Categories
ಚಿತ್ರಕಲೆ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಿ.ಜಿ.ಮಹಮದ್

ಕಳೆದ ಮೂವತ್ತೈದು ವರ್ಷಗಳಿಂದ ಕಲಾಕಾರರಾಗಿ, ಕಲಾಶಿಕ್ಷಕರಾಗಿ ಅವಿರತವಾಗಿ ದುಡಿಯುತ್ತಿರುವವರು ಬಿ.ಜಿ.ಮಹಮದ್ ಅವರು.
ಉಡುಪಿಯಲ್ಲಿ ೧೯೨೪ರಲ್ಲಿ ಜನನ, ಉಡುಪಿಯ ಮಂಗೇಶರಾಲಿ, ನಾರಾಯಣ ಪದ್ಮಸಾಲಿ ಅವರ ಬಳಿ ಹಲವು ವರ್ಷಗಳ ಕಾಲ ಕಲಾಭ್ಯಾಸ. ಬಳಿಕ ಅವರೇ ಸ್ಥಾಪಿಸಿದ ಬಿಜಿಎಂ ಲಲಿತಕಲಾ ಕಾಲೇಜಿನಲ್ಲಿ ೩೫ ವರ್ಷಗಳಿಂದ ಕಲಾಶಿಕ್ಷಕರಾಗಿ ಸೇವೆ.
ಶ್ರೀಯುತರು ರಚಿಸಿರುವ ಕಲಾಕೃತಿಗಳು ಅನೇಕ ಕಡೆ ಪ್ರದರ್ಶನ ಕಂಡಿವೆ. ಚಿತ್ರಕಲೆಯಲ್ಲಿ ಅವರು ಮಾಡಿರುವ ಕೆಲಸಕ್ಕಾಗಿ ಕರ್ನಾಟಕ ಲಲಿತ ಕಲಾ ಅಕಾಡೆಮಿಯಿಂದ ೧೯೮೦ರಲ್ಲಿ ಪ್ರಶಸ್ತಿ, ಬಹುಮಾನ ಪುರಸ್ಕೃತರು. ಜತೆಗೆ ಲಲಿತ ಕಲಾ ಅಕಾಡೆಮಿ ಸದಸ್ಯರಾಗಿ ಸೇವೆ.
ಮಂಗಳೂರಿನ ಸೆಂಟ್ರಲ್ ಮತ್ತು ಗ್ರೀನ್ ಸ್ಟುಡಿಯೋದಲ್ಲಿ ಕಲಾವಿದರಾಗಿರುವ ಶ್ರೀ ಬಿ.ಜಿ.ಮಹಮದ್ ಅವರು ಕೊಳಲುಗಾನ ಸಾಧಕರೂ ಹೌದು.