Categories
ಚಿತ್ರಕಲೆ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಪ್ರೊ ವಿ.ಎಂ. ಶೋಲಾಪುರ್‌ಕ‌ರ್‌

ಕಾಷ್ಠಶಿಲ್ಪ ಮತ್ತು ಬಣ್ಣಗಳ ಮೂಲಕ ವಿಶಿಷ್ಟ ಕಲಾಕೃತಿಗಳನ್ನು ರೂಪಿಸುವ ಕಾಷ್ಠ ಚಿತ್ರಕಲಾ ಪ್ರಕಾರದ ಪ್ರಖ್ಯಾತ ಕಲಾವಿದರು ಪ್ರೊ. ವಿ.ಎಂ. ಶೋಲಾಪುರ್‌ಕ‌.
೧೯೩೧ರ ಸೆಪ್ಟೆಂಬರ್‌ನಲ್ಲಿ ಜನನ, ಸದ್ಯ ಮೈಸೂರು ನಿವಾಸಿ, ಮುಂಬಯಿಯ ನೂತನ ಕಲಾ ಮಂದಿರ, ಸರ್ ಜೆ.ಜೆ.ಸ್ಕೂಲ್ ಆಫ್ ಆರ್ಟ್, ಜಿ.ಡಿ. ಆರ್ಟ್ ಸಂಸ್ಥೆಗಳಲ್ಲಿ ಕಲಾ ಶಿಕ್ಷಣ ಅಭ್ಯಾಸ.
ಕಾಷ್ಠಶಿಲ್ಪ ಅವರ ಅಭಿವೃ ಮಾಧ್ಯಮ. ಫ್ರೀ ಪ್ರೆಸ್ ಜನರಲ್, ಟೈಮ್ಸ್ ಆಫ್ ಇಂಡಿಯಾ, ಮುಂಬಯಿಯ ಡೈಲಿ ಪತ್ರಿಕೆಗಳಿಗೆ ಕಲಾ ವಿಮರ್ಶಕರಾಗಿ ಕಾರ್ಯ ನಿರ್ವಹಿಸಿದ ಅನುಭವ ಅವರದು.
ಇಂದು ಅನೇಕ ಕಲಾವಿದರಿಗೆ ಕಲೆಯ ಶಿಕ್ಷಣ ನೀಡುತ್ತಿರುವ ಮೈಸೂರಿನ ಚಾಮರಾಜೇಂದ್ರ ದೃಶ್ಯ ಕಲಾ ಅಕಾಡೆಮಿ ಸ್ಥಾಪಕ ಡೀನ್ ಎಂಬ ಹಿರಿಮೆಯ ಶ್ರೀಯುತರಿಂದ ಕಾಷ್ಠ ಶಿಲ್ಪ ಕಲಾ ಪ್ರಕಾರದಲ್ಲಿ ನಿರಂತರ ಸಾಧನೆ ಸಾಗಿದೆ.
ಬೆಂಗಳೂರು, ಮುಂಬಯಿ, ಕೊಚ್ಚಿನ್, ಗೋವಾ ಮತ್ತಿತರ ಕಡೆ ಆಯಿಲ್ ಮತ್ತು ಟೆರಾ ಕೋಟಾ; ಮರ ಆಧಾರಿತ ಸಂಯೋಜನೆ, ಕೊಚ್ಚಿನ್‌ನಲ್ಲಿ ಮಾರ್‌ಕ್ವೆಂಟ್ರಿ ಪ್ರಕಾರದಲ್ಲಿ ಶೋಲಾಪುರ್‌ಕರ್‌ ಅವರು ತಯಾರಿಸಿದ ಕಲಾಕೃತಿಗಳು ಪ್ರದರ್ಶನ ಕಂಡಿವೆ.
ಪ್ರಕೃತಿ ದತ್ತವಾದ ವಸ್ತುಗಳೇ ಅವರ ಅಭಿವ್ಯಕ್ತಿ ಮಾಧ್ಯಮ. ಸಂಬಂಧಗಳ ರೂಪಾಂತರವನ್ನು ವಿಶಿಷ್ಟ ಸಂಯೋಜನೆಯ ಮೂಲಕ ತಮ್ಮ ಕಲಾಕೃತಿಗಳಲ್ಲಿ ಬಿಂಬಿಸುವ ಕಲಾವಿದ ಶ್ರೀ ಶೋಲಾಪುರ್‌ಕ‌ ಅವರು.