Categories
ಶರಣರು / Sharanaru

ಮರ್ಕಟೇಶ್ವರ ??

ಅಜ್ಞಾತವಾಗಿರುವ ಈ ಅಂಕಿತದ ವಚನದ ಕರ್ತೃವಿನ ಕಾಲ ಸು. 1600. ದೊರೆತ ಒಂದು ವಚನ ನಿಜವಿರಕ್ತನ ಲಕ್ಷಣವನ್ನು ತಿಳಿಸುತ್ತದೆ.

ಹೇಮ ಕಾಮಿನಿ ಭೂಮಿ ಜೀವರಾಧಾರ,
ಜೀವರ ಪ್ರಾಣ, ಜೀವರ ಸಿಕ್ಕು ತೊಡಲು.
ಇಹಪರದೊಳಗೆ ಜಂಘೆಯ ಬಿಟ್ಟು,
ಲಂಘಿಸಿ ನಿಂದಾತನೆ ವಿರತಿ ಸಮಗ್ರ ಕಾಣಾ,
ಮರ್ಕಟೇಶ್ವರಾ./೧೩೪೬

-??: ಈ ಪ್ರಶ್ನೆ ಚಿಹ್ನೆಯು ವಚನಕಾರನ ಹೆಸರು ಅಜ್ಞಾತವೆಂಬುದನ್ನು ಸೂಚಿಸುತ್ತದೆ.