ಅಂಕಿತ: | ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರ |
ಗುಲಬರ್ಗಾ ಜಿಲ್ಲೆಯ ಸಗರ ಗ್ರಾಮಕ್ಕೆ ಸೇರಿದ ಈತ ಗಣಾಚಾರ ಪ್ರವೃತ್ತಿಯ ಶರಣ. ಹೆಂಡತಿ ಶಿವದೇವಿ. ಕಾಲ-1160. ಈತ ಜೈನರೊಡನೆ ಹೋರಾಡಿ ಶಿವಪಾರಮ್ಯವನ್ನು ಮೆರೆಯುತ್ತಾನೆ. ‘ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರ’ ಅಂಕಿತದಲ್ಲಿ ೯೧ ವಚನಗಳು ದೊರಕಿವೆ. ಬೆಡಗು ಪ್ರಧಾನವಾದ ಅವುಗಳಲ್ಲಿ ತಾತ್ವಿಕತೆಗೆ ಆದ್ಯತೆ ದೊರೆತಿದೆ.
ಶಿವನಲ್ಲದೆ ಅನ್ಯದೈವವಿಲ್ಲವೆನ್ನುವ ವೀರನಿಷ್ಠೆ. ಜೈನರೊಡನೆ ಹೋರಾಡಿ ಶಿವಪಾರಮ್ಯ ಮೆರೆಯುವನು. ಕಾವ್ಯಮಯವಾದ ಬೆಡಗಿನ ವಚನಗಳಿವೆ. ಭಕ್ತಿಯ ಮಹತ್ವ, ದೈವಾನುಗ್ರಹ, ಮಾನವ ಜನ್ಮದ ಹಿರಿಮೆ ಹೇಳಿರುವನು.