Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಉತ್ಸವ್ ರಾಕ್ ಗಾರ್ಡನ್

ಹುಬ್ಬಳ್ಳಿ ಮತ್ತು ಹಾವೇರಿ ನಡುವೆ ನಗರ ಜೀವನದಿಂದ ದೂರವಿರುವ ಸುಮಾರು ೫೦ ಎಕರೆ ಪ್ರದೇಶದಲ್ಲಿ ಸೃಷ್ಟಿಗೊಂಡಿರುವ ರಾಕ್ ಗಾರ್ಡನ್ ಪಾರಂಪರಿಕ ಶಿಲ್ಪಕಲೆಗಳ ವಸ್ತುಸಂಗ್ರಹಾಲಯ. ೨೦೦೯ ರಲ್ಲಿ ಡಾ. ಟಿ.ಟಿ. ಸೊಲಬಕ್ಕನವರ್ ಅವರ ಕಲ್ಪನೆಯ ಮೂಸೆಯಿಂದ ಅರಳದ ರಾಕ್ ಗಾರ್ಡನ್ನಲ್ಲಿ ಸಂಗ್ರಹವಾಗಿರುವ ಶಿಲ್ಪಕಲೆಗಳ ಉತ್ಸವದಿಂದ ಖ್ಯಾತಿಗೊಂಡಿದೆ. ಇಂಥ ಅದ್ಭುತ ಕನಸಿಗೆ ಜೀವವನ್ನೆರೆದು ನಿರ್ಮಾಣ ಮಾಡಿದವರು ಸೊಲಬಕ್ಕನವರ್ ಅವರ ಅಳಿಯನಾದ ದಾಸನೂರು ಗ್ರೂಪ್ನ ಶ್ರೀ ಪ್ರಕಾಶ್ ದಾಸನೂರು ಅವರು. ಇದೀಗ ಅತ್ಯದ್ಭುತ ಕಲಾಕೇಂದ್ರ ಎನಿಸಿಕೊಂಡಿದೆ. ನೂರಾರು ಕಲಾವಿದರು ರಾಕ್ ಗಾರ್ಡನ್ ಸೃಷ್ಟಿಯಲ್ಲಿ ಭಾಗಿಯಾಗಿದ್ದಾರೆ. ಈ ರಾಕ್ ಗಾರ್ಡನ್ ನ ಮತ್ತೊಬ್ಬ ಪ್ರೇರಕ ಶಕ್ತಿ ಎಂದರೆ ಶ್ರೀಮತಿ ವೇದಾರಾಣಿ ದಾಸನೂರು. ಅವರು ಈ ರಾಕ್ ಗಾರ್ಡನ್ ನಿರ್ಮಾಣದ ಹಿಂದೆ ಹೆಚ್ಚಿನ ಶ್ರಮಪಟ್ಟಿದ್ದಾರೆ. ಅದಕ್ಕಾಗಿ ಈ ಹನ್ನೊಂದು ವರ್ಷಗಳಲ್ಲಿ ಮೂರೂವರೆ ಲಕ್ಷ ಕಿ.ಮಿ ಪ್ರಯಾಣ ಮಾಡಿ ಅದ್ಭುತ ಕಲಾಲೋಕದ ಸೃಷ್ಟಿಗೆ ಕಾರಣಕರ್ತರಲ್ಲಿ ತಾವೂ ಒಬ್ಬರಾಗಿ ತನ್ಮೂಲಕ ಗ್ರಾಮೀಣ ಕಲೆಗಳ ಮೌಲ್ಯಗಳನ್ನು ಪರಿಚಯಿಸುವಲ್ಲಿ ಸಫಲರಾಗಿದ್ದಾರೆ. ಈ ಜಾಗತೀಕರಣ, ಹೆಸರುವಾಸಿಯಾಗಿದೆ.