮಾರಿಯನ್ನು ತಲೆಯ ಮೇಲೆ ಹೊತ್ತು ಢಕ್ಕೆಯನ್ನು ಬಾರಿಸುತ್ತ ಭಿಕ್ಷೆ ಬೇಡುವುದು ಈತನ ಕಾಯಕವಾಗಿತ್ತು. ಶಂಕರ ದಾಸಿಮಯ್ಯನ ಗರ್ವವನ್ನು ಈತ ಮುರಿದನೆಂದು ವೀರಶೈವಾಮೃತ ಮಹಾಪುರಾಣ ಹೇಳುತ್ತದೆ. ಕಾಲ-೧೧೩0. ‘ಕಾಲಾಂತಕ ಭಿಮೇಶ್ವರಲಿಂಗ’ ಅಂಕಿತದಲ್ಲಿ ೯0 ವಚನಗಳು ದೊರಿತಿವೆ. ಅವುಗಳಲ್ಲಿ ತನ್ನ ಕಲೆಯ ವೇಷ ಭೂಷಣ ಮತ್ತು ಪರಿಭಾಷೆಯನ್ನು ಆಧ್ಯಾತ್ಮಿಕ್ಕೆ ಸಂಕೇತವಾಗಿ ಬಳಸಿದ್ದಾನೆ. ತನ್ನ ವ್ಯಕ್ತಿತ್ವವನ್ನು ರೂಪಿಸಿದ ಬಸವಾದಿ ಶರಣರನ್ನು ನೆನೆಯುತ್ತಾನೆ.